Homeಮುಖಪುಟಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

ಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

- Advertisement -
- Advertisement -

ಅತ್ಯಂತ ಜನಪರ, ಜಾತ್ಯಾತೀತ ನಿಲುವುಗಳ ಮತ್ತು ಸಮತಾ ಭಾವದ ಉದ್ದೇಶ ಇಟ್ಟುಕೊಂಡಿರುವ ‘ಮತ್ತೆ ಕಲ್ಯಾಣ’ ಈಗ ಸಾಂದರ್ಭಿಕ ಎಡವಟ್ಟುಗಳ ಮೂಲಕ ಒಂದಿಷ್ಟು ಜಾಸ್ತಿನೇ ಟೀಕೆಗೊಳಗಾಗಿದೆ.

ಇರಲಿ, ಈಗ ನಾ ಹೇಳಾ ಲೆಕ್ಕದ ಪ್ರಕಾರ, ಸೀರಿಯಲ್‍ಗಳಲ್ಲಿ ‘ಮತ್ತೆ ಕಲ್ಯಾಣ’ ಆಂದೋಲನ ಬಲು ಜೋರಾಗೇ ನಡದೈತಿ… ಆದರೆ, ಸೀರಿಯಲ್‍ಗಳ ನಿರ್ದೇಶಕರಿಗೆ ಮಾತ್ರ ಪಕ್ಕಾ ಗೊತ್ತೈತಿ ‘ಮತ್ತೆ ಕಲ್ಯಾಣ’ ಆದ್ರ ಅಲ್ಲಿಗೆ ಧಾರಾವಾಹಿ ಖತಂ ಅಂತ್ಹೇಳಿ…

ಹೊರಗೆ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಮತ್ತು ಈಗ ನಂಗ ಸೀರಿಯಲ್ ಒಳಗ ಸಿಕ್ಕಿರೋ ‘ಮತ್ತೆ ಕಲ್ಯಾಣ’ಕ್ಕೂ ಬಾಳ ಫರಕ್ (ತರೀಕೆರೆ ಮೇಷ್ಟ್ರು ಈ ನಮ್ ಪದಾನ್ನ ‘ಫರಕು’ ಅಂತಾ ಫೇಮಸ್ ಮಾಡ್ಯಾರ) ಐತಿ.

ಯಾವುದೇ ಮನರಂಜನಾ ಚಾನೆಲ್‍ಗಳಿಗೆ ಹೋಗಿ, ಅಲ್ಲಿರುವ ಕನಿಷ್ಠ ಎರಡು-ಮೂರು ಧಾರಾವಾಹಿಗಳಲ್ಲಿ ಕತೆ ನಿಂತಿರುವುದೇ ‘ಮತ್ತೆ ಕಲ್ಯಾಣ’ ಆಗಲಿ ಎಂಬ ದುರಾಶೆಯ ಮೇಲೆಯೇ! ಸದ್ಯ ಚಾಲ್ತಿಯಲ್ಲಿರುವ ಬಹುಪಾಲು ಸೀರಿಯಲ್‍ಗಳ ಸುತ್ತ ‘ಒಬ್ಬನಿಗಿಬ್ಬರು…’… ಆಗಲೇ ‘ಅವನ’ ಮದುವೆ ಆಗಿದ್ದರೂ ಅದನ್ನು ಮುರಿದು ಇನ್ನೊಂದು ‘ಕಲ್ಯಾಣ’ ಮಾಡಲು ನಡೆಸುವ ಕಸರತ್ತುಗಳೋ ಅಬ್ಬಬ್ಬಾ!

ಈ ಫಾರ್ಮುಲಾ ಜನರಿಗೆ ಬಹಳ ಇಷ್ಟವಾಗಿದೆಯೋ ಏನೋ ಗೊತ್ತಿಲ್ಲ! ಶೇಕಡಾ 70 ರಷ್ಟು ಧಾರಾವಾಹಿಗಳಲ್ಲಿ ಒಬ್ಬ ಹೀರೋ, ಇಬ್ಬರು ಹೀರೊಯಿನ್‍ಗಳು… ಇಬ್ಬರು ಹೀರೊಯಿನ್‍ಗಳಲ್ಲಿ ಒಬ್ಬಳು ಒಳ್ಳೆಯವಳು, ಇನ್ನೊಬ್ಬಳು ಕೆಟ್ಟವಳು! ವಿಚಿತ್ರ ಎಂದರೆ ನನಗೆ ಈ ‘ಕೆಟ್ಟ’ ಪಾತ್ರದ ಹುಡುಗಿಯರೇ ಕೆಲವೊಮ್ಮೆ ಇಷ್ಟ… ಆಹಾಹಾ. ಒಳ್ಳೊಳ್ಳೆ ಜೀನ್ಸ್, ಸಖತ್ ಹೇರ್‍ಸ್ಟೈಲ್, ಬಿಂದಾಸ್ ಮೇಕಪ್….ಆದರೆ ಏನ್ ಮಾಡೋದು ಅದೆಲ್ಲವನ್ನೂ ಈ ಮೆದುಳೇ ಇಲ್ಲದ ನಿರ್ದೇಶಕರು ನೆಗೆಟಿವ್ ಮಾಡಿಟ್ಟಿದ್ದಾರೆ.

ಎಲ್ಲ ಚಾನೆಲ್‍ಗಳಲ್ಲೂ ‘ಒಬ್ಬನಿಗಿಬ್ಬರು’ ಎಂಬ ಆಧಾರದಲ್ಲೇ ಬಹುಪಾಲು ಕತೆಗಳು ಓಡುತ್ತಿವೆ: ರಾಧಾ ರಮಣ, ಕಮಲಿ, ಇಷ್ಟ ದೇವತೆ, ಸೀತಾ ವಲ್ಲಭ, ಬ್ರಹ್ಮಗಂಟು (ಪಾಪ, ಗಂಟು ಬಿದ್ದಿದ್ದ ಎರಡನೇವಳನ್ನು ಡೈರೆಕ್ಟರ್ ಯಾವಾಗಲೋ ಓಡಿಸಿಬಿಟ್ಟ), ಕುಲವಧು……ಈ ಪಟ್ಟಿ ಹಾಗೇ ಬೆಳೆಯುತ್ತ ಹೋಗುತ್ತದೆ.

ಸೀರಿಯಲ್ ನೋಡದವರಿಗೆ ಅನಿಸಬಹುದು: ಅಂದ್ರೆ ಎಲ್ಲ ಕತೆ ಒಂದೇನಾ ಎಂದು… ನೋ ನೋ, ಅದರಲ್ಲೂ ಪರ್ಮುಟೇಷನ್ ಮತ್ತು ಕಾಂಬಿನೇಷನ್ ಇರ್ತಾವೆ… ಮುಂದ್ಲ ವಾರ ನೋಡಾಕ್ರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...