Homeಅಂಕಣಗಳುಅಪ್ಪನ ವಿದಾಯ ಮತ್ತು ವೈಚಾರಿಕತೆ

ಅಪ್ಪನ ವಿದಾಯ ಮತ್ತು ವೈಚಾರಿಕತೆ

- Advertisement -
- Advertisement -

| ಗೌರಿ ಲಂಕೇಶ್ |
ಜುಲೈ 29, 2009 (ಸಂಪಾದಕೀಯದಿಂದ)

ಅವತ್ತು ದೆಹಲಿಯಿಂದ ಬಂದು ಅಪ್ಪನನ್ನು ನೋಡಿದಾಗ ಅವರು ಟಾಟಾ ಹೇಳುತ್ತಿರುವಂತೆ ಒಂದು ಕೈ ಮೇಲಕ್ಕೆ ಚಾಚಿತ್ತು. ಅವರು ತಮ್ಮ ಫೇವರೇಟ್ ಆದ ನೀಲಿ ಬಣ್ಣದ ಸ್ವೆಟರ್ ಧರಿಸಿದ್ದರು. ಕಣ್ಣೀರು ತುಂಬಿದ್ದ ನನ್ನ ಕಣ್ಣುಗಳಿಗೆ ಏನೋ ಸರಿ ಇಲ್ಲ ಅನಿಸುತ್ತಿತ್ತು. ಮರುಕ್ಷಣವೇ ಅದೇನೆಂದು ಗೊತ್ತಾಯಿತು. ಅದೇ ಕ್ಷಣ ನನ್ನ ತಂಗಿ ಬೇಬಿ ಕೂಡ “ವಿಭೂತಿಯನ್ನು ಅಳಿಸು ಗೌರು” ಅಂದಳು. ಅವತ್ತು ನಮ್ಮ ಮನೆಗೆ ಬಂದಿದ್ದ ಅದ್ಯಾರೋ ಅಪ್ಪನ ಹಣೆಗೆ ವಿಭೂತಿ ಬಳಿದಿದ್ದರು. ತಣ್ಣಗಾಗಿದ್ದ ಅಪ್ಪನನ್ನು ಮುಟ್ಟಲಾಗದೇ ಬೇಬಿ ನನಗಾಗಿ ಕಾದಿದ್ದು ನಾನು ಬಂದಕೂಡಲೇ ಹಾಗೆ ಹೇಳಿದ್ದಳು. ದುಃಖದ ಜೊತೆಗೆ ಕೋಪವೂ ಬಂತು. ನನ್ನಪ್ಪ ಎಂದೂ ವಿಭೂತಿ(ಚಿಕ್ಕವರಿದ್ದಾಗ ಹೊರತುಪಡಿಸಿ) ಧರಿಸಿದವರಲ್ಲ, ಪೂಜೆ ಮಾಡಿದವರಲ್ಲ, ಲಿಂಗ ಕಟ್ಟಕೊಂಡವರಲ್ಲ, ಅಂತಹ ನನ್ನ ಅಪ್ಪ ಅಸಹಾಯಕರಾಗಿದ್ದಾಗ, ಪ್ರತಿಭಟಿಸದಂತಾಗಿದ್ದಾಗ ಅವರ ಹಣೆಗೆ ವಿಭೂತಿ ಹಚ್ಚಿದರು. ಅದನ್ನು ಕೂಡಲೇ ಒರೆಸಿದ ನಾನು “ನನ್ನಪ್ಪನನ್ನು ಯಾರೂ ಮುಟ್ಟಬೇಡಿ, ಇಂತಹದ್ದನ್ನೆಲ್ಲ ಮಾಡಬೇಡಿ” ಎಂದು ಆರ್ಭಟಿಸಿದ್ದೆ.

ಆದರೂ ಅದೆಲ್ಲ ಅಲ್ಲಿಗೇ ನಿಲ್ಲಲಿಲ್ಲ. ಮರುದಿನ ಆಗಮಿಸಿದ ಅಪ್ಪನ ಅಣ್ಣ ಶಿವರುದ್ರಪ್ಪ ಮತ್ತು ಇತರೆ ಸಂಬಂಧಿಗಳು ಅಪ್ಪನಿಗೆ ಅವಮಾನ ಮಾಡದಂತೆ ತಡೆಯುವುದೇ ಒಂದು ಕೆಲಸವಾಗಿ ಹೋಯಿತು. ಅವರ್ಯಾರೂ ಅಪ್ಪನಿಗೆ ಪೂಜೆ ಮಾಡದಂತೆ, ಕುಂಕುಮ ವಿಭೂತಿ ಹಚ್ಚದಂತೆ ನಾವೆಲ್ಲರೂ ಕಟ್ಟೆಚ್ಚರ ವಹಿಸಿದೆವು. ಅಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋದಾಗ ನೋಡುತ್ತೇವೆ, ಅಲ್ಲಿ ಯಾರೋ ಆಗಲೇ ಚಟ್ಟವನ್ನು ಕಟ್ಟಿದ್ದರು. ವಾಹನದಿಂದ ಅಪ್ಪನನ್ನು ಇಳಿಸಿ ಆ ಚಟ್ಟದಲ್ಲಿ ಎತ್ತಿಕೊಂಡು ಹೋಗುವ ಉದ್ದೇಶ ಅವರದ್ದಾಗಿತ್ತು. ಕೂಡಲೇ ಆ ಚಟ್ಟವನ್ನು ನನ್ನ ಅಪ್ಪನ ಹತ್ತಿರ ತರಕೂಡದು ಎಂದು ನಾನು ಮತ್ತು ಬೇಬಿ ಹೇಳಿದೆವು.

ಆದರೆ ನಾನು ಹೇಳಿದಷ್ಟು ಅವತ್ತಿನ ಪರಿಸ್ಥಿತಿ ಸರಳವಾಗಿರಲಿಲ್ಲ. ನನ್ನ ದೊಡ್ಡಪ್ಪ ಮತ್ತು ಅವರ ಮಗ ನಾಗರಾಜು “ ಇದೇನಿದು, ಲಿಂಗಾಯತರು ತೋಡುವಂತೆ ಗುಂಡಿಯನ್ನು ತೋಡಿಲ್ಲ” ಎಂದು ತಕರಾರು ಎತ್ತಿದರು. ಅದೆಲ್ಲ ಬೇಡ ಅಂದರೆ ಅವರು ಸಿದ್ಧರಾಗಿರಲಿಲ್ಲ. ಅದರಲ್ಲೂ ದೊಡ್ಡಪ್ಪ ಇದ್ದವರು ಇನ್ನೊಂದು ವಿಚಾರ ಕೈಗೆತ್ತಿಕೊಂಡರು. “ ಹೀಗೆ ಅಂಗಾತ ಮಲಗಿಸುವುದು ಸರಿಯಲ್ಲ ಕಾಲುಗಳನ್ನು ಮಡಚಿ ನಮ್ಮ ಸಂಪ್ರದಾಯದಂತೆ ಕೂರಿಸಿರಬೇಕು” ಎಂದರು. ಅಷ್ಟೊತ್ತಿಗಾಗಲೇ ಅಪ್ಪ ಹೋಗಿ 36 ಗಂಟೆಗಳಾಗಿದ್ದವು. ಆದ್ದರಿಂದ ಏನು? ಅಪ್ಪನ ಕೈಕಾಲು ಮುರಿತೀರಾ? ಅಂತ ನಾನು ಕೇಳಿದರೆ ದೊಡ್ಡಪ್ಪ ಏನಂದಿದ್ದರು ಗೊತ್ತಾ “ಮುರುದ್ರೆ ನೋವಾಗಲ್ಲ”. ಅದನ್ನು ಕೇಳಿ ನನಗೆ ಅಳಬೇಕೋ, ಕೋಪಗೊಳ್ಳಬೇಕೋ, ಗೊತ್ತಾಗಲಿಲ್ಲ. ‘ಅದೆಲ್ಲ ಗೊತ್ತಿಲ್ಲ. ಅಪ್ಪನ ನಂಬಿಕೆಗೆ ವಿದುದ್ಧವಾಗಿ ಯಾರೂ ಏನನ್ನು ಮಾಡುವಂತಿಲ್ಲ. ಆ ಜಾಗಕ್ಕೆ ನೀವೆಲ್ಲ ಪೂಜೆ ಮಾಡಿಸಲು ಬಿಟ್ಟಿದೇ ಹೆಚ್ಚು” ಎಂದು ಹೇಳಿ ಕೊನೆಗೂ ಅವರ ಬಾಯಿ ಮುಚ್ಚಿಸಿದ್ದೆ.

ಇನ್ನೇನು ಎಲ್ಲ ಮುಗಿಯಿತು. ಗುಂಡಿಗೆ ಮಣ್ಣು ಹಾಕಬೇಕು. ಆಗ ಗುಂಡಿಯಲ್ಲಿ ಅಪ್ಪನ ಪಕ್ಕ ನಿಂತಿದ್ದ ಒಬ್ಬ ಅದೆಲ್ಲಿಂದಲೋ ಲಿಂಗವೊಂದನ್ನು ಅಪ್ಪನ ಕತ್ತಿಗೆ ಕಟ್ಟಿದ. ಅದನ್ನು ನೋಡಿ ನನಗೆ ರೇಗಿತು. “ಅದನ್ನು ಬಿಚ್ಟು ಈಗಲೇ ಬಿಚ್ಚು’ ಎಂದು ಅರಚಿದೆ. ಅದೇ ಹೊತ್ತಿಗೆ ದೊಡ್ಡಪ್ಪ ಕರೆದುಕೊಂಡು ಬಂದಿದ್ದ ತಮಟೆಯವರು ಜೋರಾಗಿ ಬಾರಿಸಲಾರಂಭಿಸಿದರು. ಸುತ್ತಮುತ್ತಲಿದ್ದವರೆಲ್ಲಾ ಜೋರಾಗಿ ಅಳುತ್ತಿದ್ದರು. ಆ ಗದ್ದಲದಲ್ಲಿ ನನ್ನ ಮಾತು ಕೇಳಿಸುವಂತಿರಲಿಲ್ಲ ಬೇಬಿಗೆ ರೇಗಿ ಹೋಯಿತು. “ತಮಟೆಯವರಿಗೆ ನಿಲ್ಲಿಸಲು ಹೇಳಿ” ಎಂದು ಚೀರಿದಳು. ಅವಳೊಂದಿಗೆ ಪ್ರಕಾಶ್ ರೈ ಕೂಡ ದನಿಗೂಡಿಸಿದ್ದರಿಂದ ತಕ್ಷಣವೇ ಅವರು ತಮ್ಮ ಅಬ್ಬರವನ್ನು ನಿಲ್ಲಿಸಿದರು. ಗುಂಡಿಯಲ್ಲಿದ್ದವ ಅಪ್ಪನಿಗೆ ತೊಡಿಸಿದ್ದ ಲಿಂಗವನ್ನು ತೆಗೆಯಲು ಮತ್ತೆ ಹೇಳಿದಾಗ ಆತನಿಗೆ ಕೇಳಿಸಿತು. ಬೇರೆ ದಾರಿ ಇಲ್ಲದೆ ಅದನ್ನವನು ಬಿಚ್ಚಿದ. ಜಾತಿ ಸಂಪ್ರದಾಯದ ಮಾತು ಬದಿಗಿರಲಿ, ಅಪ್ಪನ ಸಂಪ್ರದಾಯವನ್ನಂತು ನಾವು ಪಾಲಿಸಿದೆವು. ಅದು ಹೇಗೆಂದರೆ ಅಪ್ಪನ ಸಂಪ್ರದಾಯದಲ್ಲಿ ಅತ್ಯಗತ್ಯವಾಗಿದ್ದ ಪೇಪರ್ ಮತ್ತು ಪೆನ್, ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣ , ಒಂದು ಬ್ಲಾಕ್ ಲೇಬಲ್ ವಿಸ್ಕಿ ಬಾಟಲ್ ,ಕುದುರೆ ರೇಸ್ ಪುಸ್ತಕ, ಇಸ್ಪೀಟು ಕಾರ್ಡ್‍ಗಳು, ಕಾದಂಬರಿ ಇತ್ಯಾದಿಗಳನ್ನೆಲ್ಲ ಅವರೊಂದಿಗೆ ಬೀಳ್ಕೊಟ್ಟೆವು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...