Homeಅಂಕಣಗಳುಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

ಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

- Advertisement -
- Advertisement -

| ಮಲ್ಲಿ |

ಮೋದಿಯ ಲೋಕಸಂಚಾರದ ಫಲಾನುಭವಿಗಳು: ಅಂಬಾನಿ ಮತ್ತು ಅದಾನಿ

ಮೋದಿ ವಿದೇಶ ಪ್ರವಾಸ ಕೈಗೊಂಡಾಗ ಸಾಕಷ್ಟು ಸಲ ಅನಿಲ್ ಅಂಬಾನಿ ಮತ್ತು ಗೌತಮ್ ಅದಾನಿ ಜೊತೆಗಿದ್ದು, ಭೇಟಿಯಾದ ದೇಶಗಳ ಕಂಪನಿಗಳ ಜೊತೆಗೆ  ಇವರಿಬ್ಬರ ಕಂಪನಿಗಳು ಕನಿಷ್ಠ 18 ಪ್ರಮುಖ ಡೀಲ್‍ಗಳಿಗೆ ಸಹಿ ಹಾಕಿವೆ….. ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ.

ತಮ್ಮ ಅಧಿಕಾರವಧಿಯ ಮೊದಲ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 41 ಸಲ ವಿದೇಶ ಪ್ರವಾಸ ಮಾಡಿದ್ದು, 52 ದೇಶಗಳನ್ನು ಸಂದರ್ಶಿಸಿದ್ದಾರೆ. ಈ ಪ್ರವಾಸದ ಒಟ್ಟು ಅವಧಿ 165 ದಿನಗಳು. ಇದಕ್ಕಾಗಿ ಅವರು 355 ಕೋಟಿ ರೂ ಖರ್ಚು ಮಾಡಿದ್ದು, ಅದು ತೆರೆಗೆದಾರನ ಹಣವಾಗಿದೆ. ಬಹುಪಾಲು ವಿದೇಶಿ ಭೇಟಿಗಳಲ್ಲಿ ಅವರ ಜೊತೆ ಅಂಬಾನಿ, ಅದಾನಿ ಇದ್ದು, 16 ರಾಷ್ಟ್ರಗಳಲ್ಲಿ ಇವರಿಬ್ಬರ ಕಂಪನಿಗಳು 18 ಡೀಲ್‍ಗಳಿಗೆ ಸಹಿ ಹಾಕಿವೆ. ಇದರಲ್ಲಿ ಅದಾನಿ ಕಂಪನಿಗಳು 13 ಮತ್ತು ಅನಿಲ್ ಅಂಬಾನಿಯ ಕಂಪನಿ 5 ಡೀಲ್‍ಗಳಿಗೆ ಸಹಿ ಹಾಕಿವೆ. ಇಲ್ಲಿ ಅಂತಹ ಡೀಲ್‍ಗಳ ಕೆಲವನ್ನು ಇಲ್ಲಿ ನೀಡಿದ್ದೇವೆ.

ರಕ್ಷಣೆ

ಫ್ರಾನ್ಸ್

ಮೋದಿ ಭೇಟಿ: ಏಪ್ರಿಲ್ 09-12-2015 ಮತ್ತು  ಜೂನ್ 02-03-2017 (ಅನಿಲ್ ಅಂಬಾನಿ)

ಡೀಲ್ ದಿನ: ಮಾರ್ಚ್ 28-2015

ಮೋದಿ ರಫೇಲ್ ಡೀಲ್ ಘೋಷಿಸುವ 12 ದಿನ ಮೊದಲು ಅನಿಲ್ ಅಂಬಾನಿಯ ಆಗತಾನೇ ಹುಟ್ಟಿದ ಕಂಪನಿಯೊಂದು ಡಸಾಲ್ಟ್ ಕಂಪನಿಯೊಂದಿಗೆ ರಫೇಲ್ ಡೀಲ್ ಭಾಗವಾಗಿ ಒಪ್ಪಂದ ಮಾಡಿಕೊಂಡಿತು. ಅನುಭವಿ ಸರ್ಕಾರಿ ಎಚ್‍ಎಎಲ್ ಕಂಪನಿಯನ್ನು ತಿರಸ್ಕರಿಸಿ ಅಂಬಾನಿಯ ಅನನನುಭವಿ ಕಂಪನಿಯನ್ನು ರಿಲೆಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಪ್ರಧಾನಿ ಮೋದಿಯೇ ಕಾರಣ ಎಂಬ ಆರೋಪವಿದೆ. ಎರಡು ವರ್ಷಗಳಲ್ಲಿ ರಫೇಲ್ ವಿಮಾನಗಳು ಭಾರತಕ್ಕೆ ತಲುಪಬೇಕಿತ್ತು. ಇನ್ನೂ ಒಂದೂ ವಾಯುಸೇನೆಗೆ ದೊರೆತಿಲ್ಲ.

ಸ್ವೀಡನ್

ಡೀಲ್ ದಿನ: ಮಾರ್ಚ್ 22-2015 (ಅಂಬಾನಿ)

ಸ್ವೀಡನ್ ಪ್ರಧಾನಿಯ ಭಾರತ ಭೇಟಿ: ಫೆಬ್ರುವರಿ 13, 2016

ಡೀಲ್ ದಿನ : ಸೆಪ್ಟೆಂಬರ್ 1, 2017 (ಅದಾನಿ)

ಪ್ರಧಾನಿ ಭೇಟಿ: ಏಪ್ರಿಲ್ 16-18,  2018

ಇಲ್ಲಿ ಅಂಬಾನಿಯ ಕಂಪನಿ ಸ್ವೀಡನ್ನಿನ SAAB ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಭಾರತೀಯ ನೌಕಾದಳಕ್ಕೆ ಉನಮ್ಯಾನಡ್ ಏರಿಯಲ್ ವೆಹಿಕಲ್ (ಯುಎವಿ) ಪೂರೈಸುವ ಜವಾಬ್ದಾರಿ ಹೊರುತ್ತದೆ. ಪ್ರತಿ ಸಾಧನದ ಬೆಲೆ 1 ಸಾವಿರ ಕೋಟಿ.

ಅದೇ ಸ್ವೀಡನ್ ಕಂಪನಿಯೊಂದಿಗೆ ಸಿಂಗಲ್ ಎಂಜಿನ್ ಏರ್‍ಕ್ರಾಫ್ಟ್ ತಯಾರಿಸುವ 60 ಸಾವಿರ ಕೋಟಿ ಮೊತ್ತದ ಡೀಲ್‍ಗೆ ಅದಾನಿ ಸಹಿ ಮಾಡಿದ್ದಾರೆ.

ಹೀಗೆ ಪ್ರಧಾನಿ ನೀಡಿದ 16 ದೇಶಗಳ  ಕಂಪನಿಗಳ ಜೊತೆಗೆ ಅಂಬಾನಿ ಮತ್ತು ಅದಾನಿಯ ಕಂಪನಿಗಳು ಡೀಲ್ ಮಾಡಿಕೊಳ್ಳುತ್ತವೆ. ಇಸ್ರೇಲ್, ರಷ್ಯಾ, ಅಮೆರಿಕ, ಜಪಾನ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಮೊಜಾಂಬಿಕ್, ಇರಾನ್, ಒಮನ್, ಬಾಂಗ್ಲಾ ದೇಶಗಳಿಗೆ ಪ್ರಧಾನಿ ಭೇಟಿ ನೀಡಿದಾಗ ಅವರ ಜತೆ ಅಂಬಾನಿ ಅಥವಾ ಅದಾನಿ ಅಥವಾ ಇಬ್ಬರೂ ಇರುತ್ತಿದ್ದರು.

ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ. ವಿಚಿತ್ರ ಎಂದರೆ ಡಿಫೆನ್ಸ್ ಸಲಕರಣೆಗಳಲ್ಲಿ ಯಾವುದೇ ಅನುಭವ ಇಲ್ಲದ ಅಂಬಾನಿ, ಅದಾನಿ ಕಂಪನಿಗಳಿಗೆ ಪ್ರಧಾನಿಯ ಪ್ರಭಾವದಿಂದ ಡಿಫೆನ್ಸ್ ಡೀಲ್‍ಗಳು ಸಿಕ್ಕಿವೆ!

 ಪಾಕ್ ಜತೆಗೂ ಚಕ್ಕಂದ!

ಮಾತೆತ್ತಿದ್ದರೆ ಪಾಕ್ ವಿರುದ್ಧ ಹರಿಹಾಯುವ ಮೋದಿ ಮತ್ತು ಅವರ ಭಕ್ತರಿಗೆ ಇದೇ ಅದಾನಿ ಪಾಕ್ ಜೊತೆಗೆ ಹಲವು ವಾಣಿಜ್ಯ ವ್ಯಹಾರ ಹೊಂದಿದ್ದಾರೆ. ಪ್ರಧಾನಿ ಏಕಾಏಕಿ 2015 ಡಿಸೆಂಬರ್ 25ರಂದು ಪಾಕ್‍ಗೆ ಭೇಟಿ ನೀಡಿದಾಗ ಅವರ ಜೊತೆ ಅದಾನಿಯೂ ಇದ್ದ! ಅದರ ಹಿಂದಿನ ವರ್ಷವೇ ಅದಾನಿ 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಡೀಲ್‍ಗೆ ಸಹಿ ಹಾಕಿದ್ದರು. ಎರಡು ದೇಶಗಳ ನಡುವಿನ ತಿಕ್ಕಾಟದ ಕಾರಣಕ್ಕೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ.

ಮೋದಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಅದಾನಿಯ ಕಂಪನಿ ಕ್ರಮೇಣ ಮುನ್ನೆಲೆಗೆ ಬಂದಿದೆ. ಪ್ರಧಾನಿಯಾದ ಮೇಲಂತೂ ಅದಾನಿಯ ಆದಾಯ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಇನ್ನು ಸಾಲದ ಸುಳಿಯಲ್ಲಿದ್ದ ಅನಿಲ್ ಅಂಬಾನಿ ಚೇತರಿಸಿಕೊಳ್ಳಲೂ ಮೋದಿ ನೆರವಾಗಿದ್ದಾರೆ.

(ಆಧಾರ: ನ್ಯೂಸ್‍ಕ್ಲಿಕ್)

ಅನುವಾದ: ಮಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...