Homeಮುಖಪುಟನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ: ಅದರ ಬಗ್ಗೆ ನಿಮಗೆ ಗೊತ್ತೆ?

ನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ: ಅದರ ಬಗ್ಗೆ ನಿಮಗೆ ಗೊತ್ತೆ?

ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಸ್ಪೂರ್ತಿದಾಯಕ ಅಥವಾ ಆತಂಕದ ಕೆಲಸವೂ ಆಗಿರಬಹುದು. ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದಲ್ಲಿ ಈ ಭಾವನಾತ್ಮಕ ತಳಮಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ -10

ಮನಃಶಾಸ್ತ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಕಲೆಯನ್ನು ಮಾನವನ ಅರಿವಿನ ಪ್ರಕ್ರಿಯೆ (ಕಾಗ್ನಿಟಿವ್ ಪ್ರೋಸೆಸ್) ಎಂದು ಗುರುತಿಸಲಾಗಿದೆ. ದಿನ ನಿತ್ಯದ ನಿರ್ಧಾರಗಳಲ್ಲಿ ನಾವು ಎದುರಿಸುವುದು ಗ್ರಾಹಕರಾಗಿ ತೆಗೆದುಕೊಳ್ಳಬೇಕಾದ ನಿರ್ಧಾರಗಳು, ವ್ಯಾಪಾರದ ನಿರ್ಧಾರಗಳು ಮತ್ತು ವೈಯುಕ್ತಿಕ ನಿರ್ಧಾರಗಳು. ವ್ಯಾಪಾರದ ನಿರ್ಧಾರ ಈ ಲೇಖನದ ಮುಖ್ಯ ಉದ್ದೇಶವಲ್ಲ, ಹಾಗಾಗಿ ನಾನು ಹೆಚ್ಚಾಗಿ ವೈಯುಕ್ತಿಕ ದೃಷ್ಟಿಕೋನದಿಂದ ನಿರ್ಧಾರ ಪ್ರಕ್ರಿಯ ಬಗ್ಗೆ ತಿಳಿಸಬಯಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮೂರು ಮಹತ್ವದ ಅಂಶಗಳೆಂದರೆ:

ಅಪಾಯ (ರಿಸ್ಕ್): ಎಲ್ಲಾ ನಿರ್ಧಾರಗಳಲ್ಲಿಯೂ ಒಂದು ಪ್ರಮಾಣದ ಅಪಾಯ ಇದ್ದೇ ಇರುತ್ತದೆ. ಅಪಾಯವನ್ನು ಗುರುತಿಸಿ, ನಮಗೆ ಇರುವ ಉತ್ತಮ ದಾರಿಯನ್ನು ಹಿಡಿದು ಮುಂದೆ ಸಾಗಬೇಕು.

ಪರಿಣಾಮ: ಯಾವುದೇ ನಿರ್ಧಾರದ ಪರಿಣಾಮ ಹೀಗೆಯೇ ಆಗುತ್ತದೆ ಎಂದು 100% ಖಾತರಿಯಿಂದ ಹೇಳಲು ಬರುವುದಿಲ್ಲ. ಎಲ್ಲೋ ಒಂದು ಹೆಚ್ಚು-ಕಡಿಮೆ ಆಗಬಲ್ಲ ಅಂಶ ನಮ್ಮ ಊಹೆಗಿಂತ ಹೆಚ್ಚು ಮೇಲೆ-ಕೆಳಗೆ ಆಗಿರುವ ಸಾಧ್ಯತೆ ಇರುತ್ತದೆ. ಆದಷ್ಟು ಮಟ್ಟಿಗೆ ಎಲ್ಲಾ ಅಂಶಗಳನ್ನು ಪರಿಗಣಿಸಿದ್ದರೆ ಅಥವಾ ದುಃಸ್ಥಿತಿಯಿಂದ ಪಾರಾಗಲು ಬೇಕಾದಷ್ಟು ಉಪಾಯಮಾರ್ಗಗಳನ್ನು ಕಂಡುಕೊಂಡಿದ್ದಲ್ಲಿ, ಬಂದ ಪರಿಣಾಮ ಎದುರಿಸಬಹುದು.

ಸಾಧ್ಯತೆ: ನಮ್ಮ ನಿರ್ಧಾರ ವಾಸ್ತವಿಕವೇ ಮತ್ತು ಅದನ್ನು ಜಾರಿಗೊಳಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸಿರಬೇಕು. ಬೆಕ್ಕಿನ ಕತ್ತಿಗೆ ಗಂಟೆ ಕಟ್ಟುವ ಕೆಲಸ ಯಾರು ಮಾಡುವುದು ಎಂಬುದನ್ನು ತಿಳಿಯದೇ ನಿರ್ಧಾರ ಕೈಬಿಡುವಂತಾಗಬಾರದು.

ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಸ್ಪೂರ್ತಿದಾಯಕ ಅಥವಾ ಆತಂಕದ ಕೆಲಸವೂ ಆಗಿರಬಹುದು. ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದಲ್ಲಿ ಈ ಭಾವನಾತ್ಮಕ ತಳಮಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಾಲೋಚನೆಯಿಂದ ಯಾವ ನಿರ್ಧಾರ ಸರಿಯಾಗುವುದು ಎನ್ನುವುದನ್ನು, ನಿಮ್ಮ ಸಮಯ ತೆಗೆದುಕೊಂಡು, ಅಥವಾ ಸಮಯವಿದ್ದಾಗಲೇ ಮನದಟ್ಟು ಮಾಡಿಕೊಳ್ಳಿ. ಈ ಕೆಲಸವನ್ನು ಮುಂದಕ್ಕೆ ಹಾಕಿ, ನಿಮ್ಮ ನಿರ್ಧಾರವನ್ನು ಕೊನೆಯ ಗಳಿಗೆಗೆ ಬಿಟ್ಟು, ಆತುರದ ನಿರ್ಧಾರ ತಪ್ಪಾಯಿತು ಎಂದು ಪೇಚಾಡಬೇಡಿ.

ಟಾಟಾ ಕಂಪನಿಯ ಮುಖ್ಯಸ್ಥ ಶ್ರೀ ರಟನ್ ಟಾಟಾ ಹೇಳಿಕೆ: “ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಮತ್ತು ಅದನ್ನು ಸರಿಯಾದುದನ್ನಾಗಿ ಮಾಡುತ್ತೇನೆ”. ಅಂತಹ ಶಕ್ತಿ ನಿಮ್ಮಲ್ಲಿಯೂ ಇದ್ದರೆ ನೀವೂ ಸಹ ಹಾಗೇ ಮಾಡಬಹುದು. ನೀವು ತೆಗೆದುಕೊಂಡ ನಿರ್ಧಾರವನ್ನು “ಸರಿ” ಆಗುವಂತೆ ಇತರ ಅಂಶಗಳನ್ನು ನಿಯಂತ್ರಿಸುವುದು. ನೀವು ಮನೆಯಿಂದ ಹೊರಗೆ ಹೋಗುವಾಗ ಇಂದು ಮಳೆ ಬರುವುದಿಲ್ಲವೆಂದು ನಿರ್ಧರಿಸಿ, ಕೊಡೆ ತೆಗೆದುಕೊಂಡು ಹೋಗಲಿಲ್ಲ ಮತ್ತು ಮಳೆ ಬಂದಿತು ಎಂದಿಟ್ಟುಕೊಳ್ಳಿ. ಆಗ ಮಳೆಯಲ್ಲಿ ನೆನೆದುಕೊಂಡು ಹೋಗಿ ಅದನ್ನೇ ಹೊಸ ಫ್ಯಾಶನ್ ಎಂದು ಜನರಿಗೆ ತಿಳಿಸಿ. ಶಾರುಖ್ ಖಾನ್ ಅಥವಾ ದೀಪಿಕಾ ಮಾಡಿದರೆ ಜನ ನಂಬಬಹುದು, ನಾವು ನೀವು ಮಾಡಿದರೆ ಪೆದ್ದುತನ ಎನ್ನುತ್ತಾರೆ. ಇರಲಿ ಬಿಡಿ.

ಪ್ರತಿಯೊಬ್ಬರಿಗೂ ತಮ್ಮದೇ ಆದ ನಿರ್ಧಾರ ಕೈಗೊಳ್ಳುವ ರೀತಿ ಇರುತ್ತದೆ, ಉದಾ: ವ್ಯವಸ್ಥಾಪಕ, ವಿಮರ್ಶಾತ್ಮಕ, ಭಾವರೂಪಕ ಮತ್ತು ವರ್ತನೆಯ ಆಧಾರದ ಮೇಲೆ ಅವರು ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರತಿಯೊಂದು ರೀತಿಯೂ ಪರ್ಯಾಯ ಮಾರ್ಗಗಳನ್ನು ಹುಡುಕುವ, ಆರಿಸಿಕೊಳ್ಳುವ ವಿಧಾನಗಳು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಮತ್ತು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹಲವಾರು ಸಮಾನತೆಗಳಿದ್ದು, ಎರಡು ಪ್ರಕ್ರಿಯೆಯಲ್ಲೂ ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆಯ ಅವಶ್ಯಕತೆ ಇರುತ್ತದೆ. ಎರಡರಲ್ಲೂ ಒಂದೇ ತರಹದ ವಿಧಾನಗಳ ಬಳಕೆಯೂ ಪ್ರಯೋಜನಕ್ಕೆ ಬರುತ್ತದೆ.

ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥಿತ ವಿಧಾನ:
ಹೆಜ್ಜೆ 1: ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯನ್ನು ಗುರುತಿಸುವುದು: ಈ ಹೆಜ್ಜೆಯಲ್ಲಿ ಸಮಸ್ಯೆಯನ್ನು ಸರಿಯಾಗಿ ವಿಶ್ಲೇಷಿಸುವ ಸಲುವಾಗಿ ಕೆಲವು ಪ್ರಶ್ನೆಗಳನ್ನು ಕೇಳಬಹುದು, ಉದಾ:

ಸಮಸ್ಯೆ ಏನು? ಪರಿಹಾರ ಏಕೆ ಬೇಕಿದೆ? ಯಾರಿಗೆ ತೊಂದರೆ ಆಗಿದೆ? ಪರಿಹಾರ ಯಾವಾಗ ಬೇಕಿದೆ?

ಹೆಜ್ಜೆ 2: ಮಾಹಿತಿ ಕಲೆಹಾಕುವುದು: ಸಮಸ್ಯೆ ಹಲವರನ್ನು ಬಾಧಿಸುತ್ತಿರಬಹುದು ಮತ್ತು ಸಮಸ್ಯೆಗೆ ಹಲವಾರು ಕಾರಣವಿರಬಹುದು. ಆದರಿಂದ ಈ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಬೇಕಾಗುತ್ತದೆ. ಇದಕ್ಕೆ ಒಂದು “ಚೆಕ್-ಲಿಸ್ಟ್” ತಯಾರಿಸಿಕೊಳ್ಳುವುದು ಉತ್ತಮ. ಮಾಹಿತಿ ಸಮರ್ಪಕವಾಗಿದ್ದಷ್ಟೂ ಪರಿಹಾರವೂ ಸಮರ್ಪಕವಾಗಿರುತ್ತದೆ.

ಹೆಜ್ಜೆ 3: ಸಮಸ್ಯೆ ಪರಿಹಾರಕ್ಕೆ ಇರುವ ಉಪಾಯಗಳನ್ನು/ಮಾರ್ಗಗಳ ಅವಲೋಕನ” ಇದಕ್ಕೆ ಒಂದು ನಿರ್ದಿಷ್ಟ ಮಾನದಂಡ ನಿಗದಿ ಪಡಿಸಬೇಕು. ನಿಗದಿ ಪಡಿಸುವಾಗ ನಮಗೆ ಬೇಕಾದ ಪರಿಹಾರ, ಸಾಂಸ್ಕೃತಿಕ ಕಟ್ಟುಪಾಡು, ಮುಂತಾದವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲವನ್ನೂ ಲಾಭ-ನಷ್ಟದ ಕನ್ನಡಕದಿಂದ ನೋಡಲು ಬರುವುದಿಲ್ಲ.

ಹೆಜ್ಜೆ 4: ಹೊಸ ಮಾರ್ಗ/ಉಪಾಯಗಳ ಬಗ್ಗೆ ಚಿಂತನೆ: ತಿಳಿದಿರುವ ಉಪಾಯಗಳನ್ನು ಬಿಟ್ಟು ಇನ್ನೇನು ಮಾಡಬಹುದು ಎಂಬುದನ್ನು ಚಿಂತಿಸಿವುದು ಮತ್ತು ಅದರ ಪರಿಣಾಮ ಏನಾಗಬಹುದು ಎಂದು ಊಹಿಸುವುದು.

ಹೆಜ್ಜೆ 5: ಎಲ್ಲಾ ಉಪಾಯ/ಮಾರ್ಗಗಳ ಶಕ್ತಿ/ದುರ್ಬಲತೆ ತೂಗಿ ನೋಡುವುದು. ಅದರ ಆಧಾರದ ಮೇಲೆ ಬಳಸ ಬಹುದಾದ ಮಾರ್ಗ/ಉಪಾಯವನ್ನು ಅದರ ಉಪಯುಕ್ತತೆಯ ಮೇಲೆ ಒಂದು,ಎರಡು, ಮೂರು ಎಂದು ಪಟ್ಟಿ ಮಾಡುವುದು.

ಹೆಜ್ಜೆ 6: ಅತ್ಯಂತ ಉತ್ತಮವಾದುದನ್ನು ಆಯ್ದುಕೊಳ್ಳುವುದು. ಮೇಲಿನ ಪಟ್ಟಿಯಿಂದ ನಮಗೆ ಇದೇ ಸರಿಯಾದ ಆಯ್ಕೆ ಎನಿಸಿದ್ದನ್ನು ಆಯ್ದುಕೊಂಡು, ಅದಕ್ಕೆ ಬೇಕಾದ ಸಂಸಾಧನಗಳನ್ನು ಹೊಂದಿಸಿಕೊಳ್ಳುವುದು, ಯಾವ ಭಾಗ/ಕೆಲಸಕ್ಕೆ ಯಾರು ಜವಾಬ್ದಾರರು ಎಂಬುದನ್ನು ನಿಗದಿ ಪಡಿಸುವುದು, ಸಮಸ್ಯೆಯಿಂದ ಬಾಧಿತರಾದವರ ಮತ್ತು ಪರಿಹಾರ ನೀಡುವ ತಂಡದ ಜೊತೆ ಪರಿಹಾರ ಪ್ರಕ್ರಿಯೆಯ ಮಾಹಿತಿಯನ್ನು ಹಂಚಿಕೊಳ್ಳುವುದು.

ಹೆಜ್ಜೆ 7: ಯೋಜನೆಯನ್ನು ಜಾರಿಗೆ ತರುವುದು: ಈ ಹಂತದಲ್ಲಿ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗದೆ, ನಿರ್ಧಾರಿತ ಯೋಜನೆಯನ್ನು ನೀವೇ ಚಾಚೂತಪ್ಪದಂತೆ ಜಾರಿಗೊಳಿಸಬೇಕು. ಏನು ಮತ್ತು ಹೇಗೆ ನಡೆಯುತ್ತಿದೆ ಎಂಬ ಮೇಲುಸ್ತುವಾರಿ ಕೆಲಸ ಖಂಡಿತಾ ಮಾಡಬೇಕು.

ಹೆಜ್ಜೆ 8: ಬಂದ ಪರಿಣಾಮವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದು. ಇದರಿಂದ ಏನು ಕಲಿಯಬಹುದು ಅವನ್ನು ಗುರುತು ಹಾಕಿಕೊಂಡು, ಮುಂದಿನ ಬಾರಿಗೆ ಕೈಗೆಟುಕುವಂತೆ ಇಟ್ಟುಕೊಳ್ಳಬೇಕು.

ನಿರ್ಧಾರ ತೆಗೆದುಕೊಳ್ಳುವ ಮುಂಚೆ ಆಗಬಹುದಾದ ಧನಾತ್ಮಕ/ಋಣಾತ್ಮಕ ಅಂಶಗಳನ್ನು ತೂಗಿ ನೋಡಬೇಕು. ಇದರಿಂದ ಆಗಬಹುದಾದ ನಷ್ಟ ಎದುರಿಸಲು ಪೂರ್ವಸಿದ್ಧತೆಗೆ ಸಮಯ ಸಿಗುತ್ತದೆ. ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳದೇ ಇರುವುದೇ ಕ್ಷೇಮ, ಕಾಲಕ್ರಮೇಣ ಎಲ್ಲವೂ ಸರಿಹೋಗಬಹುದು ಎಂದು ಅನಿಸಬಹುದು. ಆದರೆ ಕಷ್ಟಕರ ನಿರ್ಧಾರ ತೆಗೆದುಕೊಂಡು, ಮುಂದೆ ಬಂದುದನ್ನು ಎದುರಿಸುವ ಕಲೆಯೇ ನಾಯಕತ್ವದ ನಿಜವಾದ ಲಕ್ಷಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....