Homeಅಂಕಣಗಳುಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

- Advertisement -
- Advertisement -

ಜರ್ನಲಿಸಂನಲ್ಲಿ ಜಗತ್ತಿಗೆ ಮಾದರಿಯೆನ್ನಬಹುದಾದ ’ಘಟನೆಯೊಂದರ ತನಿಖಾ ವರದಿ’ ಕೆಲವು ದಿನಗಳ ಹಿಂದೆ ಪ್ರಕಟವಾಯಿತು. ಅದು ಆದದ್ದು ಅಮೆರಿಕದಲ್ಲಿ. ಆ ವರದಿ ತನ್ನದೇ ಪ್ರಭುತ್ವದ ವಿರುದ್ಧವಾಗಿತ್ತು. ಅದೇ ರೀತಿ ಪತ್ರಿಕೋದ್ಯಮಕ್ಕೆ ಕಪ್ಪುಚುಕ್ಕಿ ಎನ್ನುವಂತಹ ವಿದ್ಯಮಾನ ಭಾರತದಲ್ಲಿ ನಡೆಯಿತು. ಮೊದಲನೆಯದರಿಂದ, ತಾನು ನಡೆಸಿದ ಹೀನಾಯ ಅಪರಾಧವನ್ನು ಒಪ್ಪಿಕೊಳ್ಳುವ ಒತ್ತಡ ಪ್ರಭುತ್ವದ ಮೇಲೆ ಸೃಷ್ಟಿಯಾದರೆ, ಎರಡನೆಯ ಘಟನೆಯಲ್ಲಿ ಫೋಟೋಜರ್ನಲಿಸ್ಟ್ ಆಗಿ ತೆರಳಿದ್ದ ವ್ಯಕ್ತಿಯೊಬ್ಬನ ಹಿಂಸಾತ್ಮಕ ಮತ್ತು ಅಮಾನವೀಯ ನಡತೆಯ ಕಾರಣದಿಂದಾಗಿ ಪ್ರಭುತ್ವದ ಅಪರಾಧಗಳು ಹಿನ್ನೆಲೆಗೆ ನೂಕಲ್ಪಟ್ಟವು.

ಮೊದಲನೆಯದು; ರಕ್ತ ಮೆತ್ತಿಕೊಂಡ ಅಮೆರಿಕ ಸ್ಟೇಟ್‌ಗೆ ಮುಜುಗರ ಉಂಟುಮಾಡಿದ ಜರ್ನಲಿಸಂ

ಆಫ್ಘಾನಿಸ್ತಾನವನ್ನು ಆಗಸ್ಟ್ 15ರ ಹೊತ್ತಿಗೆ ತಾಲಿಬಾನ್ ಬಹುತೇಕ ಸಂಪೂರ್ಣವಾಗಿ ವಶಪಡಿಸಿಕೊಂಡ ಮೇಲೆ, ಅಮೆರಿಕನ್ ಮಿತ್ರ ಪಡೆಗಳು ಕಾಬೂಲ್‌ನಿಂದ ಹಿಂದಿರುಗಲು ಇನ್ನೂ ಹರಸಾಹಸ ಪಡುತ್ತಿದ್ದವು. ಆಗಸ್ಟ್ 26ರಂದು ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದ ಸ್ಫೋಟವೊಂದರಿಂದ ಸುಮಾರು 180ಕ್ಕೂ ಹೆಚ್ಚು ಜನ ಮೃತಪಟ್ಟರು ಮತ್ತು ಹಲವರು ಗಾಯಗೊಂಡಿದ್ದರು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಅಫ್ಘನ್ ಪ್ರಜೆಗಳೂ ಸೇರಿದ್ದರು. ಇಸ್ಲಾಮಿಕ್ ಸ್ಟೇಟ್ ಇದರ ಹೊಣೆ ಹೊತ್ತಿದೆ ಎಂದು ವರದಿಯಾಗಿತ್ತು.

ಅಮೆರಿಕಾ

ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದರು. ಇದರಿಂದ ತನ್ನ ಕಣ್ಗಾವಲನ್ನು ಹೆಚ್ಚಿಸಿಕೊಂಡಿದ್ದ ಅಮೆರಿಕನ್ ಸೇನೆ, ಆಫ್ಘಾನಿಸ್ತಾನದ ನೆಲದಲ್ಲಿ ಆಗಸ್ಟ್ 29ರಂದು ಹಲವು ಸಂಶಯಾತ್ಮಕ ಚಲನವಲನಗಳನ್ನು ಗುರುತಿಸಿರುವುದಾಗಿ ಮತ್ತು ಐಸಿಸ್ ’ಸುರಕ್ಷಿತ ಮನೆ’ಗೆ ಹೋಗಿಬರುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿರುವುದಾಗಿ ಹೇಳಿ, ಡ್ರೋನ್ ಕ್ಷಿಪಣಿ ದಾಳಿ ನಡೆಸಿ, ಮೂವರನ್ನು ಕೊಂದುಹಾಕಿದ್ದರ ಬಗ್ಗೆ ತಿಳಿಸಿತ್ತು.

ಅಮೆರಿಕದ ಪ್ರತಿಷ್ಟಿತ ಪತ್ರಿಕೆಯಾದ ’ದ ನ್ಯೂಯಾರ್ಕ್ ಟೈಮ್ಸ್’ ಸೆಪ್ಟಂಬರ್ ಎರಡನೇ ವಾರದಲ್ಲಿ ಮಾಡಿದ ತನಿಖಾ ಪತ್ರಿಕೋದ್ಯಮ ಅಮೆರಿಕ ಸೇನೆಯ ಮೇಲಿನ ಸುಳ್ಳುಗಳನ್ನು ಬಯಲು ಮಾಡಿತ್ತು. ಅಮೆರಿಕದ ಮಿಸೈಲ್ ದಾಳಿಯಿಂದ ಮೃತಪಟ್ಟಿದ್ದು ಐಸಿಸ್ ಉಗ್ರಗಾಮಿಗಳಲ್ಲ, ಬದಲಿಗೆ ಸಾಮಾನ್ಯ ಆಫ್ಘನ್ ನಾಗರಿಕರು ಎಂದು ಆ ವರದಿ ಬಹಿರಂಗಪಡಿಸಿತ್ತು. ಹಾಗೂ ಅಮೆರಿಕ ಸೇನೆ ತಿಳಿಸಿದಂತೆ ಮೃತಪಟ್ಟವರು ಕೇವಲ ಮೂರು ಜನರಲ್ಲ ಬದಲಿಗೆ ಏಳು ಮಕ್ಕಳನ್ನು ಸೇರಿಸಿ 10 ಸಾಮಾನ್ಯ ನಾಗರಿಕರು ಬಲಿಯಾಗಿರುವುದನ್ನು ವರದಿ ತಿಳಿಸಿತ್ತು. ಅಲ್ಲದೆ, ನೇರ ಕ್ಷಿಪಣಿ ದಾಳಿಯಿಂದಲ್ಲದೆ, ತಾನು ದಾಳಿ ಮಾಡಿದ ಕಾರಿನಲ್ಲಿ ಇದ್ದ ಸ್ಫೋಟಕ ವಸ್ಥುಗಳು ಸಿಡಿದ ಕಾರಣಕ್ಕೆ ಅಲ್ಲಿ ಮೃತರ ಸಂಖ್ಯೆ ಹೆಚ್ಚಿತ್ತು ಎಂಬ ಅಮೆರಿಕ ಸೇನೆಯ ಹೇಳಿಕೆ ಕೂಡ ಸುಳ್ಳಿನಿಂದ ಕೂಡಿದ್ದು ಎಂದು ಆ ಪತ್ರಿಕಾ ವರದಿ ಮತ್ತು ತನಿಖಾ ವಿಡಿಯೋ ಸಾಬೀತುಪಡಿಸಿತ್ತು.

ಹಲವು ದೇಶಗಳ ಮೇಲಿನ ತನ್ನ ಸುದೀರ್ಘ ಯುದ್ಧದಲ್ಲಿ ಎಷ್ಟೋ ಬಾರಿ ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡಿ ಕೊಂದಿರುವ ಆರೋಪಗಳಿಂದ ನುಣುಚಿಕೊಂಡಿದ್ದ ಅಮೆರಿಕ ಆಡಳಿತ ವ್ಯವಸ್ಥೆಗೆ ಈ ಬಾರಿ ಭಾರಿ ಮುಜುಗರ ತಂದೊಡ್ಡಿದ್ದು ’ದ ನ್ಯೂಯಾರ್ಕ್ ಟೈಮ್ಸ್’ನ ಪತ್ರಿಕೋದ್ಯಮ. ಕ್ಯಾಲಿಫೋರ್ನಿಯಾ ಮೂಲದ ’ನ್ಯೂಟ್ರಿಶನಲ್ ಅಂಡ್ ಎಜುಕೇಶನಲ್ ಇಂಟರ್‌ನ್ಯಾಷನಲ್’ ಎಂಬ ನೆರವು ನೀಡುವ ಸಂಸ್ಥೆಯೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೆಮಾರಿ ಅಹ್ಮದಿಯ ಚಲನವಲನವನ್ನು ಐಎಸ್ ಉಗ್ರರ ಚಲನವಲನ ಎಂದು ಕರೆದು, ಅಮೆರಿಕ ಸೇನೆ ಆತನ ಕಾರಿನ ಮೇಲೆ ದ್ರೋಣ್ ಕ್ಷಿಪಣಿ ನಡೆಸಿದ್ದರ ಪರಿಣಾಮವಾಗಿ ಆತನ ಜೊತೆಗೆ ಏಳು ಪುಟ್ಟ ಮಕ್ಕಳು ಸೇರಿದಂತೆ 10 ಜನರನ್ನು ಆಹುತಿ ತೆಗೆದುಕೊಂಡಿತ್ತು. ಆದರೆ ಅಂದು ಜೆಮಾರಿ ಅಹ್ಮದಿಯ ಎಲ್ಲಾ ಚಲನವಲನಗಳು ಎಂದಿನ ದಿನದ ಸಾಮಾನ್ಯ ಕೆಲಸದ ಭಾಗವಾಗಿತ್ತು ಎಂದು ತನಿಖಾ ವರದಿ ಸಾಬೀತುಪಡಿಸಿತ್ತು.

ಚಿತ್ರ ಕೃಪೆ: ದ ನ್ಯೂಯಾರ್ಕ್ ಟೈಮ್ಸ್

ಭಯೋತ್ಪಾದನೆ ವಿರುದ್ಧದ ಯುದ್ಧ ಎಂದು ಹೇಳಿಕೊಂಡು ನಡೆಸುವ ಇಂತಹ ನಾಗರಿಕ ಹತ್ಯೆಗಳಿಗೆ ಪರಿಹಾರವೇನು? ಇದಕ್ಕೆ ಅಮೆರಿಕ ಪ್ರಭುತ್ವ ಬೆಲೆತೆತ್ತುವುದು ಯಾವಾಗ? ಈಗ ಇದೊಂದು “ದುರಂತಮಯ ತಪ್ಪು” ಎಂದು ಅಮೆರಿಕ ಪ್ರಭುತ್ವ ಒಪ್ಪಿಕೊಂಡಿದ್ದರೂ, ಹೋದ ಅಮಾಯಕ ಜೀವಗಳನ್ನು ಮರಳಿ ತರಬಲ್ಲದೇ ಅದು? ಕೊನೆ ಪಕ್ಷ ಈ ತಪ್ಪುಗಳನ್ನು ಜಗತ್ತಿನ ಮುಂದೆ ತೋರಿಸಲು, ಒಂದು ಪ್ರಭುತ್ವ ನಡೆಸಬಲ್ಲ ಹೀನಾಯ ಕೃತ್ಯಗಳನ್ನು ಬಯಲಿಗೆಳೆಯಲು ಅದೇ ದೇಶದ ಕೆಲವಾದರೂ ಪತ್ರಕರ್ತರು ಇನ್ನೂ ತಮ್ಮ ಸಿಟ್ಟನ್ನು, ತಾವೂ ನಿಭಾಯಿಸಬೇಕಿರುವ ಕರ್ತವ್ಯವನ್ನು ಜೀವಂತವಾಗಿರಿಸಿಕೊಂಡಿದ್ದಾರೆ ಎಂಬುದೇ ನಿಟ್ಟುಸಿರು!

ಎರಡನೆಯದು; ದೇಹ ತಣ್ಣಗಾಗುವ ಮುನ್ನವೇ ಅದರ ಮೇಲೆ ಕುಪ್ಪಳಿಸಿ ಗುದ್ದಿದ ಫೋಟೋಗ್ರಾಫರ್!

ಪ್ರವಾಸ ಕೈಗೊಂಡಿದ್ದ ಈ ದೇಶದ ಪ್ರಧಾನಿ ಅಮೆರಿಕ ನೆಲದಲ್ಲಿ, ಆಫ್ಘಾನಿಸ್ತಾನ ಭಯೋತ್ಪಾದನೆಯ ನೆಲವಾಗುವುದರ ಬಗ್ಗೆ ಒಂದು ಕಡೆ ಆತಂಕ ವ್ಯಕ್ತಪಡಿಸುತ್ತಿದ್ದರೆ, ತಮ್ಮದೇ ದೇಶದ ರಾಜ್ಯವಾದ ಅಸ್ಸಾಂನ ಪೊಲೀಸರು ಸಾಮಾನ್ಯ ನಾಗರಿಕರ ಮೇಲೆ ಗುಂಡುಹಾರಿಸಿ ಕನಿಷ್ಟ ಇಬ್ಬರನ್ನು ಹತ್ಯೆಗೈದಿದ್ದರು. ಅಷ್ಟು ಸಾಲದು ಎಂಬಂತೆ, ಪೊಲೀಸರ ಜೊತೆಗೆ ತೆರಳಿದ್ದ ಫೋಟೋಜರ್ನಲಿಸ್ಟ್ ಒಬ್ಬ ಆಗತಾನೆ ಗುಂಡುಬಿದ್ದು ನೆಲಕ್ಕುರುಳಿದ ವ್ಯಕ್ತಿಯ ಮೃತ ದೇಹ ತಣ್ಣಗಾಗುವ ಮುಂಚೆಯೇ, ಆ ದೇಹದ ಮೇಲೆ ಕುಪ್ಪಳಿಸುವ, ಆ ದೇಹಕ್ಕೆ ಗುದ್ದುವ ವಿಡಿಯೋ ಮತ್ತು ಫೋಟೋಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದವು. ತನ್ನ ಮುಂದೆ ಘಟಿಸಿದ ಒಂದು ಸಾವು ಕೊನೆಪಕ್ಷ ಮನುಷ್ಯನ ಕ್ರೌರ್ಯವನ್ನು ಅದುಮಿಟ್ಟುಕೊಳ್ಳುವಂತೆ ಮಾಡಿ, ಸಣ್ಣ ವೇದನೆಯನ್ನೂ ಸೃಷ್ಟಿಸಲು ಸಾಧ್ಯವಾಗದೆ ಹೋದರೆ, ಎಂತಹ ವಿಕೃತ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ ಎಂಬುದಕ್ಕೆ ಅದು ದ್ಯೋತಕವಾಗಿತ್ತು.

ಅಸ್ಸಾಂನ ರಾಜಧಾನಿ ಗೌಹಾಟಿಯಿಂದ ಸುಮಾರು 70 ಕಿಲೋಮೀಟರ ದೂರದಲ್ಲಿರುವ ಧೋಲಾಪುರ್‌ನಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ಆರೋಪಿಸಲಾಗಿರುವ ಪೂರ್ವ ಬಂಗಾಳ ಮೂಲದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 800 ಕುಟುಂಬಗಳನ್ನು ಅವರ ಟಿನ್ ಶೆಡ್‌ಗಳಿಂದ ತೆರವುಗೊಳಿಸುವ ಯೋಜನೆಯ ಭಾಗವಾಗಿ ಸೆಪ್ಟಂಬರ್ 20- 23ರ ನಡುವೆ ಪೊಲೀಸರು ಅಲ್ಲಿ ನೆರೆದಿದ್ದರು. ಸರಿಯಾದ ನೋಟಿಸ್ ಸಿಗದಿದ್ದಕ್ಕೆ ಕಂಗಾಲಾಗಿದ್ದ ಆ ಕುಟುಂಬಗಳ ಜನರು ಪ್ರತಿರೋಧ ತೋರಿದ್ದಾರೆ. ಒಬ್ಬ ವ್ಯಕ್ತಿ ಬೆತ್ತವೊಂದನ್ನು ಹಿಡಿದು ಪೊಲೀಸರತ್ತ ನುಗ್ಗಿ ಬರುವ ಒಂದು ದೃಶ್ಯವನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಆದರೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪೊಲೀಸರಿಗೆ ಆ ಗುಂಪನ್ನು ಚದುರಿಸುವುದು ಕಷ್ಟವೇನಿರಲಿಲ್ಲ. ಬದಲಿಗೆ ಏಕಾಏಕಿ ಗುಂಡಿನ ಸುರಿಮಳೆಗೈದು ಇಬ್ಬರ ಹತ್ಯೆಗೆ ಮತ್ತು ಹಲವರ ಗಾಯಗಳಿಗೆ ಕಾರಣವಾಗಿದ್ದಾರೆ. ಕೆಲವರು ಪೊಲೀಸರು ಕೂಡ ಗಾಯಗೊಂಡಿದ್ದಾರೆ.

ಜನಸಾಮಾನ್ಯರ ಮೇಲಿನ ದರ್ಪ ಮತ್ತು ಪೊಲೀಸರ ಹದ್ದುಮೀರಿದ ವರ್ತನೆ ಒಂದು ಕಡೆಯಾದರೆ, ಅವರ ಜೊತೆಗೆ ತೆರಳಿದ್ದ ಫೋಟೋಗ್ರಾಫರ್, (ಈಗ ಘಟನೆಯ ನಂತರ ಬಂಧಿತನಾಗಿದ್ದಾನೆ) ಬಿಜೋಯ್ ಬನಿಯಾನ ವರ್ತನೆ ಇಡೀ ಮನುಕುಲಕ್ಕೆ ನಾಚಿಕೆ ತರುವಂತಿತ್ತು! ಅದರ ನಂತರ ಅಸ್ಸಾಂನ ಪತ್ರಿಕೆಗಳು ಈ ಘಟನೆಯನ್ನು ವರದಿ ಮಾಡಿದ ರೀತಿ ಕೂಡ, ಆಡಳಿತ ವ್ಯವಸ್ಥೆಯ ಪರವಾದ ನಿಲುವನ್ನೇ ವಹಿಸಿದ್ದವು ಎಂದು ಮುಂದಿನ ದಿನದ ದಿನಪತ್ರಿಕೆಗಳ ಬರಹಗಳನ್ನು ವಿಶ್ಲೇಷಿಸಿರುವ ’ನ್ಯೂಸ್‌ಲಾಂಡ್ರಿ’ ಪತ್ರಿಕೆ ತಿಳಿಸಿದೆ.

ಜನರಲ್ ಡೈಯರ್ ಮತ್ತವನ ಸಂತತಿ ಸತ್ತರೂ ಜಲಿಯನ್‌ವಾಲಾ ಬಾಗ್ ದುರಂತ ಹಲವು ರೂಪಗಳಲ್ಲಿ ಮರುಕಳಿಸುತ್ತಿರುತ್ತದೆ ಎಂಬುದಕ್ಕೆ ಅಸ್ಸಾಂನ ಈ ಘಟನೆಯೇ ಸಾಕ್ಷಿ. ಆದರೆ ನಾಗರಿಕ ಸಮಾಜದ ಒಂದು ವರ್ಗ ಅಂತಹ ಡೈಯರ್‌ಗಳ ಇಂದಿನ ಅವತಾರಗಳ ಪರ ವಹಿಸಿ ನಿಲ್ಲುತ್ತಿರುವುದು ಈ ಯುಗದ ದುರಂತವಷ್ಟೇ!


ಇದನ್ನೂ ಓದಿ: ಅಸ್ಸಾಂ: ಕ್ಯಾಮರಾ ಮುಂದೆಯೆ ಪೊಲೀಸರಿಂದ ಕ್ರೂರವಾಗಿ ಹತ್ಯೆಯಾದ ವ್ಯಕ್ತಿ ಅಕ್ರಮ ನಿವಾಸಿಯಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...