Homeಕರ್ನಾಟಕ‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಹತ್ತು ಒಳ್ಳೆಯ ಕೆಲಸ ಮಾಡಿ, ಒಂದು ಹಾಳು ಕೆಲಸ ಮಾಡಿದರೆ, ನಾವು ಕಾರ್ಟೂನಿಸ್ಟರು ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

- Advertisement -
- Advertisement -

ಕಳೆದ ಆರೇಳು ವರ್ಷಗಳಿಂದ ಇಡೀ ದೇಶದಲ್ಲೇ ಕಾರ್ಟೂನಿಸ್ಟ್‌ಗಳ ಮೇಲೆ ಸೋಷಿಯಲ್ ಮೀಡಿಯಾ ಗುಂಪು ದಾಳಿಗಳು, ಫಿಸಿಕಲ್ ಅಟ್ಯಾಕ್‌‌ಗಳೂ ನಡೆಯುವುದು ಸಾಮಾನ್ಯ ಎನಿಸಿಬಿಟ್ಟಿವೆ. ಎಷ್ಟೋ ಬಾರಿ ನಾನಂದುಕೊಂಡದ್ದು ಇದೆ. ಕಾರ್ಟೂನ್ ನೋಡುವುದು ಹೇಗೆ ಎಂಬ ಕುರಿತೇ ಜನರಿಗೆ ಪಠ್ಯ ಅಥವಾ ಸೆಮಿನಾರ್ ಮಾಡಬೇಕಾದ ಅಗತ್ಯವಿದೆ ಎಂದು.

ಜನಪ್ರತಿನಿಧಿಯಾದವ ಎಲ್ಲಾ ರೀತಿಯ ಟೀಕೆ ವಿಮರ್ಶೆಗಳಿಗೆ ಒಳಗಾಗಬೇಕಾದ ಒಂದು ವಿಶಿಷ್ಟ ಸನ್ನಿವೇಶವನ್ನು ಕಲ್ಪಿಸಿಕೊಟ್ಟಿದೆ ಈ ಪ್ರಜಾಪ್ರಭುತ್ವ. ಹೆಜ್ಜೆ ಹೆಜ್ಜೆಗೂ ಆತ ಜನರಿಗೆ ಉತ್ತರದಾಯಿಯೇ ಹೊರತು ಸರ್ವಾಧಿಕಾರಿಯಲ್ಲ. ಹಿಂದೆ ಶಂಕರ್ ಅವರ “ಡೋಂಟ್ ಸ್ಪೇರ್ ಮೀ” ಪುಸ್ತಿಕೆ ಹೊರಬಂದ ಬಗೆ ಮತ್ತು ಹಿನ್ನೆಲೆ ನಮಗೆಲ್ಲ ತಿಳಿದೇ ಇದೆ. ಆರ್. ಕೆ. ಲಕ್ಷ್ಮಣ್ ಮತ್ತು ಇಂದಿರಾ ಗಾಂಧಿ ಒಮ್ಮೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಬಂದಾಗ ಕಾರ್ಯಕ್ರಮದ ಕೊನೆಯಲ್ಲಿ ಎದ್ದು ಬಂದು ಲಕ್ಷಮಣ್‌ರನ್ನು ಅಭಿನಂದಿಸಿದ ಇಂದಿರಾಜೀ “I enjoy your creations. Congratulations” ಅಂದಿದ್ದರಂತೆ!

ತಮ್ಮ ಕುರಿತಾಗಿ ಅಬು ಅಬ್ರಹಾಂ ಬರೆದ ತೀವ್ರ ಟೀಕೆಯ ಬೆತ್ತಲೆ ವ್ಯಂಗ್ಯಚಿತ್ರವನ್ನು ಆಗಿನ ರಾಷ್ಟ್ರಪತಿ ಫಕ್ರುದೀನ್ ಅಲಿ ಅಹಮದ್ ಆ ತುರ್ತುಪರಿಸ್ಥಿತಿ ಯ ಕಾಲದಲ್ಲೇ ಅರಗಿಸಿಕೊಂಡಿದ್ದರು! ಸುಮ್ಮನೆ ಈಗಿನ ಪರಿಸ್ಥಿತಿ ಯಲ್ಲಿ ಅದನ್ನೊಮ್ಮೆ ಊಹಿಸಿ ನೋಡಿ!

ಇದನ್ನೂ ಓದಿ: ‘ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ‌ ನಡೆಯಿರಿ’: ಬಿಜೆಪಿ ಐಟಿ ಸೆಲ್‌ ದಾಳಿ ವಿರುದ್ದ ಆಕ್ರೋಶ

ಜಸ್ವಂತ್ ಸಿಂಗ್ ಅವರು ವಿದೇಶಾಂಗ ಸಚಿವರಾಗಿದ್ದ ಕಾಲದಲ್ಲಿ ಅವರನ್ನು ಟೀಕಿಸಿ ಸುಧೀರ್ ತೈಲಾಂಗ್ ಅವರು ಬರೆದ ವ್ಯಂಗ್ಯಚಿತ್ರವನ್ನು ಸಿಂಗ್ ಫ್ರೇಮ್‌ ಹಾಕಿಸಿ ತನ್ನ ಕೋಣೆಯಲ್ಲಿ ನೇತುಹಾಕಿದ್ದರಂತೆ! ಹೆಚ್ಚುಕಮ್ಮಿ ಅಧಿಕಾರದ ಹಮ್ಮುಬಿಮ್ಮಿನಲ್ಲೇ ಮೆರೆಯುತ್ತಿದ್ದ ತೆಲುಗಿನ ಎನ್.ಟಿ.ಆರ್. ಆಗ ‘ಆಂಧ್ರಭೂಮಿ’ ಪತ್ರಿಕೆಯಲ್ಲಿ ಕಾರ್ಟೂನ್ ಬರೆಯುತ್ತಿದ್ದ ಸುರೇಂದ್ರನ್ ಅವರು ತನ್ನನ್ನು ಟೀಕಿಸಿ ಬರೆದ ‘ಕೃಷ್ಣಾವತಾರಂ’ ಚಿತ್ರವನ್ನು ಬಹುವಾಗಿ ಮೆಚ್ಚಿದ್ದರಂತೆ! ಮುಂದ್ಯಾವತ್ತೋ ಸಂದರ್ಶನದಲ್ಲಿ ಅದನ್ನು ಹೇಳಿಕೊಂಡಿದ್ದರೂ ಕೂಡ.

ಪ್ರಜಾಪ್ರಭುತ್ವದ ಕಾಲ ಹಾಗಿರಲಿ. ಬ್ರಿಟಿಷ್‌ ಆಡಳಿತದ ಭಾರತದಲ್ಲಿ ವೈಸರಾಯ್‌ಗಳು ಮೆರೆಯುತ್ತಿದ್ದ ಕಾಲ. ಕಾರ್ಟೂನಿಸ್ಟ್ ಅಬ್ರಹಾಂ ಅವರು ವೈಸರಾಯ್ ಕುರಿತು ಬರೆದ ನೆಗೆಟಿವ್ ಚಿತ್ರವನ್ನು ಮೆಚ್ಚಿ, ಮರುದಿನ ದೂತನೊಬ್ಬನನ್ನು ಕಳಿಸಿ ಅಬ್ರಹಾಂ ಅವರಿಂದ ಅದರ ಒರಿಜಿನಲ್ ಪ್ರತಿ ಪಡೆದು ಸಂಗ್ರಹಿಸಿಟ್ಟುಕೊಂಡಿದ್ದರಂತೆ! ನೆನಪಿಡಿ. ನಮಗೆ ಸ್ವಾತಂತ್ರ್ಯವಿರಲಿಲ್ಲ ಆಗ!

ಈಗ ಬನ್ನಿ 2021 ರ ಈ ಹೊತ್ತಿಗೆ!

ವಸಾಹತುಶಾಹಿ ಆಡಳಿತವಿದೆಯೇನು ಇಲ್ಲಿ? ತುರ್ತುಪರಿಸ್ಥಿತಿ ಏನಾದರೂ ಘೋಷಿಸಲ್ಪಟ್ಟಿದೆಯಾ ಇಲ್ಲಿ? ವ್ಯವಸ್ಥೆಯ ಕುರಿತು ಟೀಕೆ ಅಂದರೇನು? ವ್ಯವಸ್ಥೆಯ ಮುಂದಾಳತ್ವ ವಹಿಸಿದ ವ್ಯಕ್ತಿಯ ವಿಮರ್ಶೆಯೇ ತಾನೇ? ಟೀಕೆ ಅಥವಾ ವಿಮರ್ಶೆ ಸರಿಯಾಗಿದ್ದರೆ ಜನ ತಲೆದೂಗುತ್ತಾರೆ. ಇಲ್ಲವೆಂದರೆ ಕೃತಿಕಾರನನ್ನು ತಾವಾಗೇ ಇಗ್ನೋರ್ ಮಾಡುತ್ತಾರೆ ಜನ! ಜನರಿಂದ ಕೋಟಿ ಕೋಟಿ ಸೌಲಭ್ಯಗಳನ್ನು ಪಡೆದು ಸಲಹುವ ಉತ್ತರದಾಯಿತ್ವ ಹೊಂದಿದ ನಾಯಕನೊಬ್ಬನನ್ನು ಟೀಕಿಸಲೇಬಾರದೆಂದರೆ?

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಒಂದು ವಿಚಾರ ನಾನ್ಯಾವತ್ತೂ ಹೇಳುತ್ತಿರುತ್ತೇನೆ ಮಿತ್ರರಲ್ಲಿ. ಪ್ರಧಾನಿಯಾದವ ಅಥವಾ ಇನ್ಯಾರೇ ನಾಯಕನಾದವ ಹತ್ತು ಒಳ್ಳೆಯ ಕೆಲಸಗಳನ್ನು ಮಾಡಿ ಒಂದು ಕೆಟ್ಟ ಕೆಲಸ ಮಾಡಿದನೆಂದಾದರೆ, ನಾವು ಕಾರ್ಟೂನಿಸ್ಟರು ಆತನ ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

ಹತ್ತು ಒಳ್ಳೆಯ ಕೆಲಸದ ಬಗ್ಗೆ ಮಾತಾಡುವುದಕ್ಕೇನಿದೆ? ಅದು ಅವನ ಕರ್ತವ್ಯ ತಾನೇ? ಅದಕ್ಕಲ್ಲವೇ ಆತ ದೇಶದ ಅತ್ಯುನ್ನತ ಗೌರವವನ್ನು ಹೊಂದಿರುವುದು? ಅಷ್ಟಾಗಿಯೂ ಆ ಹತ್ತು ಕೆಲಸಗಳ ಬಗ್ಗೆ ತುತ್ತೂರಿ ಊದಿ ಉಘೇ ಅನ್ನುವುದಕ್ಕೆ ಅವರದ್ದೇ ಪ್ರತ್ಯೇಕ ಗುಂಪುಗಳಿವೆ. ನಮ್ಮ ಕೆಲಸವಲ್ಲವಲ್ಲ ಅದು!

ಎಲ್ಲೋ ಉತ್ತರ ಕೊರಿಯಾದಲ್ಲಿದ್ದೇವೇನೋ ಅನ್ನಿಸಿಬಿಡುತ್ತದೆ ಈಗ. ಅಲ್ಲ, ಆ ಮನಮೋಹನ್ ಸಿಂಗ್ ಕುರಿತಂತೆ, ಲಾಲೂಪ್ರಸಾದ್ ಕುರಿತಂತೆ, ನಮ್ಮ ದೇವೇಗೌಡರ ಕುರಿತಂತೆ ದೇಶದ ವ್ಯಂಗ್ಯಚಿತ್ರಕಾರರು ಮಾಡದೇ ಬಿಟ್ಟ ಕಾರ್ಟೂನ್ ಯಾವುದಾದ್ರೂ ಇದೆಯೇನ್ರೀ? ಎಷ್ಟು ಗೋಳು ಹುಯ್ಕೊಂಡಿಲ್ಲ ಆ ಪುಣ್ಯಾತ್ಮರುಗಳನ್ನೆಲ್ಲ! ಅವರ್ಯಾರಿಗೂ ಆಗದ ಅವಮಾನ, ಅಸಹಿಷ್ಣುತೆ ಈ ನರೇಂದ್ರ ಮೋದಿ ಅಥವಾ ಅವರ ಪರಿವಾರಕ್ಕೇನಿದೆ? ಅರೆ! ಒಬ್ಬ ಸ್ಟೇಟ್ಸ್‌ಮನ್‌ನ ಮೊತ್ತ ಮೊದಲ ಲಕ್ಷಣವೇ ತಾನು ಎಲ್ಲಾ ವಿಮರ್ಶೆಗಳಿಗೂ ತೆರೆದು ಕೊಂಡಿರುವುದು. ಇದೇನಾಗ್ತಿದೆ ಇಲ್ಲಿ?

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಮೋದಿ ಫೋಟೊಗಳಿಗೆ ಹೆಚ್ಚುತ್ತಿರುವ #ResignModi ಕಮೆಂಟ್‌ಗಳು: ಹಳೆ ಫೋಟೊಗಳನ್ನು ಬಿಡದ ನೆಟ್ಟಿಗರು!

ಯಾವ ದೇಶದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ…. ಇತ್ಯಾದಿ ಸೃಜನಶೀಲ ಆಯಾಮಗಳಿಗೆ ಪೂರ್ತಿ ಸ್ವಾತಂತ್ರ್ಯ ಇಲ್ಲವೋ ಆ ದೇಶದ ಭವಿಷ್ಯ ಅಪಾಯದಲ್ಲಿರುವುದಂತೂ ಖಂಡಿತ. ಅಮೆರಿಕದ ವ್ಯಂಗ್ಯಚಿತ್ರಕಾರರು ಟ್ರಂಪನ್ನಷ್ಟೆಲ್ಲ ಗೋಳು ಹುಯ್ಕೊಂಡರೂ ಮಹಾ ಡಿಕ್ಟೇಟರ್ ಮನಸ್ಥಿತಿಯ ಟ್ರಂಪ್ ಅವರ ಕೂದಲೂ ಕೊಂಕಿಸಲಿಲ್ಲ!

ಆರ್.ಕೆ.ಲಕ್ಷ್ಮಣ್, ಅಬು ಅಬ್ರಹಾಂ, ಶಂಕರ್ಸ್ ವೀಕ್ಲಿಯ ಶಂಕರ್ ಅವರೇನಾದರೂ ಈಗಿರುತ್ತಿದ್ದರೆ ಒಂದೋ ಜೈಲಲ್ಲಿರುತ್ತಿದ್ದರು ಅಥವಾ ಇನ್ನೊಬ್ಬ ಗೌರಿ ಲಂಕೇಶ್ ಆಗಿಬಿಡುತ್ತಿದ್ದರು ಅಂತ ಎಷ್ಟೋ ಬಾರಿ ಅನಿಸಿದ್ದಿದೆ ನನಗೆ! ಕಳೆದ ಶತಮಾನದ ಅರವತ್ತು ಎಪ್ಪತ್ತು ಎಂಭತ್ತರ ದಶಕ ಎಂಥಾ ಸುವರ್ಣ ಯುಗವಾಗಿತ್ತದು! ಭಾರತ ಮತ್ತೆಂದು ಅಂಥ ದಿನಗಳನ್ನು ಕಾಣುವುದೋ!

ಕಳೆದ ಆರೇಳು ವರ್ಷಗಳಿಂದ ನನ್ನ ಇನ್ಬಾಕ್ಸ್‌ಗೆ ಬಂದು ಬೀಳುತ್ತಿರುವ ಸಂಸ್ಕೃತ ಶ್ಲೋಕಗಳನ್ನು ನೋಡಿದರೆ ಕನಿಕರ ಮೂಡುತ್ತದೆ ಆ ಬಿಜೆಪಿ ಬೆಂಬಲಿಗರ ಬಗ್ಗೆ. ನನ್ನೆದುರೇ ಓಡಾಡಿ ಬೆಳೆದ ಹುಡುಗನೊಬ್ಬ ಅತ್ಯಂತ ಕೊಳಕು ಸುಳ್ಳುಗಳ ಮೂಲಕ ಭಯಂಕರ ಟ್ರಾಲ್ ಮಾಡಿ ಬರೆದಿದ್ದ ನನ್ನ ಕುರಿತು. ಅವರ ಬಾಲಂಗೋಚಿಗಳ ಕಮೆಂಟುಗಳೋ..! ಆಹ! ಭಾರತಾಂಬೆಯ ಸುಸಂಸ್ಕೃತ ಪುತ್ರರತ್ನರವರು ಅನ್ನಲು ಯಾವ ಅಡ್ಡಿಯೂ ಇರದು.

ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್‌ ಗಾಂಧಿ

ಇನ್ನು ಪ್ರಗತಿಪರರ ಸೋಗು ಹಾಕಿ ಮನೆಯಲ್ಲಿ ಜಾತಿವಾದಿ ಮೂಲಭೂತವಾದಿ ಪುಟಾಣಿಗಳನ್ನು ಬೆಳೆಸುತ್ತಿರುವ ಸಾಹಿತಿಗಳದ್ದೋ ಇನ್ನೊಂದು ಪ್ರತ್ಯೇಕ ಕತೆ! ಇವರ ನೆಂಟರಿಷ್ಟರಾದ ಪ್ರಗತಿಪರರದ್ದಂತೂ ದಾಕ್ಷಿಣ್ಯದ ನಾಜೂಕು ನಡೆ. ನಿಷ್ಠುರಕ್ಕೆ ಬಿದ್ದು ಯಾವ ನರಕಕ್ಕೆ ಹೋಗಬೇಕು? ಇವರನ್ನೆಲ್ಲ ಯಾರೂ ಪ್ರಶ್ನೆ ಮಾಡಬಾರದು. ಇವರು ಗುಪ್ತವಾಗಿಯೋ ಬಹಿರಂಗವಾಗಿಯೋ ನಂಬಿದ ಸಿದ್ದಾಂತಗಳ ವಿರುದ್ಧ ಟಿಪ್ಪಣಿ ಮಾಡಬಾರದು. ಇದು ಈ ಶತಮಾನದ ಈ ಹೊತ್ತಿನ ಕರ್ಮ!

ನಿನ್ನೆ ಮೊನ್ನೆ ಮತ್ತೆ ನನ್ನ ಕಾರ್ಟೂನ್ ಗಳ ನೆಪವಾಗಿ ನನ್ನ ಮೇಲೆ ದಾಳಿ ನಡೆದಿತ್ತು. ಇವತ್ತು ನಮ್ಮನೆಚ್ಚಿನ ಸತೀಶ್ ಆಚಾರ್ಯರ ಮೇಲೆ! ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ. ಆದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಬಗ್ಗೆ ಸಣ್ಣದೊಂದು ವಿಷಾದ ಅಷ್ಟೆ!

ಅಂದಿನ ಬಸವಣ್ಣನಿಂದ ಹಿಡಿದು, ಮೊನ್ನೆ ಮೊನ್ನೆಯ ಗಾಂಧಿ, ದಾಬೋಲ್ಕರ್, ಗೌರಿಯರವರೆಗೆ…. ಇದೇ ಮೇಲ್ವರ್ಗದ ಸಂಚಿಗೆ ಬಲಿಯಾದ ದಕ್ಷಿಣ ಕನ್ನಡದ ಆರಾಧ್ಯ ದೈವಗಳಾದ ಕಲ್ಕುಡ ಕಲ್ಲುರ್ಟಿಯರಿಂದ ಹಿಡಿದು ಕೋಟಿ ಚೆನ್ನಯರವರೆಗೆ ಈ ನೆಲದಲ್ಲಿ ಪುರಾಣ ಇತಿಹಾಸಗಳ ಏಳುಬೀಳುಗಳ ಹಸಿಹಸಿ ನೆನಪು ನೆನವರಿಕೆಗಳಿವೆ. ಆ ನೆನಪುಗಳಲ್ಲಿ ಜೀವ ಪುಟಿಯುವ ಎದೆಯ ಉತ್ತೇಜಕ ದ್ರವ್ಯಗಳಿವೆ. ನನ್ನ ಚಿತ್ರ ನನ್ನದು. Always with you ಸತೀಶಣ್ಣ. ನಮ್ಮೆಲ್ಲರದೂ ಒಂದೇ ಧರ್ಮ- ಅದು ಮನುಷ್ಯ ಧರ್ಮ! Cheers!

ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಇದನ್ನೂ ಓದಿ: ಕೋವಿಡ್ 2ನೆ ಅಲೆ ತೀವ್ರವಾಗುತ್ತಿದ್ದಾಗ ಕುಂಭಮೇಳದಲ್ಲಿ ಮುಳುಗೆದ್ದವರು 70 ಲಕ್ಷ ಜನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುವಾದಿಗಳ ಆಡಳಿತದಲ್ಲಿ ಬಾರತ ಬಹಳ ವೇಗವಾಗಿ ಹಿಟ್ಲರೀಕರಣಗೊಳ್ಳುತ್ತಿದೆ. ಈ ದೇಶದ ಪ್ರಜ್ಞಾವಂತರು ಎದೆಗುಂದದೆ, ಒಕ್ಕೊರಲಿನಿಂದ ಇದನ್ನು ಪ್ರತಿಭಟಿಸಬೇಕು.

LEAVE A REPLY

Please enter your comment!
Please enter your name here

- Advertisment -

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...

ಉತ್ತರಾಖಂಡ: ಮೇಲ್ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ 18 ವರ್ಷದ ದಲಿತ ಯುವಕನ ಹತ್ಯೆ, ಸ್ನೇಹಿತನ ಮೇಲೂ ಮಾರಣಾಂತಿಕ ಹಲ್ಲೆ 

ದೇಶದಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಉತ್ತರಾಖಂಡದ ನ್ಯೂ ತೆಹ್ರಿ ಜಿಲ್ಲೆಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ 18 ವರ್ಷದ ದಲಿತ ಹದಿಹರೆಯದ...

ಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಮಾರು 20 ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪು ರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ಕೇವಲ ಮೂರನೇ ಎರಡರಷ್ಟು ಸಂಸದರ ಬೆಂಬಲ ಹೊಂದಿರುವುದರಿಂದ ಮಾತ್ರ...

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....