Homeಮುಖಪುಟನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-29

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ

ಲೇಖನದ ಶೀರ್ಷಿಕೆ ಓದಿ ಚಕಿತರಾಗಬೇಡಿ. ಹೌದು, ನಮ್ಮೆಲ್ಲರೊಳಗೂ ಒಂದು ಮುಗ್ಧ ಮಗು ಇದೆ, ಇತ್ತು, ಇನ್ನೂ ಇರಬಹುದು. ಕೆಲವರು ಬೇಗನೇ ದೊಡ್ಡವರಾಗುವ ತವಕದಲ್ಲಿ ಆ ಮಗುವನ್ನು ತಿಳಿದೋ ತಿಳಿಯದೆಯೋ ಹತ್ಯೆಗೈದಿರುತ್ತಾರೆ ಅಥವಾ ಮಾರಣಾಂತಿಕವಾಗಿ ಘಾಸಿಗೊಳಿಸಿರುತ್ತಾರೆ. ಸಂತೋಷದ ಸಂಗತಿಯೆಂದರೆ ಈ ಮಗುವನ್ನು ದೃಢ ಪ್ರಯತ್ನದಿಂದ ಮತ್ತೆ ಜೀವಂತಗೊಳಿಸಬಹುದು.

“ನಿಮ್ಮ ಆತ್ಮಕ್ಕೆ ಸನಿಹದಲ್ಲಿರುವ ಈ ಮಗುವಿನ ಕೈ ಎಂದಿಗೂ ಬಿಡಬೇಡಿ, ಈಕೆಂದರೆ ಈ ಮಗುವಿಗೆ ಅಸಾಧ್ಯ ಎನ್ನುವುದು ಏನೂ ಇಲ್ಲ” ಎಂದು ಬ್ರಾಜಿಲ್ ದೇಶದ ಖ್ಯಾತ ಲೇಖಕ ಮತ್ತು ಕವಿ ಪಾವ್ಲೋ ಕೊಯಿಲ್ಹೋ ಹೇಳುತ್ತಾರೆ.

ಇಂದಿನ ಜೀವನದ ಭಯಾನಕ ಆತಂಕಗಳ ಮಧ್ಯೆ ಬದುಕಲು ಕೇವಲ ಮಕ್ಕಳಿಗೆ ಮಾತ್ರ ಸಾಧ್ಯ. ಸಿರಿಯಾ-ಇರಾಕ್ ನಂತಹ ಯುದ್ಧಗ್ರಸ್ಥ ಭಾಗದಲ್ಲೂ ಸಹ ಮಕ್ಕಳು ನಿಶ್ಚಿಂತೆಯಿಂದ ಆಟವಾಡಿಕೊಂಡಿರುವುದನ್ನು ನೀವು ದೃಶ್ಯ ಮಾಧ್ಯಮದಲ್ಲಿ ನೋಡಿರಬಹುದು. ಈ ಮಕ್ಕಳಿಗೆ ಯಾವುದೇ ಸರಹದ್ದು, ಬೇಲಿಗಳು ಇರುವುದಿಲ್ಲ. ಇದ್ದರೂ ಅವರು ಅದನ್ನು ಲೆಕ್ಕಿಸುವುದಿಲ್ಲ. ಯಾವಾಗಲೂ ಸಕಾರತ್ಮಕವಾಗಿ ಚಿಂತಿಸುತ್ತಾರೆ. ಇದೇ ಮಗು ನಿಮಗೆ ಮತ್ತೆ ಮುಕ್ತವಾಗಿ ಜೀವಿಸುವ ಪಾಠ ಕಲಿಸುವ ಸಾಧನವಾಗಬಹುದು. ದೊಡ್ಡವರೂ ಸಹ ಒಂದಲ್ಲ ಒಮ್ಮೆ ಮತ್ತೆ ತಮ್ಮ ಬಾಲ್ಯ ಹಿಂತಿರುಗಬೇಕು ಎಂದು ಹಂಬಲಿಸುವುದನ್ನು ನೀವು ನೋಡಿರಬಹುದು. ಆದ್ದರಿಂದ ಈ ಮಗುವನ್ನು ಕೊಲ್ಲಬೇಡಿ. ಅದರೊಂದಿಗೆ ಮಾತನಾಡಿ, ಅದು ಏನು ಹೇಳುತ್ತಿದೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ.

ಈ ಮಗುವಿಗೆ ಸದಾ ಹಸಿವು. ಎಲ್ಲವನ್ನೂ ತಿಂದು ಜೀರ್ಣಿಸಿಕೊಳ್ಳುವ ಹಸಿವು. ಆದ್ದರಿಂದ ಈ ಮಗುವನ್ನು ಉಪವಾಸ ಕೆಡವಬೇಡಿ. ಇದರ ಲಾಲನೆ ಪೋಷಣೆ ಸರಿಯಾಗಿ ಮಾಡಿ. ಹೇಗೆ ನಿಮ್ಮ ಸ್ವಂತ ಮಗು ಹಸಿದುಕೊಂಡಿದ್ದರೆ ನಿಮಗೆ ಸಹಿಸಲು ಸಾಧ್ಯವಿಲ್ಲವೋ, ಅದೇ ರೀತಿ ಈ ಮಗುವನ್ನೂ ಸರಿಯಾಗಿ ನೋಡಿಕೊಳ್ಳಿ. ಈ ಮಗು ತುಂಬ ಕುತೂಹಲವುಳ್ಳದ್ದು. ಎಲ್ಲವನ್ನೂ ಅರಿಯುವ ಈ ಕುತೂಹಲವೇ ಅದಕ್ಕೆ ದಿನನಿತ್ಯ ಹೊಸ ವಿಷಯ ಕಲಿಯುವಂತೆ ಪ್ರೇರೇಪಿಸುತ್ತದೆ.ಇದರ ಜ್ಞಾನಾರ್ಜನೆಗೆ ಸಹಕಾರಿಯಾಗಿ. ಕೌನ್ ಬನೇಗಾ ಕರೋಡಪತಿ ಎಂಬ ಟಿವಿ ಮಾಲಿಕೆಯೊಂದರಲ್ಲಿ ಅದರ ನಿರೂಪಕ ಅಮಿತಾಭ್ ಬಚ್ಚನ್ ಹೇಳಿದಂತೆ, “ಸೀಖನಾ ಬಂದ್ ತೋ ಜೀತನಾ ಬಂದ್” (ಕಲಿಯುವುದನ್ನು ನಿಲ್ಲಿಸಿದಾಗ ಗೆಲ್ಲುವುದೂ ನಿಲ್ಲುತ್ತದೆ).ಈ ಮಗುವಿಗೆ ಸಂರಕ್ಷಣೆ ಬೇಕು, ನಿಮ್ಮಂತೆ ದಿನಕ್ಕೆ 12 ತಾಸು ವಾರಕ್ಕೆ 7 ದಿನ ದುಡಿಯಲು ಇದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ಹಾಯಾಗಿರಲು, ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಬೇಕು. ಅದನ್ನು ಈ ಮಗುವಿನಿಂದ ಕಿತ್ತುಕೊಳ್ಳಬೇಡಿ.

ಈ ಮಗುವಿಗೆ ಮಗುವಾಗಿ ಇರಲು ಇಷ್ಟ. ಆದ್ದರಿಂದ ನೀವು ನಿಮಗೆ ವಯಸ್ಸಾಯಿತು, ನಾವು ಹೇಗೆ ಮಕ್ಕಳಂತೆ ವರ್ತಿಸಬಹುದು ಎಂದು ಹೇಳಿಕೊಳ್ಳುವುದನ್ನು ಬಿಡಿ. ಮಗುವಿನಂತೆ ಜೀವನವನ್ನು ಆಸ್ವಾದಿಸುವುದನ್ನು ಕಲಿಯಿರಿ. ಕುಣಿದು ಕುಪ್ಪಳಿಸಿ. ನಿಮ್ಮ ದಿನ ನಿತ್ಯದ ಬಿಗುಪು ಕಡಿಮೆಯಾಗುತ್ತದೆ. ತಂದೆ-ತಾಯಿಗೆ ಮಗುವಿನೊಂದಿಗೆ ಸಂತೋಷದ ಸಮಯ ಹೆಚ್ಚಾಗಿ ಕಳೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಮಗುವಿನೊಂದಿಗೆ ಮಗುವಾಗಿರದೆ, ಪೋಷಕರಾಗುತಾರೆ, ಶಿಕ್ಷಕರಾಗುತ್ತಾರೆ. ಆದರೆ ಅಜ್ಜಿ-ತಾತ ಈ ಪೋಷಕ-ಶಿಕ್ಷಕ ಕಟ್ಟುಪಾಡಿನಿಂದ ಹೊರಗುಳಿದು ಮಕ್ಕಳೊಂದಿಗೆ ಮಕ್ಕಳಾಗಿ ತಾವೂ ಹೆಚ್ಚು ಸಂತೋಷವಾಗಿರುತ್ತಾರೆ ಮತ್ತು ಮಕ್ಕಳೂ ಸಹ ಅಜ್ಜಿ-ತಾತನ ಜೊತೆಯನ್ನು ಹೆಚ್ಚಾಗಿ ಬಯಸುತ್ತಾರೆ.

ಮಕ್ಕಳು ಮೂರ್ಖತನ ಮಾಡುತ್ತಾರೆ, ಅದು ಅವರ ಹಕ್ಕು. ಆ ಮೂರ್ಖತನ ಅವರಿಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹ ಪಾಠ ಕಲಿಸುತ್ತದೆ. ಆಪಲ್ ಕಂಪನಿಯ ಸಂಸ್ಥಾಪಕ ಅಮೇರಿಕದ ಸ್ಟೀವ್ ಜಾಬ್ಸ್ ಅವರ ಒಂದು ಪ್ರಖ್ಯಾತ ಹೇಳಿಕೆ “ಸ್ಟೇ ಹಂಗ್ರೀ, ಸ್ಟೇ ಫೂಲಿಷ್” (ಸದಾ ಹಸಿದುಕೊಂಡಿರು, ಸದಾ ಮೂರ್ಖನಾಗಿರು) ಪ್ರಕಾರ ಈ ಹಸಿವು ನಮ್ಮನ್ನು ಏನಾದರೂ ಮಾಡಲು ಪ್ರಚೋದಿಸುತ್ತದೆ ಮತ್ತು ಈ ಮೂರ್ಖತನ ನಮಗೆ ಕಲಿಯಲು ಸಹಕಾರಿಯಾಗುತ್ತದೆ. ಒಟ್ಟಾಗಿ ಇವೆರಡು ನಮ್ಮನ್ನು ಉನ್ನತ ಮಟ್ಟಕ್ಕೆ ಏರಿಸುತ್ತವೆ. ಮಕ್ಕಳಿಗೆ ಯಾವುದು ಅಸಾಧ್ಯ ಎಂಬುದು ತಿಳಿದಿರುವುದಿಲ್ಲ, ಹಾಗಾಗಿ ಅವರು ಅಸಾಧ್ಯವಾದುದನ್ನು ಮಾಡಲು ಸದಾ ಪ್ರಯತ್ನಿಸುತ್ತಾರೆ ಮತ್ತು ಅದರಲ್ಲಿ ಸಫಲರೂ ಆಗುತ್ತಾರೆ.

ಜೀವನದ ಎಲ್ಲಾ ಸನ್ನಿವೇಶಗಳೂ ಸಮಸ್ಯೆಗಳಲ್ಲ, ಅದನ್ನು ಪರಿಹರಿಸಲು ಯಾರೂ ನಮಗೆ ಗುತ್ತಿಗೆ ಕೊಟ್ಟಿಲ್ಲ. “ಲೋಕದ ಡೊಂಕ ನೀವೇಕೆ ತಿದ್ದುವಿರಿಯ್ಯಾ”ಎಂದು ಬಸವಣ್ಣನವರು ಹೇಳಿದ ಹಾಗೆ, ಜೀವನವನ್ನು ಬಂದಂತೆ ಸ್ವೀಕರಿಸಬೇಕು. ಏಕೆಂದರೆ ಯಾರ ಕೈಯಲ್ಲಿ ಸುತ್ತಿಗೆ ಇರುತ್ತದೋ ಅವರಿಗೆ ಎಲ್ಲವೂ ಮೊಳೆಯಂತೆ ಕಾಣುತ್ತದೆ; ಯಾರ ಕೈಯಲ್ಲಿ ಸ್ಪ್ಯಾನರ್ ಇರುತ್ತದೋ ಅವರಿಗೆ ಎಲ್ಲವೂ ಸಡಿಲವಾದ, ಬಿಗಿಯಾಗಿ ಭದ್ರಪಡಿಸಬೇಕಾಗಿರುವ, ನಟ್-ಬೋಲ್ಟಿನಂತೆ ಕಾಣುತ್ತದೆ. ಆ ಸುತ್ತಿಗೆ, ಆ ಸ್ಪ್ಯಾನರ್ ಬದಿಗಿಡಿ. ಜೀವನವನ್ನು ಮಗುವಿನ ದೃಷ್ಟಿಕೋನದಿಂದ ನೋಡಿ, ಅದರಿಂದ ಏನು ಕಲಿಯಬಹುದು, ಅದನ್ನು ಕಲಿಯಿರಿ.

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

ನಿಮ್ಮ ಬಾಲ್ಯದ ನೆನಪನ್ನು ಭದ್ರವಾಗಿರಿಸಿಕೊಳ್ಳಿ. ನೀವು ಮಾಡಿದ ತಪ್ಪುಗಳು, ಚೇಷ್ಟೆಗಳು ಎಂದಿದ್ದರೂ ನಿಮಗೆ ಸಂತೋಷ ನೀಡುವ ಚಿಲುಮೆಗಳು. ಅದು ಬತ್ತದಂತೆ ಜಾಗೃತೆ ವಹಿಸಿ. ಅದೇ ರೀತಿ ಮಕ್ಕಳು ತಮಗೆ ಬೇಡವಾದುದನ್ನು ಎಸೆಯುತ್ತಿರುತ್ತವೆ, ನೀವೂ ಸಹ ಬೇಡವಾದ ಕಹಿ ನೆನಪುಗಳ, ಸಂಬಂಧಗಳ ಭಾರವಾದ ಮೂಟೆ ಜೀವನವಿಡೀ ಹೊರುವುದನ್ನು ಬಿಡಿ, ಅವನ್ನು ಎತ್ತೆಸೆಯಿರಿ.

ಮಿಕ್ಕ ಮಕ್ಕಳಂತೆ ಈ ಮಗುವಿಗೂ ಪ್ರೀತಿ ಬೇಕು. ಉಡುಗೊರೆ ಬೇಕು. ಆದ್ದರಿಂದ ನಿಮ್ಮ ಕಲ್ಪನಾಶಕ್ತಿ ಉಪಯೋಗಿಸಿ ಇದರ ಜೊತೆಗೂ ನಿಮ್ಮ ಅಮೂಲ್ಯವಾದ ಸಮಯ ಕಳೆಯಿರಿ, ನಿಮ್ಮ ಪ್ರೀತಿ ತೋರಿಸಿ, ಉಡುಗೊರೆಗಳನ್ನು ನೀಡಿ. ಆ ಮಗುವೂ ನಿಮ್ಮ ಭಾವನೆಗಳನ್ನು ಬಡ್ಡಿಯೊಂದಿಗೆ ಹಿಂತಿರುಗಿಸುತ್ತದೆ.

“ವಿಶ್ವದ ನಿಜವಾದ ಸಮಸ್ಯೆ ಎಂದರೆ (ವಿಶ್ವದ) ಬಹುತೇಕ ಜನ ಬೇಗ ವಯಸ್ಕರಾಗುತ್ತಾರೆ” ಎನ್ನುತ್ತಾರೆ ಮಕ್ಕಳ ಅಚ್ಚುಮೆಚ್ಚಿನ ಖ್ಯಾತ ಕಾರ್ಟೂನ್ ಚಿತ್ರ ನಿರ್ಮಾಪಕ ವಾಲ್ಟ್ ಡಿಸ್ನಿ. ನೀವಾದರೂ ವಯಸ್ಕರಾಗದೇ ನಿಮ್ಮೊಳಗಿರುವ ಮಗುವನ್ನು ಸಂರಕ್ಷಿಸಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...