Homeಸಾಹಿತ್ಯ-ಸಂಸ್ಕೃತಿಕವನಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

ಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

- Advertisement -
- Advertisement -

(“ಇತ್ತೀಚೆಗೆ ಭಾಷಾಧಿಪತ್ಯದ ಧೊರಣೆಯ ಬಗ್ಗೆ ರಹೀಂ ಪೊನ್ನಾಡ್ ಬರೆದ ಮಲೆಯಾಳಂ ಕವನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಂದ ಹಿಂದೀ ಅನುವಾದವನ್ನು ನೋಡಿ ತೆಲುಗಿಗೆ ಅನುವಾದ ಮಾಡದೇ ಇರಲು ಸಾಧ್ಯವಾಗಲಿಲ್ಲ” ಎಂದು ಕವನವನ್ನು ತೆಲುಗಿಗೆ ಅನುವಾದ ಮಾಡಿದ ಮುಖಪುಟದ ಗೆಳೆಯ ಎನ್. ವೇಣುಗೋಪಾಲ್ ಬರೆದುಕೊಂಡಿದ್ದಾರೆ. ನನ್ನ ಸ್ಥಿತಿಯು ಸಹಾ ಅಂಥದ್ದೇ ಆಗಿರುವುದರಿಂದ ಕನ್ನಡಾನುವಾದ ನಮ್ಮೆಲ್ಲರಿಗಾಗಿ…)

ಒಂದು ದಿನ ಅರ್ಧ ರಾತ್ರಿ
ಆತ ಭಾಷೆಯ ಮೇಲೆ ನಿಷೇಧವೇರಿದ
‘ಇಂದಿನಿಂದ ಎಲ್ಲರದ್ದೂ ಒಂದೇ ಭಾಷೆ”
ಹಳೇ ಭಾಷಾ ಪದಗಳು ನಿಮ್ಮಲ್ಲಿದ್ದರೆ
ಅಂಚೆ ಕಚೇರಿಯಲ್ಲಿ ಬದಲಾಯಿಸಿ ಕೊಳ್ಳಬಹುದು’
ಎಂಬ ಗಂಭೀರ ಪ್ರಕಟಣೆ ಹೊರಡಿತು

ಅರ್ಧ ನಿದ್ರೆಯಲ್ಲಿದ್ದ ಜನರು
ಬೆಚ್ಚಿಬಿದ್ದು
ಓಟ ಶುರುಮಾಡಿದರು
ಪ್ರತಿಯೊಂದು ಜಾಗದಲ್ಲೂ ನಿಶ್ಶಬ್ಧ
ತಾಯಂದಿರು ಮಕ್ಕಳ ಬಾಯನ್ನು ಕೈಗಳಿಂದ ಮುಚ್ಚಿದ್ದಾರೆ
ಮುದುಕರ ಮುಖಗಳನ್ನು ಬಟ್ಟೆಯಿಂದ ಮರೆಮಾಚಿದ್ದಾರೆ
ದೇವಾಲಯಗಳಲ್ಲಿ ಹಾಡುಗಳು ನಿಂತುಹೋಗಿವೆ
ಮಸೀದಿಯಲ್ಲಿ ಅಜಾನ್ ಸಹಾ ಕೇಳಿಸುತ್ತಿಲ್ಲ
ರೇಡಿಯೋದಲ್ಲಿ ವೀಣಾ ವಾದನೆ ಬಿಟ್ಟರೆ ಮತ್ತೇನೂ ಕೇಳಿಸುತ್ತಿಲ್ಲ
ಟೀವಿ ಪರದೆಯ ಮೇಲೆ ಸನ್ನೆಯ ಭಾಷೆಯಲ್ಲೇ ವಾರ್ತೆಗಳು ಬರುತ್ತಿವೆ
ಪತ್ರಿಕೆಗಳ ಹೆಸರಲ್ಲಿ
ಸಂತೆಗೆ ಬಂದಿರುವುದು ಎಂಟು ಕಾಲಂಗಳು ಖಾಲಿ ಇರುವ ಬಿಳಿ ಕಾಗದಗಳು
ಎಲ್ಲಾ ಕೀಬೋರ್ಡ್‍ಗಳು ಮೌನತಾಳಿವೆ
ಮೊಬೈಲ್ ಸ್ಕ್ರೀನ್‍ಗಳ ಮೇಲೆ
ಗೊಂಬೆಗಳು ಮಾತ್ರ ಉಳಿದಿವೆ

ಅಂಚೆ ಕಚೇರಿಯ ಮುಂದೆ ನಿಶ್ಶಬ್ದವಾಗಿ ನಿಂತ ಉದ್ದನೆಯ ಕ್ಯೂ
ದಿನಕ್ಕೆರಡು ಪದಗಳನ್ನು ಮಾತ್ರ ಬದಲಾಯಿಸಿಕೊಳ್ಳಲು
ಅನುಮೋದನೆ ನೀಡಲಾಗಿದೆ
ಆದರೆ ಕೆಲವರು ಚೀಲಗಳ ತುಂಬಾ ಶಬ್ದಗಳನ್ನು ತುಂಬಿಕೊಂಡು ಬಂದಿದ್ದಾರೆ
ಟಿಫಿನ್ ಬಾಕ್ಸ್‌ಗಳಲ್ಲಿ ಬ್ಯಾಗುಗಳಲ್ಲಿ ಮಾತುಗಳನ್ನು
ತುಂಬಿಕೊಂಡು ಬಂದ ಪುಟಾಣಿ ಮಕ್ಕಳು ಕೂಡಾ ಕ್ಯೂನಲ್ಲಿ ನಿಂತಿದ್ದಾರೆ

‘ಅಮ್ಮ’ ಎಂಬ ಮಾತು ಕೊಟ್ಟವರಿಗೆ
‘ಮಾ’ ಎಂಬ ಮಾತು ಸಿಕ್ಕಿದೆ
‘ಅಪ್ಪ’ ಎಂಬ ಮಾತಿಗೆ
‘ಬಾಪ್‘ ಎಂಬ ಮಾತು ಸಿಕ್ಕಿತು
ಚಾಕೊಲೇಟ್, ಗೇಮ್ ಎಂಬ ಪದಗಳನ್ನು ಬದಲಾಯಿಸಿಕೊಳ್ಳಲು ಬಂದ ಮಕ್ಕಳನ್ನು
ಕೌಂಟರ್‌ನಿಂದ ಕಳುಹಿಸೇಬಿಟ್ಟರು
ಇಲ್ಲಿ ಭಾಷೆಯನ್ನು ಮಾತ್ರ ಬದಲಾಯಿಸಿಕೊಳ್ಳಬಹುದು ಎಂದರು

ಬದಲಾಯಿಸಲು ಶಬ್ಧಗಳಿಲ್ಲ ಎಂಬ ಕಾರಣಕ್ಕಾಗಿ
‘ಅಸಂತೃಪ್ತಿ’ ಎಂಬ ಪದವನ್ನು
‘ಹೆಣದ ವಸ್ತ್ರ’ ಎಂಬ ಪದವನ್ನು ಹಿಂದಕ್ಕೆ ಕಳುಹಿಸಿದರು

‘ಚೂರಿ’ ಪದವನ್ನು ಬದಲಾಯಿಸಲು ಬಂದವರನ್ನು ಓಡಿಸಿಬಿಟ್ಟರು
‘ಮದ್ದುಗುಂಡು’ ಎಂಬ ಪದ ಬದಲಾಯಿಸಿ ಎಂದರೆ
ಪೊಲೀಸರು ಸೆರೆ ಹಿಡಿದರು
ಕ್ಯೂನಲ್ಲಿ ನಿಂತು ನಿಂತು ಸುಸ್ತಾದ ಮುದುಕರು
ಕುಡಿಯಲು ನೀರು ಕೇಳಿದರೆ
ತುಪಾಕಿ ತೋಟಾಗಳಿಂದ ಬಾಯಿ ಮುಚ್ಚಿಸಿದರು

ಇದೆಲ್ಲವನ್ನೂ ನೋಡಿ ನೋಡಿ
ಸಾಕಾಗಿ ಮನೆಗೆ ಬಂದರೆ
ಮನೆ ಅಂಗಳದಲ್ಲಿ ಮಾತುಗಳ ರಾಶಿ ಬಿದ್ದಿದೆ
ಹೊಸ ಪದಗಳು, ಹಳೆ ಪದಗಳು, ಲಿಪಿ ಇಲ್ಲದ ಪದಗಳು
ಬದಲಾಯಿಸಿಕೊಂಡು ತರಬೇಕಾದ ಪದಗಳು

ಮನೆಯವರು ಎಲ್ಲವನ್ನೂ ರಾಶಿರಾಶಿಯಾಗಿ ಸುರಿದಿದ್ದಾರೆ
ಅಪ್ಪ ತನ್ನ ತಲೆದಿಂಬು ಒಳಗಿಂದ ತೆಗೆದ ಪದಗಳು
ನನಗೆ ಅರ್ಥವೇ ಆಗಲಿಲ್ಲ
ಅಮ್ಮ ತನ್ನ ಮಡಿಲಲ್ಲಿ ತುಂಬಿಕೊಂಡಿರುವ ಪದಗಳನ್ನು ನಾನೆಂದೂ ಕೇಳಲೇ ಇಲ್ಲ
ನನ್ನ ಹೆಂಡತಿ ಅಡುಗೆ ಮನೆಯಿಂದ ಎಳೆದುತಂದ ಪದಗಳನ್ನು ನೋಡಿದರೆ
ಅಷ್ಟು ಮಾತುಗಳ ಮಧ್ಯದಲ್ಲೇ ಆಕೆ ಅಡುಗೆ ಮಾಡುತ್ತಿದ್ದಳು ಅನಿಸಿತು
ನನ್ನ ಮಗಳ ಶಾಲೆಯ ಬ್ಯಾಗಿನಲ್ಲಿ ಹೋಂವರ್ಕ್ ಪದಗಳು
ನನ್ನ ಮಗನ ಪೆಟ್ಟಿಗೆಯಲ್ಲಿ ಹರಡಿರುವ ಜೋಷಿನ ಮಾತುಗಳು
ಎಷ್ಟೇ ಪದಗಳಿದ್ದರೂ ಬದಲಾಗಿ ಎರಡೇ ಎರಡು ಮಾತುಗಳು
ಮಾತ್ರ ಸಿಗುತ್ತವೆ ಎಂದು ಹೇಗೆ ಹೇಳಲಿ?

ಆ ಮಾತುಗಳ ಗಂಟಿನಲ್ಲಿ ತುಂಬಾ ಹುಡುಕಿದೆ
ಬಹಳ ಕಷ್ಟಪಟ್ಟ ಮೇಲೆ
ನನ್ನ ಕೈಗೆ ಎರಡು ಪದಗಳು ಸಿಕ್ಕವು
ಇರೋ ಬರೋ ಶಕ್ತಿ ಎಲ್ಲಾ ಬಳಸಿ
ಆ ಮಾತುಗಳನ್ನು ಹೊರಗೆ ಎಳೆದಿದೆ
ಒಂದು “ಪ್ರಜಾತಂತ್ರ” ಮತ್ತೊಂದು “ಬಹುಳ”

ಬೇಗ ಬೇಗ ಓಡಿಹೋಗಿ ಅಂಚೆ ಕಚೇರಿಗೆ ತಲುಪುವ ವೇಳೆಗೆ
ಮುಸ್ಸಂಜೆ ಕತ್ತಲಾಗುತ್ತಿತ್ತು
ನನ್ನ ಕೈಯಲ್ಲಿರುವ ಮಾತುಗಳನ್ನು ನೋಡಿ
ಬೆಚ್ಚಿಬಿದ್ದು ಎದ್ದು ನಿಂತರು
ಕೌಂಟರಿನ ಉದ್ಯೋಗಿಗಳು
ನನ್ನ ಕೈಯಲ್ಲಿನ ಮಾತುಗಳು ಜಾರಿ ಕೆಳಗೆ ಬಿದ್ದವು
ತುಂಬಾ ಜನ ಓಡಿ ಬಂದು ಸುತ್ತುವರೆಯುತ್ತಿರುವಂತೆ ಬೂಟು ಹೆಜ್ಜೆಗಳ ಸದ್ದು ಕೇಳಿಸಿತು
ಪ್ರಜ್ಞೆ ತಪ್ಪಿ ಬೀಳುತ್ತಿರುವ ನನಗೆ
ಎರಡೇ ಎರಡು ‘ಮಾತು’ಗಳು ಕೇಳಿಸಿತು
“ಸಾಯಿಸಿಬಿಡಿ” – “ದೇಶದ್ರೋಹಿಯನ್ನ”

ಮಲೆಯಾಳಂ ಮೂಲ : ರಹೀಮ್ ಪೊನ್ನಾಡ್
ಹಿಂದಿ : ಎ. ಆರ್. ಸಿಂಧು, ವೀಣಾ ಗುಪ್ತ
ತೆಲುಗು : ಎನ್.ವೇಣುಗೋಪಾಲ್
ಕನ್ನಡಾನುವಾದ : ಪದ್ಮಾ ಕೆ ರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈಶಾನ್ಯ ಭಾರತದಲ್ಲಿ ಕೇವಲ ನೂರು ವರ್ಷಗಳಲ್ಲಿ ಚರ್ಚ್ 60ಕ್ಕೂ ಅಧಿಕ ಭಾಷೆಗಳನ್ನು ಕೊಂದು ಇಂಗ್ಲಿಷ್ ಅನ್ನು ಸ್ಥಾಪಿಸಿದಾಗ, ಕೇರಳ ಸರಕಾರ ಕಾಸರಗೋಡಿನಲ್ಲಿ ಸಾವಿರಾರು ತುಳು, ಕನ್ನಡ, ಕೊಂಕಣಿ ಸಂಸಾರಗಳನ್ನು ಓಡಿಸಿದಾಗ ರಹೀಮರು ಕವನ ಬರೆಯಲಿಲ್ಲ!! ಮಂಗಳೂರು, ಚೆನ್ನೈ, ಮುಂಬಯಿ ಮುಂತಾದೆಡೆ ಕನ್ನಡ, ತುಳು, ತಮಿಳು, ಮರಾಠಿ ಭಾಷೆಗಳನ್ನು ಬಿಟ್ಟು ಹಿಡಿದದ್ದು ಹಿಂದಿಯನ್ನಲ್ಲ, ಇಂಗ್ಲಿಷನ್ನು!!! ಅವರ ಸಂಖ್ಯೆ ಈಗ ಶೇಕಡಾ 40 ದಾಟಿದೆ!!! ರಹೀಮರ ಪದ್ಯವನ್ನು ಅವರ ಮುಂದೆ ಓದಿದರೆ ಬಿದ್ದು ಬಿದ್ದು ನಗುತ್ತಾರೆ!!!

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...