Homeಕವನ'ಬಾ ಇಲ್ಲಿ ‌ಸಂಭವಿಸು'ವ ಹೊಸ‌ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ

‘ಬಾ ಇಲ್ಲಿ ‌ಸಂಭವಿಸು’ವ ಹೊಸ‌ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ

- Advertisement -
- Advertisement -

ಒಂದು ಪದ್ಯ

ಹೊರಗೆ ಮಳೆಹನಿಗಳ ಶಬ್ಧ
ರಂಗಮಂದಿರ
ನಿಶ್ಯಬ್ದ
ಏಕತಾರಿಯ ಮೇಲೆ ಧೂಳು
ಹಾರ್ಮೋನಿಯಂನ
ಮೇಲೆ
ಹಾಕಿದ‌ ಕವರ್ ತೆಗೆದಿಲ್ಲ
ಕರೀ ಮೂರು, ಬಿಳಿ ನಾಲ್ಕರ ಮನೆಗಳ ಮೇಲೆ ಬೆರಳಿಲ್ಲ
ಡೈರೆಕ್ಟರ್‌ನ ಟೇಬಲ್‌ ಮೇಲೆ ಜಿರಳೆಗಳು.

ಎಲ್ಲಿ ಹೋದಿರಿ
ಮೋಹಕ
ನಟ-ನಟಿಯರೇ?
ಬಣ್ಣ ಹಚ್ಚುತ್ತಿದ್ದ
ಕೈಗಳೇ
ಖಾಲಿಬಿದ್ದ
ಬಣ್ಣ ಬಿಳುಚಿದ
ಖಾಲಿ
ಕಂಕಾಲ ಮುಖಗಳೇ.

ಎಂದು ಬಂದೀರಿ
ಪಾತ್ರವಾಗಿ
ಏನ ತಂದೀರಿ ಹೃದಯಕ್ಕೆ ಆಪ್ತವಾಗಿ
ಬನ್ನಿ
ಈಗಾಗಲೇ ತಡವಾಗಿದೆ
ಮೂರನೇ ಬೆಲ್
ಹೊಡೆದಾಗಿದೆ.

ಲಿಪ್ ಸ್ಟಿಕ್‌ಗೆ ತುಟಿಗಳಿಲ್ಲ
ವಾರ್ಡ್ರೋಬ್‌ನಲ್ಲಿನ
ಉಡುಪು
ಪ್ಯಾನ್ ಕೇಕ್, ಮಾಸ್ಕರಾ
ನಿಮ್ಮ ದೇಹ
ಮುಖ
ಕಣ್ಣುಗಳನ್ನೇ ಕಾಯುತ್ತಿವೆ
ಎಂದು
ಬಂದೀರಿ‌ ಎಂದು
ಮತ್ತೆ
ಹಳೆಯ ಲಯಕ್ಕೆ
ಹೇಗೆ
ಮರಳುವಿರಿ‌ ಎಂದು.

ಲೈಟಿಂಗ್ ರೂಂನಲ್ಲಿ
ಯಾರಿಲ್ಲ
ರಂಗಕ್ಕೆ ಬೆಳಕಿಲ್ಲ
ಡಿಮ್ಮರ್‌ಗಳು ರೆಸ್ಟಿನಲ್ಲಿವೆ.
ವಿದ್ಯುತ್ ಬಿಲ್
ಜಾಸ್ತಿಯಾಗಿದೆ.

ಹೊರಗೆ
ಬೀದಿಯಲ್ಲಿ ಲಕ್ಷಾಂತರ ಹೆಜ್ಜೆ ಸಪ್ಪಳ
ನಿಟ್ಟುಸಿರು
ರೈಲುಗಾಡಿಯ ಸಿಳ್ಳು
ಸಾವಿನ ವಾಸನೆ
ಬೀದಿಯಲ್ಲಿ ಚಲ್ಲಿದ ಹಾಲು
ಟೊಮ್ಯಾಟೊ
ಹಾಸಿಗೆ, ಪೆಟ್ಟಿಗೆ ಟ್ರಂಕ್ ಹೊತ್ತು
ಮಂದಿ
ಪುಟ್ಟ ಮಕ್ಕಳು
ಎಲ್ಲೆಲ್ಲೂ ಶಂಖ
ಜಾಗಟೆಯ
ತಟ್ಟೆ ಬಡಿತದ ಕೇಕೆ

ಛಕ್ಕನೆ ಬೆಳಕಾರಿ
ಮತ್ತೊಂದು
ದೃಶ್ಯ
ಕಾಣಿಸುತ್ತಿದ್ದ ನೀವೆಲ್ಲ ಎಲ್ಲಿ?
ಯಾವ
ನಾಟಕಗಳಲ್ಲಿ ‌ಅಡಗಿದ್ದೀರಿ
ವೇಷ
ಮರೆಸಿದ್ದೀರಿ
ಎಲ್ಲಿ‌ ನಡೆಸಿದ್ದೀರಿ ತಾಲೀಮು
ಬೀದಿಯಲ್ಲೇ
ಲಾಕ್ ಡೌನಾದ
ಮನೆಗಳಲ್ಲೇ
‘ಬಾ ಇಲ್ಲಿ‌ಸಂಭವಿಸು’ವ
ಹೊಸ‌
ಅವತಾರದಲ್ಲೇ.

ನಟರಾಜ್ ಹೊನ್ನವಳ್ಳಿ
೨೦-೦೫-೨೦೨೦, ಬುಧವಾರ


ಇದನ್ನೂ ಓದಿ: ತೀರ ಸೇರದ ಬದುಕು: ಮಿಸ್ರಿಯಾ.ಐ.ಪಜೀರ್‌ರವರ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ರಂಗ ಮಂದಿರದ ಈಗಿನ ಒಳ ನೋಟವನ್ನು
    ಮರೆ ಮಾಚಿದ ತೆರೆಮರೆಯ ಕಲಾವಿದನ
    ಅಂತರಂಗದ ಬಣ್ಣಮಾಸಿದ ಬದುಕಿನ ಭಾವನೆಗಳನ್ನು
    ರಂಗಮಂದಿರ ನಡುವೆ ನಿಂತ ಕಲಾಜೀವಿ
    ಲಯ ಬದ್ದ ವಾದ್ಯಗಳ ಸಂಗೀತವಿಲ್ಲದೆ ಅನಾಥವಾಗಿ
    ನುಡಿಸುವ ನಾಡಿಯ ನಾವಿಕನಿಲ್ಲದೆ
    ದೂಳು ತುಂಬಿ ಪಾಳುಬಿದ್ದ ಮನೆಯ ರೀತಿ ಗೋಚರಿಸುತ್ತಿದೆ. ಪಾತ್ರಗಳಿಗೆ ಜೀವ ತುಂಬಿ ಬಣ್ಣದ ಬದುಕ ನಂಬಿ, ಕಲಾಭಿಮಾನಿಗಳ ಕಣ್ಣುಗಳಿಗೆ ರಂಗು ತುಂಬುತ್ತಿದ್ದ ಪಾತ್ರಧಾರಿಗಳೇ ಎಲ್ಲಿ ಕಳೆದು ಹೊದಿರಿ ಬಣ್ಣವಿಲ್ಲದ ಮುಖವಾಡ ಧರಿಸಿ….
    ಕೋವಿಡ್19 ಸ್ವಾಗತಿಸಿದ ಭ್ರಷ್ಟ ಸರ್ಕಾರಗಳೇ ಚಪ್ಪಾಳೆ ಜಾಗಟೆ ಭಾರಿಸುತ್ತ ಆನಂದದಿ ರಜೆ ಉಂಡ ಅಜ್ಞಾನಿಗಳೇ ನಿಮಗೆ ಹಸಿವಿನಿಂದ ನೊಂದು ಬೆಂದು ಬೆಂಡಾಗಿ ಜೀವ ಬಿಟ್ಟ ಸಾಮಾನ್ಯ ಪ್ರಜೆಯ ಕೂಗು ಕೇಳದೇ?! ಇಂತಹ ಪರಿಸ್ಥಿತಿಯ ಅಬ್ಬರಕ್ಕೆ ಕೊಚ್ಚಿಹೋಗದೆ ಮಂಕು ಕವಿದ ಮನೆಯ ಚಿಲಕ ಹೊಡೆದು ಹೊರ ಬನ್ನಿ ಹೊಸ ಅವತಾರದಲ್ಲಿ ರಂಗಿನ ರಂಗ ಮಂದಿರಕ್ಕೆ ನಟ ನಟಿಯರೇ ಎಂದು ಕಲಾವಿದನ ಬದುಕನ್ನು ಪದ್ಯದ ಪದಗಳಲ್ಲಿ ತೋರಿದ ಕನ್ನಡನಾಡಿನ ಹೆಮ್ಮೆಯ ರಂಗಭೂಮಿ ನಿರ್ದೇಶಕರು,ಸಾಹಿತಿಗಳು,ಪ್ರಗತಿಪರ ಚಿಂತಕರು, ಆದ ಗುರುಗಳು ಆದ ಶ್ರೀಯುತ ನಟರಾಜು ಹೊನ್ನವಳ್ಳಿಯವರಿಗೆ ಅನಂತಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...