Homeಮುಖಪುಟಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

ಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

- Advertisement -
- Advertisement -

ಅತ್ಯಂತ ಜನಪರ, ಜಾತ್ಯಾತೀತ ನಿಲುವುಗಳ ಮತ್ತು ಸಮತಾ ಭಾವದ ಉದ್ದೇಶ ಇಟ್ಟುಕೊಂಡಿರುವ ‘ಮತ್ತೆ ಕಲ್ಯಾಣ’ ಈಗ ಸಾಂದರ್ಭಿಕ ಎಡವಟ್ಟುಗಳ ಮೂಲಕ ಒಂದಿಷ್ಟು ಜಾಸ್ತಿನೇ ಟೀಕೆಗೊಳಗಾಗಿದೆ.

ಇರಲಿ, ಈಗ ನಾ ಹೇಳಾ ಲೆಕ್ಕದ ಪ್ರಕಾರ, ಸೀರಿಯಲ್‍ಗಳಲ್ಲಿ ‘ಮತ್ತೆ ಕಲ್ಯಾಣ’ ಆಂದೋಲನ ಬಲು ಜೋರಾಗೇ ನಡದೈತಿ… ಆದರೆ, ಸೀರಿಯಲ್‍ಗಳ ನಿರ್ದೇಶಕರಿಗೆ ಮಾತ್ರ ಪಕ್ಕಾ ಗೊತ್ತೈತಿ ‘ಮತ್ತೆ ಕಲ್ಯಾಣ’ ಆದ್ರ ಅಲ್ಲಿಗೆ ಧಾರಾವಾಹಿ ಖತಂ ಅಂತ್ಹೇಳಿ…

ಹೊರಗೆ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಮತ್ತು ಈಗ ನಂಗ ಸೀರಿಯಲ್ ಒಳಗ ಸಿಕ್ಕಿರೋ ‘ಮತ್ತೆ ಕಲ್ಯಾಣ’ಕ್ಕೂ ಬಾಳ ಫರಕ್ (ತರೀಕೆರೆ ಮೇಷ್ಟ್ರು ಈ ನಮ್ ಪದಾನ್ನ ‘ಫರಕು’ ಅಂತಾ ಫೇಮಸ್ ಮಾಡ್ಯಾರ) ಐತಿ.

ಯಾವುದೇ ಮನರಂಜನಾ ಚಾನೆಲ್‍ಗಳಿಗೆ ಹೋಗಿ, ಅಲ್ಲಿರುವ ಕನಿಷ್ಠ ಎರಡು-ಮೂರು ಧಾರಾವಾಹಿಗಳಲ್ಲಿ ಕತೆ ನಿಂತಿರುವುದೇ ‘ಮತ್ತೆ ಕಲ್ಯಾಣ’ ಆಗಲಿ ಎಂಬ ದುರಾಶೆಯ ಮೇಲೆಯೇ! ಸದ್ಯ ಚಾಲ್ತಿಯಲ್ಲಿರುವ ಬಹುಪಾಲು ಸೀರಿಯಲ್‍ಗಳ ಸುತ್ತ ‘ಒಬ್ಬನಿಗಿಬ್ಬರು…’… ಆಗಲೇ ‘ಅವನ’ ಮದುವೆ ಆಗಿದ್ದರೂ ಅದನ್ನು ಮುರಿದು ಇನ್ನೊಂದು ‘ಕಲ್ಯಾಣ’ ಮಾಡಲು ನಡೆಸುವ ಕಸರತ್ತುಗಳೋ ಅಬ್ಬಬ್ಬಾ!

ಈ ಫಾರ್ಮುಲಾ ಜನರಿಗೆ ಬಹಳ ಇಷ್ಟವಾಗಿದೆಯೋ ಏನೋ ಗೊತ್ತಿಲ್ಲ! ಶೇಕಡಾ 70 ರಷ್ಟು ಧಾರಾವಾಹಿಗಳಲ್ಲಿ ಒಬ್ಬ ಹೀರೋ, ಇಬ್ಬರು ಹೀರೊಯಿನ್‍ಗಳು… ಇಬ್ಬರು ಹೀರೊಯಿನ್‍ಗಳಲ್ಲಿ ಒಬ್ಬಳು ಒಳ್ಳೆಯವಳು, ಇನ್ನೊಬ್ಬಳು ಕೆಟ್ಟವಳು! ವಿಚಿತ್ರ ಎಂದರೆ ನನಗೆ ಈ ‘ಕೆಟ್ಟ’ ಪಾತ್ರದ ಹುಡುಗಿಯರೇ ಕೆಲವೊಮ್ಮೆ ಇಷ್ಟ… ಆಹಾಹಾ. ಒಳ್ಳೊಳ್ಳೆ ಜೀನ್ಸ್, ಸಖತ್ ಹೇರ್‍ಸ್ಟೈಲ್, ಬಿಂದಾಸ್ ಮೇಕಪ್….ಆದರೆ ಏನ್ ಮಾಡೋದು ಅದೆಲ್ಲವನ್ನೂ ಈ ಮೆದುಳೇ ಇಲ್ಲದ ನಿರ್ದೇಶಕರು ನೆಗೆಟಿವ್ ಮಾಡಿಟ್ಟಿದ್ದಾರೆ.

ಎಲ್ಲ ಚಾನೆಲ್‍ಗಳಲ್ಲೂ ‘ಒಬ್ಬನಿಗಿಬ್ಬರು’ ಎಂಬ ಆಧಾರದಲ್ಲೇ ಬಹುಪಾಲು ಕತೆಗಳು ಓಡುತ್ತಿವೆ: ರಾಧಾ ರಮಣ, ಕಮಲಿ, ಇಷ್ಟ ದೇವತೆ, ಸೀತಾ ವಲ್ಲಭ, ಬ್ರಹ್ಮಗಂಟು (ಪಾಪ, ಗಂಟು ಬಿದ್ದಿದ್ದ ಎರಡನೇವಳನ್ನು ಡೈರೆಕ್ಟರ್ ಯಾವಾಗಲೋ ಓಡಿಸಿಬಿಟ್ಟ), ಕುಲವಧು……ಈ ಪಟ್ಟಿ ಹಾಗೇ ಬೆಳೆಯುತ್ತ ಹೋಗುತ್ತದೆ.

ಸೀರಿಯಲ್ ನೋಡದವರಿಗೆ ಅನಿಸಬಹುದು: ಅಂದ್ರೆ ಎಲ್ಲ ಕತೆ ಒಂದೇನಾ ಎಂದು… ನೋ ನೋ, ಅದರಲ್ಲೂ ಪರ್ಮುಟೇಷನ್ ಮತ್ತು ಕಾಂಬಿನೇಷನ್ ಇರ್ತಾವೆ… ಮುಂದ್ಲ ವಾರ ನೋಡಾಕ್ರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...