Homeಮುಖಪುಟಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!

ಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!

ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಇಂತಹ ಕಾನೂನುಗಳು ಅಪಥ್ಯವೆನಿಸಲು ಅವರ ಹಿತಾಸಕ್ತಿ, ಅವರು ಪ್ರತಿನಿಧಿಸುವ ಸಮುದಾಯ/ವರ್ಗಗಳ ಹಿತಾಸಕ್ತಿಯೇ ಕಾರಣವಾಗಿದ್ದವು.

- Advertisement -
- Advertisement -

ಪ್ರಧಾನಿಯಾಗಿ 4 ತಿಂಗಳ ನಂತರ ಸೆಪ್ಟೆಂಬರ್ 29, 2014ರಂದು ನರೇಂದ್ರ ಮೋದಿಯವರು ಅಮೆರಿಕದ ನ್ಯೂಯಾರ್ಕಿನ ಮ್ಯಾಡಿಸನ್ ಸ್ಕೇರ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದು ಅವರು ‘ಹಿಂದಿನ ಸರ್ಕಾರವು ಹೊಸ ಹೊಸ ಕಾನೂನನ್ನು ತರುವುದರಲ್ಲಿ ಸಂತೋಷ ಕಾಣುತ್ತಿತ್ತು. ನಾನು ಪ್ರತಿದಿನವೂ ಒಂದೊಂದು ಅಪ್ರಸ್ತುತ ಕಾನೂನನ್ನು ತೆಗೆದುಹಾಕಲಿದ್ದೇನೆ’ ಎಂದು ಘೋಷಿಸಿದ್ದರು. ಅದೇ ವೇಗದಲ್ಲಿ ಹೊರಟಿದ್ದರೆ ಈ ಹೊತ್ತಿಗೆ ದೇಶದಲ್ಲಿ ಒಂದು ಕಾನೂನೂ ಇರಬಾರದಿತ್ತು. ಆದರೆ ಕಾನೂನುಗಳಿವೆ ಮಾತ್ರವಲ್ಲಾ, ಅಂತಹ ಹಲವಾರು ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಕಾನೂನುಗಳನ್ನು ಅಪ್‍ಡೇಟ್ ಮಾಡಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳಬಹುದಾದರೂ, ಕಾನೂನುಗಳನ್ನು ತೆಗೆಯಲಾಗಿಲ್ಲ.

ಇಡೀ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ ಪ್ರತಿಪಾದಿಸುವ ಚಿಂತನೆಯ ಮೂಲ ಅರ್ಥವಾಗುತ್ತದೆ. ರೂಲ್ ಆಫ್ ಲಾ ಎಂಬೊಂದು ಮಾತಿದೆ. ಅಂದರೆ ಯಾರು ಆಳುತ್ತಿರುವರೋ ಅವರು ಹೇಳಿದಂತೆ ದೇಶ ನಡೆಯುವುದಿಲ್ಲ, ಹಾಗೆ ಮಾಡಿದರೆ ಅದು ರಾಜಪ್ರಭುತ್ವವಾಗಿಬಿಡುತ್ತದೆ; ಬದಲಿಗೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನೀತಿಯ ಕುರಿತಾಗಿ ಹೇಳಲ್ಪಡುವ ಮಾತು ಅದು. ಆದರೆ, ಪ್ರಜಾಪ್ರಭುತ್ವವು ವಿಸ್ತರಣೆಯಾದಂತೆಲ್ಲಾ ಅಷ್ಟೇ ಕಾನೂನುಗಳೂ ಸಾಲವು ಎಂದಾಯಿತು. ಶೋಷಿತರ ಪರವಾಗಿ, ಅವರ ಹಕ್ಕುಗಳನ್ನು ಕಾಪಾಡುವ ಕೆಲವು ಕಾನೂನುಗಳ ಅಗತ್ಯ ಕಾಣಿಸಿಕೊಂಡಿತು. ದೌರ್ಜನ್ಯಗಳನ್ನು ತಡೆಯಲು ‘ಎಲ್ಲರೂ ಸಮಾನರು’ ಎಂದಷ್ಟೇ ಹೇಳಿದರೆ ಸಾಲದು; ಏಕೆಂದರೆ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂದಾಕ್ಷಣ ದೌರ್ಜನ್ಯಕ್ಕೊಳಗಾಗುವವರು, ದುಡಿಯುವ ಕಾರ್ಮಿಕರು ಆ ಕಾನೂನಿನಡಿಯಲ್ಲಿ ಪ್ರಬಲರ ಎದುರು ಗೆಲ್ಲುವುದು ಸುಲಭವಲ್ಲ. ಹೀಗಾಗಿಯೇ ಮಹಿಳೆಯರ, ದಲಿತರ, ಕಾರ್ಮಿಕರ ಹಾಗೂ ಭೂಮಿ ನಂಬಿ ಬದುಕುತ್ತಿದ್ದ ರೈತರ ಪರವಾದ ಕೆಲವು ಕಾನೂನುಗಳು ಬಂದವು.

Photo Courtesy: BankExamToday

ಮೋದಿಯವರು ಉಲ್ಲೇಖಿಸಿದ ‘ಅವರ ಹಿಂದಿನ ಸರ್ಕಾರಗಳು’ ತಂದ ಮಾಹಿತಿ ಹಕ್ಕಿನ ಕಾಯ್ದೆ, ಅರಣ್ಯ ಕಾಯ್ದೆ, ಭೂ ಸ್ವಾಧೀನ ನಡೆದಾಗ ಪರಿಹಾರ ನೀಡುವ ಕಾಯ್ದೆಯಂತಹ ಹಲವು ಕಾಯ್ದೆಗಳು ವಾಸ್ತವದಲ್ಲಿ ಈ ರೀತಿ ಶೋಷಿತರ ಪರವಾಗಿ ಬಂದಂಥವು. ಅದೇ ರೀತಿಯಾಗಿ ಪರಿಸರ ಸಂಬಂಧಿ ಕಾನೂನುಗಳು ಸಹಾ ಕಟ್ಟುನಿಟ್ಟಾದ ರೂಪದಲ್ಲಿ ಬಂದವು. ಇವೆಲ್ಲವೂ ಸಹಾ ದಮನಿತ ಅಥವಾ ಆಸಕ್ತ ಜನಸಾಮಾನ್ಯರ ಹೋರಾಟಗಳ ಕಾರಣದಿಂದ ಸರ್ಕಾರಗಳು ಜಾರಿಗೆ ತರಲೇಬೇಕಾಗಿ ಬಂದಿತ್ತು ಎಂಬುದನ್ನೂ ಮರೆಯಲಾಗದು.

ಆದರೆ, ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಇಂತಹ ಕಾನೂನುಗಳು ಅಪಥ್ಯವೆನಿಸಲು ಅವರ ಹಿತಾಸಕ್ತಿ, ಅವರು ಪ್ರತಿನಿಧಿಸುವ ಸಮುದಾಯ/ವರ್ಗಗಳ ಹಿತಾಸಕ್ತಿಯೇ ಕಾರಣವಾಗಿದ್ದವು. ಹಾಗಾಗಿ ಅವರು ದಿನಕ್ಕೊಂದು ಕಾನೂನು ಕಿತ್ತುಹಾಕುವ ಮಾತನ್ನಾಡಿದ್ದರು. ಆ ಕಾನೂನುಗಳನ್ನು ತೆಗೆದುಬಿಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಮತ್ತು ಕಾನೂನು ತಜ್ಞರು ಅವರಿಗೆ ಹೇಳಿರಬೇಕು. ಹಾಗಾಗಿ ಅವನ್ನು ಮೂಲಆಶಯಗಳಿಗೆ ವಿರುದ್ಧವಾಗಿ ತಿರುಚಲು ಅವರು ಆದೇಶ ಕೊಟ್ಟಂತಿದೆ. ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಕಾನೂನುಗಳು ಮೊದಲು ಅವರ ಕಣ್ಣಿಗೆ ಬಿದ್ದಿದ್ದವು. ಅವುಗಳನ್ನು ಬದಲಿಸಲು ಶುರು ಮಾಡಿ ಮೊದಲ ಅವಧಿಯಲ್ಲಿ ಹಿಂಜರಿಯಬೇಕಾಗಿ ಬಂದಿತ್ತು. ಅದಕ್ಕಿಂತ ಮೊದಲು ಭೂಸ್ವಾಧೀನ ಮಾಡಿಕೊಂಡಾಗ ನ್ಯಾಯಯುತ ಪರಿಹಾರ ಕಲ್ಪಿಸಬೇಕೆನ್ನುವ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರಲು ಹೊರಟಿದ್ದರು. ಅದನ್ನು ದೇಶಾದ್ಯಂತ ನಡೆದ ಪ್ರತಿಭಟನೆಗಳು ಹಿಮ್ಮೆಟ್ಟಿಸಿದ್ದವು..

Photo Courtesy: The Indian Express

ಇದೀಗ ಎರಡನೆಯ ಬಾರಿಗೆ ಗೆದ್ದು ಬಂದ ನಂತರ, ಸರಣಿ ಕಾನೂನು ತಿದ್ದುಪಡಿಗಳಿಗೆ ಮುಂದಾಗಿದ್ದಾರೆ. ಅದಕ್ಕಾಗಿ ಅವರು ಬಳಸಿಕೊಂಡಿದ್ದು ಕೊರೊನಾ ಸಂದರ್ಭದ ನಿರ್ಬಂಧಗಳನ್ನು. ಆಗ ಯಾರೂ ದನಿಯೆತ್ತದ ಸನ್ನಿವೇಶವಿರುತ್ತದೆ; ಪ್ರತಿಭಟನೆಗಳಿಗೂ ಅವಕಾಶವಿರುವುದಿಲ್ಲ, ಹಾಗಾಗಿ ಜನರ ವಿರುದ್ಧವಾಗಿ ತಿದ್ದುಪಡಿಗಳನ್ನು ಹೊರಟರು. ಅದೇ ಸಂದರ್ಭದಲ್ಲಿ ಕೊರೊನಾ ನಿರ್ಬಂಧಗಳಿಂದ ಶಾಸನಸಭೆಗಳೂ ನಡೆಯುತ್ತಿರಲಿಲ್ಲವಾದ್ದರಿಂದ ಸುಗ್ರೀವಾಜ್ಞೆಯ ಮೂಲಕ ಅದನ್ನು ಸಾಧಿಸಿದರು. ಇದೀಗ ಮತ್ತೆ ಸಂಸತ್ತು ಮತ್ತು ವಿಧಾನಮಂಡಲಗಳು ಅಧಿವೇಶನಗೊಳ್ಳುತ್ತಿವೆಯಾದ್ದರಿಂದ ಎಲ್ಲೆಡೆ ಅವುಗಳಿಗೆ ವಿರೋಧ ಬರುವುದು ಖಚಿತವಾಗಿದೆ. ಬಿಜೆಪಿಯ ಮಿತ್ರ ಪಕ್ಷ ಅಕಾಲಿದಳದ ಸಚಿವೆ ರೈತ ವಿರೋಧಿ ತಿದ್ದುಪಡಿಗಳನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಲ್ಲದೇ ಇಡೀ ಅಕಾಲಿ ದಳವೆ ಎನ್‌ಡಿಎಯಿಂದ ಹೊರಬಂದಿದೆ. ಅಂದರೆ ಪಂಜಾಬಿನ ರೈತ ಹೋರಾಟದ ಬಿಸಿ ಅವರಿಗೆ ತಟ್ಟುತ್ತಿದೆ ಎಂದಾಯಿತು.

ಹೀಗಿದ್ದೂ ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದ ಅಣತಿಯ ಮೇರೆಗೆ ಕಾನೂನುಗಳ ಬದಲಾವಣೆಗೆ ಶುರು ಹಚ್ಚಿಕೊಂಡಿದೆ. ಇದನ್ನು ವಿರೋಧಿಸಿ ರಾಜ್ಯದ ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತರು ಅವರುಗಳ ಬೆನ್ನಿಗೆ ನಿಲ್ಲಬೇಕಿದೆ.


ಇದನ್ನೂ ಒದಿ: ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...