Homeಕರ್ನಾಟಕ‘ಎ’ ಫಾರ್‌ ಅಂಬೇಡ್ಕರ್‌ ಎನ್ನಬೇಕಿದೆ: ನೂತನ ಪಠ್ಯ ವಿರೋಧಿಸಿ ಮೊಳಗಿದ ‘ತಿಪಟೂರು ಚಲೋ’

‘ಎ’ ಫಾರ್‌ ಅಂಬೇಡ್ಕರ್‌ ಎನ್ನಬೇಕಿದೆ: ನೂತನ ಪಠ್ಯ ವಿರೋಧಿಸಿ ಮೊಳಗಿದ ‘ತಿಪಟೂರು ಚಲೋ’

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ 'ಚಲೋ ತಿಪಟೂರು' ಹೋರಾಟ ನಡೆಯಿತು. ಸಚಿವ ಬಿ.ಸಿ.ನಾಗೇಶ್‌ ನಡೆಗಳಿಗೆ ತೀವ್ರ ವಿರೋಧ ವ್ಯಕ್ತವಾಯಿತು.

- Advertisement -
- Advertisement -

‘ಎ’ ಫಾರ್‌ ಆಪಲ್‌ ಎಂದು ಹೇಳುವ ಬದಲು, ‘ಎ’ ಫಾರ್‌ ಅಂಬೇಡ್ಕರ್‌‌ ಎಂದು ಮಕ್ಕಳಿಗೆ ಹೇಳಿಕೊಡಬೇಕಾಗಿದೆ. ಅಂಬೇಡ್ಕರ್‌- ಈ ದೇಶಕ್ಕೆ ನಾಗರಿಕತೆಯ ಬೆಳಕು ತಂದವರು ಎಂದು ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜಾಗೃತ ತಿಪಟೂರು, ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ವತಿಯಿಂದ ಇಂದು ನಡೆದ ‘ಚಲೋ ತಿಪಟೂರು, ಜಾಥಾ ಹಾಗೂ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ಅ- ಅರಸ, ಆ- ಆಳು ಎಂದು ಹೇಳಿಕೊಡಲಾಗುತ್ತಿದೆ. ಅರಸ ಎಂದು ಹೇಳಿಕೊಡುತ್ತಾ ಶಿವಾಜಿಯ ಫೋಟೋ ಹಾಕುತ್ತಾರೆ. ನಮಗೆ ಗೊತ್ತಿರುವುದು ಮೈಸೂರಿನ ಅರಸರು. ಟಿಪ್ಪು ಫೋಟೋ ಹಾಕಬಹುದಲ್ಲ, ಮೈಸೂರು ಒಡೆಯರ ಫೋಟೋ ಹಾಕಬಹುದಲ್ಲ. ನಮ್ಮ ನಾಡನ್ನು ಲೂಟಿ ಮಾಡಿದ ಶಿವಾಜಿಯನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ನೆಲಕ್ಕೆ ಸಂಬಂಧವಿಲ್ಲದ ಪಠ್ಯ ರೂಪಿತವಾಗಿಲ್ಲದಿದ್ದರೆ ನಮ್ಮದೇ ಆದ ಪಠ್ಯವನ್ನು ರಚಿಸುವ ಅವಕಾಶವನ್ನು ಎನ್‌ಸಿಎಫ್‌ (ನ್ಯಾಷನಲ್‌ ಕರಿಕ್ಯುಲಮ್ ಫ್ರೇಮ್‌ ವರ್ಕ್) ನೀಡಿತು. ಇವರು ಮಾಡಿರುವ ದ್ರೋಹಕ್ಕೆ ಪರ್ಯಾಯವಾಗಿ ನೆಲಪಠ್ಯಗಳನ್ನು ರೂಪಿಸಬೇಕಿದೆ. ಇದು ನಿಲ್ಲಲಾರದ ಹೋರಾಟ. ಮನೆಮನೆಯಲ್ಲೂ ಜಾಗೃತಿ ಮೂಡಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಮನುಸ್ಮೃತಿಯನ್ನು ಸುಟ್ಟಂತೆ ಈ ಪಠ್ಯಪುಸ್ತಕಗಳನ್ನು ಸುಡಬೇಕಿದೆ ಎಂದು ಕರೆ ನೀಡಿದರು.

ಸ್ವೀಡನ್‌ ದೇಶಕ್ಕೆ ಅಧ್ಯಕ್ಷನಾಗುವುದು ಅಲ್ಲಿನ ನಾಗರಿಕರಿಗೆ ಸುಲಭ. ಆದರೆ ಮೇಷ್ಟ್ರಾಗಲು ತುಂಬಾ ಶ್ರಮ ಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ದೊಡ್ಡ ಪ್ರಮಾಣದ ಆದ್ಯತೆಯನ್ನು ಅಲ್ಲಿನ ಸರ್ಕಾರ ನೀಡುತ್ತದೆ. ದುರಂತವೆಂದರೆ ನಮ್ಮ ದೇಶದಲ್ಲಿ ಪಠ್ಯಪುಸ್ತಕಗಳು ಮೊದಲಿನಿಂದಲೂ ಬಹುಜನರ ಬಿಡುಗಡೆಯನ್ನು ತಡೆದಿವೆ ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಪಠ್ಯ ಪರಿಷ್ಕರಣೆ: 8 ತಪ್ಪು ತಿದ್ದಲು ಮುಂದಾದ ಸರ್ಕಾರ; ಹಾಗೆಯೇ ಉಳಿದ ಸಾಲು ಸಾಲು ಎಡವಟ್ಟು!

ಸಂವಿಧಾನ ವಿರೋಧಿ ಪಠ್ಯ ರೂಪಿಸಲಾಗಿದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಸಂವಿಧಾನದ ಆಶಯ. ಸಮಾನತೆಯನ್ನೇ ವಿರೋಧಿಸುವವರು ದೇಶದ್ರೋಹಿಗಳು. ನಾವು ಸಮಾನತೆಯನ್ನು ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್‌ ಸ್ಪಷ್ಟವಾಗಿ ಹೇಳಿದೆ. ಇವರಿಗಿಂತ ದೇಶದ್ರೋಹಿಗಳು ಯಾರಿದ್ದಾರೆ? ಸಮಾನತೆ ಮತ್ತು ಸಂವಿಧಾನ ಒಪ್ಪದ ಆರ್‌ಎಸ್‌ಎಸ್- ದೇಶದ್ರೋಹಿ ಸಂಘಟನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರದಂತಹ ಲಜ್ಜೆಗೆಟ್ಟ ಸರ್ಕಾರವನ್ನು ನಾವು ಜಗತ್ತಿನಲ್ಲಿ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಪಠ್ಯದಲ್ಲಿ ತಪ್ಪುಗಳಿವೆ ಎಂದು ಸರ್ಕಾರ ಒಪ್ಪಿಕೊಂಡಿದ್ದರೂ ಅದನ್ನೇ ಜಾರಿಗೆ ತರುತ್ತಿದೆ. ಮಕ್ಕಳ ಬದುಕಿನಲ್ಲಿ ಇವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಹರಿಹಾಯ್ದರು.

ನೀವು ಏನೇ ಹೋರಾಟ ಮಾಡಿಕೊಂಡರೂ ನಾವು ಈ ಪಠ್ಯವನ್ನೇ ಜಾರಿಗೆ ತರುತ್ತೇವೆ ಎಂದು ಸರ್ಕಾರ ಹೊರಟಿದೆ. ಈ ಕೆಟ್ಟ ಪಠ್ಯವನ್ನು ನೋಡಿ ಬ್ರಾಹ್ಮಣ ಸಮುದಾಯ ನಾಚಿಕೆಪಟ್ಟಿಕೊಳ್ಳಬೇಕು. ತಪ್ಪು ತಿದ್ದುಕೊಳ್ಳುವ ಪ್ರಜ್ಞೆ ಆ ಸಮುದಾಯಕ್ಕೆ ಬರಬೇಕು. ಈ ದೇಶದಲ್ಲಿ ಸ್ವಾತಂತ್ರ್ಯದ ಫಲವನ್ನು ಬ್ರಾಹ್ಮಣ ಎಂಬ ವಿಷದ ಹಲ್ಲು ಕಚ್ಚಿದೆ. ನಾವು ಈ ಸರ್ಕಾರವನ್ನು ಕಿತ್ತು ಬಿಸಾಡಬೇಕು. ದಂಗೆ ಏಳಬೇಕು ಎಂದು ಕರೆ ನೀಡಿದರು.

ಚಿಂತಕ ಎಲ್‌.ಎನ್.ಮುಕುಂದ್‌ರಾಜ್‌ ಮಾತನಾಡಿ, “ದೇಶ ಕಂಡ ಮಹಾನೀಯರನ್ನು ಅವಮಾನಿದ ವ್ಯಕ್ತಿ ರೋಹಿತ್ ಚಕ್ರತೀರ್ಥ. ಅಂಬೇಡ್ಕರ್‌, ಗಾಂಧಿ, ಕುವೆಂಪು ಅವರಿಗೆ ಅಗೌರವ ತೋರಿದವನ ನೇತೃತ್ವದಲ್ಲಿ ಪಠ್ಯ ರಚಿಸಲಾಗಿದೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಪಠ್ಯದಲ್ಲಿ ಹಿಂದೂ ಹತ್ಯಾಕಾಂಡಗಳು ಸೇರಬೇಕು ವರದಿಗೆ ಇತಿಹಾಸ ತಜ್ಞರ ವಿರೋಧ

“ವಿದ್ವಾಂಸರು ರೂಪಿಸಿದ ಪಠ್ಯಪುಸ್ತಕಗಳನ್ನು ಮಕ್ಕಳು ಓದಬೇಕಿದೆ. ಮಹಾನೀಯರನ್ನು ಹೀಯಾಳಿಸುವ ರೋಹಿತ್‌ ಚಕ್ರತೀರ್ಥನನ್ನು ಬೆಂಬಲಿಸುವ ಜನಪ್ರತಿನಿಧಿಯನ್ನು ತಿಪಟೂರಿನ ಜನ ಸೋಲಿಸಬೇಕಿದೆ” ಎಂದು ಆಶಿಸಿದರು.

ಜಾಗೃತ ತಿಪಟೂರು ಅಧ್ಯಕ್ಷರಾದ ಸಿ.ಬಿ.ಶಶಿಧರ್‌ (ಟೂಡಾ) ಮಾತನಾಡಿ, “ತಿಪಟೂರಿನ ಜನರು ಬೆಂಬಲಿಸಿದ್ದರಿಂದ ಬೃಹತ್ ಬೆಂಬಲ ಹೋರಾಟಕ್ಕೆ ಸಿಕ್ಕಿದೆ. ಜನರು ಪಠ್ಯವನ್ನು ವಾಪಸ್‌ ಪಡೆಯುವಂತೆ ನಿರಂತರ ಒತ್ತಾಯಿಸಿದರೂ ಇವರು ಕಿವುಡರಾಗಿದ್ದಾರೆ ಏಕೆ? ಇವರು ಕಿವಿ ಇದ್ದರೂ ಕಿವುಡರು, ಕಣ್ಣಿದ್ದರೂ ಕುರುಡರು. ನಿದ್ದೆ ಮಾಡುತ್ತಿರುವ ರೀತಿ ವರ್ತಿಸುತ್ತಿದ್ದಾರೆ. ಹೋರಾಟದ ಮೂಲಕವೇ ತಿವಿದು ಅವರನ್ನು ಎಚ್ಚರಿಸಬೇಕಿದೆ” ಎಂದರು.

“ಇಷ್ಟೆಲ್ಲ ಹೋರಾಟ ಮಾಡುತ್ತಿದ್ದರೂ ಸರ್ಕಾರ ಪ್ರತಿಕ್ರಿಯೆ ನೀಡುತ್ತಿಲ್ಲ. ಕೆಲವೊಂದನ್ನು ತಿದ್ದುತ್ತೇವೆ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಈ ಪಠ್ಯಪುಸ್ತಕಗಳನ್ನು ವಾಪಸ್‌ ತೆಗೆದುಕೊಂಡು ಹಳೆಯ ಪಠ್ಯ ಪುಸ್ತಕವನ್ನು ಮತ್ತೆ ಕೊಡಲು ಏಕೆ ಸಾಧ್ಯವಾಗುತ್ತಿಲ್ಲ? ಜನ ಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದ್ದೇವೆ ಎಂದು ಗೊತ್ತಿದ್ದರೂ ಇವರು ಸುಮ್ಮನಾಗಿರುವುದು ಏತಕ್ಕೆ?” ಎಂದು ಪ್ರಶ್ನಿಸಿದರು.

“ಈ ಜನಪ್ರತಿನಿಧಿಗಳು ನಾಗಪುರದ ಹಿಡಿತದಲ್ಲಿದ್ದಾರೆ. ತೊಗಲು ಗೊಂಬೆಯಾಗಿದ್ದಾರೆ. ಚಕ್ರತೀರ್ಥನ ಅರ್ಹತೆ ಏನು? ಹೈಸ್ಕೂಲ್ ಟೀಚರ್‌ ಆಗಲು ಕನಿಷ್ಠ ಡಿಗ್ರಿ ಮಾಡಿರಬೇಕು, ತರಬೇತಿ ಪಡೆದಿರಬೇಕು. ಮಕ್ಕಳ ಪಠ್ಯಪುಸ್ತಕ ರೂಪಿಸುವವನ ಅರ್ಹತೆಯಾದರೂ ಏನು?” ಎಂದು ಪ್ರಶ್ನಿಸಿದರು.

ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ, “ಬಸವಣ್ಣ ಎಂದರೆ ಬ್ರಾಹ್ಮಣರಿಗೆ ಯಾಕೆ ಭಯ? ಬಸವ ಅನುಯಾಯಿಗಳನ್ನು ಕಂಡರೆ ಏಕೆ ಭಯ? ಅಂಬೇಡ್ಕರ್‌ ಹೆಸರು ಕಂಡರೆ ಇವರು ಓಡುವುದೇಕೆ? ಸಂವಿಧಾನ ಶಿಲ್ಪಿ ಎಂಬ ಸಾಲು ತೆಗೆದಿರುವುದು ಮನುಷ್ಯನ ತಲೆಯನ್ನೇ ಕತ್ತರಿಸಿದ್ದಕ್ಕೆ ಸಮ” ಎಂದು ಬೇಸರ ವ್ಯಕ್ತಪಡಿಸಿದರು.

“ಮನುವಾದಿಗಳು ಮರೆಮಾಚುತ್ತಿರುವ ವಿಷಯಗಳನ್ನು ವಿದ್ಯಾವಂತರು ತಿಳಿಸಿಕೊಡಬೇಕು. ಧರ್ಮದ ವಿಚಾರ ಶಾಲೆಗೆ ಬರಬಾರದು ಎಂದು ಹಿಜಾಬ್‌ ವಿವಾದದ ಸಂದರ್ಭದಲ್ಲಿ ಹೇಳಿದರು. ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು ಎಂದು ನಾವೂ ಒತ್ತಾಯಿಸಿದೆವು. ಆದರೆ ಪಠ್ಯಪುಸ್ತಕದಲ್ಲೇ ಧರ್ಮವನ್ನು ತುರುಕಲು ಹೊರಟಿದ್ದೀರಿ. ಇದು ಯಾವ ನ್ಯಾಯ?” ಎಂದು ಕೇಳಿದರು.

ನಿಮ್ಮ ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿ ನಾರಾಯಗುರುಗಳು ಶೂದ್ರರಿಗೆ ದೇವಾಲಯಗಳನ್ನು ಕಟ್ಟಿದರು. ಅಂಥವರ ವಿಚಾರಧಾರೆಗಳು ನಿಮಗೆ ಬೇಡ. ಮೌಢ್ಯದ ವಿಚಾರಗಳು ನಿಮಗೆ ಬೇಕಿದೆ. ಮೌಢ್ಯ ವಿರೋಧಿ ಕಾಯ್ದೆಯನ್ನು ವಿರೋಧಿಸಿದ ಪಕ್ಷ ನಿಮ್ಮದು ಎಂದು ಟೀಕಿಸಿದರು.

ಇದನ್ನೂ ಓದಿರಿ: ಎನ್‌ಇಪಿ: ಫೈಥಾಗರಸ್‌ ಥಿಯರಿ ಸುಳ್ಳು, ಸಂಸ್ಕೃತ, ಮನುಸ್ಮೃತಿ ಕಲಿಕೆಗೆ ಪ್ರಸ್ತಾಪ: ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ

ಸಚಿವ ಬಿ.ಸಿ.ನಾಗೇಶ್ ಅವರು ವಿವಾದದ ಆರಂಭದಲ್ಲೇ ಕ್ಷಮೆ ಕೇಳಿದ್ದರೆ ಅವರ ಗೌರವ ಉಳಿಯುತ್ತಿತ್ತು. ಈಗ ನಿಮ್ಮನ್ನು ಜನ ಮನೆಗೆ ಕಳುಹಿಸಲಿದ್ದಾರೆ. ನಿಮ್ಮ ಮನುವಾದವನ್ನು, ಧರ್ಮದ ಮೌಢ್ಯತೆಯನ್ನು ನಮ್ಮ ಮೇಲೆ ಹೇರಲು ಹೊರಟರೆ ನಾವು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ಕಾಶ್ಮೀರಿ ಫೈಲ್ಸ್‌ ಸಿನಿಮಾ ನೋಡಿ ಮುಖ್ಯಮಂತ್ರಿಯವರ ಹೊಟ್ಟೆ ಉರಿಯುತ್ತದೆ. ಆದರೆ 12ನೇ ಶತಮಾನದಲ್ಲಿ ನಮ್ಮ ಹತ್ಯಾಕಾಂಡ ನಡೆಯಿತು. ನಾವು ಪಳೆಯುಳಿಕೆಯಾಗಿ ಉಳಿದಿದ್ದೀವಿ. ಆದರೆ ಇದ್ದಷ್ಟು ಮಂದಿ ವಿಚಾರಗಳನ್ನು ಪಸರಿಸುತ್ತಿದ್ದೇವೆ. ನಾಯಿಯ ಸಿನಿಮಾ ನೋಡಿ ಭಾವುಕರಾಗುತ್ತೀರಿ. ಖಂಡಿತ ನಾಯಿಗೂ ಮರುಗಬೇಕು. ಆದರೆ ವಿದ್ಯಾರ್ಥಿಗಳು, ಹಿರಿಯರು, ಸಾಹಿತಿಗಳು, ಪ್ರಜ್ಞಾವಂತರು ಮಾತನಾಡುತ್ತಿದ್ದಾರೆ. ಅವರ ವೇದನೆ ನಿಮಗೆ ಅರ್ಥವಾಗುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು.

ಅರೆಶಂಕರ ಮಠದ ಸ್ವಾಮೀಜಿ ಮಾತನಾಡಿ, “ಬಿ.ಸಿ.ನಾಗೇಶ್ ಅವರನ್ನು ಸಜ್ಜನರು ಎಂದುಕೊಂಡಿದ್ದೆವು. ಪಠ್ಯ ಪುಸ್ತಕದ ವಿಚಾರದಲ್ಲಿ ತಪ್ಪು ಮಾಡಿದ್ದಾರೆ. ಇದು ಬರೀ ತಿಪಟೂರಿನ ವಿಚಾರವಲ್ಲ, ಇಡೀ ದೇಶದ ವಿಚಾರ. ಅಕ್ಷರಗಳಿಗೆ ಕೇಸರಿ ಬಣ್ಣ ತುಂಬುವುದನ್ನು ನಿಲ್ಲಿಸಬೇಕು. ಕೇಸರಿ ತ್ಯಾಗದ ಸಂಕೇತ. ಆದರೆ ನೀವು ತ್ಯಾಜ್ಯವಾಗಿಸಿದ್ದೀರಿ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವಮಾನವ ಕುವೆಂಪು ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ.ಬಿ.ಪಾಟೀಲ್‌, “ತಿಪಟೂರು ಜನರ ಕೈಲಿ ಬಿ.ಸಿ.ನಾಗೇಶರ ಜೀವವಿದೆ. ಅವರಿಗೆ ಪಾಠ ಕಲಿಸುವ ಮೂಲಕ ಇಡೀ ಕರ್ನಾಟಕಕ್ಕೆ ತಿಪಟೂರಿನ ಜನ ಆದರ್ಶವಾಗಬೇಕು. ದೇಶ ವಿರೋಧಿ ನಾಗೇಶರಿಗೆ ಒಂದು ಗತಿ ಕಾಣಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಮಣಿಸಬೇಕು” ಎಂದು ಮನವಿ ಮಾಡಿದರು.

ತುಮಕೂರಿನಿಂದ ಜಾಥಾ ಆರಂಭ

ತಿಪಟೂರು ಚಲೋ ಅಂಗವಾಗಿ ತುಮಕೂರಿನಲ್ಲಿ ಜಾಥಾವನ್ನು ಉದ್ಘಾಟಿಸಲಾಯಿತು. ಕರ್ನಾಟಕ ಸರ್ಕಾರ ಮಾಜಿ ಅಡ್ವೋಕೇಟ್ ಜನರಲ್‌ ಪ್ರೊ.ರವಿವರ್ಮಾಕುಮಾರ್‌ ಜಾಥಾಕ್ಕೆ ಚಾಲನೆ ನೀಡಿದರು.

“ಪಠ್ಯಪುಸ್ತಕ ಪರಿಷ್ಕರಣೆಯಿಂದ ಒಂದು ಪೀಳಿಗೆಗೆ ನಾಶವಾಗುತ್ತಿದೆ. ಮಕ್ಕಳಿಗೆ ಅವಿದ್ಯೆ, ಅಶಾಂತಿ, ದ್ವೇಷ ಉಣಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಪ್ರೊ.ರವಿವರ್ಮ ಕುಮಾರ್‌ ಹೇಳಿದರು.

ಪಠ್ಯಪುಸ್ತಕದ ಹೆಸರಲ್ಲಿ ರಾಜ್ಯದ ಉದ್ದಗಲಕ್ಕೂ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಹೋರಾಟ ಅನಿವಾರ್ಯವಾಗಿದೆ. ಒಬ್ಬ ಶಿಕ್ಷಕ ಕೆಟ್ಟವನಾದರೆ ಒಂದು ತರಗತಿಗೆ ಸಮಸ್ಯೆಯಾಗುತ್ತದೆ. ವೈದ್ಯ ತಪ್ಪು ಮಾಡಿದರೆ ರೋಗಿಗೆ ತೊಂದರೆಯಾಗಬಹುದು. ಆದರೆ, ಒಂದು ಪಠ್ಯಪುಸ್ತಕದಲ್ಲಿನ ಅನಗತ್ಯ ವಿಚಾರಗಳಿಂದ ಇಡೀ ಒಂದು ಪೀಳಿಗೆ ತಪ್ಪು ಹಾದಿಯತ್ತ ಸಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯಪುಸ್ತಕ ಸರ್ಕಾರದ ಶಿಶುವಲ್ಲ, ರೋಹಿತ್ ಚಕ್ರತೀರ್ಥರ ಶಿಶು. ಅದನ್ನು ಸರ್ಕಾರ ತನ್ನ ಶಿಶು ಎಂದು ಜನರ ಮೇಲೆ ಹೇರಲು ಹೊರಟಿದೆ. ಅನೇಕ ಚಿಂತಕರು, ಸಮಾಜದಲ್ಲಿ ಸಹಭಾಳ್ವೆ ಸಾರುವ ವ್ಯಕ್ತಿಗಳ ಪಠ್ಯ ತೆಗೆದು ಹಾಕಲಾಗಿದೆ. ರೋಹಿತ್‌ ಚಕ್ರತೀರ್ಥ ಸಮಿತಿಯ ಸಮಸ್ಯರೆಲ್ಲ ಆರ್‌‌ಎಸ್‌ಎಸ್ ಸಂಘಟನೆಯವರು ಮತ್ತು ಬ್ರಾಹ್ಮಣರು. ಅವರು ಬರೆದ ವಿಷಯಗಳನ್ನೇ ಪಠ್ಯದಲ್ಲಿ ಇಡಲಾಗಿದೆ ಎಂದು ದೂರಿದರು.

ಇದನ್ನೂ ಓದಿರಿ: NEP| ಮೊಟ್ಟೆ ನೀಡಿದರೆ ಮಕ್ಕಳಲ್ಲಿ ತಾರತಮ್ಯ ವೃದ್ಧಿ: ಎನ್‌‌ಸಿಇಆರ್‌ಟಿಗೆ ರಾಜ್ಯ ಸರ್ಕಾರದ ಸಮಿತಿ ಪ್ರಸ್ತಾವನೆ

ಸರ್ಕಾರ ಸುಳ್ಳಿನ ಸರಮಾಲೆಯ ಮೇಲೆ ನಡೆಯತ್ತಿದೆ. ಗೃಹಮಂತ್ರಿ, ಮುಖ್ಯಮಂತ್ರಿ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ಇಂದು ಪ್ರಜಾಪ್ರಭುತ್ವದ ಅರ್ಥ ಬದಲಾಗಿದೆ. ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ ಪಠ್ಯಪುಸ್ತಕ ಮಾಡಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಕೆ.ದೊರೈರಾಜ್‌, ‘ಸರ್ಕಾರೇತರ ಸಂಸ್ಥೆ ಮಾಡಿರುವ ನೀತಿಯನ್ನು ಸಾರ್ವಜನಿಕರ ಮೇಲೆ ಹೇರುವ ಕೆಲಸ ಮಾಡುತ್ತಿದ್ದಾರೆ. ಇದನ್ನೆಲ್ಲಾ ಬದಿಗಿರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಹಾಗೆ ಮಾಡಬೇಕು’ ಎಂದು ಒತ್ತಾಯಿಸಿದರು.

ಲೇಖಕಿಯರಾದ ಬಾ.ಹ.ರಮಾಕುಮಾರಿ, ಬಿ.ಸಿ.ಶೈಲಾ ನಾಗರಾಜ್‌, ಸ್ಲಂ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ, ಸಿಐಟಿಯು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಪ್ರಧಾನ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣಿ ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...