Homeಮುಖಪುಟನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

- Advertisement -
- Advertisement -

| ಎ.ಕೆ.ಸುಬ್ಬಯ್ಯ | ಹಿರಿಯ ಚಿಂತಕರು.

ನರೇಂದ್ರ ಮೋದಿಯ ವ್ಯಕ್ತಿಚಿತ್ರದ ಎದುರಾಗಿ ರಾಹುಲ್ ಗಾಂಧಿಯನ್ನು ನಿಲ್ಲಿಸೋಣ. ರಾಹುಲ್ ಗಾಂಧಿಯನ್ನು ನರೇಂದ್ರ ಮೋದಿಗಿಂತ ಕೆಟ್ಟವನು ಎಂದು ಹೇಳಲು ಸಾಧ್ಯವೇ ಇಲ್ಲ. ಅಥವಾ ನರೇಂದ್ರ ಮೋದಿ ರಾಹುಲ್ ಗಾಂಧಿಯಷ್ಟು ಒಳ್ಳೆಯವನು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ರಾಹುಲ್ ಗಾಂಧಿಯಿಂದ ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿಯಿಂದ ರಾಹುಲ್ ಗಾಂಧಿ ಆಗಲು ಸಾಧ್ಯವಿಲ್ಲ.

ನರೇಂದ್ರ ಮೋದಿಯ ಸ್ಥಾನದಲ್ಲಿ ರಾಹುಲ್ ಗಾಂಧಿ ಇದ್ದಿದ್ದರೆ ಗುಜರಾತ್ ಹತ್ಯಾಕಾಂಡ ನಡೆಯುತ್ತಿತ್ತೇ? ಅದರ ನಂತರ ಸಿಬಿಐ ಅನ್ನು ವಶ ಮಾಡಿಕೊಂಡು ಅದರ ಮೂಲಕ ಕ್ರಿಮಿನಲ್‍ಗಳನ್ನೆಲ್ಲಾ ಪಾರು ಮಾಡುವ ಮಟ್ಟಕ್ಕೆ ರಾಹುಲ್ ಗಾಂಧಿ ಹೋಗುತ್ತಿದ್ದರಾ? ಯಾವ ಕಾರಣದಿಂದಲೂ, ಯಾವ ದೃಷ್ಟಿಕೋನದಿಂದಲೂ ನರೇಂದ್ರ ಮೋದಿಯಷ್ಟು ದುಷ್ಟತನದಿಂದ ಕೂಡಿದ, ಕ್ರೋಧ, ಅಸೂಯೆ, ಪ್ರತಿಕಾರ ಮನೋಭಾವನೆಯಿಂದ ಕೂಡಿದ ಒಬ್ಬ ವ್ಯಕ್ತಿ ಆಗಲು ರಾಹುಲ್ ಗಾಂಧಿಗೆ ಸಾಧ್ಯವೇ ಇಲ್ಲ.

ರಾಹುಲ್ ಗಾಂಧಿ ಎಂದೊಡನೆ ಕುಟುಂಬ ರಾಜಕಾರಣ, ಅಪ್ಪು, ಪಪ್ಪು ಎಂದು ಗೇಲಿ ಮಾಡುತ್ತಾ ಆತನ ನೈತಿಕ ಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆಂದುದನ್ನು ಬಿಟ್ಟರೆ, ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಲು ಬೇರೆನೂ ಇಲ್ಲದೇ ಇದನ್ನೇ ಪದೇ ಪದೇ ಹೇಳುತ್ತಿದ್ದಾರೆ ಎಂದರೆ ಏನು ಅರ್ಥ?


ಭ್ರಷ್ಟಾಚಾರ ವಿರೋಧಿ ನರೇಂದ್ರ ಮೋದಿ ಎಂದು ಹೇಳುತ್ತಿದ್ದಾರಲ್ಲ, ರಾಫೇಲ್ ಪ್ರಕರಣದಲ್ಲಿ ಮೋದಿ ಇಂದು ಬೆತ್ತಲಾಗಿ ಬೀದಿಯಲ್ಲಿ ನಿಂತಿದ್ದಾರಲ್ಲವೇ? ದೇಶದ ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರಲ್ಲವೇ? ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ, ಈ ಹಿಂದೆ ಯುಪಿಎ ಸಂದರ್ಭದಲ್ಲಿ ಜೈಲಿಗೆ ಹೋದ ಹಲವರು ಹೊರಗೆ ಬಂದರು. ಅವರು ರಾಬರ್ಟ್ ವಾದ್ರಾ ಸೇರಿದಂತೆ ಯಾರ್ಯಾರ ಮೇಲೆ ಆರೋಪವನ್ನು ಮಾಡಿದರೋ ಅವರ್ಯಾರೂ ಜೈಲಿಗೆ ಹೋಗಲಿಲ್ಲ.

ಎಲ್ಲ ರಾಷ್ಟ್ರೀಯ ಪಕ್ಷಗಳೂ ದೇಶವನ್ನು ಆಳಿದ್ದಾರೆ. ಅಧಿಕಾರ ಅನುಭವಿಸಿದಂತಹ ಪಕ್ಷಗಳೇ ಇರುವುದು. ಇವರೆಲ್ಲರ ಪೈಕಿ ಇಡೀ ದೇಶ ಗುರುತಿಸುವಂತಹ ಒಬ್ಬ ರಾಷ್ಟ್ರ ನಾಯಕ ಅಂದ್ರೆ ಯಾರಿದಾರೆ? ಮೋದಿ, ಮೋದಿಯ ನಂತರ.. .. ರಾಹುಲ್ ಗಾಂಧಿ ಬಿಟ್ಟರೆ ಇನ್ಯಾರಾದರೂ ಕಣ್ಣಿಗೆ ಕಾಣುತ್ತಾರಾ? ಇದ್ದಾರೆ, ವಾಮಪಂಥೀಯರಿದಾರೆ. ಸದ್ಗುಣ ಸಂಪನ್ನರಿದಾರೆ. ಆದರೆ ಅವರು ಸಮಾಜದಲ್ಲಿ ಹೆಚ್ಚು ಚಲಾವಣೆ ಆಗುತ್ತಿಲ್ಲ. ಅವರು ಅವರನ್ನು ತಿದ್ದಿಕೊಂಡು, ಇಡೀ ಇಂಡಿಯಾದ ನೇತೃತ್ವವನ್ನು ತಮ್ಮದಾಗಿಸಿಕೊಳ್ಳುವಂತಹ ಪ್ರಯತ್ನವನ್ನೇ ಮಾಡುವುದಿಲ್ಲವಲ್ಲ. ಈ ರೀತಿ ನಾವು ತುಂಬ ಅಸಹಾಯಕರಾಗಿದ್ದೀವಿ. ಆ ದೃಷ್ಟಿಯಲ್ಲಿ ರಾಹುಲ್ ಗಾಂಧಿಯೇ ನಮಗೆ ಸ್ವೀಕಾರಾರ್ಹ.


ವ್ಯಕ್ತಿಚಿತ್ರವನ್ನು ತೆಗೆದುಕೊಂಡು ರಾಹುಲ್ ಗಾಂಧಿಯನ್ನು ಪದೇ ಪದೇ ಗೇಲಿ ಮಾಡೋದರ ಅರ್ಥ ರಾಹುಲ್ ಗಾಂಧಿ ಅಷ್ಟು ಸಣ್ಣವ ಅಂತಲ್ಲ. ರಾಹುಲ್ ಗಾಂಧಿಯನ್ನು ಸಣ್ಣದು ಮಾಡುವ ಪ್ರಯತ್ನ ಅದು. ಸಣ್ಣದು ಮಾಡುವುದರ ಹಿಂದೆ ಇರುವಂತದ್ದು ಭಯ, ರಾಹುಲ್ ಗಾಂಧಿಯ ಬಗ್ಗೆ ಇರುವ ಭಯ. ಇಷ್ಟೊಂದು ಸಣ್ಣ ವ್ಯಕ್ತಿಯ ಬಗ್ಗೆ ಭಯ ಏಕೆ? ಮೋದಿ ರಾಹುಲ್ ಗಾಂಧಿಯ ಭಜನೆ ಮಾಡದೇ ಯಾವುದಾದರೊಂದು ಭಾಷಣವನ್ನು ಅಂತ್ಯ ಮಾಡುತ್ತಾರಾ? ಒಬ್ಬ ಅಪ್ಪು, ಪಪ್ಪು, ಕೆಲಸಕ್ಕೆ ಬಾರದ ಸಣ್ಣ ವ್ಯಕ್ತಿಯ ಬಗ್ಗೆ ಯಾಕೆ ಭಯ ಪಡಬೇಕು? ಇದು ರಾಹುಲ್ ಗಾಂಧಿಯ ಬಗ್ಗೆ ಒಳಗೆ ಅಡಗಿಸಿಟ್ಟುಕೊಂಡಿರುವ ಭಯ. ಆದ್ದರಿಂದ ಇಡೀ ದೇಶದಲ್ಲಿ ನರೇಂದ್ರ ಮೋದಿಯ ವಿರುದ್ಧ ಗೆಲ್ಲಿಸಬೇಕಾದಂತಹ, ಸ್ವೀಕರಿಸಬೇಕಾದಂತಹ ಏಕೈಕ ವ್ಯಕ್ತಿ, ಎಲ್ಲ ಕೋನಗಳಿಂದ ರಾಹುಲ್ ಗಾಂಧೀ ಎಂದು ನನಗೆ ಅನಿಸುತ್ತದೆ.


ನಾನು ರಾಹುಲ್ ಗಾಂಧಿಯನ್ನು ಭಾರಿ ಪುರುಷೋತ್ತಮ ಎಂದು ಭಾವಿಸುತ್ತಿಲ್ಲ. ಮನುಷ್ಯನಲ್ಲಿ ಅಡಗಿರುವಂತಹ ಕೆಲವು ದೌರ್ಬಲ್ಯಗಳು ಅವನಲ್ಲಿಯೂ ಇವೆ. ಆದರೆ ನರೇಂದ್ರ ಮೋದಿಗೆ ಹೋಲಿಸಿದರೆ ರಾಹುಲ್ ಗಾಂಧಿ ಅಪರಂಜಿಯಾಗಿ ವಿಜೃಂಭಿಸುತ್ತಾನೆ. ಇದನ್ನು ಜನ ಆಳವಾಗಿ ಯೋಚನೆ ಮಾಡಿ, ಚಿಂತನೆ ಮಾಡಿ ಸರಿಕಂಡರೆ ಒಪ್ಪಿಕೊಳ್ಳಿ, ಇಲ್ಲವೆಂದರೆ ಬಿಟ್ಟುಬಿಡಿ. ಆದರೆ ಒಂದಂತೂ ನಿಜ, ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...