Homeಅಂಕಣಗಳುಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

ಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 13/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಶಾಂತಾಲ್ ಅಕೆಮನ್

ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್ (ಫ್ರೆಂಚ್, 1975): ಯಾವುದೇ ವ್ಯಕ್ತಿಯ ದಿನಚರಿಯನ್ನೇ ಸಿನಿಮಾ ಮಾಡಿದರೆ, ಇದರಲ್ಲಿ ಕಂಡುಬರುವ ಕಥೆಯಾದರೂ ಎಂತಹದ್ದು? ಸಿನಿಮಾಗೆ ಕಥೆ ಅಷ್ಟು ಮುಖ್ಯವಾ? ಕಥೆ ಇಲ್ಲದೆ ಸಿನಿಮಾವೂ ಇಲ್ಲವಾ?

ನಡುವಯಸ್ಸಿನ ವಿಧವೆ ಬೆಳೆದ ಮಗನ ಜೊತೆ ಬದುಕುತ್ತಿರುತ್ತಾಳೆ. ಸಿನಿಮಾದ ಶೀರ್ಷಿಕೆಯೇ ಅವಳ ಹೆಸರು, ವಿಳಾಸ. ಈ ಸಿನಿಮಾದ ಕಾಲಾವಧಿ ಮೂರು ಗಂಟೆ ಇಪ್ಪತ್ತೊಂದು ನಿಮಿಷಗಳು. ಡೀಲ್‌ಮನ್‌ಳ ಮೂರು ದಿನಗಳ ದಿನಚರಿಯನ್ನು ಸುಮಾರು ಮೂರು ಗಂಟೆ ಅವಧಿಗೆ ಚಿತ್ರಿಸಲಾಗಿದ್ದು, ಕೊನೆಯಲ್ಲಿ ಒಂದು ಆಘಾತದೊಂದಿಗೆ ಸಿನಿಮಾ ಮುಗಿಯುತ್ತದೆ.

ಡೀಲ್‌ಮನ್‌ಳ ದಿನಚರಿ ಎಂದರೆ: ಕಾಫಿ ತಯಾರಿಸಿ ಕುಡಿಯುವುದು, ಅಲೂಗಡ್ಡೆ ಸಿಪ್ಪೆ ಸುಲಿಯುವುದು, ಹಾಸಿಗೆಯ ಹೊದಿಕೆಯನ್ನು ಬದಲಾಯಿಸಿ ಚೊಕ್ಕವಾಗಿ ಇಡುವುದು, ಮಗನ ಬೂಟ್‌ಗಳಿಗೆ ಪಾಲಿಶ್ ಮಾಡುವುದು, ಅಡುಗೆ ಮಾಡುವುದು, ಪಾತ್ರೆಗಳನ್ನು ತೊಳೆಯುವುದು, ತೊಳೆದ ಪಾತ್ರೆಗಳನ್ನು ಒರೆಸುವುದು, ಊಟದ ಡೈನಿಂಗ್ ಟೇಬಲ್‌ಗೆ ಬಟ್ಟೆ ಹೊದಿಸಿ, ಚಮಚಗಳನ್ನು ಜೋಡಿಸುವುದು, ಬಟ್ಟೆಗಳನ್ನು ಒಗೆಯುವುದು, ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಮನೆಯ ಬಿಲ್‌ಗಳನ್ನು ಪಾವತಿಸುವುದು, ಪಕ್ಕದ ಮನೆಯವರ ಮಗುವನ್ನು ನೋಡಿಕೊಳ್ಳುವುದು- ಹೀಗೆ ಮಾಡಲು ಯಾವುದೇ ಕೆಲಸವಿಲ್ಲದಾಗ ರೆಡಿಯೋದಲ್ಲಿ ಬರುವ ಬೆಥೋವನ್‌ನ ಪಿಯಾನೋ ಕೇಳುತ್ತಾ ಸ್ವೆಟರ್ ಹೆಣಿಯುವುದು. ಹೀಗೆ ಮನೆಯಲ್ಲಿನ ದಿನನಿತ್ಯದ ನೀರಸ ಚಟುವಟಿಕೆಗಳೇ ಈ ಸಿನಿಮಾ.

PC : High On Films, (ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್)

ಈ ನೀರಸ ದಿನನಿತ್ಯದ ಕೆಲಸಗಳಲ್ಲಿ ಡೀಲ್‌ಮನ್ ಮಧ್ಯಾಹ್ನ ಹೊತ್ತಿನಲ್ಲಿ ಮನೆಯಲ್ಲಿಯೇ ವೇಶ್ಯಾವಾಟಿಕೆಯನ್ನು ನಡೆಸುತ್ತಿರುತ್ತಾಳೆ. ದಿನಕ್ಕೊಬ್ಬ ಗಿರಾಕಿ ಬರುತ್ತಾನೆ. ಯಾಂತ್ರಿಕವಾಗಿ ಅವನ ಕೋಟ್ ಮತ್ತು ಮಫ್ಲರನ್ನು ತೆಗೆದು ಗೋಡೆಗೆ ಸಿಕ್ಕಿಸಿ ಇಬ್ಬರೂ ಬೆಡ್‌ರೂಮಿಗೆ ಹೋಗುತ್ತಾರೆ. ನಂತರ ಹೊರಬಂದು ಮುಂದಿನ ಭೇಟಿಯ ದಿನವನ್ನು ನಿರ್ಧರಿಸಿ ಹಣವನ್ನು ಕೊಟ್ಟು ಹೋಗುತ್ತಾನೆ. ಆಮೇಲೆ ಡೀಲ್‌ಮನ್ ಕಾಲೇಜು ಮುಗಿಸಿ ಬರುವ ಮಗನಿಗಾಗಿ ಊಟದ ತಯಾರಿಯಲ್ಲಿ ನಿರತಳಾಗುತ್ತಾಳೆ.

ಸಿನಿಮಾದಲ್ಲಿ ಮಾತುಗಳು ಅತಿ ವಿರಳ. ಕೆನಡಾದಲ್ಲಿರುವ ತನ್ನ ಸಹೋದರಿಯಿಂದ ಬಂದ ಪತ್ರವನ್ನು ಮಗನಿಗೆ ಓದಿ ತಿಳಿಸುವಾಗ, ಪ್ರೇಕ್ಷಕರಿಗೆ ಅವಳು ವಿಧವೆಯಾಗಿ ಆರು ವರ್ಷಗಳು ಕಳೆದಿರುವುದರ ಬಗ್ಗೆ ತಿಳಿಯುತ್ತದೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಪ್ರಯತ್ನಿಸಿ, ಅದನ್ನು ಮುಂದೂಡುತ್ತಾ ತನ್ನ ಮತ್ತಿರರ ಕೆಲಸಗಳಲ್ಲಿ ಮುಳುಗಿ ಹೋಗುತ್ತಾಳೆ.

ಮನೆಯಿಂದ ಹೊರಗೆ ಹೋಗುವುದು, ಮಗನ ಕೋಟಿಗೆ ಗುಂಡಿ ಹುಡುಕಲು, ಮಗನಿಗೆ ಹೆಣಿಯುತ್ತಿರುವ ಸ್ವೆಟರ್‌ನ ಉಣ್ಣೆದಾರವನ್ನು ತರಲು ಹಾಗೂ ಅಡುಗೆಗೆ ತರಕಾರಿ, ಹಣ್ಣು ಮತ್ತು ದಿನಸಿಯನ್ನು ತರಲು ಮಾತ್ರ.

ಸಿನಿಮಾ ವಾಚ್ಯವಾಗದೆ, ಕಥೆಯಲ್ಲಿ ಉಬ್ಬರ ಇಳಿತಗಳನ್ನು ಹುಡುಕದೆ, ಮನೆಯ ಹೆಂಗಸಿನ (ಹೌಸ್‌ವೈಫ್‌ನ) ದಿನನಿತ್ಯದ ಬದುಕಿಗೆ ಕನ್ನಡಿ ಹಿಡಿದಂತೆ ಕಟ್ಟಲಾಗಿದೆ.

ಮೂರು ಗಂಟೆಗೂ ಮೀರಿದ ಈ ಸಿನಿಮಾ ನಿರಾಸಕ್ತಿಯೆನಿಸಿ, ಬದುಕಿನಲ್ಲಿ ಮುಖ್ಯವಲ್ಲದ ಕೆಲಸಗಳನ್ನು ನೋಡುವುದರಲ್ಲಿ ಅಂತಹ ವಿಶೇಷವೇನಿದೆ ಎಂಬ ಪ್ರಶ್ನೆ ಮೂಡಿದರೆ, ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಒಂದು ದಿನವೂ ತಪ್ಪದೇ ಈ ನೀರಸ ಕೆಲಸಗಳಲ್ಲಿಯೇ ಬಂಧಿಯಾಗಿರುವ ಹೆಂಗಸರ ಬದುಕು ಎಷ್ಟು ನಿರ್ಲಕ್ಷ್ಯಗೊಂಡಿದೆ ಎಂಬುದನ್ನು ಮನಗಾಣಿಸುತ್ತದೆ.

ಸಿನಿಮಾದ ಕೊನೆಯಲ್ಲಿ ಮೂರನೇ ದಿನ ಡೀಲ್‌ಮನ್ ಒಂದು ಗಂಟೆ ಮೊದಲೇ ನಿದ್ದೆಯಿಂದ ಎಚ್ಚರಗೊಳ್ಳುತ್ತಾಳೆ. ಆದುದರಿಂದ ಅವಳಿಗೆ ಎದ್ದ ತಕ್ಷಣ ಮಾಡುಲು ಕೆಲಸವಿರುವುದಿಲ್ಲ ಹಾಗೂ ಅವಳ ದಿನಚರಿ ಇರುಸು ಮುರಿಸಿಂದಲೇ ಶುರುವಾಗಿ, ಕೊನೆಗೆ ಅದು ಮಧ್ಯಾಹ್ನದ ಹೊತ್ತಿನಲ್ಲಿ ಬರುವ ಗಿರಾಕಿ ಹಾಸಿಗೆಯಲ್ಲಿ ಅವಳಿಗೆ ಇಷ್ಟವಿಲ್ಲದಂತೆಯೇ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾನೆ. ಇದನ್ನು ಸಹಿಸದ ಡೀಲ್‌ಮನ್ ಕ್ರಿಯೆಯ ನಂತರ ತನ್ನ ಬಟ್ಟೆಗಳನ್ನು ತೊಟ್ಟು, ಹಾಸಿಗೆಯಲ್ಲಿ ಮಲಗಿದ್ದ ಗಿರಾಕಿಯ ಕತ್ತಿಗೆ ಮೇಜಿನ ಮೇಲಿದ್ದ ಕತ್ತರಿಯಿಂದ ಇರಿದು ಕೊಲ್ಲುತ್ತಾಳೆ.

ಅವನನ್ನು ಕೊಂದ ನಂತರವಷ್ಟೇ ಮುಂದೇನೆಂಬ ಪ್ರಶ್ನೆ ಡೀಲ್‌ಮನ್ ಮತ್ತು ಪ್ರೇಕ್ಷಕರಿಗೆ ಎದುರಾಗುತ್ತದೆ! ಡೀಲ್‌ಮನ್ ಡೈನಿಂಗ್ ಟೇಬಲ್‌ನಲ್ಲಿ ರಕ್ತಸಿಕ್ತ ಕೈಯಲ್ಲಿ ಕೂತು ಯೋಚನೆ ಮಾಡುವಾಗಲೇ ಸಿನಿಮಾ ಮುಗಿಯುತ್ತದೆ.

ಮೀಟಿಂಗ್ಸ್ ಅಫ್ ಅನ್ನಾ (ಫ್ರೆಂಚ್, 1978): ಅನ್ನಾ ಸ್ವತಂತ್ರ ಸಿನಿಮಾ ನಿರ್ದೇಶಕಿ. ತನ್ನ ಸಿನಿಮಾಗಳನ್ನು ಯೂರೋಪಿನ ವಿವಿಧ ನಗರಗಳಲ್ಲಿ ಪ್ರದರ್ಶಿಸುತ್ತಾ, ಬೇರೆ ಬೇರೆ ಜನರನ್ನು ಭೇಟಿ ಮಾಡುವುದೇ ಈ ಸಿನಿಮಾದ ಕಥಾನಕ.

ಸೆಲ್ಫ್ ರೆಫ್ಲೆಕ್ಟಿವ್ ಜಾನರ್‌ಗೆ ಸೇರುವ ಈ ಸಿನಿಮಾ, ನಿರ್ದೇಶಕಿಯ ಸ್ವಂತಃ ಅನುಭವವನ್ನೇ ಸಿನಿಮಾವಾಗಿಸಿರುವ ಅನನ್ಯ ಪ್ರಯತ್ನವೆನಿಸುತ್ತದೆ.

ಅನ್ನಾ ಜರ್ಮನಿಯ ಹೋಟೆಲ್ ಒಂದರಲ್ಲಿ ಅಪರಚಿತನೊಬ್ಬನ ಜೊತೆಗೆ ಹಾಸಿಗೆಗೆ ಹೋಗುತ್ತಾಳೆ. ಆದರೆ ಹೊಂದಣಿಕೆಯಾಗದೆ, ಅವನು ಅಲ್ಲಿಂದ ಹೊರಟುಹೋಗುತ್ತಾನೆ. ಮರುದಿನ ಮಗಳ ಹುಟ್ಟುಹಬ್ಬದ ಸಲುವಾಗಿ ಮನೆಗೆ ಬರುವಂತೆ ಆಹ್ವಾನಿಸುತ್ತಾನೆ. ಅನ್ನಾ ಅವನ ಮನೆಗೆ ಹೋಗುತ್ತಾಳೆ. ಅವನ ಹೆಂಡತಿ ಕುಟುಂಬವನ್ನು ಬಿಟ್ಟು ಹೋಗಿರುವ ವಿಷಯ, ಅವನ ಮನೆಯ ಕುರಿತು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲೂ ತನ್ನ ಮನೆ ಸುರಕ್ಷಿತವಾಗಿರುವುದರ ಬಗ್ಗೆ ಹೇಳುತ್ತಾನೆ. ಅನ್ನಾಳಿಗೆ ಟುಲಿಪ್ಸ್ ಹೂಗಳು ಇಷ್ಟವಾ ಎಂದು ಅವನು ಕೇಳಲು, ಅವಳು ಇಲ್ಲವೆನ್ನುತ್ತಾಳೆ. ಆಗ ಅನ್ನಾ ಎಲ್ಲ ಹೆಂಗಸರಂತಲ್ಲ ಎಂಬುದು ತಿಳಿಯುತ್ತದೆ.

ರೈಲ್ವೇ ನಿಲ್ದಾಣದಲ್ಲಿ ತನ್ನ ತಾಯಿಯ ಗೆಳತಿಯೊಬ್ಬಳನ್ನು ಭೇಟಿಯಾಗುತ್ತಾಳೆ. ಅವಳ ಕುಟುಂಬ ಮೊದಲು ಬೆಲ್ಜಿಯಂನ ಬ್ರಸೆಲ್ಸ್‌ನಿಂದ ವಲಸೆ ಬಂದು ಜರ್ಮನಿಯಲ್ಲಿ ನೆಲೆಯೂರಿರುತ್ತದೆ. ತನ್ನ ಸದಾ ಸುತ್ತುವ ಕೆಲಸದ ಕಾರಣದಿಂದ ತನ್ನ ಸಂಗಾತಿಯಿಂದ ಬೇರ್ಪಟ್ಟಿರುವುದಾಗಿ ಅನ್ನಾ ಹೇಳುತ್ತಾಳೆ. ಅದಕ್ಕೆ ತಾಯಿಯ ಗೆಳತಿ ತನ್ನ ಸುಂದರ ಮಗನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಆದರೆ ಅದನ್ನು ನಿರಾಕರಿಸಿ ಅನ್ನಾ ಮುಂದೆ ಸಾಗುತ್ತಾಳೆ.

ಮೀಟಿಂಗ್ಸ್ ಅಫ್ ಅನ್ನಾ

ರೈಲಿನಲ್ಲಿ ಮತ್ತೊಬ್ಬ ಅಪರಿಚತನೊಂದಿಗೆ ಲೋಕಾಭಿರಾಮದ ಸಂವಾದ. ಯಾರು ಯಾರ ಕುರಿತೂ ಆಸಕ್ತಿ ತೋರದೆ, ಸಿಗರೇಟ್‌ಗಳನ್ನು ಸೇದುತ್ತಾ ರೈಲಿನ ಕಿಟಕಿಯಿಂದ ಹೊರ ನೋಡುತ್ತಾ ಮಾತಾಡುತ್ತಾರೆ.

ಹೀಗೆ ಸಿನಿಮಾದಲ್ಲಿ ನೇರವಾಗಿ ಏನನ್ನೂ ಹೇಳದೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗಿದೆ. ಆರ್ಥಿಕ ಕುಸಿತದಿಂದ ಇಡೀ ಯೂರೋಪ್ ಅನುಭವಿಸುತ್ತಿರುವ ಯಾತನೆ, ಹಣದುಬ್ಬರ, ಬೆಲೆ ಏರಿಕೆ, ವಲಸೆ ಮುಂತಾದ ವಿಷಯಗಳ ಜೊತೆಗೇ, ಜರ್ಮನಿಯನ್ನು ಯುದ್ಧದ ನಂತರ ಹೇಗೆ ಕಟ್ಟಿದರೆಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ಒಂಟಿತನ, ಬದುಕಿನ ಅರ್ಥಹೀನತೆ, ಲೆಸ್ಬಿಯನ್‌ಗಳ ಕುರಿತು ನಿರ್ದೇಶಕಿಯ ವ್ಯಾಖ್ಯಾನ ಸಿನಿಮಾದಲ್ಲಿ ಮೂಡುತ್ತದೆ.

ಶಾಂತಾಲ್ ಅಕೆಮನ್: ಶಾಂತಾಲ್ ಅಕೆಮನ್‌ರ ಸಿನಿಮಾಗಳನ್ನು ಕೇವಲ ಫೆಮಿನಿಸಂ ಸಿನಿಮಾಗಳೆಂದು ವಿಂಗಡಿಸಿ ನೋಡದೆ, ಅವರ ಕಥಾವಸ್ತು ವೈಶಿಷ್ಟ್ಯಗಳಿಗೆ ಅತಿಯಾಗಿ ಒತ್ತು ನೀಡದೆ, ಅವರು ಸಿನಿಮಾ ಕಟ್ಟುವ ಕ್ರಮವನ್ನು ನೋಡುವುದು ಅತಿ ಮುಖ್ಯ.

ಸಿನಿಮಾದಲ್ಲಿ ಪುಲ್ ಶಾಟ್, ಮಿಡ್ ಶಾಟ್, ಕ್ಲೋಸ್‌ಅಪ್, ಎಕ್‌ಸ್ಟ್ರೀಮ್ ಕ್ಲೋಸ್‌ಅಪ್‌ಗಳೆಂದು ದೃಶ್ಯವನ್ನು ಕಟ್ಟುವ ವ್ಯಾಕರಣವಿರುತ್ತದೆ. ಇಲ್ಲಿ ಶಾಂತಾಲ್‌ರವರ ಶೈಲಿ ಅತಿ ಸರಳವಾದದ್ದು. ಅವರು ಮಿಡ್ ಶಾಟ್‌ನಿಂದ ದೃಶ್ಯವನ್ನು ಸಂಪೂರ್ಣವಾಗಿ ಚಿತ್ರಿಸುತ್ತಾರೆ. ಯಾವುದೇ ಕಾರಣಕ್ಕು ಕ್ಲೋಸ್‌ಅಪ್, ಪ್ರೊಫೈಲ್ ಶಾಟ್ಸ್ ಚಿತ್ರಿಸುವುದಿಲ್ಲ.

ಇದರ ಮೂಲ ಉದ್ದೇಶವೆಂದರೆ ಒಂದು ಕನಿಷ್ಠತೆಯಲ್ಲಿ ಸಿನಿಮಾ ಕಟ್ಟುವುದು. ಎರಡನೆಯದು, ಪ್ರತಿ ಬಾರಿಯೂ ಕ್ಯಾಮರಾವನ್ನು ಚಲಿಸುತ್ತಾ ಅಥವಾ ದೃಶ್ಯವನ್ನು ತುಂಡರಿಸುತ್ತಾ ಬೇರೆ ಕೋನಗಳಲ್ಲಿ ಚಿತ್ರಿಸದೇ, ದೃಶ್ಯದಲ್ಲಾಗುವ ಚಟುವಟಿಕೆಗಳನ್ನು ಯಾವುದೇ ರೀತಿ ಮ್ಯಾನಿಪುಲೇಟ್ ಮಾಡದೇ ಯಥಾವತ್ತಾಗಿ ಪ್ರೇಕ್ಷಕರ ಮುಂದಿಡುವ ದಿಟ್ಟ ನಿರ್ಧಾರ.

PC : The Guardian, (ಶಾಂತಾಲ್ ಅಕೆಮನ್)

ಹಾಗೂ ಕಥೆ ಮತ್ತು ಕಥೆಯಲ್ಲಾಗುವ ಏರಿಳಿತಗಳೇ ಮುಖ್ಯವೆನ್ನದೆ ದೃಶ್ಯ ಮತ್ತು ಶಬ್ದಗಳಿಂದ ಸಿನಿಮಾವನ್ನು ಕಟ್ಟುತ್ತಾರೆ. ಸಿನಿಮಾದಲ್ಲಿ ಖಾಲಿತನ ತುಂಬಲು ಮತ್ತು ಪ್ರೇಕ್ಷಕನ ಭಾವನೆಗಳನ್ನು ಮ್ಯಾನಿಪುಲೇಟ್ ಮಾಡುವ ಉದ್ದೇಶದಿಂದ ವೇಗದ ಎಡಿಟಿಂಗ್ ಮಾಡುವುದನ್ನು ಬಳಸದೆ, ಹಿನ್ನೆಲೆ ಸಂಗೀತವನ್ನು ಉಪಯೋಗಿಸದೆ ಬದುಕಿಗೆ ಹತ್ತಿರವಾಗಿರುವ ಸಿನಿಮಾಗಳನ್ನು ಶಾಂತಾಲ್ ಅಕೆಮನ್ ನಿರ್ದೇಶಿಸಿರುವುದು ಶ್ಲಾಘನಿಯ.

ಶಾಂತಾಲ್‌ರ ಸಿನಿಮಾಗಳು ಲಾಂಗ್ ಟೇಕ್ಸ್, ಹಿನ್ನೆಲೆ ಸಂಗೀತವಿಲ್ಲದೆ, ಕಥೆಗೆ ಜೋತು ಬೀಳದೆ, ಅಸಂಬದ್ಧವಾಗಿ ಮತ್ತು ಅಮೂರ್ತವಾಗಿ ಕಾಣುತ್ತದೆ. ಇವರು ಮೊದಮೊದಲು ಫ್ರೆಂಚ್ ನಿರ್ದೇಶಕ ಗೊದಾರ್ದ್‌ನ ಸಿನಿಮಾಗಳಿಂದ ಪ್ರಭಾವಿತಗೊಂಡಿದ್ದರೂ, ಸಿನಿಯಾನದಲ್ಲಿ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡಿದ್ದಾರೆ.

ಶಾಂತಾಲ್‌ರ ಸಿನಿಮಾಗಳಲ್ಲಿ ಜೀನ್ ಡೀಲ್‌ಮನ್ ಚಿತ್ರ ಸಿನಿ ಇತಿಹಾಸದಲ್ಲಿ ಅತಿ ಮುಖ್ಯವಾದ ಸಿನಿಮಾ. ಮುಂದಿನ ಹಲವು ಪೀಳಿಗೆಯ ಸಿನಿಮಾ ವಿದ್ಯಾರ್ಥಿಗಳಿಗೆ ಇವರ ಸಿನಿಮಾಗಳು ಮತ್ತು ಶೈಲಿಯನ್ನು ನೋಡಿ ಕಲಿಯುವುದು ಸಾಕಷ್ಟಿದೆ.


ಇದನ್ನೂ ಓದಿ:  ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....