Homeಕರ್ನಾಟಕನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ - ಎ.ಕೆ.ಸುಬ್ಬಯ್ಯ

ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ – ಎ.ಕೆ.ಸುಬ್ಬಯ್ಯ

- Advertisement -
ಎ.ಕೆ.ಸುಬ್ಬಯ್ಯ, ಹಿರಿಯ ಚಿಂತಕರು. 
ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ.
ಮೋದಿಯವರು ಮೊನ್ನೆ ಬೆಂಗಳೂರಿನ ಭಾಷಣದಲ್ಲಿ ಎರಡು ತಪ್ಪು ಸಂದೇಶಗಳನ್ನು ಕೊಡುವುದಕ್ಕೆ ಬುದ್ಧಿಪೂರ್ವಕ ಪ್ರಯತ್ನವನ್ನು ಮಾಡಿದ್ದಾರೆ. ಮೊದಲನೆಯದು ಮೋದಿಯನ್ನು ಟೀಕೆ ಮಾಡುವವರೆಲ್ಲರೂ ದೇಶ ದ್ರೋಹಿಗಳು. ಅವರು ದೇಶದ ವಿರುದ್ಧ ಮಾತಾಡುತ್ತಾರೆ. ಎರಡನೆಯದು ತನ್ನ ಭ್ರಷ್ಟಾಚಾರದ ಹೋರಾಟ. ಈ ಉದ್ಯಮಿಗಳ ಮನೆ ಮೇಲೆ  ಇನ್‍ಕಂಟ್ಯಾಕ್ಸ್ ನವರು ಏನು ದಾಳಿ ನಡೆಸುತ್ತಿದ್ದಾರೆ, ಅದು ಭ್ರಷ್ಟಾಚಾರದ ಹೋರಾಟ. ಅದರಿಂದ ವಿರೋಧ ಪಕ್ಷಗಳು ಗಾಬರಿ ಆಗುತ್ತಿದ್ದಾರೆ. ಒಂದು ಕಡೆ ಭ್ರಷ್ಟಾಚಾರದ ಹೋರಾಟ, ಇನ್ನೊಂದು ಕಡೆ ತಾನೇ ದೇಶಭಕ್ತ, ತನ್ನ ಪರಿವಾರದವೇ ದೇಶಭಕ್ತರು ಎಂಬ ತಪ್ಪು ಸಂದೇಶವನ್ನು ಜನರಿಗೆ ಕೊಡುವ ಮೂಲಕ ಜನರ ದಾರಿ ತಪ್ಪಿಸುವ ಬುದ್ಧಿಪೂರ್ವಕ ಪ್ರಯತ್ನವನ್ನು ನರೇಂದ್ರ ಮೋದಿಯವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಹ ಸುಳ್ಳುಗಳು. ಒಂದು ದೇಶ ಅಂದ್ರೆ ಏನು? ನರೇಂದ್ರ  ಮೋದಿಯ ಮಾತಿನ ಪ್ರಕಾರವೇ ದೇಶವೆಂದರೆ ನರೇಂದ್ರ ಮೋದಿ, ಮೋದಿ ಬಿಟ್ಟು ದೇಶ ಇಲ್ಲ.  ನರೇಂದ್ರ ಮೋದಿಯನ್ನ  ಟೀಕೆ ಮಾಡುವ ಎಲ್ಲರೂ ದೇಶದ್ರೋಹಿಗಳು. ಇಂತಹ ಒಂದು ಸಂದೇಶವನ್ನು ಆತ ಜನಕ್ಕೆ ಕೊಡುತ್ತಿದ್ದಾನೆ.
ದೇಶಕ್ಕಾಗಿ ನಾವು ಎಂಬ ಆಂದೋಲನ ನಡೆಸುತ್ತಿರುವವರ ಪೈಕಿ ನಾನೂ ಒಬ್ಬ. ನಮಗೆ ದೇಶ ಅಂದರೆ, ಈ ಭಾರತದ ಭೂಪಟದಲ್ಲಿ ವಿಶಾಲವಾದ ಭೂ ಪ್ರದೇಶ. ಅಲ್ಲಿ ಇರುವಂತ ವೈವಿಧ್ಯಮಯವಾದಂತಹ ಜನರ ಸೌಹಾರ್ದಯುತವಾದಂತಹ ಬದುಕು. ವೈವಿಧ್ಯಮಯವಾದ ಜೀವ ಸಂಸ್ಕøತಿ. ಇವೆಲ್ಲವೂ ಸೇರಿ ನಮಗೆ ದೇಶ.  ಅವೆಲ್ಲವನ್ನೂ ಉಳಿಸಿಕೊಳ್ಳಲಿಕ್ಕಾಗಿ ದೇಶಕ್ಕಾಗಿ ನಾವು ಜನಾಂದೋಲನವನ್ನು ಮಾಡುತ್ತಿದ್ದೇವೆ. ನಾವು ಯಾವುದೇ ಕ್ಷುಲ್ಲಕವಾದಂತಹ ಚಳವಳಿಯೂ ಅಲ್ಲ. .. .. ಸ್ವಾರ್ಥದಿಂದ ಮಾಡುತ್ತಿರುವ ಚಳವಳಿಯೂ ಅಲ್ಲ. ಇದು ನಮ್ಮ ನಿಜವಾದ ದೇಶವನ್ನು ಉಳಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಚಳವಳಿ ಇದಾಗಿದೆ. ನಮ್ಮ ದೇಶದ ಪರಿಕಲ್ಪನೆ ನರೇಂದ್ರ ಮೋದಿ ದೇಶದ ಪರಿಕಲ್ಪನೆಯಂತಲ್ಲ. ನಮ್ಮ ದೃಷ್ಟಿಯಲ್ಲಿ ಅತ್ಯಂತ ದೇಶದ್ರೋಹಿಗಳು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ  ಮತ್ತು ಅವನ ಪರಿವಾರದವರು.
ನಮಗೆ ಮಹಾತ್ಮ ಗಾಂಧಿ ದೇಶದ ಶ್ರೇಷ್ಠ ಮಾರ್ಗದರ್ಶಕ. ನರೇಂದ್ರ ಮೋದಿಗೆ ಮಹಾತ್ಮ ಗಾಂಧಿಯನ್ನು ಕೊಂದವರು ದೇಶಭಕ್ತರು. ನಮಗೆ ಮಹಾತ್ಮ ಗಾಂಧಿ ದೇಶಭಕ್ತ. ನಮಗೆ ವಿವೇಕಾನಂದರ ದೇಶ ಬೇಕು. ನರೇಂದ್ರ ಮೋದಿಗೆ ಗೋಡ್ಸೆಯ ದೇಶ ಬೇಕು. ನಮಗೆ ನಾರಾಯಣ ಗುರು, ಮಹಾತ್ಮ ಫುಲೆ, ಬಾಬಾ ಸಾಹೆಬ್ ಅಂಬೇಢ್ಕರ್, ಗೌತಮ ಬುದ್ದ ಇಂತಹ ಮಹಾ ಮಾನವರ ಜೀವಪರ ವ್ಯಕ್ತಿಗಳ ದೇಶ ಬೇಕು. ಈ ದೇಶವನ್ನು ಉಳಿಸಲಿಕ್ಕೆ ನಾವು ದೇಶಭಕ್ತಿಯ ಚಳವಳಿಯನ್ನು ನಾವು ಮಾಡುತ್ತಿದ್ದೇವೆ.
ಆದರೆ ಈ ದೇಶವನ್ನ ಗಾಂಧಿಯವರನ್ನು ಕೊಂದವರ ದೇಶ ಮಾಡಬೇಕು. ಗೌರಿ ಲಂಕೇಶರನ್ನು  ಕೊಂದವರ ದೇಶವನ್ನಾಗಿ ಮಾಡಬೇಕು, ಹಾಗೆಯೇ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರನ್ನ ಕೊಂದವರ  ರೀತಿಯ ದೇಶ ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ ಅನ್ನಿಸುತ್ತೆ. ಇಂದು ನಮ್ಮ ದೇಶದ ಮುಂದೆ  ಇಂತ ಅಪಾಯದಿಂದ ಇಡೀ ದೇಶವನ್ನು ಪಾರುಮಾಡುವಂತಹ ಹೊಣೆಗಾರಿಕೆ  ಬೇರೆ ಬೇರೆ ರಾಜಕೀಯ ಪಕ್ಷಗಳಿಗಿಂತ  ಹೆಚ್ಚಾಗಿ ನಮ್ಮಂತೆ ಚಿಂತನೆ ಮಾಡುವವರ ಹೆಗಲ ಮೇಲೆ ಹೆಚ್ಚಾಗಿ ಇದೆ. ಅದರಿಂದಾಗಿ ನಾವು ವಿಚಲಿತರಾಗಿದ್ದೇವೆ.
ಚುನಾವಣೆಯ ಸಂಧರ್ಭದಲ್ಲಿ ನಡೆಯುತ್ತಿರುವ ಐಟಿ ದಾಳಿಗಳನ್ನೇ  ಭ್ರಷ್ಟಾಚಾರಿ ವಿರೋಧಿ ಹೋರಾಟ ಮತ್ತು ತಾನೇ ಮಾಡಿಸುತ್ತಿದ್ದೇನೆ ಎಂದು ಪರೋಕ್ಷವಾಗಿ  ಹೇಳುತ್ತಿದ್ದಾರೆ. ಐಟಿ ಸಂಸ್ಥೆ ಇಲಾಖೆಯ ವತಿಯಿಂದ ಅದರ ಪಾಡಿಗೆ ಅದರ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಇದನ್ನು ವಿರೋಧಿಸಿದವರು ದೇಶದ್ರೋಹಿಗಳು. ನರೇಂದ್ರ ಮೋದಿ ಈ ದಾಳಿಗಳನ್ನು ಮಾಡಿಸುತ್ತಿರುವುದಾದರೂ ಏಕೆ. ವಿರೋಧ ಪಕ್ಷಗಳಿಗೆ ಚುನಾವಣಾ ಪ್ರಚಾರ ಮಾಡಲು ಸಾಧ್ಯವಾಗದಂತಹ ಏಕಮಾತ್ರ ಬಿಕ್ಕಟ್ಟು ನಿರ್ಮಾಣ ಮಾಡುವ ಏಕಮಾತ್ರ ಉದ್ದೇಶದಿಂದ ಈ ದಾಳಿಗಳನ್ನು ನಡೆಸುತ್ತಿದ್ದಾರೆ. ಇಂತಹ ದಾಳಿಗಳನ್ನು ಚುನಾವಣೆಗೆ ಮೊದಲು ಮುಗಿಸಬಹುದಿತ್ತು. ಚುನಾವಣೆಯ ನಂತರದ ಇಪ್ಪತ್ತು ದಿನ ಕಾದಿದ್ದರೂ ಆಕಾಶವೇನೂ ಕೆಳಗೆ ಬೀಳುತ್ತಿರಲಿಲ್ಲ. ಚುನಾವಣೆಯಲ್ಲಿ ಹಣದ ದುವ್ರ್ಯವಹಾರಗಳು ನಡೆಯುತ್ತಿದ್ದರೆ, ಚುನಾವಣಾ ಆಯೋಗ ದಾಳಿಗಳನ್ನು ಮಾಡಬಹುದಿತ್ತು. ಇನ್‍ಕಂ ಟ್ಯಾಕ್ಸ್‍ನವರು ಬರುವ ಅವಶ್ಯಕತೆ ಏನಿತ್ತು. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ. ಇದು  ಭ್ರಷ್ಟಾಚಾರ ತಡೆಯುವುದಲ್ಲ. ಆದರೆ ಮೋದಿ ಯತಾ ಪ್ರಕಾರ ಇದನ್ನು ಭ್ರಷ್ಟಾಚಾರ ವಿರೋಧಿ ಚಳವಳಿ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ನಮ್ಮ ದೇಶದ ಜನ ಅಷ್ಟು ದಡ್ಡರಲ್ಲ. ಜನರ ಮೇಲೆ ಭರವಸೆ ಇಟ್ಟೇ ನಾವು ದೇಶಕ್ಕಾಗಿ ನಾವು ಚಳವಳಿಯನ್ನು ಮುಂದುವರೆಸುತ್ತೇವೆ. ಈ ರೀತಿ ಯೋಚನೆ ಮಾಡುವಂತ ಇಡೀ ದೇಶದ ಪ್ರಗತಿಪರ ಮತದಾರರು, ಈ ಚುನಾವಣೆಯಲ್ಲಿ ತಮ್ಮಿಂದ ತಾವೇ ಇದನ್ನು ಅರಿತು ತನು, ಮನ, ಧನಗಳನ್ನು ಅರ್ಪಿಸಿ ಈ ನರೇಂದ್ರ ಮೋದಿಯಂತಹ ದೇಶದ್ರೋಹಿ ಕೋಮು ಶಕ್ತಿಗಳಿಂದ  ದೇಶವನ್ನು ಈ ಚುನಾವಣೆಯಲ್ಲಿ ಪಾರು ಮಾಡುವಂತಹ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾನು ಪ್ರಾರ್ಥನೆ ಮಾಡುತ್ತೇನೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...