Homeಮುಖಪುಟಈ ಕೋರಾನಾ ಟೈಮಲ್ಲಿ ಒಳ್ಳೆ ಕೆಲಸ ಮಾಡ್ತಿರೋ ಒಬ್ಬ ಮುಸ್ಲಿಮನೂ ಈ ಮೀಡಿಯಾದವರಿಗೆ ಸಿಗೋದಿಲ್ವ ಸರ್?

ಈ ಕೋರಾನಾ ಟೈಮಲ್ಲಿ ಒಳ್ಳೆ ಕೆಲಸ ಮಾಡ್ತಿರೋ ಒಬ್ಬ ಮುಸ್ಲಿಮನೂ ಈ ಮೀಡಿಯಾದವರಿಗೆ ಸಿಗೋದಿಲ್ವ ಸರ್?

ಕೊರೊನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿರುವ ಸಾಧಿಕ್ ಸೈಲಾನಿಯವರ ಅನುಭವ ಮಾತುಗಳು

- Advertisement -
- Advertisement -

ಈ ಕೊರೊನಾ ಸಂಕಷ್ಟ ದಿನಗಳಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ಹಲವಾರು ರೀತಿಯ ಆರೋಪಗಳನ್ನು ದಿನನಿತ್ಯ ನಾವು ಕೇಳುತ್ತಲೇ ಇದ್ದೇವೆ. ಅದರ ನಡುವೆ ಮುಸ್ಲಿಂ ಸಮುದಾದಲ್ಲೂ ಕೂಡ ಸಾವಿರಾರು ಕೋರಾನಾ ವಾರಿಯರ್ಸ್ ಇದ್ದಾರೆ. ಅಂಥ ಒಬ್ಬ ಸ್ವಯಂ ಸೇವಕ ಸಾಧಿಕ್ ಸೈಲಾನಿ ಅವರನ್ನು ಯುವ ಬರಹಗಾರ ಹನುಮಂತ ಹಾಲಿಗೇರಿ ಮಾತನಾಡಿಸಿದ್ದಾರೆ. ಬನ್ನಿ ಅವರ ಮಾತುಗಳನ್ನು ಕೇಳೋಣ.
**

ನಮಸ್ತೆ ಸಾರ್, ನೀವು ಹೇಳಿದ ಮಾರುತಿ ನಗರದ ಸ್ಲಂನಲ್ಲಿರೋರಿಗೆ ಈಗ ತಲುಪಿಸಿ ಬಂದ್ವಿ ಸರ್, ತುಂಬಾ ಬಡವ್ರು ಅವ್ರು. ಅವರು ಹೆಸರು ಕೊಟ್ಟಿದ್ದು ಒಳ್ಳೆಯದಾಯ್ತು ಸರ್. ಇದ್ರಲ್ಲಿ ನಮ್ಮದೇನು ಇಲ್ಲ ಸರ್. ಎಲ್ಲ ನಮ್ಮ ಹಿರಿಯರ ದೊಡ್ಡತನ ಇದು. ರಹಮತ್ ಗ್ರೂಪ್‌ ಅಂಥ ಒಂದೈತೆ ಸರ್. ನಮ್ಮ ಹಿರಿಯರೆಲ್ಲ ಸೇರ್ಕೊಂಡು ಈ ಟ್ರಸ್ಟ್ ಮಾಡಿಕೊಂಡವ್ರೆ. ಈ ಟ್ರಸ್ಟಿಗೆ ನಮ್ಮ ಕಮ್ಯುನಿಟಿ ಬುಜಿನೆಸ್ ಮನ್ಸ್ ಒಂದಿಷ್ಟು ದೇಣಿಗೆ ಕೊಡ್ತಾರೆ. ಅದನ್ನು ಬಳಸಿಕೊಂಡು ಇದುವರೆಗೂ ಬೆಂಗಳೂರು ಮತ್ತು ಅದರ ಸುತ್ತಮುತ್ತಲೆಲ್ಲ 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಫ್ಯಾಮಿಟಿ ಕಿಟ್ ಹಂಚಿದಿವಿ ಸರ್. ಇನ್ನು ಹಂಚ್ತಿದ್ದಿವಿ. ಇದ್ರಲ್ಲಿ ಅರ್ದಕ್ಕೆ ಅರ್ದದಷ್ಟು ಹಿಂದುಗಳು, ಕ್ರಿಶ್ಚಿಯನ್ರಿಗೂ ಹಂಚಿದಿವಿ ಅನ್ನೋ ಸಮಾಧಾನ ಐತೆ.

ನಾವು ಇದಕ್ಕೋಸ್ಕರಾನೆ ಒಂದು ಒಂದು ಕಾಲ್ ಸೆಂಟರ್ ಒಪೆನ್ ಮಾಡಿದ್ದಿವಿ. ದಿನಾ ಅಲ್ಲಿಗೆ ಸಾವಿರಾರು ಕಾಲ್ ಬರುತ್ತೆ. ಕೆಲವ್ರು ಇದು ಮುಸ್ಲಿಂ ಸಂಘಟನೆ ಅಂತ ಕಾಲ್ ಮಾಡಲ್ಲ. ಮಾಡಿದ್ರೂ ಬೇಡ ಬಿಡಿ ಅಂತಾರೆ. ಅದ್ರಲ್ಲಿ ಅವರದೇನು ತಪ್ಪಿಲ್ಲ ಬಿಡಿ ಸರ್, ಮೀಡಿಯಾದವರು ನಮ್ಮ ಅವರ ನಡುವೆ ಹಂಗ ತಂದಿಟ್ಟವ್ರೆ. ನಮ್ಮ ರಹಮತ್ ಗುಂಪಿನಲ್ಲಿ 200ಕ್ಕೂ ಹೆಚ್ಚು ವಾಲಂಟಿಯರ್ಸ್ ಇದ್ದಿವಿ ಸರ್. ನಮ್ಮಗಳದ್ದೇ ಬೈಕು, ಆಟೋ ಕಾರುಗಳಲ್ಲಿ ದಿನನಿತ್ಯವು ಸಾವಿರಾರು ಜನಕ್ಕೆ ರೇಷನ್ ಕಿಟ್ ತಲುಪಿಸುತ್ತಿದ್ದೇವೆ. ಮೊದಲೆಲ್ಲ ನಮಗೆ ಆಪೀಸರ್ಸು ಪಾಸ್ ಕೊಡಕ್ಕೆ ಹಿಂದೆ ಮುಂದೆ ನೊಡ್ತಿದ್ರು ಸರ್. ಈಗ ಅಂಥ ಅಧಿಕಾರಿಗಳೇ ಈಗ ಶಹಬ್ಬಾಷ್ ಗಿರಿ ಕೊಡ್ತಾವ್ರೆ ಸರ್ ಖುಷಿಯಾಗುತ್ತೆ. ನಮ್ಮ ಟ್ರಸ್ಟನ ಹಿರಿಯರಾದ ಮುಖ್ತಿ ಸುಹೇಬ್ ಸಾಬ್ ಅನ್ನೋರು ನಮಗೆ ಮಾರ್ಗದರ್ಶನ ಇದನ್ನೆಲ್ಲ ಲೀಡ್ ಮಾಡ್ತಾವ್ರೆ.

ಹೊರಗಡೆ ವಾತಾವರಣ ಸರಿಯಿಲ್ಲ ಸರ್. ನಮಗೂ ಗೊತ್ತು. ಜನ ನಮ್ಮನ್ನು ಅನುಮಾನದಿಂದ ನೋಡ್ತಾರೆ. ಎಲ್ಲೋ ಒಬ್ಬ ಮುಸ್ಲಿಂ ತಪ್ಪು ಮಾಡಿದ್ರೆ ಆ ತಪ್ಪನ್ನು ನಮ್ಮ ಇಡೀ ಸಮುದಾಯಕ್ಕೆ ಕಟ್ತಾರೆ. ಮೀಡಿಯಾದವರು ತೊರಿಸಿದ್ದನ್ನೇ ತೋರಿಸಿ ತೋರಿಸಿ ಜನರ ಮೈಂಡ್ ಕೆಡಿಸಿಬಿಟ್ಟವ್ರೆ. ಸಾಬ್ರು ಉಗುಳು ಹಚ್ಚಿದ ನೊಟುಗಳನ್ನು ರಸ್ತೆ ಮೇಲೆ ಚೆಲ್ಲಿ ಕೋರೊನಾ ಹರಡುವಂತೆ ಮಾಡುತ್ತಾರೆ. ಸಾಬರು ಹಣ್ಣು ತರಕಾರಿಗಳಿಗೆ ಉಗುಳು ಹಚ್ಚಿ ಮಾರಾಟ ಮಾಡ್ತಾರೆ. ಒಂದಾ? ಎರಡಾ? ಎಂಥೆಂಥ ಫೇಕ್ ನ್ಯೂಸ್ ಹಬ್ಬಿಸ್ತಾರೆ ನೋಡಿ ಸಾರ್. ನಮ್ಮ ಮಂದಿ ಇಂಥ ಸಣ್ಣಪುಟ್ಟ ವ್ಯಾಪಾರ ಮಾಡ್ಕೊಂಡೆ ಬದುಕ್ತಾವ್ರೆ ನಿಜ. ಗಿರಾಕಿಗಳೆ ದೇವ್ರು ಅಂತ ನಂಬಿರೋ ನಮಗೆ ಗಿರಾಕಿಗಳನ್ನೆ ಸಾಯ್ಸೋದಕ್ಕೆ ಮನಸ್ಸು ಬರುತ್ತಾ ಸಾರ್?

ರಸ್ತೆ ಮೇಲೆ ದುಡ್ಡು ಎಸೆಯಕ್ಕೆ ನಮಗೇನು ದುಡ್ಡು ಜಾಸ್ತಿಯಾಗಿದೆಯಾ? ನಾವು ದೇಶ ಹಾಳು ಮಾಡಕ್ಕೆ ಹುಟ್ಟಿದವರು ಅಂತ ಜನ ಮಾತಾಡಿಕೊಳ್ತಾರೆ ಸರ್. ಇಂಥ ಪೇಕ್ ನ್ಯೂಸ್ ಗಳನ್ನು ನೋಡಿ ನೊಡಿ ಜನ ಈಗ ನಮ್ಮಂದಿ ಹತ್ರ ವ್ಯಾಪಾರ ಮಾಡ್ತಿಲ್ಲ ಸರ್. ಏನ್ಮಾಡೋದು ಹೇಳಿ. ನಮ್ಮ ಕಮ್ಯುನಿಟಿ ಮೇಲೆ ಬಂದಿರೋ ಈ ಡ್ಯಾಮೇಜನ್ನು ಯಾರು ಸರಿ ಮಾಡ್ತಾರೆ ಹೇಳಿ.

ಈ ಕೋರಾನಾ ಟೈಮಲ್ಲಿ ಒಳ್ಳೆ ಕೆಲಸ ಮಾಡಿರೋ ಒಬ್ಬ ಮುಸ್ಲಿಮನೂ ಈ ಮೀಡಿಯಾದವರಿಗೆ ಸಿಗಲ್ವೇನು ಸರ್? ಖಂಡಿತ ಸಿಗ್ತಾರೆ ಸರ್. ಇವರಿಗೆ ಕಣ್ಣು ಸರಿ ಇಲ್ಲ ಅಷ್ಟೇ. ಮೊನ್ನೆ ಮಧ್ಯ ಪ್ರದೇಶದ ಇಂಧೋರ್‌ ಸುದ್ದಿ ಗೊತ್ತಲ್ಲ ನಿಮಗೆ. ಪಾಪ ಒಬ್ಬ ಹಿಂದೂ ತಾಯಿ ಕೋರಾನಾ ಬಂದು ಸತ್ತರೆ, ಖಬರಸ್ತಾನಕ್ಕೆ ಆಕಿ ಹೆಣ ಒಯ್ಯಲಿಕ್ಕೆ ಯಾರೂ ಇರಲಿಲ್ಲ. ನಮ್ಮ ಸಾಬಿ ಹುಡುಗರೇ ಒಯ್ದು ಸಂಸ್ಕಾರ ಮಾಡಿದ್ರು. ಇನ್ನು ಮಹಾರಾಷ್ಟ್ರದಲ್ಲಿ ಕೊರಾನಾ ಬಂದ ಪೇಶೆಂಟನ್ನ ಹಿಂದೂ ರುದ್ರಭೂಮಿಯಲ್ಲಿ ಸಂಸ್ಕಾರ ಮಾಡಿಸಲಿಕ್ಕೆ ಒಪ್ಪಲಿಲ್ಲ ಸರ್. ಆದ್ರೆ ನಮ್ಮ ಜನ ತಮ್ಮ ಖಬರಸ್ಥಾನಕ್ಕ ತಂದು ಸಂಸ್ಕಾರ ಮಾಡಿದ್ರು. ಇಂಥ ಕಷ್ಟ ಕಾಲದಲ್ಲಿ ಜಮೀನು ಮಾರಿ ಹೆಲ್ಪ್ ಮಾಡ್ತಿರೋರು, ಬಾಡಿಗೆ ಮನ್ನಾ ಮಾಡಿದವರು ಇಂಥವರೆಲ್ಲ ಸಿಗೋದು ನಮ್ಮ ಕಮ್ಯುನಿಟಿಯಲ್ಲಿ ಸರ್. ಆದ್ರೆ ಇಂಥವ್ಯಾರು ಈ ಟಿವಿಯವರಿಗೆ ಕಾಣೋದೇ ಇಲ್ಲ. ಏನ್ ಮಾಡಕ್ಕಾಗುತ್ತೆ ಹೇಳಿ?

ನಮಗೂ ತುಂಬಾ ನೋವಾಗುತ್ತೆ. ಆದ್ರೆ ನಮ್ಮ ಇಮಾಮ್ (ಗುರುಗಳು) ಸಯ್ಯದ್ ಮೊಹಮ್ಮದ್ ತಲ್ಹಾಸಾಬ್ ಇದ್ದಾರಲ್ಲ. ಅರು ಹೇಳೋದು “ಯಾವುದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ವಿಚಾರ ಮಾಡ್ಕೋತ ಕುಂಡ್ರು ಕಾಲ ಅಲ್ಲ ಇದು. ಸುಮ್ನೆ ಕೆಲಸ ಮಾಡ್ತಾ ಹೋಗಿ ಅಷ್ಟೆ. ಕೆಲಸ.. ಕೆಲಸ.. ಕೆಲಸ.. ಅಷ್ಟೇ. ಮೇಲಿನಿಂದ ದೇವರು ಎಲ್ಲ ನೊಡ್ತಿರ್ತಾನೆ. ಅಂತ ನಮ್ಮನ್ನೆಲ್ಲ ಹುರಿದುಂಬಿಸುತ್ತಿದ್ದಾರೆ.

ಮೀಡಿಯಾದವ್ರು ಎಷ್ಟೇ ಪೇಕ್ ನ್ಯೂಸ್ ಹಬ್ಬಸಲಿ ಸರ್. ಆದ್ರೆ ಹೊರಗಡೆ ಪ್ರಪಂಚ ಬೇರೆನೇ ಐತೆ. ನಾವೆಲ್ಲ ಒಂದೇ ತಾಯಿಯ, ಒಂದೇ ದೇಶದ ಮಕ್ಕಳು. ನಾವುಗಳೆಲ್ಲ ಅನೂನ್ಯವಾಗಿಯೇ ಇದ್ದೇವೆ. ಕೆಲವರು ಪಿತೂರಿಯಿಂದ ಹಿಂಗೆಲ್ಲ ಆಗ್ತಿದೆ ಅಷ್ಟೆ. ಜನ ಈಗ ನಿಜಕ್ಕೂ ಕಷ್ಟದಲ್ಲಿದ್ದಾರೆ ಸರ್. ಅವರಿಗೆ ಈಗ ಧರ್ಮ, ಗಿರ್ಮ ಏನು ಬೇಡ. ಊಟ ಬೇಕು ಅಷ್ಟೆ. ಯಾರೆ ಊಟ ಕೊಟ್ಟರೂ ಅವರೇ ಅವರ ಪಾಲಿನ ದೇವ್ರು. “ನೀವೇ ನಮ್ಮ ಪಾಲಿನ ದೇವರು ಕಣಪ್ಪ. ನಿಮಗೆ ಒಳ್ಳೆದಾಗಲಿ” ಅಂತ ಮನಸ್ಸು ಬಿಚ್ಚಿ ಹಾರೈಸ್ತಾರೆ ಸರ್. ಆ ಹಾರೈಕೆಯೇ ನಮಗೆ ಮತ್ತಷ್ಟು ಕೆಲಸ ಮಾಡುವಂತೆ ಹುರಿದುಂಬಿಸುತ್ತೆ.

ಈಗ ರಂಜಾನ್ ತಿಂಗಳು. ಇದೊಂದು ಪವಿತ್ರ ಕಾರ್ಯ ಅನಕೊಂಡು ಇಷ್ಟೆಲ್ಲ ಕೆಲಸ ಮಾಡ್ತಿದ್ದಿವಿ. ಇನ್ನೊಂದು ಗೊತ್ತಿರ್ಲಿ ಸರ್. ನಾವು ಯಾವತ್ತು ನಾವು ಕೊಟ್ಟಿದ್ದನ್ನು ಅವರು ತುಗೊಂಡಿದ್ದನ್ನು ಫೊಟೋ ಹಿಡಿಯಲ್ಲ ಸರ್. ಕೆಲವರು ಅರ್ಧ ಕೇಜಿ ರೈಸ್ ಕೊಡುವಾಗಲೂ ತಮ್ಮ ಜೊತೆಗೆ ಕ್ಯಾಮರಾಮೆನ್ ಕರ್ಕೊಂಡು ಬಂದಿರ್ತಾರೆ. ಆದ್ರೆ ನಮ್ಮಂದಿ ಹಾಗಲ್ಲ. ಕೊಡುವ ಕೈ ಯಾವತ್ತು ಕೂಡ ಇನ್ನೊಬ್ಬರಿಗೆ ಹೇಳಿಕೊಬಾರದು. ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಅಂತ ನಂಬಿರೋರು ನಾವು. ಇದನ್ನು ನಮ್ಮ ಗುರು ಹೇಳಿಕೊಟ್ಟವ್ರೆ. ಹೀಗಾಗಿ ನಾವು ಎಲ್ಲೂ ಕೂಡ ರೇಷನ್ ಕಿಟ್ ನೀಡುವಾಗ ನಮ್ಮ ಮುಖ ಕಾಣುವಂತೆ ಪೊಟೋ ತೆಗೆಯಲ್ಲ. ಆದ್ರೂ ನಮ್ಮದು ಟ್ರಸ್ಟ್ ಅಲ್ವಾ ಸರ್? ಹಾಗಾಗಿ ಲೆಕ್ಕಪತ್ರಕ್ಕೋಸ್ಕರ ನಾವು ಕಿಟ್ ಕಷ್ಟದಲ್ಲಿರೋ ಜನರ ಮನೆ ಮುಂದೆ ಇಟ್ಟು ಫೊಟೋ ತಗೋತಿವಿ ಅಷ್ಟೇ.

ನಾವು ಈ ಕೊರೋನಾ ಟೈಮನಲ್ಲಿ ಅಷ್ಟೆ ಅಲ್ಲ, ವರ್ಷಪೂರ್ತಿನೂ ನಮ್ಮ ಟ್ರಸ್ಟ್ ದಿಂದ ಒಂದಿಷ್ಟು ಒಳ್ಳೆ ಕೆಲ ಮಾಡ್ತಾನೆ ಬರ್ತಿದ್ದಿವಿ. ದಿನಾಲೂ ಬೆಳಗ್ಗೆ ಬೋರಿಂಗ್ ಆಸ್ಪತ್ರೆ, ಅಂಬೇಡ್ಕರ್, ಸಂಜಯಗಾಂಧಿ, ಕಿದ್ವಾಯಿ ಹಾಸ್ಪಿಟಲ್ ಗಳಿಗೆ ಹೋಗಿ 800ಕ್ಕೂ ಹೆಚ್ಚು ರೋಗಿಗಳಿಗೆ ಹಣ್ಣು ಹಂಚಿ ಬರ್ತಿದ್ದಿವಿ. ಯಾರು ಏನೇ ಅನ್ನಲಿ. ನಾವು ಈ ಕೆಲಸ ನಿಲ್ಲಸಲ್ಲ ಸರ್. ಈ ಕೆಲಸ ನಮಗೆ ಖುಷಿ ಕೊಡ್ತಿದೆ. ಮೇಲೆ ದೇವರು ನೋಡ್ತಿರ್ತಾನೆ. ಇಷ್ಟೇ ಹೇಳಕ್ಕಿದ್ದಿದ್ದು.


ಇದನ್ನೂ ಓದಿ: ಗುಡ್‌ ನ್ಯೂಸ್‌: ಹಿಂದೂ ಯುವಕನಿಗೆ ರಕ್ತದಾನ ಮಾಡಲು ಉಪವಾಸ ವ್ರತ ಮುರಿದ ಮುಸ್ಲಿಂ ಮಹಿಳೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ...

ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ : ಚಿನ್ಮಯಿ ಶ್ರೀಪಾದ, ಟಿಎಂ ಕೃಷ್ಣ ಸೇರಿ ಹಲವರಿಂದ ಟೀಕೆ

ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ತಮಿಳು ಸಾಹಿತಿ ವೈರಮುತ್ತು ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ...

ಡ್ರೋನ್ ದಾಳಿಯ ನಂತರ ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ ಅವಘಡ; ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ದುಬೈ ಅಧಿಕಾರಿಗಳ ಪ್ರಕಾರ, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ."ದುಬೈ ಅಂತರಾಷ್ಟ್ರೀಯ ವಿಮಾನ...

ಕಾನ್ಶಿ ರಾಮ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ಥಾಪಿಸಿದ ದಲಿತ ಐಕಾನ್ ಕಾನ್ಶಿ ರಾಮ್‌ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ...

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...

ಒಡಿಶಾ | ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ಮಂದಿ ಸಾವು

ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯುನಲ್ಲಿ ಸೋಮವಾರ (ಮಾರ್ಚ್ 16) ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 10 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು...

ಆಸ್ಕರ್‌ 2026 : ಮೈಕೆಲ್ ಬಿ. ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ, ಒನ್ ಬ್ಯಾಟಲ್ ಆಫ್ಟರ್ ಅನದರ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಪ್ರತಿಷ್ಠಿತ 98ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ 2026) ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮಾರ್ಚ್ 15ರಂದು (ಭಾರತೀಯ ಕಾಲಮಾನ ಮಾರ್ಚ್ 16) ನಡೆಯಿತು. ಖ್ಯಾತ ಹಾಸ್ಯನಟ ಕೋನನ್ ಒಬ್ರೇನ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು....