Homeಮುಖಪುಟಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

- Advertisement -
- Advertisement -

ನಮೀಬಿಯಾದಿಂದ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದಾರೆ. ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾದ ಕಾರಣ, ಸರ್ಕಾರ ಮಾಡಿರುವ ಈ ಕೆಲಸ ಮಹತ್ವದೆಂದು ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಆದರೆ ಈ ಚೀತಾಗಳ ಹಿಂದೆಯೇ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತರಲಾಗಿರುವ ಪ್ರಾಣಿಗಳ ಮೇಲೆ ಬೀರುವ ಪರಿಣಾಮಗಳೇನು? ಏನೆಲ್ಲ ಎಚ್ಚರ ವಹಿಸಬೇಕಾಗುತ್ತದೆ? ಕುನೋ ಪ್ರದೇಶದಲ್ಲಿರುವ ಆದಿವಾಸಿಗಳ ಕಥೆ ಏನು? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪರಿಸರತಜ್ಞರು ಈ ಕುರಿತು ಹಲವಾರು ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪರಿಸರ ತಜ್ಞರಾದ ಕಲ್ಕುಳಿ ವಿಠಲ ಹೆಗ್ಡೆ ಹಾಗೂ ಪರಿಸರ ವಿಜ್ಞಾನಿ ನಾಗೇಶ ಹೆಗಡೆಯವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಲ್ಕುಳಿ ವಿಠಲ ಹೆಗ್ಡೆಯವರು ಮಾತನಾಡಿ, “ಎಲ್ಲ ಪ್ರಾಣಿಗಳೂ ತಮ್ಮದೇ ಆದ ಸೀಮಿತ ಪ್ರದೇಶಕ್ಕೆ ಹೊಂದಿಕೊಂಡಿರುತ್ತವೆ. ಅವುಗಳು ತಮ್ಮ ಪ್ರದೇಶವನ್ನು ಗುರುತು ಹಾಕಿಕೊಂಡಿರುತ್ತವೆ. ಚಿರತೆ, ಹುಲಿಯಂತಹ ಪ್ರಾಣಿಗಳು ತಾವು ಹೊಂದಿಕೊಂಡ ಪ್ರದೇಶವನ್ನು ಬಿಟ್ಟು ಹೋಗುವುದಿಲ್ಲ. ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೂ ಇಚ್ಛಿಸುವುದಿಲ್ಲ. ಯಾಕೆಂದರೆ ಬೇರೆ ಪ್ರದೇಶಕ್ಕೆ ಹೋದರೆ ಘರ್ಷಣೆಯಾಗುತ್ತದೆ. ಹೀಗಾಗಿ ಪ್ರಾಣಿಗಳಲ್ಲಿ ಪ್ರಾದೇಶಿಕವಾದ ಹೊಂದಾಣಿಕೆ ಇರುತ್ತದೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮೀಬಿಯಾದಲ್ಲಿನ ವಾತಾವರಣಕ್ಕೂ ಕುನೋ ರಾಷ್ಟ್ರೀಯ ಉದ್ಯಾನದಲ್ಲಿನ ವಾತಾವರಣಕ್ಕೂ ಯಾವುದೇ ವ್ಯತ್ಯಾಸವಿಲ್ಲದೆ ಇರಬಹುದು. ಆದರೆ ತನ್ನದಲ್ಲದ ಪ್ರದೇಶದಲ್ಲಿ ಈ ಪ್ರಾಣಿಗಳು ಬದುಕಿದಾಗ ಅತಿಹೆಚ್ಚು ಕ್ರೂರವಾಗುವ ಸಾಧ್ಯತೆಗಳು ಇರುತ್ತವೆ. ಯಾಕೆಂದರೆ ಈ ಪ್ರಾಣಿಗಳು ಸಹಜವಾಗಿ ಭಯಗೊಂಡಿರುತ್ತವೆ. ಕಂಡಕಂಡವರ ಮೇಲೆಲ್ಲಾ ಎರಗಲು ಮುಂದಾಗುತ್ತವೆ. ಕೃತಕವಾದ ಆಹಾರವನ್ನು ಕೊಡದಿದ್ದರೆ ಅವು ಭಯಗೊಂಡು ಸತ್ತೂ ಹೋಗಬಹುದು. ಎರಡು ಸಾಧ್ಯತೆ ಇದೆ. ಚೀತಾಗಳೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಎಲ್ಲವನ್ನೂ ಮುಗಿಸಬಹುದು, ಅಥವಾ ಹೆದರಿಕೊಂಡು ತಾವೇ ಸಾಯಬಹುದು” ಎಂದು ವಿವರಿಸಿದರು.

ಸಾಹಿತ್ಯವಿಲ್ಲದ ಹೋರಾಟ, ಹೋರಾಟವಿಲ್ಲದ ಸಾಹಿತ್ಯ ಜೊಳ್ಳು: ಕಲ್ಕುಳಿ ವಿಠಲ ಹೆಗ್ಡೆ | Prajavani
ಕಲ್ಕುಳಿ ವಿಠಲ ಹೆಗ್ಡೆ

“ನಮ್ಮಲ್ಲಿ ಯಾರಾದರೂ ಹಾವುಗಳನ್ನು ಹಿಡಿದಾಗ, ಯಾವುದೋ ಒಂದು ದೂರದ ಪ್ರದೇಶಕ್ಕೆ ಬಿಡುವುದನ್ನು ನೋಡಿದ್ದೇವೆ. ತನ್ನದಲ್ಲದ ಪ್ರದೇಶವೆಂದರೆ ಈ ಹಾವಿಗೆ ಬೇರೆಯ ದೇಶಕ್ಕೆ ಹೋದಂತೆ ಭಾಸವಾಗುತ್ತದೆ. ತನಗೆ ಪರಿಚಯವಿಲ್ಲದ ನೆಲದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾದರೆ ಬಹಳ ಕಾಲ ಬೇಕಾಗುತ್ತದೆ. ಪೇಟೆಗಳಲ್ಲಿ ಮಂಗನ ಕಾಟ ಹೆಚ್ಚಾದಾಗ ಗುಟ್ಟಾಗಿ ಅವುಗಳನ್ನು ಹಿಡಿದು, ಆಗುಂಬೆ ಕಾಡಿಗೆ ತಂದು ಬಿಡುವವರು ಇದ್ದಾರೆ. ಈ ವರ್ಷ ತಂದು ಬಿಟ್ಟ ಮಂಗಗಳಲ್ಲಿ ಅರ್ಧದಷ್ಟು ಮುಂದಿನ ವರ್ಷ ಇರುವುದಿಲ್ಲ” ಎಂದರು.

“ಆಫ್ರಿಕಾದಲ್ಲಿ ಮನುಷ್ಯರೊಟ್ಟಿಗೆ ಬದುಕಿದ ಪ್ರಾಣಿಗಳನ್ನು (ಅಂದರೆ ಮೃಗಾಲಯದಲ್ಲಿ ಬೆಳೆದ ಪ್ರಾಣಿಗಳನ್ನು) ತಂದಿದ್ದಾರೆ. ಇವುಗಳು ಕಾಡಲ್ಲಿ ಬೆಳೆದ ಪ್ರಾಣಿಗಳಲ್ಲ. ಹೀಗಾಗಿ ಮನುಷ್ಯರೊಟ್ಟಿಗೆ ಬೆಳೆದ ಪ್ರಾಣಿಗಳನ್ನು ಮನುಷ್ಯರೇ ಬೆಳೆಸಬೇಕು. ಇವುಗಳು ಸ್ವತಂತ್ರವಾಗಿ ಬೆಳೆಯಲೆಂದು ಬಿಟ್ಟು ಉಪವಾಸ ಕೆಡವಿದರೆ ಮೊದಲು ದಾಳಿ ಮಾಡುವುದು ಮನುಷ್ಯರ ಮೇಲೆಯೇ. ಯಾಕೆಂದರೆ ಈ ಪ್ರಾಣಿಗಳಿಗೆ ಮನುಷ್ಯರ ವಿಷಯ ಮಾತ್ರ ಗೊತ್ತಿರುತ್ತದೆ” ಎಂದು ಎಚ್ಚರಿಸಿದರು.

“ಮೃಗಾಲಯದಲ್ಲಿ ಜನಿಸಿದ ಹುಲಿಗಳನ್ನು ನಾಗರಹೊಳೆ ಕಾಡಿಗೆ ಬಿಟ್ಟರು. ಹುಲಿ ಸಂತತಿ ಹೆಚ್ಚು ಮಾಡಬೇಕೆಂದು ಯೋಚಿಸಿದ್ದರು. ಈ ಹುಲಿಗಳು ಹಿಡಿದದ್ದು ಅರಣ್ಯಾ ಸಿಬ್ಬಂದಿಗಳನ್ನು ಎಂಬುದನ್ನು ಮರೆಯಬಾರದು. ಮನುಷ್ಯರ ಬಗ್ಗೆ ಈ ಪ್ರಾಣಿಗಳಿಗೆ ಗೊತ್ತಿರುತ್ತದೆಯೇ ಹೊರತು, ಶಿಕಾರಿ ಮಾಡಿ ಅಭ್ಯಾಸವಿರುವುದಿಲ್ಲ. ತಾನು ಶಿಕಾರಿ ಮಾಡಬೇಕಾದ ಸಸ್ಯಾಹಾರಿ ಪ್ರಾಣಿ ಎಲ್ಲಿರುತ್ತದೆ ಎಂದು ಈ ಚೀತಾಕ್ಕೆ ಗೊತ್ತಿರಬೇಕು, ಓಡಿಸಿಕೊಂಡು ಹೋಗಿ ಹಿಡಿಯಬೇಕು. ಆಫ್ರಿಕಾದಲ್ಲಿ ಇದ್ದ ಪರಿಸ್ಥಿತಿಗೂ ಇಲ್ಲಿಗೂ ಹೊಂದಿಕೊಳ್ಳಬೇಕು. ಇದು ಬಾಡಿಗೆ ಮನೆ ಬದಲಿಸಿದಷ್ಟು ಸುಲಭವಲ್ಲ” ಎಂದು ಅಭಿಪ್ರಾಯಪಟ್ಟರು.

“ಈ ಚೀತಾಗಳನ್ನು ಮೃಗಾಲಯದಲ್ಲಿ ಸಾಕಬಹುದಿತ್ತು. ಉದಾಹರಣೆಗೆ ಅಮೆರಿಕಾದಲ್ಲಿ ಹುಲಿ ಇರದಿದ್ದರೂ ಅಲ್ಲಿನ ಮೃಗಾಲಯಗಳಲ್ಲಿ ಭಾರತದ ಹುಲಿಗಳನ್ನು ನೋಡಬಹುದು. ಸೂಕ್ತ ವಾತಾವರಣ ಕಲ್ಪಿಸಿ ಪೋಷಣೆ ಮಾಡುತ್ತಾರೆ. ಆದರೆ ಇವುಗಳನ್ನು ಮುಕ್ತವಾದ ಕಾಡಿಗೆ ಬಿಟ್ಟರೆ ಉಳಿಯುವುದು ಕಷ್ಟ. ಮತ್ತಷ್ಟು ಅನಾಹುತಗಳಿಗೆ ಎಡೆಮಾಡಿಕೊಟ್ಟಂತೆ” ಎಂದು ಭವಿಷ್ಯ ನುಡಿದರು.

ಕಾನೂನಿನ ತೊಡಕು ಎದುರಾಗುತ್ತದೆ: ನಾಗೇಶ ಹೆಗಡೆ

ಪರಿಸರ ತಜ್ಞರಾದ ನಾಗೇಶ ಹೆಗಡೆಯವರು ಮಾತನಾಡಿ, “ಚೀತಾಗಳು ಹುಲ್ಲುಗಾವಲು ಪ್ರದೇಶದಲ್ಲಿ ಬದುಕುವ ಪ್ರಾಣಿಗಳಾಗಿವೆ. ಆದರೆ ಇಲ್ಲಿ ಹುಲ್ಲುಗಾವಲು ಇಲ್ಲ. ಇದ್ದಬದ್ಧ ಮರಗಳನ್ನು ಕಡಿದು ಹುಲ್ಲುಗಾವಲು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವುಗಳ ಆಹಾರಕ್ಕೆ ಸಾಕಾಗುವಷ್ಟು ಸಸ್ಯಾಹಾರಿ ಪ್ರಾಣಿಗಳು ಬೇಕು. ಸದ್ಯಕ್ಕೆ ಸಮಸ್ಯೆ ಇಲ್ಲವಾದರೂ ಮುಂದಿನ ವರ್ಷಗಳಲ್ಲಿ ಕೃಷ್ಣಮೃಗ, ಜಿಂಕೆ ಮೊದಲಾದ ಪ್ರಾಣಿಗಳನ್ನು ಬೇರೆ ಕಡೆಯಿಂದ ತರಬೇಕಾಗುತ್ತದೆ. ಅದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಒಂದೆರಡು ಸಾವಿರ ಜಿಂಕೆಗಳನ್ನು ತಂದು ಇಲ್ಲಿಗೆ ಬಿಟ್ಟೆವೆಂದೂ ತಿಳಿಯೋಣ. ಆದರೆ ಅಲ್ಲಿ ಈಗಾಗಲೇ ಕತ್ತೆಕಿರುಬ, ಚಿರತೆಗಳಿವೆ. ಇವುಗಳೇ ಜಿಂಕೆಗಳನ್ನು ತಿಂದು ಮುಗಿಸುತ್ತವೆ. ಚೀತಾಗಳಿಗಿಂತ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಹೇಳಿದರು.

May be an image of 1 person
ನಾಗೇಶ ಹೆಗಡೆ

“ಚೀತಾಕ್ಕೆ ಹೋಲಿಸಿದರೆ ಚಿರತೆ ಅತ್ಯಂತ ಅಪಾಯಕಾರಿ ಪ್ರಾಣಿ. ಚಿರತೆಯಂತೆ ಮರ ಹತ್ತಲೂ ಬಾರದ ಪ್ರಾಣಿ ಇದು. ವೇಗವಾಗಿ ಓಡಬಲ್ಲವು ಅಷ್ಟೇ. ಆದರೆ ಚಿರತೆ ಹೊಂಚಿಹಾಕಿ ಭೇಟಿಯಾಡುತ್ತದೆ” ಎಂದು ತಿಳಿಸಿದರು.

“ನಮ್ಮಲ್ಲಿ ಸಾಕಷ್ಟು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿವೆ. ಅವುಗಳ ಉಳಿವಿಗಾಗಿ ಮೋದಿಯವರು ಏನನ್ನೂ ಮಾಡಿಲ್ಲ. ವನ್ಯಜೀವಿ ಮಂಡಳಿಗೆ ಮೋದಿಯವರೇ ಅಧ್ಯಕ್ಷರಾಗಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಿಂದ ಸಣ್ಣದೊಂದು ಸಭೆ ಮಾಡಿದ್ದು ಕಾಣಲಿಲ್ಲ” ಎಂದು ವಿಷಾದಿಸಲಿಲ್ಲ.

“ಗುಜರಾತ್‌ನಲ್ಲಿ ಒಂದೇ ಗುಂಪಿನಲ್ಲಿ ಸಿಂಹಗಳಿವೆ. ರೋಗರುಜಿನ ಬಂದರೆ ಒಮ್ಮೆಲೇ ಸಾಯುತ್ತವೆ. ಹೀಗಾಗಿ ಒಂದಿಷ್ಟು ಸಿಂಹಗಳನ್ನು ಕುನೋಗೆ ತರಬೇಕೆಂದಿದ್ದರು. ಇದಕ್ಕೆ ಗುಜರಾತ್‌ ಸರ್ಕಾರ ಇದಕ್ಕೆ ಸಿದ್ಧವಿರಲಿಲ್ಲ. ಮೋದಿಯವರು ಗುಜರಾತ್‌ನಿಂದ ಸಿಂಹಗಳನ್ನು ತಂದು ಇಲ್ಲಿ ಬಿಡಬಹುದಿತ್ತು. ಆದರೆ ನಮೀಬಿಯಾದಿಂದ ಚೀತಾಗಳನ್ನು ತಂದಿದ್ದಾರೆ” ಎಂದರು.

ಕುನೋ ರಾಷ್ಟ್ರೀಯ ಉದ್ಯಾನ ಭಾಗದಲ್ಲಿನ ಆದಿವಾಸಿಗಳ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, “ಈ ಭಾಗದಲ್ಲಿ ಸುಮಾರು 150 ಹಳ್ಳಿಗಳಿವೆ. ಅಲ್ಲಿನ ಆದಿವಾಸಿಗಳನ್ನು ಬೇರೆ ಕಡೆ ಕಳುಹಿಸಬೇಕು. ಸರಿಯಾಗಿ ಪುನರ್‌ವಸತಿ ಕಲ್ಪಿಸಿದರೆ ತಾವಾಗಿಯೇ ಖುಷಿಯಿಂದ ಆದಿವಾಸಿಗಳು ಹೊರಗೆ ಹೋಗಬಹುದು. ಆದರೆ ನಮ್ಮ ದೇಶದಲ್ಲಿ ಸರಿಯಾದ ಮೂಲಸೌಕರ್ಯ ಕಲ್ಪಿಸಿ ಪುನರ್‌ವಸತಿ ಮಾಡಿದ್ದೇ ಅಪರೂಪ. ಎಲ್ಲೋ ಒಂದು ಕಡೆ ತಗಡಿನ ಶೆಡ್ಡು ನಿರ್ಮಿಸಿ ಆದಿವಾಸಿಗಳನ್ನು ಅಲ್ಲಿಗೆ ತಂದು ಬಿಸಾಡುತ್ತಾರೆ. ಮತ್ತೆ ಆದಿವಾಸಿಗಳು ಅತಂತ್ರರಾಗುತ್ತಾರೆ. ಯಾವುದಾದರೂ ಚೀತಾ ಸತ್ತರೆ ಮತ್ತೆ ಈ ಜನರಿಗೆ ತೊಂದರೆ ಕೊಡುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...