Homeಕರ್ನಾಟಕಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

ಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

- Advertisement -
- Advertisement -

ವಿದ್ಯಾರ್ಥಿ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಎಂದರೆ ಅವರು ಭೂಮಿಯ ಮೇಲೆ ಬದುಕುತ್ತಿರುವ ದೇವರುಗಳು; ಅವರನ್ನೆಲ್ಲಾ ನಮ್ಮಂಥವರು ನೋಡಲೂ ಸಾಧ್ಯವಿಲ್ಲ ಎಂದು ತಿಳಿದಿದ್ದವನಿಗೆ ಡಿಗ್ರಿ ಓದುವ ಸಮಯಕ್ಕೆ ಅವರ ಬಗ್ಗೆ ಇದ್ದ ಪೂಜ್ಯಭಾವ ದೂರವಾಗಿತ್ತು. ಅದು ಗಾಂಧಿ ಮತ್ತು ಗಾಂಧಿವಾದದ ಬಗ್ಗೆ ಅಸಡ್ಡೆ ಮೂಡುತ್ತಿದ್ದ ಕಾಲ. ಮೊದಲೇ ಎಚ್. ನರಸಿಂಹಯ್ಯನವರನ್ನು ಹತ್ತಿರದಿಂದ ನೋಡಿದ್ದ ನನಗೆ ಎಚ್.ಎಸ್ ದೊರೆಸ್ವಾಮಿಯವರು ಸಿಕ್ಕಿದ್ದು ಗಾಂಧಿವಾದವನ್ನು ಕಂಠಪೂರ್ತಿ ವಿರೋಧಿಸುತ್ತಿದ್ದ ದಿನಗಳಲ್ಲಿ. ಅದು 2002. ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ವಿರುದ್ಧ ನಾವು ದೊಡ್ಡಬಳ್ಳಾಪುರದ ಯುವಜನರು ’ಜನಧ್ವನಿ ಯುವ ವೇದಿಕೆಯ’ ಅಡಿಯಲ್ಲಿ ಒಂದು ಸೈಕಲ್ ಜಾಥಾ ಹಮ್ಮಿಕೊಂಡಿದ್ದೆವು. ಬೆಂಗಳೂರಿನ ಕೆ.ಆರ್.ಸರ್ಕಲ್ಲಿನಲ್ಲಿ ಜಾಥಾ ಉದ್ಘಾಟನೆ. ಉದ್ಘಾಟಿಸಿದವರು ಹಿರಿಯ ಗಾಂಧಿವಾದಿ ಎಚ್.ಎಸ್ ದೊರೆಸ್ವಾಮಿಯವರು. ಅರವತ್ತು ಸೈಕಲ್‌ಗಳು ಬೆಂಗಳೂರಿನಿಂದ ಮೈಸೂರು ಮತ್ತು ಮೈಸೂರಿನಿಂದ ಬೆಂಗಳೂರಿಗೆ ಸುತ್ತಿದವು. ಆ ಜಾಥಾ ನಮ್ಮ ಬದುಕಿನಲ್ಲಿ ಬಹಳ ಮಹತ್ತರವಾದದ್ದು. ದೊರೆಸ್ವಾಮಿಯವರ ಹೆಸರನ್ನಷ್ಟೇ ಕೇಳುತ್ತಿದ್ದ ನಮ್ಮೆದುರಿಗೆ ಅವರು ನಿಂತು ಮಾತನಾಡಿದರು. ಇಪ್ಪತ್ತರ ಆಸುಪಾಸಿನ ನಮ್ಮೆಲ್ಲರ ಕಾರ್ಯವನ್ನು ಮಹತ್ವದ ಸಾಧನೆಯೆಂಬಂತೆ ಬೆನ್ನು ತಟ್ಟಿದರು; ಹುರಿದುಂಬಿಸಿದರು. ಬಿಎಂಐಸಿ ಯೋಜನೆಯ ಕುತಂತ್ರವನ್ನು, ರೈತರ ವಿರುದ್ಧದ ದ್ರೋಹವನ್ನು ನಮ್ಮೆಲ್ಲರ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದರು.

ಅದಾದಮೇಲೆ ನಾನು ಅವರನ್ನು ಬಹಳ ಸಲ ಭೇಟಿ ಮಾಡಿದ್ದೇನೆ. ಅವರಿರುವ ವೇದಿಕೆಯಲ್ಲಿ ಕೂತು ಭಾಷಣ ಮಾಡಿದ್ದೇನೆ. ಅವರು ಮಾಡುತ್ತಿದ್ದ ಭಾಷಣವನ್ನು ಕುತೂಹಲ, ಶ್ರದ್ಧೆಯಿಂದ ಕೇಳಿಸಿಕೊಂಡಿದ್ದೇನೆ. ಎಲ್ಲಿ ಪ್ರಗತಿಪರ ಆಶಯಗಳ ಕಾರ್ಯಕ್ರಮಗಳಿರುತ್ತಿದ್ದವೋ, ಎಲ್ಲಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಗಳಿರುತ್ತಿದ್ದವೋ ಅಲ್ಲಿ ದೊರೆಸ್ವಾಮಿಯವರು ಇರುತ್ತಿದ್ದರು. ನಾವು ಸ್ನೇಹಿತರು ಅವರನ್ನು ಹೀಗೆ ಎಲ್ಲಾ ಕಡೆ ಕಂಡಾಗ ’ಪಾಪ ಈ ವಯಸ್ಸಿನಲ್ಲಿ ಇವರನ್ನು ಯಾಕೆ ಎಳೆದಾಡುತ್ತಾರೆ’ ಅಂದುಕೊಳ್ಳುತ್ತಿದ್ದೆವು. ’ಚಲೋ ಉಡುಪಿ’ಯ ಸಮಯದಲ್ಲಿ ಅವರ ಮನೆಗೆ ಹೋಗುವ ಅವಕಾಶ ಸಿಕ್ಕಿತು. ಅವರು ನಮ್ಮನ್ನು ಆದರದಿಂದ ಮಾತನಾಡಿಸಿದರು. ಚಲೋ ಉಡುಪಿ ಆಂದೋಲನದ ಜೊತೆಯಾದರು.

ನಾನು ಗ್ರಹಿಸಿದ ಹಾಗೆ ದೊರೆಸ್ವಾಮಿಯವರು ’ಗಾಂಧಿವಾದಿಗಳ’ ಕರ್ಮಠತನವನ್ನು ಕೊಂಚಮಟ್ಟಿಗೆ ಮೀರಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನೆಲ್ಲಾ ಗಾಂಧಿವಾದಿ ಎಂದು ಗುರುತಿಸುವುದರಿಂದ ಅವರನ್ನು ಎಲ್ಲರೂ ಗಾಂಧಿವಾದಿ ಎಂದೇ ನೋಡುತ್ತಿದ್ದರು. ಆದರೆ, ನಾಗಲಾಪಲ್ಲಿಯ ರಕ್ತದ ಕಲೆಗಳ ಮೇಲೆ ಕುಳಿತು ಮೌನ ಪ್ರತಿಭಟನೆ ಮಾಡಿ ’ಕೊಂದವರನ್ನೂ ನಾವು ಅಹಿಂಸಾತ್ಮಕವಾಗಿ ಎದುರುಗೊಳ್ಳಬೇಕು’ ಎಂದಿದ್ದ ಗಾಂಧಿವಾದಿ ಸತ್ಯವ್ರತ ಅಂಥವರನ್ನು ಕಂಡಿದ್ದ ನನಗೆ, ದೌರ್ಜನ್ಯದ ವಿಷಯ ಕಿವಿಗೆ ಬಿದ್ದರೆ ಮನುಷ್ಯ ಸಹಜವಾಗಿ ಸಿಟ್ಟಿಗೇಳುತ್ತಿದ್ದ ದೊರೆಸ್ವಾಮಿಯವರು ಕೊಂಚ ಭಿನ್ನವಾಗಿ ಕಂಡರು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಅವರು ನಕ್ಸಲ್ ಚಳವಳಿಯಿಂದ ಹೊರಗೆ ಬಂದ ನಂತರದ ಕಾಲದಲ್ಲಿ ದೊರೆಸ್ವಾಮಿ ಮತ್ತು ಪ್ರಗತಿಪರರ ಸಖ್ಯ ಹೆಚ್ಚಾಯಿತು. ಅದಕ್ಕೆ ಮೊದಲು ’ಎಲ್ಲಾಕಡೆ’ ಇರುತ್ತಿದ್ದರು. ಮತ್ತು ಅಲ್ಲಿಯವರೆಗೆ ಅವರು ಕರ್ನಾಟಕದ ದಲಿತ ಚಳವಳಿಯೊಂದಿಗೆ ಕಾಯ್ದುಕೊಂಡಿದ್ದ ಅಂತರಕ್ಕೆ ನಾವು ಈಗ ಕಾರಣಗಳನ್ನು ಹುಡುಕುವುದು ಅಷ್ಟು ಒಳ್ಳೆಯದಲ್ಲ. ದಿಡ್ಡಳ್ಳಿ ಆದಿವಾಸಿಗಳ ಹೋರಾಟದಲ್ಲಿ ಹಾಗೂ ನಾಡಿನ ಭೂಮಿ ಮತ್ತು ವಸತಿ ವಂಚಿತರ ಹೋರಾಟದಲ್ಲಿ ಅವರು ಅಷ್ಟು ದೃಢವಾಗಿ ನಿಂತಿದ್ದು ನಮ್ಮಂಥವರಿಗೆ ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿತು. ಇದೆಲ್ಲದರ ನಡುವೆ ನನಗೆ ದೊರೆಸ್ವಾಮಿ ಎಂದತಕ್ಷಣ ಎರಡು ಘಟನೆಗಳು ಥಟ್ಟನೆ ನೆನಪಿಗೆ ಬರುತ್ತವೆ.

ಮೊದಲನೆಯದ್ದನ್ನು ನಂತರ ಹೇಳುತ್ತೇನೆ. ನಂತರದ್ದು ನಡೆದದ್ದು 2017ರಲ್ಲಿ. ದೊಡ್ಡಬಳ್ಳಾಪುರದ ಗಾಂಧಿವಾದಿಗಳಾದ ಮೇಷ್ಟ್ರು ಎಂ.ಜಿ ಚಂದ್ರಶೇಖರಯ್ಯನವರ ಸೇವಾ ನಿವೃತ್ತಿಯ ಕಾರಣಕ್ಕೆ ಅವರ ಶಿಷ್ಯಂದಿರೆಲ್ಲಾ ಸೇರಿ ಅಭಿನಂದನೆ ಸಮಾರಂಭ ಇಟ್ಟುಕೊಂಡಿದ್ದೆವು. ದೊರೆಸ್ವಾಮಿಯವರನ್ನು ಮುಖ್ಯ ಅತಿಥಿಗಳಾಗಿ ಕರೆಯಲಾಗಿತ್ತು. ಅವರು ದೊಡ್ಡಬಳ್ಳಾಪುರದ ಪ್ರವಾಸಿಮಂದಿರದಲ್ಲಿ ನಮ್ಮೊಂದಿಗೇ ಊಟ ಮಾಡಿದರು. ಹೊರಡುವಾಗ ಅವರನ್ನು ಕರೆದುಕೊಂಡು ಬಂದಿದ್ದ ಟ್ಯಾಕ್ಸಿ ಡ್ರೈವರ್‌ಗೆ ಸಮಾರಂಭದ ಮುಂದಾಳತ್ವ ವಹಿಸಿದ್ದ ಪತ್ರಕರ್ತ ಮಂಜುನಾಥ ಅದ್ದೆಯವರು ಹಣ ಕೊಡಲು ಹೋದರು. ಸುಮಾರು ಐವತ್ತೈದು ವಯಸ್ಸಿನ ಆ ಡ್ರೈವರ್ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ನಮಗೆ ಆಶ್ಚರ್ಯವಾಯಿತು. ಬೆಂಗಳೂರಿಂದ ನಲವತ್ತು ಕಿಲೋಮೀಟರ್ ಬಂದು ಕಾರಿನ ಬಾಡಿಗೆ ತೆಗೆದುಕೊಳ್ಳದಿದ್ದರೆ ಹೇಗೆಂದು ಕೇಳಿದೆವು. ಅದಕ್ಕವರು: ’ಬೆಂಗಳೂರು ಏರ್‌ಪೋರ್ಟಿಗೆ ಖಾಸಗಿ ಟ್ಯಾಕ್ಸಿಯವರಿಗೆ ಮಾತ್ರ ಅವಕಾಶ ಕೊಟ್ಟು ಕೆಎಸ್‌ಟಿಡಿಸಿ ಕಾರುಗಳಿಗೆ ನಿರ್ಬಂಧ ಹೇರಲಾಗಿತ್ತು. ಆಗ ದೊರೆಸ್ವಾಮಿಯವರು ದೆಹಲಿಗೆ ಹೋಗಿ ಹೋರಾಟ ಮಾಡಿ ನಮಗೂ ಏರ್‌ಪೋರ್ಟಿನಲ್ಲಿ ಬಾಡಿಗೆ ಓಡಿಸಲು ಅವಕಾಶ ಕೊಡಿಸಿದರು. ಅವರಿಂದ ಇವತ್ತು ಸುಮಾರು ಮೂರ್‍ನಾಲ್ಕು ಸಾವಿರ ಚಾಲಕರ ಕುಟುಂಬಗಳು ಊಟ ಮಾಡ್ತಿದಿವಿ. ಅವರು ನನ್ನ ಕಾರಿನಲ್ಲಿ ಬಂದಿರೋದೇ ನನ್ನ ಪುಣ್ಯ. ಅವರ ಹತ್ರ ಹಣ ಹೇಗೆ ತಗೊಳ್ಳಲಿ ಸ್ವಾಮಿ’ ಅಂದರು. ಅಲ್ಲಿದ್ದವರ ಕಣ್ಣುಗಳು ಒದ್ದೆಯಾಗಿದ್ದವು. ಎಷ್ಟು ಪ್ರಯಾಸಪಟ್ಟರೂ ಅವರು ಹಣ ತೆಗೆದುಕೊಳ್ಳಲಿಲ್ಲ. ಮತ್ತು ಇದನ್ನೆಲ್ಲಾ ಅವರು ದೊರೆಸ್ವಾಮಿಯವರ ಮುಂದೆ ಹೇಳಲಿಲ್ಲ.

ಮೊದಲನೆಯ ಘಟನೆ ನಡೆದದ್ದು 2016ರಲ್ಲಿ. ದೊರೆಸ್ವಾಮಿಯವರನ್ನು ಯಾವುದೋ ಕಾರ್ಯಕ್ರಮದ ನಿಮಿತ್ತ ಭೇಟಿ ಮಾಡಲು ಹೋಗಿದ್ದೆವು. ಮನೆಯ ಒಳಗೆ ಹೋಗುವ ಮೊದಲು ಚಪ್ಪಲಿಗಳನ್ನು ಬಿಡುವ ಜಾಗದಲ್ಲಿ ಒಂದು ಕುರ್ಚಿಯ ಮೇಲೆ ಅಂಬೇಡ್ಕರ್ ಫೋಟೋ ಇರುವ ದೊಡ್ಡ ಮೊಮೆಂಟೋ, ಅವರ ಬರಹ ಭಾಷಣಗಳ ಯಾವುದೋ ಒಂದು ಸಂಪುಟ ಮತ್ತು ಗಂಧದ ಹಾರಗಳಿದ್ದವು. ದೊರೆಸ್ವಾಮಿಯವರು ಯಾವುದೋ ದಲಿತ ಸಂಘಟನೆಯ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ಮತ್ತವರು ಮನೆಗೆ ಹಿಂದಿರುಗಿ ತುಂಬಾ ಸಮಯವೇ ಆಗಿತ್ತು. ಅವರು ಮನೆಗೆ ಬಂದಾಗ ಅವುಗಳನ್ನೆಲ್ಲಾ ಒಳಗೆ ತೆಗೆದುಕೊಂಡು ಹೋಗುವುದನ್ನು ಮರೆತಿರಬಹುದು. ಆಮೇಲೆ ಒಳಗೆ ಎತ್ತಿಕೊಂಡಿರಬಹುದು. ಮತ್ತು ಇದು ಗಮನಾರ್ಹ ವಿಷಯವೇ ಅಲ್ಲದಿರಬಹುದು. ಆದರೆ, ಈ ಘಟನೆ ನನ್ನೊಳಗೆ ಉಂಟುಮಾಡಿದ ಭಾವನೆಯನ್ನು ಹೇಗೆ ಹೇಳಲಿ.. ಇದಾದ ಮೇಲೆ ನಾನವರ ಮನೆಗೆ ಹೋಗುವ ಸಂದರ್ಭ ಒದಗಲಿಲ್ಲ.

ಕರ್ನಾಟಕದ ಜನಹೋರಾಟಗಳಿಗೆ ಇನ್ನೂ ದೊರೆಸ್ವಾಮಿಯವರ ಅಗತ್ಯವಿತ್ತು.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ ಕನ್ನಡ ಅಧ್ಯಾಪಕರು. ಬೆಂಗಳೂರಿನ ವಿ.ವಿಯಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಯಲ್ಲಿ ಕ್ರಿಯಾಶ್ರೀಲರು, ನೀಲಗ್ಯಾನನ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದಾರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...