Homeಅಂಕಣಗಳುಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

ಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

- Advertisement -
- Advertisement -

| ಮಲ್ಲಿ |

ಮೋದಿಯ ಲೋಕಸಂಚಾರದ ಫಲಾನುಭವಿಗಳು: ಅಂಬಾನಿ ಮತ್ತು ಅದಾನಿ

ಮೋದಿ ವಿದೇಶ ಪ್ರವಾಸ ಕೈಗೊಂಡಾಗ ಸಾಕಷ್ಟು ಸಲ ಅನಿಲ್ ಅಂಬಾನಿ ಮತ್ತು ಗೌತಮ್ ಅದಾನಿ ಜೊತೆಗಿದ್ದು, ಭೇಟಿಯಾದ ದೇಶಗಳ ಕಂಪನಿಗಳ ಜೊತೆಗೆ  ಇವರಿಬ್ಬರ ಕಂಪನಿಗಳು ಕನಿಷ್ಠ 18 ಪ್ರಮುಖ ಡೀಲ್‍ಗಳಿಗೆ ಸಹಿ ಹಾಕಿವೆ….. ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ.

ತಮ್ಮ ಅಧಿಕಾರವಧಿಯ ಮೊದಲ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 41 ಸಲ ವಿದೇಶ ಪ್ರವಾಸ ಮಾಡಿದ್ದು, 52 ದೇಶಗಳನ್ನು ಸಂದರ್ಶಿಸಿದ್ದಾರೆ. ಈ ಪ್ರವಾಸದ ಒಟ್ಟು ಅವಧಿ 165 ದಿನಗಳು. ಇದಕ್ಕಾಗಿ ಅವರು 355 ಕೋಟಿ ರೂ ಖರ್ಚು ಮಾಡಿದ್ದು, ಅದು ತೆರೆಗೆದಾರನ ಹಣವಾಗಿದೆ. ಬಹುಪಾಲು ವಿದೇಶಿ ಭೇಟಿಗಳಲ್ಲಿ ಅವರ ಜೊತೆ ಅಂಬಾನಿ, ಅದಾನಿ ಇದ್ದು, 16 ರಾಷ್ಟ್ರಗಳಲ್ಲಿ ಇವರಿಬ್ಬರ ಕಂಪನಿಗಳು 18 ಡೀಲ್‍ಗಳಿಗೆ ಸಹಿ ಹಾಕಿವೆ. ಇದರಲ್ಲಿ ಅದಾನಿ ಕಂಪನಿಗಳು 13 ಮತ್ತು ಅನಿಲ್ ಅಂಬಾನಿಯ ಕಂಪನಿ 5 ಡೀಲ್‍ಗಳಿಗೆ ಸಹಿ ಹಾಕಿವೆ. ಇಲ್ಲಿ ಅಂತಹ ಡೀಲ್‍ಗಳ ಕೆಲವನ್ನು ಇಲ್ಲಿ ನೀಡಿದ್ದೇವೆ.

ರಕ್ಷಣೆ

ಫ್ರಾನ್ಸ್

ಮೋದಿ ಭೇಟಿ: ಏಪ್ರಿಲ್ 09-12-2015 ಮತ್ತು  ಜೂನ್ 02-03-2017 (ಅನಿಲ್ ಅಂಬಾನಿ)

ಡೀಲ್ ದಿನ: ಮಾರ್ಚ್ 28-2015

ಮೋದಿ ರಫೇಲ್ ಡೀಲ್ ಘೋಷಿಸುವ 12 ದಿನ ಮೊದಲು ಅನಿಲ್ ಅಂಬಾನಿಯ ಆಗತಾನೇ ಹುಟ್ಟಿದ ಕಂಪನಿಯೊಂದು ಡಸಾಲ್ಟ್ ಕಂಪನಿಯೊಂದಿಗೆ ರಫೇಲ್ ಡೀಲ್ ಭಾಗವಾಗಿ ಒಪ್ಪಂದ ಮಾಡಿಕೊಂಡಿತು. ಅನುಭವಿ ಸರ್ಕಾರಿ ಎಚ್‍ಎಎಲ್ ಕಂಪನಿಯನ್ನು ತಿರಸ್ಕರಿಸಿ ಅಂಬಾನಿಯ ಅನನನುಭವಿ ಕಂಪನಿಯನ್ನು ರಿಲೆಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಪ್ರಧಾನಿ ಮೋದಿಯೇ ಕಾರಣ ಎಂಬ ಆರೋಪವಿದೆ. ಎರಡು ವರ್ಷಗಳಲ್ಲಿ ರಫೇಲ್ ವಿಮಾನಗಳು ಭಾರತಕ್ಕೆ ತಲುಪಬೇಕಿತ್ತು. ಇನ್ನೂ ಒಂದೂ ವಾಯುಸೇನೆಗೆ ದೊರೆತಿಲ್ಲ.

ಸ್ವೀಡನ್

ಡೀಲ್ ದಿನ: ಮಾರ್ಚ್ 22-2015 (ಅಂಬಾನಿ)

ಸ್ವೀಡನ್ ಪ್ರಧಾನಿಯ ಭಾರತ ಭೇಟಿ: ಫೆಬ್ರುವರಿ 13, 2016

ಡೀಲ್ ದಿನ : ಸೆಪ್ಟೆಂಬರ್ 1, 2017 (ಅದಾನಿ)

ಪ್ರಧಾನಿ ಭೇಟಿ: ಏಪ್ರಿಲ್ 16-18,  2018

ಇಲ್ಲಿ ಅಂಬಾನಿಯ ಕಂಪನಿ ಸ್ವೀಡನ್ನಿನ SAAB ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಭಾರತೀಯ ನೌಕಾದಳಕ್ಕೆ ಉನಮ್ಯಾನಡ್ ಏರಿಯಲ್ ವೆಹಿಕಲ್ (ಯುಎವಿ) ಪೂರೈಸುವ ಜವಾಬ್ದಾರಿ ಹೊರುತ್ತದೆ. ಪ್ರತಿ ಸಾಧನದ ಬೆಲೆ 1 ಸಾವಿರ ಕೋಟಿ.

ಅದೇ ಸ್ವೀಡನ್ ಕಂಪನಿಯೊಂದಿಗೆ ಸಿಂಗಲ್ ಎಂಜಿನ್ ಏರ್‍ಕ್ರಾಫ್ಟ್ ತಯಾರಿಸುವ 60 ಸಾವಿರ ಕೋಟಿ ಮೊತ್ತದ ಡೀಲ್‍ಗೆ ಅದಾನಿ ಸಹಿ ಮಾಡಿದ್ದಾರೆ.

ಹೀಗೆ ಪ್ರಧಾನಿ ನೀಡಿದ 16 ದೇಶಗಳ  ಕಂಪನಿಗಳ ಜೊತೆಗೆ ಅಂಬಾನಿ ಮತ್ತು ಅದಾನಿಯ ಕಂಪನಿಗಳು ಡೀಲ್ ಮಾಡಿಕೊಳ್ಳುತ್ತವೆ. ಇಸ್ರೇಲ್, ರಷ್ಯಾ, ಅಮೆರಿಕ, ಜಪಾನ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಮೊಜಾಂಬಿಕ್, ಇರಾನ್, ಒಮನ್, ಬಾಂಗ್ಲಾ ದೇಶಗಳಿಗೆ ಪ್ರಧಾನಿ ಭೇಟಿ ನೀಡಿದಾಗ ಅವರ ಜತೆ ಅಂಬಾನಿ ಅಥವಾ ಅದಾನಿ ಅಥವಾ ಇಬ್ಬರೂ ಇರುತ್ತಿದ್ದರು.

ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ. ವಿಚಿತ್ರ ಎಂದರೆ ಡಿಫೆನ್ಸ್ ಸಲಕರಣೆಗಳಲ್ಲಿ ಯಾವುದೇ ಅನುಭವ ಇಲ್ಲದ ಅಂಬಾನಿ, ಅದಾನಿ ಕಂಪನಿಗಳಿಗೆ ಪ್ರಧಾನಿಯ ಪ್ರಭಾವದಿಂದ ಡಿಫೆನ್ಸ್ ಡೀಲ್‍ಗಳು ಸಿಕ್ಕಿವೆ!

 ಪಾಕ್ ಜತೆಗೂ ಚಕ್ಕಂದ!

ಮಾತೆತ್ತಿದ್ದರೆ ಪಾಕ್ ವಿರುದ್ಧ ಹರಿಹಾಯುವ ಮೋದಿ ಮತ್ತು ಅವರ ಭಕ್ತರಿಗೆ ಇದೇ ಅದಾನಿ ಪಾಕ್ ಜೊತೆಗೆ ಹಲವು ವಾಣಿಜ್ಯ ವ್ಯಹಾರ ಹೊಂದಿದ್ದಾರೆ. ಪ್ರಧಾನಿ ಏಕಾಏಕಿ 2015 ಡಿಸೆಂಬರ್ 25ರಂದು ಪಾಕ್‍ಗೆ ಭೇಟಿ ನೀಡಿದಾಗ ಅವರ ಜೊತೆ ಅದಾನಿಯೂ ಇದ್ದ! ಅದರ ಹಿಂದಿನ ವರ್ಷವೇ ಅದಾನಿ 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಡೀಲ್‍ಗೆ ಸಹಿ ಹಾಕಿದ್ದರು. ಎರಡು ದೇಶಗಳ ನಡುವಿನ ತಿಕ್ಕಾಟದ ಕಾರಣಕ್ಕೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ.

ಮೋದಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಅದಾನಿಯ ಕಂಪನಿ ಕ್ರಮೇಣ ಮುನ್ನೆಲೆಗೆ ಬಂದಿದೆ. ಪ್ರಧಾನಿಯಾದ ಮೇಲಂತೂ ಅದಾನಿಯ ಆದಾಯ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಇನ್ನು ಸಾಲದ ಸುಳಿಯಲ್ಲಿದ್ದ ಅನಿಲ್ ಅಂಬಾನಿ ಚೇತರಿಸಿಕೊಳ್ಳಲೂ ಮೋದಿ ನೆರವಾಗಿದ್ದಾರೆ.

(ಆಧಾರ: ನ್ಯೂಸ್‍ಕ್ಲಿಕ್)

ಅನುವಾದ: ಮಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...