ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರು ಕೆನಡಾದ ಟೊರೊಂಟೊದ ಹಾಟ್ ಡಾಕ್ಸ್ ಫೆಸ್ಟಿವಲ್ನಲ್ಲಿ ‘2022 ರ ಅತ್ಯುತ್ತಮ ಸಾಧನೆ ಪ್ರಶಸ್ತಿ’ಯನ್ನು ಸ್ವೀಕರಿಸಲಿದ್ದಾರೆ. ತಮ್ಮ ಕಾರ್ಯವೈಖರಿಗಾಗಿ ಅವರು ಈ ಗೌರವಕ್ಕೆ ಬಾಜನರಾಗಿದ್ದರೆ. ಕಾರ್ಯಕ್ರಮದಲ್ಲಿ ಹಿಂದುತ್ವ ಮತ್ತು ಬಹುಸಂಖ್ಯಾತವಾದದ ಕುರಿತ ಅವರ ಕೆಲವು ಚಲನಚಿತ್ರಗಳನ್ನು ಪ್ರದರ್ಶಿಸಲಾತ್ತದೆ.
ಏಪ್ರಿಲ್ 28 ರಂದು ಪ್ರಾರಂಭವಾಗಲಿರುವ ಹಾಟ್ ಡಾಕ್ಸ್ ಫೆಸ್ಟಿವಲ್, ಉತ್ತರ ಅಮೆರಿಕಾದಲ್ಲಿ ಅತಿದೊಡ್ಡ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವವಾಗಿದೆ. ಅಲ್ಲದೆ ಈ ಕಾರ್ಯಕ್ರಮವು ಆಸ್ಕರ್ಗಾಗಿ ಸಾಕ್ಷ್ಯಚಿತ್ರಗಳ ಅರ್ಹತಾ ಕಾರ್ಯಕ್ರಮವು ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
72 ವರ್ಷ ವಯಸ್ಸಿನ ಚಲನಚಿತ್ರ ನಿರ್ಮಾಪಕರಾದ ಆನಂದ್ ಅವರು ತಮ್ಮ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳಾದ, ಸ್ಲಂ ನಿವಾಸಿಗಳ ಕುರಿತ ‘ಬಾಂಬೆ: ಅವರ್ ಸಿಟಿ’ (1985), ಪಂಜಾಬ್ ಬಂಡಾಯದ ಕುರಿತ ‘ಇನ್ ಮೆಮೊರಿ ಆಫ್ ಫ್ರೆಂಡ್ಸ್’ (1990), ಬಾಬರಿ ಮಸೀದಿ ಧ್ವಂಸದ ಕುರಿತ ‘ಇನ್ ದ ನೇಮ್ ಆಫ್ ಗಾಡ್’ (1992), ಹಿಂದುತ್ವದ ಕುರಿತ ಫಾದರ್, ‘ಸನ್ ಆಂಡ್ ಹೋಲಿ ವಾರ್’ (1995), ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದ 1998 ರ ಪರಮಾಣು ಪರೀಕ್ಷೆಗಳ ಕುರಿತ, ‘ವಾರ್ ಆಂಡ್ ಪೀಸ್’ (2002) ಮೇಲೆ ಮತ್ತು 1997 ರ ಮುಂಬೈನಲ್ಲಿ ದಲಿತರ ಮೇಲೆ ನಡೆದ ಪೋಲಿಸ್ ಗುಂಡಿನ ದಾಳಿಯ ಕುರಿತ ‘ಜೈ ಭೀಮ್ ಕಾಮ್ರೇಡ್’ (2011) ಗೆ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್ಬಂದಿಯ ಆಖಾಡ!
ಹಾಟ್ ಡಾಕ್ಸ್ ಫೆಸ್ಟಿವಲ್ನಲ್ಲಿ ಆನಂದ್ ಅವರ ‘ಫಾದರ್, ಸನ್ ಅಂಡ್ ಹೋಲಿ ವಾರ್’ ಮತ್ತು ‘ವಾರ್ ಅಂಡ್ ಪೀಸ್’ ಜೊತೆಗೆ, ಕೆನಡಾದ ರೈತರ ಕುರಿತ ಅವರ 1981 ರ ಸಾಕ್ಷ್ಯಚಿತ್ರವಾದ ‘ಎ ಟೈಮ್ ಟು ರೈಸ್’ ಮತ್ತು ಭಾರತದಲ್ಲಿನ ಸಂಖ್ಯಾತವಾದದ ಇತಿಹಾಸದ ಕುರಿತ ಅವರ ಇತ್ತೀಚಿನ ಚಲನಚಿತ್ರ ‘ರೀಸನ್’ (2018) ಅನ್ನು ಕೂಡಾ ಪ್ರದರ್ಶಿಸಲಾಗುತ್ತದೆ.
“ಇಂತಹ ಪ್ರಶಸ್ತಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ವೀಕ್ಷಕರನ್ನು ಹೆಚ್ಚಿಸುತ್ತದೆ. ಆದರೆ ಜನರು ಏನು ನೋಡಬೇಕು ಮತ್ತು ಏನು ನೋಡಬಾರದು ಎಂಬುದನ್ನು ನಿಯಂತ್ರಿಸಲು ಬೇಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಆಡಳಿತದ ಅಡಿಯಲ್ಲಿ ನಾವು ವಾಸಿಸುತ್ತೇವೆ” ಎಂದು ಆನಂದ್ ಅವರು ದಿ ಟೆಲಿಗ್ರಾಫ್ಗೆ ಹೇಳಿದ್ದಾರೆ.
ಆನಂದ್ ಅವರ ಚಲನಚಿತ್ರಗಳ ಪ್ರದರ್ಶನಕ್ಕೆ ಬಿಜೆಪಿ ಪ್ರೇರಿತ ಸಂಘ ಪರಿವಾರದ ಗುಂಪುಗಳು ಆಗಾಗ್ಗೆ ಅಡ್ಡಿಪಡಿಸುತ್ತಿವೆ. ದೂರದರ್ಶನದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ಅರ್ಹತೆ ಇದ್ದು ಕೂಡಾ ಅದರ ಪ್ರದರ್ಶನಕ್ಕೆ ಅವರು ಹಲವಾರು ಬಾರಿ ನ್ಯಾಯಾಲಯಕ್ಕೆ ಹೋಗಬೇಕಾಯಿತು.
“ಒಂದೆಡೆ ಈ ದೇಶದ ಪ್ರಧಾನಿ ದಿ ಕಾಶ್ಮೀರ್ ಫೈಲ್ಸ್ನಂತಹ ಚಲನಚಿತ್ರದ ಮಾರಾಟದ ಏಜೆಂಟ್ನಂತೆ ವರ್ತಿಸುತ್ತಾರೆ. ಆಡಳಿತವು ಈ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗುವುದನ್ನು ಖಚಿತಪಡಿಸುತ್ತದೆ. ಮತ್ತೊಂದೆಡೆ, ‘ಯೂನಿವರ್ಸಲ್'(ಎಲ್ಲರೂ ನೋಡಬಹುದಾದಂತಹ) ವೀಕ್ಷಣೆಗೆ ಅವಕಾಶ ನೀಡುವ ಸೆನ್ಸಾರ್ ಪ್ರಮಾಣ ಪತ್ರಗಳನ್ನು ಗೆದ್ದ ನನ್ನ ಹಳೆಯ ಚಲನಚಿತ್ರಗಳ ಪ್ರದರ್ಶನಗಳ ಮೇಲೆ ಗೂಂಡಾಗಳು ದೈಹಿಕವಾಗಿ ದಾಳಿ ಮಾಡುತ್ತಾರೆ. ಈ ಸಂದರ್ಭಗಳಲ್ಲಿ, ಹಾಟ್ ಡಾಕ್ಸ್ ಪ್ರಶಸ್ತಿಯು ಪ್ರಪಂಚದಾದ್ಯಂತ ಮೌನವಾಗಿ ಬೆದರಿಸಲು ನಿರಾಕರಿಸುವ ಚಲನಚಿತ್ರಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಜನರಿದ್ದಾರೆ ಎಂಬುದಕ್ಕೆ ದೃಢೀಕರಣವಾಗಿದೆ” ಎಂದು ಆನಂದ್ ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿಲ್ಲವೆಂದ ಯುಪಿ ಸರ್ಕಾರ
2019 ರ ಕೇರಳದ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರು ಚಲನಚಿತ್ರೋತ್ಸವದಲ್ಲಿ ಆನಂದ್ ಅವರ ‘ರೀಸನ್’ ಪ್ರದರ್ಶನವನ್ನು ಒಕ್ಕೂಟ ಸರ್ಕಾರ ಸ್ಥಗಿತಗೊಳಿಸಿತ್ತು. ಈ ಚಲನಚಿತ್ರೋತ್ಸವವು ಆಸ್ಕರ್ಗೆ ಅರ್ಹತೆ ಪಡೆಯುವ ಏಕೈಕ ಭಾರತೀಯ ಫಿಲ್ಮ್ ಫೆಸ್ಟಿವಲ್ ಆಗಿದೆ.
ಪಿಲ್ಮ್ ಫೆಸ್ಟಿವಲ್ನ ಆಯೋಜಕರಾಗಿದ್ದ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಮತ್ತು ಆನಂದ್ ಅವರು ಕೇರಳ ಹೈಕೋರ್ಟ್ಗೆ ಈ ಬಗ್ಗೆ ಅರ್ಜಿ ಸಲ್ಲಿಸಿ, ಚಲನ ಚಿತ್ರವನ್ನು ಪ್ರದರ್ಶಿಸುವ ಹಕ್ಕನ್ನು ಗೆದ್ದಿದ್ದರು. ಇದರ ನಂತರ ಈ ಚಿತ್ರವು ಲಾಂಗ್ ಡಾಕ್ಯುಮೆಂಟರಿ ವಿಭಾಗದಲ್ಲಿ ರನ್ನರ್ ಅಪ್ ಆಗಿತ್ತು.
2020 ರ ಮುಂಬೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ಗೆ ಇದನ್ನು ಆಯ್ಕೆ ಮಾಡಲಾಗಿರಲಿಲ್ಲ. ಒಕ್ಕೂಟ ಸರ್ಕಾರವು ಈ ಚಿತ್ರಕ್ಕೆ “ಹಿಂಬಾಗಿಲಿನ ಮೂಲಕ ಸೆನ್ಸಾರ್ ಶಿಪ್” ಮಾಡುತ್ತಿದೆ ಎಂದು ಆನಂದ್ ಆರೋಪಿಸಿದ್ದರು.
2019 ರಲ್ಲಿ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಅನುಮತಿ ನಿರಾಕರಣೆ ಮತ್ತು ಮಧ್ಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ ಸಹ ಹಿಂದಿಯಲ್ಲಿ ‘ರಾಮ್ ಕೆ ನಾಮ್’ ಎಂದು ಕರೆಯಲ್ಪಡುವ ‘ಇನ್ ದಿ ನೇಮ್ ಆಫ್ ಗಾಡ್’ ಅನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಇಷ್ಟೆ ಅಲ್ಲದೆ, ಅನುಮತಿ ನಿರಾಕರಣೆ ನಡುವೆಯೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ವರ್ಷ ಈ ಚಿತ್ರವನ್ನು ಪ್ರದರ್ಶಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಮತ್ತೆ ನಾಲಗೆ ಹರಿಬಿಟ್ಟ ಯತಿ ನರಸಿಂಗಾನಂದ; ಎಫ್ಐಆರ್


