Homeಮುಖಪುಟಅಂತರಂಗದ ದನಿ ಇದು: 'ಚಹರೆಗಳೆಂದರೆ ಗಾಯಗಳೂ ಹೌದು' ಪುಸ್ತಕ ಲೋಕಾರ್ಪಣೆ

ಅಂತರಂಗದ ದನಿ ಇದು: ‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕ ಲೋಕಾರ್ಪಣೆ

ಪುಸ್ತಕದ ಶೀರ್ಷಿಕೆ ಬಹಳ ಅರ್ಥಗರ್ಭಿತವಾಗಿದೆ. ಚಹರೆ ಎಂದರೆ ಗುರುತಿಸುವಿಕೆ, ಅಸ್ತಿತ್ವ, ರೂಪುರೇಷೆ, ಸ್ವರೂಪ ಇತ್ಯಾದಿ ಅರ್ಥಗಳು ಬರುತ್ತವೆ. ಆದರೆ ಪ್ರಭಾಕರ್‌ರವರು ಅದಕ್ಕೆ ಗಾಯಗಳೂ ಹೌದು ಎಂಬ ಹೊಸ ಅರ್ಥವನ್ನು ನೀಡಿದ್ದಾರೆ.

- Advertisement -
- Advertisement -

ಸಮುದಾಯಗಳ ಅಧ್ಯಯನವನ್ನು ಯಾವ ಕ್ರಮದಲ್ಲಿ ನೋಡಬೇಕು, ಅದರ ಹಿನ್ನೆಲೆಯೇನು, ಚರಿತ್ರೆಯೇನು, ಸಾಂಸ್ಕೃತಿಕ ಮಹತ್ವವೇನು, ಅದರ ಅನನ್ಯತೆಯೇನು, ಅದನ್ನು ಉಳಿಸಬೇಕಿರುವ ಬಗೆಯೇನು ಎಂಬುದನ್ನು ಸಾಧ್ಯಂತವಾಗಿ ವಿವರಿಸುವ ಕುರಿತು ಮಹತ್ವ ಪುಸ್ತಕವೊಂದು ಕನ್ನಡ ಲೋಕಕ್ಕೆ ಲಭಿಸಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ ಚಿ ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವ, ಹಂಪಿ ವಿಶ್ವವಿದ್ಯಾಲಯದ ಪ್ರೊ. ಎ.ಎಸ್ ಪ್ರಭಾಕರ ಅವರ “ಚಹರೆಗಳೆಂದರೆ ಗಾಯಗಳೂ ಹೌದು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಡಕಟ್ಟುಗಳ ಕುರಿತು ಸಮಗ್ರ ವಿಚಾರಗಳು ಮತ್ತು ಪರಿಪೂರ್ಣ ದೃಷ್ಟಿಕೋನಕ್ಕಾಗಿ ಈ ಪುಸ್ತಕ ಓದಬೇಕು. ಇದರಿಂದ ಸಾಮಾಜಿಕ ಅಧ್ಯಯನಕ್ಕೆ ಹೊಸ ದಾರಿ ಸಿಗುತ್ತದೆ ಎಂದರು.

ನಮ್ಮ ಗ್ರಾಮೀಣ ಜನಪದ ಸಂಸ್ಕೃತಿ ಮತ್ತು ಅರಣ್ಯ ಬುಡಕಟ್ಟು ಸಂಸ್ಕೃತಿಗಿಂತ ಅಲೆಮಾರಿ ಸಂಸ್ಕೃತಿ ಭಿನ್ನವಾದ ಸಂಸ್ಕ್ರತಿಯಾಗಿದೆ. ಅದು ನಿರಂತರ ಪಯಣದ ಜೊತೆ ಅಪಾರವಾದ ಜ್ಞಾನಭಂಡಾರ ತುಂಬಿಕೊಂಡ ಸಮುದಾಯ. ಭಾಷೆ ಮತ್ತು ಸಂಸ್ಕತಿಯ ನಡುವಿನ ಕೊಂಡಿಯಾಗಿ ಅದು ಕೆಲಸ ಮಾಡುತ್ತಿದೆ. ನಮ್ಮ ದೇಸಿಯ ಚಿಂತನೆ ಪಟ್ಟಭದ್ರ ಚಿಂತನೆಗೆ ಅಂಟಿಕೊಳ್ಳುವ ಕಾಲದಲ್ಲಿ ಸಂಸ್ಕೃತಿ ಅಂದರೆ ಹೀಗಿದೆ ಎಂಬುದನ್ನು ಅದೇ ಸಮುದಾಯದ ಒಳಗಿನಿಂದ ಬಂದ ಪ್ರಭಾಕರ್‌ರವರು ಹೃದಯದಿಂದ ಉಕ್ಕುವ ಸಾಹಿತ್ಯದ ರೀತಿ ಬರೆದಿದ್ದಾರೆ. ವೈಚಾರಿಕತೆ ಮತ್ತು ಪ್ರತಿಭೆಯನ್ನು ಬಸಿದು ಕಥನ ಕಟ್ಟಿದ್ದು, ಇಂದಿನ ವಿಷಮ ರಾಜಕೀಯ ಪರಿಸ್ಥಿತಿಯಲ್ಲಿ ಈ ಬರಹಗಳು ಅಗತ್ಯ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯಕ್ ಪುಸ್ತಕದ ಬಗ್ಗೆ ಮಾತನಾಡಿ “ಈ ಪುಸ್ತಕವು ಕಥನದ ದಾಟಿಯಲ್ಲಿದೆ. ಆದರೆ ವರ್ಣನೆ ಅಲ್ಲ. ವ್ಯಾಖ್ಯಾನವೂ ಅಲ್ಲ. ಇದು ಕೇವಲ ವಿಮರ್ಶೆ ಅಲ್ಲ ಆದರೆ ಎಚ್ಚರ, ಪ್ರಜ್ಞೆಯನ್ನು ಒಳಗೊಂಡಿದೆ. ಕಾವ್ಯ ಅಲ್ಲ, ಕಥನ ಅಲ್ಲ, ಎಲ್ಲವೂ ಹೌದು, ಎಲ್ಲಾ ಲಕ್ಷಣಗಳನ್ನು ಒಳಗೊಂಡಿರುವ ವಿಶಿಷ್ಟ ಕೃತಿ” ಎಂದರು.

ಪುಸ್ತಕದ ಶೀರ್ಷಿಕೆ ಬಹಳ ಅರ್ಥಗರ್ಭಿತವಾಗಿದೆ. ಚಹರೆ ಎಂದರೆ ಗುರುತಿಸುವಿಕೆ, ಅಸ್ತಿತ್ವ, ರೂಪುರೇಷೆ, ಸ್ವರೂಪ ಇತ್ಯಾದಿ ಅರ್ಥಗಳು ಬರುತ್ತವೆ. ಆದರೆ ಪ್ರಭಾಕರ್‌ರವರು ಅದಕ್ಕೆ ಗಾಯಗಳೂ ಹೌದು ಎಂಬ ಹೊಸ ಅರ್ಥವನ್ನು ನೀಡಿದ್ದಾರೆ. ಅಂತರಂಗದ ದನಿ ಇದು. ಅಂದರೆ ಜನಸಮುದಾಯಗಳ ಸಹಜವಾದ ಬದುಕು ಹತ್ತಿಕ್ಕಲ್ಪಟ್ಟಿದೆ. ಹಾಗಾದರೆ ಈ ಗಾಯ ಮಾಡಿದವರು ಯಾರು? ನಾವು, ಅಂದರೆ ‘ನಾಗರಿಕ, ಆಧುನಿಕ ಎಂದು ಕರೆಸಿಕೊಳ್ಳುವವರ ಅದಕ್ಕೆ ಕಾರಣ ಎನ್ನುವ ಎಚ್ಚರದಿಂದ, ಆತ್ಮಾವಲೋಕನ ಈ ಕೃತಿಯಲ್ಲಿದೆ. ಇಲ್ಲಿ ಅವರ ನೆಲಮೂಲದ ಪ್ರಜ್ಞೆ ಇದೆ. ನಿಜದ ಮಣ್ಣಿನ ಮಕ್ಕಳು ಅವರು ಎಂಬ ದೃಡೀಕರಣವಿದೆ. ಇದು ಗಾಯಗಳು ಹೌದು ಎನ್ನುತ್ತಿರುವಾಗ ಅವರು ಅನುಸಂಧಾನ ಮಾಡುತ್ತಿದ್ದಾರೆ ಎಂದರು.

ಸಮುದಾಯದ ಈ ಗಾಯಗಳಿಗೆ ಔಷಧೋಪಚಾರ ಮಾಡಲು ಯಾರೂ ಮುಂದಾಗಿಲ್ಲ. ಅದರ ಪ್ರಯತ್ನವೇ ಈ ಅಧ್ಯಯನ ಪುಸ್ತಕವಾಗಿದೆ. ಇದೊಂದು ಕೇವಲ ಪುಸ್ತಕವಲ್ಲ. ಪುಸ್ತಕ ಬೇರೆ, ಕಲಾಕೃತಿ ಬೇರೆ. ಸಂಸ್ಕ್ರತಿ ಕಥನ ಕೃತಿಯೊಂದು ಕಲಾಕೃತಿಯಾಗುವ ಪರಿ ಲೇಖಕನ ಬದ್ಧತೆಯ ಮೇಲೆ ನಿಂತಿರುತ್ತದೆ. ಅದನ್ನು ಎ.ಎಸ್ ಪ್ರಭಾಕರ್ ಇಲ್ಲಿ ನಿರೂಪಿಸಿದ್ದಾರೆ ಎಂದರು.

ಸಬಾಲ್ಟ್ರನ್ ಸ್ಟಡಿ, ಸಂಸ್ಕ್ರತಿಯ ಅಧ್ಯಯನ ಕೇವಲ ಘೋಷಣೆಗಳಾಗಿರುವ ಸಂದರ್ಭದಲ್ಲಿ ನಮ್ಮ ವಿಶ್ವ ವಿದ್ಯಾಲಯಗಳ ಸಮುದಾಯ ಅಧ್ಯಯನ ವಿಧಾನದಲ್ಲಿಯೇ ಸಮಸ್ಯೆಯಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಎ.ಎಸ್ ಪ್ರಭಾಕರ್‌ರವರ ಶ್ರಮ ಮತ್ತು ಬದ್ಧತೆಯಿಂದ ಈ ಪುಸ್ತಕವು ಸಮುದಾಯ ಕಥನಗಳು ಸಾರ್ಥಕತೆಯಾಗುವುದನ್ನು ನಿರೂಪಿಸಿವೆ. ಇಲ್ಲಿ ಸಮುದಾಯಗಳ ಕುರಿತು ನೆಹರು, ಅಂಬೇಡ್ಕರ್, ಮಹಾಶ್ವೇತಾದೇವಿಯವರ ಚಿಂತನೆಗಳಿವೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ಜಿ. ರಮೇಶ್ ಮತ್ತು ಜೇನುಕುರುಬರ ಸೋಮಣ್ಣ ಮಾತನಾಡಿದರು. ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾದ ಡಿ ಎಂ ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಲೇಖಕರಾದ ಡಾ. ಎ ಎಸ್ ಪ್ರಭಾಕರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜೇನುಕುರುಬರ ಸೋಮಣ್ಣನವರಿಗೆ ಸನ್ಮಾನ ಮಾಡಲಾಯಿತು.

ಪುಸ್ತಕ ಕೊಳ್ಳಲು ಬಯಸುವವರು ಕೆಳಗಿನ ಕೊಂಡಿ ಬಳಸಿ

ಚಹರೆಗಳೆಂದರೆ ಗಾಯಗಳೂ ಹೌದು -ಸಮುದಾಯ ಅಧ್ಯಯನ ಕುರಿತ ಕಥನಗಳು
ಲೇಖಕರು- ಡಾ.ಎ.ಎಸ್.ಪ್ರಭಾಕರ್
ಬೆಲೆ- 250/-
ಗೂಗಲ್ ಪೆ- 9880302817

https://bit.ly/3ltoEKN


ಇದನ್ನೂ ಓದಿ: ಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...