Homeಮುಖಪುಟಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

- Advertisement -
- Advertisement -

ನಮೀಬಿಯಾದಿಂದ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದಾರೆ. ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾದ ಕಾರಣ, ಸರ್ಕಾರ ಮಾಡಿರುವ ಈ ಕೆಲಸ ಮಹತ್ವದೆಂದು ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಆದರೆ ಈ ಚೀತಾಗಳ ಹಿಂದೆಯೇ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತರಲಾಗಿರುವ ಪ್ರಾಣಿಗಳ ಮೇಲೆ ಬೀರುವ ಪರಿಣಾಮಗಳೇನು? ಏನೆಲ್ಲ ಎಚ್ಚರ ವಹಿಸಬೇಕಾಗುತ್ತದೆ? ಕುನೋ ಪ್ರದೇಶದಲ್ಲಿರುವ ಆದಿವಾಸಿಗಳ ಕಥೆ ಏನು? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪರಿಸರತಜ್ಞರು ಈ ಕುರಿತು ಹಲವಾರು ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪರಿಸರ ತಜ್ಞರಾದ ಕಲ್ಕುಳಿ ವಿಠಲ ಹೆಗ್ಡೆ ಹಾಗೂ ಪರಿಸರ ವಿಜ್ಞಾನಿ ನಾಗೇಶ ಹೆಗಡೆಯವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಲ್ಕುಳಿ ವಿಠಲ ಹೆಗ್ಡೆಯವರು ಮಾತನಾಡಿ, “ಎಲ್ಲ ಪ್ರಾಣಿಗಳೂ ತಮ್ಮದೇ ಆದ ಸೀಮಿತ ಪ್ರದೇಶಕ್ಕೆ ಹೊಂದಿಕೊಂಡಿರುತ್ತವೆ. ಅವುಗಳು ತಮ್ಮ ಪ್ರದೇಶವನ್ನು ಗುರುತು ಹಾಕಿಕೊಂಡಿರುತ್ತವೆ. ಚಿರತೆ, ಹುಲಿಯಂತಹ ಪ್ರಾಣಿಗಳು ತಾವು ಹೊಂದಿಕೊಂಡ ಪ್ರದೇಶವನ್ನು ಬಿಟ್ಟು ಹೋಗುವುದಿಲ್ಲ. ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೂ ಇಚ್ಛಿಸುವುದಿಲ್ಲ. ಯಾಕೆಂದರೆ ಬೇರೆ ಪ್ರದೇಶಕ್ಕೆ ಹೋದರೆ ಘರ್ಷಣೆಯಾಗುತ್ತದೆ. ಹೀಗಾಗಿ ಪ್ರಾಣಿಗಳಲ್ಲಿ ಪ್ರಾದೇಶಿಕವಾದ ಹೊಂದಾಣಿಕೆ ಇರುತ್ತದೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮೀಬಿಯಾದಲ್ಲಿನ ವಾತಾವರಣಕ್ಕೂ ಕುನೋ ರಾಷ್ಟ್ರೀಯ ಉದ್ಯಾನದಲ್ಲಿನ ವಾತಾವರಣಕ್ಕೂ ಯಾವುದೇ ವ್ಯತ್ಯಾಸವಿಲ್ಲದೆ ಇರಬಹುದು. ಆದರೆ ತನ್ನದಲ್ಲದ ಪ್ರದೇಶದಲ್ಲಿ ಈ ಪ್ರಾಣಿಗಳು ಬದುಕಿದಾಗ ಅತಿಹೆಚ್ಚು ಕ್ರೂರವಾಗುವ ಸಾಧ್ಯತೆಗಳು ಇರುತ್ತವೆ. ಯಾಕೆಂದರೆ ಈ ಪ್ರಾಣಿಗಳು ಸಹಜವಾಗಿ ಭಯಗೊಂಡಿರುತ್ತವೆ. ಕಂಡಕಂಡವರ ಮೇಲೆಲ್ಲಾ ಎರಗಲು ಮುಂದಾಗುತ್ತವೆ. ಕೃತಕವಾದ ಆಹಾರವನ್ನು ಕೊಡದಿದ್ದರೆ ಅವು ಭಯಗೊಂಡು ಸತ್ತೂ ಹೋಗಬಹುದು. ಎರಡು ಸಾಧ್ಯತೆ ಇದೆ. ಚೀತಾಗಳೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಎಲ್ಲವನ್ನೂ ಮುಗಿಸಬಹುದು, ಅಥವಾ ಹೆದರಿಕೊಂಡು ತಾವೇ ಸಾಯಬಹುದು” ಎಂದು ವಿವರಿಸಿದರು.

ಸಾಹಿತ್ಯವಿಲ್ಲದ ಹೋರಾಟ, ಹೋರಾಟವಿಲ್ಲದ ಸಾಹಿತ್ಯ ಜೊಳ್ಳು: ಕಲ್ಕುಳಿ ವಿಠಲ ಹೆಗ್ಡೆ | Prajavani
ಕಲ್ಕುಳಿ ವಿಠಲ ಹೆಗ್ಡೆ

“ನಮ್ಮಲ್ಲಿ ಯಾರಾದರೂ ಹಾವುಗಳನ್ನು ಹಿಡಿದಾಗ, ಯಾವುದೋ ಒಂದು ದೂರದ ಪ್ರದೇಶಕ್ಕೆ ಬಿಡುವುದನ್ನು ನೋಡಿದ್ದೇವೆ. ತನ್ನದಲ್ಲದ ಪ್ರದೇಶವೆಂದರೆ ಈ ಹಾವಿಗೆ ಬೇರೆಯ ದೇಶಕ್ಕೆ ಹೋದಂತೆ ಭಾಸವಾಗುತ್ತದೆ. ತನಗೆ ಪರಿಚಯವಿಲ್ಲದ ನೆಲದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾದರೆ ಬಹಳ ಕಾಲ ಬೇಕಾಗುತ್ತದೆ. ಪೇಟೆಗಳಲ್ಲಿ ಮಂಗನ ಕಾಟ ಹೆಚ್ಚಾದಾಗ ಗುಟ್ಟಾಗಿ ಅವುಗಳನ್ನು ಹಿಡಿದು, ಆಗುಂಬೆ ಕಾಡಿಗೆ ತಂದು ಬಿಡುವವರು ಇದ್ದಾರೆ. ಈ ವರ್ಷ ತಂದು ಬಿಟ್ಟ ಮಂಗಗಳಲ್ಲಿ ಅರ್ಧದಷ್ಟು ಮುಂದಿನ ವರ್ಷ ಇರುವುದಿಲ್ಲ” ಎಂದರು.

“ಆಫ್ರಿಕಾದಲ್ಲಿ ಮನುಷ್ಯರೊಟ್ಟಿಗೆ ಬದುಕಿದ ಪ್ರಾಣಿಗಳನ್ನು (ಅಂದರೆ ಮೃಗಾಲಯದಲ್ಲಿ ಬೆಳೆದ ಪ್ರಾಣಿಗಳನ್ನು) ತಂದಿದ್ದಾರೆ. ಇವುಗಳು ಕಾಡಲ್ಲಿ ಬೆಳೆದ ಪ್ರಾಣಿಗಳಲ್ಲ. ಹೀಗಾಗಿ ಮನುಷ್ಯರೊಟ್ಟಿಗೆ ಬೆಳೆದ ಪ್ರಾಣಿಗಳನ್ನು ಮನುಷ್ಯರೇ ಬೆಳೆಸಬೇಕು. ಇವುಗಳು ಸ್ವತಂತ್ರವಾಗಿ ಬೆಳೆಯಲೆಂದು ಬಿಟ್ಟು ಉಪವಾಸ ಕೆಡವಿದರೆ ಮೊದಲು ದಾಳಿ ಮಾಡುವುದು ಮನುಷ್ಯರ ಮೇಲೆಯೇ. ಯಾಕೆಂದರೆ ಈ ಪ್ರಾಣಿಗಳಿಗೆ ಮನುಷ್ಯರ ವಿಷಯ ಮಾತ್ರ ಗೊತ್ತಿರುತ್ತದೆ” ಎಂದು ಎಚ್ಚರಿಸಿದರು.

“ಮೃಗಾಲಯದಲ್ಲಿ ಜನಿಸಿದ ಹುಲಿಗಳನ್ನು ನಾಗರಹೊಳೆ ಕಾಡಿಗೆ ಬಿಟ್ಟರು. ಹುಲಿ ಸಂತತಿ ಹೆಚ್ಚು ಮಾಡಬೇಕೆಂದು ಯೋಚಿಸಿದ್ದರು. ಈ ಹುಲಿಗಳು ಹಿಡಿದದ್ದು ಅರಣ್ಯಾ ಸಿಬ್ಬಂದಿಗಳನ್ನು ಎಂಬುದನ್ನು ಮರೆಯಬಾರದು. ಮನುಷ್ಯರ ಬಗ್ಗೆ ಈ ಪ್ರಾಣಿಗಳಿಗೆ ಗೊತ್ತಿರುತ್ತದೆಯೇ ಹೊರತು, ಶಿಕಾರಿ ಮಾಡಿ ಅಭ್ಯಾಸವಿರುವುದಿಲ್ಲ. ತಾನು ಶಿಕಾರಿ ಮಾಡಬೇಕಾದ ಸಸ್ಯಾಹಾರಿ ಪ್ರಾಣಿ ಎಲ್ಲಿರುತ್ತದೆ ಎಂದು ಈ ಚೀತಾಕ್ಕೆ ಗೊತ್ತಿರಬೇಕು, ಓಡಿಸಿಕೊಂಡು ಹೋಗಿ ಹಿಡಿಯಬೇಕು. ಆಫ್ರಿಕಾದಲ್ಲಿ ಇದ್ದ ಪರಿಸ್ಥಿತಿಗೂ ಇಲ್ಲಿಗೂ ಹೊಂದಿಕೊಳ್ಳಬೇಕು. ಇದು ಬಾಡಿಗೆ ಮನೆ ಬದಲಿಸಿದಷ್ಟು ಸುಲಭವಲ್ಲ” ಎಂದು ಅಭಿಪ್ರಾಯಪಟ್ಟರು.

“ಈ ಚೀತಾಗಳನ್ನು ಮೃಗಾಲಯದಲ್ಲಿ ಸಾಕಬಹುದಿತ್ತು. ಉದಾಹರಣೆಗೆ ಅಮೆರಿಕಾದಲ್ಲಿ ಹುಲಿ ಇರದಿದ್ದರೂ ಅಲ್ಲಿನ ಮೃಗಾಲಯಗಳಲ್ಲಿ ಭಾರತದ ಹುಲಿಗಳನ್ನು ನೋಡಬಹುದು. ಸೂಕ್ತ ವಾತಾವರಣ ಕಲ್ಪಿಸಿ ಪೋಷಣೆ ಮಾಡುತ್ತಾರೆ. ಆದರೆ ಇವುಗಳನ್ನು ಮುಕ್ತವಾದ ಕಾಡಿಗೆ ಬಿಟ್ಟರೆ ಉಳಿಯುವುದು ಕಷ್ಟ. ಮತ್ತಷ್ಟು ಅನಾಹುತಗಳಿಗೆ ಎಡೆಮಾಡಿಕೊಟ್ಟಂತೆ” ಎಂದು ಭವಿಷ್ಯ ನುಡಿದರು.

ಕಾನೂನಿನ ತೊಡಕು ಎದುರಾಗುತ್ತದೆ: ನಾಗೇಶ ಹೆಗಡೆ

ಪರಿಸರ ತಜ್ಞರಾದ ನಾಗೇಶ ಹೆಗಡೆಯವರು ಮಾತನಾಡಿ, “ಚೀತಾಗಳು ಹುಲ್ಲುಗಾವಲು ಪ್ರದೇಶದಲ್ಲಿ ಬದುಕುವ ಪ್ರಾಣಿಗಳಾಗಿವೆ. ಆದರೆ ಇಲ್ಲಿ ಹುಲ್ಲುಗಾವಲು ಇಲ್ಲ. ಇದ್ದಬದ್ಧ ಮರಗಳನ್ನು ಕಡಿದು ಹುಲ್ಲುಗಾವಲು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವುಗಳ ಆಹಾರಕ್ಕೆ ಸಾಕಾಗುವಷ್ಟು ಸಸ್ಯಾಹಾರಿ ಪ್ರಾಣಿಗಳು ಬೇಕು. ಸದ್ಯಕ್ಕೆ ಸಮಸ್ಯೆ ಇಲ್ಲವಾದರೂ ಮುಂದಿನ ವರ್ಷಗಳಲ್ಲಿ ಕೃಷ್ಣಮೃಗ, ಜಿಂಕೆ ಮೊದಲಾದ ಪ್ರಾಣಿಗಳನ್ನು ಬೇರೆ ಕಡೆಯಿಂದ ತರಬೇಕಾಗುತ್ತದೆ. ಅದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಒಂದೆರಡು ಸಾವಿರ ಜಿಂಕೆಗಳನ್ನು ತಂದು ಇಲ್ಲಿಗೆ ಬಿಟ್ಟೆವೆಂದೂ ತಿಳಿಯೋಣ. ಆದರೆ ಅಲ್ಲಿ ಈಗಾಗಲೇ ಕತ್ತೆಕಿರುಬ, ಚಿರತೆಗಳಿವೆ. ಇವುಗಳೇ ಜಿಂಕೆಗಳನ್ನು ತಿಂದು ಮುಗಿಸುತ್ತವೆ. ಚೀತಾಗಳಿಗಿಂತ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಹೇಳಿದರು.

May be an image of 1 person
ನಾಗೇಶ ಹೆಗಡೆ

“ಚೀತಾಕ್ಕೆ ಹೋಲಿಸಿದರೆ ಚಿರತೆ ಅತ್ಯಂತ ಅಪಾಯಕಾರಿ ಪ್ರಾಣಿ. ಚಿರತೆಯಂತೆ ಮರ ಹತ್ತಲೂ ಬಾರದ ಪ್ರಾಣಿ ಇದು. ವೇಗವಾಗಿ ಓಡಬಲ್ಲವು ಅಷ್ಟೇ. ಆದರೆ ಚಿರತೆ ಹೊಂಚಿಹಾಕಿ ಭೇಟಿಯಾಡುತ್ತದೆ” ಎಂದು ತಿಳಿಸಿದರು.

“ನಮ್ಮಲ್ಲಿ ಸಾಕಷ್ಟು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿವೆ. ಅವುಗಳ ಉಳಿವಿಗಾಗಿ ಮೋದಿಯವರು ಏನನ್ನೂ ಮಾಡಿಲ್ಲ. ವನ್ಯಜೀವಿ ಮಂಡಳಿಗೆ ಮೋದಿಯವರೇ ಅಧ್ಯಕ್ಷರಾಗಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಿಂದ ಸಣ್ಣದೊಂದು ಸಭೆ ಮಾಡಿದ್ದು ಕಾಣಲಿಲ್ಲ” ಎಂದು ವಿಷಾದಿಸಲಿಲ್ಲ.

“ಗುಜರಾತ್‌ನಲ್ಲಿ ಒಂದೇ ಗುಂಪಿನಲ್ಲಿ ಸಿಂಹಗಳಿವೆ. ರೋಗರುಜಿನ ಬಂದರೆ ಒಮ್ಮೆಲೇ ಸಾಯುತ್ತವೆ. ಹೀಗಾಗಿ ಒಂದಿಷ್ಟು ಸಿಂಹಗಳನ್ನು ಕುನೋಗೆ ತರಬೇಕೆಂದಿದ್ದರು. ಇದಕ್ಕೆ ಗುಜರಾತ್‌ ಸರ್ಕಾರ ಇದಕ್ಕೆ ಸಿದ್ಧವಿರಲಿಲ್ಲ. ಮೋದಿಯವರು ಗುಜರಾತ್‌ನಿಂದ ಸಿಂಹಗಳನ್ನು ತಂದು ಇಲ್ಲಿ ಬಿಡಬಹುದಿತ್ತು. ಆದರೆ ನಮೀಬಿಯಾದಿಂದ ಚೀತಾಗಳನ್ನು ತಂದಿದ್ದಾರೆ” ಎಂದರು.

ಕುನೋ ರಾಷ್ಟ್ರೀಯ ಉದ್ಯಾನ ಭಾಗದಲ್ಲಿನ ಆದಿವಾಸಿಗಳ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, “ಈ ಭಾಗದಲ್ಲಿ ಸುಮಾರು 150 ಹಳ್ಳಿಗಳಿವೆ. ಅಲ್ಲಿನ ಆದಿವಾಸಿಗಳನ್ನು ಬೇರೆ ಕಡೆ ಕಳುಹಿಸಬೇಕು. ಸರಿಯಾಗಿ ಪುನರ್‌ವಸತಿ ಕಲ್ಪಿಸಿದರೆ ತಾವಾಗಿಯೇ ಖುಷಿಯಿಂದ ಆದಿವಾಸಿಗಳು ಹೊರಗೆ ಹೋಗಬಹುದು. ಆದರೆ ನಮ್ಮ ದೇಶದಲ್ಲಿ ಸರಿಯಾದ ಮೂಲಸೌಕರ್ಯ ಕಲ್ಪಿಸಿ ಪುನರ್‌ವಸತಿ ಮಾಡಿದ್ದೇ ಅಪರೂಪ. ಎಲ್ಲೋ ಒಂದು ಕಡೆ ತಗಡಿನ ಶೆಡ್ಡು ನಿರ್ಮಿಸಿ ಆದಿವಾಸಿಗಳನ್ನು ಅಲ್ಲಿಗೆ ತಂದು ಬಿಸಾಡುತ್ತಾರೆ. ಮತ್ತೆ ಆದಿವಾಸಿಗಳು ಅತಂತ್ರರಾಗುತ್ತಾರೆ. ಯಾವುದಾದರೂ ಚೀತಾ ಸತ್ತರೆ ಮತ್ತೆ ಈ ಜನರಿಗೆ ತೊಂದರೆ ಕೊಡುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....