Homeಕರ್ನಾಟಕನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಮೋದಿಯ ನೋಟ್ ಬ್ಯಾನ್: ಅರವಿಂದ ಜತ್ತಿಯವರ ರಾಜ್ಯಸಭಾ ಸದಸ್ಯತ್ವದ ಕನಸು ಹಾಗೂ ಹಲವು ಕತ್ತೆಗಳು ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಸನ್ಮಾನ್ಯ ಶ್ರೀ ಅರವಿಂದ ಜತ್ತಿಯವರಿಗೆ ರಾಜ್ಯಸಭೆಯ ಕನಸುಗಳು ಬೀಳುವುದಕ್ಕೆ ಶುರುವಾಗಿ ಐದು ವರ್ಷಗಳು ಗತಿಸಿ ಹೋದವು. ತಮ್ಮ ಕನಸಿಗಾಗಿ ಅವರು ಪ್ರಧಾನಿ ಮೋದಿಯವರನ್ನು ಆಗಾಗ ಹೋಗಳುತ್ತಲೆ ಇರುತ್ತಾರೆ. ಮೋದಿಯವರು ಏನೇ ಮಾಡಿದರು ಅದು ಅವರಿಗೆ ದಿವ್ಯವಾಗಿ ಕಂಡುಬರುತ್ತದೆ. ಆ ಕುರಿತು ಮೆದುಳು ಬೆಳೆಯದ ಮಕ್ಕಳು ಕೂಗುವಂತೆ ಮೋದಿ ಮೋದಿ ಮೋದಿ ಎಂದು ಕೂಗುವ ಮೂಲಕ ತಮ್ಮ ಮನದ ಇಂಗಿತವನ್ನು ಮತ್ತೊಂದು ರೂಪದಲ್ಲಿ ಹೊರ ಹಾಕುತ್ತಾರೆ.

ಪ್ರಧಾನಿ ಮೋದಿಯವರನ್ನು ನಿತ್ಯ, ಕ್ಷಣ ಕ್ಷಣವೂ ಹೊಗಳಲಿ. ರಾಜ್ಯ ಸಭೆಯ ಸದಸ್ಯರೂ ಆಗಲಿ ಯಾರ ತಕರಾರು ಇಲ್ಲ. ಆದರೆ ಮೋದಿ ಹೊಗಳುವ ಭರದಲ್ಲಿ “ನೋಟು ಅಮಾನ್ಯೀಕರಣದ ಕುರಿತು ಬಸವಣ್ಣನವರು 12ನೇ ಶತಮಾನದಲ್ಲಿಯೇ ಉಲ್ಲೇಖಿಸಿದ್ದರು. ಈಗ ಅದು ನಿಜವಾಗಿದೆ. ಈ ವಿಷಯವನ್ನು ಪ್ರಧಾನಿ ಮೋದಿಯವರಿಗೆ ಈ ವಿಷಯ ತಿಳಿಸಿದಾಗ ಅವರು ನಿಬ್ಬೆರಗಾಗಿದ್ದರು” ಎಂದು ಪತ್ರಿಕೆಯೊಂದಕ್ಕೆ ಹೇಳೀಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. 

ಒಂದು ಕಡೆಯಲ್ಲಿ ಸಮಾನತವಾದಿ ಬಸವಣ್ಣ ಮತ್ತೊಂದು ಕಡೆಯಲ್ಲಿ ಮನುವಾದವನ್ನು ಎತ್ತಿ ಹಿಡಿಯುವ ಮೋದಿ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ನಾವು ಅನಿವಾರ್ಯವಾಗಿ ಪ್ರಶ್ನಿಸಲೆಬೇಕಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ ! ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ’ ಎಂದ ಬಸವಣ್ಣನವರೆಲ್ಲಿ, ರಾಮ ಮಂದಿರ ಕಟ್ಟಲೇಬೇಕು ಎಂಬ ತುಡಿತ ಇರುವ ಮೋದಿಯವರೆಲ್ಲಿ ? ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿರುವವರು ಬಿ.ಜೆ.ಪಿಗರು. ಇದನ್ನು ಇಡೀ ರಾಷ್ಟ್ರದ ಜನತೆ ಬಲ್ಲುದು. ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವ ಬಸವಣ್ಣನವರದು. ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿದ್ದು ಬಸವಣ್ಣನವರಾದರೆ ಮೋದಿ ನೇತೃತ್ವದ ಸರಕಾರ ಮಹಿಳೆಗೆ ಮತ್ತೆ ಕಟ್ಟಳೆಗಳನ್ನು ವಿಧಿಸಿ ಮನುವಾದವನ್ನು ಮುನ್ನೆಲೆಗೆ ತರಲು ಹಾತೊರೆಯುತ್ತದೆ.

ಭಾರತದ ಸಂವಿಧಾನ ಬೇರೆ ಅಲ್ಲ, ಬಸವಾದಿ ಶರಣರು ಬರೆದ ವಚನಗಳು ಬೇರೆ ಅಲ್ಲವೇ ಅಲ್ಲ. ಎರಡೂ ಒಂದರೊಳಗೆ ಒಂದು ಹಾಸು ಹೊಕ್ಕಾಗಿ ಇರುವಂಥವು. ಹನ್ನೆರಡನೆಯ ಶತಮಾನದಲ್ಲಿ ವಚನಗಳನ್ನು ಬದುಕಿದ ಶರಣರು ಸುಖಿಯಾದ ಸಮಾಜವನ್ನು ಕಟ್ಟಲು ಸಾಧ್ಯವಾಗಿತ್ತು. ಡಾ. ಬಿ.ಆರ್. ಅಂಬೇಡ್ಕರರವರು ನಮಗಾಗಿ ಕಟ್ಟಿಕೊಟ್ಟ ಭಾರತೀಯ ಸಂವಿಧಾನ ವಿಶ್ವದ ಸಂವಿಧಾನದಲ್ಲಿಯೇ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡದ್ದು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಮೋದಿ ಸರಕಾರದ ಕೆಲವು ಮಂತ್ರಿಗಳೆ ಬೀದಿಯಲ್ಲಿ ನಿಂತು ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಹೇಳುತ್ತಾರೆ. ಈ ಮಾತುಗಳ ಪ್ರಚೋದನೆ ಪಡೆದ ಕೆಲವು ಅಬ್ಬೆಪಾರಿ ಜನಗಳು ಸಂವಿಧಾನದ ಪ್ರತಿಯನ್ನು ದೆಹಲಿಯ ಸಂಸತ್ತಿನ ಮುಂದೆಯೇ ಸುಡುತ್ತಾರೆ. ಇದನ್ನು ಕಂಡೂ ಕಾಣದಂತೆ ಮೋದಿಯವರು ದೊಡ್ಡ ಕೌದಿಯನ್ನು ತಮ್ಮ ಕಣ್ಣ ಮೇಲೆ ಹಾಕಿಕೊಂಡು ಕುಳಿತ್ತಿದ್ದಾರಲ್ಲ ! ಇದೆಲ್ಲ ನಮ್ಮ ಅರವಿಂದ ಜತ್ತಿಯವರಿಗೆ ಕಾಣುವುದಿಲ್ಲವೆ ?

ನೋಟು ಅಮಾನ್ಯೀಕರಣವನ್ನು ದೇಶದ ಮಹತ್ವದ ಆರ್ಥಿಕ ಚಿಂತಕ ಮನಮೋಹನ ಸಿಂಗ್ “ವ್ಯವಸ್ಥಿತ ಸಂಘಟಿತ ಲೂಟಿ’’ ಎಂದು ಜರಿದರು. ಇವತ್ತಿಗೂ ಬಡವರು, ಮಧ್ಯಮ ವರ್ಗದ ಜನ ನೋಟು ಅಮಾನ್ಯೀಕರಣದ ಬಿಸಿಗೆ ಬೀದಿಗೆ ಬಿದ್ದಿದ್ದಾರೆ. ನೊಂದವರ ನೋವ ಅರಿಯುವುದೆ ಬಸವ ಪ್ರಣೀತ ಲಿಂಗಾಯತ ಧರ್ಮ. ಬಸವ ಸಮಿತಿಯ ಆಯಿಲ್ ಪೆಂಟ್ ಜತ್ತಿಯವರಿಗೆ ಇದು ಕಾಣಲಿಲ್ಲವೇಕೆ ? ತಮ್ಮ ಯಾವುದೋ ಒಂದು ವೈಯಕ್ತಿಕ ಬಯಕೆಗೆ ಲಿಂಗಾಯತ ಧರ್ಮದ ತತ್ವಗಳನ್ನು ಬಲಿಕೊಡುವುದು ಎಷ್ಟು ಸರಿ ?

ಶರಣರು ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಹೇಳಿಲ್ಲ. ಆದರೆ ಜತ್ತಿಯವರು ಮಾತ್ರ ಅದೆಲ್ಲಿಯ ವಚನ ಅಧ್ಯಯನ ಮಾಡಿದರೊ ಕಾಣೆ. ನೋಟು ಅಮಾನ್ಯೀಕರಣದ ಕುರಿತು ಶರಣರು ಹೇಳಿದ್ದಾರೆಂದು ಜತ್ತಿಯವರು ಹೇಳಿದ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಾನು ಅಧ್ಯಯನ ಮಾಡಿದಂತೆ ವಚನದಲ್ಲಿ ತೆರಿಗೆಯನ್ನು ವಂಚಿಸಬಾರದು ಎಂದಿದೆ.

ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ
ವಿರಹಿತ ಹೋಗಬಾರದು
ಲಿಂಗ ಸಂಬಂಧಿಯಾದಡೆ
ಜಂಗಮ ಪ್ರೇಮಿ ನೀನಾಗು.
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ
ಜಂಗಮದಲ್ಲಿ ನಿರುತ ಭರಿತ
ಕೂಡಲಸಂಗಮದೇವಾ

ಇದರಲ್ಲಿ ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಚಕಾರ ಶಬ್ಧವೂ ಇಲ್ಲ. ಜತ್ತಿಯವರ ದಿವ್ಯ ದೃಷ್ಟಿಯಲ್ಲಿ ಕಂಡಿದ್ದರೆ ಅದನ್ನವರು ನಮಗೆಲ್ಲ ತಿಳಿಸಿಕೊಡಬೇಕು. ಇಷ್ಟು ವರ್ಷಗಳ ಕಾಲ ಮಠಾಧೀಶರು ಬಸವಾದಿ ಶರಣರ ಡುಬ್ಬದ ಮೇಲೆ ಕುಳಿತು ತಮ್ಮ ಮೆರವಣಿಗೆ ಉರವಣಿಗೆ ನಡೆಸಿಕೊಂಡು ದೊಡ್ಡವರಾಗಿ ಮೆರೆದಿದ್ದಾರೆ. ಈಗ ಬಸವಣ್ಣನವರ ಹೆಸರಿನ ಮೇಲೆ ಸಮಿತಿ, ಪ್ರತಿಷ್ಠಾನ, ಕೇಂದ್ರಗಳ ಆರ್ಭಟ ನಡೆದಿದೆ. ಈ ಸೂಕ್ಷ್ಮವನ್ನು ಲಿಂಗಾಯತರು ಈಗ ಅರಿತಿದ್ದಾರೆ. ಹಿಂದೊಮ್ಮೆ ತಮ್ಮ ಬಸವ ಸಮಿತಿಯಿಂದ ಹೊರಡುವ ಪತ್ರಿಕೆಯ ಮುಖ ಪುಟದಲ್ಲಿ ಸರ್ವಜ್ಞನ ವಚನವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಬಸಳಸಿಕೊಂಡಿದ್ದರು.

ಬಸವ ಸಮಿತಿ (ಪೀಠ)ವೂ ಎದ್ದು
ಒಸೆದು ನಾಣ್ಯವು ಹುಟ್ಟಿ
ಬಸವನಾ ಮುದ್ರೆ ಮೆರೆದಾವು ಲೋಕವವಗೆ ವಶವಾಗದಿಹುದೆ ಸರ್ವಜ್ಞ !

ಇದನ್ನು ಓದಿ: ಬಸವಣ್ಣ ಮತ್ತು ಅಕ್ಷಯ ತೃತೀಯ

ಸರ್ವಜ್ಞ ಬಳಸಿದ ಪೀಠ ಎಂಬ ಪದ ಹೃದಯ ಪೀಠ ಎಂದು ಅರ್ಥೈಸಿಕೊಳ್ಳದಷ್ಟು ದಡ್ಡರೇನು ಜತ್ತಿಯವರಲ್ಲ, ಮುದ್ದಾಂ ಆಗಿಯೆ ಈ ತಪ್ಪುಗಳನ್ನು ಮಾಡುವ ಮೂಲಕ ದೊಡ್ಡವರಾಗಬೇಕೆಂದು ಬಯಸುತ್ತಾರೆ. ಕೆಂಭೂತ ನವಿಲಿನಂತೆ ಕುಣಿಯಬಹುದು ಆದರೆ ಅದು ನವಿಲಾಗಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯರ ಗುಲಾಮರಾಗಿ ಯಾರೂ ಬೇಡ ಅನ್ನುವುದಿಲ್ಲ. ಆದರೆ ಲಿಂಗಾಯತ ಧರ್ಮದವರನ್ನು ಯಾರಿಗೂ ಒತ್ತೆ ಇಡಬೇಡಿ.

ವೇದವ ಮೀರಿದ ಮಹಾವೇದಿಗಳು ಲಿಂಗವಂತರು
ಶಾಸ್ತ್ರವ ಮೀರಿದ ಮಹಾಶಾಸ್ತ್ರಜ್ಞರು ಲಿಂಗವಂತರು
ಪುರಾಣವ ಮೀರಿದ ಮಹಾಪುರಾಣಿಕರು ಲಿಂಗವಂತರು
ಲಿಂಗವಂತ ನಡೆ, ನುಡಿ ಭಿನ್ನಕಾಣಿರೋ
ಎಂಬ ನಗೆ ಮಾರಿತಂದೆಗಳ ಮಾತು ಅರಿತು ಜತ್ತಿಯವರು ನಡೆಯಬೇಕಿದೆ. ಕುದುರೆಗೆ ಕುದುರೆ, ಕತ್ತೆಗೆ ಕತ್ತೆ ಎಂದೆನ್ನದೆ ಕತ್ತೆಗೆ ಕುದುರೆ ಅಂದರೆ ಜನ ಅದನ್ನು ಅರಿಯದಷ್ಟು ದಡ್ಡರಲ್ಲ. ಹಲವು ಕತ್ತೆಗಳ ನಡುವೆ ಕುದುರೆ ಜಾತಿ ಕಳೆದ ಹೋಗದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...