Homeಕರ್ನಾಟಕಸಿಪಿಐ ಕಚೇರಿ ಘಾಟೆ ಭವನದ ಮೇಲೆ ರಣಹೇಡಿಗಳ ದಾಳಿ

ಸಿಪಿಐ ಕಚೇರಿ ಘಾಟೆ ಭವನದ ಮೇಲೆ ರಣಹೇಡಿಗಳ ದಾಳಿ

- Advertisement -
- Advertisement -

ಸಮಾಜದಲ್ಲಿ ಕೋಮುವಿಷದ ಬೆಂಕಿ ಹಚ್ಚಿರುವ ಸಂಘ ಪರಿವಾರವೇ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕೃತ್ಯದ ಹಿಂದೆಯೂ ಇರುವುದು ಸ್ಪಷ್ಟವಾಗಿದೆ. ಬೆಂಕಿ ಹಚ್ಚಿದ ವ್ಯಕ್ತಿಗಳ ವಿರುದ್ಧ ಮಾತ್ರವಲ್ಲ, ಬೆಂಕಿ ಹಚ್ಚಿಸಿದ ದುಷ್ಟ ಶಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಇಡೀ ವಿಶ್ವವೇ ಕ್ರಿಸ್ಮಸ್ ಆಚರಣೆಯ ಮೂಲಕ ಏಸು ಕ್ರಿಸ್ತ ಸಾರಿದ ಪ್ರೀತಿ, ಕರುಣೆ, ಸ್ನೇಹಗಳ ಸಂದೇಶವನ್ನು ಸ್ಮರಿಸುತ್ತ ಹಾಡುವ ದಿನ ಡಿಸೆಂಬರ್ 25. ಆದರೆ ಇದನ್ನು ಅಣಕಿಸುವಂತೆ ಡಿಸೆಂಬರ್ 24ರ ಮಧ್ಯರಾತ್ರಿ ಅಂದರೆ 25ರ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳು ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ವೈಯಾಲಿಕಾವಲ್‍ನಲ್ಲಿರುವ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕೇಂದ್ರ ಕಚೇರಿ ಘಾಟೆ ಭವನ ಕಟ್ಟಡದ ಮೇಲೆ ಪೆಟ್ರೋಲ್, ಇತ್ಯಾದಿಗಳನ್ನು ಸುರಿದು ಅದನ್ನು ಭಸ್ಮ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಮೂಲಕ ಕಚೇರಿಯಲ್ಲಿ ತಂಗಿದ್ದ ಪಕ್ಷದ ಕಾರ್ಯಕರ್ತರ ಜೀವ ತೆಗೆಯುವ ವಿಫಲ ಪ್ರಯತ್ನ ನಡೆದಿದೆ. ಘಟನೆಯಿಂದಾಗಿ ಕಚೇರಿಯ ಆವರಣದಲ್ಲಿ ನಿಲುಗಡೆ ಮಾಡಲಾಗಿದ್ದ ಆರು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸಮಾಜದಲ್ಲಿ ಕೋಮುವಿಷದ ಬೆಂಕಿ ಹಚ್ಚಿರುವ ಸಂಘ ಪರಿವಾರವೇ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕೃತ್ಯದ ಹಿಂದೆಯೂ ಇರುವುದು ಸ್ಪಷ್ಟವಾಗಿದೆ.

ಡಿಸೆಂಬರ್ 24ರ ತಡರಾತ್ರಿ ಸುಮಾರು 1 ಗಂಟೆಯಿರಬಹುದು, ಎರಡು ಬೈಕ್‍ಗಳಲ್ಲಿ ಯುವಕರು ಕಚೇರಿಯ ಬಾಗಿಲಿಗೆ ಬಂದರೆಂದು ತಿಳಿದುಬಂದಿದೆ. ಎತ್ತರವಾದ ಗೇಟಿಗೆ ಬೀಗ ಹಾಕಲಾಗಿದ್ದು, ಕಾಂಪೌಂಡ್ ಹಾರಿ ಒಳನುಗ್ಗಿರುವ ಇಬ್ಬರು ಸೀದಾ ನೆಲ ಅಂತಸ್ತಿನಲ್ಲಿರುವ ಎಂ.ಎಸ್. ಕೃಷ್ಣನ್ ಸಭಾಂಗಣದ ಎದುರು ನಿಂತಿದ್ದಾರೆ. ಅದಕ್ಕೆ ಕಬ್ಬಿಣದ ಬಾಗಿಲುಗಳಿದ್ದು ಅವುಗಳನ್ನು ಮುಚ್ಚಲಾಗಿತ್ತು. ಒಳಗೆ ಕಚೇರಿಯ ಕಾವಲುಗಾರರು ನಿದ್ರಿಸುತ್ತಿದ್ದರು. ಸಭಾಂಗಣದ ಎದುರು ಹೊರಗಡೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಅವುಗಳಲ್ಲಿ ಕೆಲವು ವಾಹನಗಳ ಬ್ಯಾಟರಿಗಳ ಮೇಲೆ ಮತ್ತು ಉಳಿದ ಗಾಡಿಗಳ ಪೆಟ್ರೋಲ್ ಟ್ಯಾಂಕ್‍ಗಳ ಮೇಲೆ ಉದ್ದೇಶಪೂರ್ವಕವಾಗಿ ಪೆಟ್ರೋಲ್, ಇತ್ಯಾದಿಗಳನ್ನು ಸುರಿದ ದುಷ್ಕರ್ಮಿಗಳು ಸಭಾಂಗಣದ ದ್ವಾರದ ಮೇಲೆ ಪೆಟ್ರೋಲ್ ಎರಚಾಡಿದ್ದಾರೆ. ಬಹುಶಃ ವಾಹನಗಳಿಗೆ ಪೂರ್ಣವಾಗಿ ಪೆಟ್ರೋಲ್ ಸುರಿಯುವ ಮುನ್ನವೇ ಇನ್ನೊಬ್ಬ ಬೆಂಕಿ ಕಡ್ಡಿ ಗೀರಿದ್ದಾನೆ. ವಾಹನಗಳು ಧಗಧಗನೆ ಹೊತ್ತಿ ಉರಿಯಲು ಆರಂಭಿಸಿದಾಗ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇವೆಲ್ಲವನ್ನೂ ಗೇಟ್‍ನ ಹೊರಗೆ ನಿಂತಿದ್ದ ಬೈಕ್ ಸವಾರನು ತನ್ನ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಈ ಮಧ್ಯೆ ಸಭಾಂಗಣದ ಒಳಗೆ ಮಲಗಿದ್ದ ಪಕ್ಷದ ಕಚೇರಿಯ ಕಾವಲುಗಾರ ನಾರಾಯಣ, ವಾಹನಗಳು ಸುಟ್ಟ ವಾಸನೆಯಿಂದ ಎಚ್ಚರಗೊಂಡು ಮೇಲಿನ ಕಿಂಡಿಯಿಂದ ಧಗಧಗಿಸುತ್ತಿದ್ದ ಬೆಂಕಿಯ ಜ್ವಾಲೆಗಳನ್ನು ಕಂಡಿದ್ದಾರೆ. ಕೂಡಲೇ ಎದ್ದು ತಾನು ಹೊದ್ದಿದ್ದ ಕಂಬಳಿಯನ್ನು ಬೀಸುತ್ತ ಉರಿಯುತ್ತಿದ್ದ ಬೆಂಕಿಯ ಮಧ್ಯೆ ಹೊರಬಂದಿದ್ದಾರೆ. ಕುಟುಂಬದವರನ್ನು ಎಚ್ಚರಗೊಳಿಸಿ ದೊಡ್ಡ ಪೈಪ್‍ನಲ್ಲಿ ಬಿರುಸಾಗಿ ಚಿಮ್ಮುತ್ತಿದ್ದ ನೀರಿನಿಂದ ಅಗ್ನಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ. ಈ ಹೊತ್ತಿಗಾಗಲೇ ಸಭಾಂಗಣದಲ್ಲಿಟ್ಟಿದ್ದ ಕೆಲವು ಕಾಗದಪತ್ರಗಳು, ಕರಪತ್ರಗಳು ಬೆಂಕಿಗೆ ಆಹುತಿಯಾಗಿದ್ದವು. ನಾರಾಯಣ ತಮ್ಮ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿ ಜೀವಹಾನಿಯನ್ನೂ ಹೆಚ್ಚಿನ ನಷ್ಟವನ್ನೂ ತಡೆದಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದಾಗ ವೈಯಾಲಿಕಾವಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತಮ್ಮ ತನಿಖೆಯ ಶಾಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಈ ಘಟನೆಗೆ ಕಾರಣವೇನು? ಕಾರಣ ಯಾರು?

ಸುಮಾರು ಒಂದು ವಾರ ಕಳೆಯುತ್ತಾ ಬಂದರೂ ಈವರೆಗೂ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವ ಮಾತು ಹಾಗಿರಲಿ, ಆರೋಪಿಗಳನ್ನೇ ಪತ್ತೆ ಹಚ್ಚಿಲ್ಲ. ಆದರೆ ಈ ದುಷ್ಕೃತ್ಯಕ್ಕೆ ಸಂಘ ಪರಿವಾರವೇ ಕಾರಣ ಎಂಬುದು ಸ್ಪಷ್ಟ. ಜನವಿರೋಧಿ, ಸಂವಿಧಾನವಿರೋಧಿ, ದೇಶವಿರೋಧಿ ಸಿಎಎ ಮತ್ತು ಎನ್‍ಆರ್‍ಸಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುವುದರ ವಿರುದ್ಧ ದೇಶಾದ್ಯಂತ ಎಡಪಕ್ಷಗಳು ನಿರಂತರ ಹೋರಾಟವನ್ನು ಕೈಗೊಂಡಿವೆ. ಇದರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ಮುಂಚೂಣಿಯಲ್ಲಿದೆ. ಡಿಸೆಂಬರ್ 19ರಂದು ಎಡಪಕ್ಷಗಳು ಕರೆ ನೀಡಿದ್ದ ದೇಶವ್ಯಾಪಿ ಪ್ರತಿಭಟನೆಯು ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸೆಕ್ಷನ್ 144 ಹೇರಿಕೆಯ ನಡುವೆಯೂ ಯಶಸ್ವಿಯಾಗಿ ನಡೆಯಿತು. ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‍ಗೆ ಇಬ್ಬರು ಅಮಾಯಕರು ಬಲಿಯಾಗಿ ನಂತರ ನಗರದಲ್ಲಿ ಕಫ್ರ್ಯೂ ವಿಧಿಸಲಾಯಿತು. ಇಡೀ ನಗರದಲ್ಲಿ ಸ್ಮಶಾನಮೌನ ಆವರಿಸಿತ್ತು. ಗಿಜಿಗುಟ್ಟುವ ಮಂಗಳೂರು ನಗರದ ಮೇಲೆ ಕಾಶ್ಮೀರದಂತೆ ದಿಗ್ಬಂಧನ ಹೇರಲಾಯಿತು. ರಸ್ತೆಯಲ್ಲಿ ಯಾರೊಬ್ಬರೂ ಓಡಾಡದಂತಹ ಭೀಕರ ಸ್ಥಿತಿಯನ್ನು ರಾಜ್ಯ ಸರ್ಕಾರ ತಂದೊಡ್ಡಿತು. ಇಂತಹ ಸಂದರ್ಭದಲ್ಲಿ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ, ‘ನಾನೂ ಸೇರಿದಂತೆ ಡಿಸೆಂಬರ್ 21ರಂದು ಶಾಂತಿಯುತವಾಗಿ ಕಫ್ರ್ಯು ಉಲ್ಲಂಘಿಸಿ ಎಡಪಕ್ಷಗಳು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತವೆ’ ಎಂದು ಟ್ವೀಟ್ ಮಾಡಿದರು. ಆದರೆ ಮಂಗಳೂರಿನ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಬರುವುದೂ ಕಷ್ಟಕರವಾಗಿದ್ದರಿಂದ ಈ ಪ್ರತಿಭಟನೆಯ ಜವಾಬ್ದಾರಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷವೇ ಹೊತ್ತುಕೊಂಡಿತು. ಅಂದು ಡಿಸೆಂಬರ್ 21. ಮಂಗಳೂರು ನಗರದ ತುಂಬೆಲ್ಲಾ ಪೊಲೀಸರದ್ದೇ ಕಾರುಬಾರಾಗಿತ್ತು. ಅದೊಂದು ರಣರಂಗದಂತೆ ಭಾಸವಾಗುತ್ತಿತ್ತು. ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಸೇರಿ ಜನತೆಯ ವಿರುದ್ಧ ಕಾಳಗ ನಡೆಸಿ ನೆತ್ತರ ಹೊಳೆ ಹರಿಸಿತ್ತು. ಬೆಳಿಗ್ಗೆ 7 ಗಂಟೆಯ ನಂತರ ನಗರದ ಎಲ್ಲಾ ದ್ವಾರಗಳನ್ನು ಪೊಲೀಸರು ಮುಚ್ಚಿದರು. ಪ್ರತಿಭಟನೆಗೆ ಸೇರಿಕೊಳ್ಳಲು ಖಾಸಗಿ ವಾಹನಗಳಲ್ಲಿ ಬರುತ್ತಿದ್ದ ಕಾರ್ಯಕರ್ತರನ್ನು ಅಲ್ಲಲ್ಲೇ ತಡೆಹಿಡಿಯಲಾಯಿತು. ಅಂದು ಮುಖ್ಯಮಂತ್ರಿ ಯಡಿಯೂರಪ್ಪನವರೂ ಮಂಗಳೂರಿಗೆ ಆಗಮಿಸುವವರಿದ್ದರು! ಹೇಗೋ ಮಾಡಿ ಏಳೆಂಟು ಜನ ನಿಗದಿತ ಸ್ಥಳವಾದ ಗಾಂಧಿ ಪ್ರತಿಮೆಯ ಎದುರು ಸೇರಿಕೊಳ್ಳುವಲ್ಲಿ ಯಶಸ್ವಿಯಾದೆವು. ಒಂದು ಕಡೆ ಮುಖ್ಯಮಂತ್ರಿಯವರ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಮಯದಲ್ಲೇ ಮಂಗಳೂರು ನಗರದಲ್ಲಿ ಸಿಪಿಐ ಕಾರ್ಯಕರ್ತರು ಕಫ್ರ್ಯೂ ಉಲ್ಲಂಘಿಸಿ “ಕಿಲ್ಲರ್ ಯಡಿಯೂರಪ್ಪ ಗೋ ಬ್ಯಾಕ್” ಎಂಬ ಘೋಷಣೆ ಮೊಳಗಿಸುತ್ತ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ದರು. ಕೆಲಕ್ಷಣಗಳ ನಂತರ ಪೊಲೀಸರು ಬಂದು ಪ್ರತಿಭಟನಾಕಾರರನ್ನು ಬಂಧಿಸಿದರು. ಈ ಪ್ರತಿಭಟನೆಯು ಸ್ಮಶಾನದಂತಿದ್ದ ಮಂಗಳೂರಿನಲ್ಲಿ ಜನತೆಯ ಪ್ರತಿರೋಧದ ಕಾವು ಬತ್ತಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿತು. ಅಸಂವಿಧಾನಿಕ ಕಾನೂನುಕಟ್ಟಲೆಗಳನ್ನು ಹೇರುವ ಮೂಲಕ ಜನರನ್ನು ಬೆದರಿಸಲು ಸಾಧ್ಯವಿಲ್ಲ, ನೀವು ಕಫ್ರ್ಯೂ ಹೇರಿ ಜನರ ಪ್ರತಿಭಟನೆಯನ್ನು ಹತ್ತಿಕ್ಕಿದರೆ ನಾವು ಅದನ್ನು ಮುರಿಯುತ್ತೇವೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಲಾಯಿತು. ನೀವು ಮಾಡಿದ ಅನ್ಯಾಯಕ್ಕೆಲ್ಲಾ ನಾವು ತಲೆ ಬಾಗುವುದಿಲ್ಲ ಎಂದು ಸೂಚನೆ ಕೊಡಲಾಯಿತು. ಮಂಗಳೂರಿನಲ್ಲಿ ಇಂಟರ್‍ನೆಟ್ ನಿರ್ಬಂಧಿಸಲಾಗಿತ್ತು. ಆದರೆ ಪ್ರತಿಭಟನೆಯ ಸಂದೇಶವು ಪತ್ರಿಕೆಗಳ ಮೂಲಕ ಬಿತ್ತರವಾಯಿತು. ಸ್ಮಶಾನದಂತಿದ್ದ ಮಂಗಳೂರಿನ ನೆಲದಲ್ಲಿ ಪ್ರತಿರೋಧದ ಕಲರವ, ಇದು ಸಂಘ ಪರಿವಾರದ ಅಹಂಗೆ ಬಿದ್ದ ಪೆಟ್ಟಾಗಿತ್ತು. ಇದರ ನೇರ ಪರಿಣಾಮವೇ ನಾಲ್ಕು ದಿನಗಳ ನಂತರ ಸಿಪಿಐ ರಾಜ್ಯ ಕೇಂದ್ರ ಕಚೇರಿ ಘಾಟೇ ಭವನಕ್ಕೆ ಬೆಂಕಿ ಹಚ್ಚುವ ದುಷ್ಕøತ್ಯ!

ಹಲವು ಪ್ರಶ್ನೆಗಳು

ಪೊಲೀಸರು ಈವರೆಗೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ, ಅದರ ಸುಳಿವೂ ಕಾಣುತ್ತಿಲ್ಲ. ದುಷ್ಕರ್ಮಿಗಳೇ ಕೃತ್ಯವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಇದು ದೃಶ್ಯಮಾಧ್ಯಮಗಳನ್ನು ತಲುಪಿದ್ದು ಹೇಗೆ? ರಸ್ತೆಯಲ್ಲಿ ಮೂರ್ನಾಲ್ಕು ಸಿಸಿಟಿವಿ ಕ್ಯಾಮರಾಗಳಿದ್ದು ಇನ್ನೂ ಆರೋಪಿಗಳ ಸ್ಪಷ್ಟ ಚಿತ್ರಣ ಸಿಕ್ಕಿಲ್ಲವೇ? ಸ್ಥಳೀಯ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿಯ ಪ್ರಕಾರ, “ಇದನ್ನು ಯಾರೋ ಎಣ್ಣೆ ಹೊಡೆದು ಮಾಡಿದ್ದಾರೆ”! ‘ಯಾರೋ ಎಣ್ಣೆ ಹೊಡೆದವನು’ ಪೂರ್ವನಿಯೋಜಿತವಾಗಿ ಬೀಗ ಜಡಿದ ಗೇಟ್‍ನ ಕಾಂಪೌಂಡ್ ಹಾರಿ ಕಚೇರಿಯೊಳಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾನೆಯೇ? ಈ ಮಾತನ್ನು ಸಮವಸ್ತ್ರ ತೊಟ್ಟವರಿಂದ ಹೇಳಿಸಿ ದಿಕ್ಕು ತಪ್ಪಿಸುತ್ತಿರುವವರು ಯಾರು? ಆರೋಪಿಗಳು ಎಸಗಿರುವ ದುಷ್ಕøತ್ಯವನ್ನು ಗಮನಿಸಿದರೆ ಅವರ ವಿರುದ್ಧ ಪೊಲೀಸರು ಹೂಡಿರುವ ಮೊಕದ್ದಮೆಗಳು ಏನೇನೂ ಅಲ್ಲ. ಎಲ್ಲವೂ ನಾಮಕಾವಾಸ್ಥೆ ಎಂಬುದು ಗೋಚರಿಸುತ್ತಿದೆ. ಕಚೇರಿಯೊಳಗಿದ್ದ ಕಾರ್ಯಕರ್ತರನ್ನು ಭಸ್ಮ ಮಾಡುವ ಉದ್ದೇಶದಿಂದ ವಾಹನಗಳನ್ನು ಸ್ಫೋಟಿಸಲು ಇಡೀ ಕಚೇರಿಗೇ ಬೆಂಕಿಯಿಟ್ಟ ದುಷ್ಕರ್ಮಿಗಳ ವಿರುದ್ಧ ಕೇವಲ ಐಪಿಸಿ 427 (50ರೂ.ಗಳಿಗಿಂತ ಅಧಿಕ ಹಾನಿಯುಂಟು ಮಾಡುವ ಕೇಡು), 435 (ಸ್ವತ್ತಿಗೆ ಸ್ಫೋಟಕ ಬಳಸಿ ಬೆಂಕಿ ಹಚ್ಚುವುದು) ಮತ್ತು 447 (ಅಪರಾಧಿಕ ಅತಿಕ್ರಮಣ) ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ಯಾರ ಪರ ವಹಿಸುತ್ತಿದ್ದಾರೆ? ಯಾಕೆ? ಅವರಿಗೆ ಸಂಘ ಪರಿವಾರದ/ ಬಿಜೆಪಿಯ ಕಚೇರಿಯಿಂದ ನಿರ್ದೇಶನವಿದ್ದರೆ ಅಚ್ಚರಿಯಿಲ್ಲ!

ಬೆಂಕಿ ಹಚ್ಚಿದ ವ್ಯಕ್ತಿಗಳ ವಿರುದ್ಧ ಮಾತ್ರವಲ್ಲ, ಬೆಂಕಿ ಹಚ್ಚಿಸಿದ ದುಷ್ಟ ಶಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಕಚೇರಿಯ ಮೇಲಿನ ದಾಳಿಗಳಿಗೆ ಹೆದರಿ, ವ್ಯಕ್ತಿಗಳನ್ನು ಕೊಲೆಗೈದರೆ ಮುದುರಿ ಹೋರಾಟದ ಸಮರಭೂಮಿಯನ್ನು ಬಿಟ್ಟು ಓಡಿಹೋಗುವ ರಣಹೇಡಿಗಳಲ್ಲ ಕಮ್ಯುನಿಸ್ಟರು. ಅಂತಹ ಹೇಡಿತನವೇನಿದ್ದರೂ ಸೈದ್ಧಾಂತಿಕವಾಗಿ ಎದುರಿಸಲಾರದ ಹಿಟ್ಲರ್‍ನ ಅನುಯಾಯಿಗಳಾದ ಸಂಘ ಪರಿವಾರದ ಸ್ವತ್ತು. ಕಚೇರಿಗಳನ್ನು, ವ್ಯಕ್ತಿಗಳನ್ನು ದಹಿಸುವುದರಿಂದ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂಬುದನ್ನು ಸಂಘ ಪರಿವಾರದ ಹೇಡಿಗಳು ಅರ್ಥಮಾಡಿಕೊಳ್ಳಬೇಕು. ಎಂದೋ ಶಿಲುಬೆಗೇರಿಸಲ್ಪಟ್ಟ ಕ್ರಿಸ್ತ ಇಂದೂ ಜೀವಂತವಾಗಿದ್ದಾನೆ, ಅವನು ಕೊಟ್ಟ ಜೀವನದ ಸಂದೇಶ ಇನ್ನೂ ಹಸಿರಾಗೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...