Homeಅಂಕಣಗಳುಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

- Advertisement -
- Advertisement -

ಹಂಗಾರ ಅಧಿಕಾರ ದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಸುದ್ದಿಯ ಮೂಲವೇ ಈ ಸಲದ ಸುದ್ದಿ. ಸುದ್ದಿ ಎಲ್ಲಿಂದ ಬರತದ ಅನ್ನೋದು ಬಲ್ಲಿರೇನಯ್ಯ? ಮೊನ್ನೆ ಏನಾತಪಾ ಅಂದರ ವಿಶ್ವದ ಅತಿ ಶ್ರೀಮಂತರ ಪೈಕಿ ಒಬ್ಬರಾದ ಜೆಫರಿ ಬೆಜೋಸ್ ಅನ್ನೋ ಅಮೇಜಾನ್ ಕಂಪನಿ ಮಾಲಿಕರು ದೆಹಲಿಗೆ ಬಂದಿದ್ದರು.

ಪ್ರತಿ ಸಾರಿ ಸಾಹುಕಾರರು ಬಂದಾಗ ಸರಕಾರಿ ಸಾಲಿಗೆ ಸಾಹೇಬರು ಬಂದಾಗ ಹುಡುಗರು ನೀಟಾಗಿ ಸಮವಸ್ತ್ರ ಹಕ್ಕೊಂಡು, ಸಾಲಾಗಿ ನಿಂತು ನಮಸ್ಕಾರ ಅಂತಾರಲ್ಲ, ಹಂಗ ಪ್ರಧಾನ ಮಂತ್ರಿ ಆದಿಯಾಗಿ ಎಲ್ಲ ಮಂತ್ರಿವರೇಣ್ಯರು ನಿಲ್ಲತಿದ್ದರು. ಐಟಿ, ಬಿಟಿ, ಕೋಟಿ, ಚೀಟಿ, ರೋಟಿ ಕಂಪನಿಗಳ ಮಾಲಿಕರು ಅವರ ಕೈಕುಲುಕಿ ನಮಗೊಂದಿಷ್ಟು ಕೂಲಿ ಕೊಡಿ ಅಂತ ಅಂತಿದ್ದರು. ಆದರ ಈ ಸಲೆ ಮಾತ್ರ ಮನಿಷಾನ್ನ ಯಾರು ಭೇಟಿ ಆಗಲಿಲ್ಲ. ಅವರು ನಮ್ಮ ದೇಶದಾಗ ಸಾವಿರ ಕೋಟಿ ಡಾಲರ್ ಬಂಡವಾಳ ಹೂಡಿ ಲಕ್ಷಾಂತರ ಜನರಿಗೆ ಉದ್ಯೋಗ ಕೊಡತೇನಿ ಅಂದರು. ಆದರೂ ಸಹಿತ ಯಾರೂ ಅವರ ಸಂಗತೆ ಮಾತಾಡಲಿಲ್ಲ. ಹೋಗಲಿ, ಕೇಂದ್ರ ಹಣಕಾಸು ಸಚಿವರು ಅವರು ಬಂಡವಾಳ ಹೂಡೋದೇನು ನಮ್ಮ ಮ್ಯಾಲ ಉಪಕಾರ ಮಾಡಲಿಕ್ಕೆ ಹತ್ತಿಲ್ಲ, ಅಂತ ಒಂದು ಡ್ಯಾಷ್ ಡ್ಯಾಷ್ ನೋಟ ಬೀರಿದರು. ಏ ಅಮ್ಮೀಜಾನ್, ಈ ಇಂಡಿಯಾಕ್ಕ ಹೋಗೋ ಐಡಿಯಾ ಕೊಟ್ಟವ ಯಾವಾನವಾ ಅಂತ ಅವರು ತಮ್ಮ ಕಚೇರಿ ಒಳಗ ಜೋರಾಗಿ ಕೂಗಾಡಿರಬೇಕು.

ಆ ಅಂತರಜಾಲಿಯ ಮ್ಯಾಲೆ ನಮ್ಮನ್ನಾಳುವವರ ರಂಜಿಷ್ಗೆ ಕಾರಣ ಏನು ಇದ್ದಿರಬಹುದು? ಬೇಜೋಸ್ ಅವರು ನೆಹರೂ ಜಾಕೆಟ್ ಹಕ್ಕೊಂಡು ಮಹಾತ್ಮಾಗಾಂಧಿ ಸಮಾಧಿಗೆ ಭೇಟಿ ನೀಡಿದ್ದರು. ಅದೂ ಒಂದು ಕಾರಣ ಇರಬಹುದು ಅಂತ ಮೋಷಾ ವಿರೋಧಿಗಳು ಹೇಳಿಕೋತ ಅಡ್ಯಾಡಲಿಕ್ಕೆ ಹತ್ಯಾರಂತ.

ಆದರ ಖರೇ ಸಿಟ್ಟು ಯಾಕಂದರ ಅಮೇರಿಕದ ವಾಷಿಂಗಟನ್ ಪೋಸ್ಟ್ ಪತ್ರಿಕೆ ವರದಿಗಾರರು, ಅಂಕಣಕಾರರು ಭಾರತದ ಸರಕಾರದ ಬಗ್ಗೆ ಸಕಾರಣ ಟೀಕೆ ಮಾಡಿ ಒಂದಿಷ್ಟು ಸುದ್ದಿ ಬರದಾರ. ಬೇಜೋಸ್ ಅವರು ಆ ಪತ್ರಿಕೆ ಮಾಲಿಕರು. ಅಷ್ಟ.

ನಾಕಾಣಿ ಅನ್ನೋ ಹೆಸರಿಟ್ಟುಕೊಂಡಿರುವ ಆಳುವ ಪಕ್ಷದ ನಾಯಕರೊಬ್ಬರು ಮೊನ್ನೆ ರಾತ್ರೋ ರಾತ್ರಿ ಫೇಮಸ್ ಆದರು. ಅವರು ಮಾಡಿದ್ದಿಷ್ಟೇ. ಅವರು ಟ್ವೀಟು ಮಾಡಿದರು. ನಾವು ಸಣ್ಣವರಿದ್ದಾಗ ಕೆಲಸ ಇಲ್ಲದ ಬಡಿಗ್ಯಾ ಮಗಾ ಕೂಡಲಿಕ್ಕೆ ಮೂರು ಮಣಿ ಮಾಡಿದ್ದನಂತ ಅಂತ ಒಂದು ಗಾದಿ ಮಾತು ಇತ್ತು. ಈಗ ಅದು ಬದಲಾಗಿ. ಮಾಡಲಿಕ್ಕೆ ಕೆಲಸ ಇರಲಾರದವರು ಟ್ವೀಟು ಮಾಡಿದ್ದರಂತ ಅಂತ ಆಗೇದ. ಈ ಚೌಥಾಯಿಯಾ ಅನ್ನೋರು ಬೇಜೋಸ್ ಅವರ ಹೆಸರಿಗೆ ಟ್ವೀಟು ಮಾಡಿದರು. “ನೀವು ಇಲ್ಲಿ ಬಂದು ನಮ್ಮ ದೇಶ ಛಲೋ ಅಂದರ ಸಾಲಂಗಿಲ್ಲ. ಅದನ್ನ ಹೋಗಿ ವಾಷಿಂಗಟನ್ನಿನ ನಿಮ್ಮ ನೌಕರರಿಗೆ ಹೇಳಿರಿ” ಅದರ ಅರ್ಥ ಏನಂದರ ವಾಪೋ ಪತ್ರಿಕೆ ಮೋಷಾ ಸರಕಾರದ ಬಗ್ಗೆ ದನಾತ್ಮಕವಾಗಿ ಬರೀಬೇಕು ಅಂತ. ಅವರ ಪ್ರಕಾರ ಅತಳ ಪತಳ ರಸಾತಳದಾಗಿನ ಯಾರೂ ನಮ್ಮ ಸರಕಾರವನ್ನು ಟೀಕೆ ಮಾಡಬಾರದು. ಚಿಕಿತ್ಸಕ ದೃಷ್ಟಿಯಿಂದ ನೋಡಬಾರದು. ಎಲ್ಲರೂ ಉಘೇ ಉಘೇ ಅನ್ನಬೇಕು.

ಅದನ್ನ ನೋಡಿ, ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಂಡ ಪತ್ರಿಕೆಯ ಜಾಗತಿಕ ಅಭಿಪ್ರಾಯ ವಿಭಾಗದ ಸಂಪಾದಕ ಎಲ್ಲೀ ಲೋಪೆಜ್ ಅವರು ಸಟಕ್ಕನ ಉತ್ತರ ಕೊಟ್ಟರು. “ಜೆಫ್ ಬೆಜೋಸ್ ಅವರು ನಮ್ಮ ಪತ್ರಿಕೆಯೊಳಗ ನಾವು ಏನು ಬರೀಬೇಕು ಅಂತ ಹೇಳಿಕೊಡಂಗಿಲ್ಲ” ಅಂತ. ಅದರ ಅರ್ಥ ನಿಮ್ಮ ದೇಶದಾಗ ನೀವು ಪತ್ರಿಕೆ ಮಾಲಿಕರ ಮಾತು ಕೇಳಿ ಸುದ್ದಿ ಬರೀತೀರಿ ಅಂತನೂ ಆಗಬಹುದು. “ಸ್ವತಂತ್ರ ಪತ್ರಿಕೋದ್ಯಮದ ಕೆಲಸ ಅಂದರೆ ಸರಕಾರಕ್ಕ ಬೆಣ್ಣಿ ಹಚ್ಚೋದಲ್ಲ. ನಾವೇನು ತಪ್ಪು ಮಾಡ್ತಿಲ್ಲ. ಭಾರತದ ಪ್ರಜಾಪ್ರಭುತ್ವದ ತತ್ವ ಭಂಗವಾಗದ ಹಂಗ ನಾವು ಸುದ್ದಿ ಮಾಡ್ತಿದ್ದೇವೆ” ಅಂತ ಒಂದು ಸ್ಪಷ್ಟೀಕರಣನೂ ಕೊಟ್ಟರು.

ಇದನ್ನ ನೋಡಿದರ ಅಮೇರಿಕೆ ಪತ್ರಿಕೋದ್ಯಮದ ದಂತ ಕಥೆ ಎನ್ನಲಾದ ವಾಷಿಂಗಟನ್ ಪೋಸ್ಟಿನ ಮಾಜಿ ಸಂಪಾದಕ ಬೆನಜಮಿನ್ ಬ್ರ್ಯಾಡಲೀ ಅವರ ನೆನಪು ಆಗತದ.

ಅಧ್ಯಕ್ಷ ರಿಚರ್ಡ ನಿಕ್ಸನ್ ಅವರನ್ನ ಕುರ್ಚಿಯಿಂದ ಇಳಿಸಲಿಕ್ಕೆ ಕಾರಣರಾದ ವಾಟರ್ ಗೇಟ ಹಗರಣದ ವರದಿಗಾರರಾದ ಬಾಬ್ ವುಡವರ್ಡ್ ಹಾಗೂ ಕಾರ್ಲ್ ಬರ್ನಸ್ಟೀನ್ ಅವರನ್ನು ಬೆನ್ ಅವರು ಅತ್ಯಂತ ಕಷ್ಟದ ದಿನಗಳಲ್ಲಿ ಬೆಂಬಲಿಸಿದರು. ಆಳುವವರಿಂದ, ತಮ್ಮ ವೃತ್ತಿಯ ಇತರರಿಂದ, ಕುಟುಂಬದಿಂದ, ಇನ್ಯಾವುದೋ ಮೂಲದಿಂದ ಬೆದರಿಕೆ, ಆಮಿಷಗಳು ಬಂದರೂ ಸಹ ಅವರು ಹಿಂಜರಿಯಲಿಲ್ಲ. `ನನ್ನನ್ನು ಎಲ್ಲರೂ ಪ್ರೀತಿಸಲಿ ಎನ್ನುವುದು ಪತ್ರಕರ್ತನ ಧ್ಯೇಯ ಆಗಿರಬಾರದು. ಅವನ ಜೀವನದ ಒಂದೇ ಒಂದು ಗುರಿ- ಸತ್ಯದ ಹುಡುಕಾಟ ಹಾಗೂ ಅದನ್ನು ಜಗತ್ತಿನ ಮುಂದ ಜಾಹೀರು ಪಡಿಸೋದು ಆಗಿರಬೇಕು’ ಅಂತ ತಮ್ಮನ್ನು ವಿಚಾರಣೆಗೆ ಗುರಿಪಡಿಸಿದ ಸಂಸತ್ ಸಮಿತಿಯ ಎದುರು ಹೇಳಿದರು. ಸರಿ ಸುಮಾರು ಮೂವತ್ತು ವರ್ಷ ಪತ್ರಿಕೆಯ ಸಂಪಾದಕರಾಗಿದ್ದ ಬೆನ್ ಅವರು ಕೆಲವು ವರ್ಷಗಳ ಹಿಂದೆ ತೀರಿಹೋದರು.

ಹಂಗಾರ ಅಧಿಕಾರದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಜರ್ಮನಿಯಲ್ಲಿ ಹಿಟ್ಲರ್ ಏನೂ ತಪ್ಪು ಮಾಡದ ಆರು ಲಕ್ಷ ಜನ ಯಹೂದಿಗಳನ್ನ ಕೊಂದಾಗ, ಇದಿ ಅಮೀನ ಅವರು ಪ್ರಾಯದ ಯುವಕರ ಮಾಂಸ ಬೇಯಿಸಿ ತಿಂದಾಗ, ಪೋಲ್ ಪೋಟ್ ಅವರು ಚಾಳೀಸು ಹಾಕಿದ ಎಲ್ಲರಿಗೂ ಗುಂಡು ಹಾಕಿರಿ ಅಂತ ಆದೇಶ ಕೊಟ್ಟಾಗ, ಫ್ರೆಂಚ ಸರಕಾರ ಆಫ್ರಿಕಾದ ತನ್ನ ಕಾಲನಿಗಳಲ್ಲಿ ಕರಿಯರನ್ನು ಬಿಡಾಡಿ ದನಗಳಂತೆ ಬಹಿರಂಗ ಹರಾಜು ಹಾಕಿ ಮಾರಾಟ ಮಾಡಿದಾಗ, ಅಮೇರಿಕಾದಾಗ ಗುಲಾಮರನ್ನು ಹತ್ತಿ ಹೂವು ಕದ್ದಿದ್ದಕ್ಕಾಗಿ ಚೌರಸ್ತಾಗಳಲ್ಲಿ ಬೆಂಕಿ ಹಚ್ಚಿದಾಗ, ಇಂಗ್ಲಂಡಿನಲ್ಲಿ ಕೂಲಿ ಮಾಡೋ ಮಹಿಳೆಯರನ್ನ ಮಾಟಗಾತಿಯರು ಅಂತ ಹೇಳಿ ಆರೋಪಿಸಿ ಕೂಟಿನಲ್ಲಿ ಸುಟ್ಟಾಗ, ಅಲ್ಲಿನ ಪತ್ರಿಕೆಗಳು ಸುಮ್ಮನೇ ಇದ್ದದ್ದನ್ನು ನಾವು ಈಗ ಮೆಚ್ಚುತ್ತೇವೋ, ದೂರುತ್ತೇವೋ?

ಧರಾಸನಾ ಉಪ್ಪಿನ ಕಾರಖಾನೆಯೊಳಗ ಶಾಂತಿಯುತ ಪ್ರತಿಭಟನಾಕಾರರನ್ನು ಬ್ರಿಟಿಷರು ಸಾಲು ಹಚ್ಚಿ ಹೊಡೆದು ತಲೆ ಒಡೆದಾಗ ಪತ್ರಿಕರ್ತ ವಿನ್ಸ್ ವಾಕರ್ ಅವರು `ಭಯಂಕರ ಹಿಂಸೆ, ಮಾನವ ಹಕ್ಕುಗಳ ದಮನ’ ಅಂತ ಬರೆದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಕೆಲವು ಬ್ರಿಟಿಷ ಪತ್ರಿಕೆಗಳೇ `ಅತಿರೇಕದ ಹಿಂಸೆ’ ಅಂತ ಬರೆದವು. ಹಂಗಾರ ಅವರು ಸರಕಾರದ ವಿರುದ್ಧ ಬರೆದದ್ದು ತಪ್ಪೇ? ಪತ್ರಿಕಾ ಧರ್ಮಕ್ಕೆ ಮಾಡಿದ ದ್ರೋಹವೇ?

ಈಗ ಜಗತ್ ಪ್ರಸಿದ್ಧವಾಗಿರುವ, ಬೆನ್ ಬ್ರ್ಯಾಡಲೀ ಅವರು ಐವತ್ತು ವರ್ಷ ಹಿಂದೆ ನೀಡಿದ ಹೇಳಿಕೆಯೊಂದನ್ನ ಗಮನಿಸೋಣ.

“ಮಾಧ್ಯಮಗಳು ತಮ್ಮನ್ನು ತಾವು ಪ್ರಜಾಪ್ರಭುತ್ವದ ಕಾವಲು ನಾಯಿ ಅಂತ ತಿಳಿದುಕೊಂಡಿರುತ್ತವೆ. ಆದರೆ ಆಳುವವರು ಮಾಧ್ಯಮ ತಮ್ಮ ಸಾಕುನಾಯಿಯಾಗಿರಬೇಕು ಅಂದುಕೊಂಡಿರುತ್ತಾರೆ”. ಇದರಲ್ಲಿ ನಾವು ಏನನ್ನು ನಂಬುತ್ತೇವೋ ಅದು ನಮ್ಮ ಪ್ರಜಾಪ್ರಭುತ್ವದ ವಿಕಾಸವನ್ನು, ನಮ್ಮ ನಾಳೆಗಳನ್ನ, ನಿರ್ಧರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...