Homeಮುಖಪುಟನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-29

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ

ಲೇಖನದ ಶೀರ್ಷಿಕೆ ಓದಿ ಚಕಿತರಾಗಬೇಡಿ. ಹೌದು, ನಮ್ಮೆಲ್ಲರೊಳಗೂ ಒಂದು ಮುಗ್ಧ ಮಗು ಇದೆ, ಇತ್ತು, ಇನ್ನೂ ಇರಬಹುದು. ಕೆಲವರು ಬೇಗನೇ ದೊಡ್ಡವರಾಗುವ ತವಕದಲ್ಲಿ ಆ ಮಗುವನ್ನು ತಿಳಿದೋ ತಿಳಿಯದೆಯೋ ಹತ್ಯೆಗೈದಿರುತ್ತಾರೆ ಅಥವಾ ಮಾರಣಾಂತಿಕವಾಗಿ ಘಾಸಿಗೊಳಿಸಿರುತ್ತಾರೆ. ಸಂತೋಷದ ಸಂಗತಿಯೆಂದರೆ ಈ ಮಗುವನ್ನು ದೃಢ ಪ್ರಯತ್ನದಿಂದ ಮತ್ತೆ ಜೀವಂತಗೊಳಿಸಬಹುದು.

“ನಿಮ್ಮ ಆತ್ಮಕ್ಕೆ ಸನಿಹದಲ್ಲಿರುವ ಈ ಮಗುವಿನ ಕೈ ಎಂದಿಗೂ ಬಿಡಬೇಡಿ, ಈಕೆಂದರೆ ಈ ಮಗುವಿಗೆ ಅಸಾಧ್ಯ ಎನ್ನುವುದು ಏನೂ ಇಲ್ಲ” ಎಂದು ಬ್ರಾಜಿಲ್ ದೇಶದ ಖ್ಯಾತ ಲೇಖಕ ಮತ್ತು ಕವಿ ಪಾವ್ಲೋ ಕೊಯಿಲ್ಹೋ ಹೇಳುತ್ತಾರೆ.

ಇಂದಿನ ಜೀವನದ ಭಯಾನಕ ಆತಂಕಗಳ ಮಧ್ಯೆ ಬದುಕಲು ಕೇವಲ ಮಕ್ಕಳಿಗೆ ಮಾತ್ರ ಸಾಧ್ಯ. ಸಿರಿಯಾ-ಇರಾಕ್ ನಂತಹ ಯುದ್ಧಗ್ರಸ್ಥ ಭಾಗದಲ್ಲೂ ಸಹ ಮಕ್ಕಳು ನಿಶ್ಚಿಂತೆಯಿಂದ ಆಟವಾಡಿಕೊಂಡಿರುವುದನ್ನು ನೀವು ದೃಶ್ಯ ಮಾಧ್ಯಮದಲ್ಲಿ ನೋಡಿರಬಹುದು. ಈ ಮಕ್ಕಳಿಗೆ ಯಾವುದೇ ಸರಹದ್ದು, ಬೇಲಿಗಳು ಇರುವುದಿಲ್ಲ. ಇದ್ದರೂ ಅವರು ಅದನ್ನು ಲೆಕ್ಕಿಸುವುದಿಲ್ಲ. ಯಾವಾಗಲೂ ಸಕಾರತ್ಮಕವಾಗಿ ಚಿಂತಿಸುತ್ತಾರೆ. ಇದೇ ಮಗು ನಿಮಗೆ ಮತ್ತೆ ಮುಕ್ತವಾಗಿ ಜೀವಿಸುವ ಪಾಠ ಕಲಿಸುವ ಸಾಧನವಾಗಬಹುದು. ದೊಡ್ಡವರೂ ಸಹ ಒಂದಲ್ಲ ಒಮ್ಮೆ ಮತ್ತೆ ತಮ್ಮ ಬಾಲ್ಯ ಹಿಂತಿರುಗಬೇಕು ಎಂದು ಹಂಬಲಿಸುವುದನ್ನು ನೀವು ನೋಡಿರಬಹುದು. ಆದ್ದರಿಂದ ಈ ಮಗುವನ್ನು ಕೊಲ್ಲಬೇಡಿ. ಅದರೊಂದಿಗೆ ಮಾತನಾಡಿ, ಅದು ಏನು ಹೇಳುತ್ತಿದೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ.

ಈ ಮಗುವಿಗೆ ಸದಾ ಹಸಿವು. ಎಲ್ಲವನ್ನೂ ತಿಂದು ಜೀರ್ಣಿಸಿಕೊಳ್ಳುವ ಹಸಿವು. ಆದ್ದರಿಂದ ಈ ಮಗುವನ್ನು ಉಪವಾಸ ಕೆಡವಬೇಡಿ. ಇದರ ಲಾಲನೆ ಪೋಷಣೆ ಸರಿಯಾಗಿ ಮಾಡಿ. ಹೇಗೆ ನಿಮ್ಮ ಸ್ವಂತ ಮಗು ಹಸಿದುಕೊಂಡಿದ್ದರೆ ನಿಮಗೆ ಸಹಿಸಲು ಸಾಧ್ಯವಿಲ್ಲವೋ, ಅದೇ ರೀತಿ ಈ ಮಗುವನ್ನೂ ಸರಿಯಾಗಿ ನೋಡಿಕೊಳ್ಳಿ. ಈ ಮಗು ತುಂಬ ಕುತೂಹಲವುಳ್ಳದ್ದು. ಎಲ್ಲವನ್ನೂ ಅರಿಯುವ ಈ ಕುತೂಹಲವೇ ಅದಕ್ಕೆ ದಿನನಿತ್ಯ ಹೊಸ ವಿಷಯ ಕಲಿಯುವಂತೆ ಪ್ರೇರೇಪಿಸುತ್ತದೆ.ಇದರ ಜ್ಞಾನಾರ್ಜನೆಗೆ ಸಹಕಾರಿಯಾಗಿ. ಕೌನ್ ಬನೇಗಾ ಕರೋಡಪತಿ ಎಂಬ ಟಿವಿ ಮಾಲಿಕೆಯೊಂದರಲ್ಲಿ ಅದರ ನಿರೂಪಕ ಅಮಿತಾಭ್ ಬಚ್ಚನ್ ಹೇಳಿದಂತೆ, “ಸೀಖನಾ ಬಂದ್ ತೋ ಜೀತನಾ ಬಂದ್” (ಕಲಿಯುವುದನ್ನು ನಿಲ್ಲಿಸಿದಾಗ ಗೆಲ್ಲುವುದೂ ನಿಲ್ಲುತ್ತದೆ).ಈ ಮಗುವಿಗೆ ಸಂರಕ್ಷಣೆ ಬೇಕು, ನಿಮ್ಮಂತೆ ದಿನಕ್ಕೆ 12 ತಾಸು ವಾರಕ್ಕೆ 7 ದಿನ ದುಡಿಯಲು ಇದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ಹಾಯಾಗಿರಲು, ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಬೇಕು. ಅದನ್ನು ಈ ಮಗುವಿನಿಂದ ಕಿತ್ತುಕೊಳ್ಳಬೇಡಿ.

ಈ ಮಗುವಿಗೆ ಮಗುವಾಗಿ ಇರಲು ಇಷ್ಟ. ಆದ್ದರಿಂದ ನೀವು ನಿಮಗೆ ವಯಸ್ಸಾಯಿತು, ನಾವು ಹೇಗೆ ಮಕ್ಕಳಂತೆ ವರ್ತಿಸಬಹುದು ಎಂದು ಹೇಳಿಕೊಳ್ಳುವುದನ್ನು ಬಿಡಿ. ಮಗುವಿನಂತೆ ಜೀವನವನ್ನು ಆಸ್ವಾದಿಸುವುದನ್ನು ಕಲಿಯಿರಿ. ಕುಣಿದು ಕುಪ್ಪಳಿಸಿ. ನಿಮ್ಮ ದಿನ ನಿತ್ಯದ ಬಿಗುಪು ಕಡಿಮೆಯಾಗುತ್ತದೆ. ತಂದೆ-ತಾಯಿಗೆ ಮಗುವಿನೊಂದಿಗೆ ಸಂತೋಷದ ಸಮಯ ಹೆಚ್ಚಾಗಿ ಕಳೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಮಗುವಿನೊಂದಿಗೆ ಮಗುವಾಗಿರದೆ, ಪೋಷಕರಾಗುತಾರೆ, ಶಿಕ್ಷಕರಾಗುತ್ತಾರೆ. ಆದರೆ ಅಜ್ಜಿ-ತಾತ ಈ ಪೋಷಕ-ಶಿಕ್ಷಕ ಕಟ್ಟುಪಾಡಿನಿಂದ ಹೊರಗುಳಿದು ಮಕ್ಕಳೊಂದಿಗೆ ಮಕ್ಕಳಾಗಿ ತಾವೂ ಹೆಚ್ಚು ಸಂತೋಷವಾಗಿರುತ್ತಾರೆ ಮತ್ತು ಮಕ್ಕಳೂ ಸಹ ಅಜ್ಜಿ-ತಾತನ ಜೊತೆಯನ್ನು ಹೆಚ್ಚಾಗಿ ಬಯಸುತ್ತಾರೆ.

ಮಕ್ಕಳು ಮೂರ್ಖತನ ಮಾಡುತ್ತಾರೆ, ಅದು ಅವರ ಹಕ್ಕು. ಆ ಮೂರ್ಖತನ ಅವರಿಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹ ಪಾಠ ಕಲಿಸುತ್ತದೆ. ಆಪಲ್ ಕಂಪನಿಯ ಸಂಸ್ಥಾಪಕ ಅಮೇರಿಕದ ಸ್ಟೀವ್ ಜಾಬ್ಸ್ ಅವರ ಒಂದು ಪ್ರಖ್ಯಾತ ಹೇಳಿಕೆ “ಸ್ಟೇ ಹಂಗ್ರೀ, ಸ್ಟೇ ಫೂಲಿಷ್” (ಸದಾ ಹಸಿದುಕೊಂಡಿರು, ಸದಾ ಮೂರ್ಖನಾಗಿರು) ಪ್ರಕಾರ ಈ ಹಸಿವು ನಮ್ಮನ್ನು ಏನಾದರೂ ಮಾಡಲು ಪ್ರಚೋದಿಸುತ್ತದೆ ಮತ್ತು ಈ ಮೂರ್ಖತನ ನಮಗೆ ಕಲಿಯಲು ಸಹಕಾರಿಯಾಗುತ್ತದೆ. ಒಟ್ಟಾಗಿ ಇವೆರಡು ನಮ್ಮನ್ನು ಉನ್ನತ ಮಟ್ಟಕ್ಕೆ ಏರಿಸುತ್ತವೆ. ಮಕ್ಕಳಿಗೆ ಯಾವುದು ಅಸಾಧ್ಯ ಎಂಬುದು ತಿಳಿದಿರುವುದಿಲ್ಲ, ಹಾಗಾಗಿ ಅವರು ಅಸಾಧ್ಯವಾದುದನ್ನು ಮಾಡಲು ಸದಾ ಪ್ರಯತ್ನಿಸುತ್ತಾರೆ ಮತ್ತು ಅದರಲ್ಲಿ ಸಫಲರೂ ಆಗುತ್ತಾರೆ.

ಜೀವನದ ಎಲ್ಲಾ ಸನ್ನಿವೇಶಗಳೂ ಸಮಸ್ಯೆಗಳಲ್ಲ, ಅದನ್ನು ಪರಿಹರಿಸಲು ಯಾರೂ ನಮಗೆ ಗುತ್ತಿಗೆ ಕೊಟ್ಟಿಲ್ಲ. “ಲೋಕದ ಡೊಂಕ ನೀವೇಕೆ ತಿದ್ದುವಿರಿಯ್ಯಾ”ಎಂದು ಬಸವಣ್ಣನವರು ಹೇಳಿದ ಹಾಗೆ, ಜೀವನವನ್ನು ಬಂದಂತೆ ಸ್ವೀಕರಿಸಬೇಕು. ಏಕೆಂದರೆ ಯಾರ ಕೈಯಲ್ಲಿ ಸುತ್ತಿಗೆ ಇರುತ್ತದೋ ಅವರಿಗೆ ಎಲ್ಲವೂ ಮೊಳೆಯಂತೆ ಕಾಣುತ್ತದೆ; ಯಾರ ಕೈಯಲ್ಲಿ ಸ್ಪ್ಯಾನರ್ ಇರುತ್ತದೋ ಅವರಿಗೆ ಎಲ್ಲವೂ ಸಡಿಲವಾದ, ಬಿಗಿಯಾಗಿ ಭದ್ರಪಡಿಸಬೇಕಾಗಿರುವ, ನಟ್-ಬೋಲ್ಟಿನಂತೆ ಕಾಣುತ್ತದೆ. ಆ ಸುತ್ತಿಗೆ, ಆ ಸ್ಪ್ಯಾನರ್ ಬದಿಗಿಡಿ. ಜೀವನವನ್ನು ಮಗುವಿನ ದೃಷ್ಟಿಕೋನದಿಂದ ನೋಡಿ, ಅದರಿಂದ ಏನು ಕಲಿಯಬಹುದು, ಅದನ್ನು ಕಲಿಯಿರಿ.

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

ನಿಮ್ಮ ಬಾಲ್ಯದ ನೆನಪನ್ನು ಭದ್ರವಾಗಿರಿಸಿಕೊಳ್ಳಿ. ನೀವು ಮಾಡಿದ ತಪ್ಪುಗಳು, ಚೇಷ್ಟೆಗಳು ಎಂದಿದ್ದರೂ ನಿಮಗೆ ಸಂತೋಷ ನೀಡುವ ಚಿಲುಮೆಗಳು. ಅದು ಬತ್ತದಂತೆ ಜಾಗೃತೆ ವಹಿಸಿ. ಅದೇ ರೀತಿ ಮಕ್ಕಳು ತಮಗೆ ಬೇಡವಾದುದನ್ನು ಎಸೆಯುತ್ತಿರುತ್ತವೆ, ನೀವೂ ಸಹ ಬೇಡವಾದ ಕಹಿ ನೆನಪುಗಳ, ಸಂಬಂಧಗಳ ಭಾರವಾದ ಮೂಟೆ ಜೀವನವಿಡೀ ಹೊರುವುದನ್ನು ಬಿಡಿ, ಅವನ್ನು ಎತ್ತೆಸೆಯಿರಿ.

ಮಿಕ್ಕ ಮಕ್ಕಳಂತೆ ಈ ಮಗುವಿಗೂ ಪ್ರೀತಿ ಬೇಕು. ಉಡುಗೊರೆ ಬೇಕು. ಆದ್ದರಿಂದ ನಿಮ್ಮ ಕಲ್ಪನಾಶಕ್ತಿ ಉಪಯೋಗಿಸಿ ಇದರ ಜೊತೆಗೂ ನಿಮ್ಮ ಅಮೂಲ್ಯವಾದ ಸಮಯ ಕಳೆಯಿರಿ, ನಿಮ್ಮ ಪ್ರೀತಿ ತೋರಿಸಿ, ಉಡುಗೊರೆಗಳನ್ನು ನೀಡಿ. ಆ ಮಗುವೂ ನಿಮ್ಮ ಭಾವನೆಗಳನ್ನು ಬಡ್ಡಿಯೊಂದಿಗೆ ಹಿಂತಿರುಗಿಸುತ್ತದೆ.

“ವಿಶ್ವದ ನಿಜವಾದ ಸಮಸ್ಯೆ ಎಂದರೆ (ವಿಶ್ವದ) ಬಹುತೇಕ ಜನ ಬೇಗ ವಯಸ್ಕರಾಗುತ್ತಾರೆ” ಎನ್ನುತ್ತಾರೆ ಮಕ್ಕಳ ಅಚ್ಚುಮೆಚ್ಚಿನ ಖ್ಯಾತ ಕಾರ್ಟೂನ್ ಚಿತ್ರ ನಿರ್ಮಾಪಕ ವಾಲ್ಟ್ ಡಿಸ್ನಿ. ನೀವಾದರೂ ವಯಸ್ಕರಾಗದೇ ನಿಮ್ಮೊಳಗಿರುವ ಮಗುವನ್ನು ಸಂರಕ್ಷಿಸಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...

ಕೈದಿಗಳಿಗೆ ನಿಯತಕಾಲಿಕ ವೈದ್ಯಕೀಯ ತಪಾಸಣೆಯ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಪ್ರತಿಯೊಬ್ಬ ಕೈದಿಯೂ ನಿಯತಕಾಲಿಕ ವೈದ್ಯಕೀಯ ತಪಾಸಣೆಗೆ ಅರ್ಹನಾಗಿದ್ದು, ಅಂತಹ ಆರೋಗ್ಯ ರಕ್ಷಣೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ...

ಡಿಜೆ ಮ್ಯೂಸಿಕ್ ವಿವಾದ: ಅಲಿಗಢದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ

ಉತ್ತರ ಪ್ರದೇಶ ರಾಜ್ಯದ ಅಲಿಗಢ ಸಮೀಪದ ಸುನಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಬಾರಾತ್ ಸಮಯದಲ್ಲಿ ಹಾಕಿದ್ದ ಡಿಜೆ ಮ್ಯೂಸಿಕ್‌ನಿಂದ ವಿವಾದ ಉಂಟಾಗಿದ್ದು, ದಲಿತ ಕುಟುಂಬದ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ...

‘ನೆತನ್ಯಾಹು ಅವರ ನಿರ್ಲಜ್ಜ ಸಮರ್ಥನೆ’ : ಪ್ರಧಾನಿ ಮೋದಿಯ ನೆಸೆಟ್ ಭಾಷಣ ಟೀಕಿಸಿದ ಕಾಂಗ್ರೆಸ್

ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ನಿರ್ಲಜ್ಜ ಸಮರ್ಥನೆ' ಎಂದಿದೆ. ಇಸ್ರೇಲ್ ರಾಷ್ಟ್ರದ...

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...