Homeಮುಖಪುಟಮೆಗಾಸ್ಟಾರ್‌ ಚಿರಂಜೀವಿ ಹುಟ್ಟುಹಬ್ಬ: ಅಪ್ಪಾ, ಆಚಾರ್ಯ ನೀನೇ ಎಂದ ರಾಮ್ ಚರಣ್

ಮೆಗಾಸ್ಟಾರ್‌ ಚಿರಂಜೀವಿ ಹುಟ್ಟುಹಬ್ಬ: ಅಪ್ಪಾ, ಆಚಾರ್ಯ ನೀನೇ ಎಂದ ರಾಮ್ ಚರಣ್

- Advertisement -
- Advertisement -

ಕನ್ನಡ ಸಿನಿಮಾ ರಂಗದಲ್ಲಿ ಶ್ರೀ ಮಂಜುನಾಥನಾಗಿ, ಸಿಪಾಯಿಯ ಸ್ನೇಹಿತರಾಗಿ ಕನ್ನಡಿಗರ ಮನಗೆದ್ದಿದ್ದ ತೆಲುಗು ಚಿತ್ರರಂಗದ ಹಿರಿಯ ನಟ ಮೆಗಾಸ್ಟಾರ್‌ ಚಿರಂಜೀವಿ ಇಂದು (ಆಗಸ್ಟ್ 22) 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಚಿರಂಜೀವಿ ಅವರಿಗೆ ಎಲ್ಲಾ ಚಿತ್ರರಂಗ, ಅಭಿಮಾನಿಗಳು ಸೇರಿದಂತೆ ಗಣ್ಯರ ಕಡೆಯಿಂದಲೂ ಶುಭಾಶಯಗಳು ಹರಿದು ಬರುತ್ತಿವೆ.

ಟಾಲಿವುಡ್​ನ ಅತ್ಯಂತ ಜನಪ್ರಿಯ ನಟ ಹಾಗೂ ಈಗಲೂ ನಾಯಕನಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೆಗಾಸ್ಟಾರ್‌ ಚಿರಂಜೀವಿಗೆ ಅವರ ಮಗ ನಟ ರಾಮ್ ಚರಣ್ ತೇಜಾ ವಿಶೇಷವಾಗಿ ಶುಭಾಶಯ ಕೋರಿದ್ದು, ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.

ರಾಮ್ ಚರಣ್ ಮತ್ತು ಚಿರಂಜೀವಿ ಇಬ್ಬರು ಒಟ್ಟಾಗಿ ನಟಿಸುತ್ತಿರುವ ಮುಂಬರುವ ಚಿತ್ರ ’ಆಚಾರ್ಯ’ದ ತೆರೆಮರೆಯ ಕೆಲವು ಕ್ಲಿಪ್‌ಗಳನ್ನು ಹಂಚಿಕೊಂಡಿದ್ದಾರೆ. ರಾಮ್ ಚರಣ್ ಮತ್ತು ಚಿರಂಜೀವಿ ಚಿತ್ರೀಕರಣದ ನಡುವೆ ಪರಸ್ಪರ ಸಂವಹನ ನಡೆಸುವುದನ್ನು ನಾವು ನೋಡಬಹುದು. ತಂದೆ ತನ್ನ ಮಗನಿಗೆ ಕೆಲವು ತಾಂತ್ರಿಕ ಸಲಹೆಗಳನ್ನು ನೀಡುತ್ತಿರುವಂತೆ ಕಾಣಿಸುತ್ತದೆ.

ಇದನ್ನೂ ಓದಿ: ‘ಮೊದಲು ಆಕಾಶ.. ಈಗ ನಿಂತ ನೆಲವನ್ನೂ ಕಸಿಯುತ್ತಿದ್ದಾರೆ!’; ಫ್ಲೈಯಿಂಗ್‌ ಎಲಿಫೆಂಟ್ಸ್‌ ಕಿರುಚಿತ್ರ

On Ram Charan's birthday, Chiranjeevi unveils new Acharya poster featuring them together - Hindustan Times

ಕಾಡಿನ ನಡುವಿನ ಚಿತ್ರೀಕರಣದಲ್ಲಿ ರಾಮ್ ಚರಣ್ ಮತ್ತು ಚಿರಂಜೀವಿ ಇಬ್ಬರೂ ರಹಸ್ಯವಾಗಿ ಪರಸ್ಪರರ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. “ಮೆಗಾಸ್ಟಾರ್‌ ಜೊತೆಗಿನ ಪ್ರತಿ ಕ್ಷಣವೂ ಕಲಿಕೆಯ ಅನುಭವ. ಅವರೊಂದಿಗೆ ಪ್ರತಿ ಕ್ಷಣವೂ ಸಂತೋಷ. ಜನ್ಮದಿನದ ಶುಭಾಶಯಗಳು ಅಪ್ಪಾ. ಜನ್ಮದಿನದ ಶುಭಾಶಯಗಳು ಆಚಾರ್ಯ” ಎಂದಿದ್ದಾರೆ.

 

View this post on Instagram

 

A post shared by Ram Charan (@alwaysramcharan)

ನಟ ಮತ್ತು ಚಿರಂಜೀವಿಯವರ ಸೋದರಳಿಯ ಅಲ್ಲು ಅರ್ಜುನ್ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಜೊತೆಗೆ, “ನನ್ನ ಮತ್ತು ನಮ್ಮ ಏಕೈಕ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದಿದ್ದಾರೆ.

 

ಖ್ಯಾತ ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಸಹೋದರನಾಗಿ ಜನಿಸಿದ್ದು ಅದೃಷ್ಟ ಎಂದು ನಟ ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಹೇಳಿದ್ದಾರೆ. ಚಿರು ಅವರನ್ನು ಮೆಚ್ಚುವ ಲಕ್ಷಾಂತರ ಅಭಿಮಾನಿಗಳಲ್ಲಿ ನಾನು ಒಬ್ಬ ಎಂದಿದ್ದಾರೆ. ಒಬ್ಬ ಸಾಮಾನ್ಯನಾಗಿ ತನ್ನ ಪಯಣವನ್ನು ಆರಂಭಿಸಿದ ಚಿರು ಅನೇಕ ಕಷ್ಟಗಳನ್ನು ಎದುರಿಸಿ, ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಿದ್ದಾರೆ. ಅಣ್ಣನಾಗಿ ಹುಟ್ಟಿದರೂ ಚಿರು ನನ್ನನ್ನು ತಂದೆಯಂತೆ ಪೋಷಿಸಿದ್ದಾರೆ. ತಂದೆಯ ಸ್ಥಾನದಲ್ಲಿ ನಿಂತು, ಪ್ರೀತಿಯನ್ನು ನೀಡುತ್ತಾರೆ ಎಂದು ಪವನ್ ಕಲ್ಯಾಣ್ ಶುಭಾಶಯ ತಿಳಿಸಿದ್ದಾರೆ.

Chiranjeevi COVID-19 | Pawan Kalyan wishes South superstar Chiranjeevi a quick recovery from COVID-19

ಚಿರಂಜೀವಿ ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, 2019 ರ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಕೊರಟಾಲ ಶಿವ ನಿರ್ದೇಶನದ ಆಚಾರ್ಯದಲ್ಲಿ  ರಾಮ್ ಚರಣ್  ಕಾಜಲ್ ಅಗರ್ವಾಲ್ ಮತ್ತು ಪೂಜಾ ಹೆಗ್ಡೆ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಜೊತೆಗೆ ವಾಲ್ಟರ್‌ ವೀರಯ್ಯ, ಭೋಳ ಶಂಕರ್‌ ಹಾಗೂ ಗಾಡ್‌ಫಾದರ್ ಚಿತ್ರಗಳು ಇಂದು ಘೋಷಣೆಯಾಗಿವೆ.


ಇದನ್ನೂ ಓದಿ: ಗಂಗೂಬಾಯಿ ಕಾಥಿಯಾವಾಡಿ ಚಿತ್ರ ವಿವಾದ: ಆಲಿಯಾ ಭಟ್, ಬನ್ಸಾಲಿ ವಿಚಾರಣೆಗೆ ಮಧ್ಯಂತರ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...