Homeಅಂಕಣಗಳುಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

- Advertisement -
- Advertisement -

ಜರ್ನಲಿಸಂನಲ್ಲಿ ಜಗತ್ತಿಗೆ ಮಾದರಿಯೆನ್ನಬಹುದಾದ ’ಘಟನೆಯೊಂದರ ತನಿಖಾ ವರದಿ’ ಕೆಲವು ದಿನಗಳ ಹಿಂದೆ ಪ್ರಕಟವಾಯಿತು. ಅದು ಆದದ್ದು ಅಮೆರಿಕದಲ್ಲಿ. ಆ ವರದಿ ತನ್ನದೇ ಪ್ರಭುತ್ವದ ವಿರುದ್ಧವಾಗಿತ್ತು. ಅದೇ ರೀತಿ ಪತ್ರಿಕೋದ್ಯಮಕ್ಕೆ ಕಪ್ಪುಚುಕ್ಕಿ ಎನ್ನುವಂತಹ ವಿದ್ಯಮಾನ ಭಾರತದಲ್ಲಿ ನಡೆಯಿತು. ಮೊದಲನೆಯದರಿಂದ, ತಾನು ನಡೆಸಿದ ಹೀನಾಯ ಅಪರಾಧವನ್ನು ಒಪ್ಪಿಕೊಳ್ಳುವ ಒತ್ತಡ ಪ್ರಭುತ್ವದ ಮೇಲೆ ಸೃಷ್ಟಿಯಾದರೆ, ಎರಡನೆಯ ಘಟನೆಯಲ್ಲಿ ಫೋಟೋಜರ್ನಲಿಸ್ಟ್ ಆಗಿ ತೆರಳಿದ್ದ ವ್ಯಕ್ತಿಯೊಬ್ಬನ ಹಿಂಸಾತ್ಮಕ ಮತ್ತು ಅಮಾನವೀಯ ನಡತೆಯ ಕಾರಣದಿಂದಾಗಿ ಪ್ರಭುತ್ವದ ಅಪರಾಧಗಳು ಹಿನ್ನೆಲೆಗೆ ನೂಕಲ್ಪಟ್ಟವು.

ಮೊದಲನೆಯದು; ರಕ್ತ ಮೆತ್ತಿಕೊಂಡ ಅಮೆರಿಕ ಸ್ಟೇಟ್‌ಗೆ ಮುಜುಗರ ಉಂಟುಮಾಡಿದ ಜರ್ನಲಿಸಂ

ಆಫ್ಘಾನಿಸ್ತಾನವನ್ನು ಆಗಸ್ಟ್ 15ರ ಹೊತ್ತಿಗೆ ತಾಲಿಬಾನ್ ಬಹುತೇಕ ಸಂಪೂರ್ಣವಾಗಿ ವಶಪಡಿಸಿಕೊಂಡ ಮೇಲೆ, ಅಮೆರಿಕನ್ ಮಿತ್ರ ಪಡೆಗಳು ಕಾಬೂಲ್‌ನಿಂದ ಹಿಂದಿರುಗಲು ಇನ್ನೂ ಹರಸಾಹಸ ಪಡುತ್ತಿದ್ದವು. ಆಗಸ್ಟ್ 26ರಂದು ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದ ಸ್ಫೋಟವೊಂದರಿಂದ ಸುಮಾರು 180ಕ್ಕೂ ಹೆಚ್ಚು ಜನ ಮೃತಪಟ್ಟರು ಮತ್ತು ಹಲವರು ಗಾಯಗೊಂಡಿದ್ದರು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಅಫ್ಘನ್ ಪ್ರಜೆಗಳೂ ಸೇರಿದ್ದರು. ಇಸ್ಲಾಮಿಕ್ ಸ್ಟೇಟ್ ಇದರ ಹೊಣೆ ಹೊತ್ತಿದೆ ಎಂದು ವರದಿಯಾಗಿತ್ತು.

ಅಮೆರಿಕಾ

ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದರು. ಇದರಿಂದ ತನ್ನ ಕಣ್ಗಾವಲನ್ನು ಹೆಚ್ಚಿಸಿಕೊಂಡಿದ್ದ ಅಮೆರಿಕನ್ ಸೇನೆ, ಆಫ್ಘಾನಿಸ್ತಾನದ ನೆಲದಲ್ಲಿ ಆಗಸ್ಟ್ 29ರಂದು ಹಲವು ಸಂಶಯಾತ್ಮಕ ಚಲನವಲನಗಳನ್ನು ಗುರುತಿಸಿರುವುದಾಗಿ ಮತ್ತು ಐಸಿಸ್ ’ಸುರಕ್ಷಿತ ಮನೆ’ಗೆ ಹೋಗಿಬರುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿರುವುದಾಗಿ ಹೇಳಿ, ಡ್ರೋನ್ ಕ್ಷಿಪಣಿ ದಾಳಿ ನಡೆಸಿ, ಮೂವರನ್ನು ಕೊಂದುಹಾಕಿದ್ದರ ಬಗ್ಗೆ ತಿಳಿಸಿತ್ತು.

ಅಮೆರಿಕದ ಪ್ರತಿಷ್ಟಿತ ಪತ್ರಿಕೆಯಾದ ’ದ ನ್ಯೂಯಾರ್ಕ್ ಟೈಮ್ಸ್’ ಸೆಪ್ಟಂಬರ್ ಎರಡನೇ ವಾರದಲ್ಲಿ ಮಾಡಿದ ತನಿಖಾ ಪತ್ರಿಕೋದ್ಯಮ ಅಮೆರಿಕ ಸೇನೆಯ ಮೇಲಿನ ಸುಳ್ಳುಗಳನ್ನು ಬಯಲು ಮಾಡಿತ್ತು. ಅಮೆರಿಕದ ಮಿಸೈಲ್ ದಾಳಿಯಿಂದ ಮೃತಪಟ್ಟಿದ್ದು ಐಸಿಸ್ ಉಗ್ರಗಾಮಿಗಳಲ್ಲ, ಬದಲಿಗೆ ಸಾಮಾನ್ಯ ಆಫ್ಘನ್ ನಾಗರಿಕರು ಎಂದು ಆ ವರದಿ ಬಹಿರಂಗಪಡಿಸಿತ್ತು. ಹಾಗೂ ಅಮೆರಿಕ ಸೇನೆ ತಿಳಿಸಿದಂತೆ ಮೃತಪಟ್ಟವರು ಕೇವಲ ಮೂರು ಜನರಲ್ಲ ಬದಲಿಗೆ ಏಳು ಮಕ್ಕಳನ್ನು ಸೇರಿಸಿ 10 ಸಾಮಾನ್ಯ ನಾಗರಿಕರು ಬಲಿಯಾಗಿರುವುದನ್ನು ವರದಿ ತಿಳಿಸಿತ್ತು. ಅಲ್ಲದೆ, ನೇರ ಕ್ಷಿಪಣಿ ದಾಳಿಯಿಂದಲ್ಲದೆ, ತಾನು ದಾಳಿ ಮಾಡಿದ ಕಾರಿನಲ್ಲಿ ಇದ್ದ ಸ್ಫೋಟಕ ವಸ್ಥುಗಳು ಸಿಡಿದ ಕಾರಣಕ್ಕೆ ಅಲ್ಲಿ ಮೃತರ ಸಂಖ್ಯೆ ಹೆಚ್ಚಿತ್ತು ಎಂಬ ಅಮೆರಿಕ ಸೇನೆಯ ಹೇಳಿಕೆ ಕೂಡ ಸುಳ್ಳಿನಿಂದ ಕೂಡಿದ್ದು ಎಂದು ಆ ಪತ್ರಿಕಾ ವರದಿ ಮತ್ತು ತನಿಖಾ ವಿಡಿಯೋ ಸಾಬೀತುಪಡಿಸಿತ್ತು.

ಹಲವು ದೇಶಗಳ ಮೇಲಿನ ತನ್ನ ಸುದೀರ್ಘ ಯುದ್ಧದಲ್ಲಿ ಎಷ್ಟೋ ಬಾರಿ ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡಿ ಕೊಂದಿರುವ ಆರೋಪಗಳಿಂದ ನುಣುಚಿಕೊಂಡಿದ್ದ ಅಮೆರಿಕ ಆಡಳಿತ ವ್ಯವಸ್ಥೆಗೆ ಈ ಬಾರಿ ಭಾರಿ ಮುಜುಗರ ತಂದೊಡ್ಡಿದ್ದು ’ದ ನ್ಯೂಯಾರ್ಕ್ ಟೈಮ್ಸ್’ನ ಪತ್ರಿಕೋದ್ಯಮ. ಕ್ಯಾಲಿಫೋರ್ನಿಯಾ ಮೂಲದ ’ನ್ಯೂಟ್ರಿಶನಲ್ ಅಂಡ್ ಎಜುಕೇಶನಲ್ ಇಂಟರ್‌ನ್ಯಾಷನಲ್’ ಎಂಬ ನೆರವು ನೀಡುವ ಸಂಸ್ಥೆಯೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೆಮಾರಿ ಅಹ್ಮದಿಯ ಚಲನವಲನವನ್ನು ಐಎಸ್ ಉಗ್ರರ ಚಲನವಲನ ಎಂದು ಕರೆದು, ಅಮೆರಿಕ ಸೇನೆ ಆತನ ಕಾರಿನ ಮೇಲೆ ದ್ರೋಣ್ ಕ್ಷಿಪಣಿ ನಡೆಸಿದ್ದರ ಪರಿಣಾಮವಾಗಿ ಆತನ ಜೊತೆಗೆ ಏಳು ಪುಟ್ಟ ಮಕ್ಕಳು ಸೇರಿದಂತೆ 10 ಜನರನ್ನು ಆಹುತಿ ತೆಗೆದುಕೊಂಡಿತ್ತು. ಆದರೆ ಅಂದು ಜೆಮಾರಿ ಅಹ್ಮದಿಯ ಎಲ್ಲಾ ಚಲನವಲನಗಳು ಎಂದಿನ ದಿನದ ಸಾಮಾನ್ಯ ಕೆಲಸದ ಭಾಗವಾಗಿತ್ತು ಎಂದು ತನಿಖಾ ವರದಿ ಸಾಬೀತುಪಡಿಸಿತ್ತು.

ಚಿತ್ರ ಕೃಪೆ: ದ ನ್ಯೂಯಾರ್ಕ್ ಟೈಮ್ಸ್

ಭಯೋತ್ಪಾದನೆ ವಿರುದ್ಧದ ಯುದ್ಧ ಎಂದು ಹೇಳಿಕೊಂಡು ನಡೆಸುವ ಇಂತಹ ನಾಗರಿಕ ಹತ್ಯೆಗಳಿಗೆ ಪರಿಹಾರವೇನು? ಇದಕ್ಕೆ ಅಮೆರಿಕ ಪ್ರಭುತ್ವ ಬೆಲೆತೆತ್ತುವುದು ಯಾವಾಗ? ಈಗ ಇದೊಂದು “ದುರಂತಮಯ ತಪ್ಪು” ಎಂದು ಅಮೆರಿಕ ಪ್ರಭುತ್ವ ಒಪ್ಪಿಕೊಂಡಿದ್ದರೂ, ಹೋದ ಅಮಾಯಕ ಜೀವಗಳನ್ನು ಮರಳಿ ತರಬಲ್ಲದೇ ಅದು? ಕೊನೆ ಪಕ್ಷ ಈ ತಪ್ಪುಗಳನ್ನು ಜಗತ್ತಿನ ಮುಂದೆ ತೋರಿಸಲು, ಒಂದು ಪ್ರಭುತ್ವ ನಡೆಸಬಲ್ಲ ಹೀನಾಯ ಕೃತ್ಯಗಳನ್ನು ಬಯಲಿಗೆಳೆಯಲು ಅದೇ ದೇಶದ ಕೆಲವಾದರೂ ಪತ್ರಕರ್ತರು ಇನ್ನೂ ತಮ್ಮ ಸಿಟ್ಟನ್ನು, ತಾವೂ ನಿಭಾಯಿಸಬೇಕಿರುವ ಕರ್ತವ್ಯವನ್ನು ಜೀವಂತವಾಗಿರಿಸಿಕೊಂಡಿದ್ದಾರೆ ಎಂಬುದೇ ನಿಟ್ಟುಸಿರು!

ಎರಡನೆಯದು; ದೇಹ ತಣ್ಣಗಾಗುವ ಮುನ್ನವೇ ಅದರ ಮೇಲೆ ಕುಪ್ಪಳಿಸಿ ಗುದ್ದಿದ ಫೋಟೋಗ್ರಾಫರ್!

ಪ್ರವಾಸ ಕೈಗೊಂಡಿದ್ದ ಈ ದೇಶದ ಪ್ರಧಾನಿ ಅಮೆರಿಕ ನೆಲದಲ್ಲಿ, ಆಫ್ಘಾನಿಸ್ತಾನ ಭಯೋತ್ಪಾದನೆಯ ನೆಲವಾಗುವುದರ ಬಗ್ಗೆ ಒಂದು ಕಡೆ ಆತಂಕ ವ್ಯಕ್ತಪಡಿಸುತ್ತಿದ್ದರೆ, ತಮ್ಮದೇ ದೇಶದ ರಾಜ್ಯವಾದ ಅಸ್ಸಾಂನ ಪೊಲೀಸರು ಸಾಮಾನ್ಯ ನಾಗರಿಕರ ಮೇಲೆ ಗುಂಡುಹಾರಿಸಿ ಕನಿಷ್ಟ ಇಬ್ಬರನ್ನು ಹತ್ಯೆಗೈದಿದ್ದರು. ಅಷ್ಟು ಸಾಲದು ಎಂಬಂತೆ, ಪೊಲೀಸರ ಜೊತೆಗೆ ತೆರಳಿದ್ದ ಫೋಟೋಜರ್ನಲಿಸ್ಟ್ ಒಬ್ಬ ಆಗತಾನೆ ಗುಂಡುಬಿದ್ದು ನೆಲಕ್ಕುರುಳಿದ ವ್ಯಕ್ತಿಯ ಮೃತ ದೇಹ ತಣ್ಣಗಾಗುವ ಮುಂಚೆಯೇ, ಆ ದೇಹದ ಮೇಲೆ ಕುಪ್ಪಳಿಸುವ, ಆ ದೇಹಕ್ಕೆ ಗುದ್ದುವ ವಿಡಿಯೋ ಮತ್ತು ಫೋಟೋಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದವು. ತನ್ನ ಮುಂದೆ ಘಟಿಸಿದ ಒಂದು ಸಾವು ಕೊನೆಪಕ್ಷ ಮನುಷ್ಯನ ಕ್ರೌರ್ಯವನ್ನು ಅದುಮಿಟ್ಟುಕೊಳ್ಳುವಂತೆ ಮಾಡಿ, ಸಣ್ಣ ವೇದನೆಯನ್ನೂ ಸೃಷ್ಟಿಸಲು ಸಾಧ್ಯವಾಗದೆ ಹೋದರೆ, ಎಂತಹ ವಿಕೃತ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ ಎಂಬುದಕ್ಕೆ ಅದು ದ್ಯೋತಕವಾಗಿತ್ತು.

ಅಸ್ಸಾಂನ ರಾಜಧಾನಿ ಗೌಹಾಟಿಯಿಂದ ಸುಮಾರು 70 ಕಿಲೋಮೀಟರ ದೂರದಲ್ಲಿರುವ ಧೋಲಾಪುರ್‌ನಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ಆರೋಪಿಸಲಾಗಿರುವ ಪೂರ್ವ ಬಂಗಾಳ ಮೂಲದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 800 ಕುಟುಂಬಗಳನ್ನು ಅವರ ಟಿನ್ ಶೆಡ್‌ಗಳಿಂದ ತೆರವುಗೊಳಿಸುವ ಯೋಜನೆಯ ಭಾಗವಾಗಿ ಸೆಪ್ಟಂಬರ್ 20- 23ರ ನಡುವೆ ಪೊಲೀಸರು ಅಲ್ಲಿ ನೆರೆದಿದ್ದರು. ಸರಿಯಾದ ನೋಟಿಸ್ ಸಿಗದಿದ್ದಕ್ಕೆ ಕಂಗಾಲಾಗಿದ್ದ ಆ ಕುಟುಂಬಗಳ ಜನರು ಪ್ರತಿರೋಧ ತೋರಿದ್ದಾರೆ. ಒಬ್ಬ ವ್ಯಕ್ತಿ ಬೆತ್ತವೊಂದನ್ನು ಹಿಡಿದು ಪೊಲೀಸರತ್ತ ನುಗ್ಗಿ ಬರುವ ಒಂದು ದೃಶ್ಯವನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಆದರೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪೊಲೀಸರಿಗೆ ಆ ಗುಂಪನ್ನು ಚದುರಿಸುವುದು ಕಷ್ಟವೇನಿರಲಿಲ್ಲ. ಬದಲಿಗೆ ಏಕಾಏಕಿ ಗುಂಡಿನ ಸುರಿಮಳೆಗೈದು ಇಬ್ಬರ ಹತ್ಯೆಗೆ ಮತ್ತು ಹಲವರ ಗಾಯಗಳಿಗೆ ಕಾರಣವಾಗಿದ್ದಾರೆ. ಕೆಲವರು ಪೊಲೀಸರು ಕೂಡ ಗಾಯಗೊಂಡಿದ್ದಾರೆ.

ಜನಸಾಮಾನ್ಯರ ಮೇಲಿನ ದರ್ಪ ಮತ್ತು ಪೊಲೀಸರ ಹದ್ದುಮೀರಿದ ವರ್ತನೆ ಒಂದು ಕಡೆಯಾದರೆ, ಅವರ ಜೊತೆಗೆ ತೆರಳಿದ್ದ ಫೋಟೋಗ್ರಾಫರ್, (ಈಗ ಘಟನೆಯ ನಂತರ ಬಂಧಿತನಾಗಿದ್ದಾನೆ) ಬಿಜೋಯ್ ಬನಿಯಾನ ವರ್ತನೆ ಇಡೀ ಮನುಕುಲಕ್ಕೆ ನಾಚಿಕೆ ತರುವಂತಿತ್ತು! ಅದರ ನಂತರ ಅಸ್ಸಾಂನ ಪತ್ರಿಕೆಗಳು ಈ ಘಟನೆಯನ್ನು ವರದಿ ಮಾಡಿದ ರೀತಿ ಕೂಡ, ಆಡಳಿತ ವ್ಯವಸ್ಥೆಯ ಪರವಾದ ನಿಲುವನ್ನೇ ವಹಿಸಿದ್ದವು ಎಂದು ಮುಂದಿನ ದಿನದ ದಿನಪತ್ರಿಕೆಗಳ ಬರಹಗಳನ್ನು ವಿಶ್ಲೇಷಿಸಿರುವ ’ನ್ಯೂಸ್‌ಲಾಂಡ್ರಿ’ ಪತ್ರಿಕೆ ತಿಳಿಸಿದೆ.

ಜನರಲ್ ಡೈಯರ್ ಮತ್ತವನ ಸಂತತಿ ಸತ್ತರೂ ಜಲಿಯನ್‌ವಾಲಾ ಬಾಗ್ ದುರಂತ ಹಲವು ರೂಪಗಳಲ್ಲಿ ಮರುಕಳಿಸುತ್ತಿರುತ್ತದೆ ಎಂಬುದಕ್ಕೆ ಅಸ್ಸಾಂನ ಈ ಘಟನೆಯೇ ಸಾಕ್ಷಿ. ಆದರೆ ನಾಗರಿಕ ಸಮಾಜದ ಒಂದು ವರ್ಗ ಅಂತಹ ಡೈಯರ್‌ಗಳ ಇಂದಿನ ಅವತಾರಗಳ ಪರ ವಹಿಸಿ ನಿಲ್ಲುತ್ತಿರುವುದು ಈ ಯುಗದ ದುರಂತವಷ್ಟೇ!


ಇದನ್ನೂ ಓದಿ: ಅಸ್ಸಾಂ: ಕ್ಯಾಮರಾ ಮುಂದೆಯೆ ಪೊಲೀಸರಿಂದ ಕ್ರೂರವಾಗಿ ಹತ್ಯೆಯಾದ ವ್ಯಕ್ತಿ ಅಕ್ರಮ ನಿವಾಸಿಯಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...