Homeಮುಖಪುಟನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ: ಅದರ ಬಗ್ಗೆ ನಿಮಗೆ ಗೊತ್ತೆ?

ನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ: ಅದರ ಬಗ್ಗೆ ನಿಮಗೆ ಗೊತ್ತೆ?

ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಸ್ಪೂರ್ತಿದಾಯಕ ಅಥವಾ ಆತಂಕದ ಕೆಲಸವೂ ಆಗಿರಬಹುದು. ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದಲ್ಲಿ ಈ ಭಾವನಾತ್ಮಕ ತಳಮಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ -10

ಮನಃಶಾಸ್ತ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಕಲೆಯನ್ನು ಮಾನವನ ಅರಿವಿನ ಪ್ರಕ್ರಿಯೆ (ಕಾಗ್ನಿಟಿವ್ ಪ್ರೋಸೆಸ್) ಎಂದು ಗುರುತಿಸಲಾಗಿದೆ. ದಿನ ನಿತ್ಯದ ನಿರ್ಧಾರಗಳಲ್ಲಿ ನಾವು ಎದುರಿಸುವುದು ಗ್ರಾಹಕರಾಗಿ ತೆಗೆದುಕೊಳ್ಳಬೇಕಾದ ನಿರ್ಧಾರಗಳು, ವ್ಯಾಪಾರದ ನಿರ್ಧಾರಗಳು ಮತ್ತು ವೈಯುಕ್ತಿಕ ನಿರ್ಧಾರಗಳು. ವ್ಯಾಪಾರದ ನಿರ್ಧಾರ ಈ ಲೇಖನದ ಮುಖ್ಯ ಉದ್ದೇಶವಲ್ಲ, ಹಾಗಾಗಿ ನಾನು ಹೆಚ್ಚಾಗಿ ವೈಯುಕ್ತಿಕ ದೃಷ್ಟಿಕೋನದಿಂದ ನಿರ್ಧಾರ ಪ್ರಕ್ರಿಯ ಬಗ್ಗೆ ತಿಳಿಸಬಯಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮೂರು ಮಹತ್ವದ ಅಂಶಗಳೆಂದರೆ:

ಅಪಾಯ (ರಿಸ್ಕ್): ಎಲ್ಲಾ ನಿರ್ಧಾರಗಳಲ್ಲಿಯೂ ಒಂದು ಪ್ರಮಾಣದ ಅಪಾಯ ಇದ್ದೇ ಇರುತ್ತದೆ. ಅಪಾಯವನ್ನು ಗುರುತಿಸಿ, ನಮಗೆ ಇರುವ ಉತ್ತಮ ದಾರಿಯನ್ನು ಹಿಡಿದು ಮುಂದೆ ಸಾಗಬೇಕು.

ಪರಿಣಾಮ: ಯಾವುದೇ ನಿರ್ಧಾರದ ಪರಿಣಾಮ ಹೀಗೆಯೇ ಆಗುತ್ತದೆ ಎಂದು 100% ಖಾತರಿಯಿಂದ ಹೇಳಲು ಬರುವುದಿಲ್ಲ. ಎಲ್ಲೋ ಒಂದು ಹೆಚ್ಚು-ಕಡಿಮೆ ಆಗಬಲ್ಲ ಅಂಶ ನಮ್ಮ ಊಹೆಗಿಂತ ಹೆಚ್ಚು ಮೇಲೆ-ಕೆಳಗೆ ಆಗಿರುವ ಸಾಧ್ಯತೆ ಇರುತ್ತದೆ. ಆದಷ್ಟು ಮಟ್ಟಿಗೆ ಎಲ್ಲಾ ಅಂಶಗಳನ್ನು ಪರಿಗಣಿಸಿದ್ದರೆ ಅಥವಾ ದುಃಸ್ಥಿತಿಯಿಂದ ಪಾರಾಗಲು ಬೇಕಾದಷ್ಟು ಉಪಾಯಮಾರ್ಗಗಳನ್ನು ಕಂಡುಕೊಂಡಿದ್ದಲ್ಲಿ, ಬಂದ ಪರಿಣಾಮ ಎದುರಿಸಬಹುದು.

ಸಾಧ್ಯತೆ: ನಮ್ಮ ನಿರ್ಧಾರ ವಾಸ್ತವಿಕವೇ ಮತ್ತು ಅದನ್ನು ಜಾರಿಗೊಳಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸಿರಬೇಕು. ಬೆಕ್ಕಿನ ಕತ್ತಿಗೆ ಗಂಟೆ ಕಟ್ಟುವ ಕೆಲಸ ಯಾರು ಮಾಡುವುದು ಎಂಬುದನ್ನು ತಿಳಿಯದೇ ನಿರ್ಧಾರ ಕೈಬಿಡುವಂತಾಗಬಾರದು.

ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಸ್ಪೂರ್ತಿದಾಯಕ ಅಥವಾ ಆತಂಕದ ಕೆಲಸವೂ ಆಗಿರಬಹುದು. ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದಲ್ಲಿ ಈ ಭಾವನಾತ್ಮಕ ತಳಮಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಾಲೋಚನೆಯಿಂದ ಯಾವ ನಿರ್ಧಾರ ಸರಿಯಾಗುವುದು ಎನ್ನುವುದನ್ನು, ನಿಮ್ಮ ಸಮಯ ತೆಗೆದುಕೊಂಡು, ಅಥವಾ ಸಮಯವಿದ್ದಾಗಲೇ ಮನದಟ್ಟು ಮಾಡಿಕೊಳ್ಳಿ. ಈ ಕೆಲಸವನ್ನು ಮುಂದಕ್ಕೆ ಹಾಕಿ, ನಿಮ್ಮ ನಿರ್ಧಾರವನ್ನು ಕೊನೆಯ ಗಳಿಗೆಗೆ ಬಿಟ್ಟು, ಆತುರದ ನಿರ್ಧಾರ ತಪ್ಪಾಯಿತು ಎಂದು ಪೇಚಾಡಬೇಡಿ.

ಟಾಟಾ ಕಂಪನಿಯ ಮುಖ್ಯಸ್ಥ ಶ್ರೀ ರಟನ್ ಟಾಟಾ ಹೇಳಿಕೆ: “ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಮತ್ತು ಅದನ್ನು ಸರಿಯಾದುದನ್ನಾಗಿ ಮಾಡುತ್ತೇನೆ”. ಅಂತಹ ಶಕ್ತಿ ನಿಮ್ಮಲ್ಲಿಯೂ ಇದ್ದರೆ ನೀವೂ ಸಹ ಹಾಗೇ ಮಾಡಬಹುದು. ನೀವು ತೆಗೆದುಕೊಂಡ ನಿರ್ಧಾರವನ್ನು “ಸರಿ” ಆಗುವಂತೆ ಇತರ ಅಂಶಗಳನ್ನು ನಿಯಂತ್ರಿಸುವುದು. ನೀವು ಮನೆಯಿಂದ ಹೊರಗೆ ಹೋಗುವಾಗ ಇಂದು ಮಳೆ ಬರುವುದಿಲ್ಲವೆಂದು ನಿರ್ಧರಿಸಿ, ಕೊಡೆ ತೆಗೆದುಕೊಂಡು ಹೋಗಲಿಲ್ಲ ಮತ್ತು ಮಳೆ ಬಂದಿತು ಎಂದಿಟ್ಟುಕೊಳ್ಳಿ. ಆಗ ಮಳೆಯಲ್ಲಿ ನೆನೆದುಕೊಂಡು ಹೋಗಿ ಅದನ್ನೇ ಹೊಸ ಫ್ಯಾಶನ್ ಎಂದು ಜನರಿಗೆ ತಿಳಿಸಿ. ಶಾರುಖ್ ಖಾನ್ ಅಥವಾ ದೀಪಿಕಾ ಮಾಡಿದರೆ ಜನ ನಂಬಬಹುದು, ನಾವು ನೀವು ಮಾಡಿದರೆ ಪೆದ್ದುತನ ಎನ್ನುತ್ತಾರೆ. ಇರಲಿ ಬಿಡಿ.

ಪ್ರತಿಯೊಬ್ಬರಿಗೂ ತಮ್ಮದೇ ಆದ ನಿರ್ಧಾರ ಕೈಗೊಳ್ಳುವ ರೀತಿ ಇರುತ್ತದೆ, ಉದಾ: ವ್ಯವಸ್ಥಾಪಕ, ವಿಮರ್ಶಾತ್ಮಕ, ಭಾವರೂಪಕ ಮತ್ತು ವರ್ತನೆಯ ಆಧಾರದ ಮೇಲೆ ಅವರು ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರತಿಯೊಂದು ರೀತಿಯೂ ಪರ್ಯಾಯ ಮಾರ್ಗಗಳನ್ನು ಹುಡುಕುವ, ಆರಿಸಿಕೊಳ್ಳುವ ವಿಧಾನಗಳು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಮತ್ತು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹಲವಾರು ಸಮಾನತೆಗಳಿದ್ದು, ಎರಡು ಪ್ರಕ್ರಿಯೆಯಲ್ಲೂ ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆಯ ಅವಶ್ಯಕತೆ ಇರುತ್ತದೆ. ಎರಡರಲ್ಲೂ ಒಂದೇ ತರಹದ ವಿಧಾನಗಳ ಬಳಕೆಯೂ ಪ್ರಯೋಜನಕ್ಕೆ ಬರುತ್ತದೆ.

ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥಿತ ವಿಧಾನ:
ಹೆಜ್ಜೆ 1: ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯನ್ನು ಗುರುತಿಸುವುದು: ಈ ಹೆಜ್ಜೆಯಲ್ಲಿ ಸಮಸ್ಯೆಯನ್ನು ಸರಿಯಾಗಿ ವಿಶ್ಲೇಷಿಸುವ ಸಲುವಾಗಿ ಕೆಲವು ಪ್ರಶ್ನೆಗಳನ್ನು ಕೇಳಬಹುದು, ಉದಾ:

ಸಮಸ್ಯೆ ಏನು? ಪರಿಹಾರ ಏಕೆ ಬೇಕಿದೆ? ಯಾರಿಗೆ ತೊಂದರೆ ಆಗಿದೆ? ಪರಿಹಾರ ಯಾವಾಗ ಬೇಕಿದೆ?

ಹೆಜ್ಜೆ 2: ಮಾಹಿತಿ ಕಲೆಹಾಕುವುದು: ಸಮಸ್ಯೆ ಹಲವರನ್ನು ಬಾಧಿಸುತ್ತಿರಬಹುದು ಮತ್ತು ಸಮಸ್ಯೆಗೆ ಹಲವಾರು ಕಾರಣವಿರಬಹುದು. ಆದರಿಂದ ಈ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಬೇಕಾಗುತ್ತದೆ. ಇದಕ್ಕೆ ಒಂದು “ಚೆಕ್-ಲಿಸ್ಟ್” ತಯಾರಿಸಿಕೊಳ್ಳುವುದು ಉತ್ತಮ. ಮಾಹಿತಿ ಸಮರ್ಪಕವಾಗಿದ್ದಷ್ಟೂ ಪರಿಹಾರವೂ ಸಮರ್ಪಕವಾಗಿರುತ್ತದೆ.

ಹೆಜ್ಜೆ 3: ಸಮಸ್ಯೆ ಪರಿಹಾರಕ್ಕೆ ಇರುವ ಉಪಾಯಗಳನ್ನು/ಮಾರ್ಗಗಳ ಅವಲೋಕನ” ಇದಕ್ಕೆ ಒಂದು ನಿರ್ದಿಷ್ಟ ಮಾನದಂಡ ನಿಗದಿ ಪಡಿಸಬೇಕು. ನಿಗದಿ ಪಡಿಸುವಾಗ ನಮಗೆ ಬೇಕಾದ ಪರಿಹಾರ, ಸಾಂಸ್ಕೃತಿಕ ಕಟ್ಟುಪಾಡು, ಮುಂತಾದವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲವನ್ನೂ ಲಾಭ-ನಷ್ಟದ ಕನ್ನಡಕದಿಂದ ನೋಡಲು ಬರುವುದಿಲ್ಲ.

ಹೆಜ್ಜೆ 4: ಹೊಸ ಮಾರ್ಗ/ಉಪಾಯಗಳ ಬಗ್ಗೆ ಚಿಂತನೆ: ತಿಳಿದಿರುವ ಉಪಾಯಗಳನ್ನು ಬಿಟ್ಟು ಇನ್ನೇನು ಮಾಡಬಹುದು ಎಂಬುದನ್ನು ಚಿಂತಿಸಿವುದು ಮತ್ತು ಅದರ ಪರಿಣಾಮ ಏನಾಗಬಹುದು ಎಂದು ಊಹಿಸುವುದು.

ಹೆಜ್ಜೆ 5: ಎಲ್ಲಾ ಉಪಾಯ/ಮಾರ್ಗಗಳ ಶಕ್ತಿ/ದುರ್ಬಲತೆ ತೂಗಿ ನೋಡುವುದು. ಅದರ ಆಧಾರದ ಮೇಲೆ ಬಳಸ ಬಹುದಾದ ಮಾರ್ಗ/ಉಪಾಯವನ್ನು ಅದರ ಉಪಯುಕ್ತತೆಯ ಮೇಲೆ ಒಂದು,ಎರಡು, ಮೂರು ಎಂದು ಪಟ್ಟಿ ಮಾಡುವುದು.

ಹೆಜ್ಜೆ 6: ಅತ್ಯಂತ ಉತ್ತಮವಾದುದನ್ನು ಆಯ್ದುಕೊಳ್ಳುವುದು. ಮೇಲಿನ ಪಟ್ಟಿಯಿಂದ ನಮಗೆ ಇದೇ ಸರಿಯಾದ ಆಯ್ಕೆ ಎನಿಸಿದ್ದನ್ನು ಆಯ್ದುಕೊಂಡು, ಅದಕ್ಕೆ ಬೇಕಾದ ಸಂಸಾಧನಗಳನ್ನು ಹೊಂದಿಸಿಕೊಳ್ಳುವುದು, ಯಾವ ಭಾಗ/ಕೆಲಸಕ್ಕೆ ಯಾರು ಜವಾಬ್ದಾರರು ಎಂಬುದನ್ನು ನಿಗದಿ ಪಡಿಸುವುದು, ಸಮಸ್ಯೆಯಿಂದ ಬಾಧಿತರಾದವರ ಮತ್ತು ಪರಿಹಾರ ನೀಡುವ ತಂಡದ ಜೊತೆ ಪರಿಹಾರ ಪ್ರಕ್ರಿಯೆಯ ಮಾಹಿತಿಯನ್ನು ಹಂಚಿಕೊಳ್ಳುವುದು.

ಹೆಜ್ಜೆ 7: ಯೋಜನೆಯನ್ನು ಜಾರಿಗೆ ತರುವುದು: ಈ ಹಂತದಲ್ಲಿ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗದೆ, ನಿರ್ಧಾರಿತ ಯೋಜನೆಯನ್ನು ನೀವೇ ಚಾಚೂತಪ್ಪದಂತೆ ಜಾರಿಗೊಳಿಸಬೇಕು. ಏನು ಮತ್ತು ಹೇಗೆ ನಡೆಯುತ್ತಿದೆ ಎಂಬ ಮೇಲುಸ್ತುವಾರಿ ಕೆಲಸ ಖಂಡಿತಾ ಮಾಡಬೇಕು.

ಹೆಜ್ಜೆ 8: ಬಂದ ಪರಿಣಾಮವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದು. ಇದರಿಂದ ಏನು ಕಲಿಯಬಹುದು ಅವನ್ನು ಗುರುತು ಹಾಕಿಕೊಂಡು, ಮುಂದಿನ ಬಾರಿಗೆ ಕೈಗೆಟುಕುವಂತೆ ಇಟ್ಟುಕೊಳ್ಳಬೇಕು.

ನಿರ್ಧಾರ ತೆಗೆದುಕೊಳ್ಳುವ ಮುಂಚೆ ಆಗಬಹುದಾದ ಧನಾತ್ಮಕ/ಋಣಾತ್ಮಕ ಅಂಶಗಳನ್ನು ತೂಗಿ ನೋಡಬೇಕು. ಇದರಿಂದ ಆಗಬಹುದಾದ ನಷ್ಟ ಎದುರಿಸಲು ಪೂರ್ವಸಿದ್ಧತೆಗೆ ಸಮಯ ಸಿಗುತ್ತದೆ. ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳದೇ ಇರುವುದೇ ಕ್ಷೇಮ, ಕಾಲಕ್ರಮೇಣ ಎಲ್ಲವೂ ಸರಿಹೋಗಬಹುದು ಎಂದು ಅನಿಸಬಹುದು. ಆದರೆ ಕಷ್ಟಕರ ನಿರ್ಧಾರ ತೆಗೆದುಕೊಂಡು, ಮುಂದೆ ಬಂದುದನ್ನು ಎದುರಿಸುವ ಕಲೆಯೇ ನಾಯಕತ್ವದ ನಿಜವಾದ ಲಕ್ಷಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...