Homeಮುಖಪುಟಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

ಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

- Advertisement -
- Advertisement -

ಅತ್ಯಂತ ಜನಪರ, ಜಾತ್ಯಾತೀತ ನಿಲುವುಗಳ ಮತ್ತು ಸಮತಾ ಭಾವದ ಉದ್ದೇಶ ಇಟ್ಟುಕೊಂಡಿರುವ ‘ಮತ್ತೆ ಕಲ್ಯಾಣ’ ಈಗ ಸಾಂದರ್ಭಿಕ ಎಡವಟ್ಟುಗಳ ಮೂಲಕ ಒಂದಿಷ್ಟು ಜಾಸ್ತಿನೇ ಟೀಕೆಗೊಳಗಾಗಿದೆ.

ಇರಲಿ, ಈಗ ನಾ ಹೇಳಾ ಲೆಕ್ಕದ ಪ್ರಕಾರ, ಸೀರಿಯಲ್‍ಗಳಲ್ಲಿ ‘ಮತ್ತೆ ಕಲ್ಯಾಣ’ ಆಂದೋಲನ ಬಲು ಜೋರಾಗೇ ನಡದೈತಿ… ಆದರೆ, ಸೀರಿಯಲ್‍ಗಳ ನಿರ್ದೇಶಕರಿಗೆ ಮಾತ್ರ ಪಕ್ಕಾ ಗೊತ್ತೈತಿ ‘ಮತ್ತೆ ಕಲ್ಯಾಣ’ ಆದ್ರ ಅಲ್ಲಿಗೆ ಧಾರಾವಾಹಿ ಖತಂ ಅಂತ್ಹೇಳಿ…

ಹೊರಗೆ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಮತ್ತು ಈಗ ನಂಗ ಸೀರಿಯಲ್ ಒಳಗ ಸಿಕ್ಕಿರೋ ‘ಮತ್ತೆ ಕಲ್ಯಾಣ’ಕ್ಕೂ ಬಾಳ ಫರಕ್ (ತರೀಕೆರೆ ಮೇಷ್ಟ್ರು ಈ ನಮ್ ಪದಾನ್ನ ‘ಫರಕು’ ಅಂತಾ ಫೇಮಸ್ ಮಾಡ್ಯಾರ) ಐತಿ.

ಯಾವುದೇ ಮನರಂಜನಾ ಚಾನೆಲ್‍ಗಳಿಗೆ ಹೋಗಿ, ಅಲ್ಲಿರುವ ಕನಿಷ್ಠ ಎರಡು-ಮೂರು ಧಾರಾವಾಹಿಗಳಲ್ಲಿ ಕತೆ ನಿಂತಿರುವುದೇ ‘ಮತ್ತೆ ಕಲ್ಯಾಣ’ ಆಗಲಿ ಎಂಬ ದುರಾಶೆಯ ಮೇಲೆಯೇ! ಸದ್ಯ ಚಾಲ್ತಿಯಲ್ಲಿರುವ ಬಹುಪಾಲು ಸೀರಿಯಲ್‍ಗಳ ಸುತ್ತ ‘ಒಬ್ಬನಿಗಿಬ್ಬರು…’… ಆಗಲೇ ‘ಅವನ’ ಮದುವೆ ಆಗಿದ್ದರೂ ಅದನ್ನು ಮುರಿದು ಇನ್ನೊಂದು ‘ಕಲ್ಯಾಣ’ ಮಾಡಲು ನಡೆಸುವ ಕಸರತ್ತುಗಳೋ ಅಬ್ಬಬ್ಬಾ!

ಈ ಫಾರ್ಮುಲಾ ಜನರಿಗೆ ಬಹಳ ಇಷ್ಟವಾಗಿದೆಯೋ ಏನೋ ಗೊತ್ತಿಲ್ಲ! ಶೇಕಡಾ 70 ರಷ್ಟು ಧಾರಾವಾಹಿಗಳಲ್ಲಿ ಒಬ್ಬ ಹೀರೋ, ಇಬ್ಬರು ಹೀರೊಯಿನ್‍ಗಳು… ಇಬ್ಬರು ಹೀರೊಯಿನ್‍ಗಳಲ್ಲಿ ಒಬ್ಬಳು ಒಳ್ಳೆಯವಳು, ಇನ್ನೊಬ್ಬಳು ಕೆಟ್ಟವಳು! ವಿಚಿತ್ರ ಎಂದರೆ ನನಗೆ ಈ ‘ಕೆಟ್ಟ’ ಪಾತ್ರದ ಹುಡುಗಿಯರೇ ಕೆಲವೊಮ್ಮೆ ಇಷ್ಟ… ಆಹಾಹಾ. ಒಳ್ಳೊಳ್ಳೆ ಜೀನ್ಸ್, ಸಖತ್ ಹೇರ್‍ಸ್ಟೈಲ್, ಬಿಂದಾಸ್ ಮೇಕಪ್….ಆದರೆ ಏನ್ ಮಾಡೋದು ಅದೆಲ್ಲವನ್ನೂ ಈ ಮೆದುಳೇ ಇಲ್ಲದ ನಿರ್ದೇಶಕರು ನೆಗೆಟಿವ್ ಮಾಡಿಟ್ಟಿದ್ದಾರೆ.

ಎಲ್ಲ ಚಾನೆಲ್‍ಗಳಲ್ಲೂ ‘ಒಬ್ಬನಿಗಿಬ್ಬರು’ ಎಂಬ ಆಧಾರದಲ್ಲೇ ಬಹುಪಾಲು ಕತೆಗಳು ಓಡುತ್ತಿವೆ: ರಾಧಾ ರಮಣ, ಕಮಲಿ, ಇಷ್ಟ ದೇವತೆ, ಸೀತಾ ವಲ್ಲಭ, ಬ್ರಹ್ಮಗಂಟು (ಪಾಪ, ಗಂಟು ಬಿದ್ದಿದ್ದ ಎರಡನೇವಳನ್ನು ಡೈರೆಕ್ಟರ್ ಯಾವಾಗಲೋ ಓಡಿಸಿಬಿಟ್ಟ), ಕುಲವಧು……ಈ ಪಟ್ಟಿ ಹಾಗೇ ಬೆಳೆಯುತ್ತ ಹೋಗುತ್ತದೆ.

ಸೀರಿಯಲ್ ನೋಡದವರಿಗೆ ಅನಿಸಬಹುದು: ಅಂದ್ರೆ ಎಲ್ಲ ಕತೆ ಒಂದೇನಾ ಎಂದು… ನೋ ನೋ, ಅದರಲ್ಲೂ ಪರ್ಮುಟೇಷನ್ ಮತ್ತು ಕಾಂಬಿನೇಷನ್ ಇರ್ತಾವೆ… ಮುಂದ್ಲ ವಾರ ನೋಡಾಕ್ರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...