Homeಮುಖಪುಟಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?

ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?

ಸೋಲಿನ ಭಯದ ಸಮಯದಲ್ಲಿ ಪ್ರಧಾನಿಯವರ ಕೆಲ ಹೇಳಿಕೆಗಳು ಸುಳ್ಳು ಹಾಗು ಅರ್ಧ ಸತ್ಯಗಳಾಗಿವೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿತ್ತು. ಮೋದಿಯವರ ಇಂದಿನ ಭಾಷಣವೂ ಸಹ ಅದೇ ಆಗಿದೆ.

- Advertisement -
- Advertisement -

“ನೀವು ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಎನ್ನುವುದು ಅವರಿಗೆ (ವಿರೋಧ ಪಕ್ಷಗಳಿಗೆ) ಬೇಕಾಗಿಲ್ಲ. ಛತ್ತಿ ದೇವಿಯನ್ನು ಪೂಜಿಸುವ ಈ ಶುಭ ಭೂಮಿಯಲ್ಲಿ, ಜನರು ರಾಷ್ಟ್ರಕ್ಕಾಗಿ ಜಪಿಸದಿರಲು ಸಾಧ್ಯವೇ? ಅವರಲ್ಲಿ ಒಂದು ಗುಂಪು ಭಾರತ್ ಮಾತಾಕೀ ಜೈ ಎಂಬ ಘೋಷಣೆಯನ್ನು ವಿರೋಧಿಸುತ್ತದೆ. ಇನ್ನೊಂದು ಗುಂಪು ಅದನ್ನು ತಲೆನೋವು ಎಂದು ಭಾವಿಸುತ್ತದೆ. ಅವರೆಲ್ಲರೂ ಈಗ ಮತಕ್ಕಾಗಿ ಒಂದಾಗಿದ್ದಾರೆ. ಆದರೆ ನೀವು ಜೈಶ್ರೀರಾಮ್ ಎನ್ನುವುದು ಅವರಿಗೆ ಬೇಕಿಲ್ಲ” ಇವು ಬಿಹಾರದ ವಿರೋಧ ಪಕ್ಷಗಳನ್ನು ಟೀಕಿಸಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ನುಡಿಮುತ್ತುಗಳು.

ಬಿಹಾರದಲ್ಲಿ 94 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಏಕೆ ಈ ರೀತಿ ಮಾತನಾಡಿದ್ದಾರೆ? ಒಬ್ಬ ಪ್ರಧಾನಿಯವರ ಬಾಯಲ್ಲಿ ಬರುವ ಮಾತುಗಳೆ ಇವು? ಎಂಬ ಪ್ರಶ್ನೆಗಳು ಎದ್ದಿವೆ. ಚುನಾವಣೆಯ ಸಂದರ್ಭದಲ್ಲಿ ಎದುರಾಳಿ ಪಕ್ಷಗಳನ್ನು, ಮುಖಂಡರನ್ನು ಟೀಕಿಸುವುದು ಸಹಜ. ಆದರೆ ಧರ್ಮ, ದೇವರು, ರಾಷ್ಟ್ರಭಕ್ತಿ ಇತ್ಯಾದಿ ಪದಪುಂಜಗಳನ್ನು ಬಳಸಿ ಮತಕೇಳುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ? ಅದರಲ್ಲಿಯೂ ಪ್ರಧಾನಿ ಮಂತ್ರಿಯಂತಹ ಜವಾಬ್ದಾರಿ ಹುದ್ದೆಯಲ್ಲಿರುವವರ ಆಡುವ ಮಾತುಗಳೇ? ಎಂಬ ಟೀಕೆಗಳು ವ್ಯಕ್ತವಾಗಿವೆ.

ಈ ನಡುವೆಯೇ ಪ್ರಧಾನಿ ಮೋದಿಯವರ ಮೇಲಿನ ಮಾತುಗಳಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ. ಬಿಹಾರದಲ್ಲಿ ಇಷ್ಟು ದಿನದ ಪ್ರಚಾರದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವುದು ಆರ್‌ಜೆಡಿ ಪಕ್ಷದ ಯುವನಾಯಕ ತೇಜಸ್ವಿ ಯಾದವ್. ಚುನಾವಣೋತ್ತರ ಸಮೀಕ್ಷೆಗಳನ್ನೆಲ್ಲ ತಲೆಕೆಳಗಾಗಿಸುವಂತೆ ಅವರ ರ್ಯಾಲಿಗಳಿಗೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ದಿನಕ್ಕೆ 3-4 ರ್ಯಾಲಿಗಳಿಗೆ ಸೀಮಿತವಾದರೆ ತೇಜಸ್ವಿ ಯಾದವ್ ದಿನಕ್ಕೆ 18-19 ರ್ಯಾಲಿಗಳಲ್ಲಿ ಭಾಗವಹಿಸಿ ದೇಶದ ಗಮನ ಸೆಳೆದಿದ್ದಾರೆ. ಅವರ ರ್ಯಾಲಿಗಳಿಗೆ ಸೇರುತ್ತಿರುವ ಜನಸಂಖ್ಯೆ ನೋಡಿಯೇ ಬಿಜೆಪಿ ಮತ್ತು ಜೆಡಿಯು ಪಕ್ಷಕ್ಕೆ ನಡುಕ ಉಂಟಾಗಿದೆ. ಅಲ್ಲದೇ ಉದ್ಯೋಗ ಸೃಷ್ಟಿ, ಯುವಜನರ ಸಮಸ್ಯೆಗಳು, ವಲಸೆ ಕಾರ್ಮಿಕರನ್ನು ನಡೆಸಿಕೊಂಡ ರೀತಿ ಹಾಗೂ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವಿಫಲತೆ ಕುರಿತ ತೇಜಸ್ವಿ ಯಾದವ್ ಪ್ರಶ್ನೆಗಳಿಗೆ ಆಡಳಿತರೂಢ ಬಿಜೆಪಿ ಮತ್ತು ಜೆಡಿಯು ಬಳಿ ಉತ್ತರವಿಲ್ಲದಂತಾಗಿದೆ. ಹಾಗಾಗಿಯೇ ಸೋಲಿನ ಭೀತಿಯಲ್ಲಿ ಈ ಹಿಂದಿನಂತೆ ಮೋದಿಯವರು ಭಾವನಾತ್ಮಕ ಭಾಷಣದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಪ್ರಧಾನಿಯವರಿಗೆ ಸೋಲುವ ಭಯ ಉಂಟಾದಾಗ ಇಂತಹ ದೇವರು, ಧರ್ಮ, ರಾಷ್ಟ್ರ ಇತ್ಯಾದಿ ಕಾರಣಗಳನ್ನಿಟ್ಟುಕೊಂಡು ಮತಯಾಚನೆ ಮಾಡುವುದು ಇದು ಮೊದಲೇನಲ್ಲ. ಈ ಹಿಂದೆ 2017ರ ಗುಜರಾತ್ ಚುನಾವಣೆಯಲ್ಲಿಯೂ ಅವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ತೋರಿಸುವುದನ್ನು ಬಿಟ್ಟು “ಕಾಂಗ್ರೆಸ್ ಪಕ್ಷವು ಪಾಕಿಸ್ತಾನದೊಂದಿಗೆ ಸೇರಿ ಭಾರತದ ವಿರುದ್ಧ ಸಂಚು ಹೂಡುತ್ತಿದೆ” ಎಂದು ಆರೋಪಿಸಿದ್ದರು.

ಸೋಲಿನ ಭಯದ ಸಮಯದಲ್ಲಿ ಪ್ರಧಾನಿಯವರ ಕೆಲ ಹೇಳಿಕೆಗಳು ಸುಳ್ಳು ಹಾಗು ಅರ್ಧ ಸತ್ಯಗಳಾಗಿದ್ದು, 2017ರಲ್ಲಿ ಪ್ರಧಾನಿ ಮೋದಿಯವರು ನೀಡಿದ್ದ ಕೆಲ ಹೇಳಿಕೆಗಳ ಬಗ್ಗೆ ಹಾಗೂ ಅದರ ಸತ್ಯಾಸತ್ಯತೆಯ ಬಗ್ಗೆ ಅಲ್ಟ್‌ ನ್ಯೂಸ್ ವರದಿ ಮಾಡಿದೆ. ಕೆಲವು ಇಲ್ಲಿವೆ.

1. ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕ್ ರಾಯಭಾರಿಯನ್ನು ಭೇಟಿ: ಪಾಕ್ ಜೊತೆ ಸೇರಿ ಸಂಚು ಆರೋಪ

2017ರ ಗುಜರಾತ್ ಚುನಾವಣೆಯ ಸಮಯದಲ್ಲಿ ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕ್ ರಾಯಭಾರಿಯನ್ನು ಭೇಟಿಯಾಗಿದ್ದರು. ಇದರ ಹಿಂದೆ ಸಂಚು ಅಡಗಿದೆ ಎಂದು ಪ್ರಧಾನಿ ಮೋದಿ ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಆದರೆ ಈ ಚರ್ಚೆಯಲ್ಲಿ ಗುಜರಾತ್ ಚುನಾವಣೆಯ ವಿಚಾರವನ್ನು ಚರ್ಚಿಸಿರಲಿಲ್ಲ ನೆಂದು ಸೇನೆಯ ಮಾಜಿ ಮುಖ್ಯಸ್ಥ ದೀಪಕ್ ಕಪೂರ್ ಹೇಳಿಕೆ ನೀಡಿದ್ದರು. ಚುನಾವಣೆ ಬಳಿಕ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿ, ಮನಮೋಹನ್ ಸಿಂಗ್ ಅಥವಾ ಅನ್ಸಾರಿಯವರ ಬದ್ಧತೆಯನ್ನು ಎಂದೂ ಪ್ರಶ್ನಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

2. “ನೇರ ಪ್ರಯೋಜನ ವರ್ಗಾವಣೆ ಯೋಜನೆಯನ್ನು ಆರಂಭಿಸಿದ್ದು ನಾವು”?

ಕರ್ನಾಟಕಕ್ಕೆ ಅಕ್ಟೋಬರ್‌ನಲ್ಲಿ ಭೇಟಿ ನೀಡಿದ್ದ ಮೋದಿ, ನೇರ ಪ್ರಯೋಜನ ವರ್ಗಾವಣೆ ಯೋಜನೆಯನ್ನು ನಾವು ಆರಂಭಿಸಿದ್ದು, ಮಧ್ಯವರ್ತಿಗಳು ಮತ್ತು ಸೋರಿಕೆಯನ್ನು ತಡೆಯುವ ಮೂಲಕ ಸರಕಾರ 57 ಸಾವಿರ ಕೋಟಿ ರೂ.ಗಳನ್ನು ಉಳಿಸಿದೆ ಎಂದಿದ್ದರು. ಆದರೆ ವಾಸ್ತವವೇನೆಂದರೆ ಈ ಯೋಜನೆಯನ್ನು 2013ರ ಬಜೆಟ್‍ನಲ್ಲಿ ಘೋಷಿಸಲಾಗಿತ್ತು.

ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು

3.ರಂಜಾನ್-ದೀಪಾವಳಿಯ ದಿನ ಪೂರೈಕೆಯಾದ ವಿದ್ಯುತ್ ಲೆಕ್ಕ ಹಾಕಿದ ಪ್ರಧಾನಿ!?

ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಫತೇಪುರ್ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅಂದು ಆಡಳಿತದಲ್ಲಿದ್ದ ಸಮಾಜವಾದಿ ಪಕ್ಷವು ರಂಜಾನ್‌ ನಂದು ದೀಪಾವಳಿಗಿಂತ ಹೆಚ್ಚು ವಿದ್ಯುತ್ ಪೂರೈಕೆ ಮಾಡಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. “ರಂಜಾನ್ ಸಂದರ್ಭ ವಿದ್ಯುತ್ ಪೂರೈಕೆಯಿದ್ದರೆ ದೀಪಾವಳಿಯಂದೂ ವಿದ್ಯುತ್ ಸಂಪರ್ಕವಿರಬೇಕು. ತಾರತಮ್ಯ ಇರಲೇಬಾರದು” ಎಂದು ಮೋದಿ ಹಿಂದೂ-ಮುಸ್ಲಿಂ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದರು. ಪ್ರಧಾನಿಯವರ ಈ ಹೇಳಿಕೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ವಾಸ್ತವವೆಂದರೆ ರಂಜಾನ್ ಸಮಯದ 2016ರ ಜುಲೈ 6ರಂದು 13,500 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಿದ್ದರೆ, ದೀಪಾವಳಿ ಸಂದರ್ಭದಲ್ಲಿ 15,400 ಮೆಗಾವ್ಯಾಟ್ ವಿದ್ಯುತ್ ಪೂರೈಸಲಾಗಿತ್ತು. ಮೋದಿ ಮಾತ್ರಕ್ಕಾಗಿ ಮತಕ್ಕಾಗಿ ಸುಳ್ಳು ಹೇಳಿದ್ದರು.

4. ರೈಲು ಹಳಿ ತಪ್ಪಿದ ಘಟನೆಗೂ ಐಎಸ್‍ಐಗೂ ಸಂಬಂಧವಿದೆ?

ಇಂಧೋರ್- ಪಾಟ್ನಾ ಎಕ್ಸ್‌ ಪ್ರೆಸ್ ರೈಲು 2016ರ ನವೆಂಬರ್‌ನಲ್ಲಿ ಹಳಿ ತಪ್ಪಿ 150 ಮಂದಿ ಮೃತಪಟ್ಟ ಘಟನೆಯನ್ನು 2017ರಲ್ಲಿ ಉಲ್ಲೇಖಿಸಿದ ಮೋದಿ, ಇದರ ಹಿಂದೆ ಪಾಕಿಸ್ತಾನದ ಐಎಸ್ಐನ ಕೈವಾಡವಿದೆ ಎಂದಿದ್ದರು. ಆದರೆ ಉತ್ತರ ಪ್ರದೇಶದ ಡಿಜಿಪಿ ಜಾವೆದ್ ಅಹ್ಮದ್ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದರು. ರೈಲು ಹಳಿ ತಪ್ಪಿದ ಘಟನೆಯಲ್ಲಿ ಐಎಸ್ಐ ಕೈವಾಡವಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದರು.

5. ದಿನವೊಂದಕ್ಕೆ ಅಪರಾಧದ ಲೆಕ್ಕಹಾಕಿ ನಗೆಪಾಟಲಿಗೀಡಾದ ಪ್ರಧಾನಿ?

2017ರ ಉತ್ತರ ಪ್ರದೇಶ ಚುನಾವಣೆಯ ಸಂದರ್ಭದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ದೇಶದಲ್ಲೇ ಅತಿಹೆಚ್ಚು ಅಪರಾಧ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿವೆ ಎಂದು ಅಖಿಲೇಶ್ ಯಾದವ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ದಿನಕ್ಕೆ 24 ಅತ್ಯಾಚಾರ, 21 ಅತ್ಯಾಚಾರ ಯತ್ನ, 13 ಹತ್ಯೆ, 33 ಅಪಹರಣ, 19 ದೊಂಬಿ, 136 ಕಳ್ಳತನ ಪ್ರಕರಣಗಳು ನಡೆಯುತ್ತವೆ ಎಂದಿದ್ದರು. ಆದರೆ ಅಪರಾಧ ದರವನ್ನು ಲಕ್ಷ ಜನಸಂಖ್ಯೆಗೆ ಎಷ್ಟು ಅಪರಾಧ ನಡೆದಿದೆ ಎಂಬ ಆಧಾರದಲ್ಲಿ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ ಲೆಕ್ಕ ಹಾಕುತ್ತದೆ ಹೊರತು ಪ್ರಧಾನಿ ಹೇಳಿದಂತೆ ದಿನವೊಂದಕ್ಕಲ್ಲ.

6. ಹವಾಮಾನ ವೈಪರೀತ್ಯದಿಂದ ಸುರಕ್ಷೆ ನೀಡುವ ಬೆಳೆವಿಮೆ ಯೋಜನೆ ಜಾರಿ?

“ಪ್ರಧಾನ ಮಂತ್ರಿಗಳ ಬೆಳೆ ವಿಮೆ ಯೋಜನೆಯನ್ನು ನಾವು ಆರಂಭಿಸಿದ್ದೇವೆ. ಹವಾಮಾನ ವೈಪರಿತ್ಯಗಳು ಸಂಭವಿಸಿ ಬೆಳೆ ನಾಶವಾದರೂ ರೈತರು ಈ ಯೋಜನೆಯ ಮೂಲಕ ವಿಮೆ ಪಡೆಯಬಹುದು. ಯಾರಾದರೂ ಈ ಮೊದಲು ಇಂತಹ ಯೋಜನೆಯನ್ನು ನೋಡಿದ್ದೀರ” ಎಂದು ಪ್ರಧಾನಿ ಹೇಳಿದ್ದರು. ಆದರೆ 2003ರಲ್ಲೇ ಈ ಯೋಜನೆ ಆರಂಭವಾಗಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.

ಇದನ್ನೂ ಓದಿ: CAA, NRC, NPR : ಮೋದಿ- ಅಮಿತ್‌ ಶಾ ಹೇಳಿದ ಹತ್ತು ಮಹಾ ಸುಳ್ಳುಗಳು

7. ತೆಂಗಿನಕಾಯಿ ಜ್ಯೂಸ್ ಮತ್ತು ಆಲೂಗಡ್ಡೆ ಫ್ಯಾಕ್ಟರಿ?

2017ರ ಮಾರ್ಚ್ 1ರಂದು ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ, ತೆಂಗಿನಕಾಯಿ ಜ್ಯೂಸನ್ನು ಲಂಡನ್ ನಲ್ಲಿ ಮಾರುವ ಮೂಲಕ ರೈತರಿಗೆ ಸಹಾಯ ಮಾಡಲಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆಲೂಗಡ್ಡೆ ತಯಾರಿಸುವ ಫ್ಯಾಕ್ಟರಿಯನ್ನು ನಿರ್ಮಿಸುವುದಾಗಿಯೂ ಅವರು ಹೇಳಿದ್ದಾರೆ ಎಂದಿದ್ದರು. ಆದರೆ ವಾಸ್ತವ ಏನೆಂದರೆ ರಾಹುಲ್ ಗಾಂಧಿ ತೆಂಗಿನಕಾಯಿ ಅಥವಾ ತೆಂಗಿನ ಕಾಯಿ ಜ್ಯೂಸ್ ಬಗ್ಗೆ ಏನೂ ಹೇಳಿರಲಿಲ್ಲ. ಅವರು ಅನಾನಸು ಜ್ಯೂಸ್ ಬಗ್ಗೆ ಮಾತನಾಡಿದ್ದರು. ಆಲೂಗಡ್ಡೆ ಫ್ಯಾಕ್ಟರಿಯ ಬಗ್ಗೆಯೂ ಪ್ರಧಾನಿ ಹೇಳಿದ್ದು ಸುಳ್ಳೇ ಆಗಿದೆ. ಆಲೂಗಡ್ಡೆ ಚಿಪ್ಸ್ ತಯಾರಿಸಲು ಫ್ಯಾಕ್ಟರಿ ನಿರ್ಮಿಸುವ ಬಗ್ಗೆ ರಾಹುಲ್ ಮಾತನಾಡಿದ್ದರೇ ಹೊರತು ಆಲೂಗಡ್ಡೆ ತಯಾರಿಸುವ ಬಗ್ಗೆಯಲ್ಲ.

ಹೀಗೆ, ಒಂದು ಪ್ರಾಮಾಣಿಕ ರಾಜಕೀಯ ಪಕ್ಷ ಅಥವಾ ಒಬ್ಬ ಪ್ರಾಮಾಣಿಕ ರಾಜಕೀಯ ಪಟುವಿನ ಯಾವುದೇ ಲಕ್ಷಣಗಳನ್ನು ಹೊಂದಿರದ ಮೋದಿ, ಬರೀ ಇಂತಹ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ. ಇನ್ನು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀಡಿದ ಆಶ್ವಾಸನೆಗಳ ಬಗ್ಗೆಯಂತೂ ಅವರು ತುಟಿ ಬಿಚ್ಚುವುದಿಲ್ಲ. ಜನರಿಗೆ ನೇರಾನೇರ ಮುಖಾಮುಖಿಯಾದರೆ ಜನರು ಇವುಗಳನ್ನೆಲ್ಲಾ ಪ್ರಶ್ನಿಸುತ್ತಾರೆ ಎಂಬ ಭಯಕ್ಕೆ ಪ್ರಧಾನಿಯವರು ಇದುವರೆಗೆ ಪ್ರಾಮಾಣಿಕವಾದ ಒಂದೇ ಒಂದು ಪತ್ರಿಕಾ ಗೋಷ್ಠಿಯನ್ನೂ ನಡೆಸಿಲ್ಲ. ನಡೆಸುವುದೂ ಇಲ್ಲ ಎಂದು ಸಾಮಾಜಿಕ ಜಾಲತಾಣಿಗರು ದೂರಿದ್ದಾರೆ.


ಇದನ್ನೂ ಓದಿ: ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ – ಎ.ಕೆ.ಸುಬ್ಬಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬುಡುಬುಡಿಕೆ ದಾಸಯ್ಯನ ಬಡಬಡಿಕೆಗಾದರೂ ಅರ್ಥವಿರುತ್ತದೆ. ಆದರೆ ಈವಯ್ಯನ ಮಾತುಗಳಿಗೆ ಅರ್ಥವೇ ಇರುವುದಿಲ್ಲ.
    ವಿಶ್ವನಾಥ ಎನ್ ಅಮಾಸ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...