Homeಕರ್ನಾಟಕಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

ಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

- Advertisement -
- Advertisement -

ವಿದ್ಯಾರ್ಥಿ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಎಂದರೆ ಅವರು ಭೂಮಿಯ ಮೇಲೆ ಬದುಕುತ್ತಿರುವ ದೇವರುಗಳು; ಅವರನ್ನೆಲ್ಲಾ ನಮ್ಮಂಥವರು ನೋಡಲೂ ಸಾಧ್ಯವಿಲ್ಲ ಎಂದು ತಿಳಿದಿದ್ದವನಿಗೆ ಡಿಗ್ರಿ ಓದುವ ಸಮಯಕ್ಕೆ ಅವರ ಬಗ್ಗೆ ಇದ್ದ ಪೂಜ್ಯಭಾವ ದೂರವಾಗಿತ್ತು. ಅದು ಗಾಂಧಿ ಮತ್ತು ಗಾಂಧಿವಾದದ ಬಗ್ಗೆ ಅಸಡ್ಡೆ ಮೂಡುತ್ತಿದ್ದ ಕಾಲ. ಮೊದಲೇ ಎಚ್. ನರಸಿಂಹಯ್ಯನವರನ್ನು ಹತ್ತಿರದಿಂದ ನೋಡಿದ್ದ ನನಗೆ ಎಚ್.ಎಸ್ ದೊರೆಸ್ವಾಮಿಯವರು ಸಿಕ್ಕಿದ್ದು ಗಾಂಧಿವಾದವನ್ನು ಕಂಠಪೂರ್ತಿ ವಿರೋಧಿಸುತ್ತಿದ್ದ ದಿನಗಳಲ್ಲಿ. ಅದು 2002. ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ವಿರುದ್ಧ ನಾವು ದೊಡ್ಡಬಳ್ಳಾಪುರದ ಯುವಜನರು ’ಜನಧ್ವನಿ ಯುವ ವೇದಿಕೆಯ’ ಅಡಿಯಲ್ಲಿ ಒಂದು ಸೈಕಲ್ ಜಾಥಾ ಹಮ್ಮಿಕೊಂಡಿದ್ದೆವು. ಬೆಂಗಳೂರಿನ ಕೆ.ಆರ್.ಸರ್ಕಲ್ಲಿನಲ್ಲಿ ಜಾಥಾ ಉದ್ಘಾಟನೆ. ಉದ್ಘಾಟಿಸಿದವರು ಹಿರಿಯ ಗಾಂಧಿವಾದಿ ಎಚ್.ಎಸ್ ದೊರೆಸ್ವಾಮಿಯವರು. ಅರವತ್ತು ಸೈಕಲ್‌ಗಳು ಬೆಂಗಳೂರಿನಿಂದ ಮೈಸೂರು ಮತ್ತು ಮೈಸೂರಿನಿಂದ ಬೆಂಗಳೂರಿಗೆ ಸುತ್ತಿದವು. ಆ ಜಾಥಾ ನಮ್ಮ ಬದುಕಿನಲ್ಲಿ ಬಹಳ ಮಹತ್ತರವಾದದ್ದು. ದೊರೆಸ್ವಾಮಿಯವರ ಹೆಸರನ್ನಷ್ಟೇ ಕೇಳುತ್ತಿದ್ದ ನಮ್ಮೆದುರಿಗೆ ಅವರು ನಿಂತು ಮಾತನಾಡಿದರು. ಇಪ್ಪತ್ತರ ಆಸುಪಾಸಿನ ನಮ್ಮೆಲ್ಲರ ಕಾರ್ಯವನ್ನು ಮಹತ್ವದ ಸಾಧನೆಯೆಂಬಂತೆ ಬೆನ್ನು ತಟ್ಟಿದರು; ಹುರಿದುಂಬಿಸಿದರು. ಬಿಎಂಐಸಿ ಯೋಜನೆಯ ಕುತಂತ್ರವನ್ನು, ರೈತರ ವಿರುದ್ಧದ ದ್ರೋಹವನ್ನು ನಮ್ಮೆಲ್ಲರ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದರು.

ಅದಾದಮೇಲೆ ನಾನು ಅವರನ್ನು ಬಹಳ ಸಲ ಭೇಟಿ ಮಾಡಿದ್ದೇನೆ. ಅವರಿರುವ ವೇದಿಕೆಯಲ್ಲಿ ಕೂತು ಭಾಷಣ ಮಾಡಿದ್ದೇನೆ. ಅವರು ಮಾಡುತ್ತಿದ್ದ ಭಾಷಣವನ್ನು ಕುತೂಹಲ, ಶ್ರದ್ಧೆಯಿಂದ ಕೇಳಿಸಿಕೊಂಡಿದ್ದೇನೆ. ಎಲ್ಲಿ ಪ್ರಗತಿಪರ ಆಶಯಗಳ ಕಾರ್ಯಕ್ರಮಗಳಿರುತ್ತಿದ್ದವೋ, ಎಲ್ಲಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಗಳಿರುತ್ತಿದ್ದವೋ ಅಲ್ಲಿ ದೊರೆಸ್ವಾಮಿಯವರು ಇರುತ್ತಿದ್ದರು. ನಾವು ಸ್ನೇಹಿತರು ಅವರನ್ನು ಹೀಗೆ ಎಲ್ಲಾ ಕಡೆ ಕಂಡಾಗ ’ಪಾಪ ಈ ವಯಸ್ಸಿನಲ್ಲಿ ಇವರನ್ನು ಯಾಕೆ ಎಳೆದಾಡುತ್ತಾರೆ’ ಅಂದುಕೊಳ್ಳುತ್ತಿದ್ದೆವು. ’ಚಲೋ ಉಡುಪಿ’ಯ ಸಮಯದಲ್ಲಿ ಅವರ ಮನೆಗೆ ಹೋಗುವ ಅವಕಾಶ ಸಿಕ್ಕಿತು. ಅವರು ನಮ್ಮನ್ನು ಆದರದಿಂದ ಮಾತನಾಡಿಸಿದರು. ಚಲೋ ಉಡುಪಿ ಆಂದೋಲನದ ಜೊತೆಯಾದರು.

ನಾನು ಗ್ರಹಿಸಿದ ಹಾಗೆ ದೊರೆಸ್ವಾಮಿಯವರು ’ಗಾಂಧಿವಾದಿಗಳ’ ಕರ್ಮಠತನವನ್ನು ಕೊಂಚಮಟ್ಟಿಗೆ ಮೀರಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನೆಲ್ಲಾ ಗಾಂಧಿವಾದಿ ಎಂದು ಗುರುತಿಸುವುದರಿಂದ ಅವರನ್ನು ಎಲ್ಲರೂ ಗಾಂಧಿವಾದಿ ಎಂದೇ ನೋಡುತ್ತಿದ್ದರು. ಆದರೆ, ನಾಗಲಾಪಲ್ಲಿಯ ರಕ್ತದ ಕಲೆಗಳ ಮೇಲೆ ಕುಳಿತು ಮೌನ ಪ್ರತಿಭಟನೆ ಮಾಡಿ ’ಕೊಂದವರನ್ನೂ ನಾವು ಅಹಿಂಸಾತ್ಮಕವಾಗಿ ಎದುರುಗೊಳ್ಳಬೇಕು’ ಎಂದಿದ್ದ ಗಾಂಧಿವಾದಿ ಸತ್ಯವ್ರತ ಅಂಥವರನ್ನು ಕಂಡಿದ್ದ ನನಗೆ, ದೌರ್ಜನ್ಯದ ವಿಷಯ ಕಿವಿಗೆ ಬಿದ್ದರೆ ಮನುಷ್ಯ ಸಹಜವಾಗಿ ಸಿಟ್ಟಿಗೇಳುತ್ತಿದ್ದ ದೊರೆಸ್ವಾಮಿಯವರು ಕೊಂಚ ಭಿನ್ನವಾಗಿ ಕಂಡರು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಅವರು ನಕ್ಸಲ್ ಚಳವಳಿಯಿಂದ ಹೊರಗೆ ಬಂದ ನಂತರದ ಕಾಲದಲ್ಲಿ ದೊರೆಸ್ವಾಮಿ ಮತ್ತು ಪ್ರಗತಿಪರರ ಸಖ್ಯ ಹೆಚ್ಚಾಯಿತು. ಅದಕ್ಕೆ ಮೊದಲು ’ಎಲ್ಲಾಕಡೆ’ ಇರುತ್ತಿದ್ದರು. ಮತ್ತು ಅಲ್ಲಿಯವರೆಗೆ ಅವರು ಕರ್ನಾಟಕದ ದಲಿತ ಚಳವಳಿಯೊಂದಿಗೆ ಕಾಯ್ದುಕೊಂಡಿದ್ದ ಅಂತರಕ್ಕೆ ನಾವು ಈಗ ಕಾರಣಗಳನ್ನು ಹುಡುಕುವುದು ಅಷ್ಟು ಒಳ್ಳೆಯದಲ್ಲ. ದಿಡ್ಡಳ್ಳಿ ಆದಿವಾಸಿಗಳ ಹೋರಾಟದಲ್ಲಿ ಹಾಗೂ ನಾಡಿನ ಭೂಮಿ ಮತ್ತು ವಸತಿ ವಂಚಿತರ ಹೋರಾಟದಲ್ಲಿ ಅವರು ಅಷ್ಟು ದೃಢವಾಗಿ ನಿಂತಿದ್ದು ನಮ್ಮಂಥವರಿಗೆ ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿತು. ಇದೆಲ್ಲದರ ನಡುವೆ ನನಗೆ ದೊರೆಸ್ವಾಮಿ ಎಂದತಕ್ಷಣ ಎರಡು ಘಟನೆಗಳು ಥಟ್ಟನೆ ನೆನಪಿಗೆ ಬರುತ್ತವೆ.

ಮೊದಲನೆಯದ್ದನ್ನು ನಂತರ ಹೇಳುತ್ತೇನೆ. ನಂತರದ್ದು ನಡೆದದ್ದು 2017ರಲ್ಲಿ. ದೊಡ್ಡಬಳ್ಳಾಪುರದ ಗಾಂಧಿವಾದಿಗಳಾದ ಮೇಷ್ಟ್ರು ಎಂ.ಜಿ ಚಂದ್ರಶೇಖರಯ್ಯನವರ ಸೇವಾ ನಿವೃತ್ತಿಯ ಕಾರಣಕ್ಕೆ ಅವರ ಶಿಷ್ಯಂದಿರೆಲ್ಲಾ ಸೇರಿ ಅಭಿನಂದನೆ ಸಮಾರಂಭ ಇಟ್ಟುಕೊಂಡಿದ್ದೆವು. ದೊರೆಸ್ವಾಮಿಯವರನ್ನು ಮುಖ್ಯ ಅತಿಥಿಗಳಾಗಿ ಕರೆಯಲಾಗಿತ್ತು. ಅವರು ದೊಡ್ಡಬಳ್ಳಾಪುರದ ಪ್ರವಾಸಿಮಂದಿರದಲ್ಲಿ ನಮ್ಮೊಂದಿಗೇ ಊಟ ಮಾಡಿದರು. ಹೊರಡುವಾಗ ಅವರನ್ನು ಕರೆದುಕೊಂಡು ಬಂದಿದ್ದ ಟ್ಯಾಕ್ಸಿ ಡ್ರೈವರ್‌ಗೆ ಸಮಾರಂಭದ ಮುಂದಾಳತ್ವ ವಹಿಸಿದ್ದ ಪತ್ರಕರ್ತ ಮಂಜುನಾಥ ಅದ್ದೆಯವರು ಹಣ ಕೊಡಲು ಹೋದರು. ಸುಮಾರು ಐವತ್ತೈದು ವಯಸ್ಸಿನ ಆ ಡ್ರೈವರ್ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ನಮಗೆ ಆಶ್ಚರ್ಯವಾಯಿತು. ಬೆಂಗಳೂರಿಂದ ನಲವತ್ತು ಕಿಲೋಮೀಟರ್ ಬಂದು ಕಾರಿನ ಬಾಡಿಗೆ ತೆಗೆದುಕೊಳ್ಳದಿದ್ದರೆ ಹೇಗೆಂದು ಕೇಳಿದೆವು. ಅದಕ್ಕವರು: ’ಬೆಂಗಳೂರು ಏರ್‌ಪೋರ್ಟಿಗೆ ಖಾಸಗಿ ಟ್ಯಾಕ್ಸಿಯವರಿಗೆ ಮಾತ್ರ ಅವಕಾಶ ಕೊಟ್ಟು ಕೆಎಸ್‌ಟಿಡಿಸಿ ಕಾರುಗಳಿಗೆ ನಿರ್ಬಂಧ ಹೇರಲಾಗಿತ್ತು. ಆಗ ದೊರೆಸ್ವಾಮಿಯವರು ದೆಹಲಿಗೆ ಹೋಗಿ ಹೋರಾಟ ಮಾಡಿ ನಮಗೂ ಏರ್‌ಪೋರ್ಟಿನಲ್ಲಿ ಬಾಡಿಗೆ ಓಡಿಸಲು ಅವಕಾಶ ಕೊಡಿಸಿದರು. ಅವರಿಂದ ಇವತ್ತು ಸುಮಾರು ಮೂರ್‍ನಾಲ್ಕು ಸಾವಿರ ಚಾಲಕರ ಕುಟುಂಬಗಳು ಊಟ ಮಾಡ್ತಿದಿವಿ. ಅವರು ನನ್ನ ಕಾರಿನಲ್ಲಿ ಬಂದಿರೋದೇ ನನ್ನ ಪುಣ್ಯ. ಅವರ ಹತ್ರ ಹಣ ಹೇಗೆ ತಗೊಳ್ಳಲಿ ಸ್ವಾಮಿ’ ಅಂದರು. ಅಲ್ಲಿದ್ದವರ ಕಣ್ಣುಗಳು ಒದ್ದೆಯಾಗಿದ್ದವು. ಎಷ್ಟು ಪ್ರಯಾಸಪಟ್ಟರೂ ಅವರು ಹಣ ತೆಗೆದುಕೊಳ್ಳಲಿಲ್ಲ. ಮತ್ತು ಇದನ್ನೆಲ್ಲಾ ಅವರು ದೊರೆಸ್ವಾಮಿಯವರ ಮುಂದೆ ಹೇಳಲಿಲ್ಲ.

ಮೊದಲನೆಯ ಘಟನೆ ನಡೆದದ್ದು 2016ರಲ್ಲಿ. ದೊರೆಸ್ವಾಮಿಯವರನ್ನು ಯಾವುದೋ ಕಾರ್ಯಕ್ರಮದ ನಿಮಿತ್ತ ಭೇಟಿ ಮಾಡಲು ಹೋಗಿದ್ದೆವು. ಮನೆಯ ಒಳಗೆ ಹೋಗುವ ಮೊದಲು ಚಪ್ಪಲಿಗಳನ್ನು ಬಿಡುವ ಜಾಗದಲ್ಲಿ ಒಂದು ಕುರ್ಚಿಯ ಮೇಲೆ ಅಂಬೇಡ್ಕರ್ ಫೋಟೋ ಇರುವ ದೊಡ್ಡ ಮೊಮೆಂಟೋ, ಅವರ ಬರಹ ಭಾಷಣಗಳ ಯಾವುದೋ ಒಂದು ಸಂಪುಟ ಮತ್ತು ಗಂಧದ ಹಾರಗಳಿದ್ದವು. ದೊರೆಸ್ವಾಮಿಯವರು ಯಾವುದೋ ದಲಿತ ಸಂಘಟನೆಯ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ಮತ್ತವರು ಮನೆಗೆ ಹಿಂದಿರುಗಿ ತುಂಬಾ ಸಮಯವೇ ಆಗಿತ್ತು. ಅವರು ಮನೆಗೆ ಬಂದಾಗ ಅವುಗಳನ್ನೆಲ್ಲಾ ಒಳಗೆ ತೆಗೆದುಕೊಂಡು ಹೋಗುವುದನ್ನು ಮರೆತಿರಬಹುದು. ಆಮೇಲೆ ಒಳಗೆ ಎತ್ತಿಕೊಂಡಿರಬಹುದು. ಮತ್ತು ಇದು ಗಮನಾರ್ಹ ವಿಷಯವೇ ಅಲ್ಲದಿರಬಹುದು. ಆದರೆ, ಈ ಘಟನೆ ನನ್ನೊಳಗೆ ಉಂಟುಮಾಡಿದ ಭಾವನೆಯನ್ನು ಹೇಗೆ ಹೇಳಲಿ.. ಇದಾದ ಮೇಲೆ ನಾನವರ ಮನೆಗೆ ಹೋಗುವ ಸಂದರ್ಭ ಒದಗಲಿಲ್ಲ.

ಕರ್ನಾಟಕದ ಜನಹೋರಾಟಗಳಿಗೆ ಇನ್ನೂ ದೊರೆಸ್ವಾಮಿಯವರ ಅಗತ್ಯವಿತ್ತು.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ ಕನ್ನಡ ಅಧ್ಯಾಪಕರು. ಬೆಂಗಳೂರಿನ ವಿ.ವಿಯಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಯಲ್ಲಿ ಕ್ರಿಯಾಶ್ರೀಲರು, ನೀಲಗ್ಯಾನನ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದಾರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...