Homeಮುಖಪುಟಭಕ್ತಕುಳಾವಿಗಳ ಬೆಂಬಲ ಬೆಲೆ: ರಾಜರಾಂ ತಲ್ಲೂರು ಬರಹ

ಭಕ್ತಕುಳಾವಿಗಳ ಬೆಂಬಲ ಬೆಲೆ: ರಾಜರಾಂ ತಲ್ಲೂರು ಬರಹ

ಅಂಬಾನಿಗಳು ಕ್ವಿಂಟಾಲಿಗೆ MSP ಮೇಲೆ ಅಂದಾಜು 100 ರೂಪಾಯಿ ಜಾಸ್ತಿ ಕೊಟ್ಟು ಭತ್ತ ಖರೀದಿಸಿದರು ಎಂದರೆ ಅದರಲ್ಲಿ ಸಂಭ್ರಮಿಸುವುದು ಏನಿದೆಯೋ, ನಾಳೆ ಇದೇ ಬೆಂಚ್ ಮಾರ್ಕ್ ಆಗತೊಡಗಿದರೆ, ಬಹುಬೇಗ ರೈತ ಕೃಷಿಯನ್ನು ಸೂಟುಬೂಟಿನವರಿಗೆ ಬಿಟ್ಟುಕೊಡಲೇಬೇಕಾದ ಸ್ಥಿತಿ ಬರುವುದರಲ್ಲಿ ಸಂಶಯ ಬೇಡ

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ದ ದೇಶದ ರಾಜಧಾನಿಯ ಗಡಿಗಳಲ್ಲಿ ರೈತರು ನಿರಂತರವಾಗಿ ಹೋರಾಡುತ್ತಿದ್ದಾರೆ. ಈ ನಡುವೆ ರಾಯಚೂರಿನಲ್ಲಿ ರಿಲಾಯನ್ಸ್ ಗ್ರೂಪ್ ಭತ್ತಕ್ಕೆ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಬೆಲೆ ನೀಡಿ ಕೊಂಡುಕೊಂಡಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು “ಬೆಂಬಲ ಬೆಲೆ”ಗಳ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದ ಬರಹ ನಾನುಗೌರಿ.ಕಾಮ್ ಓದುಗರಿಗಾಗಿ…

ಅಂಬಾನಿ ಬಳಗ ಕರ್ನಾಟಕದಲ್ಲಿ ಒಂದು ಜಿಲ್ಲೆಯಲ್ಲಿ (ರಾಯಚೂರಿನ ಸಿಂಧನೂರಿನಲ್ಲಿ) ಕನಿಷ್ಠ ಬೆಂಬಲ ಬೆಲೆ (MSP)ಗಿಂತ ಕಿಂಚಿತ್ ಹೆಚ್ಚು (ಕ್ವಿಂಟಾಲಿಗೆ ನೂರು ರೂ. ಹೆಚ್ಚು) ಕೊಟ್ಟು ಭತ್ತ ಖರೀದಿಸಿರುವುದು, ಹೊಸ ಕೃಷಿ ಕಾನೂನುಗಳು ರೈತರ ಪರವಾಗಿರುವುದರ ದ್ಯೋತಕ ಎಂದು ಭಜನೆ ಶುರುವಾಗಿದೆ. ಈ ಮೂರ್ಖತನವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: ಹಾಗಾದರೆ ರಿಲಾಯನ್ಸ್‌ನಿಂದ MSP ಗಿಂತಲೂ ಅಧಿಕ ಬೆಲೆಗೆ ಭತ್ತ ಕೊಳ್ಳುವಿಕೆ: ವಾಸ್ತವವೇನು?

ಮೊದಲಿಗೆ, ಕನಿಷ್ಠ ಬೆಂಬಲ ಬೆಲೆ (MSP) ನಿರ್ಧಾರ ಹೇಗಾಗುತ್ತದೆ ತಿಳಿದುಕೊಳ್ಳಿ. ಅದನ್ನು ನಿರ್ಧರಿಸುವುದು ಕಮಿಷನ್‌ ಫಾರ್‌ ಅಗ್ರಿಕಲ್ಚರ್‌ ಕೋಸ್ಟ್‌ ಆಂಡ್ ಪ್ರೈಸ್ (CACP).

ಸ್ವಾಮಿನಾಥನ್ ಸಮಿತಿ ವರದಿಯ ಪ್ರಕಾರ ಒಂದು ಕೃಷಿ ಉತ್ಪಾದನೆಯ ವೆಚ್ಚ ನಿರ್ಧಾರಕ್ಕೆ ಮೂರು ಅಂಶಗಳಿವೆ:

  • A2► ಸಾಲ, ಗೊಬ್ಬರ,ಇಂಧನ, ಯಂತ್ರ, ನೀರಾವರಿ, ಭೂಮಿಯ ಲೀಸ್ ವೆಚ್ಚ… ಇತ್ಯಾದಿ ಕೈಯಿಂದಾದ ವೆಚ್ಚಗಳು.
  • A2+FL► ಕೈಯಿಂದಾದ ವೆಚ್ಚಗಳ ಜೊತೆ ರೈತನ ಮನೆಯವರು, ಕುಟುಂಬಿಕರು ನೀಡಿದ ಉಚಿತ ಶ್ರಮದ ಮೌಲ್ಯ.
  • C2► ಇದು ವಾಸ್ತವ ಉತ್ಪಾದನಾ ವೆಚ್ಚದ ಸಮಗ್ರ ಲೆಕ್ಕಾಚಾರ ( ವೆಚ್ಚಗಳ ಜೊತೆ ಬಾಡಿಗೆ, ಬಡ್ಡಿ, ಯಂತ್ರಗಳ ಸವಕಳಿ ಎಲ್ಲ ಸೇರಿ)

ಸ್ವಾಮಿನಾಥನ್ ಕಮಿಟಿ ಹೇಳಿದ್ದು► MSP = C2+ 50%of C2

ಆದರೆ, 2018-19 ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚದ 1.5 ಪಾಲು MSP ಕೊಡುತ್ತೇವೆ ಎಂದು ಹೇಳಿತ್ತು. ಆದರೆ ಈ ಉತ್ಪಾದನಾ ವೆಚ್ಚದ ಲೆಕ್ಕಾಚಾರ ಹೇಗೆಂದು ಸ್ಪಷ್ಟಪಡಿಸಿರಲಿಲ್ಲ.

ಆದರೆ CACP ತಾನು ಅದನ್ನು ಲೆಕ್ಕ ಹಾಕಿದ್ದು ಹೀಗೆ ಎಂದು ಹೇಳಿಕೊಂಡಿದೆ ► 1.5 X A2+FL

ಅಂದರೆ, ಸರ್ಕಾರ C2 ಪರಿಗಣನೆಗೆ ತೆಗೆದುಕೊಂಡಿಲ್ಲ. ಅರ್ಥಾತ್, ಉತ್ಪಾದನೆಯ ಎಲ್ಲ ವೆಚ್ಚಗಳು ಇನ್ನೂ MSP ಯಲ್ಲಿ ಒಳಗೊಂಡಿಲ್ಲ.

ಇದನ್ನೂ ಓದಿ: ಎಂಎಸ್‌ಪಿ ಖಾತರಿ ಕೊಡಿಸಲಾಗದಿದ್ದರೆ ರಾಜಕೀಯ ನಿವೃತ್ತಿ: ಹರಿಯಾಣ ಸಿಎಂ ಖಟ್ಟರ್

ವಾಸ್ತವದಲ್ಲಿ ರೈತನ ಖರ್ಚುಗಳು ಎಷ್ಟಿರುತ್ತವೆ ಎಂದರೆ ಸರ್ಕಾರಿ ಲೆಕ್ಕಾಚಾರದ C2 ಗಿಂತ ಎರಡು ಮೂರು ಪಟ್ಟು ಹೆಚ್ಚಿರುತ್ತದೆ. ಹೆಚ್ಚಿನ ಅಧ್ಯಯನಗಳು ಇದನ್ನು ಬೊಟ್ಟು ಮಾಡುತ್ತವೆ. ಇದು ಹೇಗೆಂದರೆ ನಿಮ್ಮೂರಿನಲ್ಲಿ ಸರ್ಕಾರಿ ಕೃಷಿ ಮಜೂರಿ ದರ ಎಷ್ಟು- ಖಾಸಗಿ ಕೃಷಿ ಮಜೂರಿ ಎಷ್ಟು ಎಂದು ಲೆಕ್ಕ ಹಾಕಿಕೊಳ್ಳಿ. ಆ ವ್ಯತ್ಯಾಸ ಈ MSPಯಲ್ಲೂ ತೋರಬೇಕಲ್ಲವೆ?

ಹಾಗಿರುವಾಗ, ಅಂಬಾನಿಗಳು ಕ್ವಿಂಟಾಲಿಗೆ MSP ಮೇಲೆ ಅಂದಾಜು 100 ರೂಪಾಯಿ ಜಾಸ್ತಿ ಕೊಟ್ಟು ಭತ್ತ ಖರೀದಿಸಿದರು ಎಂದರೆ ಅದರಲ್ಲಿ ಸಂಭ್ರಮಿಸುವುದು ಏನಿದೆಯೋ ಕಾಣೆ. ನಾಳೆ ಇದೇ ಬೆಂಚ್ ಮಾರ್ಕ್ ಆಗತೊಡಗಿದರೆ, ಬಹುಬೇಗ ರೈತ ಕೃಷಿಯನ್ನು ಸೂಟುಬೂಟಿನವರಿಗೆ ಬಿಟ್ಟುಕೊಡಲೇಬೇಕಾದ ಸ್ಥಿತಿ ಬರುವುದರಲ್ಲಿ ಸಂಶಯ ಬೇಡ.

ಇದನ್ನೂ ಓದಿ: ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...