Homeಮುಖಪುಟಆನಂದ್ ತೇಲ್ತುಂಬ್ಡೆ ಜಾಮೀನು ತೆರೆದಿಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವುದೆಲ್ಲಿ?

ಆನಂದ್ ತೇಲ್ತುಂಬ್ಡೆ ಜಾಮೀನು ತೆರೆದಿಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವುದೆಲ್ಲಿ?

- Advertisement -
- Advertisement -

ಆನಂದ್ ತೇಲ್ತುಂಬ್ಡೆ ಪ್ರಖರ ಚಿಂತಕ, ಬರಹಗಾರ, ರಾಜಕೀಯ ವಿಶ್ಲೇಷಕ ಹಾಗೂ ಹೋರಾಟಗಾರ. ಕೇವಲ ಜನಪರ ಚಿಂತನೆಗಳೆಷ್ಟೇ ಅಲ್ಲದೆ, ಅವರ ವೃತ್ತಿಪರ ತಂತ್ರಜ್ಞಾನ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲೂ ಮೇಧಾವಿ. ಸ್ವತಂತ್ರ ಭಾರತದ 75 ವರ್ಷಗಳು ಇತಿಹಾಸದಲ್ಲಿ 72 ವಸಂತಗಳನ್ನು ಕಂಡ ಹಿರಿಯ ಜೀವ; ತಮ್ಮ ಘನ ವ್ಯಕ್ತಿತ್ವವನ್ನು ರೂಪಿಸಿದ ಚಿಂತನೆ ಮತ್ತು ವಿಚಾರಗಳೇ ತಪ್ಪು ಎಂದು ಬಿಂಬಿತವಾಗುವ ಕಾಲವೊಂದು ಬರಬಹುದು ಎಂದುಕೊಂಡಿದ್ದರೋ, ಇಲ್ಲವೋ ಗೊತ್ತಿಲ್ಲ.

ಅವರಷ್ಟೇ ಅಲ್ಲದೆ ಅವರಂತಹ ಅನೇಕ ಹೋರಾಟಗಾರರ ಸದ್ಯದ ಬವಣೆಗೆ ಸಾಕ್ಷಿಯಾಗಿರುವವರಿಗೆ ಇದು ಅತ್ಯಂತ ಚಿಂತನೆಗೆ ಈಡು ಮಾಡುವ ಕಾಲ.

ಭೀಮಾ ಕೋರೆಗಾಂವ್ ಘಟನೆ

2018ರಲ್ಲಿ ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ಭೀಮಾ ಕೋರೆಗಾಂವ್ ಸಂಗ್ರಾಮದಲ್ಲಿ ದಲಿತರ ಗೆಲುವಿನ 200ನೇ ವರ್ಷದ ಸಂಭ್ರಮಾಚರಣೆಗೆ ಅನೇಕ ಬಗೆಯ ತಯಾರಿಗಳು ನಡೆದಿದ್ದವು. 1818ರಲ್ಲಿ ಮಹಾರ್ ಸಮುದಾಯದ ಜನರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಜೊತೆ ಸೇರಿ, ಜಾತಿ ವ್ಯವಸ್ಥೆಯಲ್ಲಿ ಪ್ರಬಲವಾಗಿದ್ದ ಮತ್ತು ಸಂಖ್ಯೆಯಲ್ಲಿ ದೊಡ್ಡದಾಗಿದ್ದ ಪೇಶ್ವೆಗಳ ಸೇನೆಯನ್ನು ಸೋಲಿಸಿದ್ದರು; ಅದರ ನೆನಪಿನಲ್ಲಿ ಸ್ಮಾರಕವನ್ನು ಸ್ಥಾಪಿಸಿ ಪ್ರತಿವರ್ಷ ಆ ಗೆಲುವನ್ನು ನೆನಪಿಸಿಕೊಳ್ಳುತ್ತಾ ಬಂದಿದ್ದು ಇತಿಹಾಸ. ಈ ಗೆಲವು ಕೇವಲ ಒಂದು ಯುದ್ಧದ ಗೆಲುವಲ್ಲ. ಮಹಾರರ ಸ್ವಾಭಿಮಾನ ಮತ್ತು ಶತಮಾನಗಳ ದಮನ-ದೌರ್ಜನ್ಯದ ವಿರುದ್ಧ ದಲಿತರಿಗೆ ದೊರೆತ ನೈತಿಕ ಗೆಲುವಾಗಿತ್ತು. ಈ ಗೆಲುವಿನ ಸಂಭ್ರಮಾಚರಣೆಗೆ ಸ್ವತಃ ಬಾಬಾಸಾಹೇಬ ಅಂಬೇಡ್ಕರರೂ ಸ್ಥಾಯಿ ಮುದ್ರೆ ಒತ್ತಿ ಅದನ್ನು ಸಾಂಕೇತಿಕವಾದ ಜಾತಿವಿನಾಶದ ದ್ಯೋತಕವಾಗಿ ಗುರುತಿಸಿದ್ದರು. ಆದರೆ ಇಂದಿನ ಸಮಯದಲ್ಲಿ ಇತಿಹಾಸವನ್ನೇ ಮರುಚಿತ್ರಿಸುವ ಪ್ರಯತ್ನ ಮಾಡುತ್ತಿರುವವರಿಗೆ ಇಂತಹ ಒಂದು ಸಂಭ್ರಮಾಚರಣೆ ಬೆದರಿಸಿರುವ ಸಾಧ್ಯತೆಗಳೇ ಹೆಚ್ಚು. ಹಿಂದೂ, ಹಿಂದುತ್ವ ಎನ್ನುವ ಮಂಕುಬೂಧಿ ಎರಚಿ ಜನರನ್ನು ಮರಳು ಮಾಡುತ್ತಿರುವ ಸಂಘ ಪರಿವಾರದವರು, ಪೇಶ್ವೆಗಳ ಸೋಲನ್ನು ಇತಿಹಾಸದಿಂದ ಮರೆಮಾಚುವ ಪ್ರಯತ್ನ ಮಾಡುವುದು ಸಹಜ. ಈ ಹಿನ್ನೆಲೆಯಲ್ಲಿಯೇ ನಡೆದದ್ದು ಭೀಮಾ ಕೋರೆಗಾಂವ್ ಹಿಂಸಾಚಾರ. ಹಿಂದುತ್ವವಾದಿಗಳು ಎಬ್ಬಿಸಿದ ಗಲಭೆಯನ್ನು ಬೇಕೆಂತಲೇ ಮರೆಮಾಚಿ, ’ಎಲ್ಗಾರ್ ಪರಿಷತ್’ ಅಡಿಯಲ್ಲಿ ನಡೆದ ಈ 200ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಂದಾಗಿ ಹಿಂಸಾಚಾರ ಭುಗಿಲೆದ್ದಿತು ಎಂದು ಸುಳ್ಳುಸುಳ್ಳೇ ದೂರು ದಾಖಲಿಸಿ ಆ ದೂರಿನ ಆಧಾರದ ಮೇಲೆ ಸುಮಾರು 16 ಜನ ಪ್ರಖ್ಯಾತ ಹೋರಾಟಗಾರರು, ಚಿಂತಕರು, ಬರಹಗಾರರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿ ಜೈಲಿಗೆ ಹಾಕಲಾಯಿತು. ಅದರಲ್ಲಿ ಆನಂದ್ ತೇಲ್ತುಂಬ್ಡೆ ಒಬ್ಬರು. ಅವರನ್ನು ಅಂಬೇಡ್ಕರ್ ಅವರ ಜನ್ಮದಿನದಂದೇ ಬಂಧಿಸಿದ್ದು ಈ ದೇಶದ ಪ್ರಾಜ್ಞರಿಗೆ ಅಘಾತವನ್ನುಂಟುಮಾಡಿತ್ತು.

ಕಾನೂನಿನ ತೊಡಕು

ಯುಎಪಿಎ ಕಾಯ್ದೆ (ಅನ್‌ಲಾಫುಲ್ ಆಕ್ಟಿವಿಟೀಸ್ [ಪ್ರಿವೆನ್ಷನ್] ಆಕ್ಟ್), ಅಂದರೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಬಂಧಿತರಾದವರಿಗೆ ಜಾಮೀನಿನ ಅವಕಾಶಗಳು ಅತ್ಯಂತ ಕಠಿಣವಾಗಿವೆ.

ಕಾಯ್ದೆಯನ್ನು ವಿವರಿಸುವಾಗ ಸುಪ್ರೀಂಕೋರ್ಟ್ ಇತರ ಕೋರ್ಟ್‌ಗಳಿಗೆ ನಿರ್ದೇಶನ ನೀಡುತ್ತ ’ಜಾಮೀನು ನೀಡುವ ಸಮಯದಲ್ಲಿ ಅರ್ಜಿಯಲ್ಲಿ ಹೇಳಲಾದ ಅಂಶಗಳ ಹೊರತಾಗಿ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ಕೇವಲ ವಿಶಾಲವಾದ ಒಂದು ಅಂದಾಜು ಅಥವಾ ಅನಿಸಿಕೆಗಳ ಆಧಾರದ ಮೇಲೆ ಮಾತ್ರ ಜಾಮೀನು ಅರ್ಜಿ ತೀರ್ಮಾನ ಮಾಡಬೇಕು’ ಎಂದು ಹೇಳಿದೆ. ಹಾಗೆಂದರೆ ಪ್ರಾಸಿಕ್ಯೂಷನ್ ಪ್ರಸ್ತುತಪಡಿಸುವ ಕೇಸಿಗೆ ಹೆಚ್ಚಿನ ಮಹತ್ವವಿದೆ ಎಂಬುದು ಮುಖ್ಯ ಅಂಶ. ಹೀಗಿರುವಾಗ ಆನಂದ್ ತೇಲ್ತುಂಬ್ಡೆ ಮತ್ತು ಅವರಂತೆ ಯುಎಪಿಎ ಕಾಯ್ದೆಯ ಕಠಿಣ ಸಂಕೋಲೆಯಲ್ಲಿ ಸಿಕ್ಕಿಕೊಂಡ ಇತರರ ಕೇಸು ಎಷ್ಟೇ ಹಾಸ್ಯಾಸ್ಪದವಾಗಿದ್ದರೂ, ಅವರೆಲ್ಲಾ ಅದರ ಕಷ್ಟವನ್ನು ಅನುಭವಿಸಬೇಕು. ವರವರರಾವ್ ಅವರು ಆರೋಗ್ಯದ ಹಿನ್ನೆಲೆಯಲ್ಲಿ ಮತ್ತು ಸುಧಾ ಭಾರದ್ವಾಜ್ ಅವರು ಚಾರ್ಜ್‌ಶೀಟ್ ಸಲ್ಲಿಕೆಯ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಹೊರಗೆ ಬಂದರು. ಆದರೆ ಸ್ಟ್ಯಾನ್‌ಸ್ವಾಮಿ ಅವರಿಗೆ ಆ ಅದೃಷ್ಟ ದೊರಕಲಿಲ್ಲ. ಅವರು ಬಂಧನದಲ್ಲೇ ಮೃತಪಟ್ಟರು. ಕೇವಲ ಮೇಲ್ನೋಟಕ್ಕೆ ಕಾಣುವ ಅಂಶಗಳ ಆಧಾರದಲ್ಲಿ ಬಂಧಿಸಲು ಶುರು ಮಾಡಿದರೆ ಮತ್ತು ಅದಕ್ಕೆ ಕಾರ್ಯಾಂಗದ ಸಮ್ಮತಿ ಹಾಗೂ ಕಾನೂನು ಚೌಕಟ್ಟಿನ ಸಹಾಯ ದೊರಕಿದಾಗ ಎನಾಗಬಹುದು ಎಂದು ಇತಿಹಾಸದುದ್ದಕ್ಕೂ ನೋಡಿದ್ದೇವೆ. ವರ್ತಮಾದಲ್ಲೂ ನೋಡುತ್ತಿದ್ದೇವೆ. ಆರೋಪದಲ್ಲಿ ಹುರುಳಿದೆ ಅಥವಾ ಇಲ್ಲ ಎಂಬುದು ಮುಖ್ಯ ವಿಷಯವೇ ಅಲ್ಲ.

ಇದನ್ನೂ ಓದಿ: NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು…

ಮುಂಬೈ ಹೈಕೋರ್ಟ್ ತೇಲ್ತುಂಬ್ಡೆ ಅವರಿಗೆ ಜಾಮೀನು ನೀಡುವಾಗ ಸಾಕ್ಷಿಗಳನ್ನು ಪರಿಶೀಲಿಸುತ್ತ ಅವಕ್ಕೂ ತೇಲ್ತುಂಬ್ಡೆ ಅವರಿಗೂ ಯಾವುದೇ ಸಂಬಂಧಗಳಿಲ್ಲ ಅಥವಾ ಸಾಬೀತಾಗುವುದಿಲ್ಲ ಎಂದು ಹೇಳಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿ ಬಂಧನದಲ್ಲಿರುವ ರೋನಾ ವಿಲ್ಸನ್ ಅವರ ಕಂಪ್ಯೂಟರ್‌ನಲ್ಲಿ ಸಿಕ್ಕಿರುವ ಈಮೇಲ್‌ಗಳನ್ನು ಪುಣೆಯ ಪೋಲಿಸರು ಹ್ಯಾಕ್ ಮಾಡಿ ಸೇರಿಸಿದ್ದು ಎಂದು ವಿಧಿವಿಜ್ಞಾನ ಪ್ರಯೊಗಾಲಯಗಳು ಹೇಳುತ್ತವೆ. ಅಂದರೆ ವ್ಯವಸ್ಥೆಯು ಕೈಯಲ್ಲಿದ್ದರೆ ಯಾರ ಮೇಲಾದರೂ ಹೇಗಾದರೂ ಆರೋಪಗಳನ್ನು ಹೊರಿಸಿ ಅದನ್ನು ಸಾಬೀತು ಮಾಡಬಹುದಾ? ಎಂಬ ಪ್ರಶ್ನೆ ಮೂಡುವುದು ಸಹಜ. ಆರೋಪಗಳು ಅಷ್ಟೊಂದು ಗಂಭೀರವಾಗಿದ್ದರೆ ಆರೋಪ ಪಟ್ಟಿ ಸಲ್ಲಿಸಲು ಇಷ್ಟು ಸಮಯ ಬೇಕಾ ಎಂಬುದು ಕೂಡ ಸರಿಯಾದ ಪ್ರಶ್ನೆ. ಆದರೆ ಈ ಪ್ರಶ್ನೆಗಳನ್ನು ಯಾರು ಕೇಳಬೇಕು. ಕೇಳುವವರ ಮೇಲೆ ಯುಎಪಿಎ ಕಾಯ್ದೆಯ ಪ್ರಯೋಗ ಆಗುವುದಿಲ್ಲ ಎಂಬ ಖಾತರಿ ಇದೆಯಾ?

ಕಾರ್ಯಾಂಗ ಮತ್ತು ನ್ಯಾಯಾಂಗದ ಮಧ್ಯೆ ಶೀತಲ ಸಮರಗಳು ನಡೆದಾಗ ಅಥವಾ ಅವುಗಳ ಮಧ್ಯೆ ಅಪವಿತ್ರ ಮೈತ್ರಿ ಏರ್ಪಟ್ಟಾಗ ಅಲ್ಲಿ ಸೊರಗುವುದು ನ್ಯಾಯದಾನ ವ್ಯವಸ್ಥೆ ಮತ್ತು ಅಮಾಯಕ ನಾಗರಿಕರು. ಮೇಲ್ನೋಟಕ್ಕೆ ಕಾಣುವ ಅಂಶಗಳನ್ನಷ್ಟೇ ಜಾಮೀನು ಸಮಯದಲ್ಲಿ ಪರಿಗಣಿಸಿ ಎಂದು ಹೇಳಿದಾಗ ಪರೋಕ್ಷವಾಗಿ ಜಾಮೀನು ಕೊಡಬೇಡಿ ಎಂದೇ ಹೇಳಿದಂತಲ್ಲವೇ?

ಎನ್‌ಐಎ ಎಷ್ಟರಮಟ್ಟಿಗೆ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ? ನಿಷೇಧಿತ ಮಾವೋ ಸಂಘಟನೆಯ ಜೊತೆ ಸಂಬಂಧ ಇದೆ ಎಂದು ಅದು ಹೇಳಿದರೆ ಇಲ್ಲ ಎಂದು ಸಾಬೀತು ಮಾಡುವುದು ಹೇಗೆ? ಪ್ರಚೋದನಕಾರಿ ಭಾಷಣದಿಂದ ಗಲಭೆ ಆಯಿತು ಎನ್ನುವುದಾದರೆ ದೆಹಲಿಯಲ್ಲಿ ನಡೆದ ಗಲಭೆಗಳ ಸಮಯದಲ್ಲಿ ಕೇಂದ್ರದ ಮಂತ್ರಿ “ಗೋಲಿಮಾರೋ ಸಾಲೋಂಕೋ” ಎಂದಾಗ ಎನ್‌ಐಎ ಎಲ್ಲಿತ್ತು? ನಮ್ಮ ಮಾನ್ಯ ಪ್ರಧಾನಮಂತ್ರಿಗಳ ’ಅರ್ಬನ್ ನಕ್ಸಲ್’ ಎಂದು ಕೆಲವು ಜನರನ್ನು ಕರೆಯುವಾಗ, ಹಾಗೆಂದರೆ ಯಾರ್‍ಯಾರು ಹೇಳಿ ಎಂದು ಪ್ರಶ್ನಿಸುವವರು ಯಾರು? ಅವರೇ ಮಾತನಾಡುತ್ತ, “ಜನ ಹಾಕಿಕೊಂಡ ಬಟ್ಟೆಯಿಂದಲೇ ಅವರನ್ನು ಗುರುತಿಸಬಹುದು” ಎಂದಾಗ ಒಂದು ಇಡೀ ಸಮೂಹವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅವರ ನಡೆಯನ್ನು ಟೀಕಿಸುವವರು ಯಾರು? ಈ ಎಲ್ಲ ಪ್ರಶ್ನೆಗಳನ್ನು ಕೇಳುವವರ ಮೇಲೆ ಯುಎಪಿಎ ತೂಗುಗತ್ತಿ ಇರುವುದಿಲ್ಲವಾ?

ಇತ್ತೀಚೆಗೆ ನ್ಯಾಯಾಂಗದ ಕೆಲಸದಲ್ಲಿ ಕಾರ್ಯಾಂಗದ ಹಸ್ತಕ್ಷೇಪದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಕಾನೂನು ಮಂತ್ರಿಗಳು ಕೊಲಿಜಿಯಂ ಬಗ್ಗೆ ನೀಡಿದ ಹೇಳಿಕೆ ಇರಬಹುದು ಅಥವಾ ಜಡ್ಜ್‌ಗಳ ಆಯ್ಕೆ ಪಟ್ಟಿಯನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸಿದ ವಿಚಾರ ಇರಬಹುದು; ಇಂಥ ಬೆಳವಣಿಗೆಗಳು ನ್ಯಾಯದಾನ ವ್ಯವಸ್ಥೆಯ ಮೇಲೆ ಜನರ ವಿಶ್ವಾಸವನ್ನು ಕಡಿಮೆ ಮಾಡುತ್ತವೆ.

ಆದರೆ ಈ ಎಲ್ಲ ನಿರಾಶಾದಾಯಕ ಬೆಳವಣಿಗೆಗಳ ನಡುವೆಯೂ ಒಳ್ಳೆಯ ಬೆಳವಣಿಗೆಯಂತೆ ಆನಂದ್ ತೇಲ್ತುಂಬ್ಡೆ ಅವರ ಜಾಮೀನು ತೀರ್ಪು ಭರವಸೆಯಾಗಿ ಕಾಣಿಸುತ್ತದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೆಚ್ಚಿನ ವಿವರಣೆಯನ್ನು ನೀಡದೆ “ಎಸ್‌ಎಲ್‌ಪಿ ತಿರಸ್ಕೃತವಾಗಿದೆ” ಎಂಬ ಒಂದೇ ವಾಕ್ಯದಲ್ಲಿ ಎನ್‌ಐಎ ಸಲ್ಲಿಸಿದ್ದ ಜಾಮೀನು ವಿರೋಧಿ ಅರ್ಜಿಯನ್ನು ತಿರಸ್ಕರಿಸಿದ್ದು ಉತ್ತಮ ಬೆಳವಣಿಗೆ. ಇದು ಉಳಿದ ಭೀಮಾ ಕೋರೇಗಾಂವ್ ಆರೋಪಿಗಳಿಗೂ ಅನ್ವಯವಾಗಲಿ ಎಂಬುದು ಈ ದೇಶದ ಲಕ್ಷಾಂತರ ನಾಗರಿಕರ ಆಶಯವಾಗಿದೆ.

ಅಂಬೇಡ್ಕರ್ ಅವರ ಮೊಮ್ಮಗಳ ಪತಿ ಅಂಬೇಡ್ಕರ್ ಜಯಂತಿಯಂದೇ ಜೈಲಿಗೆ ಹೋದದ್ದು ವಿಪರ್ಯಾಸವಾದರೆ ಸಂವಿಧಾನ ದಿನದಂದೇ ಅವರಿಗೆ ಜಾಮೀನು ದೊರತಿದ್ದು ಒಂದು ಬೆಳಕಿನ ಕಿರಣದಂತೆ ಗೋಚರವಾಗುತ್ತದೆ. ನ್ಯಾಯಾಲಯಗಳು ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿದಂತೆ ಸಂವಿಧಾನದ ಆಶಯಗಳನ್ನು ಈಡೇರಿಸುವುದು ಸುಲಭ. ಆನಂದ ತೇಲ್ತುಂಬ್ಡೆ ಅವರ ತೀರ್ಪು, ಸುಳ್ಳು ಕೇಸುಗಳಿಗೆ ಸಿಕ್ಕಿ ಜೈಲಿನಲ್ಲಿ ಇನ್ನೂ ಯುಎಪಿಎ ಕ್ರೂರ ಕಾನೂನಿನಡಿ ಸಿಲುಕಿ ನಲುಗುವವರಿಗೆ ಒಂದು ಮಾರ್ಗದರ್ಶನವಾಗಬಹುದು ಎಂಬುದೇ ಆಶಾವಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನ್ಯಾಯಾಂಗದ ಮೇಲೆ ಹೆಚ್ಚಿನ ನಾಗರೀಕರಿಗೆ ವಿಶ್ವಾಸ ಇದೆಯೆಂದು ನಂಬಲಾಗದು. ಅದಕ್ಕೆ ಕಾರಣ ಪ್ರಭುತ್ವದ ಪರವಾಗಿ ಸಂವಿಧಾನ ವಿರೋಧಿ ತೀರ್ಪು ಕೊಟ್ಟು ವೈಯುಕ್ತಿಕ ಲಾಭ ಗಳಿಸಿಕೊಂಡ ಭ್ರಷ್ಟ ನ್ಯಾಯಾಧೀಶರು.ಕಳಕೊಂಡದ್ದನ್ನು ಮರುಗಳಿಸಲು ಇಂತಹ ತೀರ್ಪಗಳು ಅವಶ್ಯಕ. ಭೀಮಾ-ಕೋರೇಕಾಂವ್ ಪ್ರಕರಣದಡಿ ಜೈಲಲ್ಲಿರುವ ಇತರರಿಗೂ ಮತ್ತು ಸುಳ್ಳು ಪ್ರಕರಣದಡಿ ಜೈಲಲ್ಲಿರುವ ಸಂಜೀವ್ ಭಟ್ ಅವರಿಗೂ ಕೂಡಲೇ ಜಾಮೀನು ಸಿಗಬೇಕು. ಆಪ್, ಕಾಂಗ್ರೆಸ್, ಟಿಎಮ್ಸಿ ಮತ್ತಿತರ ರಾಜಕೀಯ ಪಕ್ಷಗಳು ಮೌನವಾಗಿರುವುದು ಏನನ್ನು ಸೂಚಿಸುತ್ತದೆ!?

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...