Homeಕರ್ನಾಟಕನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ - ಎ.ಕೆ.ಸುಬ್ಬಯ್ಯ

ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ – ಎ.ಕೆ.ಸುಬ್ಬಯ್ಯ

- Advertisement -
ಎ.ಕೆ.ಸುಬ್ಬಯ್ಯ, ಹಿರಿಯ ಚಿಂತಕರು. 
ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ.
ಮೋದಿಯವರು ಮೊನ್ನೆ ಬೆಂಗಳೂರಿನ ಭಾಷಣದಲ್ಲಿ ಎರಡು ತಪ್ಪು ಸಂದೇಶಗಳನ್ನು ಕೊಡುವುದಕ್ಕೆ ಬುದ್ಧಿಪೂರ್ವಕ ಪ್ರಯತ್ನವನ್ನು ಮಾಡಿದ್ದಾರೆ. ಮೊದಲನೆಯದು ಮೋದಿಯನ್ನು ಟೀಕೆ ಮಾಡುವವರೆಲ್ಲರೂ ದೇಶ ದ್ರೋಹಿಗಳು. ಅವರು ದೇಶದ ವಿರುದ್ಧ ಮಾತಾಡುತ್ತಾರೆ. ಎರಡನೆಯದು ತನ್ನ ಭ್ರಷ್ಟಾಚಾರದ ಹೋರಾಟ. ಈ ಉದ್ಯಮಿಗಳ ಮನೆ ಮೇಲೆ  ಇನ್‍ಕಂಟ್ಯಾಕ್ಸ್ ನವರು ಏನು ದಾಳಿ ನಡೆಸುತ್ತಿದ್ದಾರೆ, ಅದು ಭ್ರಷ್ಟಾಚಾರದ ಹೋರಾಟ. ಅದರಿಂದ ವಿರೋಧ ಪಕ್ಷಗಳು ಗಾಬರಿ ಆಗುತ್ತಿದ್ದಾರೆ. ಒಂದು ಕಡೆ ಭ್ರಷ್ಟಾಚಾರದ ಹೋರಾಟ, ಇನ್ನೊಂದು ಕಡೆ ತಾನೇ ದೇಶಭಕ್ತ, ತನ್ನ ಪರಿವಾರದವೇ ದೇಶಭಕ್ತರು ಎಂಬ ತಪ್ಪು ಸಂದೇಶವನ್ನು ಜನರಿಗೆ ಕೊಡುವ ಮೂಲಕ ಜನರ ದಾರಿ ತಪ್ಪಿಸುವ ಬುದ್ಧಿಪೂರ್ವಕ ಪ್ರಯತ್ನವನ್ನು ನರೇಂದ್ರ ಮೋದಿಯವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಹ ಸುಳ್ಳುಗಳು. ಒಂದು ದೇಶ ಅಂದ್ರೆ ಏನು? ನರೇಂದ್ರ  ಮೋದಿಯ ಮಾತಿನ ಪ್ರಕಾರವೇ ದೇಶವೆಂದರೆ ನರೇಂದ್ರ ಮೋದಿ, ಮೋದಿ ಬಿಟ್ಟು ದೇಶ ಇಲ್ಲ.  ನರೇಂದ್ರ ಮೋದಿಯನ್ನ  ಟೀಕೆ ಮಾಡುವ ಎಲ್ಲರೂ ದೇಶದ್ರೋಹಿಗಳು. ಇಂತಹ ಒಂದು ಸಂದೇಶವನ್ನು ಆತ ಜನಕ್ಕೆ ಕೊಡುತ್ತಿದ್ದಾನೆ.
ದೇಶಕ್ಕಾಗಿ ನಾವು ಎಂಬ ಆಂದೋಲನ ನಡೆಸುತ್ತಿರುವವರ ಪೈಕಿ ನಾನೂ ಒಬ್ಬ. ನಮಗೆ ದೇಶ ಅಂದರೆ, ಈ ಭಾರತದ ಭೂಪಟದಲ್ಲಿ ವಿಶಾಲವಾದ ಭೂ ಪ್ರದೇಶ. ಅಲ್ಲಿ ಇರುವಂತ ವೈವಿಧ್ಯಮಯವಾದಂತಹ ಜನರ ಸೌಹಾರ್ದಯುತವಾದಂತಹ ಬದುಕು. ವೈವಿಧ್ಯಮಯವಾದ ಜೀವ ಸಂಸ್ಕøತಿ. ಇವೆಲ್ಲವೂ ಸೇರಿ ನಮಗೆ ದೇಶ.  ಅವೆಲ್ಲವನ್ನೂ ಉಳಿಸಿಕೊಳ್ಳಲಿಕ್ಕಾಗಿ ದೇಶಕ್ಕಾಗಿ ನಾವು ಜನಾಂದೋಲನವನ್ನು ಮಾಡುತ್ತಿದ್ದೇವೆ. ನಾವು ಯಾವುದೇ ಕ್ಷುಲ್ಲಕವಾದಂತಹ ಚಳವಳಿಯೂ ಅಲ್ಲ. .. .. ಸ್ವಾರ್ಥದಿಂದ ಮಾಡುತ್ತಿರುವ ಚಳವಳಿಯೂ ಅಲ್ಲ. ಇದು ನಮ್ಮ ನಿಜವಾದ ದೇಶವನ್ನು ಉಳಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಚಳವಳಿ ಇದಾಗಿದೆ. ನಮ್ಮ ದೇಶದ ಪರಿಕಲ್ಪನೆ ನರೇಂದ್ರ ಮೋದಿ ದೇಶದ ಪರಿಕಲ್ಪನೆಯಂತಲ್ಲ. ನಮ್ಮ ದೃಷ್ಟಿಯಲ್ಲಿ ಅತ್ಯಂತ ದೇಶದ್ರೋಹಿಗಳು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ  ಮತ್ತು ಅವನ ಪರಿವಾರದವರು.
ನಮಗೆ ಮಹಾತ್ಮ ಗಾಂಧಿ ದೇಶದ ಶ್ರೇಷ್ಠ ಮಾರ್ಗದರ್ಶಕ. ನರೇಂದ್ರ ಮೋದಿಗೆ ಮಹಾತ್ಮ ಗಾಂಧಿಯನ್ನು ಕೊಂದವರು ದೇಶಭಕ್ತರು. ನಮಗೆ ಮಹಾತ್ಮ ಗಾಂಧಿ ದೇಶಭಕ್ತ. ನಮಗೆ ವಿವೇಕಾನಂದರ ದೇಶ ಬೇಕು. ನರೇಂದ್ರ ಮೋದಿಗೆ ಗೋಡ್ಸೆಯ ದೇಶ ಬೇಕು. ನಮಗೆ ನಾರಾಯಣ ಗುರು, ಮಹಾತ್ಮ ಫುಲೆ, ಬಾಬಾ ಸಾಹೆಬ್ ಅಂಬೇಢ್ಕರ್, ಗೌತಮ ಬುದ್ದ ಇಂತಹ ಮಹಾ ಮಾನವರ ಜೀವಪರ ವ್ಯಕ್ತಿಗಳ ದೇಶ ಬೇಕು. ಈ ದೇಶವನ್ನು ಉಳಿಸಲಿಕ್ಕೆ ನಾವು ದೇಶಭಕ್ತಿಯ ಚಳವಳಿಯನ್ನು ನಾವು ಮಾಡುತ್ತಿದ್ದೇವೆ.
ಆದರೆ ಈ ದೇಶವನ್ನ ಗಾಂಧಿಯವರನ್ನು ಕೊಂದವರ ದೇಶ ಮಾಡಬೇಕು. ಗೌರಿ ಲಂಕೇಶರನ್ನು  ಕೊಂದವರ ದೇಶವನ್ನಾಗಿ ಮಾಡಬೇಕು, ಹಾಗೆಯೇ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರನ್ನ ಕೊಂದವರ  ರೀತಿಯ ದೇಶ ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ ಅನ್ನಿಸುತ್ತೆ. ಇಂದು ನಮ್ಮ ದೇಶದ ಮುಂದೆ  ಇಂತ ಅಪಾಯದಿಂದ ಇಡೀ ದೇಶವನ್ನು ಪಾರುಮಾಡುವಂತಹ ಹೊಣೆಗಾರಿಕೆ  ಬೇರೆ ಬೇರೆ ರಾಜಕೀಯ ಪಕ್ಷಗಳಿಗಿಂತ  ಹೆಚ್ಚಾಗಿ ನಮ್ಮಂತೆ ಚಿಂತನೆ ಮಾಡುವವರ ಹೆಗಲ ಮೇಲೆ ಹೆಚ್ಚಾಗಿ ಇದೆ. ಅದರಿಂದಾಗಿ ನಾವು ವಿಚಲಿತರಾಗಿದ್ದೇವೆ.
ಚುನಾವಣೆಯ ಸಂಧರ್ಭದಲ್ಲಿ ನಡೆಯುತ್ತಿರುವ ಐಟಿ ದಾಳಿಗಳನ್ನೇ  ಭ್ರಷ್ಟಾಚಾರಿ ವಿರೋಧಿ ಹೋರಾಟ ಮತ್ತು ತಾನೇ ಮಾಡಿಸುತ್ತಿದ್ದೇನೆ ಎಂದು ಪರೋಕ್ಷವಾಗಿ  ಹೇಳುತ್ತಿದ್ದಾರೆ. ಐಟಿ ಸಂಸ್ಥೆ ಇಲಾಖೆಯ ವತಿಯಿಂದ ಅದರ ಪಾಡಿಗೆ ಅದರ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಇದನ್ನು ವಿರೋಧಿಸಿದವರು ದೇಶದ್ರೋಹಿಗಳು. ನರೇಂದ್ರ ಮೋದಿ ಈ ದಾಳಿಗಳನ್ನು ಮಾಡಿಸುತ್ತಿರುವುದಾದರೂ ಏಕೆ. ವಿರೋಧ ಪಕ್ಷಗಳಿಗೆ ಚುನಾವಣಾ ಪ್ರಚಾರ ಮಾಡಲು ಸಾಧ್ಯವಾಗದಂತಹ ಏಕಮಾತ್ರ ಬಿಕ್ಕಟ್ಟು ನಿರ್ಮಾಣ ಮಾಡುವ ಏಕಮಾತ್ರ ಉದ್ದೇಶದಿಂದ ಈ ದಾಳಿಗಳನ್ನು ನಡೆಸುತ್ತಿದ್ದಾರೆ. ಇಂತಹ ದಾಳಿಗಳನ್ನು ಚುನಾವಣೆಗೆ ಮೊದಲು ಮುಗಿಸಬಹುದಿತ್ತು. ಚುನಾವಣೆಯ ನಂತರದ ಇಪ್ಪತ್ತು ದಿನ ಕಾದಿದ್ದರೂ ಆಕಾಶವೇನೂ ಕೆಳಗೆ ಬೀಳುತ್ತಿರಲಿಲ್ಲ. ಚುನಾವಣೆಯಲ್ಲಿ ಹಣದ ದುವ್ರ್ಯವಹಾರಗಳು ನಡೆಯುತ್ತಿದ್ದರೆ, ಚುನಾವಣಾ ಆಯೋಗ ದಾಳಿಗಳನ್ನು ಮಾಡಬಹುದಿತ್ತು. ಇನ್‍ಕಂ ಟ್ಯಾಕ್ಸ್‍ನವರು ಬರುವ ಅವಶ್ಯಕತೆ ಏನಿತ್ತು. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ. ಇದು  ಭ್ರಷ್ಟಾಚಾರ ತಡೆಯುವುದಲ್ಲ. ಆದರೆ ಮೋದಿ ಯತಾ ಪ್ರಕಾರ ಇದನ್ನು ಭ್ರಷ್ಟಾಚಾರ ವಿರೋಧಿ ಚಳವಳಿ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ನಮ್ಮ ದೇಶದ ಜನ ಅಷ್ಟು ದಡ್ಡರಲ್ಲ. ಜನರ ಮೇಲೆ ಭರವಸೆ ಇಟ್ಟೇ ನಾವು ದೇಶಕ್ಕಾಗಿ ನಾವು ಚಳವಳಿಯನ್ನು ಮುಂದುವರೆಸುತ್ತೇವೆ. ಈ ರೀತಿ ಯೋಚನೆ ಮಾಡುವಂತ ಇಡೀ ದೇಶದ ಪ್ರಗತಿಪರ ಮತದಾರರು, ಈ ಚುನಾವಣೆಯಲ್ಲಿ ತಮ್ಮಿಂದ ತಾವೇ ಇದನ್ನು ಅರಿತು ತನು, ಮನ, ಧನಗಳನ್ನು ಅರ್ಪಿಸಿ ಈ ನರೇಂದ್ರ ಮೋದಿಯಂತಹ ದೇಶದ್ರೋಹಿ ಕೋಮು ಶಕ್ತಿಗಳಿಂದ  ದೇಶವನ್ನು ಈ ಚುನಾವಣೆಯಲ್ಲಿ ಪಾರು ಮಾಡುವಂತಹ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾನು ಪ್ರಾರ್ಥನೆ ಮಾಡುತ್ತೇನೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...