Homeಅಂಕಣಗಳುಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

ಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 13/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಶಾಂತಾಲ್ ಅಕೆಮನ್

ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್ (ಫ್ರೆಂಚ್, 1975): ಯಾವುದೇ ವ್ಯಕ್ತಿಯ ದಿನಚರಿಯನ್ನೇ ಸಿನಿಮಾ ಮಾಡಿದರೆ, ಇದರಲ್ಲಿ ಕಂಡುಬರುವ ಕಥೆಯಾದರೂ ಎಂತಹದ್ದು? ಸಿನಿಮಾಗೆ ಕಥೆ ಅಷ್ಟು ಮುಖ್ಯವಾ? ಕಥೆ ಇಲ್ಲದೆ ಸಿನಿಮಾವೂ ಇಲ್ಲವಾ?

ನಡುವಯಸ್ಸಿನ ವಿಧವೆ ಬೆಳೆದ ಮಗನ ಜೊತೆ ಬದುಕುತ್ತಿರುತ್ತಾಳೆ. ಸಿನಿಮಾದ ಶೀರ್ಷಿಕೆಯೇ ಅವಳ ಹೆಸರು, ವಿಳಾಸ. ಈ ಸಿನಿಮಾದ ಕಾಲಾವಧಿ ಮೂರು ಗಂಟೆ ಇಪ್ಪತ್ತೊಂದು ನಿಮಿಷಗಳು. ಡೀಲ್‌ಮನ್‌ಳ ಮೂರು ದಿನಗಳ ದಿನಚರಿಯನ್ನು ಸುಮಾರು ಮೂರು ಗಂಟೆ ಅವಧಿಗೆ ಚಿತ್ರಿಸಲಾಗಿದ್ದು, ಕೊನೆಯಲ್ಲಿ ಒಂದು ಆಘಾತದೊಂದಿಗೆ ಸಿನಿಮಾ ಮುಗಿಯುತ್ತದೆ.

ಡೀಲ್‌ಮನ್‌ಳ ದಿನಚರಿ ಎಂದರೆ: ಕಾಫಿ ತಯಾರಿಸಿ ಕುಡಿಯುವುದು, ಅಲೂಗಡ್ಡೆ ಸಿಪ್ಪೆ ಸುಲಿಯುವುದು, ಹಾಸಿಗೆಯ ಹೊದಿಕೆಯನ್ನು ಬದಲಾಯಿಸಿ ಚೊಕ್ಕವಾಗಿ ಇಡುವುದು, ಮಗನ ಬೂಟ್‌ಗಳಿಗೆ ಪಾಲಿಶ್ ಮಾಡುವುದು, ಅಡುಗೆ ಮಾಡುವುದು, ಪಾತ್ರೆಗಳನ್ನು ತೊಳೆಯುವುದು, ತೊಳೆದ ಪಾತ್ರೆಗಳನ್ನು ಒರೆಸುವುದು, ಊಟದ ಡೈನಿಂಗ್ ಟೇಬಲ್‌ಗೆ ಬಟ್ಟೆ ಹೊದಿಸಿ, ಚಮಚಗಳನ್ನು ಜೋಡಿಸುವುದು, ಬಟ್ಟೆಗಳನ್ನು ಒಗೆಯುವುದು, ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಮನೆಯ ಬಿಲ್‌ಗಳನ್ನು ಪಾವತಿಸುವುದು, ಪಕ್ಕದ ಮನೆಯವರ ಮಗುವನ್ನು ನೋಡಿಕೊಳ್ಳುವುದು- ಹೀಗೆ ಮಾಡಲು ಯಾವುದೇ ಕೆಲಸವಿಲ್ಲದಾಗ ರೆಡಿಯೋದಲ್ಲಿ ಬರುವ ಬೆಥೋವನ್‌ನ ಪಿಯಾನೋ ಕೇಳುತ್ತಾ ಸ್ವೆಟರ್ ಹೆಣಿಯುವುದು. ಹೀಗೆ ಮನೆಯಲ್ಲಿನ ದಿನನಿತ್ಯದ ನೀರಸ ಚಟುವಟಿಕೆಗಳೇ ಈ ಸಿನಿಮಾ.

PC : High On Films, (ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್)

ಈ ನೀರಸ ದಿನನಿತ್ಯದ ಕೆಲಸಗಳಲ್ಲಿ ಡೀಲ್‌ಮನ್ ಮಧ್ಯಾಹ್ನ ಹೊತ್ತಿನಲ್ಲಿ ಮನೆಯಲ್ಲಿಯೇ ವೇಶ್ಯಾವಾಟಿಕೆಯನ್ನು ನಡೆಸುತ್ತಿರುತ್ತಾಳೆ. ದಿನಕ್ಕೊಬ್ಬ ಗಿರಾಕಿ ಬರುತ್ತಾನೆ. ಯಾಂತ್ರಿಕವಾಗಿ ಅವನ ಕೋಟ್ ಮತ್ತು ಮಫ್ಲರನ್ನು ತೆಗೆದು ಗೋಡೆಗೆ ಸಿಕ್ಕಿಸಿ ಇಬ್ಬರೂ ಬೆಡ್‌ರೂಮಿಗೆ ಹೋಗುತ್ತಾರೆ. ನಂತರ ಹೊರಬಂದು ಮುಂದಿನ ಭೇಟಿಯ ದಿನವನ್ನು ನಿರ್ಧರಿಸಿ ಹಣವನ್ನು ಕೊಟ್ಟು ಹೋಗುತ್ತಾನೆ. ಆಮೇಲೆ ಡೀಲ್‌ಮನ್ ಕಾಲೇಜು ಮುಗಿಸಿ ಬರುವ ಮಗನಿಗಾಗಿ ಊಟದ ತಯಾರಿಯಲ್ಲಿ ನಿರತಳಾಗುತ್ತಾಳೆ.

ಸಿನಿಮಾದಲ್ಲಿ ಮಾತುಗಳು ಅತಿ ವಿರಳ. ಕೆನಡಾದಲ್ಲಿರುವ ತನ್ನ ಸಹೋದರಿಯಿಂದ ಬಂದ ಪತ್ರವನ್ನು ಮಗನಿಗೆ ಓದಿ ತಿಳಿಸುವಾಗ, ಪ್ರೇಕ್ಷಕರಿಗೆ ಅವಳು ವಿಧವೆಯಾಗಿ ಆರು ವರ್ಷಗಳು ಕಳೆದಿರುವುದರ ಬಗ್ಗೆ ತಿಳಿಯುತ್ತದೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಪ್ರಯತ್ನಿಸಿ, ಅದನ್ನು ಮುಂದೂಡುತ್ತಾ ತನ್ನ ಮತ್ತಿರರ ಕೆಲಸಗಳಲ್ಲಿ ಮುಳುಗಿ ಹೋಗುತ್ತಾಳೆ.

ಮನೆಯಿಂದ ಹೊರಗೆ ಹೋಗುವುದು, ಮಗನ ಕೋಟಿಗೆ ಗುಂಡಿ ಹುಡುಕಲು, ಮಗನಿಗೆ ಹೆಣಿಯುತ್ತಿರುವ ಸ್ವೆಟರ್‌ನ ಉಣ್ಣೆದಾರವನ್ನು ತರಲು ಹಾಗೂ ಅಡುಗೆಗೆ ತರಕಾರಿ, ಹಣ್ಣು ಮತ್ತು ದಿನಸಿಯನ್ನು ತರಲು ಮಾತ್ರ.

ಸಿನಿಮಾ ವಾಚ್ಯವಾಗದೆ, ಕಥೆಯಲ್ಲಿ ಉಬ್ಬರ ಇಳಿತಗಳನ್ನು ಹುಡುಕದೆ, ಮನೆಯ ಹೆಂಗಸಿನ (ಹೌಸ್‌ವೈಫ್‌ನ) ದಿನನಿತ್ಯದ ಬದುಕಿಗೆ ಕನ್ನಡಿ ಹಿಡಿದಂತೆ ಕಟ್ಟಲಾಗಿದೆ.

ಮೂರು ಗಂಟೆಗೂ ಮೀರಿದ ಈ ಸಿನಿಮಾ ನಿರಾಸಕ್ತಿಯೆನಿಸಿ, ಬದುಕಿನಲ್ಲಿ ಮುಖ್ಯವಲ್ಲದ ಕೆಲಸಗಳನ್ನು ನೋಡುವುದರಲ್ಲಿ ಅಂತಹ ವಿಶೇಷವೇನಿದೆ ಎಂಬ ಪ್ರಶ್ನೆ ಮೂಡಿದರೆ, ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಒಂದು ದಿನವೂ ತಪ್ಪದೇ ಈ ನೀರಸ ಕೆಲಸಗಳಲ್ಲಿಯೇ ಬಂಧಿಯಾಗಿರುವ ಹೆಂಗಸರ ಬದುಕು ಎಷ್ಟು ನಿರ್ಲಕ್ಷ್ಯಗೊಂಡಿದೆ ಎಂಬುದನ್ನು ಮನಗಾಣಿಸುತ್ತದೆ.

ಸಿನಿಮಾದ ಕೊನೆಯಲ್ಲಿ ಮೂರನೇ ದಿನ ಡೀಲ್‌ಮನ್ ಒಂದು ಗಂಟೆ ಮೊದಲೇ ನಿದ್ದೆಯಿಂದ ಎಚ್ಚರಗೊಳ್ಳುತ್ತಾಳೆ. ಆದುದರಿಂದ ಅವಳಿಗೆ ಎದ್ದ ತಕ್ಷಣ ಮಾಡುಲು ಕೆಲಸವಿರುವುದಿಲ್ಲ ಹಾಗೂ ಅವಳ ದಿನಚರಿ ಇರುಸು ಮುರಿಸಿಂದಲೇ ಶುರುವಾಗಿ, ಕೊನೆಗೆ ಅದು ಮಧ್ಯಾಹ್ನದ ಹೊತ್ತಿನಲ್ಲಿ ಬರುವ ಗಿರಾಕಿ ಹಾಸಿಗೆಯಲ್ಲಿ ಅವಳಿಗೆ ಇಷ್ಟವಿಲ್ಲದಂತೆಯೇ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾನೆ. ಇದನ್ನು ಸಹಿಸದ ಡೀಲ್‌ಮನ್ ಕ್ರಿಯೆಯ ನಂತರ ತನ್ನ ಬಟ್ಟೆಗಳನ್ನು ತೊಟ್ಟು, ಹಾಸಿಗೆಯಲ್ಲಿ ಮಲಗಿದ್ದ ಗಿರಾಕಿಯ ಕತ್ತಿಗೆ ಮೇಜಿನ ಮೇಲಿದ್ದ ಕತ್ತರಿಯಿಂದ ಇರಿದು ಕೊಲ್ಲುತ್ತಾಳೆ.

ಅವನನ್ನು ಕೊಂದ ನಂತರವಷ್ಟೇ ಮುಂದೇನೆಂಬ ಪ್ರಶ್ನೆ ಡೀಲ್‌ಮನ್ ಮತ್ತು ಪ್ರೇಕ್ಷಕರಿಗೆ ಎದುರಾಗುತ್ತದೆ! ಡೀಲ್‌ಮನ್ ಡೈನಿಂಗ್ ಟೇಬಲ್‌ನಲ್ಲಿ ರಕ್ತಸಿಕ್ತ ಕೈಯಲ್ಲಿ ಕೂತು ಯೋಚನೆ ಮಾಡುವಾಗಲೇ ಸಿನಿಮಾ ಮುಗಿಯುತ್ತದೆ.

ಮೀಟಿಂಗ್ಸ್ ಅಫ್ ಅನ್ನಾ (ಫ್ರೆಂಚ್, 1978): ಅನ್ನಾ ಸ್ವತಂತ್ರ ಸಿನಿಮಾ ನಿರ್ದೇಶಕಿ. ತನ್ನ ಸಿನಿಮಾಗಳನ್ನು ಯೂರೋಪಿನ ವಿವಿಧ ನಗರಗಳಲ್ಲಿ ಪ್ರದರ್ಶಿಸುತ್ತಾ, ಬೇರೆ ಬೇರೆ ಜನರನ್ನು ಭೇಟಿ ಮಾಡುವುದೇ ಈ ಸಿನಿಮಾದ ಕಥಾನಕ.

ಸೆಲ್ಫ್ ರೆಫ್ಲೆಕ್ಟಿವ್ ಜಾನರ್‌ಗೆ ಸೇರುವ ಈ ಸಿನಿಮಾ, ನಿರ್ದೇಶಕಿಯ ಸ್ವಂತಃ ಅನುಭವವನ್ನೇ ಸಿನಿಮಾವಾಗಿಸಿರುವ ಅನನ್ಯ ಪ್ರಯತ್ನವೆನಿಸುತ್ತದೆ.

ಅನ್ನಾ ಜರ್ಮನಿಯ ಹೋಟೆಲ್ ಒಂದರಲ್ಲಿ ಅಪರಚಿತನೊಬ್ಬನ ಜೊತೆಗೆ ಹಾಸಿಗೆಗೆ ಹೋಗುತ್ತಾಳೆ. ಆದರೆ ಹೊಂದಣಿಕೆಯಾಗದೆ, ಅವನು ಅಲ್ಲಿಂದ ಹೊರಟುಹೋಗುತ್ತಾನೆ. ಮರುದಿನ ಮಗಳ ಹುಟ್ಟುಹಬ್ಬದ ಸಲುವಾಗಿ ಮನೆಗೆ ಬರುವಂತೆ ಆಹ್ವಾನಿಸುತ್ತಾನೆ. ಅನ್ನಾ ಅವನ ಮನೆಗೆ ಹೋಗುತ್ತಾಳೆ. ಅವನ ಹೆಂಡತಿ ಕುಟುಂಬವನ್ನು ಬಿಟ್ಟು ಹೋಗಿರುವ ವಿಷಯ, ಅವನ ಮನೆಯ ಕುರಿತು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲೂ ತನ್ನ ಮನೆ ಸುರಕ್ಷಿತವಾಗಿರುವುದರ ಬಗ್ಗೆ ಹೇಳುತ್ತಾನೆ. ಅನ್ನಾಳಿಗೆ ಟುಲಿಪ್ಸ್ ಹೂಗಳು ಇಷ್ಟವಾ ಎಂದು ಅವನು ಕೇಳಲು, ಅವಳು ಇಲ್ಲವೆನ್ನುತ್ತಾಳೆ. ಆಗ ಅನ್ನಾ ಎಲ್ಲ ಹೆಂಗಸರಂತಲ್ಲ ಎಂಬುದು ತಿಳಿಯುತ್ತದೆ.

ರೈಲ್ವೇ ನಿಲ್ದಾಣದಲ್ಲಿ ತನ್ನ ತಾಯಿಯ ಗೆಳತಿಯೊಬ್ಬಳನ್ನು ಭೇಟಿಯಾಗುತ್ತಾಳೆ. ಅವಳ ಕುಟುಂಬ ಮೊದಲು ಬೆಲ್ಜಿಯಂನ ಬ್ರಸೆಲ್ಸ್‌ನಿಂದ ವಲಸೆ ಬಂದು ಜರ್ಮನಿಯಲ್ಲಿ ನೆಲೆಯೂರಿರುತ್ತದೆ. ತನ್ನ ಸದಾ ಸುತ್ತುವ ಕೆಲಸದ ಕಾರಣದಿಂದ ತನ್ನ ಸಂಗಾತಿಯಿಂದ ಬೇರ್ಪಟ್ಟಿರುವುದಾಗಿ ಅನ್ನಾ ಹೇಳುತ್ತಾಳೆ. ಅದಕ್ಕೆ ತಾಯಿಯ ಗೆಳತಿ ತನ್ನ ಸುಂದರ ಮಗನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಆದರೆ ಅದನ್ನು ನಿರಾಕರಿಸಿ ಅನ್ನಾ ಮುಂದೆ ಸಾಗುತ್ತಾಳೆ.

ಮೀಟಿಂಗ್ಸ್ ಅಫ್ ಅನ್ನಾ

ರೈಲಿನಲ್ಲಿ ಮತ್ತೊಬ್ಬ ಅಪರಿಚತನೊಂದಿಗೆ ಲೋಕಾಭಿರಾಮದ ಸಂವಾದ. ಯಾರು ಯಾರ ಕುರಿತೂ ಆಸಕ್ತಿ ತೋರದೆ, ಸಿಗರೇಟ್‌ಗಳನ್ನು ಸೇದುತ್ತಾ ರೈಲಿನ ಕಿಟಕಿಯಿಂದ ಹೊರ ನೋಡುತ್ತಾ ಮಾತಾಡುತ್ತಾರೆ.

ಹೀಗೆ ಸಿನಿಮಾದಲ್ಲಿ ನೇರವಾಗಿ ಏನನ್ನೂ ಹೇಳದೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗಿದೆ. ಆರ್ಥಿಕ ಕುಸಿತದಿಂದ ಇಡೀ ಯೂರೋಪ್ ಅನುಭವಿಸುತ್ತಿರುವ ಯಾತನೆ, ಹಣದುಬ್ಬರ, ಬೆಲೆ ಏರಿಕೆ, ವಲಸೆ ಮುಂತಾದ ವಿಷಯಗಳ ಜೊತೆಗೇ, ಜರ್ಮನಿಯನ್ನು ಯುದ್ಧದ ನಂತರ ಹೇಗೆ ಕಟ್ಟಿದರೆಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ಒಂಟಿತನ, ಬದುಕಿನ ಅರ್ಥಹೀನತೆ, ಲೆಸ್ಬಿಯನ್‌ಗಳ ಕುರಿತು ನಿರ್ದೇಶಕಿಯ ವ್ಯಾಖ್ಯಾನ ಸಿನಿಮಾದಲ್ಲಿ ಮೂಡುತ್ತದೆ.

ಶಾಂತಾಲ್ ಅಕೆಮನ್: ಶಾಂತಾಲ್ ಅಕೆಮನ್‌ರ ಸಿನಿಮಾಗಳನ್ನು ಕೇವಲ ಫೆಮಿನಿಸಂ ಸಿನಿಮಾಗಳೆಂದು ವಿಂಗಡಿಸಿ ನೋಡದೆ, ಅವರ ಕಥಾವಸ್ತು ವೈಶಿಷ್ಟ್ಯಗಳಿಗೆ ಅತಿಯಾಗಿ ಒತ್ತು ನೀಡದೆ, ಅವರು ಸಿನಿಮಾ ಕಟ್ಟುವ ಕ್ರಮವನ್ನು ನೋಡುವುದು ಅತಿ ಮುಖ್ಯ.

ಸಿನಿಮಾದಲ್ಲಿ ಪುಲ್ ಶಾಟ್, ಮಿಡ್ ಶಾಟ್, ಕ್ಲೋಸ್‌ಅಪ್, ಎಕ್‌ಸ್ಟ್ರೀಮ್ ಕ್ಲೋಸ್‌ಅಪ್‌ಗಳೆಂದು ದೃಶ್ಯವನ್ನು ಕಟ್ಟುವ ವ್ಯಾಕರಣವಿರುತ್ತದೆ. ಇಲ್ಲಿ ಶಾಂತಾಲ್‌ರವರ ಶೈಲಿ ಅತಿ ಸರಳವಾದದ್ದು. ಅವರು ಮಿಡ್ ಶಾಟ್‌ನಿಂದ ದೃಶ್ಯವನ್ನು ಸಂಪೂರ್ಣವಾಗಿ ಚಿತ್ರಿಸುತ್ತಾರೆ. ಯಾವುದೇ ಕಾರಣಕ್ಕು ಕ್ಲೋಸ್‌ಅಪ್, ಪ್ರೊಫೈಲ್ ಶಾಟ್ಸ್ ಚಿತ್ರಿಸುವುದಿಲ್ಲ.

ಇದರ ಮೂಲ ಉದ್ದೇಶವೆಂದರೆ ಒಂದು ಕನಿಷ್ಠತೆಯಲ್ಲಿ ಸಿನಿಮಾ ಕಟ್ಟುವುದು. ಎರಡನೆಯದು, ಪ್ರತಿ ಬಾರಿಯೂ ಕ್ಯಾಮರಾವನ್ನು ಚಲಿಸುತ್ತಾ ಅಥವಾ ದೃಶ್ಯವನ್ನು ತುಂಡರಿಸುತ್ತಾ ಬೇರೆ ಕೋನಗಳಲ್ಲಿ ಚಿತ್ರಿಸದೇ, ದೃಶ್ಯದಲ್ಲಾಗುವ ಚಟುವಟಿಕೆಗಳನ್ನು ಯಾವುದೇ ರೀತಿ ಮ್ಯಾನಿಪುಲೇಟ್ ಮಾಡದೇ ಯಥಾವತ್ತಾಗಿ ಪ್ರೇಕ್ಷಕರ ಮುಂದಿಡುವ ದಿಟ್ಟ ನಿರ್ಧಾರ.

PC : The Guardian, (ಶಾಂತಾಲ್ ಅಕೆಮನ್)

ಹಾಗೂ ಕಥೆ ಮತ್ತು ಕಥೆಯಲ್ಲಾಗುವ ಏರಿಳಿತಗಳೇ ಮುಖ್ಯವೆನ್ನದೆ ದೃಶ್ಯ ಮತ್ತು ಶಬ್ದಗಳಿಂದ ಸಿನಿಮಾವನ್ನು ಕಟ್ಟುತ್ತಾರೆ. ಸಿನಿಮಾದಲ್ಲಿ ಖಾಲಿತನ ತುಂಬಲು ಮತ್ತು ಪ್ರೇಕ್ಷಕನ ಭಾವನೆಗಳನ್ನು ಮ್ಯಾನಿಪುಲೇಟ್ ಮಾಡುವ ಉದ್ದೇಶದಿಂದ ವೇಗದ ಎಡಿಟಿಂಗ್ ಮಾಡುವುದನ್ನು ಬಳಸದೆ, ಹಿನ್ನೆಲೆ ಸಂಗೀತವನ್ನು ಉಪಯೋಗಿಸದೆ ಬದುಕಿಗೆ ಹತ್ತಿರವಾಗಿರುವ ಸಿನಿಮಾಗಳನ್ನು ಶಾಂತಾಲ್ ಅಕೆಮನ್ ನಿರ್ದೇಶಿಸಿರುವುದು ಶ್ಲಾಘನಿಯ.

ಶಾಂತಾಲ್‌ರ ಸಿನಿಮಾಗಳು ಲಾಂಗ್ ಟೇಕ್ಸ್, ಹಿನ್ನೆಲೆ ಸಂಗೀತವಿಲ್ಲದೆ, ಕಥೆಗೆ ಜೋತು ಬೀಳದೆ, ಅಸಂಬದ್ಧವಾಗಿ ಮತ್ತು ಅಮೂರ್ತವಾಗಿ ಕಾಣುತ್ತದೆ. ಇವರು ಮೊದಮೊದಲು ಫ್ರೆಂಚ್ ನಿರ್ದೇಶಕ ಗೊದಾರ್ದ್‌ನ ಸಿನಿಮಾಗಳಿಂದ ಪ್ರಭಾವಿತಗೊಂಡಿದ್ದರೂ, ಸಿನಿಯಾನದಲ್ಲಿ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡಿದ್ದಾರೆ.

ಶಾಂತಾಲ್‌ರ ಸಿನಿಮಾಗಳಲ್ಲಿ ಜೀನ್ ಡೀಲ್‌ಮನ್ ಚಿತ್ರ ಸಿನಿ ಇತಿಹಾಸದಲ್ಲಿ ಅತಿ ಮುಖ್ಯವಾದ ಸಿನಿಮಾ. ಮುಂದಿನ ಹಲವು ಪೀಳಿಗೆಯ ಸಿನಿಮಾ ವಿದ್ಯಾರ್ಥಿಗಳಿಗೆ ಇವರ ಸಿನಿಮಾಗಳು ಮತ್ತು ಶೈಲಿಯನ್ನು ನೋಡಿ ಕಲಿಯುವುದು ಸಾಕಷ್ಟಿದೆ.


ಇದನ್ನೂ ಓದಿ:  ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...