Homeಮುಖಪುಟ`ನಿಮ್ಮ ಜೋಳಿಗೆ ಎತ್ತಿಕೊಂಡು ಹೊರಟು ಬಿಡಿ!' - ಪ್ರಧಾನಿ ಮೋದಿಗೆ ಅರುಂಧತಿ ರಾಯ್ ಪತ್ರ

`ನಿಮ್ಮ ಜೋಳಿಗೆ ಎತ್ತಿಕೊಂಡು ಹೊರಟು ಬಿಡಿ!’ – ಪ್ರಧಾನಿ ಮೋದಿಗೆ ಅರುಂಧತಿ ರಾಯ್ ಪತ್ರ

- Advertisement -
- Advertisement -

ನಮಗೊಂದು ಸರ್ಕಾರ ಬೇಕು. ಅತ್ಯಗತ್ಯವಾಗಿ, ತಕ್ಷಣವೇ ಬೇಕು. ಆದರೆ ನಮಗೀಗ ಸರ್ಕಾರ ಎಂಬುದಿಲ್ಲ. ನಮಗೆ ಉಸಿರಾಡಲಾಗುತ್ತಿಲ್ಲ. ನಮ್ಮ ಪ್ರಾಣ ಹಾರಿ ಹೋಗುತ್ತಿದೆ. ಸಿಗುವ ಸಹಾಯವನ್ನಾದರೂ ಪಡೆದುಕೊಳ್ಳಲು ನಾವು ಏನು ಮಾಡಬೇಕೆಂದು ತಿಳಿಸುವ ವ್ಯವಸ್ಥೆಗಳಾವುದೂ ಕಾರ್ಯನಿರ್ವಾಹಿಸುತ್ತಿಲ್ಲ.

ಬೇರೇನು ಮಾಡಬೇಕು? ಈ ಕ್ಷಣ, ಈ ಸ್ಥಳದಲ್ಲಿ ನಮ್ಮ ಕರ್ತವ್ಯವೇನು?

ನಾವು 2024 ರವರೆಗೆ ಕಾಯಲಾರೆವು. ಯಾವುದೇ ವಿಚಾರಕ್ಕಾದರೂ ಸರಿಯೇ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿನಂತಿಸಿಕೊಳ್ಳುವ ದಿನವೊಂದು ಬರುವುದೆಂಬ ಊಹೆ ನನ್ನ ಸುತ್ತಮುತ್ತಲಿನ ಜನಕ್ಕೆ ಎಂದೂ ಬಂದಿರಲಿಕ್ಕಿಲ್ಲ. ವೈಯುಕ್ತಿಕವಾಗಿ ತನ್ನಷ್ಟಕ್ಕೆ ನಾನೇ ಅಂತಹ ವಿನಂತಿ ಮಾಡುವುದಕ್ಕಿಂತ ಜೈಲಿಗೆ ಹೋಗುವುದೇ ಉತ್ತಮವೆಂದು ಭಾವಿಸಿದ್ದೆ.

ಇದನ್ನೂ ಓದಿ: ಇತಿಹಾಸ: 60 ಲಕ್ಷ ಜನರ ಹತ್ಯಾಕಾಂಡದ ರೂವಾರಿ ‘ಅಡಾಲ್ಫ್‌ ಹಿಟ್ಲರ್‌‌’ ಆತ್ಮಹತ್ಯೆ ಮಾಡಿಕೊಂಡ

ಆದರೆ ಇಂದು ನಾವು ನಮ್ಮ ಮನೆಗಳಲ್ಲಿ, ಬೀದಿಗಳಲ್ಲಿ, ಆಸ್ಪತ್ರೆಗಳ ಕಾರ್ ಪಾರ್ಕಿಂಗ್ ಪ್ರದೇಶಗಳಲ್ಲಿ, ಮಹಾನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ, ಗ್ರಾಮಗಳಲ್ಲಿ, ಅರಣ್ಯಗಳಲ್ಲಿ, ಹೊಲ-ಗದ್ದೆಗಳಲ್ಲಿ – ಎಲ್ಲೆಂದರಲ್ಲಿ ಬಿದ್ದು ಸಾಯುತ್ತಿದ್ದರೆ ಒಬ್ಬ ಸಾಮಾನ್ಯ ಪ್ರಜೆಯಾದ ನಾನು ನನ್ನ ಆತ್ಮಗೌರವವನ್ನು ಮರೆತು, ಕೋಟ್ಯಾಂತರ ಜನ ಸಹಚರರ ಜೊತೆ ಧ್ವನಿಗೂಡಿಸುತ್ತಿದ್ದೇನೆ. ಸ್ವಾಮಿ ದಯವಿಟ್ಟು… ದಯವಿಟ್ಟು.. ರಾಜಿನಾಮೆ ನೀಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಕನಿಷ್ಟ ಪಕ್ಷ ಈಗಲಾದರೂ ಪಕ್ಕಕ್ಕೆ ತೊಲಗಿ. ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಕೆಳಗಿಳಿಯಿರಿ.

ಈ ಬಿಕ್ಕಟ್ಟನ್ನು ನೀವೇ ಸೃಷ್ಟಿಸಿದ್ದೀರಿ. ಇದನ್ನು ಬಗೆಹರಿಸುವುದು ನಿಮ್ಮ ಕೈಗಳಲ್ಲಿ ಇಲ್ಲ. ನೀವು ಇದನ್ನು ಮತ್ತಷ್ಟು ದಾರುಣವಾಗಿ ಮಾತ್ರವೇ ಮಾರ್ಪಡಿಸಬಲ್ಲಿರಿ. ಭಯ, ದ್ವೇಷ, ಅಜ್ಞಾನ ತುಂಬಿದ ವಾತಾವರಣದಲ್ಲಿ ಈ ವೈರಸ್ ಮತ್ತಷ್ಟು ಬಲಗೊಳ್ಳುತ್ತದೆ. ಧ್ವನಿಯೆತ್ತಿ ಮಾತನಾಡಬಲ್ಲ ಧ್ವನಿಗಳನ್ನು ನೀವು ಹತ್ತಿಕ್ಕಿದಾಗ ಈ ವೈರಸ್ ವಿಸ್ತರಿಸುತ್ತದೆ. ಸತ್ಯ ಏನೆಂದರೆ ಅಂತರಾಷ್ಟ್ರೀಯ ಪ್ರಚಾರ ಸಾಧನಗಳಲ್ಲಿ ಮಾತ್ರವೇ ಪ್ರಕಟವಾಗುವಂತೆ ನೀವು ದೇಶದಲ್ಲಿರುವ ಪ್ರಚಾರ ಸಾಧನಗಳನ್ನು ನಿಮ್ಮ ಗುಲಾಮಗಿರಿಯಲ್ಲಿರಿಸಿಕೊಂಡಾಗ ಈ ವೈರಸ್ ದಿಕ್ಕು ದಿಕ್ಕುಗಳಿಗೂ ವ್ಯಾಪಿಸುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಒಟ್ಟಾರೆ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕೂಡ ನಿರ್ವಹಿಸದ, ಇಷ್ಟು ಭಯಾನಕ ವಾತಾವರಣದಲ್ಲಿಯೂ ಕೂಡ ಎದುರಿನಲ್ಲಿರುವವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪ್ರಧಾನ ಮಂತ್ರಿ ಇದ್ದಾಗ ಈ ವೈರಸ್ ಮತ್ತಷ್ಟು ರೌದ್ರನರ್ತನ ಮಾಡುತ್ತದೆ.

ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ನೀವೀಗ ಅಧಿಕಾರದಿಂದ ಕೆಳಗಿಳಿಯದಿದ್ದರೆ ನಮ್ಮಲ್ಲಿ ಸಾವಿರಾರು, ಲಕ್ಷಾಂತರ ಮಂದಿ ಅನಾವಶ್ಯಕವಾಗಿ ಮರಣ ಹೊಂದುತ್ತಾರೆ. ಹಾಗಾಗಿ ನೀವು ಹೊರಡಿ, ನಿಮ್ಮ ಜೋಳಿಗೆ ಎತ್ತಿಕೊಂಡು. ನೀವು ಗೌರವಯುತವಾಗಿ ಇಳಿಯುವ ಅವಕಾಶವಿದ್ದಾಗಲೇ ಇಳಿದುಬಿಡಿ. ನಿಮಗೆ ಧ್ಯಾನದಲ್ಲಿ, ಏಕಾಂತದಲ್ಲಿ ಉಜ್ವಲವಾದ ಭವಿಷ್ಯವಿದೆ. ನಿಮಗೆ ಬೇಕಾದುದು ಅದೇ ಎಂದು ಈ ಹಿಂದೆ ನೀವೇ ಹೇಳಿದ್ದೀರಿ. ಈಗಾಗಲೇ ನಡೆಯುತ್ತಿರುವ ಸಾಮೂಹಿಕ ಮಾರಣಹೋಮ ಹೀಗೆ ಮುಂದುವರೆದರೆ ನಿಮಗೆ ಅದೂ ಕೂಡ ಸಾಧ್ಯವಾಗದೇ ಹೋಗಬಹುದು.

ಈಗಾಗಲೇ ನಿಮ್ಮ ಸ್ಥಾನವನ್ನು ಅಲಂಕರಿಸಲು ನಿಮ್ಮ ಪಕ್ಷದಲ್ಲೇ ಬಹಳಷ್ಟು ಮಂದಿ ಇದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ವಿರೋಧ ಪಕ್ಷಗಳ ಜೊತೆ ಸಾಮರಸ್ಯವಾಗಿ ಇರಬೇಕೆಂದು ತಿಳಿದವರು. ನಿಮ್ಮ ಪಕ್ಷದಿಂದಲೇ, ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಅನುಮತಿಯೊಂದಿಗೆ, ಯಾರಾದರೂ ಆಗಲಿಬಿಡಿ. ಸರ್ಕಾರವನ್ನು, ಪ್ರಸ್ತುತ ವಾಗಿ ಇರುವ ಬಿಕ್ಕಟ್ಟು ನಿರ್ವಹಣೆಯ ತಂಡವನ್ನು ನಡೆಸಬಲ್ಲವು.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ಮೂಲಕ ಎಲ್ಲಾ ಪಕ್ಷಗಳಿಗೂ ಪ್ರತಿನಿಧಿತ್ವ ದೊರೆಯಬಹುದು. ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್‌ಗೂ ಆ ಬಿಕ್ಕಟ್ಟು ನಿರ್ವಹಣೆ ಯ ತಂಡದಲ್ಲಿ ಸ್ಥಾನ ಇರಬಹುದು. ಹಾಗೆಯೇ ವಿಜ್ಞಾನಿಗಳು, ಜನಾರೋಗ್ಯ ತಜ್ಞರು, ವೈದ್ಯರು, ಅನುಭವಿಗಳಾದ ಉನ್ನತಾಧಿಕಾರಿಗಳು ಇರಬಹುದು. ಇದೆಲ್ಲಾ ನಿಮಗೆ ಅರ್ಥವಾಗದಿರಬಹುದು, ಆದರೆ ಇದನ್ನೇ ಪ್ರಜಾತಂತ್ರ ಎನ್ನುತ್ತಾರೆ. ನೀವು ಅಂದುಕೊಳ್ಳುತ್ತಿರಬಹುದು, ಪ್ರತಿಪಕ್ಷ ಮುಕ್ತ ಪ್ರಜಾತಂತ್ರ ಎಂಬುದು ಇರದು. ಒಂದು ವೇಳೆ ಇದ್ದರೆ ಅದನ್ನು ನಿರಂಕುಶತ್ವ ಎನ್ನುತ್ತಾರೆ. ಈಗಿರುವ ವೈರಸ್‌ಗೆ ನಿರಂಕುಶತ್ವ ಎಂದರೆ ಬಹಳ ಇಷ್ಟ.

ನೀವೀಗ ಈ ಕೆಲಸ ಮಾಡದಿದ್ದರೆ, ಪ್ರಸ್ತುತ ಇರುವ ವಾತಾವರಣ ಹಂತ ಹಂತವಾಗಿ ಬೆಳೆದು ಅಂತರಾಷ್ಟ್ರೀಯ ಸಮಸ್ಯೆಯಾಗಿ, ಪ್ರಪಂಚಕ್ಕೇ ಅಪಾಯಕಾರಿ ಎಂದು ಕಾಣುತ್ತಿದೆ. ಇದು – ನಿಮ್ಮ ಅಸಾಮರ್ಥ್ಯ ಬೇರೆ ದೇಶಗಳಿಗೆ ನಮ್ಮ ಆತಂರಿಕ ವ್ಯವಹಾರಗಳಲ್ಲಿ ಮೂಗು ತೂರಿಸಲು ಪ್ರಯತ್ನಿಸುವುದಕ್ಕೆ ಮತ್ತು ಅಧಿಕಾರ ಹಿಡಿಯಲು ಪ್ರಯತ್ನಿಸುವುದಕ್ಕೆ ನ್ಯಾಯಯುತವಾದ ಅವಕಾಶವನ್ನು ನೀಡುತ್ತದೆ. ನಾವು ಕಷ್ಟಪಟ್ಟು ಹೋರಾಡಿ ಸಾಧಿಸಿಕೊಂಡ ಸಾರ್ವಭೌಮತ್ವ ಅಪಾಯದಲ್ಲಿ ಸಿಲುಕುತ್ತದೆ. ಪುನಃ ನಮ್ಮ ದೇಶ ಒಂದು ವಸಾಹತುವಾಗಿ ಮಾರ್ಪಡುತ್ತದೆ. ಇದೊಂದು ಗಂಭೀರವಾದ ಅಪಾಯಕಾರಿ ಅವಕಾಶ. ಇದನ್ನು ಕಡೆಗಣಿಸಬೇಡಿ.

ಆದ್ದರಿಂದ ಮಹಾನುಭಾವಾ, ದಯವಿಟ್ಟು ನೀವು ದಯಮಾಡಿಸಿ…ನೀವು ಮಾಡಬಹುದಾದ ಅತ್ಯಂತ ಜವಾಬ್ದಾರಿಯುತ ಕೆಲಸವಿದು. ನಮಗೆ ಪ್ರಧಾನ ಮಂತ್ರಿಯಾಗಿರುವ ನೈತಿಕ ಅಧಿಕಾರವನ್ನು ನೀವು ಕಳೆದುಕೊಂಡಿದ್ದೀರಿ.

ಕೃಪೆ: scroll. In
ಅನುವಾದ ರೇಣುಕಾ ಭಾರತಿ ಚಿಕ್ಕಮಗಳೂರು

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. Modi illade hodre e deshada stiti adhogati.. please don’t express your nexel mentality in this situation.this is not suitable time for that.

  2. Madam ಅರುಂಧತಿ ರಾಯ್. ನಿಮ್ಮ ನಿವೇದನೆ ಪೂರ್ವಕ ಆಗ್ರಹ, ಆಕ್ರೋಶ ನ್ಯಾಯಸಮ್ಮತವಾದುದು ಹಾಗೂ ೧೦೦ಕೋಟಿ ಭಾರತೀಯರ ಅಭಿಲಾಶೆಯಾಗಿದೆ. ಮಾನಗೆಟ್ಟ್ ಪರಧಾನಿಯೇ ಕೋಟ್ಯಾಧಿಪತಿ ಉದ್ಯಮಿಗಳಿಗಾಗಿ ಅಧಿಕಾರ ಚಲಾಯಿಸುತ್ತಿರುವ ನೀಚನೆ ತೊಲಗು ಈ ಗೌರವಾನ್ವಿತ ಹುದ್ದೆಯಿಂದ. ನೀನಾಗಿ ನೀನೆ ಅಧಿಕಾರದಿಂದ ಇಳಿಯದಿದ್ದರೆ ನಾವೆಲ್ಲ ನಿನ್ನನ್ನ ಕಲ್ಲು ಹೊಡೆದ ಅಧಿಕಾರದಿಂದ ಇಳಿಸುವ ಸಾಮರ್ಥ್ಯ ಹೊಂದಿದೇವೆ. ಈ ಮಟ್ಟಕ್ಕೆ ಇಳಿಯಬೇಡ.

  3. Madam ಅರುಂಧತಿ ರಾಯ್ ಅವ್ರೆ, ? ನಿಮ್ಮ ದೇಶದ ಕಾಳಜಿ ಶ್ಲಾಘನೀಯ. ಸಧ್ಯದ ಕೊರೋನ ಹೆಚ್ಚಳದಿಂದುಂಟಾದ ಉದ್ವಿಗ್ನ ಪರಿಸ್ಥಿತಿಯಿಂದ ಕರುಳು ಕಿತ್ತು ಬರುವಂತಹ ಪರಿಸ್ಥಿತಿ ನೋಡಿ ಮನಸ್ಸು ವ್ಯಗ್ರಗೊಂಡಿದೆ. ಸ್ವತಂತ್ರ ಪೂರ್ವ ಬ್ರಿಟಿಷರನ್ನೊಳಗೊಂಡು ದಾಳಿಕೋರರಾದಿಯಾಗಿ ಇಲ್ಲಿಯತನಕ ಕೆಲವು ಮುತ್ಸದ್ದಿಗಳನ್ನು ಹೊರತು ಪಡಿಸಿ ಎಲ್ಲರೂ ಜೋಳಿಗೆ ತುಂಬಿಸಿಕೊಂಡು ಹೋಗೋಕೆ ಬಂದೋರೆ. ಅದರಲ್ಲಿ ಎರಡು ಮಾತಿಲ್ಲ. ಮೋದಿ ಜೋಳಿಗಿ ಎತ್ತಿಕೊಂಡು ಹೋದ್ರೆ ಇನ್ನೂ ದೊಡ್ಡ ಜೋಳಿಗಿ ಹಿಡ್ಕೊಂಡು ತುಂಬಿಸಿಕೊಳ್ಳೋಕೆ ಕೆಲವರು ಕಾಯ್ತಾ ಇರ್ಬಹುದು. ಪ್ರಶ್ನೆ ಅದಲ್ಲ. ಇಂತ ಸಂಧಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡಬಹುದು ಅನ್ನುವಂತ ಸಲಹೆ ಸೂಚನೆಗಳನ್ನು ಕೊಡಬಹುದಿತ್ತೇನೋ ಅನ್ನೋದು ಅನೀಸಿಕೆ ಮಾತ್ರ . ಈ ಜೋಳಿಗಿ ಎತ್ತಿಕೊಂಡು ಹೋಗುವಂತೆ ಮಾಡೋದು, ತಮ್ಮ ಜೋಳಿಗಿ ತುಂಬಿಸಿಕೊಳ್ಲಿಕ್ಕೆ /ದೇಶದ ಜೋಳಿಗಿ ತುಂಬಲಿಕ್ಕೆ ಅವಕಾಶ ಮಾಡಿಕೊಡೋದು ಎಲ್ಲ ಜನರ ಕೈಯಲ್ಲಿಯೇ ಇದೆ. ಧನ್ಯವಾದಗಳು ಮೇಡಂ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...