Homeಕರ್ನಾಟಕಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

ಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

- Advertisement -
- Advertisement -

ಈ ಬಾರಿಯ ಮಳೆ ಮತ್ತು ಪ್ರವಾಹಕ್ಕೆ ರಾಜ್ಯದ 2/3 ಜಿಲ್ಲೆ ಮತ್ತು ತಾಲೂಕುಗಳು ಬಲಿಯಾಗಿವೆ. ನೇರವಾಗಿ ಮಳೆ ಬಿದ್ದು ಅದರಿಂದುಂಟಾದ ಪ್ರವಾಹಕ್ಕೆ ತುತ್ತಾದ ತಾಲೂಕುಗಳು ಒಂದೆಡೆಯಾದರೆ, ಅಂಥಾ ಅನಾಹುತಕಾರಿ ಮಳೆ ಇಲ್ಲದೆಯೂ, ಮಲೆನಾಡು ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸುರಿದ ನೀರು ಹರಿಯಬಿಟ್ಟ ಕಾರಣ ಉಂಟಾದ ನೆರೆಗೆ ಬಲಿಯಾದ ತಾಲೂಕುಗಳು ಇನ್ನೊಂದೆಡೆ. ರಸ್ತೆ, ಸೇತುವೆ ಮುಂತಾದವುಗಳು ಕೊಚ್ಚಿಹೋದ ಕಾರಣಕ್ಕುಂಟಾದ ಮೂಲ ಸಂರಚನೆಯ ನಷ್ಟ, ಖಾಸಗಿ ಮನೆ ಮಠ, ಪಂಪ್‍ಸೆಟ್ ಇತ್ಯಾದಿಗಳ ನಷ್ಟ ಸಾವಿರಾರು ಕೋಟಿ ರೂಪಾಯಿಗಳು. ಇದಕ್ಕಿಂತಲೂ ಘೋರವೆಂದರೆ ಲಕ್ಷಾಂತರ ಎಕರೆಗಳಲ್ಲಿ ಸಾಗುವಳಿ ಆದ ಬೆಳೆ ನಾಶ. ಪ್ರವಾಹ ಮತ್ತು ಕುಂಭದ್ರೋಣ ಮಳೆಗೆ ತುತ್ತಾದ ಜಿಲ್ಲೆಗಳ ಸಾಗುವಳಿ ಜಮೀನಿನ ಪ್ರಮಾಣ ನೋಡಿ. ಇದರಲ್ಲಿ ಶೇ. 50-70ರಷ್ಟು ಬೆಳೆ ನಾಶವಾಗುವುದು ಖಂಡಿತ. ಕೃಷಿ ವಿಜ್ಞಾನಿಗಳು ಹೇಳಿದ ಹಾಗೆ ಒಂದು ವಾರ ಬಿಡಿ; ಕೇವಲ ಮೂರು ದಿನ ನೀರು ನಿಂತರೆ ಭತ್ತ ಮತ್ತು ಸ್ವಲ್ಪಮಟ್ಟಿಗೆ ರಾಗಿ ಮಾತ್ರ ತಾಳಿಕೊಳ್ಳಬಲ್ಲುದು. ಉಳಿದ ಬೆಳೆಗಳು ಪೋಷಕಾಂಶ ಹೀರಲಾಗದೇ ನಲುಗುತ್ತವೆ. ಅದೇರೀತಿ ಮೋಡ ಮುಸುಕಿದ ವಾತಾವರಣ ವಾರ ಕಾಲ ಇದ್ದರೆ ದ್ಯುತಿ ಸಂಶ್ಲೇಷಣೆ ಮಾಡಲಾಗದೇ ಗಿಡಗಳು ಸೊರಗುತ್ತವೆ. ಈ ಕಾರಣಕ್ಕೇ ಇಳುವರಿ ಶೇ.50-70ರಷ್ಟು ನಷ್ಟವಾಗುತ್ತದೆ.

ಈ ಮಳೆ ಹಾನಿಗೊಳಗಾದ ಭೂಪ್ರದೇಶದಲ್ಲಿ ಮೂರು ವಿಧವಿದೆ.
1. ಮಲೆನಾಡಿನ ವ್ಯಾಪಾರಿ ಬೆಳೆಗಳಾದ ಅಡಿಕೆ, ಕಾಫಿ ಬೆಳೆಯುವ ಪ್ರದೇಶ; ಇಲ್ಲಿ ಕಡುಬೇಸಿಗೆಯಿಂದಲೇ ಕಾಫಿ ಮತ್ತು ಅಡಿಕೆ ನಲುಗಿದ್ದು, ಈಗಿನ ಮಳೆಯಿಂದಾಗಿ ಕೊಳೆರೋಗ ಸಹಿತ ತೀವ್ರ ರೋಗ ಬಾಧೆಗೆ ತುತ್ತಾಗಿ ಬೆಳೆ ನಷ್ಟವಾಗುವ ಸಾಧ್ಯತೆ ದಟ್ಟವಾಗಿದೆ. ಈ ಪ್ರದೇಶದ ಸಾವಿರಾರು ಎಕರೆಗಳಲ್ಲಿ ಬಡ ಸಣ್ಣರೈತರು ಉಣ್ಣುವ ಸಲುವಾಗಿಯೇ ಮಳೆಆಶ್ರಿತ ಭತ್ತ ಬೆಳೆಯುತ್ತಾರೆ. (ಭತ್ತ ಬಿಟ್ಟು ಬೇರೆ ಯಾವ ಧಾನ್ಯವನ್ನೂ ಇವರು ಬೆಳೆಯುವುದಿಲ್ಲ) ಆರಂಭದಲ್ಲಿ ಮಳೆ ಇಲ್ಲದ ಕಾರಣ ಈ ರೈತರ ಭತ್ತದ ನಾಟಿ ಈ ಬಾರಿ ತಡವಾಗಿದೆ. ಈಗ ಭೀಷಣ ಮಳೆಯಿಂದಾಗಿ ಭತ್ತದ ಇಳುವರಿ ಕುಂಠಿತ/ ನಾಶವಾಗಲಿದೆ.

2. ಭೀಕರ ಮಳೆ ಮತ್ತು ಪ್ರವಾಹ ಎರಡಕ್ಕೂ ತುತ್ತಾದ ಪ್ರದೇಶಗಳು: ಬೆಳಗಾವಿ, ಗದಗ, ಭಾಗಶಃ ಶಿವಮೊಗ್ಗ, ಬಾಗಲಕೋಟೆಯಂಥಾ ಪ್ರದೇಶಗಳು ಪ್ರವಾಹ ಮತ್ತು ಹನಿ ಕಡಿಯದ ಮಲೇ ಎರಡರಿಂದಲೂ ಬಾಧೆ ಅನುಭವಿಸಿವೆ. ಇಲ್ಲಿನ ಬೆಳೆಗಳು ನಾನು ಮೇಲೆ ಹೇಳಿದ ಎರಡೂ ಕಾರಣಗಳಿಂದ ನಾಶವಾಗಲಿವೆ.

3. ಮಳೆ ಇಲ್ಲದಿದ್ದರೂ ತುಂಗೆ, ಭೀಮಾ, ಮಲಪ್ರಭ, ಕೃಷ್ಣಾಗಳ ಭರಪೂರ ನೀರಿನ ಪ್ರವಾಹದಿಂದ ನಲುಗಿದ ಜಿಲ್ಲೆಗಳಲ್ಲೂ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ.

ಸುಮ್ಮನೆ ಲೆಕ್ಕ ಹಾಕಿ, ಈ ಕೃಷಿ ಪ್ರದೇಶ ಕರ್ನಾಟಕದ ಒಟ್ಟಾರೆ ಕೃಷಿ ಪ್ರದೇಶದ ಶೇ..70ರಷ್ಟಿದೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ ಹಾಗೆ 40 ಲಕ್ಷ ಹೆಕ್ಟೇರ್ ಜಮೀನು ಬಾಧೆಗೊಳಗಾಗಿದೆ ಎಂದೇ ಇಟ್ಟುಕೊಂಡು; ಹೆಕ್ಟೇರಿಗೆ ಕನಿಷ್ಠ 25 ಸಾವಿರ ನಷ್ಟದಂತೆ ಅಂದಾಜು ಮಾಡಿದರೂ, ಒಟ್ಟಾರೆ ನಷ್ಟ 15 ಸಾವಿರ ಕೋಟಿ ಮೀರಲಿದೆ.

ನೆನಪಿಡಿ. ಇದು ಈ ಮುಂಗಾರು ಬೆಳೆಯ ನಷ್ಟ. ನೆನಪಿಡಬೇಕಾದ್ದು ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದಿದೆ. ಮಳೆಯಿಲ್ಲದೇ ಆದ ನಷ್ಟ ಮತ್ತು ಅತಿವೃಷ್ಟಿಯಿಂದಾದ ನಷ್ಟ ಲೆಕ್ಕ ಹಾಕಿದರೆ ತಲೆ ತಿರುಗುತ್ತದೆ.

ಈ ಮಳೆ ಈಗ ಒಮ್ಮೆ ಕಮ್ಮಿ ಆಗಿ ಮತ್ತೆ ಶುರು ಹಚ್ಚಿಕೊಂಡು, ನಾಡಿದ್ದು ಹಿಂಗಾರಿನಲ್ಲಿ ಒಂದೆರಡು ಅಧಿಕ ಮಳೆ ಬಂದರೂ ಹಿಂಗಾರು ಬೆಳೆಯೂ ಕೈಗೆ ದಕ್ಕುವುದು ಕಷ್ಟ. ತೀವ್ರ ನೀರು ನಿಂತಾಗ ಮಣ್ಣಿನ ಜೈವಿಕ ಚಟುವಟಿಕೆ ಬಂದ್ ಆಗಿ ಮಣ್ಣಿನ ಸ್ವರೂಪವೇ ಬದಲಾಗುತ್ತದೆ. ಇದು ಮೊದಲಿನ ಮಟ್ಟಕ್ಕೆ ಬರಲು ಎರಡು ವರ್ಷ ಬೇಕು.

ಮೂರು R – Relief, Rehabilitation and Reconstruction ಎಂಬ ಸೂತ್ರ ಇದೆ. ನಮ್ಮ ಸರ್ಕಾರ ಮೊದಲನೆಯದ್ದನ್ನು ನಿಭಾಯಿಸೀತು. ಎರಡನೆಯದಕ್ಕೆ ಗಮನಾರ್ಹ ಹಣ ಬೇಕು. ಮತ್ತು ಇದನ್ನು ಕಾಲಮಿತಿಯಲ್ಲಿ ಮಾಡಬೇಕು.

ಮೂರನೆಯ- ಪುನರ್ರಚನೆ ಎಂಬುದು ಒಟ್ಟಾರೆ ಕೃಷಿಯನ್ನು ಸುಸ್ಥಿರಗೊಳಿಸಲು ಬೇಕಾದ ದೀರ್ಘಕಾಲೀನ ಮಾರ್ಗೋಪಾಯಗಳ ಬಗ್ಗೆ. ಈ ಕುರಿತಂತೆ ಸರ್ಕಾರದ ಮಿದುಳು ಸಂಪೂರ್ಣ ಖಾಲಿಯಾಗಿರುವುದು ಈಗಾಗಲೇ ಬಂದಿರುವ ನೀತಿ ಪತ್ರಗಳಲ್ಲಿ ಗೋಚರಿಸುವ ಕಾರಣ ಆ ಬಗ್ಗೆ ಹೆಚ್ಚೇನು ನಿರೀಕ್ಷಿಸುವಂತಿಲ್ಲ. ಆದರೆ ಹವಾಮಾನ ಬದಲಾವಣೆ ಈಗ ಮನೆ ಬಾಗಿಲು ತಟ್ಟುತ್ತಿರುವ ಮಾರಿ ಎಂಬುದು ಸರ್ಕಾರಕ್ಕೆ ಗೊತ್ತಾದರೆ ಆಮೂಲಾಗ್ರವಾಗಿ ಹೊಸ ಕಾರ್ಯಸೂಚಿಗೆ ಅದು ತಯಾರಾಗಬೇಕು. ಹವಾಮಾನ ಬದಲಾವಣೆ ಎಂದರೆ ವಯಸ್ಸಾದಂತೆ ಚಳಿಯಾಗುವ ಸಂಗತಿ ಎಂದು ಭಾವಿಸುವ ಪ್ರಧಾನಿ ಇರುವಾಗ ನಮ್ಮ ನಾಯಕರು ಇನ್ನೇನು ಯೋಚಿಸಿಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...