Homeಮುಖಪುಟಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ...

ಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ…

ಸರಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯು (CAA) ಧರ್ಮಾಧರಿತ ಪೌರತ್ವ ನೀಡಲು ಬಯಸಿದೆ. ಆದರೆ, ಭಾರತದ ಸಂವಿಧಾನ ಸಭೆಯು 1949ರಲ್ಲಿಯೇ ಈ ಕುರಿತು ವಿವರವಾಗಿ ಚರ್ಚಿಸಿ ಅದನ್ನು ತಿರಸ್ಕರಿಸಿತ್ತು. ಈ ಕುರಿತ ಕುತೂಹಲಕಾರಿ ವಿವರಗಳು ಇಲ್ಲಿವೆ.

- Advertisement -
- Advertisement -
  • ಆದಿತ್ಯ ಚಟರ್ಜಿ

ಅನುವಾದ: ನಿಖಿಲ್ ಕೋಲ್ಪೆ

ನಿಜವಾದ ಭಾರತೀಯರು ಯಾರು ಎಂಬ ಬಗ್ಗೆ ಕಾವೇರಿದ ಚರ್ಚೆಯು ಸಂವಿಧಾನ ಸಭೆಯಲ್ಲಿ ವಿಧಿ 5ರ ಪರವಾಗಿ ಮತದಾನ ನಡೆಯುವುದರ ಮೂಲಕ ಯಾವುದೇ ಧಾರ್ಮಿಕ ಉಲ್ಲೇಖಗಳಿಲ್ಲದೆ ಕೊನೆಗೊಂಡಿತ್ತು. ಪೌರತ್ವದ ಮಾನದಂಡಗಳ ಕುರಿತು ಕರಡು ರಚನಾ ಸಮಿತಿಯ ನಿಲುವು ಸದಸ್ಯ ಪಿ.ಎಸ್. ದೇಶ್‌ಮುಖ್ ಅವರಿಗೆ ನಿರಾಸೆ ಉಂಟುಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಅದು 1949ನೇ ಇಸವಿ.

ಡಾ. ಬಿ.ಆರ್.  ಅಂಬೇಡ್ಕರ್ ಅವರ ಪೌರತ್ವ ಕುರಿತ ವ್ಯಾಖ್ಯಾನವು  ಭಾರತೀಯ ಪೌರತ್ವವನ್ನು “ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಪೌರತ್ವ”ವನ್ನಾಗಿ ಮಾಡುವುದೆಂದು ದೇಶ್‌ಮುಖ್ ಅವರು ಭಾವಿಸಿದ್ದರು. ಹುಟ್ಟಿನಿಂದ ಪೌರತ್ವ ನೀಡುವ ಕುರಿತು ಅವರಿಗೆ ಅಸಮಾಧಾನವಿತ್ತು. ಕರಡು ವಿಧಿಯನ್ನು ಸ್ವೀಕರಿಸಿದರೆ ಮುಂಬಯಿ ಬಂದರಿನ ಮೂಲಕ ಪ್ರಯಾಣಿಸುವ ಮಹಿಳೆಯೊಬ್ಬಳು ಹೆತ್ತ ಮಗುವಿಗೂ ಪೌರತ್ವ ನೀಡಬೇಕಾಗುತ್ತದೆ ಎಂದು ಅವರು ವಾದಿಸಿದ್ದರು.

ದೇಶ್‌ಮುಖ್ ಅವರು ಕನಿಷ್ಟ ಎರಡು ತಿದ್ದುಪಡಿಗಳಿಗೆ ಬೇಡಿಕೆ ಇಟ್ಟಿದ್ದರು. ಮೊದಲನೆಯದು ಕೇವಲ ಭಾರತದಲ್ಲಿ ಹುಟ್ಟುವುದು ಸಾಕಾಗದು; ಮಗು ಭಾರತೀಯ ಹೆತ್ತವರಿಗೆ ಹುಟ್ಟಿರಬೇಕು ಎಂಬುದು. ಎರಡನೆಯದೆಂದರೆ, ಹಿಂದೂಗಳು ಮತ್ತು ಸಿಕ್ಖರು ಪ್ರಪಂಚದ ಯಾವುದೇ ಕಡೆಯಲ್ಲಿ ವಾಸಿಸುತ್ತಿದ್ದರೂ ಭಾರತೀಯ ಪೌರತ್ವಕ್ಕೆ ಅರ್ಹರಾಗಿರಬೇಕು ಎಂಬುದು. ಆಗಿನ ಚರ್ಚೆ ಹೀಗಿತ್ತು:

ಶಿಬ್ಬನ್ ಲಾಲ್ ಸಕ್ಸೇನ: “ನೀವು ಹೇಳುತ್ತೀರಿ ‘ಭಾರತೀಯ ಹೆತ್ತವರಿಗೆ ಹುಟ್ಟಿದವರು’ ಎಂದು. ಭಾರತೀಯ ಹೆತ್ತವರನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?”

ಪಿ.ಎಸ್. ದೇಶ್‌ಮುಖ್: “ಅದು ಭಾರತದಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಅನ್ವಯಿಸಬೇಕೆಂದು ನನ್ನ ಯೋಚನೆ. ಅದನ್ನು ವ್ಯಾಖ್ಯಾನಿಸುವುದು ಸುಲಭ..”

ಶಿಬ್ಬನ್ ಲಾಲ್ ಸಕ್ಸೇನ: “ಹಾಗಾದರೆ ವ್ಯಾಖ್ಯಾನ ಕೊಡಿ?”

ಪಿ.ಎಸ್. ದೇಶ್‌ಮುಖ್: “…ಒಬ್ಬ ಭಾರತೀಯ ಸುಲಭದಲ್ಲಿ ಗುರುತಿಸಬಹುದಾದ ಮನುಷ್ಯ. (ಅದರಲ್ಲೂ ವಾಸಸ್ಥಾನದ ಜೊತೆಗೆ ಸೇರಿಸಿಕೊಂಡಾಗ). ಆದರೆ, ಒಬ್ಬ ಭಾರತೀಯನನ್ನು.ಗುರುತಿಸಲಾಗದು; ಮತ್ತು ಆತನ ಬಣ್ಣ, ಚಹರೆ ಇತ್ಯಾದಿಯಾಗಿ ಯಾರು ಭಾರತೀಯ ಎಂದು ನಿರ್ಧರಿಸುವುದು ಅಗತ್ಯ ಎಂದು (ಸಕ್ಸೇನ) ಭಾವಿಸುವುದಾದಲ್ಲಿ, ಅವರೇ ಒಂದು ಸೂಕ್ತ ವ್ಯಾಖ್ಯಾನ ಸೂಚಿಸಲು ನಾನು ಬಿಟ್ಟುಬಿಡುತ್ತೇನೆ.’

ಪೋಲೆಂಡ್‌ನ ಸಂವಿಧಾನವು ಪೋಲಿಷ್ ಹೆತ್ತವರಿಗೆ ಹುಟ್ಟಿದ ಯಾರಿಗೂ ಪೌರತ್ವ ನೀಡುತ್ತದೆ ಎಂದು ದೇಶ್‌ಮುಖ್ ಅವರಿಗೆ ಗೊತ್ತಿತ್ತು. ಅವರ ವಾದವೆಂದರೆ, ಯಾರು ಪೋಲಿಷ್ ಜನರು ಎಂದು ಪೋಲರಿಗೆ ಗೊತ್ತಿದೆ ಎಂದಾದರೆ ಯಾರು ಭಾರತೀಯರು ಎಂದು ಗೊತ್ತುಮಾಡಲು ಭಾರತೀಯರಿಗೆ ಏನು ಅಡ್ಡಿ ಎಂದಾಗಿತ್ತು. ಎಲ್ಲಾ ಹಿಂದೂಗಳಿಗೆ ಮತ್ತು ಸಿಕ್ಖರಿಗೆ ಭಾರತೀಯ ಪೌರತ್ವ ನೀಡಬೇಕೆಂದು ಅವರ ಪ್ರಸ್ತಾಪವಾಗಿದ್ದು, ಸದಸ್ಯರು ಜಾತ್ಯತೀತತೆಯ ವಾದವನ್ನು ತನ್ನ ಮುಂದೆ ಇಡುತ್ತಾರೆ ಎಂದು ಅವರು ನಿರೀಕ್ಷಿಸಿದ್ದರು. ಸಂವಿಧಾನ ಸಭೆಯು “ಜಾತ್ಯತೀತತೆಯ ಈ ವ್ಯವಹಾರದಲ್ಲಿ” ಮಿತಿ ಮೀರಿ ಹೋಗುತ್ತಿದೆ ಎಂದು ಭಾವಿಸಿದ್ದವರಲ್ಲಿ ಅವರು ಒಬ್ಬರಾಗಿದ್ದರು.

ತನ್ನ ಭಾಷಣದಲ್ಲಿ ಅವರು ಹೀಗೆ ಹೇಳಿದ್ದಾರೆ:

“ನಮ್ಮದೇ ಜನರನ್ನು ತೊಡೆದು ಹಾಕಬೇಕೆಂದು ಅದರ ಅರ್ಥವೆ…ನಮ್ಮ ಜಾತ್ಯತೀತತೆಯನ್ನು ಸಾಬೀತುಪಡಿಸಲು ನಮ್ಮದೇ ಜನರನ್ನು ತೊಡೆದುಹಾಕಬೇಕೆ…ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳು ಮತ್ತು ಸಿಕ್ಖರನ್ನು ನಾವು ತೊಡೆದುಹಾಕಬೇಕೆ…ನಾವು ಜಾತ್ಯತೀತರು ಎಂಬುದನ್ನು ಸಾಬೀತುಪಡಿಸಲು ಭಾರತೀಯರಿಗೆ ಪವಿತ್ರ ಮತ್ತು ಪ್ರಿಯವಾದ ಎಲ್ಲವನ್ನೂ ಕಡೆಗಣಿಸಬೇಕೇ?…”

ಅವರಿಗೆ ದಾಸ್ ಭಾರ್ಗವ ಅವರಿಂದ ಬಲವಾದ ಬೆಂಬಲ ಸಿಕ್ಕಿತ್ತು. ಭಾರ್ಗವ ಹೀಗೆ ಹೇಳಿದ್ದರು:

“ಹಿಂದೂಗಳು ಮತ್ತು ಸಿಕ್ಖರಿಗೆ ಭಾರತ ಬಿಟ್ಟು ಬೇರೆ ಮನೆಯಿಲ್ಲ… ಜಾತ್ಯತೀತ ಎಂಬ ಪದವು ಯಾವುದು ವಾಸ್ತವವಾಗಿದೆಯೋ, ಅದನ್ನು ಹೇಳುವುದರಿಂದ ನಮ್ಮನ್ನು ಬೆದರಿಸಬಾರದು ಮತ್ತು.. . ವಾಸ್ತವವನ್ನು ಎದುರಿಸಬೇಕು…”

ಸಿಕ್ಖ್ ನಿರಾಶ್ರಿತರ ಪರವಾಗಿ ಮಾತನಾಡಿದ್ದ ಸರ್ದಾರ್ ಭೂಪಿಂದರ್ ಸಿಂಗ್ ಮತ್ತು ಅಸ್ಸಾಮಿನ ಹಿಂದೂಗಳ ಬಗೆಗೆ ಆತಂಕಹೊಂದಿದ್ದ ರೋಹಿಣಿ ಕುಮಾರ್ ಚೌಧರಿಯವರು ಕೂಡಾ ದೇಶ್‌ಮುಖ್ ಅವರನ್ನು ಬೆಂಬಲಿಸಿದ್ದರು.

ಆದರೆ, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದರ ವಿರುದ್ಧ ಮಹಬೂಬ್ ಆಲಿ ಸಾಹಿಬ್ ಬಹದ್ದೂರ್ ಅವರು ಬಲವಾಗಿ ಮಾತನಾಡಿದ್ದರು. ಅವರು ಎಲ್ಲಾ ಧರ್ಮಗಳು ಒಂದೇ ಎಂಬ ಮಹಾತ್ಮಾ ಗಾಂಧಿಯವರ ಬೋಧನೆಯನ್ನು ನೆನಪಿಸಿಕೊಳ್ಳುವಂತೆ ಸಂವಿಧಾನ ಸಭೆಯನ್ನು ಕೋರಿದ್ದರು.

ವಿದೇಶಗಳಲ್ಲಿರುವ ಹಿಂದೂಗಳು ಮತ್ತು ಸಿಖ್ಖರಿಗೆ ಪೌರತ್ವ ನೀಡುವುದಾದಲ್ಲಿ ಇರಾನ್‌ನಲ್ಲಿ ವಾಸಿಸುತ್ತಿರುವ ಪಾರ್ಸಿಗಳನ್ನೂ ಪರಿಗಣಿಸಬೇಕು ಎಂದು ಆರ್.ಕೆ. ಸಿಡ್ವಾ ಹೇಳಿದ್ದರು. ಸಂವಿಧಾನದಲ್ಲಿ ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನು ಪೌರತ್ವಕ್ಕಾಗಿ ಉಲ್ಲೇಖಿಸುವುದರಿಂದ “ಅದು ಉಳಿದ ಸಮುದಾಯಗಳನ್ನು ನಾವು ಕಡೆಗಣಿಸುತ್ತಿದ್ದೇವೆ ಎಂಬಂತೆ ಕಾಣುತ್ತದೆ” ಎಂದು ಆ ಸಮಯದಲ್ಲಿ ಅವರು ಹೇಳಿದ್ದರು.

ಈ ಹೊತ್ತಿನಲ್ಲಿ ಜವಾಹರಲಾಲ್ ನೆಹರೂ ಅವರು ಎದ್ದು ನಿಂತು, “ಈ ಜಾತ್ಯತೀತ ರಾಷ್ಟ್ರದ ವಿಷಯವನ್ನು ಎಳೆದಾಡುತ್ತಿರುವ” ಕುರಿತು ತನಗೆ ಅಸಂತೋಷವಾಗಿದೆ ಎಂದು ಹೇಳಿದ್ದರು. ಜಾತ್ಯತೀತತೆಯಿಂದ ನಾವು ಏನೋ ಭಾರೀ ಉದಾರವಾದುದನ್ನು ಅಥವಾ ತ್ಯಾಗವನ್ನು ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಸಂವಿಧಾನ ಸಭೆ ಇರಬಾರದು ಎಂದು ಹೇಳಿದ್ದರು. “ಕೆಲವೇ ಹಾದಿ ತಪ್ಪಿದ ಮತ್ತು ಹಿಂದುಳಿದ ರಾಷ್ಟ್ರಗಳನ್ನು ಹೊರತುಪಡಿಸಿ, ಪ್ರತಿಯೊಂದು ರಾಷ್ಟ್ರವು ಮಾಡುವುದನಷ್ಟೇ ನಾವು ಮಾಡುತ್ತಿದ್ದೇವೆ” ಎಂದವರು ಹೇಳಿದ್ದರು.

ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್ ಅವರು ನೆಹರೂ ಅವರ ಭಾವನೆಗಳನ್ನು ಬೆಂಬಲಿಸಿದ್ದರು. “ಇನ್ನೊಂದು ದೇಶವನ್ನು ಆಯ್ಕೆ ಮಾಡಿರುವ ಜನರು ಮತ್ತು ಈ ದೇಶದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಬಯಸಿರುವ ಜನರ ನಡುವೆ ನಾವು ವ್ಯತ್ಯಾಸವನ್ನು ಮಾಡಬಹುದು. ಆದರೆ, ಅದನ್ನು ಯಾವುದೇ ಜನಾಂಗೀಯ ಅಥವಾ ಧಾರ್ಮಿಕ ನೆಲೆಯಲ್ಲಿ ಮಾಡುವಂತಿಲ್ಲ” ಎಂದವರು ಹೇಳಿದ್ದರು.

ಡಾ. ಅಂಬೇಡ್ಕರ್ ಅವರು ಅನಗತ್ಯವಾಗಿ ಉದಾರತೆ ತೋರುತ್ತಿದ್ದಾರೆ ಎಂದು ದೇಶ್‌ಮುಖ್ ಭಾವಿಸಿದ್ದರೆ, ಬೃಜೇಶ್ವರ್ ಪ್ರಸಾದ್ ಅವರು ಬಾಬಾಸಾಹೇಬರನ್ನು ಬಲವಾಗಿ ಬೆಂಬಲಿಸಿದ್ದರು. ಅವರು ಹೀಗೆ ಹೇಳಿದ್ದರು: “ಪಾಕಿಸ್ತಾನದಲ್ಲಿರುವ ಎಲ್ಲಾ ಜನರನ್ನು ಈ ದೇಶಕ್ಕೆ ಬಂದು ನೆಲೆಸುವಂತೆ ಆಹ್ವಾನಿಸಬೇಕೆಂದು ನಾನು ಬಯಸುತ್ತೇನೆ. ಹಿಂದೂಗಳು ಮತ್ತು ಮುಸ್ಲಿಮರು ರಕ್ತಸಂಬಂಧಿಗಳು. ವಿಭಜನೆಯ ಕಿಡಿಗೇಡಿತನವನ್ನು ಕಾನೂನಿನ ವಾಸ್ತವಕ್ಕಿಂತ ಆಚೆಗೆ ಹರಡಲು ಬಿಡಬಾರದು”. ಎಲ್ಲಾ ಏಷ್ಯನರಿಗೆ ಸಮಾನ ಪೌರತ್ವದ ಪ್ರಸ್ತಾಪವನ್ನೂ ಮಾಡಿದ್ದ ಅವರು, ಆರಂಭಿಕ ಹೆಜ್ಜೆಯಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಮಾನ ಪೌರತ್ವದ ಪ್ರಸ್ತಾಪ ಎತ್ತಿದ್ದರು.

ಇದಕ್ಕೆ ಮೊದಲಿನ ಚರ್ಚೆಯಲ್ಲಿ ಜಸ್ಪತ್ ರಾಯ್ ಕಪೂರ್ ಅವರು ಬೃಜೇಶ್ವರ್ ಪ್ರಸಾದ್ ಅವರ ವಿರುದ್ಧ ಕಟು ಮಾತುಗಳನ್ನು ಎಸೆದು, ಸಂವಿಧಾನ ಆರಂಭಕ್ಕೆ ಮೊದಲು ಮುಸ್ಲಿಮರಿಗೆ ಪೌರತ್ವ ನೀಡುವುದರ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಬೇಕೆಂದು ಹೇಳಿದ್ದರು.

ತನ್ನ ಸರದಿ ಬಂದಾಗ ಬೃಜೇಶ್ವರ್ ಪ್ರಸಾದ್ ಅವರು ಈ ರೀತಿ ಉತ್ತರಿಸಿದ್ದರು: “ಸಂವಿಧಾನದ ಆರಂಭಕ್ಕೆ ಮೊದಲು ಈ ದೇಶದ ಪ್ರಜೆಯಾಗಿರುವ ಮುಸ್ಲಿಮನೊಬ್ಬನನ್ನು ಪೌರತ್ವದಿಂದ ವಂಚಿತಗೊಳಿಸುವುದಕ್ಕೆ ಯಾವ ಕಾರಣವೂ ನನಗೆ ಕಾಣುತ್ತಿಲ್ಲ- ಅದೂ ಕೂಡಾ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳಿಗೆ ಭಾರತದ ಪೌರರಾಗುವಂತೆ ನಾವು ಆಹ್ವಾನಿಸುತ್ತಿರುವಾಗ. ಯಾವತ್ತೂ ಭಾರತದಲ್ಲಿ ಇಲ್ಲದ, ಸದಾ ಪಂಜಾಬ್ ಮತ್ತು ಗಡಿನಾಡಿನಲ್ಲಿಯೇ ವಾಸಿಸುತ್ತಿದ್ದವರು ಇಲ್ಲಿಗೆ ಬಂದು ಪೌರತ್ವ ಪಡೆಯುತ್ತಿರುವಾಗ, ನಾವು ಒಂದೇ ಎಂದು ಹೇಳುತ್ತಾ ಬಂದಿರುವ ಮತ್ತು ಇಲ್ಲಿಗೆ ಬಂದು ವಾಸಿಸಬಯಸುವ ಮಹಮ್ಮದೀಯರೂ ಹಾಗೇಕೆ ಮಾಡಬಾರದು?”

ಡಾ. ಅಂಬೇಡ್ಕರ್ ಅವರು ಸಮಾಪನಾ ಭಾಷಣ ಮಾಡಿ, ಮುದಿನ ಸಂಸತ್ತುಗಳಿಗೆ ಈ ಕುರಿತು ಮಾತನಾಡುವ ಅವಕಾಶ ಇರಬೇಕು. ಸಂವಿಧಾನ ಸಭೆಯು ಸಂವಿಧಾನದ ಮೂಲಕ ಬದಲಾವಣೆಯನ್ನು ಮಾತ್ರ ಸಾಧ್ಯ ಮಾಡಬೇಕು ಎಂದಿದ್ದರು.

ಪೌರತ್ವದ ನಿಯಮಾವಳಿಗಳನ್ನು ರೂಪಿಸುವುದು ಕರಡು ರಚನಕಾರರಿಗೆ ಅತ್ಯಂತ ಕಠಿಣ ಕಾರ್ಯವಾಗಿತ್ತು. ಹಿಂದಿನ ಎರಡು ಸಂದರ್ಭಗಳಲ್ಲಿ ಕರಡನ್ನು ಹಿಂದೆ ಕಳಿಸಲಾಗಿತ್ತು. ಕಾವೇರಿದ ಚರ್ಚೆಗಳು ನಡೆದಿದ್ದು, ಮೂರು ದಿನಗಳ ಕಾಲ ನಿರಂತರ ಒಂಭತ್ತು ಗಂಟೆಗಳ ಚರ್ಚೆ ಮುಂದುವರಿದಿತ್ತು.

ರಾಜೇಂದ್ರ ಪ್ರಸಾದ್ ಅವರು ಪೌರತ್ವ ನಿಯಮಗಳನ್ನು ಮತಕ್ಕೆ ಹಾಕಲು ಬಯಸಿದ್ದರು. ಕರಡು ಮತಕ್ಕೆ ಹಾಕಲು ಸಿದ್ಧವಾಗಿದೆಯೇ ಎಂದು ನಿರ್ಧರಿಸಲು ಇನ್ನೊಂದು ಮತದಾನ ನಡೆದಿತ್ತು. ಹೌದು ಎಂದು 59 ಮತಗಳು ಮತ್ತು ಇಲ್ಲ ಎಂದು 35 ಮತಗಳು ಬಿದ್ದಿದ್ದವು.

ನಂತರ ಈ ಮಾತುಕತೆ ನಡೆಯಿತು.

ರಾಜೇಂದ್ರ ಪ್ರಸಾದ್: “ಈಗ ನಾನು ತಿದ್ದುಪಡಿಗಳನ್ನು ಮತಕ್ಕೆ ಹಾಕಬೇಕು… ” (130 ತಿದ್ದುಪಡಿಗಳಿದ್ದುದರಿಂದ ಅವುಗಳನ್ನು ಯಾವ ಕ್ರಮದಲ್ಲಿ ಮತಕ್ಕೆ ಹಾಕುವುದು ಎಂದು ಅವರಿಗೆ ಸ್ಪಷ್ಟವಾಗಿರಲಿಲ್ಲ.)

ಡಾ. ಅಂಬೇಡ್ಕರ್: “ಎಲ್ಲಾ ತಿದ್ದುಪಡಿಗಳನ್ನು ಹಿಂತಗೆದುಕೊಳ್ಳೊಣ.”

ಆದರೆ, ದೇಶ್‌ಮುಖ್ ಅವರು ಮೊದಲ ಎರಡು ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲಿಲ್ಲ. ಅವುಗಳನ್ನು ಮತಕ್ಕೆ ಹಾಕಿದಾಗ ಅವು ತಿರಸ್ಕೃತವಾದವು. ನಂತರ ರಾಜೇಂದ್ರ ಪ್ರಸಾದ್ ಅವರು ಡಾ. ಅಂಬೇಡ್ಕರ್ ಅವರು ಮಂಡಿಸಿದ ಕರಡು ವಿಧಿಯನ್ನು ಮತಕ್ಕೆ ಹಾಕಿದಾಗ ಗೊತ್ತುವಳಿಯು ಅಂಗೀಕೃತವಾಯಿತು. ಭಾರತೀಯ ಸಂವಿಧಾನದ ವಿಧಿ 5 ಅಸ್ತಿತ್ವಕ್ಕೆ ಬಂತು. ಅದು ಧರ್ಮಾಧರಿತ ಪೌರತ್ವಕ್ಕೆ ಮಾನ್ಯತೆ ನೀಡಲಿಲ್ಲ.

(ಲೇಖಕ ಆದಿತ್ಯ ಚಟರ್ಜಿಯವರು ಸುಪ್ರೀಂಕೋರ್ಟ್ ಮತ್ತು ದಿಲ್ಲಿ ಹೈಕೋರ್ಟ್‌ನಲ್ಲಿ ವಾದಿಸುತ್ತಿರುವ ವಕೀಲರು.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...