Homeಮುಖಪುಟಸಮಯ ನಿರ್ವಹಣೆಯ ಕಲೆ: ಹೀಗೆ ಮಾಡಿದರೆ ನಿಮ್ಮ ಸಮಯ ಉಳಿಸಬಹುದು ಗೊತ್ತೆ?

ಸಮಯ ನಿರ್ವಹಣೆಯ ಕಲೆ: ಹೀಗೆ ಮಾಡಿದರೆ ನಿಮ್ಮ ಸಮಯ ಉಳಿಸಬಹುದು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ-26

ಸಮಯ ನಿರ್ವಹಣೆಯ ಕಲೆ:

ದೇವರು ಪ್ರತಿಯೊಬ್ಬರಿಗೂ ಶಕ್ತಿ, ರೂಪ, ಗುಣ, ಸಂಪನ್ಮೂಲ, ಕಷ್ಟ, ಸುಖ, ಹಂಚುವಾಗ ತಾರತಮ್ಯ ತೋರಿರುವುದು ಎಲ್ಲೆಲ್ಲೂ ಎದ್ದು ಕಾಣುತ್ತದೆ. ಆದರೆ ಒಂದು ವಿಷಯದಲ್ಲಿ ಮಾತ್ರ, ಎಲ್ಲರಿಗೂ ಸರಿಸಮಾನವಾಗಿ, ದಿನಕ್ಕೆ 24 ಗಂಟೆಗಳನ್ನು ನೀಡಿರುತ್ತಾನೆ. ಯಾರಿಗೂ 25 ಗಂಟೆಯಾಗಲೀ, 23 ಗಂಟೆಯಾಗಲೀ ನೀಡಿಲ್ಲ. ಆದರಿಂದ ಸಮಯದ ಅಭಾವಕ್ಕೆ ಎಲ್ಲರೂ ತಮ್ಮನ್ನು ತಾವೇ ಹೊಣೆಗಾರರು ಎಂದು ಪರಿಗಣಿಸಬೇಕು.

ಕೆಲವರು ತಮ್ಮ ಎಲ್ಲಾ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಿ, ಹಾಯಾಗಿ ಹರಟೆ ಕೊಚ್ಚಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಬೇರೊಬ್ಬರ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದಕ್ಕೂ ಸಮಯ ತೆಗೆದರೆ ಇನ್ನು ಕೆಲವರಿಗೆ ಯಾವ ಕೆಲಸಕ್ಕೂ ಪುರುಸೊತ್ತು ಇರುವುದಿಲ್ಲ. ಏಕೆ ಹೀಗೆ ಎಂದು ಯೋಚಿಸಿದ್ದೀರಾ?

ಸಮಯ ಯಾವಾಗಲೂ ಒಂದೇ ಗತಿಯಲ್ಲಿ ಓಡುತ್ತದೆ. ನಿಮ್ಮ ಕೆಲಸದ ಗತಿ ಅಥವಾ ನಿಮ್ಮ ಬೇಕು-ಬೇಡದ ಪ್ರಕಾರ ಹೊತ್ತು ಹೋಗುವುದಿಲ್ಲ. ಆದ್ದರಿಂದ ನಿಮ್ಮ ಕೆಲಸ ಸಮಯದೊಳಗೆ ಮಾಡಿ ಮುಗಿಸುವುದನ್ನು ನೀವೇ ಕಲಿಯಬೇಕು. ಇದನ್ನೇ ಸಮಯ ನಿರ್ವಹಣೆ (ಟೈಂ ಮ್ಯಾನೇಜ್ಮೆಂಟ್) ಎನ್ನುತ್ತಾರೆ. ಜೀವನಾವಶ್ಯಕ ಕಲೆಗಳಲ್ಲಿ ಇದೂ ಒಂದು.

ನಮ್ಮ ಇನ್ನೊಂದು ಬಹು ದೊಡ್ಡ ಸಮಸ್ಯೆ ಕೆಲಸಗಳನ್ನು ಮುಂದೂಡುವುದು (ಪ್ರೊಕ್ರಾಸ್ಟಿನೇಷನ್). ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದೇ, ವಿನಾಕಾರಣ ಮುಂದೂಡುತ್ತ ಹೋಗುತ್ತೇವೆ. ಅದರಿಂದ ಅವು ಮುಂದೆ ಗಂಭೀರ ರೂಪ ತಳೆದು, ನಮ್ಮನ್ನು ತೊಂದರೆಗೀಡುಮಾಡುತ್ತವೆ. ನಿಮಿಷಗಳಲ್ಲಿ ಆಗುವ ಕೆಲಸ ಗಂಟೆಗಟ್ಟಲೆ ತೆಗೆದುಕೊಳ್ಳುತ್ತದೆ. ಬೇರೆಯವರಿಂದ ಮಾತೂ ಕೇಳಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಿ.

ನಿಮ್ಮ ದಿನಚರಿಯನ್ನು, ದೈನಂದಿನ ಎಲ್ಲಾ ಕೆಲಸಗಳ ಒಂದು ಉದ್ದನೆಯ ಪಟ್ಟಿ ತಯಾರಿಸಿ. ಯಾವುದನ್ನೂ, ಕೆಲಸ ಎಷ್ಟೇ ಸಣ್ಣದಾದರೂ ಸರಿ, ಬಿಡಬೇಡಿ, ಪಟ್ಟಿಯಲ್ಲಿ ಸೇರಿಸಿ. ನಿದ್ದೆ, ಊಟ, ಸ್ನಾನ, ಬಸ್ಸು-ರೈಲು-ಸಾರಿಗೆಗೆ ಕಾಯುವುದು, ಇತ್ಯಾದಿ ಎಲ್ಲಾ ಕೆಲಸಕ್ಕೂ ನೀವು ಎಷ್ಟು ಸಮಯ ಈಗ ತೆಗೆದುಕೊಳ್ಳುತ್ತೀರಿ ಎಂಬುದನ್ನೂ ಪಕ್ಕದಲ್ಲಿ ಗುರುತು ಹಾಕಿಕೊಳ್ಳಿ. ಒಟ್ಟು ಎಲ್ಲಾ ಸಮಯ ಸೇರಿ 24 ತಾಸಿಗಿಂತ ಹೆಚ್ಚಾದರೂ ಚಿಂತೆ ಇಲ್ಲ, ಯಾವುದನ್ನೂ ನಿರ್ಲಕ್ಷಿಸದೆ ಪಟ್ಟಿ ಮಾಡುತ್ತಾ ಹೋಗಿ. ಇದನ್ನು ಮಾಡಬೇಕಾದ ಕೆಲಸದ ಪಟ್ಟಿ (ಟು-ಡೂ-ಲಿಸ್ಟ್) ಎನ್ನೋಣ.

ನಮ್ಮ ಕೆಲಸಗಳಲ್ಲಿ ಕೆಲವು ಬಹಳ ಮುಖ್ಯ (ಇಂಪಾರ್ಟಂಟ್) ಕೆಲಸಗಳಾಗಿರುತ್ತವೆ, ಅದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ, ಮಾಡದಿದ್ದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ. ಕೆಲವು ಕೆಲಸಗಳು ಬಹಳ ತುರ್ತು (ಅರ್ಜೆಂಟ್) ಆಗಿರುತ್ತದೆ ಅವನ್ನು ಕೂಡಲೇ ಅಥವಾ ಸಮಯಕ್ಕೆ ಸರಿಯಾಗಿ ಮಾಡಬೇಕಾಗಿರುತ್ತದೆ. ಉದಾ: ನಿಮಗೆ ಶೌಚಾಲಯಕ್ಕೆ ಹೋಗಬೇಕಾದರೆ ಅದು ತುರ್ತು. ಕೆಲಸ ಮುಖ್ಯವೋ ಇಲ್ಲವೋ ಅದರ ಪ್ರಶ್ನೆ ಬರುವುದಿಲ್ಲ. ಕೆಲವು ಕೆಲಸಗಳು ಮುಖ್ಯ ಮತ್ತು ತುರ್ತು ಎರಡೂ ಆಗಿರುತ್ತದೆ. ಕೆಲವು ಕೇವಲ ಮುಖ್ಯ ಅಥವಾ ಕೇವಲ ತುರ್ತು ಆಗಿದ್ದರೆ ಮಿಕ್ಕ ಕೆಲಸಗಳು ಮುಖ್ಯವೂ ಅಲ್ಲ, ತುರ್ತು ಸಹ ಆಗಿರುವುದಿಲ್ಲ, ಅವನ್ನು ನಿದಾನವಾಗಿ, ಯಾವಾಗ ಬೇಕಾದರೂ ಮಾಡಬಹುದು.

ನಿಮ್ಮ ಎಲ್ಲಾ ಕೆಲಸಗಳ ಸಮಗ್ರ ಪಟ್ಟಿ ಮುಂದಿಟ್ಟುಕೊಂಡು. ಯಾವ ಕೆಲಸ “ಮುಖ್ಯ” (ಇಂಪಾರ್ಟೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ಮುಖ್ಯ” (ಇಂಪಾರ್ಟೆಂಟ್) ಎಂದು ಬರೆಯಿರಿ. ಯಾವುದು ಮುಖ್ಯವಲ್ಲವೋ ಅದಕ್ಕೆ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಕೊಡಿ. ಹೀಗೆ ಒಂದೊಂದಾಗಿ ಎಲ್ಲಾ ಕೆಲಸಗಳಿಗೂ “ಮುಖ್ಯ” (ಇಂಪಾರ್ಟೆಂಟ್) ಅಥವಾ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಬಿದ್ದಿರಬೇಕು. ಎರಡನೆಯದಾಗಿ ಅದೇ ಪಟ್ಟಿಯಲ್ಲಿ, (“ಮುಖ್ಯ” ಅಥವಾ “ಮುಖ್ಯವಲ್ಲ” ಎಂಬ ನಿರ್ಧಾರ ಈಗಾಗಲೇ ಆಗಿರುವ ಪಟ್ಟಿಯಲ್ಲಿ) ಯಾವ ಕೆಲಸ “ತುರ್ತು” (ಅರ್ಜೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ತುರ್ತು” (ಅರ್ಜೆಂಟ್) ಎಂದು ಬರೆಯಿರಿ. ಯಾವುದು ತುರ್ತು ಅಲ್ಲವೋ ಅದಕ್ಕೆ “ತುರ್ತು ಅಲ್ಲ” (ನಾಟ್ ಅರ್ಜೆಂಟ್)ಎಂಬ ಹಣೆಪಟ್ಟಿ ಕೊಡಿ. ಈಗ ನಿಮ್ಮ ಸಮಗ್ರ ಕೆಲಸದ ಪಟ್ಟಿಯಲ್ಲಿ ನಾಲ್ಕು ವಿಧವಾದ ಕೆಲಸಗಳಿವೆ, ಅಲ್ಲವೇ?.

1.      ಮುಖ್ಯ ಮತ್ತು ತುರ್ತು.

2.      ಮುಖ್ಯ ಆದರೆ ತುರ್ತು ಅಲ್ಲ.

3.      ಮುಖ್ಯ ಅಲ್ಲ ಆದರೆ ತುರ್ತು.

4.      ಮುಖ್ಯ ಅಲ್ಲ, ತುರ್ತು ಅಲ್ಲ.

ಈಗ, ನಿಮ್ಮ ಈ ನಾಲ್ಕು ಪಟ್ಟಿಯ ಕೆಲಸಗಳನ್ನು ಬೇರ್ಪಡಿಸಿ ಅದರಲ್ಲಿರುವ ಕೆಲಸಗಳನ್ನು ಆದ್ಯತೆಯ ಮೇಲೆ ಮರುಕ್ರಮಾಂಕ ನೀಡಿ. ಯಾವುದು ಬಹಳ ಮುಖ್ಯ ಮತ್ತು ಬಹಳ ತುರ್ತು ಅದಕ್ಕೆ ಕ್ರಮಾಂಕ 1, 2. 3. ಹೀಗೆ ಪ್ರತಿಯೊಂದು ಕೆಲಸಕ್ಕೂ ಕ್ರಮ ಸಂಖ್ಯೆ ನೀಡಿ, ನಾಲ್ಕೂ ಪಟ್ಟಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಇಂತಹ ಪಟ್ಟಿಯನ್ನು ಐಸನ್ಹೋವರ್ ಮ್ಯಾಟ್ರಿಕ್ಸ್ ಎಂದು ಕರೆಯುತ್ತಾರೆ.

ಈಗ ನಿಮ್ಮ ದಿನಚರಿಗೆ ಹೋಲಿಸಿಕೊಂಡು, ಬೆಳಿಗ್ಗೆ ಎದ್ದಾಗನಿಂದ ರಾತ್ರಿ ಮಲಗುವ ತನಕದ ಸಮಯ ಸಾರಣಿಗೆ ಜೋಡಿಸುತ್ತಾ, ಯಾವುದು ಮುಖ್ಯ ಮತ್ತು ತುರ್ತು ಅದನ್ನು ಮೊದಲು ಮಾಡಿ, ಯಾವುದು ತುರ್ತು ಆದರೆ ಮುಖ್ಯವಲ್ಲ ಅದನ್ನು ಕೂಡಲೇ ಮಾಡಿ, ಅದಕ್ಕೆ ಯೋಜನೆ ಹಾಕಿಕೊಳ್ಳಿ, ಸಮಯಾವಕಾಶ ಮಾಡಿಕೊಳ್ಳಿ. ಯಾವುದು ಮುಖ್ಯ ಆದರೆ ತುರ್ತು ಅಲ್ಲ, ಅದನ್ನು ಮರೆಯದೆ ಮಾಡಿ, ಅದನ್ನು ಇನ್ನೊಬ್ಬರಿಗೆ ವಹಿಸಬಹುದೇ ನೋಡಿ. ಯಾವುದು ಮುಖ್ಯವೂ ಅಲ್ಲ, ತುರ್ತೂ ಅಲ್ಲ. ಅದನ್ನು ಸಮಯ ಸಿಕ್ಕಾಗ ಮಾಡಿ, ಅಂತಹ ಕೆಲಸಗಳನ್ನು ದಿನಚರಿಯಿಂದ ಕಡಿಮೆ ಮಾಡಿಕೊಳ್ಳಿ.

ಉದಾ: ನಿಮಗೆ ಬೆಳಿಗ್ಗೆ ಕಚೇರಿಗೆ ತೆರಳಲು 9:05ರ ಮೆಟ್ರೋ ಹಿಡಿಯಬೇಕು, ಆದರೆ ಮನೆಯಿಂದ ಹೊರಡುವ ಮುನ್ನ ನಿಮ್ಮ ಸ್ನೇಹಿತ/ಸಹೋದ್ಯೋಗಿಯ ಮಿಸ್ಡ್ ಕಾಲ್ ಅಥವಾ ಮೆಸೇಜ್ ಬಂತು ಎಂದಿಟ್ಟುಕೊಳ್ಳಿ. ಅದನ್ನು ನೋಡಲು ಅಥವಾ ಅದಕ್ಕೆ ಉತ್ತರಿಸಲು ಹೋಗಿ, ನಿಮ್ಮ ಮೆಟ್ರೋ ತಪ್ಪಿಸಿಕೊಳ್ಳಬೇಡಿ. ಸ್ಟೇಷನ್ನಿಗೆ ಸಮಯಕ್ಕೆ ಸರಿಯಾಗಿ ತಲುಪಿ ಅಲ್ಲಿ ರೈಲಿಗೆ ಕಾಯುತ್ತಿರುವಾಗ ಸ್ನೇಹಿತ/ಸಹೋದ್ಯೋಗಿಯ ಸಂದೇಶಕ್ಕೆ ಗಮನಕೊಡಿ. ಅನಿರೀಕ್ಷಿತವಾಗಿ ಸಮಯ ಸಿಕ್ಕಾಗ “ಮುಖ್ಯ ಅಲ್ಲ, ತುರ್ತು ಅಲ್ಲ” ಎಂಬ ಕೆಲಸಗಳನ್ನು ನಿಪಟಾಯಿಸಿಕೊಳ್ಳಿ.

ಯಾವ ಕೆಲಸಗಳು ಅವಶ್ಯಕತೆಗಿಂತ ಹೆಚ್ಚಿನ ಸಮಯ/ಗಮನ ತೆಗೆದುಕೊಳ್ಳುತ್ತಿವೆ, ಅವನ್ನು ಮರು-ಪರಿಶೀಲಿಸಿ, ಅವನ್ನು ತ್ವರಿತವಾಗಿ/ಗಮನವಿಟ್ಟು ಮಾಡುವುದನ್ನು ಕಲಿಯಿರಿ. ತೀರಾ ಅವಶ್ಯಕವಾದಲ್ಲಿ ನಿಮ್ಮ ಅನುತ್ಪಾದನಾ ಕೆಲಸಗಳನ್ನು (4ನೆಯ ಪಟ್ಟಿಯ) ಅಥವಾ ನಿದ್ರೆಯ ಸಮಯವನ್ನು ಕತ್ತರಿಸಿ. ಮೊಬೈಲ್ ಬಳಕೆ ಕಡಿಮೆ ಮಾಡಿ, ಸಮಯದ ದುರುಪಯೋಗಕ್ಕೆ ಬಹು ದೊಡ್ದ ಕಾರಣ ಸ್ಮಾರ್ಟ್ ಫೋನ್. ಆರೋಗ್ಯಕ್ಕೆ ಧಕ್ಕೆ ಬರುವಂತಹ ಕೆಲಸ ಮಾಡಬೇಡಿ. ಅನಾರೋಗ್ಯದಿಂದ ಕೆಲಸದ ಗತಿ ಇನ್ನೂ ಕಡಿಮೆ ಆಗುತ್ತದೆ. ಹೀಗೆ ಎಲ್ಲಾ ಕೆಲಸಗಳು, ಮತ್ತು ಅದಕ್ಕೆ ತಗಲುವ ಸಮಯ ನಿಮ್ಮ ನಿಯಂತ್ರಣಕ್ಕೆ ಬರಲು ಪ್ರಾರಂಭವಾಗುತ್ತವೆ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...