Homeಕರ್ನಾಟಕರಂಜನ್ ಗಗೋಯಿರವರಿಗೆ ಕ್ಲೀನ್ ಚಿಟ್ ವಿರುದ್ಧ ರಾಷ್ಟ್ರದ್ಯಂತ ಪ್ರತಿಭಟನೆ

ರಂಜನ್ ಗಗೋಯಿರವರಿಗೆ ಕ್ಲೀನ್ ಚಿಟ್ ವಿರುದ್ಧ ರಾಷ್ಟ್ರದ್ಯಂತ ಪ್ರತಿಭಟನೆ

- Advertisement -
- Advertisement -

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಪ್ರಿಂ ಕೋರ್ಟ್‍ನ ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗಯಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್‍ನ ಮೂವರು ನ್ಯಾಯಾಧೀಶರ ಸಮಿತಿಯು ಸಮರ್ಪಕವಾಗಿ ವಿಚಾರಣೆ ನಡೆಸದೇ ಪ್ರಕರಣವನ್ನು ವಜಾ ಗೊಳಿಸಿರುವುದು ಸರಿಯಲ್ಲ ಎಂದು ಆರೋಪ ದೇಶದೆಲ್ಲೆಡೆ ಕೇಳಿ ಬರುತ್ತಿದ್ದು ಪ್ರತಿಭಟನೆಗಳು ನಡೆದಿವೆ. ಈ ವಿಷಯವಾಗಿ ಬೆಂಗಳೂರಿನಲ್ಲಿ ಗುರುವಾರ ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶ ರಂಜನ್ ಗೊಗಯಿ ಅವರ ಮೇಲೆ ಸುಪ್ರೀಂ ಕೋರ್ಟ್‍ನಲ್ಲಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಇತ್ತೀಚೆಗೆ ದೂರು ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ನ ಮೂವರು ನ್ಯಾಯಾಧೀಶರ ಸಮಿತಿಯು ‘ಈ ಆರೋಪದಲ್ಲಿ ಹುರುಳಿಲ್ಲ’ ಎಂದು ವರದಿ ನೀಡಿ, ರಂಜನ್ ಗಗೋಯ್ ರವರಿಗೆ ಕ್ಲೀನ್ ಚಿಟ್ ನೀಡಿತ್ತು.

‘ಸುಪ್ರೀಂ ಕೋರ್ಟ್‍ನ ವಿಶ್ವಾಸಾರ್ಹತೆಯ ಗಂಭೀರ ಬಿಕ್ಕಟ್ಟಿನಲ್ಲಿದೆ. ನ್ಯಾಯಾಲಯವು ದೂರುದಾರರ ದೂರನ್ನು ಸರಿಯಾದ ರೀತಿಯಲ್ಲಿ ಆಲಿಸುವಲ್ಲಿ ವಿಫಲವಾಗಿದೆ. ದೂರುದಾರಳ ಬೇಡಿಕೆಯಾದ ‘ವಿಶೇಷ ವಿಚಾರಣಾ ಸಮಿತಿ’ಯನ್ನು ಕಡೆಗಣಿಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕಿರಿಯರಾದ (ಜೂನಿಯರ್ಸ್) ನ್ಯಾಯಮೂರ್ತಿಗಳನ್ನು ಒಳಗೊಂಡ ಇನ್-ಹೌಸ್ ಸಮಿತಿಯನ್ನು ರಚಿಸಿತು. ಈ ಸಮಿತಿ 2019ರ ಮೇ 6 ರಂದು ‘ದೂರಿನಲ್ಲಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎನ್ನುವ ತೀರ್ಮಾನ ನೀಡಿದ್ದಕ್ಕೆ ಆಶ್ಚರ್ಯ ಪಡಬೇಕಿಲ್ಲ.’ ಎಂದು ಪ್ರತಿಭಟನೆಯಲ್ಲಿ ಭಾಗಿಯಾದ ವಕೀಲರಾದ ವಿನಯ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ವಿನಯ್ ಶ್ರೀನಿವಾಸನ್

‘ನಾವೆಲ್ಲ ದೂರುದಾರ ಮಹಿಳೆಯೊಂದಿಗೆ ಐಕ್ಯಮತವಾಗಿ ನಿಂತುಕೊಳ್ಳುತ್ತೇವೆ. ಒಂದು ಸ್ವತಂತ್ರ ಮತ್ತು ನ್ಯಾಯಸಮ್ಮತ ವಿಚಾರಣೆಯ ನೀತಿನಿಯಮಗಳನ್ನು ಪಾಲಿಸದೇ ಸಮಿತಿ ನೀಡಿದ ತೀರ್ಮಾನವನ್ನು ತಿರಸ್ಕರಿಸುತ್ತೇವೆ. ಈ ಪ್ರಕರಣದಲ್ಲಿ ಪಾಲಿಸಲಾದ ಪ್ರಕ್ರಿಯೆಯಲ್ಲಿ ಬರೀ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಮಾತ್ರ ಉಲ್ಲಂಘನೆಯಾಗದೇ ವಿಶಾಖ ತೀರ್ಪಿನ ಚೈತನ್ಯ ಮತ್ತು ಅದರಿಂದ ರೂಪಿಸಲಾದ ನೀತಿಗಳ ಉಲ್ಲಂಘನೆಯೂ ಆಗಿದೆ. ಇಷ್ಟೇ ಅಲ್ಲದೇ ಕೆಲಸ ಮಾಡುವ ಸ್ಥಳಗಳಲ್ಲಿ ಆಗುವ ಅಧಿಕಾರದ ಅಸಮತೋಲನಗಳನ್ನು ಗುರುತಿಸಿ ಅದನ್ನು ಸರಿಪಡಿಸಲು ಇರುವ ಸೆಕ್ಷುವಲ್ ಹ್ಯಾರ್ಯಾಸ್‍ಮೆಂಟ್ ಆಫ್ ವಿಮೆನ್ ಎಟ್ ವಕ್‍ಪ್ಲೇಸ್ ಆ್ಯಕ್ಟ್ 2013 (POSH ACT) ನ ಉಲ್ಲಂಘನೆಯೂ ಆಗಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

 

ಇದನ್ನು ಓದಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ನಾವೆಲ್ಲರೂ ನ್ಯಾಯಾಂಗದ ಸ್ವಾತಂತ್ರ ಮತ್ತು ಸ್ವಾಯತ್ತತೆಯ ಪರವಾಗಿದ್ದು, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಗೌರವಿಸುತ್ತೇವೆ. ಆದರೆ ನಾವು ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗುವ ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ತೋರಿಸುವುದರಲ್ಲಿಯೂ ನಂಬಿಕೆ ಇಡುತ್ತೇವೆ, ಅದರಿಂದ ಲೋಪದೋಷಗಳನ್ನು ತಿದ್ದುಕೊಳ್ಳಲು ಸಹಾಯ ಆಗಿ ನ್ಯಾಯಾಂಗದ ಸ್ವಾತಂತ್ರದ ರಕ್ಷಣೆ ಆಗುತ್ತದೆಯೇ ಹೊರತು ಅದರ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುವುದಿಲ್ಲ. ನಮ್ಮ ದೇಶದ ಅತ್ಯುನ್ನತ ಸಾಂವಿಧಾನಿಕ ಪ್ರಾಧಿಕಾರವಾದ ಭಾರತದ ಸುಪ್ರೀಮ್ ಕೋರ್ಟಿನಿಂದ ಆದ ಅಧಿಕಾರದ ಈ ಸ್ಪಷ್ಟ ದುರ್ಬಳಕೆಯಿಂದ ನಮಗೆ ಹತಾಶೆ ಆಘಾತವಾಗಿದೆ ಎನ್ನುತ್ತಾರೆ ಪ್ರತಿಭಟನಾಕಾರರು.

ಸುಪ್ರೀಂ ಕೋರ್ಟ್ ತಾನು ಮಾಡಿದ ತಪ್ಪನ್ನು ತಿದ್ದಬೇಕು ಎಂದು ನಾವು ಆಗ್ರಹಿಸುತ್ತೇವೆ ಹಾಗೂ ದೂರುದಾರರ ಮೇಲೆ ಆಗಿರುವ ಘೋರ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸುತ್ತೇವೆ. ಸ್ಪಷ್ಟವಾದ ಕಾರ್ಯವಿಧಾನಗಳ ಅನುಪಸ್ಥಿತಿಯಲ್ಲಿ, ಸಹಜ ನ್ಯಾಯದ ತತ್ವಗಳನ್ನು ಪಾಲಿಸದೇ ಹಾಗೂ ದೂರುದಾರರ ಪರಿಣಾಮಕಾರಿಯಾದ ಪ್ರಾತಿನಿಧ್ಯ ಇಲ್ಲದೇ ಆಗಿರುವ ಈ ವರದಿ (ಇದನ್ನು ಸಾರ್ವಜನಿಕಗೊಳಿಸದೇ ಇದ್ದರೂ) ಯನ್ನು ಈ ವಿಷಯಕ್ಕೆ ಸಂಬಂಧಪಟ್ಟಂತೆ ಇದೇ ಕೊನೆಯ ಮತ್ತು ಅಂತಿಮ ತೀರ್ಪು ಎಂದು ಒಪ್ಪಿಕೊಳ್ಳಲಾಗದು ಎಂದರು.

ಪ್ರತಿಭಟನಾಕಾರರು ಸುಪ್ರೀಂ ಕೋರ್ಟಿನ ಮುಂದಿಟ್ಟಿರುವ ಹಕ್ಕೊತ್ತಾಯಗಳು ಕೆಳಗಿನಂತಿವೆ.

1. ದೂರುದಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂ ಕೋಟ್‍ನ ಪೂರ್ಣ ಪೀಠ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಸುಪ್ರೀಂಕೋರ್ಟ್ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಪುನರ್‍ಗಳಿಸಬೇಕು.
2. ವಿಶಾಖ ಗೈಡ್‍ಲೈನ್ಸ್, POSH ACT ಬದ್ಧವಾಗಿರುವಂತಹ ಹೊಸ ಸಮಿತಿಯನ್ನು ಸೂಕ್ತ ಪ್ರಕ್ರಿಯೆಯ ಮೂಲಕ ರಚಿಸಿ ದೂರುದಾರರ ಹಿತಾಸಕ್ತಿಯನ್ನು ಕಾಪಾಡಬೇಕು.
3. ಜಸ್ಟೀಸ್ ಬಾಬ್ಡೆ ಪ್ಯಾನಲ್ ವರದಿಯ ಪ್ರತಿಯೊಂದನ್ನು ದೂರುದಾರರಿಗೆ ನೀಡಬೇಕು
4. ದೂರುದಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು
5. ರಚಿಸಬೇಕಿರುವ ಹೊಸ ಸಮಿತಿಗೆ ದಲಿತ ಸಮುದಾಯಕ್ಕೆ ಸೇರಿದ ಒಬ್ಬರಾದರೂ ನ್ಯಾಯಾಂಗ (ವಕೀಲರು/ನ್ಯಾಯಾಧೀಶರು/ನಿವೃತ್ತ ನ್ಯಾಯಾಧೀಶರು) ವ್ಯಕ್ತಿಯನ್ನು ನೇಮಿಸಬೇಕು.
6. ಎಸ್‍ಸಿ/ಎಸ್‍ಟಿ/ಒಬಿಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ನ್ಯಾಯಾಂಗದ ಉನ್ನತ ಸ್ಥಾನಗಳಲ್ಲಿ ಮೀಸಲಾತಿಯನ್ನು ಒದಗಿಸಬೇಕು
ಈ ಮೊಕದ್ದಮೆಗೆ ಸಂಬಂಧಿಸಿ ನ್ಯಾ.ಚಂದ್ರಚೂಡ್ ಅವರ ಸಲಹೆಗಳನ್ನು ನಾವು ಅನುಮೋದಿಸುತ್ತೇವೆ.
7. ಹೊಸ ಸಮಿತಿಗೆ ನಿವೃತ್ತ ಮಹಿಳಾ ನ್ಯಾಯಾಧೀಶರನ್ನು ಬಾಹ್ಯ ಸದಸ್ಯರಾಗಿ ಕಡ್ಡಾಯವಾಗಿ ನೇಮಕ ಮಾಡಬೇಕು
8. ಬಾರ್ ಕೌನ್ಸಿಲ್‍ನ ಗೌರವಾನ್ವಿತ ಮಹಿಳಾ ಸದಸ್ಯರನ್ನು ಅಮಿಕಸ್ ಕ್ಯೂರಿ (ಕೋರ್ಟ್‍ನ ಸ್ನೇಹಿತರು) ಎಂದು ಪರಿಗಣಿಸಬೇಕು
9. ದೂರುದಾರರು ಮುಂದಿಟ್ಟಿರುವ ಕುಂದುಕೊರತೆಗಳನ್ನು, ಅದರಲ್ಲೂ ವಕೀಲರೊಬ್ಬರ ನೆರವನ್ನು ಪಡೆಯುವಂತಹವನ್ನು ಪರಿಗಣಿಸಿ ಪರಿಹಾರ ಕಲ್ಪಿಸಬೇಕು.

ಪ್ರತಿಭಟನೆಗೆ ಭಾಗವಹಿಸಿದ, ಬೆಂಬಲಿಸಿದ ಸಂಘಟನೆಗಳು

ಸಿಐಇಡಿಎಸ್ ಕಲೆಕ್ಟಿವ್, ಬೆಂಗಳೂರು
2. ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು
3. ನ್ಯಾಷನಲ್ ನೆಟ್‍ವರ್ಕ್ ಆಫ್ ಸೆಕ್ಸ್ ವರ್ಕರ್ಸ್
4. ಕರ್ನಾಟಕ ಜನಾರೋಗ್ಯ ಚಳವಳಿ
5. ವಂಪ್
6. ಮುಸ್ಕಾನ್
7. ಕರ್ನಾಟಕ ಸೆಕ್ಸ್ ವರ್ಕ್‍ರ್ಸ್ ಯೂನಿಯನ್
8. ಸ್ತ್ರೀ ಜಾಗೃತಿ ಸಮಿತಿ
9. ಡೊಮೆಸ್ಟಿಕ್ ವರ್ಕ್‍ರ್ಸ್ ರೈಟ್ಸ್ ಯೂನಿಯನ್
10. ಮಹಿಳಾ ಮುನ್ನಡೆ
11. ಕರ್ನಾಟಕ ಜನಶಕ್ತಿ
12. ಸಂವಿಧಾನ ಉಳಿವಿಗಾಗಿ ಕರ್ನಾಟಕ
13. ಸೌಥ್ ಇಂಡಿಯಾ ಸೆಲ್ ಫಾರ್ ಹ್ಯುಮನ್ ರೈಟ್ಸ್, ಎಡುಕೇಷನ್ ಅಂಡ್ ಮಾನಿಟರಿಂಗ್ (ಎಸ್‍ಐಸಿಎಚ್‍ಆರ್‍ಇಎಂ)
14. ರಾಮದಾಸ್ ರಾವ್
15. ತಾರಾ ಕೃಷ್ಣಮೂರ್ತಿ, ಕೋ ಫೌಂಡರ್, ಶಕ್ತಿ – ಪೊಲಿಟಿಕಲ್ ಪವರ್ ಟು ವುಮೆನ್
16. ಗಮನ ವರ್ಕರ್ಸ್ ಕಲೆಕ್ಟಿವ್, ಬೆಂಗಳೂರು
17. ಸಾಧನ ಮಹಿಳೆಯರ ಸಂಘ, ಬೆಂಗಳೂರು
18. ಲೈಂಗಿಕ ಹಿಂಸೆಯ ವಿರೋಧಿ ಜನಚಳವಳಿ
19. ಕರ್ನಾಟಕ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ (ಏಔಔಉU)
20. ಸೌತ್ ಇಂಡಿಯಾ ಫೆಡೆರೇಷನ್ ಆಫ್ ಟ್ರೇಡ್ ಯೂನಿಯನ್ಸ್ (SIಈಖಿU)
21. ಂIಏಙಂಖಿಂ (ಸೀನಿಯರ್ ಸಿಟಿಜನ್ಸ್ ಗ್ರೂಪ್)
22. ಮನೆಗೆಲಸ ಕಾರ್ಮಿಕರ ಯೂನಿಯನ್ (ಒಂಏಂಂಙU)
23. ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಯೂನಿಯನ್ (ಂಏಏಏU)
24. ಫೆಡಿನಾ
25. ರಾಜೇಶ್, ಉಮಾದೇವಿ, ಶ್ರೀನಿವಾಸ್

‘ನ್ಯಾಯಾಧೀಶರೇ ಆರೋಪಿಯಾದರೆ… ವಿಚಾರಣಾ ಪೀಠದಲ್ಲಿ ಸ್ವತಃ ನ್ಯಾಯಮೂರ್ತಿಯಾಗಿ ಕುಳಿತರೇ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...