HomeUncategorizedಮಹಾರಾಷ್ಟ್ರ ಚುನಾವಣೆ ಬಿಜೆಪಿಗೆ ವಾಕ್ ಓವರ್ ಆಗಲಿದೆ.. : ಸುನಿಲ್ ಶಿರಸಂಗಿ

ಮಹಾರಾಷ್ಟ್ರ ಚುನಾವಣೆ ಬಿಜೆಪಿಗೆ ವಾಕ್ ಓವರ್ ಆಗಲಿದೆ.. : ಸುನಿಲ್ ಶಿರಸಂಗಿ

ಇಲ್ಲಿ ಬಿಜೆಪಿಯು ತನ್ನ ಅಭಿವೃದ್ಧಿಕಾರ್ಯದ ಮೇಲೆ ಮತ್ತು ಅಭ್ಯರ್ಥಿಗಳ ಸಾಮಥ್ರ್ಯದ ಮೇಲೆ ಚುನಾವಣೆ ಎದುರಿಸುತ್ತಿಲ್ಲ. ಬದಲಾಗಿ ಚುನಾವಣಾ ಆಯೋಗ, ಕೇಂದ್ರ ತನಿಖಾ ತಂಡಗಳು, (ED, CBI, Income Tax) ಪೊಲೀಸ್ ಮತ್ತು ನ್ಯಾಯಾಂಗದ ಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದೆ.

- Advertisement -
- Advertisement -

ಆರ್ಥಿಕ ಹಿನ್ನಡೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆಡಳಿತ ವಿರೋಧಿ ಅಲೆ, ಹೆಚ್ಚುತ್ತಿರುವ ಕೋಮು ದಳ್ಳುರಿಗೆ ಈ ಚುನಾವಣೆಯಲ್ಲಿ ಯಾವ ಪಾತ್ರವು ಇಲ್ಲ. ಯಾಕೆಂದರೆ ಮತದಾರ ಪ್ರಭುವಿಗೆ ನಿತ್ಯ ತೊಂದರೆ ಕೊಡುವ ಸಮಸ್ಯೆಗಳು ಮುಖ್ಯವಾಗಿಲ್ಲ.

ಮಹಾರಾಷ್ಟ್ರ ಚುನಾವಣಾ ಅಖಾಡ ಸಿದ್ದವಾಗಿದ್ದು ಕಣವನ್ನು ಎನ್‍ಡಿಎಗಾಗಿಯೇ ಹದಗೊಳಿಸಿದಂತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಣದ ಕುಸ್ತಿಪಟು ಕಚ್ಚಿಕಟ್ಟಿಕೊಂಡು ತೊಡೆ ತಟ್ಟುತ್ತಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ಭಾರೀ ಕರತಾಡನ ಕೇಳಿಬರುತ್ತಿದೆ. ಆದರೆ ಎದುರಾಳಿ ಪಡೆಯಿಂದ ಯಾರು ಅಂಕಣಕ್ಕೆ ಇಳಿಯುವುದೆಂದು ಇನ್ನೂ ನಿರ್ಧಾರವಾಗಿಲ್ಲ. ಇನ್ನು ಸಿದ್ಧತೆ ಎಲ್ಲಿಂದ ಬಂತು? ಆಶ್ಚರ್ಯವಾದರೂ ಮಹಾರಾಷ್ಟ್ರ ಚುನಾವಣೆಯಲ್ಲಿ ಕಂಡು ಬರುತ್ತಿರುವ ವಾಸ್ತವ ಇದೇ ಆಗಿದೆ.

ಚುನಾವಣೆ ಹತ್ತಿರವಿದ್ದಾಗಲೂ ಕಾಂಗ್ರೆಸ್ ಮತ್ತು NCP ಯಾಕೆ ಸಿದ್ದತೆ ಮಾಡಿಕೊಂಡಿಲ್ಲ ಅಂತ ನೋಡಲು ಹೋದರೆ ಕಂಡು ಬರುವ ದೃಶ್ಯ ಯಾರನ್ನಾರೂ ಬೆಚ್ಚಿ ಬೀಳಿಸುತ್ತದೆ. ಅನೇಕ ಪೈಲ್ವಾನರನ್ನು ಹೊಂದಿರುವ ಕಾಂಗ್ರೆಸ್ ಮತ್ತುNCPಯಲ್ಲಿ ಯಾವ ಪೈಲ್ವಾನನ್ನು ಅಖಾಡಕ್ಕೆ ಇಳಿಸುವುದು ಅಂತ ಗೊಂದಲ ಒಂದೆಡೆಯಾದರೆ, ಇನ್ನೊಂದೆಡೆ ಯಾವ ಪೈಲ್ವಾನ ಯಾರ ಪರ ಆಡುತ್ತಾನೆ ಅಂತ ತಿಳಿಯದೇ ಇರುವುದು ಇನ್ನೊಂದು ಕಾರಣ.

ಏನಪ್ಪ ಇದು ಯಾರ ಪರ ಅನ್ನುವುದು ಅಂತ ಕೇಳಿದರೆ ಅಲ್ಲೆ ಇರುವುದು ಟ್ವಿಸ್ಟ್. ಕಾಂಗ್ರೆಸ್ ಮತ್ತು ಓಅP ಪ್ರಮುಖ ನಾಯಕರನ್ನು EDತನ್ನ ತೆಕ್ಕೆಗೆ ತೆಗೆದುಕೊಂಡು ಆಗಿದೆ. ಮರಾಠ ಓಟ್ ಬ್ಯಾಂಕ್ ಹೊಂದಿರುವ ನಾಯಕರು, ಸಹಕಾರ ಚಳುವಳಿಯಲ್ಲಿ ಮುಂಚುಣಿಯಲ್ಲಿರುವ ನಾಯಕರು, ಶಿವಾಜಿಯ ವಂಶಸ್ಥರು, ಕಾಂಗ್ರೆಸ್ RSS ಪಕ್ಷದ ಹಿಂದುಳಿದ ವರ್ಗದ ನಾಯಕರು ಕಮಲದ ಬಲೆಯಲ್ಲಿ ಬಿದ್ದಾಗಿದೆ. ಇನ್ನು ಉಳಿದ ಪ್ರಮುಖ ನಾಯಕರ ಮೇಲೆ ಇಆ ತೂಗುಕತ್ತಿ ಬೀಸುತ್ತಿದೆ. ಹಾಗಾಗಿ ಯಾರ್ಯಾರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ, ಇನ್ಯಾರು ಸ್ಪಾಟ್ ಫಿಕ್ಸಿಂಗ್ ಬಲೆಯಲ್ಲಿ ಇದ್ದಾರೆ ಎಂಬ ಲೆಕ್ಕ ಹಾಕುವುದರಲ್ಲಿ ವಿರೋಧ ಪಕ್ಷಗಳು ಸುಸ್ತಾಗಿವೆ. ಪಕ್ಷ ಬಿಟ್ಟು ಹೋದ ಶತ್ರುವನ್ನು ಎದುರಿಸುವುದು ಸುಲಭ, ಆದರೆ ಮನೆಯಲ್ಲಿ ಬಿಲ ಕೊರೆಯುವ ಶತ್ರುವನ್ನು ಎದುರಿಸುವುದು ಹೇಗೆ.. ಹೀಗಾಗಿ ಯಾರನ್ನು ಕಚ್ಚೆಕಟ್ಟಿ ಕಣಕ್ಕಿಳಿಸಿದರೆ ತಮ್ಮ ಪರ ಹಲ್ಲುಕಚ್ಚಿ ಹೋರಾಡಬಲ್ಲರು ಅಂತ ನಿರ್ಧರಿಸುವುದು ಕಾಂಗ್ರೆಸ್ ಹೈಕಮಾಂಡ್‍ನ ಸೋನಿಯಾ ಗಾಂಧಿ ಮತ್ತು ಓಅPಯ ಅಗ್ರನಾಯಕ ಶರದ್ ಪವಾರ್‍ಗೆ ಅಯೋಮಯದ ಸಂಗತಿಯಾಗಿದೆ.

ಅಳಿದುಳಿದ ಆಟಗಾರರನ್ನು ಹುರಿದುಂಬಿಸಿ ಚುನಾವಣಾ ಕಣಕ್ಕೆ ಧುಮುಕಬೇಕಾದ ಕಾಂಗ್ರೆಸ್ ಹೈಕಮಾಂಡ್ ಮಂಕಾಗಿದೆ, ಸೋನಿಯಾಗಾಂಧಿ ಆರೋಗ್ಯ ಸಾಥ್ ಕೊಡುತ್ತಿಲ್ಲ. ಇನ್ನು ರಾಹುಲ್‍ಗಾಂಧಿ 2019ರ ಲೋಕಸಭಾ ಚುನಾವಣೆಯ ಸೋಲಿನ ಹ್ಯಾಂಗ್‍ಹೋವರ್‍ನಿಂದ ಹೊರಬಂದಿಲ್ಲ. ಇದು ಕಾಂಗ್ರೆಸ್ ಕಥೆಯಾದರೆ, ಓಅP ಕಥೆ ಇನ್ನೂ ಕೆಟ್ಟದಾಗಿದೆ. ಇಲ್ಲಿನ ಚುನಾವಣಾ ರಾಜಕೀಯದಲ್ಲಿ ಗೆಲ್ಲಬಲ್ಲಂತಹ ನಾಯಕರು ಮುಖ್ಯಮಂತ್ರಿ ಫಡ್ನವಿಸ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಅಗ್ರ ಮರಾಠ ನಾಯಕ ಶರದ್‍ಪವಾರ್ ಮತ್ತು ಅವರ ಸಹೋದರನ ಮಗನ ಮೇಲೆ ಅಮಿತ್ ಶಾ ಇಆ ಕತ್ತಿಯನ್ನು ಕಟ್ಟಿದ್ದಾರೆ. ಇನ್ನೊಬ್ಬ ಪ್ರಮುಖ ನಾಯಕ ಪ್ರಫುಲ್ ಪಟೇಲ್‍ಗೂ ಹಗರಣ ಗಂಟು ಕಟ್ಟಲಾಗಿದೆ. ಹೀಗಾಗಿ ಮಾನಸಿಕವಾಗಿ ಸೋತು ಹೋಗಿರುವ ಪಡೆ ಕಣದಲ್ಲಿ ತೊಡೆ ತಟ್ಟುತ್ತಿದ್ದರು ಯಾರಿಗೂ ಕೇಳುತ್ತಿಲ್ಲ.

ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ 2ನೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈಗ 2ನೇ ಇನಿಂಗ್ಸ್‍ಗೆ ಸಿದ್ದವಾಗಿದ್ದಾರೆ. ಎದುರಾಳಿ ಇಲ್ಲದೆ ಅಖಾಡದಲ್ಲಿ ತೊಡೆತಟ್ಟಿ ಹೂಂಕರಿಸುತ್ತಿದ್ದಾರೆ. ಹೈಕಮಾಂಡ್, ಪ್ರಧಾನ ಮಂತ್ರಿ ನರೇಂದ್ರಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಅವರ ಜೊತೆಗೆ ಖSS ಸಂಪೂರ್ಣ ಬೆಂಬಲ ಪಡೆದಿರುವ ದೇವೇಂದ್ರ ಫಡ್ನವೀಸ್‍ಗೆ ಮಹಾರಾಷ್ಟ್ರದಲ್ಲಿ ಪರ್ಯಾಯವಿಲ್ಲದಂತಾಗಿದೆ.

ಕಳೆದ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಶಿವಸೇನಾ ಮತ್ತು ಬಿಜೆಪಿಯ ಚುನಾವಣಾ ಪೂರ್ವ ಮೈತ್ರಿ ಮೂಡಿಸುವಲ್ಲಿ ಫಡ್ನವೀಸ್ ಸಫಲವಾದರಷ್ಟೇ ಅಲ್ಲ, ಸಾಂಪ್ರದಾಯಿಕವಾಗಿ ದೊಡ್ಡಣ್ಣನಾಗಿದ್ದ ಶಿವಸೇನೆಯನ್ನು ತಮ್ಮನ ಸ್ಥಾನಕ್ಕೆ ತಂದು ನಿಲ್ಲಿಸುವಲ್ಲಿ ಈ ಬ್ರಾಹ್ಮಣ ನಾಯಕನ ತಂತ್ರಗಾರಿಕೆ ಎದ್ದು ಕಾಣುತ್ತದೆ. ಹೀಗಾಗಿ ಈ ಬಾರಿBJP164 ಮತ್ತು ಶಿವಸೇನೆ 124 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.

ದುರ್ಬಲಗೊಂಡ ಪ್ರತಿಪಕ್ಷಗಳು ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿವೆ. ಹೈಕಮಾಂಡ್‍ನ ಸಂಪೂರ್ಣ ಬೆಂಬಲದಿಂದಾಗಿ ಫಡ್ನವೀಸ್‍ರ ಸ್ವಪಕ್ಷದ ಎದುರಾಳಿಗಳು ಬಾ¯ ಮುದುರಿಕೊಂಡಿದ್ದಾರೆ. ಮರಾಠ ಮೀಸಲಾತಿಯ ಹೋರಾಟವನ್ನು ನಿಭಾಯಿಸಿದ ಮೇಲೆ ದೇವೇಂದ್ರ ಫಡ್ನವೀಸ್‍ರನ್ನು 2ನೇ ಅವಧಿಗೆ ಮುಖ್ಯಮಂತ್ರಿಯಾಗಲು ಸಿದ್ಧವಾಗುವಂತೆ ಮಾಡಿವೆ.
ಪ್ರಬಲ ಮರಾಠ ನಾಯಕ ಶರದ್ ಪವಾರ್ ಫಡ್ನವೀಸ್ ಅವರದು ಪೇಶ್ವಾ ಅಡಳಿತ ಎಂದಿದ್ದರು. ದೊಡ್ಡಣ್ಣನಿಂದ 2ನೇ ಸ್ಥಾನಕ್ಕೆ ತಲ್ಲಲ್ಪಟ್ಟ ಶಿವಸೇನೆಯ ಉದ್ಬವ್ ಠಾಕ್ರೆ ಎಲ್ಲಿ ಭಿನ್ನಾಭಿಪ್ರಾಯಗಳ ಮಧ್ಯೆಯೂ ಃಎP ಜೊತೆಗೆ ಕೈಜೋಡಿಸಿದ್ದಾರೆ. ಇದಕ್ಕೆ ಹಿಂದುತ್ವದ ನಂಟು ಕಾರಣವೆನ್ನುವ ಉದ್ಬವ್ ಶಿವಸೈನಿಕರಿಗೆ ಮುಖ್ಯಮಂತ್ರಿ ಮಾಡಬೇಕೆನ್ನುವ ಕನಸನ್ನು ಕೈಬಿಟ್ಟಿಲ್ಲ.

ಮಹಾರಾಷ್ಟ್ರದ ಆಡಳಿತ ಮಂತ್ರಾಲಯದ 6ನೇ ಮಹಡಿಯ CM ಕಛೇರಿಯಲ್ಲಿ ಶಿವಸೈನಿಕನನ್ನ ಕಾಣಲು ಬಯಸುವ ಅವರಿಗೆ ಮಗ ಆದಿತ್ಯ ಠಾಕ್ರೆ ಸಾಥ್ ಕೊಡುತ್ತಿದ್ದಾರೆ. ಠಾಕ್ರೆ ಕುಟುಂಬದಿಂದ ಚುನಾವಣೆ ಕಣಕ್ಕೆ ಧುಮುಕಿದ ಮೊದಲ ಕುಡಿ ಎಷ್ಟು ಪ್ರಭಾವ ಬೀರುತ್ತಾರೆ ಕಾದು ನೋಡಬೇಕು.
ಹುಲಿಯಂತೆ ಘರ್ಜಿಸುತ್ತಿದ್ದ MNSನ ರಾಜಠಾಕ್ರೆಯನ್ನು ಕೇಂದ್ರ ತನಿಖಾ ತಂಡಗಳ (ED) ಬಲದಿಂದ ಅಮಿತ್‍ಶಾ ಇಲಿಯನ್ನಾಗಿಸಿದ್ದಾರೆ. ಹೀಗಾಗಿ MNCಯ ಪ್ರಭಾವ ಈ ಚುನಾವಣೆಯಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಇನ್ನು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಅಘಾದಿ (VBA) ಕೆಲವು ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಕಾಣಬಹುದು. ಉಳಿದೆಡೆ ಬೇರೆಯವರ ಸೋಲು-ಗೆಲುವಿಗೆ ಮಾತ್ರ ಅದು ದೊಡ್ಡ ಮಟ್ಟದಲ್ಲಿ ಕಾರಣವಾಗಬಹುದು.

ಒಟ್ಟಾರೆಯಾಗಿ ಆರ್ಥಿಕ ಹಿನ್ನಡೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆಡಳಿತ ವಿರೋಧಿ ಅಲೆ, ಹೆಚ್ಚುತ್ತಿರುವ ಕೋಮು ದಳ್ಳುರಿಗೆ ಈ ಚುನಾವಣೆಯಲ್ಲಿ ಯಾವ ಪಾತ್ರವು ಇಲ್ಲ. ಯಾಕೆಂದರೆ ಮತದಾರ ಪ್ರಭುವಿಗೆ ನಿತ್ಯ ತೊಂದರೆ ಕೊಡುವ ಸಮಸ್ಯೆಗಳು ಮುಖ್ಯವಾಗಿಲ್ಲ. ಮತದಾರ ಪ್ರಭು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನ ಮಂತ್ರಿಯ ಸುತ್ತಾಟ, ಮೈನಾರಿಟಿಗಳನ್ನು ಹೆದರಿಸಲು ಬಳಸುವ NRCಕಾಶ್ಮಿರದ ಸ್ವಾಯತ್ತತೆಯ ಆರ್ಟಿಕಲ್ 370 ಸೇರಿದಂತೆ ಹುಸಿ ರಾಷ್ಟ್ರಿಯ ಅಲೆಯಲ್ಲಿ ತೇಲಿಹೋಗುತ್ತಿದ್ದಾನೆ. ಹೀಗಾಗಿ ನಿತ್ಯ ಸಂಕಟಗಳು ಗೌಣವಾಗಿವೆ.

ಇಷ್ಟೆಲ್ಲಾ ಇದ್ದಾಗ್ಯೂ ಬಿಜೆಪಿಯು ತನ್ನ ಅಭಿವೃದ್ಧಿಕಾರ್ಯದ ಮೇಲೆ ಮತ್ತು ಅಭ್ಯರ್ಥಿಗಳ ಸಾಮಥ್ರ್ಯದ ಮೇಲೆ ಚುನಾವಣೆ ಎದುರಿಸುತ್ತಿಲ್ಲ. ಬದಲಾಗಿ ಚುನಾವಣಾ ಆಯೋಗ, ಕೇಂದ್ರ ತನಿಖಾ ತಂಡಗಳು, (ED, CBI, Income Tax) ಪೊಲೀಸ್ ಮತ್ತು ನ್ಯಾಯಾಂಗದ ಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದೆ.

ಈ ರೀತಿಯಾಗಿ ಮಹಾರಾಷ್ಟ್ರದ ಚುನಾವಣೆಯು ಒಂದು ರೀತಿಯ ವಾಕ್ ಓವರ್ ಇದ್ದಂತೆ ಎಂದೇ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಹರಿಯಾಣದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇದನ್ನು ಮೀರಿದ ಫಲಿತಾಂಶ ಎರಡು ರಾಜ್ಯಗಳಲ್ಲಿ ಎಲ್ಲಿ ಬಂದರೂ ಅದು ಪವಾಡವೇ ಸರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...