ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್ಗೆ CAA, NRC ವಿರುದ್ಧ ರ್ಯಾಲಿ ನಡೆಸಲು ಪೊಲೀಸರು ಮತ್ತೆ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಫೆಬ್ರವರಿ 21 ರಂದು ಮುಂಬೈಯ ಆಜಾದ್ ಮೈದಾನದಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧದ ರ್ಯಾಲಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ಗೆ ಅನುಮತಿಯನ್ನು ನಿರಾಕರಿಸಲಾಗಿದೆ.
ಮುಂಬೈ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯ ಆಧಾರದ ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ನಿನ್ನೆ ಹರಿಯಾಣದಲ್ಲಿ, ಸಂವಿಧಾನದ ಬಚಾವೊ ಆಂದೋಲನದ ಅಂಗವಾಗಿ ಫೆಬ್ರವರಿ 23 ರಂದು ಭಾರತ್ ಬಂದ್ಗೆ ಸೇರಲು ಅಜಾದ್ ಮನವಿ ಮಾಡಿದ್ದರು. ನೀವು ಇನ್ನೂ ಮನೆಯಿಂದ ಹೊರಬರದಿದ್ದರೆ, ಸಂವಿಧಾನ ಮತ್ತು ಮೀಸಲಾತಿ ಉಳಿಯುವುದಿಲ್ಲ. ಮನುವಾದಿ ಸರ್ಕಾರವು ಎಲ್ಲವನ್ನೂ ಕೊನೆಗೊಳಿಸುತ್ತದೆ ಎಂದು ನಾನು ಬಹುಜನ ಸಮಾಜದ ಎಲ್ಲ ಜನರಲ್ಲಿ ವಿನಂತಿಸುತ್ತೇನೆ ಎಂದು ಅವರು ಹೇಳಿದ್ದರು.