Homeಮುಖಪುಟಮಂಕುತಿಮ್ಮನ ಕಗ್ಗ ಡಿ. ವಿ .ಗುಂಡಪ್ಪ

ಮಂಕುತಿಮ್ಮನ ಕಗ್ಗ ಡಿ. ವಿ .ಗುಂಡಪ್ಪ

- Advertisement -
- Advertisement -

ಅಕ್ಕಿಯೊಳಗನ್ನವನು ಮೊದಲಾರು ಕಂಡವನು
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೇ ನಿನಗೆ ಜಸ ಮಂಕುತಿಮ್ಮ.

ಮಂಕುತಿಮ್ಮ ಎಂದು ದಡ್ಡನೊಬ್ಬನಿಗೆ ಅನ್ನುವಂತಹ ಮಾತೊಂದನ್ನು ಡಿವಿಜಿ ಜೀವರೂಪಕವನ್ನಾಗಿ ಆರಿಸಿಕೊಂಡಿದ್ದು ಆಕಸ್ಮಿಕವೂ ಅಲ್ಲ, ವಿಡಂಬನೆಯೂ ಅಲ್ಲ. ಜೀವಿ ಎಂಬ ಸೀಮಿತ ಭೌತಿಕ ಅಸ್ತಿತ್ವವು ಜೀವನ ಎಂಬ ಅನಂತ ಅಸ್ತಿತ್ವದ ಭಾಗವಾಗಿದ್ದು, ಅದನ್ನು ಅರಿಯಲು ತನ್ನ ತಾತ್ವಿಕತೆಯ ದೃಷ್ಟಿಯನ್ನು ವಿಸ್ತಾರಗೊಳಿಸಿಕೊಳ್ಳಲು ಮಂಕುತಿಮ್ಮ ಇಲ್ಲಿ ಮಾನುಷ ರೂಪಕವಾಗಿದ್ದಾನೆ.

ತಿಳಿದಿದ್ದೇನೆ ಎನ್ನುವ ಅಹಮಿನ ಭಾವಕ್ಕೆ ತಿಳಿಯದ ಅನಂತ ವಿಚಾರಗಳು, ಅಚ್ಚರಿಗಳು, ಗುಟ್ಟುಗಳು, ದಾರಿಗಳು, ನೋಟಗಳೆಲ್ಲಾ ಇದ್ದು, ತನಗೆ ಹೇಳಿಕೊಂಡರೆ ತಾನು, ನಿನಗೆ ಹೇಳಿದರೆ ನೀನು ಎನ್ನುವ ಹಾಗೆ ಮಂಕುತಿಮ್ಮ ಆತ್ಮಾವಲೋಕನಕ್ಕೂ ರೂಪಕವಾಗುತ್ತಾನೆ. ಎದುರಿಗೆ ಸಂವಾದಿಸುತ್ತಾ ಬೋಧನೆಯನ್ನು ಸ್ವೀಕರಿಸುತ್ತಿರುವ ವ್ಯಕ್ತಿಯಾಗಿಯೂ ಸಂಕೇತವಾಗುತ್ತಾನೆ. ಒಟ್ಟಾರೆ ಒಂದು ಮಾನುಷ ಪರಿಮಿತಿಯ ಗ್ರಹಿಕೆ ಮತ್ತು ಅರಿವನ್ನು ಪರಸ್ಪರ ಹಂಚಿಕೊಳ್ಳುವ ಪ್ರತಿಮೆ ಮಂಕುತಿಮ್ಮ.

“ಕಲೆಗಳಲಿ ಪರಮ ಕಲೆ ಜೀವನದ ಲಲಿತಕಲೆ” ಎನ್ನುವ ಮಂಕುತಿಮ್ಮ ತನ್ನೆಲ್ಲಾ ತಾತ್ವಿಕ, ನೈತಿಕ, ಪಾರಮಾರ್ಥಿಕ ಹುಡುಕಾಟಗಳನ್ನೆಲ್ಲಾ ತನ್ನ ವರ್ತನೆ, ದರ್ಶನ, ಕ್ರಿಯೆ, ಪ್ರತಿಕ್ರಿಯೆ, ಗಮನ, ವಿಚಾರದ ಪ್ರಕ್ರಿಯೆಗಳಲ್ಲಿ ಅಲ್ಲಲ್ಲಿಗೆ ಒಳನೋಟಗಳನ್ನು ಕಂಡುಕೊಳ್ಳುತ್ತಿರುತ್ತಾನೆ. ಅದು ಧೈರ್ಯ, ಶಾಂತಿ, ಸಮಾಧಾನ, ದೃಷ್ಟಿಯಾಗುತ್ತದೆ, ಊರುಗೋಲಾಗುತ್ತದೆ, ಹರಿಗೋಲಾಗುತ್ತದೆ.

ಸತ್ತೆನೆಂದೆನಬೇಡ ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆಂಬುದು ಒಂದು ತೆರೆಯಿಳಿತ ತೆರೆಯೇರು
ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ.

ಹೀಗೆ ಸಾವನ್ನೂ ಎದುರಿಸುವಂತಹ ಸ್ಥೈರ್ಯ ಕೊಡಲು ಅಥವಾ ತಂದುಕೊಳ್ಳಲು ಮಂಕುತಿಮ್ಮ ಮುಂದಾಗುತ್ತಾನೆ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಈ ಕಗ್ಗ ನೇರವಾಗಿ ವಿಷಯವನ್ನು ತಿಳಿಸಿದಂತೆ ಎಲ್ಲಾ ಕಗ್ಗಗಳೂ ಸುಲಭವೇನಲ್ಲ. ಪದಪದಗಳು ಒಂದರಲ್ಲೊಂದು ಹೆಣೆದುಕೊಂಡು ಜಟಿಲವಾದ ಅಥವಾ ಕೇಳದಿರುವ ಪದಗಳಂತೆ ತೋರುವುದುಂಟು. ತತ್ಸಮ ತತ್ಭವ ಪದಗಳ ಅರಿವಿರಬೇಕು.

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?

ಎಂದಾಗ ಕದನವು ಎಂದು ಅಂಜಿ ಎಂಬ ಪದಗಳಲ್ಲಿ ಸಂಧಿಕಾರ್ಯವಾಗಿರುವ ಅರಿವಿರಬೇಕು. ಬಿದಿ ಎಂಬುದು ವಿಧಿಯ ತತ್ಭವ ರೂಪ ಎಂದೂ ತಿಳಿದಿರಬೇಕು. ಹೀಗಾಗಿ ಕಗ್ಗ ಬಹುಜನಕ್ಕೆ ಕಬ್ಬಿಣದ ಕಡಲೆಯಾಗಿ ಚೆನ್ನಾಗಿ ಭಾಷೆ ಬಲ್ಲವರು ನಾಲಿಗೆಯನ್ನು ಹೊರಳಾಡಿಸುತ್ತಾ ಹೇಳುವಾಗ ಕೆಲವರಿಗೆ ಯಾವುದೋ ಮಂತ್ರವನ್ನು ಅಥವಾ ಟಂಗ್ ಟ್ವಿಸ್ಟರ್ ಕೇಳುತ್ತಿರುವಂತೆ ಅನ್ನಿಸಿದರೆ ಆಶ್ಚರ್ಯವೇನಿಲ್ಲ.

ಎಲ್ಲಾ ಕಗ್ಗಗಳೂ ಒಂದೇ ದೃಷ್ಟಿಕೋನವನ್ನು ಹೊಂದಿರುವುದಿಲ್ಲ. ಸಾಂದರ್ಭಿಕವಾಗಿ ಅವುಗಳು ಧ್ವನಿಸುತ್ತವೆ. ಎದೆಯನುಕ್ಕಾಗಿಸುತ ಮತಿಗದೆಯ ಪಿಡಿದು ನೀನೆದುರು ನಿಲೆ ಬಿದಿಯೊಲಿವ, ಅಂದರೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ಕುಶಲತೆಯಿಂದ ನಿನಗೆ ಎದುರಾಗಿರುವ ವಿಧಿಯನ್ನು ಗೆಲ್ಲು ಎಂದು ಆತ್ಮಶಕ್ತಿಯ ಧೈರ್ಯ ಹೇಳುವ ಮಂಕುತಿಮ್ಮ, ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ಮದುವೆಗೋ ಮಸಣಕೋ ಹೋಗೆಂದಕಡೆಗೋಡುತ್ತಿರಬೇಕು ಎನ್ನುವ ಹಣೆಬರಹವನ್ನು ಹಳಿಯಲಾರದ ಜಿಗುಪ್ಸೆಯೂ ಇದೆ. ಇವು ವಿರೋಧಾಭಾಸಗಳೇನಲ್ಲ. ಮಂಕುತಿಮ್ಮನ ಕಗ್ಗ ಒಂದು ವಿಚಾರಧಾರೆಯನ್ನು ಪ್ರತಿಪಾದಿಸಲು ಇಡೀ ಕೃತಿ ಕಟ್ಟಿಕೊಂಡಿರುವುದೇನಲ್ಲ.

ಒಂದು ಜೀವ, ಜೀವನದ ಪಥದಲ್ಲಿ ಎದುರಾಗುವ ಎಲ್ಲವನ್ನೂ ಹಾದು ಹೋಗುವುದು ಅನಿವಾರ್ಯವಾದ್ದರಿಂದ ಸಂದರ್ಭಾನುಸಾರ ಪ್ರಶ್ನೆಗಳಿಗೂ ಸಾಂದರ್ಭಿಕ ಉತ್ತರಗಳನ್ನು ಪಡೆದುಕೊಳ್ಳುತ್ತಾ ಹೋಗುವನು ಈ ಮಂಕುತಿಮ್ಮ.
ಒಂದು ಎಚ್ಚರಿಕೆ; ಮಂಕುತಿಮ್ಮನ ಕಗ್ಗವನ್ನು ಓದುವಾಗ ಪದಗಳು ಉಲ್ಲನ್ ಉಂಡೆ ಸಿಕ್ಕಾದಂತೆ ಕಂಡರೂ ಯಾರಾದರೂ ಕೊಟ್ಟಿರುವ ವಿವರಣೆಗಳನ್ನು ಮಾತ್ರ ಓದಬೇಡಿ. ಎಷ್ಟೋ ಬಾರಿ ಕೊಟ್ಟಿರುವ ವಿವರಣೆಗಳು ಕಗ್ಗದ ಅರ್ಥವನ್ನೇ ಸಂಕುಚಿತಗೊ ಳಿಸಿಬಿಟ್ಟಿರುತ್ತವೆ, ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ, ಅರ್ಥ ವ್ಯತ್ಯಾಸವಾಗಿರುತ್ತದೆ. ವಿರೋಧಾರ್ಥಗಳು ಇರುವುದೂ ಉಂಟು. ಹಲಸನ್ನು ಬಿಡಿಸಿದಂತೆ ವಾಕ್ಯಗಳಲ್ಲಿರುವ ಪದಗಳನ್ನು ಬಿಡಿಸಿಕೊಂಡರೆ ಅರ್ಥವಾಗುವುದು. ಅರ್ಥವಾಗದಿದ್ದರೂ ಪರವಾಗಿಲ್ಲ, ತಾತ್ಪರ್ಯಗಳನ್ನು ಓದಿ ಅಪಾರ್ಥ ಮಾಡಿಕೊಳ್ಳಬಾರದೆಂಬುದಷ್ಟೇ ನನ್ನ ಕಾಳಜಿ.

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ?
ಮುಷ್ಟಿ ಪಿಷ್ಟವು ತಾನೇ? ಮಂಕುತಿಮ್ಮ.

ಮಂಕುತಿಮ್ಮನ ಕಗ್ಗವನ್ನು ಮೊದಲಿನಿಂದ ಪ್ರಾರಂಭಿಸಿ ಕೊನೆಗೆ ಮುಗಿಸಬೇಕೆಂದೇನಿಲ್ಲ. ಮಧ್ಯೆಮಧ್ಯೆ ತೆರೆದು ಕಂಡಿದ್ದನ್ನು ಓದಬಹುದು. ಅದು ನಮ್ಮರಿವಿಗೆ ಒದಗುವುದು. ಎಲ್ಲಾ ಒಪ್ಪಬೇಕೆಂದಿಲ್ಲ. ಬೇಕಾದ ಕಾಳುಗಳ ಆಯ್ದಾಯ್ದುಕೊಳ್ಳಬಹುದು. ಹೊಟ್ಟು ಮತ್ತು ಪೊಳ್ಳುಗಳಲ್ಲಿ ಗಟ್ಟಿ ಕಾಳುಗಳು ಇವೆ ಎಂಬುದಂತೂ ಸತ್ಯ. ಕಳೆದು ಹೋಗಿರುವ ಆ ತಲೆಮಾರಿನ ಬೇರುಗಳು ನಮ್ಮಲ್ಲಿ ಚಿಗುರನ್ನು ಮೂಡಿಸಲಾರವೇ?

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...