Homeಮುಖಪುಟಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

ಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

- Advertisement -
- Advertisement -

ಅತ್ಯಂತ ಜನಪರ, ಜಾತ್ಯಾತೀತ ನಿಲುವುಗಳ ಮತ್ತು ಸಮತಾ ಭಾವದ ಉದ್ದೇಶ ಇಟ್ಟುಕೊಂಡಿರುವ ‘ಮತ್ತೆ ಕಲ್ಯಾಣ’ ಈಗ ಸಾಂದರ್ಭಿಕ ಎಡವಟ್ಟುಗಳ ಮೂಲಕ ಒಂದಿಷ್ಟು ಜಾಸ್ತಿನೇ ಟೀಕೆಗೊಳಗಾಗಿದೆ.

ಇರಲಿ, ಈಗ ನಾ ಹೇಳಾ ಲೆಕ್ಕದ ಪ್ರಕಾರ, ಸೀರಿಯಲ್‍ಗಳಲ್ಲಿ ‘ಮತ್ತೆ ಕಲ್ಯಾಣ’ ಆಂದೋಲನ ಬಲು ಜೋರಾಗೇ ನಡದೈತಿ… ಆದರೆ, ಸೀರಿಯಲ್‍ಗಳ ನಿರ್ದೇಶಕರಿಗೆ ಮಾತ್ರ ಪಕ್ಕಾ ಗೊತ್ತೈತಿ ‘ಮತ್ತೆ ಕಲ್ಯಾಣ’ ಆದ್ರ ಅಲ್ಲಿಗೆ ಧಾರಾವಾಹಿ ಖತಂ ಅಂತ್ಹೇಳಿ…

ಹೊರಗೆ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಮತ್ತು ಈಗ ನಂಗ ಸೀರಿಯಲ್ ಒಳಗ ಸಿಕ್ಕಿರೋ ‘ಮತ್ತೆ ಕಲ್ಯಾಣ’ಕ್ಕೂ ಬಾಳ ಫರಕ್ (ತರೀಕೆರೆ ಮೇಷ್ಟ್ರು ಈ ನಮ್ ಪದಾನ್ನ ‘ಫರಕು’ ಅಂತಾ ಫೇಮಸ್ ಮಾಡ್ಯಾರ) ಐತಿ.

ಯಾವುದೇ ಮನರಂಜನಾ ಚಾನೆಲ್‍ಗಳಿಗೆ ಹೋಗಿ, ಅಲ್ಲಿರುವ ಕನಿಷ್ಠ ಎರಡು-ಮೂರು ಧಾರಾವಾಹಿಗಳಲ್ಲಿ ಕತೆ ನಿಂತಿರುವುದೇ ‘ಮತ್ತೆ ಕಲ್ಯಾಣ’ ಆಗಲಿ ಎಂಬ ದುರಾಶೆಯ ಮೇಲೆಯೇ! ಸದ್ಯ ಚಾಲ್ತಿಯಲ್ಲಿರುವ ಬಹುಪಾಲು ಸೀರಿಯಲ್‍ಗಳ ಸುತ್ತ ‘ಒಬ್ಬನಿಗಿಬ್ಬರು…’… ಆಗಲೇ ‘ಅವನ’ ಮದುವೆ ಆಗಿದ್ದರೂ ಅದನ್ನು ಮುರಿದು ಇನ್ನೊಂದು ‘ಕಲ್ಯಾಣ’ ಮಾಡಲು ನಡೆಸುವ ಕಸರತ್ತುಗಳೋ ಅಬ್ಬಬ್ಬಾ!

ಈ ಫಾರ್ಮುಲಾ ಜನರಿಗೆ ಬಹಳ ಇಷ್ಟವಾಗಿದೆಯೋ ಏನೋ ಗೊತ್ತಿಲ್ಲ! ಶೇಕಡಾ 70 ರಷ್ಟು ಧಾರಾವಾಹಿಗಳಲ್ಲಿ ಒಬ್ಬ ಹೀರೋ, ಇಬ್ಬರು ಹೀರೊಯಿನ್‍ಗಳು… ಇಬ್ಬರು ಹೀರೊಯಿನ್‍ಗಳಲ್ಲಿ ಒಬ್ಬಳು ಒಳ್ಳೆಯವಳು, ಇನ್ನೊಬ್ಬಳು ಕೆಟ್ಟವಳು! ವಿಚಿತ್ರ ಎಂದರೆ ನನಗೆ ಈ ‘ಕೆಟ್ಟ’ ಪಾತ್ರದ ಹುಡುಗಿಯರೇ ಕೆಲವೊಮ್ಮೆ ಇಷ್ಟ… ಆಹಾಹಾ. ಒಳ್ಳೊಳ್ಳೆ ಜೀನ್ಸ್, ಸಖತ್ ಹೇರ್‍ಸ್ಟೈಲ್, ಬಿಂದಾಸ್ ಮೇಕಪ್….ಆದರೆ ಏನ್ ಮಾಡೋದು ಅದೆಲ್ಲವನ್ನೂ ಈ ಮೆದುಳೇ ಇಲ್ಲದ ನಿರ್ದೇಶಕರು ನೆಗೆಟಿವ್ ಮಾಡಿಟ್ಟಿದ್ದಾರೆ.

ಎಲ್ಲ ಚಾನೆಲ್‍ಗಳಲ್ಲೂ ‘ಒಬ್ಬನಿಗಿಬ್ಬರು’ ಎಂಬ ಆಧಾರದಲ್ಲೇ ಬಹುಪಾಲು ಕತೆಗಳು ಓಡುತ್ತಿವೆ: ರಾಧಾ ರಮಣ, ಕಮಲಿ, ಇಷ್ಟ ದೇವತೆ, ಸೀತಾ ವಲ್ಲಭ, ಬ್ರಹ್ಮಗಂಟು (ಪಾಪ, ಗಂಟು ಬಿದ್ದಿದ್ದ ಎರಡನೇವಳನ್ನು ಡೈರೆಕ್ಟರ್ ಯಾವಾಗಲೋ ಓಡಿಸಿಬಿಟ್ಟ), ಕುಲವಧು……ಈ ಪಟ್ಟಿ ಹಾಗೇ ಬೆಳೆಯುತ್ತ ಹೋಗುತ್ತದೆ.

ಸೀರಿಯಲ್ ನೋಡದವರಿಗೆ ಅನಿಸಬಹುದು: ಅಂದ್ರೆ ಎಲ್ಲ ಕತೆ ಒಂದೇನಾ ಎಂದು… ನೋ ನೋ, ಅದರಲ್ಲೂ ಪರ್ಮುಟೇಷನ್ ಮತ್ತು ಕಾಂಬಿನೇಷನ್ ಇರ್ತಾವೆ… ಮುಂದ್ಲ ವಾರ ನೋಡಾಕ್ರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...