Homeಮುಖಪುಟಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! - ಬಿ.ಚಂದ್ರೇಗೌಡ

ಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! – ಬಿ.ಚಂದ್ರೇಗೌಡ

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಉತ್ತರಗಳು ಸಿಕ್ಕಿದವು.

- Advertisement -
- Advertisement -

ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ, ಭಾಗವಹಿಸುತ್ತಿರುವ ಸಾಹಿತಿಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಘಟನೆ ಅವರ ಪ್ರಜ್ಞೆಯನ್ನು ಕೆಣಕಿದರೆ ಶುಭ ಸೂಚನೆ ಎಂದು ಭಾವಿಸಬಹುದು. ಇವತ್ತು ಶೃಂಗೇರಿ ಘಟನೆ ನಾಳೆ ಬೆಂಗಳೂರು ಸಾಹಿತ್ಯ ಪರಿಷತ್‌ಗೂ ಸಂಭವಿಸಬಹುದು. ಆಗ ಮನುಬಳಿಗಾರ್ ತರಹದವರು ಏನೂ ಮಾಡಲಾಗುವುದಿಲ್ಲ ಆದ್ದರಿಂದ, ಈ ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆಯಾಗಿ ಉಳಿಯುವುದರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ.

ವಾಸ್ತವವಾಗಿ ಶೃಂಗೇರಿ ಘಟನೆ ನಮ್ಮ ಸಾಹಿತಿಗಳನ್ನು ಕೆರಳಿಸಿ ಪ್ರತಿಭಟನೆ ಇತ್ಯಾದಿ ಚಟುವಟಿಕೆ ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ಅವರೆಲ್ಲಾ ಕಲ್ಬುರ್ಗಿಯ ವಸತಿ, ಪ್ರಯಾಣಭತ್ಯೆ, ಊಟದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿರಬಹುದು. ಕೆಲವೇ ಕೆಲವು ದಿಟ್ಟ ಸಾಹಿತಿಗಳು ಮಾತ್ರ ನಿಜವಾಗಿ ಪ್ರತಿಭಟನಾ ಹೇಳಿಕೆ ಕೊಟ್ಟರು.

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಕಾರಣಗಳು ಸಿಕ್ಕಿದವು. ಅವರು ವಾಸವಾಗಿರುವ ಪ್ರದೇಶದ ಮಠ ಸ್ವಜಾತಿಯ ಹಿತ ಕಾಪಾಡುವುದಕ್ಕೆ ಮೀಸಲಾದ ಮಠ. ಅಂದರೆ ಸ್ವಜಾತಿಯ ಸಾಮಾನ್ಯ ಮನೆಕಟ್ಟಿಕೊಳ್ಳುತ್ತಿದ್ದರೆ, ಇಟ್ಟಿಗೆ ಸಿಮೆಂಟು ಮರಮುಟ್ಟುಗಳನ್ನು ಪೂರೈಸಿ ಸ್ವಜಾತಿಬಂಧುವಿಗೆ ಸಹಾಯ ಮಾಡುವ ಮಠ. ಜೊತೆಗೆ ಅವರ ಮಕ್ಕಳಿಗೆ ಶಾಲಾಕಾಲೇಜಿಗೆ ಫೀಜು ಕಟ್ಟುತ್ತ ವಿದೇಶಿ ಓದಿಗೂ ಸಹಾಯ ಮಾಡುವ ಮಾತೃಸಂಸ್ಥೆ.

ಈ ರೂಪದಲ್ಲಿರುವ ಬ್ರಾಹ್ಮಣ ಮಠಗಳಲ್ಲಿ ಇದು ಮೊದಲನೆಯದು ಆದರೆ ಲಿಂಗಾಯತ ಮತ್ತಿತರ ಜಾತಿ ಮಠಗಳು ಎಲ್ಲಾ ಜನಾಂಗದ ಹಿತ ಕಾಯುತ್ತವೆ. ಉದಾಹರಣೆಗೆ ಸಿದ್ದಗಂಗೆ ಆವರಣದಲ್ಲಿ ಆಡುವ ಮಕ್ಕಳನ್ನು ವಿಚಾರಿಸಿದರೆ ಅವರೆಲ್ಲಾ ಕೆಳಜಾತಿ ಬಡವರ ಮಕ್ಕಳು, ಹಾಗೆಯೇ ಚುಂಚನಗಿರಿ ಮಠದಲ್ಲಿ ಓದುತ್ತಿರುವ ಮಕ್ಕಳನ್ನ ಕೇಳಿದರೆ ಅವರೂ ಕೂಡ ಒಂದೇ ಜಾತಿಗೆ ಸೀಮಿತವಾಗದ ಬಡವರ್ಗದ ಮಕ್ಕಳು. ಆದರೆ ಬ್ರಾಹ್ಮಣ ಮಠಗಳು ತಮ್ಮವರ ಹಿತಕಾಯುವ ಮಠ. ದುರಂತವೆಂದರೆ ದಡ್ಡ ಶೂದ್ರರ ಕಾಣಿಕೆ ಹೇರಳವಾಗಿ ಹರಿದುಬರುವುದು ಈ ಪುರೋಹಿತರ ಮಠಗಳಿಗೆ. ರಾಜಕಾರಣಿಗಳ ನಿಧಿ ಹರಿದು ಬರುವುದು ಇಲ್ಲಿಗೆ.

ಇಂತಹದನ್ನು ಗುರುತಿಸುತ್ತ ಮುಖ್ಯವಾಗಿ ಬ್ರಾಹ್ಮಣರೆಂದರೆ ಯಾರು, ಶೂದ್ರರ ಆಚರಣೆಗಳೇನು ಎಂದು ವಿಂಗಡಿಸಿ ತೋರುವ ವಿಠಲ ಹೆಗಡೆ ಮಠಗಳ ಪರಮವೈರಿ; ಜೊತೆಗೆ ಆರೆಸೆಸ್ ಭಜರಂಗಿ ವಿಶ್ವಹಿಂದೂಗಳ ಹಿಕಮತ್ತನ್ನು ವಿರೋಧಿಸುವ ಹೆಗಡೆಯನ್ನು ಗೌಡರ ಹುಡುಗನಾಗಿ ಪರಿಗಣಿಸದೆ, ನಕ್ಸಲ್ ಹಣೆಪಟ್ಟಿ ಕಟ್ಟಿ ಜನರ ವಿರುದ್ಧ ಎತ್ತಿ ಕಟ್ಟಲು ಪುರೋಹಿತರು ಕಂಡುಕೊಂಡ ಕುಯುಕ್ತಿಯಿದು. ಏಕೆಂದರೆ ಮಠದ ಮರ್ಯಾದೆಯನ್ನು ತನ್ನ ಮಂಗನಬೇಟೆಯಲ್ಲಿ ಹರಾಜು ಹಾಕಿರುವ ಈತ, ಎಂದೂ ಕ್ಷಮಿಸದ ಸಾಹಿತಿಯಾಗಿದ್ದಾನೆ. ಸಾಹಿತಿಯಾದವನು ಸತ್ಯ ಹೇಳಬೇಕು, ಅದನ್ನ ಹೇಳಿದ್ದಕ್ಕೆ ಸಮಯ ಕಾಯತ್ತಿದ್ದ ಬ್ರಾಹ್ಮಣರು, ಮತ್ತೊಬ್ಬ ಒಕ್ಕಲಿಗ ಸಿ.ಟಿ.ರವಿ ಎಂಬುವನ ಹೆಗಲ ಮೇಲೆ ಗನ್ನಿಡಿದು ಉಡಾಯಿಸಿವೆ. ಆದರೆ ಗನ್ನಿನಲ್ಲಿದ್ದದ್ದು ಗುಂಡಲ್ಲ ಬರಿ ಪುಡಿ ಅಷ್ಟೇ.

ಮಂಗನಬ್ಯಾಟಿಯಲ್ಲಿ ದಾಖಲಾಗಿರುವ ಪ್ರಕರಣ ಒಂದು ಹೀಗಿದೆ. ಮಠಕ್ಕೆ ಪ್ರವಾಸಿ ಹೆಂಗಸೊಬ್ಬಳು ಬಂದಿದ್ದಳು; ಅವಳು ಹೊಳೆಯಲ್ಲಿ ಸ್ನಾನ ಮಾಡುವುದು ಮಠದ ಉಗ್ರಾಣದ ಕಿಟಕಿಯಲ್ಲಿ ಕಾಣುತ್ತಿತ್ತು. ನೀರಲ್ಲಿ ಮುಳುಗಿದನಂತರ ಆಕೆಯ ತೆಳುವಾದ ಸೀರೆ ಮೈಗಂಟಿಕೊಂಡು, ಆಕೆಯ ದೇಹಾಕೃತಿಯನ್ನು ಉನ್ಮತ್ತಗೊಳಿಸಿದವು. ಮಠದ ಭಕ್ತಾದಿಗಳಿಗೆ ಸಾಕ್ಷಾತ್ ಶಾರದೆಯೇ ಬಂದು ಮೀಯುತ್ತಿರುವಂತೆ ಕಂಡರೆ, ಮಠದ ಕಾಮುಕರಿಗೆ ಅಂದರೆ ಮಠದ ಮುಖ್ಯಸ್ಥರಿಗೆ ಹಾಗೆ ಕಾಣಲಿಲ್ಲ. ಅವರು ಪುಣ್ಯಕ್ಷೇತ್ರದಲ್ಲಿದ್ದರೂ ನಿರ್ಭಯಾಳನ್ನು ಮುಗಿಸಿದ ಕಾಮುಕರಂತಾದರು, ಆಗ ಅವರು ಮಾಡಿದ ಉಪಾಯವೆಂದರೆ, ಸ್ನಾನ ಮುಗಿಸಿದ ಆ ಹೆಂಗಸು ಬಟ್ಟೆ ಬದಲಿಸಬೇಕಿತ್ತು. ಅದಕ್ಕೆ ಉಗ್ರಾಣದಲ್ಲಿಯೇ ಅವಕಾಶ ಮಾಡಿಕೊಟ್ಟರು ಪಾಪ ಆಕೆ ಪುಣ್ಯಕ್ಷೇತ್ರದಲ್ಲಿ ಕಾಮುಕರಿರುವುದಿಲ್ಲ ಎಂದು ಭಾವಿಸಿ ಒದ್ದೆ ಬಟ್ಟೆಯಲ್ಲೇ ಮುಗ್ಧವಾದಿ ಉಗ್ರಾಣ ಸೇರಿದಳು ಇದೀಗ ತಾನೆ ತನ್ನ ಕುಟುಂಬದಂತೆ ಕಂಡಿದ್ದ ದೈತ್ಯ ಜನಿವಾರಿಗಳು, ಹಠಾತ್ತನೆ ಅವಳ ಮೇಲೆರಗಿ ಬಾಯಿಗೆ ಬಟ್ಟೆ ತುರುಕಿ, ಆಕೆಯನ್ನ ಬಲಾತ್ಕಾರವಾಗಿ ಕೆಡಿಸಿ ಕೈಕಾಲು ಕಟ್ಟಿ ಉಗ್ರಾಣಕ್ಕೆ ಬೀಗ ಹಾಕಿ ಹೊರಟುಹೋದರು. ಆ ಮಠದ ಗುರುಗಳು ತಮ್ಮ ಸುತ್ತ ಏನು ನಡೆಯುತ್ತದೆ ಎಂಬುದನ್ನ ಅರಿಯದ ಮುಗ್ಧರು. ಕಾಮುಕರಿಗೆ ಇದೇ ವರದಾನವಾಯ್ತು.

ಇಡೀ ಮಠದ ಆಡಳಿತವನ್ನ ಕೈಗೆತ್ತಿಕೊಂಡು ಅದನ್ನ ಉನ್ನತ ಸ್ಥಿತಿಗೆ ತಂದಿದ್ದ ಘನಪಾಟಿ ಎಂಬಾತ, ತನ್ನ ಕೃತ್ಯದ ನಂತರ ಜನಿವಾರ ಬದಲಾಯಿಸಿ ಸ್ನಾನಮಾಡಿ ಕ್ರೌರ್ಯದ ನಂತರ ಮೂಡುವ ಸಂತೃಪ್ತತೆಯನ್ನು ಅನುಭವಿಸುತ್ತ, ತಾನು ಮಾಡಿದ ಸಾಹಸಕ್ಕೆ ಅಮಲ್ದಾರ ಶಂಕರಶಾಸ್ತ್ರಿಗಳನ್ನ ಕರೆಸಿಕೊಂಡು ವಿಷಯ ತಿಳಿಸಿದರು. ಹಸಿದ ದಾಸಾಚಾರಿಯಾಗಿದ್ದ ಶಂಕರಶಾಸ್ತ್ರಿ ಉಗ್ರಾಣಕ್ಕೆ ಗೂಳಿಯಂತೆ ನುಗ್ಗಿ, ಪ್ರಜ್ಞೆ ಕಳೆದುಕೊಂಡಿದ್ದ ಆ ಮಹಿಳೆಯನ್ನ ಮನಸೋಇಚ್ಛೆ ಭೊಗಿಸಿ ಬಂದನು, ಮಠದ ಗಣ್ಯಾತಿಗಣ್ಯರೇ ಮೀಸಲು ಉಂಡಮೇಲೆ ಇನ್ನುಳಿದ ನಗಣ್ಯರು ಸುಮ್ಮನಿದ್ದಾರೆಯೇ, ಅವರೂ ಮೃಗಗಳಾದರು. ಆಣತಿ ದೂರದಲ್ಲೇ ಸುಂದರವಾದ ಶಾರದಾದೇವಿಯ ಪೂಜಾಮೂರ್ತಿಯಿದ್ದು ಆಕೆಯ ಪ್ರತಿರೂಪದಂತಿದ್ದ ಆ ಮಹಿಳೆಗೆ ಆದ ಆಘಾತವೆಂದರೆ, ಆಕೆ ಯಾವಾಗ ಪ್ರಜ್ಞೆ ಕಳೆದುಕೊಂಡಳೊ ಏನೊ ಅದು ಅತ್ಯಾಚಾರಿಗಳಿಗೆ ವರದಾನವಾಯ್ತು.

ಉಗಾಣದ ಪಾಸಾಲೆಯನ್ನು ಕಾಯುತ್ತಿದ್ದ ಶೂದ್ರ ಭೈರ ಗಮನಿಸಿದಂತೆ, ಉಗ್ರಾಣದೊಳಕ್ಕೆ ಹೋಗುತ್ತಿದ್ದ ವಿಪ್ರೋತ್ತಮರು ಬರುವಾಗ ಕೆಲಸ ಮುಗಿಸಿದ ನಾಯಿಯಂತೆ ಓಡಿ ಬರುತ್ತಿದ್ದುದು ಕುತೂಹಲ ಮೂಡಿಸಿತು ಆದ್ದರಿಂದ ಅಲ್ಲಿ ಇಣುಕಿದವನಿಗೆ ಸತ್ಯ ಸಂಗತಿ ತಿಳಿಯಿತು. ಆದರೆ ಆಕೆ ಯಾರು ಎಂಬುದು ತಿಳಿಯಲಿಲ್ಲ. ಸಂಜೆಯಾಗುತ್ತಿದ್ದಂತೆ, ಹೊಳೆಗೆ ಸ್ನಾನಕ್ಕೆ ಬಂದಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತು. ಆಗ ಭೈರನಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅವರೇ ಎಂಬುದು ತಿಳಿಯಿತು. ಭೈರನಿಗೆ ಗೊತ್ತಾಯಿತು ಎಂದು ಘನಪಾಟಿಗಳಿಗೆ ಗೊತ್ತಾದ ಕೂಡಲೆ ಅವರು ಅವನನ್ನು ಕರೆಸಿಕೊಂಡು ಪ್ರೀತಿಯಿಂದ ಮಾತನಾಡಿಸಿದರು ಮತ್ತು ಒಳಕೋಣೆಗೆ ಕರೆದುಕೊಂಡು ಹೋದರು. ಭೈರನಿಗಿದು ಆಶ್ಚರ್ಯಕರ ಘಟನೆ ಕೂಡಲೇ ಘನಪಾಟಿ ತಗೊ ಭೈರಪ್ಪ ಎಂದು ಒಂದು ಪವನಿನ ಉಂಗುರ ಕೊಟ್ಟು, ಯಾರೋ ಗಂಡಬಿಟ್ಟ ಹೆಂಗಸು ಬಂದು ಹೊಳೆಯಲ್ಲಿ ಸ್ನಾನಮಾಡಿ ಕಾಣೆಯಾಗಿದ್ದಾಳೆ. ಆದರೆ ನಮ್ಮ ಉಗ್ರಾಣದಲ್ಲಿದ್ದಾಳಂತೆ ಕಿಲ್ಲೆದಾರ ನರಸಿಂಹ ಅವಧಾನಿ ನಿನ್ನ ಜೊತೆ ಇರ್ತಾರೆ ರಾತ್ರಿ ಹತ್ತು ಗಂಟೆಗೆ ನೀನು ಅವರೂ ಸೇರಿ ಮಠದ ಮರ್ಯಾದೆ ಉಳಿಸಬೇಕು ಎಂದು ಆಜ್ಞಾಪಿಸಿ ಭೈರನನ್ನು ಕಳಿಸಿಕೊಟ್ಟರು.

ಹತ್ತು ಗಂಟೆಗೆ ಸರಿಯಾಗಿ ಬಂದ ಕಿಲ್ಲೆದಾರ ನರಸಿಂಹ ಅವಧಾನಿ ಉಗ್ರಾಣದ ಬಾಗಿಲು ತೆಗೆದು ಅಲ್ಲಿ ಬಿದ್ದಿದ್ದ ಹೆಂಗಸನ್ನ ಎತ್ತಿಕೊಳ್ಳಲು ಭೈರನಿಗೆ ಹೇಳಿದ. ಭೈರ ಹಾಗೇ ಮಾಡಿದ ಅಲ್ಲಿಂದ ಅರ್ಚಕ ಕೃಷ್ಣಶರ್ಮರ ಬಾವಿ ಹತ್ತಿರ ತಂದು ಕಟ್ಟೆ ಮೇಲೆ ಕೂರಿಸಿ ಹಗ್ಗ ಬಿಗಿದು ಶವವನ್ನು ಬಾವಿಗೆ ಇಳೆಬಿಟ್ಟು ಆಕೆಯೇ ಆತ್ಮಹತ್ಯೆ ಮಾಡಿಕೊಂಡಂತೆ ಮಾಡಿದರು. ಆದರೆ ಭೈರನಿಗೆ ಆಕೆಯಲ್ಲಿನ್ನು ಜೀವವಿದ್ದ ಬಗ್ಗೆ ಅನುಮಾನ ಏಳೆಯಿತು! ಮರುದಿನ ಶವ ತೆಗೆದು ಪ್ರಕರಣವನ್ನ ಮುಚ್ಚಿಹಾಕಿದರು. ಏಕೆಂದರೆ ಇದು ಮಠದ ಮರ‍್ಯಾದೆ ಪ್ರಶ್ನೆಯಾಗಿತ್ತು. ಮುಂದೆ ಆಕೆಯ ಗಂಡನಿಗೆ ಮತಿಭ್ರಮಣೆಯಾಯ್ತು.

ಇದು ಕಲ್ಕುಳಿ ವಿಠ್ಠಲ ಹೆಗಡೆ ತಮ್ಮ ಮಂಗನ ಬ್ಯಾಟೆಯಲ್ಲಿ ದಾಖಲಿಸಿರುವ ಘಟನೆ. ಹಲವಾರು ಕಾರಣಗಳಿಗಾಗಿ ಮಂಗನಬ್ಯಾಟೆ ಮಲೆನಾಡನ್ನ ಕುರಿತು ಬರೆದ ಕುವೆಂಪು ತೇಜಸ್ವಿಯವರ ಕೃತಿಗಳ ನಂತರ ಮಹತ್ವ ಪಡೆದುಕೊಂಡಿದೆ. ಪ್ರಶಸ್ತಿಯನ್ನು ಪಡೆದಿದೆ. ಶೃಂಗೇರಿಯ ಊರ ಮಧ್ಯದಲ್ಲೇ ಇರುವ ವಿಠ್ಠಲಹೆಗಡೆಯನ್ನು ಏನೂ ಮಾಡಲಾಗದ ಪುರೋಹಿತಶಾಹಿಗಳು, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಅವರಿಗೆ ಸಿಕ್ಕ ಅವಕಾಶವೆಂದರೆ ಆತ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದಂತೆ ತಡೆಯುವುದಾಗಿತ್ತು. ಆದರೆ ಸಮ್ಮೇಳನ ನಡೆದೇ ತೀರುತ್ತದೆಂದಾಗ, ಇಡೀ ಶೃಂಗೇರಿಯನ್ನ ಬಂದ್ ಮಾಡಿಸಿದವು. ಬಲವಂತವಾಗಿ ಅಂಗಡಿ ಮುಂಗಟ್ಟಿನ ಬಾಗಿಲು ಹಾಕಿಸಿದವು. ಆಟೊ ಓಡಾಡದಂತೆ ನೋಡಿಕೊಂಡವು. ಪೊಲೀಸರು ಸಾಹಿತಿಗಳು ಮತ್ತು ಪುಂಡರ ನಡುವೆ ನಿಂತು, ಒಂದು ದಿನ ಮಾತ್ರ ಸಮ್ಮೇಳನ ನಡೆಯುವಂತೆ ನೋಡಿಕೊಂಡರು. ಈಗ ಗುಲ್ಬರ್ಗದಲ್ಲಿ ಸಮ್ಮೇಳನ ನಡೆಯುತ್ತಿರುವುದರ ಅಧ್ಯಕ್ಷರು ತುಂಬಾ ಬೇಜವಾಬ್ದಾರಿಯಿಂದ ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದಾರೆ. ಮನುಬಳಿಗಾರ್ ಸರ್ಕಾರಿ ಗುಮಾಸ್ತನಂತೆ ವರ್ತಿಸುತ್ತಿದ್ದಾರೆ. ಆದರೆ ಸತ್ಯಸಂಗತಿ ದಾಖಲಿಸುವ ಸಾಹಿತಿಗಳ ಅಭಿವ್ಯಕ್ತಿಗೆ ಗಂಡಾಂತರ ಬಂದಿರುವುದು ಯಾರ ಅರಿವಿಗೂ ಬಂದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುತೇಕ ಕನ್ನಡ ಸಾಹಿತಿಗಳು ಸ್ವಾಭಿಮಾನವನ್ನು ಮರೆತು, ಮನುವಾದಿಗಳ ಬಾಲಬಡುಕರಾಗಿದ್ದಾರೆ.

  2. ಸಾಹಿತಿಗಳು ಸತ್ಯವನ್ನ ಮರೆಮಾಚಿ, ಮನುವಾದಿಗಳ ಹೊಲಸು ತಿನ್ನುತ್ತ ಸುಳ್ಳನ್ನು ಸಮಾಜಕ್ಕೆ ನಾಚಿಕೆಗೇಡಿಗಳಾಗಿ ಪರಿಚಯಿಸಲು ಹೋಗಬಾರದು. ಏಕೆಂದರೆ; ಸಾಹಿತಿ ಸಮಾಜದ ಕಣ್ಣು ಅನ್ನುತ್ತಾತೆ ಅದನ್ನುವುಳಿಸಿಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...