Homeನ್ಯಾಯ ಪಥಧರ್ಮಾಂಧ ಮುಸ್ಲಿಂ ಪ್ರಭುತ್ವಗಳು ಮತ್ತು ಪಶ್ಚಿಮದ ದೇಶಗಳ ಇಸ್ಲಮಾಫೋಬಿಯಾದ ನಡುವೆ..

ಧರ್ಮಾಂಧ ಮುಸ್ಲಿಂ ಪ್ರಭುತ್ವಗಳು ಮತ್ತು ಪಶ್ಚಿಮದ ದೇಶಗಳ ಇಸ್ಲಮಾಫೋಬಿಯಾದ ನಡುವೆ..

- Advertisement -
- Advertisement -

ಭಾರತ ಮೂಲದ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಕಳೆದ ವಾರ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಯಿತು. ಚೂರಿಯಿಂದ ಹತ್ತಾರು ಬಾರಿ ಇರಿದ ಹದಿ ಮಟಾರ್ ಎಂಬ ವ್ಯಕ್ತಿ 24 ವರ್ಷದವನು. ಅಂದರೆ ರಶ್ದಿ ತಮ್ಮ ವಿವಾದಾತ್ಮಕ ಕಾದಂಬರಿ ’ದ ಸಟಾನಿಕ್ ವರ್ಸಸ್ ಬರೆದಾಗ ಈ ಹಲ್ಲೆಕೋರ ಇನ್ನೂ ಹುಟ್ಟಿರಲಿಲ್ಲ. ಈ ವ್ಯಕ್ತಿಯ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ಪ್ರಕಾರ ಇರಾನಿನ ’ಶಿಯಾ ತೀವ್ರವಾದದ’ ಅನುಯಾಯಿಯಾಗಿರಬಹುದೆಂಬ ಪ್ರಾಥಮಿಕ ವರದಿಗಳನ್ನು ಹಲವು ಮಾಧ್ಯಮಗಳು ಪ್ರಕಟಿಸಿವೆ.

ಸಲ್ಮಾನ್ ರಶ್ದಿ 1988ರಲ್ಲಿ ’ದ ಸಟಾನಿಕ್ ವರ್ಸಸ್ ಕಾದಂಬರಿ ಬರೆದಾಗ ಅದು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂಬ ಕಾರಣಕ್ಕೆ ಅಂದಿನ ಇರಾನಿನ ಪರಮೋಚ್ಚ ಮುಖಂಡ ಅಯಾತೊಲ್ಲ ಖೊಮೇನಿ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದ. ಈ ಫತ್ವಾ ಎಂತಹ ಗಂಭೀರ ತಿರುವು ಪಡೆದಿತ್ತೆಂದರೆ ರಶ್ದಿ ತಲೆಮರೆಸಿಕೊಂಡು ಬದುಕಬೇಕಾಯಿತು. ’ಈ ಕಾದಂಬರಿಯ ಯಾವುದೇ ಭಾಷೆಯ ಪ್ರಕಾಶಕನನ್ನು ಹುಡುಕಿ ಕೊಲ್ಲಿ, ನಿಮಗೆ ಸ್ವರ್ಗದ ಬಾಗಿಲು ತೆಗೆಯುತ್ತದೆ’ ಎಂಬ ಕರೆ ಕೊಟ್ಟಿದ್ದಲ್ಲದೆ ಮಿಲಿಯನ್ ಡಾಲರ್ ಮೊತ್ತದ ದೊಡ್ಡ ಬಹುಮಾನವನ್ನೂ ಘೋಷಿಸಿದ್ದ. ಜಪಾನಿ ಅನುವಾದಕನನ್ನು1991ರಲ್ಲಿ ಮತಾಂಧರು ಕೊಂದುಹಾಕಿದ್ದರ ಜೊತೆಗೆ ಹಲವು ಹಲ್ಲೆಗಳು ನಡೆದುಹೋದವು. ಫತ್ವಾ ಹೊರಡಿಸಿದ್ದ ಖೊಮೇನಿ ಕೂಡ 1989ರಲ್ಲಿ ಮರಣ ಹೊಂದಿದ. ಈ ಫತ್ವಾ ಕಾರಣಕ್ಕೆ ಹಾಗೂ ಮುಂದುವರಿದು ನಡೆದ ಕೆಲವು ಘಟನೆಗಳಿಂದ ಇರಾನ್ ಮತ್ತು ಪಶ್ಚಿಮ ದೇಶಗಳ ಸಂಬಂಧ ತೀವ್ರಮಟ್ಟದಲ್ಲಿ ಹಳಸಿಹೋಗಿತ್ತು.

ಈಗ ಇರಾನ್ ಸರ್ಕಾರದ ವಕ್ತಾರ ರಶ್ದಿ ಮೇಲಿನ ದಾಳಿಗೆ ತನ್ನ ಪಾತ್ರವೇನಿಲ್ಲ ಎಂದು ಹೇಳಿದ್ದರೂ, ಈಗಲೂ ಈ ದಾಳಿಗೆ ರಶ್ದಿ ಮತ್ತು ಬೆಂಬಲಿಗರೇ ಕಾರಣ – ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಮಾಡಿದ ಅವಹೇಳನಕ್ಕೆ ತಂದ ಶಾಸ್ತಿ ಎಂಬರ್ಥದಲ್ಲಿ ಮಾತನಾಡಿದ್ದಾರೆ; ದಾಳಿಯನ್ನು ಖಂಡಿಸುವ ಗೋಜಿಗೂ ಹೋಗಿಲ್ಲ. ಇದು ಜಗತ್ತಿನಾದ್ಯಂತ ಧರ್ಮಾಧಾರಿತ ಪ್ರಭುತ್ವವನ್ನು ಕಟ್ಟಿಕೊಂಡಿರುವವರು ಮತ್ತು ಆ ದಾರಿಯಲ್ಲಿರುವವರು ವರ್ತಿಸುವ ಸಾಮಾನ್ಯ ಆದರೆ ಕ್ರೂರ ರೀತಿ. ಹೊರಗಿನ ಶತ್ರುಗಳನ್ನು ಕಲ್ಪಿಸಿಕೊಳ್ಳುವುದಷ್ಟೇ ಅಲ್ಲದೆ ತಮ್ಮದೇ ನೆಲದಲ್ಲಿ ತಮ್ಮದೇ ಜನರನ್ನು ಈ ಪ್ರಭುತ್ವಗಳು ದಮನಿಸುತ್ತಿರುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಇರಾನ್‌ನಲ್ಲಿ ಇತ್ತೀಚೆಗೆ ಖ್ಯಾತ ಚಿತ್ರ ನಿರ್ದೇಶಕ ಜಫರ್ ಫನಾಹಿಯವರನ್ನು ಆರು ವರ್ಷಗಳ ಸೆರೆಮೆನೆವಾಸಕ್ಕೆ ಗುರಿಪಡಿಸಿದ್ದು ಚರ್ಚೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ಪ್ರಭುತ್ವದ ದಮನಕಾರಿ ನೀತಿಗಳನ್ನು ಕಲೆಯ ಮೂಲಕ ಅವರು ವಿಶ್ಲೇಷಿಸಿದ್ದು.

ಇದು ಯಾವುದೋ ಬಿಡಿ ಉದಾಹರಣೆಯೇನಲ್ಲ. ಸೌದಿ ಅರೇಬಿಯಾ ಪತ್ರಕರ್ತ ಜಮಾಲ್ ಖಶ್ಶೋಗಿಯವರನ್ನು ಟರ್ಕಿಯ ರಾಯಭಾರ ಕಚೇರಿಯಲ್ಲಿ ಹತ್ಯೆಗಯ್ಯಲಾಗಿತ್ತು. ಈ ಹತ್ಯೆಯಲ್ಲಿ ಸೌದಿ ರಾಜನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಮುಸ್ಲಿಂ ಪ್ರಭುತ್ವಗಳು ’ಧರ್ಮ ರಕ್ಷಣೆ’ಯ ಹೆಸರಿನಲ್ಲಿ ಜನಸಾಮಾನ್ಯರನ್ನು ದಾರಿತಪ್ಪಿಸುವ ಕೆಲಸವನ್ನು ಒಂದು ಕಡೆಗೆ ಮತ್ತು ದಿಟ್ಟ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ದಮನಗೊಳಿಸುವುದನ್ನ ಮತ್ತೊಂದೆಡೆ ಎಗ್ಗಿಲ್ಲದೆ ಮಾಡಿಕೊಂಡುಬರುತ್ತಿವೆ. ಹೀಗಿದ್ದರೂ ಇಂತಹ ಮುಸ್ಲಿಂ ಪ್ರಭುತ್ವಗಳು 24 ವರ್ಷದ ದಾಳಿಕೋರ ಹದಿ ಮಟಾರ್‌ನಂತಹವರನ್ನು ಪ್ರಭಾವಿಸುತ್ತಿರುವುದು ದುರಂತ. ಆದರೆ ಇದಕ್ಕೆ ಪಶ್ಚಿಮ ದೇಶಗಳ ಯುದ್ಧ ನೀತಿಗಳು ಮತ್ತು ಅಲ್ಲಿನ ಸಮಾಜಗಳಲ್ಲಿ ತೀವ್ರತಮವಾಗಿ ಬೆಳೆದಿರುವ ಇಸ್ಲಮಾಫೋಬಿಯಾ ಕೂಡ ಕಾರಣವೆಂಬುದನ್ನು ಮರೆಯುವಂತಿಲ್ಲ.

ನ್ಯಾಟೋ ದೇಶಗಳು ಆಫ್ಘಾನಿಸ್ಥಾನ, ಸಿರಿಯಾ ದೇಶಗಳಲ್ಲಿ ನಡೆಸಿದ ಯುದ್ಧಗಳು, ಇರಾನ್, ಪ್ಯಾಲೆಸ್ಟೀನ್‌ಗಳಲ್ಲಿ ನಡೆಸಿರುವ ಹಸ್ತಕ್ಷೇಪ ಈ ಎಲ್ಲಾ ಕಾರಣಗಳಿಂದ ಅಸಂಖ್ಯಾತ ಮುಸ್ಲಿಮರನ್ನು ತಮ್ಮ ತಾಯ್ನಾಡಿನಿಂದ ಒಕ್ಕಲೆಬ್ಬಿಸುವಂತೆ ಮಾಡಿತು. ಪಶ್ಚಿಮದ ದೇಶಗಳು ನಡೆಸಿದ ಯುದ್ಧಗಳ ಕಾರಣದಿಂದಾಗಿ ೨೦-೨೧ನೇ ಶತಮಾನ ಹಲವು ಮಾನವ ವಲಸೆಗಳಿಗೆ ಕಾರಣವಾಯಿತು. ಈ ವಲಸೆಗಳನ್ನು ಪಶ್ಚಿಮ ದೇಶಗಳ ಬಲಪಂಥೀಯ ಮುಖಂಡರು ತಮ್ಮ ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಂಡು ಜನರಲ್ಲಿ ಇಸ್ಲಮಾಫೋಬಿಯಾ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಜಾರ್ಜ್ ಬುಷ್, ಟ್ರಂಪ್‌ನಂತಹ ಪಾಪ್ಯುಲಿಸ್ಟ್ ಮುಖಂಡರು ಅದಕ್ಕೆ ಧಾರಾಕಾರವಾಗಿ ನೀರೆರೆದರು. ಇವೆಲ್ಲವೂ ಸಮಸ್ಯೆಗಳನ್ನು ಸಂಕೀರ್ಣಗೊಳಿಸಿವೆ. ಜನಸಾಮಾನ್ಯರಿಗೆ ತಿಳಿವಳಿಕೆಯ ಕಡೆಗೆ ನಡೆಯುವ ಹಾದಿಯನ್ನು ದುರ್ಗಮಗೊಳಿಸಿದೆ. ಒಂದು ಕಡೆಗೆ ಮುಸ್ಲಿಂ ಪ್ರಭುತ್ವಗಳು ತಮ್ಮ ಧಾರ್ಮಿಕ ತೀವ್ರವಾದವನ್ನು ಪ್ರಶ್ನಿಸಿಕೊಂಡು-ತೊರೆದು ಜನಪರ ನೀತಿಗಳೆಡೆಗೆ ಮುಖ ಮಾಡಬೇಕಿದ್ದರೆ, ಲಿಬರಲ್ ದೇಶಗಳು ಎಂದು ಕರೆದುಕೊಂಡು ಯುದ್ಧನೀತಿಗಳನ್ನು ಎಗ್ಗಿಲ್ಲದೆ ಅನುಸರಿಸಿ ಇಸ್ಲಮಾಫೋಬಿಯಾ ಪೋಷಿಸುವ ದೇಶಗಳು ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಮ್ಮ ನೀತಿಗಳನ್ನು ಬದಲಿಸಿಕೊಳ್ಳಬೇಕಿದೆ. ತಾವು ಯುದ್ಧಗೈದಿರುವ ರಾಷ್ಟ್ರಗಳ ಭರವಸೆಯನ್ನು ಮರಳಿ ಪಡೆಯಲು ಕೆಲಸ ಮಾಡಬೇಕಿದೆ.

ಸಲ್ಮಾನ್ ರಶ್ದಿ ಪಶ್ಚಿಮ ದೇಶಗಳ ಯುದ್ಧಗಳನ್ನು ತಾವು ಇಸ್ಲಾಂಅನ್ನು ಟೀಕಿಸಿದ ಮಟ್ಟಕ್ಕೆ ವಿರೋಧಿಸಿರಲಿಲ್ಲವೇ? ಬಹುಶಃ ಉತ್ತರ ಹೌದಿರಬಹುದು. ಆದರೆ ಅದು ಅವರ ಮೇಲಿನ ಹಲ್ಲೆಗೆ ಅಥವಾ ಅವರ ಕೊಲೆಗೆ ಹಾತೊರೆಯುವುದಕ್ಕೆ ಕಾರಣವಾಗಬಾರದು. ಕಾದಂಬರಿಕಾರರಾಗಿ ತಮ್ಮದೇ ಆದ ಅನ್ವೇಷಣೆಯಲ್ಲಿದ್ದ ರಶ್ದಿಯವರ ದೃಷ್ಟಿಕೋನವನ್ನು ವಿಚಾರಗಳ ಮೂಲಕ ಎದುರಿಸುವ ಅಗತ್ಯವಿತ್ತು ಅದನ್ನು ವಿರೋಧಿಸುವವರಿಗೆ. ಆ ಮೂಲಕವೇ ಅಮೆರಿಕ-ಯುಕೆಯಂತಹ ಪ್ರಭುತ್ವ ನಡೆಸಿರುವ ದೌರ್ಜನ್ಯಗಳ ಬಗ್ಗೆ ಗಮನ ಸೆಳೆದು ಕೆಲವರನ್ನಾದರೂ ಬದಲಿಸುವ ಪ್ರಯತ್ನ ಮಾಡಬೇಕಿತ್ತು. ಈ ಮಾರ್ಗದ ಬದಲು ಹಲ್ಲೆ-ಹತ್ಯೆಗಳ ಮೂಲಕ ಧ್ವನಿಯನ್ನು ಅಡಗಿಸುವ ಮಾರ್ಗ ಯಾವುದೇ ಕಾಲಕ್ಕೂ ವಿವೇಕಕ್ಕೆ ಎಡೆಮಾಡಿಕೊಡುವುದಿಲ್ಲ.

ಸಲ್ಮಾನ ರಶ್ದಿ ಶೀಘ್ರ ಗುಣಮುಖರಾಗಲಿ ಮತ್ತು ಮತಾಂಧ ಮುಸ್ಲಿಂ ಪ್ರಭುತ್ವಗಳನ್ನು ಮತ್ತೆ ಪ್ರಶ್ನೆಸುವಂತಾಗಲಿ. ಹಾಗೆಯೇ ಇಸ್ಲಮಾಫೋಬಿಯಾಕ್ಕೆ ಕಾರಣವಾಗಿರುವ ಪಶ್ಚಿಮದ ಸಮಾಜಗಳಿಗೂ ವಿವೇಕ ಮೂಡಬೇಕಿದೆ.

  • ಗುರುಪ್ರಸಾದ್ ಡಿ ಎನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...