Homeಕವನ'ಬಾ ಇಲ್ಲಿ ‌ಸಂಭವಿಸು'ವ ಹೊಸ‌ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ

‘ಬಾ ಇಲ್ಲಿ ‌ಸಂಭವಿಸು’ವ ಹೊಸ‌ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ

- Advertisement -
- Advertisement -

ಒಂದು ಪದ್ಯ

ಹೊರಗೆ ಮಳೆಹನಿಗಳ ಶಬ್ಧ
ರಂಗಮಂದಿರ
ನಿಶ್ಯಬ್ದ
ಏಕತಾರಿಯ ಮೇಲೆ ಧೂಳು
ಹಾರ್ಮೋನಿಯಂನ
ಮೇಲೆ
ಹಾಕಿದ‌ ಕವರ್ ತೆಗೆದಿಲ್ಲ
ಕರೀ ಮೂರು, ಬಿಳಿ ನಾಲ್ಕರ ಮನೆಗಳ ಮೇಲೆ ಬೆರಳಿಲ್ಲ
ಡೈರೆಕ್ಟರ್‌ನ ಟೇಬಲ್‌ ಮೇಲೆ ಜಿರಳೆಗಳು.

ಎಲ್ಲಿ ಹೋದಿರಿ
ಮೋಹಕ
ನಟ-ನಟಿಯರೇ?
ಬಣ್ಣ ಹಚ್ಚುತ್ತಿದ್ದ
ಕೈಗಳೇ
ಖಾಲಿಬಿದ್ದ
ಬಣ್ಣ ಬಿಳುಚಿದ
ಖಾಲಿ
ಕಂಕಾಲ ಮುಖಗಳೇ.

ಎಂದು ಬಂದೀರಿ
ಪಾತ್ರವಾಗಿ
ಏನ ತಂದೀರಿ ಹೃದಯಕ್ಕೆ ಆಪ್ತವಾಗಿ
ಬನ್ನಿ
ಈಗಾಗಲೇ ತಡವಾಗಿದೆ
ಮೂರನೇ ಬೆಲ್
ಹೊಡೆದಾಗಿದೆ.

ಲಿಪ್ ಸ್ಟಿಕ್‌ಗೆ ತುಟಿಗಳಿಲ್ಲ
ವಾರ್ಡ್ರೋಬ್‌ನಲ್ಲಿನ
ಉಡುಪು
ಪ್ಯಾನ್ ಕೇಕ್, ಮಾಸ್ಕರಾ
ನಿಮ್ಮ ದೇಹ
ಮುಖ
ಕಣ್ಣುಗಳನ್ನೇ ಕಾಯುತ್ತಿವೆ
ಎಂದು
ಬಂದೀರಿ‌ ಎಂದು
ಮತ್ತೆ
ಹಳೆಯ ಲಯಕ್ಕೆ
ಹೇಗೆ
ಮರಳುವಿರಿ‌ ಎಂದು.

ಲೈಟಿಂಗ್ ರೂಂನಲ್ಲಿ
ಯಾರಿಲ್ಲ
ರಂಗಕ್ಕೆ ಬೆಳಕಿಲ್ಲ
ಡಿಮ್ಮರ್‌ಗಳು ರೆಸ್ಟಿನಲ್ಲಿವೆ.
ವಿದ್ಯುತ್ ಬಿಲ್
ಜಾಸ್ತಿಯಾಗಿದೆ.

ಹೊರಗೆ
ಬೀದಿಯಲ್ಲಿ ಲಕ್ಷಾಂತರ ಹೆಜ್ಜೆ ಸಪ್ಪಳ
ನಿಟ್ಟುಸಿರು
ರೈಲುಗಾಡಿಯ ಸಿಳ್ಳು
ಸಾವಿನ ವಾಸನೆ
ಬೀದಿಯಲ್ಲಿ ಚಲ್ಲಿದ ಹಾಲು
ಟೊಮ್ಯಾಟೊ
ಹಾಸಿಗೆ, ಪೆಟ್ಟಿಗೆ ಟ್ರಂಕ್ ಹೊತ್ತು
ಮಂದಿ
ಪುಟ್ಟ ಮಕ್ಕಳು
ಎಲ್ಲೆಲ್ಲೂ ಶಂಖ
ಜಾಗಟೆಯ
ತಟ್ಟೆ ಬಡಿತದ ಕೇಕೆ

ಛಕ್ಕನೆ ಬೆಳಕಾರಿ
ಮತ್ತೊಂದು
ದೃಶ್ಯ
ಕಾಣಿಸುತ್ತಿದ್ದ ನೀವೆಲ್ಲ ಎಲ್ಲಿ?
ಯಾವ
ನಾಟಕಗಳಲ್ಲಿ ‌ಅಡಗಿದ್ದೀರಿ
ವೇಷ
ಮರೆಸಿದ್ದೀರಿ
ಎಲ್ಲಿ‌ ನಡೆಸಿದ್ದೀರಿ ತಾಲೀಮು
ಬೀದಿಯಲ್ಲೇ
ಲಾಕ್ ಡೌನಾದ
ಮನೆಗಳಲ್ಲೇ
‘ಬಾ ಇಲ್ಲಿ‌ಸಂಭವಿಸು’ವ
ಹೊಸ‌
ಅವತಾರದಲ್ಲೇ.

ನಟರಾಜ್ ಹೊನ್ನವಳ್ಳಿ
೨೦-೦೫-೨೦೨೦, ಬುಧವಾರ


ಇದನ್ನೂ ಓದಿ: ತೀರ ಸೇರದ ಬದುಕು: ಮಿಸ್ರಿಯಾ.ಐ.ಪಜೀರ್‌ರವರ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ರಂಗ ಮಂದಿರದ ಈಗಿನ ಒಳ ನೋಟವನ್ನು
    ಮರೆ ಮಾಚಿದ ತೆರೆಮರೆಯ ಕಲಾವಿದನ
    ಅಂತರಂಗದ ಬಣ್ಣಮಾಸಿದ ಬದುಕಿನ ಭಾವನೆಗಳನ್ನು
    ರಂಗಮಂದಿರ ನಡುವೆ ನಿಂತ ಕಲಾಜೀವಿ
    ಲಯ ಬದ್ದ ವಾದ್ಯಗಳ ಸಂಗೀತವಿಲ್ಲದೆ ಅನಾಥವಾಗಿ
    ನುಡಿಸುವ ನಾಡಿಯ ನಾವಿಕನಿಲ್ಲದೆ
    ದೂಳು ತುಂಬಿ ಪಾಳುಬಿದ್ದ ಮನೆಯ ರೀತಿ ಗೋಚರಿಸುತ್ತಿದೆ. ಪಾತ್ರಗಳಿಗೆ ಜೀವ ತುಂಬಿ ಬಣ್ಣದ ಬದುಕ ನಂಬಿ, ಕಲಾಭಿಮಾನಿಗಳ ಕಣ್ಣುಗಳಿಗೆ ರಂಗು ತುಂಬುತ್ತಿದ್ದ ಪಾತ್ರಧಾರಿಗಳೇ ಎಲ್ಲಿ ಕಳೆದು ಹೊದಿರಿ ಬಣ್ಣವಿಲ್ಲದ ಮುಖವಾಡ ಧರಿಸಿ….
    ಕೋವಿಡ್19 ಸ್ವಾಗತಿಸಿದ ಭ್ರಷ್ಟ ಸರ್ಕಾರಗಳೇ ಚಪ್ಪಾಳೆ ಜಾಗಟೆ ಭಾರಿಸುತ್ತ ಆನಂದದಿ ರಜೆ ಉಂಡ ಅಜ್ಞಾನಿಗಳೇ ನಿಮಗೆ ಹಸಿವಿನಿಂದ ನೊಂದು ಬೆಂದು ಬೆಂಡಾಗಿ ಜೀವ ಬಿಟ್ಟ ಸಾಮಾನ್ಯ ಪ್ರಜೆಯ ಕೂಗು ಕೇಳದೇ?! ಇಂತಹ ಪರಿಸ್ಥಿತಿಯ ಅಬ್ಬರಕ್ಕೆ ಕೊಚ್ಚಿಹೋಗದೆ ಮಂಕು ಕವಿದ ಮನೆಯ ಚಿಲಕ ಹೊಡೆದು ಹೊರ ಬನ್ನಿ ಹೊಸ ಅವತಾರದಲ್ಲಿ ರಂಗಿನ ರಂಗ ಮಂದಿರಕ್ಕೆ ನಟ ನಟಿಯರೇ ಎಂದು ಕಲಾವಿದನ ಬದುಕನ್ನು ಪದ್ಯದ ಪದಗಳಲ್ಲಿ ತೋರಿದ ಕನ್ನಡನಾಡಿನ ಹೆಮ್ಮೆಯ ರಂಗಭೂಮಿ ನಿರ್ದೇಶಕರು,ಸಾಹಿತಿಗಳು,ಪ್ರಗತಿಪರ ಚಿಂತಕರು, ಆದ ಗುರುಗಳು ಆದ ಶ್ರೀಯುತ ನಟರಾಜು ಹೊನ್ನವಳ್ಳಿಯವರಿಗೆ ಅನಂತಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...