Homeಅಂತರಾಷ್ಟ್ರೀಯಅಂಟಾರ್ಟಿಕದಲ್ಲೂ ಏರಿದ ತಾಪಮಾನ: ಕರಗುತ್ತಿವೆ ನೀರ್ಗಲ್ಲುಗಳು

ಅಂಟಾರ್ಟಿಕದಲ್ಲೂ ಏರಿದ ತಾಪಮಾನ: ಕರಗುತ್ತಿವೆ ನೀರ್ಗಲ್ಲುಗಳು

- Advertisement -
- Advertisement -

ಹಿಮಖಂಡವೆಂದು ಕರೆಯಲ್ಪಡುವ ದಕ್ಷಿಣ ದ್ರುವದಲ್ಲಿರುವ ಅಂಟಾರ್ಟಿಕದಲ್ಲಿ ಜನವಸತಿಯಿಲ್ಲ. ಮನುಷ್ಯ ವಾಸಕ್ಕೆ ಯೋಗ್ಯವಾದ ಅನುಕೂಲಕರವಾದ ಹವಮಾನವೂ ಇಲ್ಲ. ಉಷ್ಣಾಂಶ ಜೀರೋ ಡಿಗ್ರಿ ಸೆಲ್ಸಿಯಸ್‌ ಗಿಂತಲೂ ಕಡಿಮೆ ಅಥವಾ ಅದರ ಆಸುಪಾಸಿನಲ್ಲಿರುವ ನಿರ್ಜನ ಭೂಪ್ರದೇಶವೆಂದು ಅಂಟಾರ್ಟಿಕ ಪ್ರಖ್ಯಾತಿ ಪಡೆದಿದೆ. ಕೆಲವು ಸಾಹಸಿಗರು ಅಂಟಾರ್ಟಿಕಕ್ಕೆ ಪ್ರಯಾಣ ಬೆಳೆಸಿ ದಾಖಲೆ ನಿರ್ಮಿಸುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ನೋಡುತ್ತಿದ್ದೇವೆ. ಅಂತಹ ಹಿಮಖಂಡದಲ್ಲಿಯೂ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು, ನಿನ್ನೆ ಇತಿಹಾಸದಲ್ಲಿಯೇ ಅತಿಹೆಚ್ಚು ಉಷ್ಣಾಂಶ ದಾಖಲಾಗಿದೆ.

18.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಿನ್ನೆ ಅಂಟಾರ್ಟಿಕಾದಲ್ಲಿ ದಾಖಲಾಗಿದ್ದು ಇದು ಇದುವರೆಗೆ ಶೀತಖಂಡದಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶವಾಗಿದೆ. ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ಹವಾಮಾನ ಇಲಾಖೆ ಈ ವಿಷಯವನ್ನು ಬಹಿರಂಗಪಡಿಸಿದ್ದು, ಜಗತ್ತಿನಲ್ಲಿ ಅತಿ ವೇಗವಾಗಿ ಉಷ್ಣಾಂಶ ಏರಿಕೆಯಾಗುತ್ತಿರುವ ಪ್ರದೇಶದಲ್ಲಿ ಅಂಟಾರ್ಟಿಕ ಮೊದಲ ಸ್ಥಾನದಲ್ಲಿದೆ. ಕಳೆದ 50 ವರ್ಷಗಳಲ್ಲಿ ಇಲ್ಲಿನ ಸಾಮಾನ್ಯ ಉಷ್ಣಾಂಶದಲ್ಲಿ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿರುವುದು ಜಗತ್ತಿಗೆ ತೀವ್ರ ಆಂತಂಕವನ್ನು ತಂದೊಡ್ಡಿದೆ ಎಂದು ವಿಶ್ವ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಅಂಟಾರ್ಟಿಕಾದಲ್ಲಿ ಸತತವಾಗಿ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಕಾರಣ ವಾತಾವರಣದಲ್ಲಿ ಬದಲಾವಣೆ. ಭೂಮಿಯಲ್ಲಿನ ಕಾರ್ಬನ್ ಪ್ರಮಾಣ ಹೆಚ್ಚುತ್ತಿರುವ ಕಾರಣ ದಕ್ಷಿಣ ದ್ರುವ ಮತ್ತು ಉತ್ತರ ದ್ರುವದ ಅನೇಕ ಪ್ರದೇಶಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ತಾಪಮಾನ ದಾಖಲಿಸುತ್ತಿವೆ. ಅಂಟಾರ್ಟಿಕದಲ್ಲಿ ಉಷ್ಣಾಂಶ ಹೆಚ್ಚಿದಷ್ಟು ಸಮುದ್ರ ಮಟ್ಟ ಏರಿಕೆಯಾಗುತ್ತದೆ. ತಾಪಮಾನದಲ್ಲಿ ಇದೇ ರೀತಿಯ ಏರಿಕೆ ಮುಂದುವರೆದರೆ ನಿರ್ಗಡ್ಡೆಯಾದ ಅಂಟಾರ್ಟಿಕ ಮುಂದೊಂದು ದಿನ ಇಲ್ಲವಾಗಬಹುದು ಎಂದು ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಶೀತ ವಾತಾವರಣಕ್ಕೆ ಹೊಂದಿಕೊಂಡು ಸಾವಿರಾರು ವರ್ಷಗಳಿಂದ ಅಂಟಾರ್ಟಿಕದಲ್ಲಿ ನೆಲೆ ಕಂಡುಕೊಂಡಿರುವ ಅರೆ ಜಲವಾಸಿಗಳಾದ ಪೆಂಗ್ವಿನ್, ಹಿಮ ಕರಡಿ, ಹಿಮ ನಾಯಿ ಸೇರಿದಂತೆ ಮುಂತಾದ ಜಲಚರಗಳು ಏರುತ್ತಿರುವ ತಾಪಮಾನದಿಂದಾಗಿ ಅಪಾಯವನ್ನು ಎದುರಿಸುತ್ತಿವೆ. ಕೆಲವು ಪ್ರಾಣಿ ಸಂಕುಲಗಳಂತೂ ಅಳಿವಿನ ಅಂಚಿಗೆ ಬಂದು ತಲುಪಿವೆ ಎಂದು ವಿಶ್ವ ಹವಾಮಾನ ಸಂಸ್ಥೆಯ ತಜ್ಞರು ಕ್ಲೈಮೇಟ್ ಚೆಂಜ್‌ನಿಂದ ಉಂಟಾಗುವ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ… ಏಳುವುದೆಂತೋ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...