HomeUncategorizedಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

ಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

- Advertisement -
- Advertisement -

ನಾನು ಆ ಏರ್ ಇಂಡಿಯಾ ವಿಮಾನದ ಪ್ರಯಾಣಿಕಳಾಗಿರಲಿಲ್ಲ. ಆದರೆ ನಾನು ಅಂದು ಅದೇ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಈಗ ಅದರಲ್ಲಿ ಪ್ರಯಾಣಿಸುತ್ತಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ ಮಿಕ್ಕಿದವರೆಲ್ಲಾ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ನಿರ್ಲಕ್ಷ್ಯವು ಕಾರಣವಾಗಿದೆ. ಸಂಪೂರ್ಣವಾಗಿ ಈ ವಿಪತ್ತನ್ನು ತಪ್ಪಿಸಬಹುದಾಗಿತ್ತು. ಇದು ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಸಾಧ್ಯವಾಗಿಸಿದ ದುರಂತ.

ಈ ವಿಮಾನ ದುರಂತದ ಹಿಂದಿನ ರಾತ್ರಿ ನಾನು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿಳಿದಿದ್ದೆ. ಮರುದಿನ ಬೆಳಿಗ್ಗೆ ಈ ದುರಂತದ ಸುದ್ದಿಯನ್ನು ಕೇಳಿ ಕಿರುಚಿಕೊಂಡು ಎದ್ದೇಳಬೇಕಾಯಿತು. ಅಂದು ನಡೆದ ಘಟನೆ ಕನಸಿನಂತೆ ಭಾಸವಾಗಿತ್ತು. ಈ ಘಟನೆಯ  ಫೋಟೋ, ವೀಡಿಯೋಗಳನ್ನು ನೋಡಿ ವಾಸ್ತವವನ್ನು ಒಪ್ಪಿಕೊಳ್ಳಲು ಸಾಕಷ್ಟು ಹರಸಾಹಸಪಡಬೇಕಾಯಿತು.

ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗಬೇಕಿದ್ದ ಬೋಯಿಂಗ್ ಡ್ರೀಮ್‌ಲೈನರ್ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲೇ ಅಪಘಾತಕ್ಕೀಡಾಯಿತು. ಅದು ಅಹಮದಾಬಾದ್ ವಿಮಾನ ನಿಲ್ದಾಣದ ಆವರಣದಿಂದ ಕೇವಲ ನೂರು ಮೀಟರ್ ಹೊರಗೆ ಇದ್ದ ವೈದ್ಯಕೀಯ ಹಾಸ್ಟೆಲ್‌ ನ ಕಟ್ಟಡದ ಮೇಲೆ ಅಪ್ಪಳಿಸಿದೆ. ಈ ಸಂದರ್ಭದಲ್ಲಿ ವಿಮಾನಕ್ಕೆ ಸಂಪೂರ್ಣವಾಗಿ ಇಂಧನವನ್ನು ತುಂಬಿಸಲಾಗಿತ್ತು. ಇದರ ಪರಿಣಾಮವಾಗಿ ಅದು ಬಹುಬೇಗನೆ ಸ್ಫೋಟಗೊಂಡಿತು. ಆಗ ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಪ್ರಯಾಣಿಕರು ಸಾವನ್ನಪ್ಪಬೇಕಾಯಿತು. ಮೃತಪಟ್ಟ ಪ್ರಯಾಣಿಕರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರಾಗಿದ್ದಾರೆ.

ಆದರೆ ಈ ದುರಂತವು ಅದೃಷ್ಟದ ಕಥೆಯಲ್ಲ. ಇದು ನಿರ್ಲಕ್ಷ್ಯದ ಕುರಿತಾದ ಕಥೆ. ನಮ್ಮನ್ನಾಳುವವರು ಈ ಪ್ರಯಾಣಿಕರ ಜೀವ ಉಳಿಸಲು ವಿಫಲವಾದ ಕಥೆ. ಆದರೆ ಇದು ಹಾಗೆಯೇ ಮುಂದುವರಿದರೆ ಮುಂದೆ ಜನರನ್ನು ತೀವ್ರವಾಗಿ ಅಪಾಯಕ್ಕೊಳಪಡಿಸುತ್ತದೆ. ಇದು ಹಲವು ಸಮಯದಿಂದ ರಾಜಕೀಯ ಉದಾಸೀನತೆಯ ಫಲ. ಹೀಗೆ ಜನರನ್ನು ಸಾಕಷ್ಟು ಸಮಯದವರೆಗೆ ನಿರ್ಲಕ್ಷಿಸಿದರೆ ಒಂದು ದಿನ ಆಕ್ರೋಶ ಸ್ಫೋಟಗೊಳ್ಳುತ್ತದೆ.

ಒಂದು ವಿಷಯ ಕುರಿತು ನಾವೆಲ್ಲ ಸ್ಪಷ್ಟಪಡಿಸಿಕೊಳ್ಳೋಣ. ಇದು ಕೇವಲ ಒಂದು ವಿಮಾನಯಾನದ ಅಪಘಾತವಾಗಿರಲಿಲ್ಲ. ಇದು ವ್ಯವಸ್ಥೆಯ ವೈಫಲ್ಯ. ಉದ್ದೇಶಪೂರ್ವಕ ರಾಜಕೀಯ ನಿರ್ಲಕ್ಷ್ಯದಿಂದ ಕೂಡಿದೆ. ಗುಜರಾತಿನಲ್ಲಿರುವ ಈ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ನಿಲ್ದಾಣವು ಬಹಳ ಹಿಂದಿನಿಂದಲೂ ಅಪಾಯಕಾರಿಯಾಗಿ ಇಕ್ಕಟ್ಟಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದರ ರನ್‌ವೇಗಳ ಅಕ್ಕಪಕ್ಕ ಜನನಿಬಿಡ ಪ್ರದೇಶವಾಗಿದೆ. ಒಂದು ಅಂತರರಾಷ್ಟ್ರೀಯ ವಿಮಾನವು ಟೇಕ್ ಆಫ್ ಆದ ನಂತರ ದೋಷವುಂಟಾದರೆ ಸರಿಪಡಿಸಿಕೊಳ್ಳಲು ಹೋಗುವುದಕ್ಕಾಗಿ ಎಲ್ಲಿಯೂ ಜಾಗವಿಲ್ಲ. ಈ ವಿಮಾನ ನಿಲ್ದಾಣವು ಕುಣಿಕೆಯಂತೆ ನಗರವನ್ನು ಸುತ್ತುವರೆದಿದೆ.

ಅಂದು ವಿಮಾನವು ಬಿಜೆ ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ. ಇದು ಕೇವಲ ವಾಯುಯಾನ ವಿಪತ್ತು ಮಾತ್ರ ಅಲ್ಲ; ಇದು ನಗರ ಪ್ರದೇಶವನ್ನು ಬೆಂಕಿಯ ಬಿರುಗಾಳಿಯನ್ನಾಗಿಸಿತ್ತು. ವೈದ್ಯಕೀಯ ವೃತ್ತಿಜೀವನದ ತುತ್ತ ತುದಿಯಲ್ಲಿದ್ದ ವಿದ್ಯಾರ್ಥಿಗಳು, ವೈದ್ಯರು ಜೀವಂತ ಸಮಾಧಿಯಾದರು. ಇದೆಲ್ಲವೂ ನಗರದಿಂದ ನೂರಾರು ಕಿಲೋಮೀಟರ್ ದೂರದಲ್ಲೆಲ್ಲೋ ಸಂಭವಿಸಿಲ್ಲ.  ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದರ ವಾಯುಪ್ರದೇಶ ಮತ್ತು ಜನವಸತಿ ನಡುವೆ ಯಾವುದೇ ರಕ್ಷಣಾತ್ಮಕ ಕ್ರಮಕೈಗೊಳ್ಳದೇ ಅದರ ನಿರ್ಮಾಣಕ್ಕೆ ಅನುಮತಿಸಲಾಗಿದೆ.

ಯಾವುದೋ ಒಂದು ರೀತಿಯಲ್ಲಿ ಕೆಟ್ಟದ್ದಾಗುತ್ತದೆ ಎಂದು ತಿಳಿದಿತ್ತು. ಅಹಮದಾಬಾದ್‌ನ ರನ್‌ವೇ ಯಿಂದ ಆಚೆ ಇರುವ ಮೇಲ್ಮೈಗಳು ಅಪಾಯಕಾರಿ ಎಂದು ಪುನರಾವರ್ತಿತ ಸುರಕ್ಷತಾ ಲೆಕ್ಕಪರಿಶೋಧನೆಗಳು ಎಚ್ಚರಿಸಿವೆ.  2019ರ ಡಿಜಿಸಿಎ ವರದಿಯು ಅಪಾಯಗಳನ್ನು ಸ್ಪಷ್ಟವಾಗಿ ವಿವರಿಸಿದೆ. 2018ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ರನ್‌ವೇಯ ಸುರಕ್ಷತಾ ಪ್ರದೇಶವನ್ನು ವಿಸ್ತರಿಸಲು 29.79 ಎಕರೆ ಭೂಮಿ ಹಂಚಿಕೆ ಮಾಡಲು ಗುಜರಾತ್ ಸರ್ಕಾರವನ್ನು ಕೇಳಿಕೊಂಡಿತ್ತು.  ಪ್ರಾಧಿಕಾರಕ್ಕೆ ಅನುಮೋದನೆ ಸಿಕ್ಕಿತು. ಆದರೆ ಇಂದಿಗೂ ಸಂಬಂಧಿಸಿದ ಭೂಮಿಯನ್ನು ಹಸ್ತಾಂತರ ಮಾಡಲಾಗಿಲ್ಲ. ಏಕೆಂದರೆ  ಈ ಭೂಮಿಯನ್ನು ವಶಪಡಿಸಿಕೊಳ್ಳಲು ಹತ್ತಿರದಲ್ಲಿ ವಾಸಿಸುವ 350 ಕುಟುಂಬಗಳನ್ನು ಸ್ಥಳಾಂತರಿಸುವ ಅಗತ್ಯವಿತ್ತು. ಈ ರೀತಿ ಮಾಡುವುದು ರಾಜಕೀಯ ವ್ಯಕ್ತಿಗಳಿಗೆ ರಾಜಕೀಯವಾಗಿ ಅನುಕೂಲಕರವಾಗಿರಲಿಲ್ಲ. ಹೀಗೆ ಮಾಡುವುದರಿಂದ ಯಾವುದೇ ಮತಗಳು ಬರುವುದಿಲ್ಲವಾದ್ದರಿಂದ ಇಲ್ಲಿಯ ಜನರನ್ನು ಸ್ಥಳಾಂತರ ಮಾಡಲಾಗಿಲ್ಲ. ವಿಮಾನ ನಿಲ್ದಾಣವನ್ನು ಪ್ರಯಾಣಿಕರ ದೃಷ್ಟಿಯಿಂದ ವಿಸ್ತರಿಸುತ್ತಲೇ ಬೇಕಿತ್ತು. ಈಗ ಇರುವ ವಿಮಾನ ನಿಲ್ದಾಣದಿಂದ ಎಂದಿಗೂ ಸುರಕ್ಷತೆ ಇಲ್ಲ. ಅಲ್ಲಿ ಅಪಾಯದ ಸಂದರ್ಭಗಳು ಹೆಚ್ಚುತ್ತಲೇ ಇವೆ. ಅದು ಹೇಗೆಂದರೆ ತನ್ನದೇ ನಗರದ ಮೇಲೆ ನೇರವಾಗಿ ಗುರಿಯಿಟ್ಟು ಲೋಡ್ ಮಾಡಿದ ಬಂದೂಕಿನಂತೆ ಆಗಿದೆ.

ಈ ಎಲ್ಲಾ ವೈಫಲ್ಯದ ಪ್ರಮಾಣವು ದಿಗ್ಭ್ರಮೆಗೊಳಿಸುವಂತಿದೆ.  ಆದರೆ ಆಶ್ಚರ್ಯಗೊಳ್ಳುವಂತಹದ್ದೇನೂ ಇಲ್ಲ. ಅಹಮದಾಬಾದ್ ನಗರದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಅಭಿವೃದ್ಧಿಯ “ಮಾದರಿ ನಗರ” ಎಂದು ಬಹಳ ಹಿಂದಿನಿಂದಲೂ ಬಿಂಬಿಸಲಾಗುತ್ತಿದೆ.  ಆದರೆ ಈ ದುರಂತದಿಂದಾಗಿ ಮೋದಿಯವರ ಸ್ವಂತ ಹಿತ್ತಲಿನಲ್ಲಿ ಆ “ಅಭಿವೃದ್ಧಿ” ಎಂದರೆ ಏನು ಎಂಬುದನ್ನು ನಾವು ಕಾಣುತ್ತಿದ್ದೇವೆ. 2022ರಲ್ಲಿ ಘೋಷಿಸಲ್ಪಟ್ಟ ಮತ್ತು ಅಹಮದಾಬಾದ್‌ನ ದಟ್ಟಣೆ ಬಿಕ್ಕಟ್ಟಿಗೆ ಪರಿಹಾರವೆಂದು ಹೇಳಲಾದ ಧೋಲೆರಾದಲ್ಲಿ ಭರವಸೆ ನೀಡಿದ ಎರಡನೇ ವಿಮಾನ ನಿಲ್ದಾಣವನ್ನು ಈಗ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿತ್ತು. ಅದರ ರನ್‌ವೇಗಳು ಇನ್ನೂ ಅಸ್ತಿತ್ವದಲ್ಲಿಲ್ಲದ ಕಾರಣ ಅಲ್ಲಿಂದ ಒಂದು ವಿಮಾನವು ಹಾರಾಟ ನಡೆಸಿಲ್ಲ.

ಗುಜರಾತ್‌ನವರಾದ ಗೃಹ ಸಚಿವ ಅಮಿತ್ ಶಾ ಅವರು ತಾವು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ನಗರದಲ್ಲಿ ಸುರಕ್ಷತೆಗಾಗಿ ಹೊಸತೇನನ್ನೂ ಮಾಡಿಲ್ಲ. ಈ ದುರಂತದಲ್ಲಿ ನಿಧನರಾದವರಲ್ಲಿ ಒಬ್ಬರಾದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಈ ರೂಪಾನಿಯವರಿಗೆ ಈ ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಸರಿಪಡಿಸಲು ಈ ಹಿಂದೆ ಅಧಿಕಾರದಲ್ಲಿದ್ದಾಗ ಅವಕಾಶವಿತ್ತು. ಅವರು 2016 ರಿಂದ 2021 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದಕ್ಕಿಂತ ದೊಡ್ಡ ದೋಷಾರೋಪಣೆ ಇನ್ನೇನು ಇರಲು ಸಾಧ್ಯ? ಅಭಿವೃದ್ಧಿಯನ್ನು ಕಡೆಗಣಿಸಿದಾಗ ಇದೆಲ್ಲಾ ಸಂಭವಿಸುತ್ತದೆ. ಇದು ದೇವರು ಮಾಡಿದ ದುರಂತವಲ್ಲ. ಇದು ಮಾನವ ನಿರ್ಮಿತ ದುರಂತ. ಈ ವಿಮಾನ ನಿಲ್ದಾಣದ ಲೋಪದೋಷಣಗಳ ಕುರಿತು ಬಂದ ವರದಿಗಳನ್ನು ನಿರ್ಲಕ್ಷಿಸುವುದರಿಂದ ಉಂಟಾಗಿದೆ. ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ನಿರ್ಮಿಸಲು ಆದ್ಯತೆ ನೀಡುವ ಬದಲು ಈ ವಿಮಾನ ನಿಲ್ದಾಣದ ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿತ್ತು.

ನಾವು 241 ಜನರ ಸಾವಿಗೆ ಮೌನವಾಗಿ ದುಃಖಿಸಬಾರದು. ಇದಕ್ಕಾಗಿ ನಾವೆಲ್ಲಾ ಗುಜರಾತ್ ಸರ್ಕಾರವನ್ನು ಹೊಣೆ ಮಾಡಬೇಕು. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ಅಮಿತ್ ಶಾ ಕೂಡ ಉತ್ತರಿಸಬೇಕು. ಇಷ್ಟು ಮಾತ್ರವಲ್ಲದೇ  3,000 ಕೋಟಿ ರೂ. ಟರ್ಮಿನಲ್ ವಿಸ್ತರಣಾ ಯೋಜನೆಗಾಗಿ ಘೋಷಿಸಿದ, ಆದರೆ ರನ್‌ವೇ ಸುರಕ್ಷತೆಯ ಮೂಲ ಸಮಸ್ಯೆಯನ್ನು ಪರಿಹರಿಸಲು ಏನನ್ನೂ ಮಾಡದ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ ಕೂಡ ಉತ್ತರಿಸಬೇಕು. ಸುರಕ್ಷತಾ ವರದಿಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದ ಪ್ರತಿಯೊಬ್ಬ ಅಧಿಕಾರಿಯೂ ಉತ್ತರಿಸಬೇಕು.  ಹಾಗೆಯೇ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸದ ಮಾಧ್ಯಮ ಸಂಸ್ಥೆಗಳು ಕೂಡ ಇದಕ್ಕೆ ಹೊಣೆ ಹೊರಬೇಕು. ಈ ರೀತಿ ವಿಮಾನ ಅಪಘಾತಕ್ಕೆ ಪರೋಕ್ಷವಾಗಿ ಇವರೆಲ್ಲರೂ ಕಾರಣವಾಗಿರುವುದರಿಂದ ಉತ್ತರಿಸಬೇಕಿದೆ.

ನಾವು ಜಾಗತಿಕ ಶಕ್ತಿಯಾಗುವ ಬಗ್ಗೆ ಮಾತನಾಡುತ್ತೇವೆ. ಆದರೆ ಗುಜರಾತ್ ರಾಜಧಾನಿಯಲ್ಲಿ ಸಾಕಷ್ಟು ಅಗ್ನಿಶಾಮಕ ವಾಹನಗಳಿಲ್ಲ. ಈ ವಿಮಾನ ನಿಲ್ದಾಣದ ರನ್‌ವೇಗಳು ಕೊಳೆಗೇರಿಗಳಿಂದ ಸುತ್ತುವರೆದಿವೆ. ಇಲ್ಲಿಗೆ ಇಷ್ಟು ಸಾಕು. ಆಡಳಿತದಲ್ಲಿ ಯಾವುದೇ ಘನತೆ ಉಳಿದಿದ್ದರೆ, ಪತ್ರಿಕೋದ್ಯಮದಲ್ಲಿ ಯಾವುದೇ ಜವಾಬ್ದಾರಿ ಉಳಿದಿದ್ದರೆ ಮತ್ತು ಸಾರ್ವಜನಿಕರಲ್ಲಿ ಯಾವುದೇ ಧೈರ್ಯ ಉಳಿದಿದ್ದರೆ, ಇದು ಹ್ಯಾಶ್‌ಟ್ಯಾಗ್‌ಗಳೊಂದಿಗೆ ಕೊನೆಗೊಳ್ಳಬಾರದು. ಇದು ಕೆಲವರ ರಾಜೀನಾಮೆಗಳೊಂದಿಗೆ ಕೊನೆಗೊಳ್ಳಬೇಕು. ತನಿಖೆಗಳು, ವಿಚಾರಣೆಗಳು, ವಿಮಾನ ನಿಲ್ದಾಣದ ಸುಧಾರಣೆಗಳು ನಡೆಯಬೇಕು.

ಇದನ್ನು ಸಾಕಷ್ಟು ಕೋಪದಲ್ಲಿ ಬರೆಯಲಾಗಿದೆ ಮತ್ತು ನೀವು ಇದನ್ನು ಅಹಮದಾಬಾದ್, ಅಥವಾ ಲಂಡನ್, ಅಥವಾ ದೆಹಲಿ ಅಥವಾ ಎಲ್ಲಿಯೇ ಓದುತ್ತಿದ್ದರೆ, ಇದನ್ನು ತಿಳಿದುಕೊಳ್ಳಿ: ಇದೇ ರೀತಿ ಮುಂದಾಗುವ ದುರಂತದಲ್ಲಿ ನೀವು ಸಿಲುಕಬಹುದು.

ಮತ್ತು ನಾನು ಹೇಳಿದ್ದರಲ್ಲಿ ಯಾವುದು ಬದಲಾಗದಿದ್ದರೆ, ಮುಂದಿನ ಬಾರಿಯ ದುರಂತ ಬೇರೆ ರೀತಿಯದ್ದಾಗಿರಬಹುದು.

ರಾಹುಲ್ ಗಾಂಧಿಯ ‘ಟ್ರಂಪ್‌ಗೆ ಮೋದಿ ಶರಣು’ ಹೇಳಿಕೆ v/s ಸಿಂಗ್ ಪ್ರಧಾನಿಯಾಗಿದ್ದಾಗ ಮೋದಿಯ ಹೇಳಿಕೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...