Homeಕರ್ನಾಟಕಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

ಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

- Advertisement -
- Advertisement -

2008 ಮತ್ತು 2019…. ಈ ನಡುವಿನ ಅವಧಿಯೆಲ್ಲ ಕರ್ನಾಟಕಕ್ಕೆ ಬರವೇ. ಯಾವ ಪಕ್ಷವೂ ಜನರ ನೋವಿಗೆ ಮಿಡಿದೇ ಇಲ್ಲ. ಆದರೆ, ಈಗ ಈ ವರದಿಯ ಉದ್ದೇಶವಿಷ್ಟೇ: 2008ರಲ್ಲಿ ಒಂದು ‘ಅಕ್ರಮ’ ಸರ್ಕಾರವನ್ನು ನಿರ್ಮಿಸಿದ ಗುಂಪೊಂದು, ಈಗ ಇನ್ನೊಂದು ಅಕ್ರಮ ಸರ್ಕಾರ ನಿರ್ಮಾಣವಾಗುವ ವೇಳೆಯಲ್ಲಿ ಎಲ್ಲಿತ್ತು?

ಅಂದು ಲೋಡುಗಟ್ಟಲೇ ಹಣ ಹೂಡಿದವರನ್ನು ಇವತ್ತು ಬಿಜೆಪಿ ಚಿಮ್ಮಿಬಿಟ್ಟಿತೇ? ಅಥವಾ ಇವತ್ತು ಹೂಡಲಾಗದಷ್ಟು ಅಸಹಾಯಕತೆಯಲ್ಲಿ ಇರುವರೇ? ದಿಕ್ಕಾಪಾಲಾಗಿರುವ ಬಳ್ಳಾರಿ ಅದಿರಿನ ಗ್ಯಾಂಗಿಗೆ ಈಗ ಬಿಜೆಪಿಯಲ್ಲಿ ಗೌರವ ಅಷ್ಟಕ್ಕಷ್ಟೇ. ಶ್ರೀಮಂತಿಕೆಯಲ್ಲಿ ತೀರಾ ಪಾತಾಳಕ್ಕೇನೂ ಅವರು ಕುಸಿದಿಲ್ಲವಾದರೂ ರಾಜಕೀಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ, ಈಗ ಕೇಂದ್ರ ಬಿಜೆಪಿಯೇ ಇಂತಹವರನ್ನು ಲೋಡುಗಟ್ಟಲೇ ರೊಕ್ಕ ಕೊಟ್ಟು ಖರೀದಿಸುವ ಇಲ್ಲವೇ ಬೆದರಿಸಿ ಲಪಟಾಯಿಸುವ ಮಟ್ಟವನ್ನು ತಲುಪಿದೆ.

ಹೀಗಾಗಿ, ವಿಶ್ವಾಸಮತದ ಚರ್ಚೆಯಲ್ಲಿ ಶ್ರೀರಾಮುಲು ಮತ್ತು ಸೋಮಶೇಖರರೆಡ್ಡಿ ಇಬ್ಬರೇ ಅಕ್ಕಪಕ್ಕ ಕೂತು ತಮ್ಮ ಪಾಡಿಗೆ ತಾವು ಏನೇನೋ ಮಾತಾಡುತ್ತ ಕೂರಬೇಕಾಯಿತು. 2008ರ ಸಂದರ್ಭವನ್ನು ಒಮ್ಮೆ ಗಮನಿಸಿ: 110 ಸೀಟು ಪಡೆದ ಬಿಜೆಪಿ ಸರಳ ಬಹುಮತದ ಕೊರತೆ ಇದ್ದಾಗಲೂ ಸರ್ಕಾರ ರಚನೆಗೆ ಮುಂದಾಗಿತ್ತು. ಆಗ ಮೋದಿ-ಶಾ ಇನ್ನು ಗುಜರಾತ್ ಲೆವೆಲ್ಲಿನಲ್ಲೇ ಇದ್ದರು.

ಆಗ ರಾಜ್ಯ ಬಿಜೆಪಿ ನಂಬಿದ್ದು ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಎಂಬ ಗಣಿ ಉದ್ಯಮಿಗಳನ್ನು. ಅವರು ಬಹುಮತಕ್ಕೆ ಅಗತ್ಯವಿದ್ದ ಮೂರು ಇರಲಿ ಎಂಟ್ಹತ್ತು ಶಾಸಕರನ್ನೇ ದಂಡಿಯಾಗಿ ಕರೆತಂದು ಒಗೆದು ವಿಶ್ವಾಸಮತ ಗೆಲ್ಲಿಸಿಕೊಂಡಿದ್ದರು. ಅನರ್ಹತೆ ಎಂಬ ಪದಕ್ಕೆ ಅವಕಾಶವನ್ನೇ ನೀಡದಂತೆ, ಅವರಿಂದ ರಾಜಿನಾಮೆ ಕೊಡಿಸಲಾಗಿತ್ತು. ಅವರಿಗೆಲ್ಲ ಸಚಿವಗಿರಿಯ ಜೊತೆಗೆ ಸಾಕಷ್ಟು ಗಣಿ ಮಣ್ಣಿನ ಪಾಪದ ದುಡ್ಡನ್ನು ಕಾಣಿಕೆಯಾಗಿ ನೀಡಲಾಯಿತು. ಮುಂದೆ ಉಪ ಚುನಾವಣೆಯಲ್ಲಿ ಅವರಲ್ಲಿ ಬಹುತೇಕರನ್ನು ಗೆಲ್ಲಿಸುವ ಮೂಲಕ ಬಳ್ಳಾರಿಯ ಗಣಿಗಳ್ಳರು ‘ತಮ್ಮದೇ’ ಸರ್ಕಾರವನ್ನು ಕಾಪಾಡಿಕೊಂಡರು.

ಇಡೀ ಬಳ್ಳಾರಿ ಜಿಲ್ಲೆಯೇ ಆಗ ಅವರ ಸುಪರ್ದಿಗೆ ಒಳಪಟ್ಟಿತ್ತು. ತಮಗೆ ಬೇಕಾದ ಎಸ್‍ಪಿ, ಡಿಸಿ ಮತ್ತು ಅರಣ್ಯಾಧಿಕಾರಿಗಳನ್ನೆಲ್ಲ ಹಾಕಿಸಿಕೊಂಡು ಅಕ್ರಮ ಗಣಿಗಾರಿಕೆಯನ್ನು ಅಧಿಕೃತ ವ್ಯಾಪಾರದ ಮಟ್ಟಕ್ಕೆ ಇಳಿಸಿದ್ದರು. ತಮ್ಮ ಅಕ್ರಮ ಗಣಿಗಳಲ್ಲದೇ ಇತರ ಗಣಿಗಳಿಂದ ಹಫ್ತಾ ವಸೂಲಿಯನ್ನೂ ವ್ಯವಸ್ಥಿತವಾಗಿ ಮಾಡುವ ಮೂಲಕ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದರು. ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ‘ಮಂಗಳ ಗೌರಿ’ ನೆಪದಲ್ಲಿ ಉಡಿ ತುಂಬಿಸುವ ಮೂಲಕ ಒಲಿಸಿಕೊಂಡಿದ್ದ ಈ ಬಳ್ಳಾರಿ ಗ್ಯಾಂಗ್ ಒಂದು ಹಂತದಲ್ಲಿ ಯಡಿಯೂರಪ್ಪನವರ ವಿರುದ್ಧವೇ ತಿರುಗಿಬಿದ್ದು ಸರ್ಕಾರ ಬೀಳಿಸುವ ಧಮಕಿ ಹಾಕಿತ್ತು.

ವಿಧಾನಸಭಾ ಅಧಿವೇಶನದಲ್ಲೇ ಜನಾರ್ದನರೆಡ್ಡಿ ಸಿದ್ದರಾಮಯ್ಯ ಅವರಿಗೆ ‘ಬಳ್ಳಾರಿಗೆ ಬನ್ನಿ, ನಿಮ್ಮನ್ನೆಲ್ಲ ನೋಡಿಕೊಳ್ತೇವೆ’ ಎನ್ನುವ ಮಟ್ಟಕ್ಕೆ ಹೋದರೆ, ರೆಡ್ಡಿಯ ಚೇಲಾ ಶಾಸಕ ಸುರೇಶ ಬಾಬು ತೋಳೇರಿಸಿ ವಿಪಕ್ಷದವರ ಮೇಲೆ ದಾದಾಗಿರಿ ನಡೆಸಲೂ ಯತ್ನಿಸಿದ್ದರು.
ಸಂತೋಷ್ ಹೆಗ್ಡೆ ವರದಿ ನಂತರ ಕೋರ್ಟುಗಳು ಕೂಡ ತೀಕ್ಷ್ಣ ಆದೇಶಗಳನ್ನು ಕೊಡತೊಡಗಿದವು. ಇತ್ತ ಭೂ ಹಗರಣದಲ್ಲಿ ಸಿಕ್ಕ ಯಡಿಯೂರಪ್ಪ ಜೈಲು ಪಾಲಾದರು. ಅಲ್ಲಿಗೆ ಬಳ್ಳಾರಿ ಗ್ಯಾಂಗಿನ ಒಂದು ಹಂತದ ಆಟ ಮುಗಿದಿತ್ತು. ಮುಂದೆ ಯಡಿಯೂರಪ್ಪ ಒಂದು ಪಾರ್ಟಿ ಕಟ್ಟಿದರೆ, ಬಳ್ಳಾರಿ ಗ್ಯಾಂಗ್ ಇನ್ನೊಂದು ಪಾರ್ಟಿ ಕಟ್ಟಿತು. ಎರಡೂ ಮಕಾಡೆ ಮಲಗಿದವು.

ಜೈಲಲ್ಲಿ ವರ್ಷಗಳನ್ನು ಸವೆಸಿದ ರೆಡ್ಡಿಯನ್ನು ರಾಷ್ಟ್ರೀಯ ಬಿಜೆಪಿ ದೂರವಿಡತೊಡಗಿತು. ಕೇವಲ 10 ವರ್ಷಗಳಲ್ಲಿ ಎಂತಹ ಬದಲಾವಣೆ? ಅಂದು ಸರ್ಕಾರವನ್ನೇ ರಚಿಸಿದ್ದ ಬಳ್ಳಾರಿ ಗ್ಯಾಂಗ್ ಬಿಜೆಪಿ ಪಾಲಿಗೆ ಹೀರೋ ಆಗಿತ್ತು, ಈಗದು ಝೀರೋ, ಬಿಗ್ ಝೀರೋ!

ಫಾರೆಸ್ಟ್ ಅಧಿಕಾರಿಗೆ ಸಜೆ!
ಆದರೆ ರೆಡ್ಡಿಗಳ ಆಟಾಟೋಪ ಮತ್ತೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ಕಾಡಲು ಕಾರಣವಾಗಿದ್ದು, ಮೊಟ್ಟ ಮೊದಲ ಬಾರಿಗೆ ಜನಾರ್ದನರೆಡ್ಡಿಯ ಅಕ್ರಮ ಗಣಿಗಾರಿಕೆಯ ಮೇಲೆ ಮುಗಿಬಿದ್ದಿದ್ದ ಫಾರೆಸ್ಟ್ ಆಫೀಸರ್ ಒಬ್ಬರನ್ನು ಕೇಂದ್ರ ಸರ್ಕಾರ ಈ ವಾರ ಕಾಯಂ ನಿವೃತ್ತಿಗೊಳಿಸಿದ ವಿಷಯ. ಕಲ್ಲೋಳ್ ಬಿಸ್ವಾಸ್ ಎಂಬ ಈ ಅಧಿಕಾರಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದುದರ ಹಿಂದೆ ಯಡಿಯೂರಪ್ಪ ಪಾತ್ರವಿದೆಯಾ ಅಥವಾ ಜಗನ್‍ರೆಡ್ಡಿಯ ಪಾತ್ರವಿದೆಯಾ ಎಂಬುದು ಸದ್ಯಕ್ಕೆ ಅಸ್ಪಷ್ಟ…..

ಹಳೆಯ ಸೇಡನ್ನು ತೀರಿಸಿಕೊಂಡಿರುವುದರ ಹೊರತಾಗಿ, ಇದರಿಂದ ರೆಡ್ಡಿ ರಾಮುಲು ಬಳಗಕ್ಕಂತೂ ವಿಶೇಷ ಅನುಕೂಲಗಳೇನೂ ದಕ್ಕುವಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಕೋಟೆ ಕಟ್ಟಿ ಮೆರೆದ ಗಣಿಗಳ್ಳರು ಈಗ ಬಿಜೆಪಿಗೇ ಬೇಡವಾಗಿದ್ದಾರೆ! ಆದರು ಶ್ರೀರಾಮುಲು ಡಿಸಿಎಂ ಕನಸು ಬಿಟ್ಟಿಲ್ಲ. ಜಾತಿಬಲ ಮಾತ್ರವೇ ಅವರಿಗೆ ಈಗ ಆಶಾಕಿರಣವಾಗಿದೆ. ದೆಹಲಿಯಲ್ಲಿ ಅಮಿತ್ ಶಾ ಸಂಪುಟ ವಿಸ್ತರಣೆಗೆ ಅವಕಾಶ ಕೊಡುದಿರುವುದು ನೋಡಿದರೆ ಪಕ್ಕಾ ಆರ್.ಎಸ್.ಎಸ್ ನವರಿಗೆ ಮಾತ್ರ ಮಂತ್ರಿ ಭಾಗ್ಯ ಎಂಬ ಸುಳಿವು ಸಿಗುತ್ತಿವೆ. ಅಂದರೆ ಅದಿರಿನ ದಂಧೆಯ ಕುಸಿತದೊಂದಿಗೆ ಬಳ್ಳಾರಿಯ ಗ್ಯಾಂಗೂ ಮಣ್ಣು ಪಾಲಾಯಿತೇ ಎಂಬ ಪ್ರಶ್ನೆ ಬರುತ್ತಿದೆ. ಏನಾದರೂ ಆಗಲಿ ಇಂದರಿಂದ ಜನರಿಗೆ ಮಾತ್ರ ಏನೂ ಪ್ರಯೋಜನವಿಲ್ಲವೆಂಬುದು ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...