Homeಅಂಕಣಗಳುಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

ಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

- Advertisement -
- Advertisement -

| ಮಲ್ಲಿ |

ಮೋದಿಯ ಲೋಕಸಂಚಾರದ ಫಲಾನುಭವಿಗಳು: ಅಂಬಾನಿ ಮತ್ತು ಅದಾನಿ

ಮೋದಿ ವಿದೇಶ ಪ್ರವಾಸ ಕೈಗೊಂಡಾಗ ಸಾಕಷ್ಟು ಸಲ ಅನಿಲ್ ಅಂಬಾನಿ ಮತ್ತು ಗೌತಮ್ ಅದಾನಿ ಜೊತೆಗಿದ್ದು, ಭೇಟಿಯಾದ ದೇಶಗಳ ಕಂಪನಿಗಳ ಜೊತೆಗೆ  ಇವರಿಬ್ಬರ ಕಂಪನಿಗಳು ಕನಿಷ್ಠ 18 ಪ್ರಮುಖ ಡೀಲ್‍ಗಳಿಗೆ ಸಹಿ ಹಾಕಿವೆ….. ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ.

ತಮ್ಮ ಅಧಿಕಾರವಧಿಯ ಮೊದಲ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 41 ಸಲ ವಿದೇಶ ಪ್ರವಾಸ ಮಾಡಿದ್ದು, 52 ದೇಶಗಳನ್ನು ಸಂದರ್ಶಿಸಿದ್ದಾರೆ. ಈ ಪ್ರವಾಸದ ಒಟ್ಟು ಅವಧಿ 165 ದಿನಗಳು. ಇದಕ್ಕಾಗಿ ಅವರು 355 ಕೋಟಿ ರೂ ಖರ್ಚು ಮಾಡಿದ್ದು, ಅದು ತೆರೆಗೆದಾರನ ಹಣವಾಗಿದೆ. ಬಹುಪಾಲು ವಿದೇಶಿ ಭೇಟಿಗಳಲ್ಲಿ ಅವರ ಜೊತೆ ಅಂಬಾನಿ, ಅದಾನಿ ಇದ್ದು, 16 ರಾಷ್ಟ್ರಗಳಲ್ಲಿ ಇವರಿಬ್ಬರ ಕಂಪನಿಗಳು 18 ಡೀಲ್‍ಗಳಿಗೆ ಸಹಿ ಹಾಕಿವೆ. ಇದರಲ್ಲಿ ಅದಾನಿ ಕಂಪನಿಗಳು 13 ಮತ್ತು ಅನಿಲ್ ಅಂಬಾನಿಯ ಕಂಪನಿ 5 ಡೀಲ್‍ಗಳಿಗೆ ಸಹಿ ಹಾಕಿವೆ. ಇಲ್ಲಿ ಅಂತಹ ಡೀಲ್‍ಗಳ ಕೆಲವನ್ನು ಇಲ್ಲಿ ನೀಡಿದ್ದೇವೆ.

ರಕ್ಷಣೆ

ಫ್ರಾನ್ಸ್

ಮೋದಿ ಭೇಟಿ: ಏಪ್ರಿಲ್ 09-12-2015 ಮತ್ತು  ಜೂನ್ 02-03-2017 (ಅನಿಲ್ ಅಂಬಾನಿ)

ಡೀಲ್ ದಿನ: ಮಾರ್ಚ್ 28-2015

ಮೋದಿ ರಫೇಲ್ ಡೀಲ್ ಘೋಷಿಸುವ 12 ದಿನ ಮೊದಲು ಅನಿಲ್ ಅಂಬಾನಿಯ ಆಗತಾನೇ ಹುಟ್ಟಿದ ಕಂಪನಿಯೊಂದು ಡಸಾಲ್ಟ್ ಕಂಪನಿಯೊಂದಿಗೆ ರಫೇಲ್ ಡೀಲ್ ಭಾಗವಾಗಿ ಒಪ್ಪಂದ ಮಾಡಿಕೊಂಡಿತು. ಅನುಭವಿ ಸರ್ಕಾರಿ ಎಚ್‍ಎಎಲ್ ಕಂಪನಿಯನ್ನು ತಿರಸ್ಕರಿಸಿ ಅಂಬಾನಿಯ ಅನನನುಭವಿ ಕಂಪನಿಯನ್ನು ರಿಲೆಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಪ್ರಧಾನಿ ಮೋದಿಯೇ ಕಾರಣ ಎಂಬ ಆರೋಪವಿದೆ. ಎರಡು ವರ್ಷಗಳಲ್ಲಿ ರಫೇಲ್ ವಿಮಾನಗಳು ಭಾರತಕ್ಕೆ ತಲುಪಬೇಕಿತ್ತು. ಇನ್ನೂ ಒಂದೂ ವಾಯುಸೇನೆಗೆ ದೊರೆತಿಲ್ಲ.

ಸ್ವೀಡನ್

ಡೀಲ್ ದಿನ: ಮಾರ್ಚ್ 22-2015 (ಅಂಬಾನಿ)

ಸ್ವೀಡನ್ ಪ್ರಧಾನಿಯ ಭಾರತ ಭೇಟಿ: ಫೆಬ್ರುವರಿ 13, 2016

ಡೀಲ್ ದಿನ : ಸೆಪ್ಟೆಂಬರ್ 1, 2017 (ಅದಾನಿ)

ಪ್ರಧಾನಿ ಭೇಟಿ: ಏಪ್ರಿಲ್ 16-18,  2018

ಇಲ್ಲಿ ಅಂಬಾನಿಯ ಕಂಪನಿ ಸ್ವೀಡನ್ನಿನ SAAB ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಭಾರತೀಯ ನೌಕಾದಳಕ್ಕೆ ಉನಮ್ಯಾನಡ್ ಏರಿಯಲ್ ವೆಹಿಕಲ್ (ಯುಎವಿ) ಪೂರೈಸುವ ಜವಾಬ್ದಾರಿ ಹೊರುತ್ತದೆ. ಪ್ರತಿ ಸಾಧನದ ಬೆಲೆ 1 ಸಾವಿರ ಕೋಟಿ.

ಅದೇ ಸ್ವೀಡನ್ ಕಂಪನಿಯೊಂದಿಗೆ ಸಿಂಗಲ್ ಎಂಜಿನ್ ಏರ್‍ಕ್ರಾಫ್ಟ್ ತಯಾರಿಸುವ 60 ಸಾವಿರ ಕೋಟಿ ಮೊತ್ತದ ಡೀಲ್‍ಗೆ ಅದಾನಿ ಸಹಿ ಮಾಡಿದ್ದಾರೆ.

ಹೀಗೆ ಪ್ರಧಾನಿ ನೀಡಿದ 16 ದೇಶಗಳ  ಕಂಪನಿಗಳ ಜೊತೆಗೆ ಅಂಬಾನಿ ಮತ್ತು ಅದಾನಿಯ ಕಂಪನಿಗಳು ಡೀಲ್ ಮಾಡಿಕೊಳ್ಳುತ್ತವೆ. ಇಸ್ರೇಲ್, ರಷ್ಯಾ, ಅಮೆರಿಕ, ಜಪಾನ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಮೊಜಾಂಬಿಕ್, ಇರಾನ್, ಒಮನ್, ಬಾಂಗ್ಲಾ ದೇಶಗಳಿಗೆ ಪ್ರಧಾನಿ ಭೇಟಿ ನೀಡಿದಾಗ ಅವರ ಜತೆ ಅಂಬಾನಿ ಅಥವಾ ಅದಾನಿ ಅಥವಾ ಇಬ್ಬರೂ ಇರುತ್ತಿದ್ದರು.

ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ. ವಿಚಿತ್ರ ಎಂದರೆ ಡಿಫೆನ್ಸ್ ಸಲಕರಣೆಗಳಲ್ಲಿ ಯಾವುದೇ ಅನುಭವ ಇಲ್ಲದ ಅಂಬಾನಿ, ಅದಾನಿ ಕಂಪನಿಗಳಿಗೆ ಪ್ರಧಾನಿಯ ಪ್ರಭಾವದಿಂದ ಡಿಫೆನ್ಸ್ ಡೀಲ್‍ಗಳು ಸಿಕ್ಕಿವೆ!

 ಪಾಕ್ ಜತೆಗೂ ಚಕ್ಕಂದ!

ಮಾತೆತ್ತಿದ್ದರೆ ಪಾಕ್ ವಿರುದ್ಧ ಹರಿಹಾಯುವ ಮೋದಿ ಮತ್ತು ಅವರ ಭಕ್ತರಿಗೆ ಇದೇ ಅದಾನಿ ಪಾಕ್ ಜೊತೆಗೆ ಹಲವು ವಾಣಿಜ್ಯ ವ್ಯಹಾರ ಹೊಂದಿದ್ದಾರೆ. ಪ್ರಧಾನಿ ಏಕಾಏಕಿ 2015 ಡಿಸೆಂಬರ್ 25ರಂದು ಪಾಕ್‍ಗೆ ಭೇಟಿ ನೀಡಿದಾಗ ಅವರ ಜೊತೆ ಅದಾನಿಯೂ ಇದ್ದ! ಅದರ ಹಿಂದಿನ ವರ್ಷವೇ ಅದಾನಿ 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಡೀಲ್‍ಗೆ ಸಹಿ ಹಾಕಿದ್ದರು. ಎರಡು ದೇಶಗಳ ನಡುವಿನ ತಿಕ್ಕಾಟದ ಕಾರಣಕ್ಕೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ.

ಮೋದಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಅದಾನಿಯ ಕಂಪನಿ ಕ್ರಮೇಣ ಮುನ್ನೆಲೆಗೆ ಬಂದಿದೆ. ಪ್ರಧಾನಿಯಾದ ಮೇಲಂತೂ ಅದಾನಿಯ ಆದಾಯ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಇನ್ನು ಸಾಲದ ಸುಳಿಯಲ್ಲಿದ್ದ ಅನಿಲ್ ಅಂಬಾನಿ ಚೇತರಿಸಿಕೊಳ್ಳಲೂ ಮೋದಿ ನೆರವಾಗಿದ್ದಾರೆ.

(ಆಧಾರ: ನ್ಯೂಸ್‍ಕ್ಲಿಕ್)

ಅನುವಾದ: ಮಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...