Homeಮುಖಪುಟಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

ಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

- Advertisement -
- Advertisement -

ಯಾತ್ರೆ ಹೇಗೆ ನಡೀತಿದೆ? ಏನಾದರೂ ಪರಿಣಾಮ ಆಯ್ತಾ? ಚುನಾವಣೆಯಲ್ಲಿ ಲಾಭ ಆಗಲುಂಟಾ? ಏನಾದರೂ ಸಾಧಿಸ್ತೀರೋ ಇಲ್ವೋ? ಯಾವಾಗ ಕನ್ಯಾಕುಮಾರಿಯಿಂದ ’ಭಾರತ ಜೋಡೊ ಯಾತ್ರಾ’ ಶುರುವಾಯ್ತೋ, ಆವಾಗಿನಿಂದ ಕರೆಗಳು ಬರುತ್ತಲೇ ಇವೆ. ಇಂತಹ ಪರಿಚಿತ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದೆ. ಟಿವಿಯಲ್ಲೂ ಕೋಳಿಜಗಳ ಶುರುವಾಗಿದೆಯಂತೆ. ಯಾತ್ರೆಯ ಹಿಂದಿನ ಇರಾದೆ ಏನಿದೆ ಎಂಬುದರ ಮೇಲೆ ಈ ಯಾತ್ರೆ ಏನು ಸಾಧಿಸುವುದು ಎಂಬುದು ನಿಂತಿದೆ. ಪಾದಯಾತ್ರೆಗಳ ಅನೇಕ ರೀತಿಯದ್ದಾಗಬಹುದು; ಕೆಲವರಿಗೆ ನಡಿಗೆಯಾದರೆ, ಕೆಲವರಿಗೆ ಕಸರತ್ತು. ಅಲೆಮಾರಿ ಸಮಾಜದವರಿಗೆ ಜೀವನಶೈಲಿ; ಹಾಗೂ ಬೀದಿ ಸುತ್ತಿ ಸರಕು ಮಾರಾಟ ಮಾಡುವವರಿಗೆ ವ್ಯಾಪಾರ. ಕೆಲವರು ಹರಕೆ ಹೊತ್ತು ನಡೆದರೆ, ಕೆಲವರು ದೇವರ ದರ್ಶನದ ಆಕಾಂಕ್ಷೆಯಿಟ್ಟು ನಡೆಯುತ್ತಾರೆ. ಕೆಲವೇ ಕೆಲವರು ತನ್ನೊಳಗಿನ ದೇವರನ್ನು ಹುಡುಕುತ್ತ ಕಾಲ್ನಡಿಗೆಯ ಯಾತ್ರೆ ಮಾಡುತ್ತಾರೆ.

ಇದೇ ಮಾತು ರಾಜಕೀಯ ಪಾದಯಾತ್ರೆಗಳಿಗೂ ಅನ್ವಯಿಸುತ್ತದೆ. ಇಲ್ಲಿಯೂ ಕೆಲವರು ಪ್ರವಾಸಿಗಳಿದ್ದಾರೆ, ಕೆಲವರಿಗೆ ದರ್ಶನದ ಆಕಾಂಕ್ಷೆಯಿದ್ದರೆ ಕೆಲವರಿಗೆ ಟಿಕೆಟ್‌ದ್ದು. ನಮ್ಮಲ್ಲಿ ಚುನಾವಣಾ ಪಾದಯಾತ್ರೆಗಳ ಇತಿಹಾಸವೂ ತುಂಬಾ ಹಳೆಯದು. ನಮ್ಮಲ್ಲಿ ಆದ ಕೆಲವು ಪಾದಯಾತ್ರೆಗಳಿಂದ ದೇಶವು ತನ್ನನ್ನು ತಾನು ಗುರುತಿಸಿಕೊಂಡಿದೆ, ಕಳೆದುಕೊಂಡ ತನ್ನ ಆತ್ಮಬಲವನ್ನು ಪಡೆದುಕೊಂಡಿದೆ.

ಸ್ವಾಭಾವಿಕವಾಗಿಯೇ ’ಭಾರತ ಜೋಡೊ ಯಾತ್ರೆ’ಯಲ್ಲಿ ಇವೆಲ್ಲವುಗಳ ಒಂದಿಷ್ಟು ಅಂಶಗಳಿವೆ. ಹಾಗಾಗಿ ದೇಶದ ಒಂದು ದೊಡ್ಡ ಪಕ್ಷದಿಂದ ಪ್ರಾಯೋಜಿತವಾದ ಇಂತಹ ಯಾತ್ರೆಗಳಲ್ಲಿ ಪ್ರವಾಸಿಗರೂ ಇರುತ್ತಾರೆ, ಅವರೊಂದಿಗೆ ಪೈಲ್ವಾನರೂ ಇರುತ್ತಾರೆ, ಟಿಕೆಟ್ ಆಕಾಂಕ್ಷಿಗಳೂ ಇರುತ್ತಾರೆ ಹಾಗೂ ದರ್ಶನಾರ್ಥಿಗಳೂ ಇರುತ್ತಾರೆ. ಈ ಯಾತ್ರೆಯ ಯಶಸ್ಸು, ವಿಫಲತೆಗಳನ್ನು ಈ ಸಣ್ಣ ಆಕಾಂಕ್ಷೆಗಳ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ. ಎಂದಿನಂತೆಯೇ ರಾಜಕೀಯ ಪಂಡಿತರು ಇದನ್ನು ಕಾಂಗ್ರೆಸ್ ಪಕ್ಷ ಅಥವಾ ರಾಹುಲ್ ಗಾಂಧಿಯ ಲಾಭ-ನಷ್ಟಗಳ ಲೆಕ್ಕದಲ್ಲಿ ಒರೆಗೆ ಹಚ್ಚಲಿದ್ದಾರೆ. ಆದರೆ, ಒಂದು ಪಕ್ಷದ ಅಥವಾ ಒಬ್ಬ ನಾಯಕನ ಲಾಭವು ರಾಷ್ಟ್ರದ ಹಿತಾಸಕ್ತಿಯ ಅಳತೆಗೋಲಾಗಲು ಸಾಧ್ಯವಿಲ್ಲ.

ಇಂದಿನ ಸಂದರ್ಭದಲ್ಲಿ ಭಾರತ ಜೋಡೊ ಯಾತ್ರೆಯ ಸಫಲತೆಯ ಒಂದೇ ಒಂದು ಅಳತೆ ಆಗಿರಬಹುದು. ಅದು, ದೇಶದ ಭವಿಷ್ಯದ ಮೇಲೆ ಕವಿದಿರುವ ಕಾರ್ಮೋಡಗಳನ್ನು ಇಲ್ಲವಾಗಿಸುವಲ್ಲಿ ಈ ಯಾತ್ರೆ ಸಹಕಾರಿಯಾಗುವುದೇ? ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಆಂದೋಲನ ಹಾಗೂ ಸಭ್ಯತೆಯ ಪರಂಪರೆಯನ್ನು ಉಳಿಸುವಲ್ಲಿ ಏನಾದರೂ ಯೋಗದಾನ ನೀಡುವುದೇ? ರಾಜಕೀಯ ಶಕ್ತಿಯ ಸಮತೋಲನವನ್ನು ಸ್ವಲ್ಪ ಮಟ್ಟಿಗಾದರೂ, ದೇಶವನ್ನು ಜೋಡಿಸುವ ಕಡೆಗೆ ತಿರುಗಿಸಬಲ್ಲದೇ? ನನ್ನಂತಹ ಜನರು ಇದೇ ನಿರೀಕ್ಷೆಯಲ್ಲಿ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದೇವೆ. ದೇಶದ ಇತಿಹಾಸದಲ್ಲಿ ಸೂಕ್ಷ್ಮವಾದ ಮತ್ತು ನಿರ್ಣಾಯಕವಾದ ಸಮಯದಲ್ಲಿ ನಡೆಯುತ್ತಿರುವ ಈ ಯಾತ್ರೆಯನ್ನು ಬೇರೆ ಯಾವುದೇ ದೃಷ್ಟಿಕೋನದಲ್ಲಿ ನೋಡುವುದು ಒಂದು ದೊಡ್ಡ ಅಸಡ್ಡೆಯೆನಿಸುತ್ತದೆ.

ಸುಮಾರು 5 ತಿಂಗಳು ನಡೆಯಲಿರುವ ಈ ಯಾತ್ರೆಯ ಬಗ್ಗೆ ಮೊದಲ 5 ದಿನದ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ಹಾಸ್ಯಾಸ್ಪದವಾಗುವುದು; ಆದರೆ ಈ ಮೊದಲ ಝಲಕ್‌ನಿಂದ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಮೊದಲ ವಾರದಲ್ಲಿ ಈ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಕೇರಳದ ತಿರುವನಂತಪುರಂ ಜಿಲ್ಲೆಗಳಿಂದ ಹಾದುಹೋಗುತ್ತಿದೆ. ಇವೆರಡೂ ತುಲನಾತ್ಮಕವಾಗಿ ಕಾಂಗ್ರಸ್‌ನ ಪ್ರಬಲ ಕ್ಷೇತ್ರಗಳಾಗಿವೆ. ಹಾಗಾಗಿ ಯಾತ್ರೆಗೆ ಇಷ್ಟು ಬೃಹತ್ತಾಗಿ ಸಿಕ್ಕ ಜನರ ಸಮರ್ಥನೆಯಿಂದ ಅಚ್ಚರಿಯಾಗಲಾರದು. ಆದರೆ, ಗಮನಿಸಬೇಕಾದ ಅಂಶವೇನೆಂದರೆ, ಹೆಚ್ಚುಕಡಿಮೆ ಎಲ್ಲಾ ಸಮಯದಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ಈ ಯಾತ್ರೆಯನ್ನು ಸ್ವಾಗತಿಸಲು ಜನರ ನಿಂತಿದ್ದರು, ಹಾಗೂ ಅವರಲ್ಲಿ ಅನೇಕರು ಗಂಟೆಗಳವರೆಗೆ ನಿಂತಿದ್ದರು. ಸ್ವಾಭಾವಿಕವಾಗಿಯೇ, ಈ ಜನಸಮೂಹದಲ್ಲಿ ಹೆಚ್ಚಿನ ಜನರನ್ನು ಪಕ್ಷದ ಕಾರ್ಯಕರ್ತರು ಸೇರಿಸಿರಬಹುದು. ಹಾಗೆ ನೋಡಿದರೂ ಇದೂ ಒಂದು ಸಾಧನೆಯೇ.

ಕೆಲವರು ಕೇವಲ ನೋಡುಗರಾಗಿಯೂ ಇದ್ದರು. ಆದರೆ ಈ ಜನಸಮೂಹದಲ್ಲಿ ಸಾಧಾರಣ ಜನರು ಒಂದು ಭಾಗವೂ ಇತ್ತು, ಅವರನ್ನು ಯಾವುದೇ ಪಕ್ಷದವರು ಅಲ್ಲಿ ಸೇರಿಸಿದ್ದಲ್ಲ, ಅವರು ಖುದ್ದಾಗಿ ಬಂದಿದ್ದರು. ಕತ್ತಲೆಯಲ್ಲಿ ಒಂದು ಪುಟ್ಟ ಆಸೆಯ ಬೆಳಕನ್ನು ಕಂಡಾಗ ಕಾಣುವ ಒಂದು ಹೊಳಪು ಇವರ ಕಣ್ಣುಗಳಲ್ಲಿತ್ತು. ಇವರನ್ನು ಈಗಾಗಲೇ ಕಾಂಗ್ರೆಸ್ ಸಮರ್ಥಕ ಅಥವಾ ಮತದಾರರೆಂಬ ಹೆಸರು ಕೊಡುವುದು ಬೇಡ. ಒಂದು ಪಾದಯಾತ್ರೆಯ ಬಗ್ಗೆ ಗೌರವ ಭಾವನೆ ಇರಲೂ ಸಾಧ್ಯ ಮತ್ತು ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎನ್ನಬಹುದು. ಮುಂದಿನ ಕೆಲವು ದಿನಗಳಲ್ಲೇ ತಿಳಿಯುವುದಾದರೂ, ಈ ಯಾತ್ರೆಯು ಒಂದು ಸಕಾರಾತ್ಮಕವಾದ ಜಾಗೃತಿಯನ್ನು ಮೂಡಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಚುನಾವಣೆಗಳಲ್ಲಿ ಇದರ ಪರಿಣಾಮ ಏನಾಗುವುದು ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ಏನು ಪರಿಣಾಮ ಎಂಬ ಬಗ್ಗೆಯೂ ಸ್ವಲ್ಪವೂ ಅಂದಾಜು ಮಾಡಲಾಗುವುದಿಲ್ಲ. ಆದರೆ ಈ ಸಕಾರಾತ್ಮಕತೆಯಿಂದ ಈಗಿರುವ ವಿಕಲ್ಪವಿಲ್ಲದಿರುವ ರಾಜಕೀಯ ವಾತಾವರಣವನ್ನು ಎಲ್ಲಿಯಾದರೂ ಒಡೆಯುವ ಸಾಮರ್ಥ್ಯವಂತೂ ಇದೆ.

ಈಗಲೇ ಈ ಯಾತ್ರೆಯು ದೇಶದ ಮನಸ್ಥಿತಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡುವುದೂ ಹುಚ್ಚುತನವಾಗುತ್ತದೆ. ಆದರೆ ಒಂದಂತೂ ಸತ್ಯ; ಕಾಂಗ್ರೆಸ್ ಪಕ್ಷ ಕೈಗೆತ್ತಿಕೊಂಡಿರುವ ಈ ನಡಿಗೆ ದೇಶದ ಮೌನ ಮತ್ತು ಏಕತಾನತೆಯ ಭಾವನೆಯನ್ನು ಮುರಿದುಹಾಕಿದೆ. ತಾವೆಂದೂ ಕಾಂಗ್ರೆಸ್‌ನ ಬೆಂಬಲ ನೀಡದೇ ಇರುವ ಹಾಗೂ ಬೀದಿಗಳಲ್ಲಿ ಕಾಂಗ್ರೆಸ್‌ಅನ್ನು ವಿರೋಧಿಸಿದ ಅನೇಕರು ಈ ಯಾತ್ರೆಗೆ ಸಮರ್ಥನೆ ಮಾಡುತ್ತಿದ್ದಾರೆ. ದೇಶದ ಜನಾಂದೋಲನಗಳ ಒಂದು ಭಾಗವು ಕನ್ಯಾಕುಮಾರಿಯಿಂದಲೇ ಈ ಯಾತ್ರೆಯಲ್ಲಿ ಕೂಡಿಕೊಂಡಿದೆ.

ಹೊರಗಿನಿಂದ ಬಂದ ಈ ಅನಿರೀಕ್ಷಿತ ಸಮರ್ಥನೆಯಿಂದ ಕಾಂಗ್ರೆಸ್‌ನ ಪಾದಯಾತ್ರಿಗಳ ಆತ್ಮಸ್ಥೈರ್ಯವು ಹೆಚ್ಚಿದೆ. ಕಳೆದ ಇಡೀ ವಾರದಲ್ಲಿ ಈ ಯಾತ್ರೆಯಲ್ಲಿ ಜೊತೆಗೂಡುವ ಆಕಾಂಕ್ಷೆ ಇಟ್ಟುಕೊಂಡವರ ಸಂದೇಶಗಳು ಹೆಚ್ಚುತ್ತಿವೆ. ಕನಿಷ್ಠ ಒಂದು ಮಟ್ಟಕ್ಕಂತೂ ನಾವು ಒಬ್ಬಂಟಿಗಳಲ್ಲ ಎಂಬ ಭಾವನೆ ಮೂಡುತ್ತಿದೆ. ದೇಶ ಬದಲಿಸುವ ಮಾತು ಈಗ ಹೇಳಿದರೆ ದೊಡ್ಡ ಮಾತಾಗುತ್ತದೆ, ಆದರೆ ದೇಶವನ್ನು ಜೋಡಿಸುವ ಇಚ್ಛೆ ಹೊಂದಿದ್ದವರಲ್ಲಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಬೋಣಿ ತುಂಬಾ ಚೆನ್ನಾಗಾಗಿದೆ.

ಯೋಗೇಂದ್ರ ಯಾದವ್

(ಕನ್ನಡಕ್ಕೆ): ರಾಜಶೇಖರ ಅಕ್ಕಿ


ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಿಜೆಪಿ ಮಾಡಿದ ಹಾನಿಯನ್ನು ಸರಿಪಡಿಸುವ ಪ್ರಯತ್ನ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...