Homeಚಳವಳಿಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

ಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

- Advertisement -
- Advertisement -

| ಮಾರ್ಕಂಡೇಯ ಕಟ್ಜು |
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಅಯೋಧ್ಯೆಯ ಈ ತೀರ್ಪೂ ಸಹ 1975ರ ಎಡಿಎಮ್ ಜಬಲ್‍ಪುರ ವರ್ಸಸ್ ಶಿವಕಾಂತ ಶುಕ್ಲ ತೀರ್ಪಿನ ಗುಂಪಿಗೇ ಸೇರಿಕೊಳ್ಳುತ್ತೆ. ಆದರೆ ಅಲ್ಲಿ ಒಂದು ವ್ಯತ್ಯಾಸವಿತ್ತು- ಅಯೋಧ್ಯೆಯ ತೀರ್ಪಿನಂತೆ ಆ ತೀರ್ಪು ಅವಿರೋಧವಾದ, ಭಿನ್ನಮತವಿಲ್ಲದ ತೀರ್ಪಾಗಿರಲಿಲ್ಲ.

ನ್ಯಾಯಾಲಯವು ಹೇಳಿದ್ದು ಸರಿಯೇ ಇರಬಹುದು. ಆದರೆ ಈ ತೀರ್ಪು ಆಕ್ರಮಣಶೀಲತೆಯನ್ನು ಪೋಷಿಸುವ ಒಂದು ಆತಂಕಕಾರಿ ಬೆಳವಣಿಗೆಯನ್ನು ಹುಟ್ಟುಹಾಕಿದೆ.

ಬಾಬರಿ ಮಸೀದಿಯನ್ನು ಒಂದು ಹಿಂದೂ ದೇವಾಲಯದ ಮೇಲೆ ಅಥವಾ ಅದನ್ನು ನಾಶಗೊಳಿಸಿ ಅದರ ಮೇಲೆ ಕಟ್ಟಲಾಗಿರಬಹುದೇ ಎನ್ನುವುದರ ಪರಿಶೀಲನೆಯ ಅವಶ್ಯಕತೆ ಇಲ್ಲ. ಹಿಂದೂ ದೇವಾಲಯಗಳನ್ನು ಮುಸ್ಲಿಮ್ ದಾಳಿಕೋರರು ಧ್ವಂಸಗೊಳಿಸಿದ್ದು ಹಾಗೂ ಆ ಜಾಗೆಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದು ಸುಳ್ಳಲ್ಲ. ಉದಾಹರಣೆಗೆ, ದೆಹಲಿಯ ಕುತುಬ್ ಮಿನಾರ್‍ದ ಬಳಿ ಇರುವ ಕುವ್ವತ್-ಉಲ್-ಇಸ್ಲಾಮ್ ಮಸೀದಿಯಲ್ಲಿ ಇರುವ ಕಂಬಗಳ ಮೇಲೆ ಹಿಂದು ಕೆತ್ತನೆಗಳಿವೆ ಅಥವಾ ವಾರಣಾಸಿಯಲ್ಲಿಯ ಗ್ಯಾನ್‍ವ್ಯಾಪಿ ಮಸೀದಿಯಲ್ಲೂ ಹಿಂದೂ ಕೆತ್ತನೆಗಳನ್ನು ಕಾಣಬಹುದು ಅಥವಾ ಜೌವನಪುರದ ಅಟಲಾ ದೇವಿ ಮಸೀದಿಯನ್ನು ನೋಡಿ. ಆದರೆ ಭಾರತ ಮುಂದುವರೆಯಬೇಕೆ ಅಥವಾ ಹಿಂದಕ್ಕೆ ಕಾಲನ್ನು ಹಾಕಬೇಕೇ?

ಒಂದು ಹಿಂದು ಮಂದಿರವನ್ನು ಇಂದು ಅಕ್ರಮವಾಗಿ ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ಕಟ್ಟಲಾಗಿದ್ದರೆ ಅದು ಬೇರೆ ಮಾತು. ಆದರೆ ಈಗ ಹೇಳಲಾಗುವ ಅಯೋಧ್ಯೆಯ ಘಟನೆ ಆಗಿರುವುದು 500 ವರ್ಷಗಳ ಹಿಂದೆ, ಹಾಗಿರುವಾಗ ಅಂತಹ ಕಟ್ಟಡವನ್ನು ಮರಳಿ ಹಿಂದೂ ಮಂದಿರವಾಗಿ ಮರುನಿರ್ಮಾಣ ಮಾಡುವುದರಲ್ಲಿ ಎಷ್ಟು ಅರ್ಥವಿದೆ? ಈ ರೀತಿಯ ಸೇಡಿನ ಪ್ರವೃತ್ತಿ, ವಿಶ್ವ ಹಿಂದೂ ಪರಿಷತ್‍ನ ಈ ಪ್ರತಿಪಾದನೆ ನಮ್ಮ ಸಮಾಜವನ್ನು ಧ್ರುವೀಕರಿಸುವುದನ್ನು ಬಿಟ್ಟರೆ ಮತ್ತೇನೂ ಮಾಡುವುದಿಲ್ಲ; ಚುನಾವಣೆಯಲ್ಲಿ ಮತಗಳನ್ನು ಪಡೆಯಲೋಸುಗ ಕೋಮು ದಳ್ಳುರಿಯನ್ನು ಕಾಪಿಡಲು ಬಯಸುವ ಕೆಲವು ವ್ಯಕ್ತಿಗಳ ರಾಜಕೀಯ ಅಜೆಂಡಾಗೆ ಸಹಾಯವಾಗುವುದಷ್ಟೇ ಇದರಿಂದ ಆಗುತ್ತದೆ.

786 ಮತ್ತು 798 ಪ್ಯಾರಾಗಳಲ್ಲಿ ನ್ಯಾಯಾಲಯ ಹೇಳಿರುವುದು; 1528ರಲ್ಲಿ ನಿರ್ಮಾಣವಾದಾಗಿನಿಂದ 1857ರ ತನಕ ನಮಾಜ್ ಮಾಡುವವರ ಒಡೆತನದಲ್ಲಿ ಈ ಮಸೀದಿ ಇತ್ತು ಎಂದು ಹೇಳಲು ಸಾಕ್ಷಾಧಾರಗಳನ್ನು ಒದಗಿಸಿಲ್ಲ. ಆದರೆ ಇದನ್ನು ಸಾಧಿಸುವುದಾದರೂ ಹೇಗೆ? ಆ ಕಾಲದ ಪ್ರತ್ಯಕ್ಷ ಸಾಕ್ಷಿಗಳನ್ನಂತೂ ಇಂದು ತರಲು ಸಾಧ್ಯವಿಲ್ಲ ಹಾಗೂ 1857ರ ಪ್ರಥಮ ಸ್ವಾತಂತ್ರ ಸಮರದಲ್ಲಿ ಅವಧ್‍ನ ಎಲ್ಲಾ ದಾಖಲೆಗಳು ಧ್ವಂಸಗೊಳಿಸಲಾಗಿತ್ತು. ಇರಲಿ, ಆರಾಧನೆಗಾಗಿ ಒಂದು ಮನೆಯನ್ನು ಕಟ್ಟಲಾಗಿದೆ ಎಂದರೆ, ಅದು ಮಂದಿರವೇ ಇರಲಿ ಅಥವಾ ಮಸೀದಿ ಅಥವಾ ಚರ್ಚು ಅಥವಾ ಗುರುದ್ವಾರವೇ ಆಗಿರಲಿ, ಅಲ್ಲಿ ಆರಾಧನೆ ಮಾಡುವ ಸಲುವಾಗಿಯೇ ಕಟ್ಟುತ್ತಾರೆಯೇ ಹೊರತು ಅಲಂಕಾರಕ್ಕಾಗಿ ಅಲ್ಲ ಎನ್ನುವುದು ಸಾಮಾನ್ಯ ಜ್ಞಾನ.

ತೀರ್ಪಿನ 798 ಪ್ಯಾರಾ ಹೀಗಿದೆ: ಮುಸ್ಲಿಮರನ್ನು ಆರಾಧನೆಯಿಂದ ಮತ್ತು ಒಡೆತನದಿಂದ ಹೊರಗಿಡುವುದು ನಡೆದದ್ದು 1949ರ ಡಿಸೆಂಬರ್ 22/23 ಮಧ್ಯದ ರಾತ್ರಿಯಲ್ಲಿ. ಆಗ ಮಸೀದಿಯನ್ನು ಅಪವಿತ್ರಗೊಳಿಸಿ ಹಿಂದೂ ವಿಗ್ರಹಗಳನ್ನು ಸ್ಥಾಪಿಸುವುದರ ಮೂಲಕ ಇದನ್ನು ಮಾಡಲಾಯಿತು. ಆ ಸಂದರ್ಭದಲ್ಲಿ ಮುಸ್ಲಿಮ್‍ರನ್ನು ಹೊರಗಿಡುವ ಈ ಕ್ರಿಯೆಯನ್ನು ಯಾವುದೇ ಕಾನೂನಾತ್ಮಕ ಕ್ರಮದಿಂದ ಮಾಡಲಿಲ್ಲ. ಅದನ್ನು ಅವರ ಆರಾಧನೆಯ ಜಾಗೆಯಿಂದ ವಂಚಿತಗೊಳಿಸುವ ಲೆಕ್ಕಾಚಾರದ ಕ್ರಮದಿಂದ ಮಾಡಲಾಗಿತ್ತು.

ಇಂತಹ ಸ್ಪಷ್ಟವಾದ ತೀರ್ಮಾನದ ಹೊರತಾಗಿಯೂ, ನ್ಯಾಯಾಲಯವು ಒಂದು ಯಾವುದೋ ವಿಚಿತ್ರ ತರ್ಕದ ಆಧಾರದ ಮೇಲೆ ವಿವಾದಿತ ಜಾಗೆಯನ್ನು ಹಿಂದುಗಳಿಗೆ ಒಪ್ಪಿಸಿದೆ.

ಹಾಗಾಗಿ, ಅಯೋಧ್ಯೆಯ ತೀರ್ಪು ಕೋಮು ಸಾಮರಸ್ಯಕ್ಕೆ ಕಾರಣವಾಗಬಹುದು ಎನ್ನುವುದು ಮೂರ್ಖತನವಾದೀತು. ಯಾವುದೇ ತುಷ್ಟೀಕರಣವು, 1938ರ ಮೂನಿಕ್ ಒಪ್ಪಂದದಲ್ಲಿ ಆದಂತೆ, ಆಕ್ರಮಣಕಾರಿಯ ಹಸಿವನ್ನು ಹೆಚ್ಚಿಸುತ್ತದೆಯೇ ಹೊರತು, ತಣಿಸುವುದಿಲ್ಲ. “ಅಭಿ ತೋ ಯೆ ಝಾಂಕಿ ಹೈ, ಕಾಶಿ ಮಥುರಾ ಬಾಕಿ ಹೈ”. ಎನ್ನುವ ಘೋಷಣೆಗಳು 1992 ಡಿಸೆಂಬರ್ 6ರ ನಂತರ ಕೇಳಿಬಂದವು ಹಾಗೂ ಮತ್ತೆ ಕೇಳಿಬರಲು ಪ್ರಾರಂಭಿಸಿದರೆ ಆಶ್ಷರ್ಯವಿಲ್ಲ. ದೆಹಲಿಯ ಜಾಮಾ ಮಸ್ಜಿದ್ ಕಟ್ಟಿರುವುದು ಒಂದು ಹಿಂದೂ ಮಂದಿರದ ಮೇಲೆ ಹಾಗೂ ಅದನ್ನು ಮರುಪಡೆಯಬೇಕು ಎಂದು ಬಿಜೆಪಿಯ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ತಾಜ್‍ಮಹಲ್ ಬಗ್ಗೆಯೂ ಬಿಜೆಪಿಯ ಕೆಲವು ಇದೇ ರೀತಿ ಹೇಳಿದ್ದಾರೆ. ಇದು ಕೊನೆಗೊಳ್ಳುವುದು ಯಾವಾಗ?

ರಾಮ ಒಂದು ನಿರ್ದಿಷ್ಟ ಸ್ಥಳದಲ್ಲಿ ಹುಟ್ಟಿದ್ದು ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ. ಒಂದು ವೇಳೆ ರಾಮನನ್ನು ಪೌರಾಣಿಕ ವ್ಯಕ್ತಿ ಅಲ್ಲ, ಅವನೊಬ್ಬ ಐತಿಹಾಸಿಕ ವ್ಯಕ್ತಿ ಎಂದು ಪರಿಗಣಿಸಿದರೂ ಸಾವಿರಾರು ವರ್ಷಗಳ ಮುಂಚೆ ಎಲ್ಲಿ ಹುಟ್ಟಿದ್ದು ಎಂದು ಹೇಗೆ ಹೇಳಬಲ್ಲರು?

ಭಾರತವು ಒಂದು ಭಯಾನಕ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಜಿಡಿಪಿ ಬೆಳವಣಿಗೆ ಕುಸಿದಿದೆ, ಉತ್ಪಾದನಾ ಕ್ಷೇತ್ರ ಕುಸಿದಿದೆ, ವ್ಯಾಪಾರ ಇಳಿಮುಖದಲ್ಲಿದೆ, ನಿರುದ್ಯೋಗದ ದರ ದಾಖಲೆ ಸೃಷ್ಟಿಸುತ್ತಿದೆ, (ಸರಕಾರಿ ದಾಖಲೆಗಳೇ ಇದನ್ನು ಹೇಳುತ್ತಿವೆ). ಮಕ್ಕಳ ಅಪೌಷ್ಟಿಕತೆಯ ಮಟ್ಟ ಭೀಕರವಾಗಿದೆ (ಜಾಗತಿಕ ಹಸಿವು ಸೂಚ್ಯಾಂಕದ ಅನುಗುಣವಾಗಿ, ಪ್ರತಿ ಎರಡನೇ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ.), 50% ಭಾರತೀಯ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ, ಆರೋಗ್ಯ ಸೇವೆ ಮತ್ತು ಉತ್ತಮ ಶಿಕ್ಷಣ ಚಿಂತಾಜನಕ ಸ್ಥಿತಿಯಲ್ಲಿವೆ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ನಮ್ಮ ನಾಯಕರಿಗೆ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎನ್ನುವುದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿರುವುದು ಸ್ಪಷ್ಟ. ಹಾಗಾಗಿ, ಇವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಹಲವು ಗಿಮಿಕ್ ಮಾಡಲಾಗುತ್ತಿದೆ.

ವಿಧ್ವಂಸಕ ರಾಜಕೀಯ ಶಕ್ತಿಗಳಿಂದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು 1947ರ ವಿಭಜನೆಯ ನಂತರದ ಅತ್ಯಂತ ದೊಡ್ಡ ದುರಂತ. ಅಯೋಧ್ಯೆಯ ತೀರ್ಪು ಸಹಾ ಮಸೀದಿಯನ್ನು ಧ್ವಂಸಗೊಳಿದ್ದು ಕಾನೂನುಬಾಹಿರ ಎಂದು ಹೇಳುತ್ತದೆ. ಆದರೆ ಅದೇ ಉಸಿರಿನಲ್ಲಿ ಆ ಘಟನೆಯನ್ನು ಪವಿತ್ರಗೊಳಿಸುವ ಕೆಲಸವನ್ನೂ ಮಾಡುತ್ತದೆ.

ಭಾಳ ಒಳ್ಳೆಯ ಕೆಲಸ ಮಾಡಿದ್ರಿ, ಮೈ ಲಾಡ್ರ್ಸ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...