Homeಕರ್ನಾಟಕನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ - ಎ.ಕೆ.ಸುಬ್ಬಯ್ಯ

ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ – ಎ.ಕೆ.ಸುಬ್ಬಯ್ಯ

- Advertisement -
ಎ.ಕೆ.ಸುಬ್ಬಯ್ಯ, ಹಿರಿಯ ಚಿಂತಕರು. 
ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ.
ಮೋದಿಯವರು ಮೊನ್ನೆ ಬೆಂಗಳೂರಿನ ಭಾಷಣದಲ್ಲಿ ಎರಡು ತಪ್ಪು ಸಂದೇಶಗಳನ್ನು ಕೊಡುವುದಕ್ಕೆ ಬುದ್ಧಿಪೂರ್ವಕ ಪ್ರಯತ್ನವನ್ನು ಮಾಡಿದ್ದಾರೆ. ಮೊದಲನೆಯದು ಮೋದಿಯನ್ನು ಟೀಕೆ ಮಾಡುವವರೆಲ್ಲರೂ ದೇಶ ದ್ರೋಹಿಗಳು. ಅವರು ದೇಶದ ವಿರುದ್ಧ ಮಾತಾಡುತ್ತಾರೆ. ಎರಡನೆಯದು ತನ್ನ ಭ್ರಷ್ಟಾಚಾರದ ಹೋರಾಟ. ಈ ಉದ್ಯಮಿಗಳ ಮನೆ ಮೇಲೆ  ಇನ್‍ಕಂಟ್ಯಾಕ್ಸ್ ನವರು ಏನು ದಾಳಿ ನಡೆಸುತ್ತಿದ್ದಾರೆ, ಅದು ಭ್ರಷ್ಟಾಚಾರದ ಹೋರಾಟ. ಅದರಿಂದ ವಿರೋಧ ಪಕ್ಷಗಳು ಗಾಬರಿ ಆಗುತ್ತಿದ್ದಾರೆ. ಒಂದು ಕಡೆ ಭ್ರಷ್ಟಾಚಾರದ ಹೋರಾಟ, ಇನ್ನೊಂದು ಕಡೆ ತಾನೇ ದೇಶಭಕ್ತ, ತನ್ನ ಪರಿವಾರದವೇ ದೇಶಭಕ್ತರು ಎಂಬ ತಪ್ಪು ಸಂದೇಶವನ್ನು ಜನರಿಗೆ ಕೊಡುವ ಮೂಲಕ ಜನರ ದಾರಿ ತಪ್ಪಿಸುವ ಬುದ್ಧಿಪೂರ್ವಕ ಪ್ರಯತ್ನವನ್ನು ನರೇಂದ್ರ ಮೋದಿಯವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಹ ಸುಳ್ಳುಗಳು. ಒಂದು ದೇಶ ಅಂದ್ರೆ ಏನು? ನರೇಂದ್ರ  ಮೋದಿಯ ಮಾತಿನ ಪ್ರಕಾರವೇ ದೇಶವೆಂದರೆ ನರೇಂದ್ರ ಮೋದಿ, ಮೋದಿ ಬಿಟ್ಟು ದೇಶ ಇಲ್ಲ.  ನರೇಂದ್ರ ಮೋದಿಯನ್ನ  ಟೀಕೆ ಮಾಡುವ ಎಲ್ಲರೂ ದೇಶದ್ರೋಹಿಗಳು. ಇಂತಹ ಒಂದು ಸಂದೇಶವನ್ನು ಆತ ಜನಕ್ಕೆ ಕೊಡುತ್ತಿದ್ದಾನೆ.
ದೇಶಕ್ಕಾಗಿ ನಾವು ಎಂಬ ಆಂದೋಲನ ನಡೆಸುತ್ತಿರುವವರ ಪೈಕಿ ನಾನೂ ಒಬ್ಬ. ನಮಗೆ ದೇಶ ಅಂದರೆ, ಈ ಭಾರತದ ಭೂಪಟದಲ್ಲಿ ವಿಶಾಲವಾದ ಭೂ ಪ್ರದೇಶ. ಅಲ್ಲಿ ಇರುವಂತ ವೈವಿಧ್ಯಮಯವಾದಂತಹ ಜನರ ಸೌಹಾರ್ದಯುತವಾದಂತಹ ಬದುಕು. ವೈವಿಧ್ಯಮಯವಾದ ಜೀವ ಸಂಸ್ಕøತಿ. ಇವೆಲ್ಲವೂ ಸೇರಿ ನಮಗೆ ದೇಶ.  ಅವೆಲ್ಲವನ್ನೂ ಉಳಿಸಿಕೊಳ್ಳಲಿಕ್ಕಾಗಿ ದೇಶಕ್ಕಾಗಿ ನಾವು ಜನಾಂದೋಲನವನ್ನು ಮಾಡುತ್ತಿದ್ದೇವೆ. ನಾವು ಯಾವುದೇ ಕ್ಷುಲ್ಲಕವಾದಂತಹ ಚಳವಳಿಯೂ ಅಲ್ಲ. .. .. ಸ್ವಾರ್ಥದಿಂದ ಮಾಡುತ್ತಿರುವ ಚಳವಳಿಯೂ ಅಲ್ಲ. ಇದು ನಮ್ಮ ನಿಜವಾದ ದೇಶವನ್ನು ಉಳಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಚಳವಳಿ ಇದಾಗಿದೆ. ನಮ್ಮ ದೇಶದ ಪರಿಕಲ್ಪನೆ ನರೇಂದ್ರ ಮೋದಿ ದೇಶದ ಪರಿಕಲ್ಪನೆಯಂತಲ್ಲ. ನಮ್ಮ ದೃಷ್ಟಿಯಲ್ಲಿ ಅತ್ಯಂತ ದೇಶದ್ರೋಹಿಗಳು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ  ಮತ್ತು ಅವನ ಪರಿವಾರದವರು.
ನಮಗೆ ಮಹಾತ್ಮ ಗಾಂಧಿ ದೇಶದ ಶ್ರೇಷ್ಠ ಮಾರ್ಗದರ್ಶಕ. ನರೇಂದ್ರ ಮೋದಿಗೆ ಮಹಾತ್ಮ ಗಾಂಧಿಯನ್ನು ಕೊಂದವರು ದೇಶಭಕ್ತರು. ನಮಗೆ ಮಹಾತ್ಮ ಗಾಂಧಿ ದೇಶಭಕ್ತ. ನಮಗೆ ವಿವೇಕಾನಂದರ ದೇಶ ಬೇಕು. ನರೇಂದ್ರ ಮೋದಿಗೆ ಗೋಡ್ಸೆಯ ದೇಶ ಬೇಕು. ನಮಗೆ ನಾರಾಯಣ ಗುರು, ಮಹಾತ್ಮ ಫುಲೆ, ಬಾಬಾ ಸಾಹೆಬ್ ಅಂಬೇಢ್ಕರ್, ಗೌತಮ ಬುದ್ದ ಇಂತಹ ಮಹಾ ಮಾನವರ ಜೀವಪರ ವ್ಯಕ್ತಿಗಳ ದೇಶ ಬೇಕು. ಈ ದೇಶವನ್ನು ಉಳಿಸಲಿಕ್ಕೆ ನಾವು ದೇಶಭಕ್ತಿಯ ಚಳವಳಿಯನ್ನು ನಾವು ಮಾಡುತ್ತಿದ್ದೇವೆ.
ಆದರೆ ಈ ದೇಶವನ್ನ ಗಾಂಧಿಯವರನ್ನು ಕೊಂದವರ ದೇಶ ಮಾಡಬೇಕು. ಗೌರಿ ಲಂಕೇಶರನ್ನು  ಕೊಂದವರ ದೇಶವನ್ನಾಗಿ ಮಾಡಬೇಕು, ಹಾಗೆಯೇ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರನ್ನ ಕೊಂದವರ  ರೀತಿಯ ದೇಶ ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ ಅನ್ನಿಸುತ್ತೆ. ಇಂದು ನಮ್ಮ ದೇಶದ ಮುಂದೆ  ಇಂತ ಅಪಾಯದಿಂದ ಇಡೀ ದೇಶವನ್ನು ಪಾರುಮಾಡುವಂತಹ ಹೊಣೆಗಾರಿಕೆ  ಬೇರೆ ಬೇರೆ ರಾಜಕೀಯ ಪಕ್ಷಗಳಿಗಿಂತ  ಹೆಚ್ಚಾಗಿ ನಮ್ಮಂತೆ ಚಿಂತನೆ ಮಾಡುವವರ ಹೆಗಲ ಮೇಲೆ ಹೆಚ್ಚಾಗಿ ಇದೆ. ಅದರಿಂದಾಗಿ ನಾವು ವಿಚಲಿತರಾಗಿದ್ದೇವೆ.
ಚುನಾವಣೆಯ ಸಂಧರ್ಭದಲ್ಲಿ ನಡೆಯುತ್ತಿರುವ ಐಟಿ ದಾಳಿಗಳನ್ನೇ  ಭ್ರಷ್ಟಾಚಾರಿ ವಿರೋಧಿ ಹೋರಾಟ ಮತ್ತು ತಾನೇ ಮಾಡಿಸುತ್ತಿದ್ದೇನೆ ಎಂದು ಪರೋಕ್ಷವಾಗಿ  ಹೇಳುತ್ತಿದ್ದಾರೆ. ಐಟಿ ಸಂಸ್ಥೆ ಇಲಾಖೆಯ ವತಿಯಿಂದ ಅದರ ಪಾಡಿಗೆ ಅದರ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಇದನ್ನು ವಿರೋಧಿಸಿದವರು ದೇಶದ್ರೋಹಿಗಳು. ನರೇಂದ್ರ ಮೋದಿ ಈ ದಾಳಿಗಳನ್ನು ಮಾಡಿಸುತ್ತಿರುವುದಾದರೂ ಏಕೆ. ವಿರೋಧ ಪಕ್ಷಗಳಿಗೆ ಚುನಾವಣಾ ಪ್ರಚಾರ ಮಾಡಲು ಸಾಧ್ಯವಾಗದಂತಹ ಏಕಮಾತ್ರ ಬಿಕ್ಕಟ್ಟು ನಿರ್ಮಾಣ ಮಾಡುವ ಏಕಮಾತ್ರ ಉದ್ದೇಶದಿಂದ ಈ ದಾಳಿಗಳನ್ನು ನಡೆಸುತ್ತಿದ್ದಾರೆ. ಇಂತಹ ದಾಳಿಗಳನ್ನು ಚುನಾವಣೆಗೆ ಮೊದಲು ಮುಗಿಸಬಹುದಿತ್ತು. ಚುನಾವಣೆಯ ನಂತರದ ಇಪ್ಪತ್ತು ದಿನ ಕಾದಿದ್ದರೂ ಆಕಾಶವೇನೂ ಕೆಳಗೆ ಬೀಳುತ್ತಿರಲಿಲ್ಲ. ಚುನಾವಣೆಯಲ್ಲಿ ಹಣದ ದುವ್ರ್ಯವಹಾರಗಳು ನಡೆಯುತ್ತಿದ್ದರೆ, ಚುನಾವಣಾ ಆಯೋಗ ದಾಳಿಗಳನ್ನು ಮಾಡಬಹುದಿತ್ತು. ಇನ್‍ಕಂ ಟ್ಯಾಕ್ಸ್‍ನವರು ಬರುವ ಅವಶ್ಯಕತೆ ಏನಿತ್ತು. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ. ಇದು  ಭ್ರಷ್ಟಾಚಾರ ತಡೆಯುವುದಲ್ಲ. ಆದರೆ ಮೋದಿ ಯತಾ ಪ್ರಕಾರ ಇದನ್ನು ಭ್ರಷ್ಟಾಚಾರ ವಿರೋಧಿ ಚಳವಳಿ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ನಮ್ಮ ದೇಶದ ಜನ ಅಷ್ಟು ದಡ್ಡರಲ್ಲ. ಜನರ ಮೇಲೆ ಭರವಸೆ ಇಟ್ಟೇ ನಾವು ದೇಶಕ್ಕಾಗಿ ನಾವು ಚಳವಳಿಯನ್ನು ಮುಂದುವರೆಸುತ್ತೇವೆ. ಈ ರೀತಿ ಯೋಚನೆ ಮಾಡುವಂತ ಇಡೀ ದೇಶದ ಪ್ರಗತಿಪರ ಮತದಾರರು, ಈ ಚುನಾವಣೆಯಲ್ಲಿ ತಮ್ಮಿಂದ ತಾವೇ ಇದನ್ನು ಅರಿತು ತನು, ಮನ, ಧನಗಳನ್ನು ಅರ್ಪಿಸಿ ಈ ನರೇಂದ್ರ ಮೋದಿಯಂತಹ ದೇಶದ್ರೋಹಿ ಕೋಮು ಶಕ್ತಿಗಳಿಂದ  ದೇಶವನ್ನು ಈ ಚುನಾವಣೆಯಲ್ಲಿ ಪಾರು ಮಾಡುವಂತಹ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾನು ಪ್ರಾರ್ಥನೆ ಮಾಡುತ್ತೇನೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆ: ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಧಾನದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕರೆದಿದ್ದ ಮಹತ್ವದ ಪತ್ರಿಕಾಗೋಷ್ಠಿ ಆಗಸ್ಟ್ 14, 2026ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ...

‘ನಲ್ಸಾರ್’ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

ಹೈದರಾಬಾದ್‌ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದ ಪದವೀಧರರ ಸನ್ನದು (ಎನ್‌ರೋಲ್‌ಮೆಂಟ್) ನೋಂದಣಿಯನ್ನು ಅಮಾನತಿನಲ್ಲಿಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ವಿವಾದಾತ್ಮಕ ನಿರ್ದೇಶನದ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,...

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ: ಯೋಗಿ ಆದಿತ್ಯನಾಥ್ ಸೇರಿ 8 ಅಧಿಕಾರಿಗಳ ನಿರ್ಬಂಧಕ್ಕೆ ಕೆನಡಾ ಮಾನವ ಹಕ್ಕುಗಳ ಸಂಸ್ಥೆ ಆಗ್ರಹ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ರಾಜ್ಯ ಬೆಂಬಲಿತ ದೌರ್ಜನ್ಯಗಳನ್ನು ಖಂಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಂಟು ಪ್ರಮುಖ...

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು...

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ...

SIR: 62 ವರ್ಷದ ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಪಟ್ಟಿ ಮಾಡಿದ ಆಯೋಗದ ಕುತಂತ್ರ ಬಯಲು

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು...

‘ಸಿದ್ದಾರ್ಥ ವಿಹಾರ ಟ್ರಸ್ಟ್’ ನ ದಾಖಲೆ ನೀಡುತ್ತೇನೆ: ಆರ್‌ಎಸ್‌ಎಸ್, ರಾಮಮಂದಿರದ ಲೆಕ್ಕ ನೀಡಲು ಸಿದ್ಧವಿದ್ದೀರಾ?: ಬಿಜೆಪಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್‌’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ...

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು...

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...