Homeಮುಖಪುಟನಾರಸಿಂಹವಾತಾರಿ ಡಾ. ಶ್ರೀಪಾದ ಭಟ್ಟರ ಸಾಂಸ್ಕೃತಿಕ ರಾಜಕಾರಣ!

ನಾರಸಿಂಹವಾತಾರಿ ಡಾ. ಶ್ರೀಪಾದ ಭಟ್ಟರ ಸಾಂಸ್ಕೃತಿಕ ರಾಜಕಾರಣ!

- Advertisement -
- Advertisement -

ಕರ್ನಾಟಕದ ವೈಚಾರಿಕ ಲೋಕದಲ್ಲಿ ಯಾವಾಗಲೂ ನಡೆಯುತ್ತಲೇ ಇರುವ ಒಂದು ಚರ್ಚೆ ಎಂದರೆ ಅದು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಾಗ್ವಾದ. ಸಾಮಾಜಿಕ ಮಾಧ್ಯಮ ಪ್ರವರ್ಧಮಾನಕ್ಕೆ ಬಂದ ಮೇಲಂತೂ ಈ ವಾಗ್ವಾದ ಬಹಳಷ್ಟು ತೀವ್ರತೆ ಪಡೆದುಕೊಂಡಿರುವುದನ್ನು ಕಾಣುತ್ತೇವೆ. ಜಾತಿಭೇದ, ಅಸ್ಪೃಶ್ಯತೆ ಇವುಗಳನ್ನು ವಿರೋಧಿಸುವ ಭರದಲ್ಲಿ ಅತಿರೇಕದ ಬ್ರಾಹ್ಮಣ ದ್ವೇಷವೂ ಒಂದು ರೀತಿಯಲ್ಲಿ ವೈಚಾರಿಕ ಲೋಕದಲ್ಲಿ ಸ್ಥಾನ ಪಡೆದಿದೆ. ಆದರೆ ಜಾತೀಯತೆಗೆ, ಅಸ್ಪೃಶ್ಯತೆಗೆ ಕಾರಣವಾಗಿರುವುದು ಬ್ರಾಹ್ಮಣ ಶ್ರೇಷ್ಠತೆಯ ಮನಸ್ಥಿತಿ ಅಥವಾ ಬ್ರಾಹ್ಮಣ್ಯವೇ ಹೊರತು ಇದಕ್ಕೆ ಒಂದು ಜಾತಿಯಾಗಿ ಬ್ರಾಹ್ಮಣರನ್ನು ದ್ವೇಷಿಸುವುದು ಸಲ್ಲದು ಎಂಬ ತಿಳಿವಳಿಕೆಯೂ ಸಾಕಷ್ಟು ಪ್ರಗತಿಪರರಲ್ಲಿದೆ. ಆದರೆ ಪ್ರಗತಿಪರ ವಲಯಗಳಲ್ಲಿ ಸಾಕಷ್ಟು ಗುರುತಿಸಿಕೊಂಡು, ಹೆಸರು ಮಾಡಿಕೊಂಡು ಇದ್ದಕ್ಕಿದ್ದಂತೆ ಆಗಾಗ ತಲೆಕೆಳಗು ಮಾಡಿ ನಿಂತುಬಿಡುವ ಕೆಲವು ಸೋಕಾಲ್ಡ್ ಪ್ರಗತಿಪರರು ಬ್ರಾಹ್ಮಣರಾದಾಗ ಮೇಲೆ ತಿಳಿಸಿದ ಅತಿರೇಕದ ತರ್ಕಗಳಿಗೂ ಒಂದು ಸ್ಥಾನ ಸಿಕ್ಕಿಬಿಡುತ್ತಿದೆ.

ಜಾತಿ ಎನ್ನುವುದು ‘ಸೋಷಲ್ ಕ್ಯಾಪಿಟಲ್’ ಕೂಡಾ ಆಗುವಂತಹ ಭಾರತದ ಸಮಾಜದಲ್ಲಿ ಅದರ ಮೂಲಕವೇ ಮುನ್ನೆಲೆಗೆ ಬರಲು ಕೆಲವು ಜಾತಿಗಳಿಗೆ ಸಾಧ್ಯವಾಗುತ್ತದೆ. ಅದರಲ್ಲಿ ಹಿರಿಯಣ್ಣನ ಸ್ಥಾನ ಹೊಂದಿರುವುದು ಬ್ರಾಹ್ಮಣರು. ನಾಡಿನ ಪ್ರಗತಿಪರ ಚಳವಳಿಗಳ ಧಾರೆಯಲ್ಲಿ ಹಲವಾರು ಬ್ರಾಹ್ಮಣರು ತಮ್ಮ ಜಾತಿಶ್ರೇಷ್ಠತೆಯನ್ನು ಕಳಚಿಕೊಂಡು ವೈಚಾರಿಕ ಸ್ಪಷ್ಟತೆಯಿಂದ, ಪ್ರಾಮಾಣಿಕತೆಯಿಂದ ತಾವು ನಂಬಿಕೊಂಡ ತತ್ವ ಚಿಂತನೆಗಳಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿರುವ ನಿದರ್ಶನಗಳಿವೆ. ಇದೇ ವೇಳೆಗೆ ಇವರಂತೆಯೇ ತೋರಿಸಿಕೊಂಡು ತಾವೂ ಸಹ ಪ್ರಗತಿಪರ ವಿಚಾರಧಾರೆಯ ಪ್ರತಿನಿಧಿಗಳಲ್ಲಿ ಒಬ್ಬರು ಎಂದು ಬಿಂಬಿಸಿಕೊಳ್ಳುತ್ತಲೇ ಯಾವುದೋ ಕ್ಷಣದಲ್ಲಿ ಠಣ್ ಎಂದು ಬ್ರಾಹ್ಮಣಿಕೆಯ ಕಾರಸ್ಥಾನಗಳನ್ನು ಪ್ರವೇಶಿಸಿಬಿಡುತ್ತಾರಲ್ಲ ಅಂತವರು ಪ್ರಗತಿಪರ ಚಿಂತನೆಗಳಿಗೆ ಮಾಡುವ ಹಾನಿ ಬಹಳ ದೊಡ್ಡದಿರುತ್ತದೆ. ಇಂತವರು ಕೇವಲ ಅವಕಾಶವಾದಿತನದಿಂದ ಹೀಗಾಡುತ್ತಾರೋ ಅಥವಾ ಮೂಲತಃ ಅವರಲ್ಲಿ ಬ್ರಾಹ್ಮಣ್ಯವೇ ಇದ್ದು ಕೇವಲ ಐಡೆಂಟಿಟಿಗಾಗಿ ಪ್ರಗತಿಪರ ವಲಯಗಳನ್ನು ಬಳಸಿಕೊಂಡಿರುತ್ತಾರೋ ಎಂದು ಹೇಳುವುದು ಕಷ್ಟ. ರಾಜ್ಯದ ರಂಗಭೂಮಿಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ.ಶ್ರೀಪಾದ ಭಟ್ ಇಂತಹ ಒಬ್ಬ ನಾಜೂಕಿನ ಬ್ರಾಹ್ಮಣ ಎಂಬುದನ್ನು ಅವರ ನಿರ್ದೇಶನದ ಇತ್ತೀಚಿನ ಒಂದು ನೃತ್ಯ ರೂಪಕ ಪ್ರಯೋಗವಾದ ‘ನಾರಸಿಂಹ’ ಬಯಲು ಮಾಡುತ್ತದೆ.

ಮೊನ್ನೆ ಉಡುಪಿಯಲ್ಲಿ ಈ ‘ನಾರಸಿಂಹ’ ನೃತ್ಯರೂಪಕ ಪ್ರಯೋಗವಾಯಿತು. ಉಡುಪಿಯ ಮತ್ತೊಬ್ಬ ಪ್ರಗತಿಪರರಾದ ಮುರಳೀಧರ ಉಪಾಧ್ಯ ಅವರ ಪುತ್ರಿ, ರಂಗಭೂಮಿ ಮತ್ತು ಕಿರುತೆರೆ ಕಲಾವಿದೆ ಮಾನಸಿ ಸುಧೀರ್ ಮತ್ತು ಅವರ ಪತಿ ಸುಧೀರ್ ನಡೆಸುವ ನೃತ್ಯನಿಕೇತ ಕೊಡವೂರು ಎಂಬ ತಂಡ ವೈದಿಕ ಪುರಾಣದಲ್ಲಿ ಬರುವ ಶಿವಭಕ್ತ ಹಿರಣ್ಯಕಶಿಪುವಿನ ಕೊಲೆಯ ಕಥೆಯಾದ ನರಸಿಂಹಾವತಾರವನ್ನು “ನಾರಸಿಂಹ” ನೃತ್ಯರೂಪಕದ ಹೆಸರಿನಲ್ಲಿ ಪ್ರಸ್ತುತಪಡಿಸಿತು. ಒಂದು ನೃತ್ಯಪ್ರಯೋಗವಾಗಿ ಇದೊಂದು ಪರಿಣಾಮಕಾರಿ ಪ್ರಯೋಗ. ರೂಪಕದಲ್ಲಿ ಪಾಲ್ಗೊಂಡ ತಂಡದ ವಿದ್ಯಾರ್ಥಿನಿಯರ ಪರಿಶ್ರಮವೂ ಎದ್ದು ಕಾಣುತ್ತದೆ. ಇದರ ಬದಲು ಮತ್ತೊಂದು ಕಥೆಯ ನೃತ್ಯರೂಪಕವೇ ಆಗಿದ್ದರೂ ಸಹ ವಿದ್ಯಾರ್ಥಿನಿಯರು ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸುತ್ತಿದ್ದರು. ಈ ನೃತ್ಯರೂಪಕವನ್ನು ಆಯ್ಕೆ ಮಾಡಿಕೊಂಡ ನೃತ್ಯನಿಕೇತನ ತಂಡದ ಸ್ವಾತಂತ್ರ‍್ಯವನ್ನು ನಾವು ಪ್ರಶ್ನಿಸಬೇಕಿಲ್ಲ. ಅದು ಅವರ ಆದ್ಯತೆ ಆಸಕ್ತಿಗಳಿಗೆ ಅನುಗುಣವಾಗಿರುತ್ತದೆಯಷ್ಟೇ. ಆದರೆ ಪ್ರಶ್ನೆ ಇರುವುದು ಇಂತಹ ಒಂದು ವೈದಿಕ ಪಠ್ಯಕ್ಕೆ ವಿನ್ಯಾಸ ಮಾಡಿ, ಸಂಗೀತ ಸಂಯೋಜನೆ ನಡೆಸಿ ಕೊನೆಗೆ ನಿರ್ದೇಶನವನ್ನೂ ಮಾಡಿದ ಸೋಕಾಲ್ಡ್ ಪ್ರಗತಿಪರ ಡಾ.ಶ್ರೀಪಾದ್ ಭಟ್ ಅವರ ಕುರಿತು.

ನರಸಿಂಹಾವತಾರ ಎಂಬುದು ಶಿವಭಕ್ತ ಹಿರಣ್ಯಕಶಿಪುವನ್ನು ವಿಷ್ಣುವಿನ ಅವತಾರವಾದ ನರಸಿಂಹ ಕೊಲ್ಲುವ ಕಥೆ. ಈ ನರಸಿಂಹನ ಅವತಾರದ ಪರಿಕಲ್ಪನೆಯನ್ನು ಭಾರತದ ಬ್ರಾಹ್ಮಣ ಪುರಾಣಕರ್ತರು ಪಡೆದುಕೊಂಡಿದ್ದು ಕ್ರಿಸ್ತಪೂರ್ವದ ರೋಮ್ನಲ್ಲಿ ಶುರುವಾಗಿ ಇಡೀ ಯೂರೋಪಿನ ಉದ್ದಗಲಕ್ಕೆ ಹರಡಿಕೊಂಡಿದ್ದ ರಹಸ್ಯ ಮಿತ್ರಪಂಥದ ಮಿತ್ರನ ಕುರಿತ ನಂಬಿಕೆಗಳಿಂದ. ಅರಿಮಾನಿಯಸ್, ಅಯಾನ್, ಅಹ್ರಿಮನ್ ಎಂಬ ಹೆಸರುಗಳಿಂದ ಕರೆಸಿಕೊಂಡ ಋಗ್ವೇದದ ಆರ್ಯಮನ್ನನೇ ಭಾರತದ ಪುರಾಣಗಳ ಕಾಲಕ್ಕೆ ನರಸಿಂಹನಾದದ್ದು. ಪಾರ್ಸಿಗಳ ಪುರಾಣಕೃತಿಯಲ್ಲಿ ಈ ಅಹ್ರಿಮನ್ ದುಷ್ಟಶಕ್ತಿಯಾಗಿದ್ದಾನೆ. ಭಾರತಕ್ಕೆ ಬಂದ ಆರ್ಯರು ಇಲ್ಲಿನ ದ್ರಾವಿಡರ ಶಿವನ ವಿರುದ್ಧ ಪುರಾಣಗಳನ್ನು ಸೃಷ್ಟಿಸುವ ಉದ್ದೇಶದಿಂದಲೇ ದಶಾವತಾರಗಳನ್ನು ಸೃಷ್ಟಿಸಿ ವಿಷ್ಣುವನ್ನು ಅವುಗಳ ಕೇಂದ್ರವಾಗಿಸಿದರು. ಹಿರಣ್ಯಕಶಿಪುವನ್ನು ನರಸಿಂಹ ವಧಿಸುವ ಪುರಾಣವನ್ನು ಸೃಷ್ಟಿಸಿದ ನಂತರ ಶಿವ ತನ್ನ ಭಕ್ತರ ವಧೆಯಿಂದ ಕೆರಳಿ ಉಗ್ರರೂಪಿಯಾದ ಶರಭಾವತಾರವನ್ನೆತ್ತಿ ನರಸಿಂಹನ ತಲೆ ಕಡಿದು ತನ್ನ ನಡುವಿಗೆ ಕಟ್ಟಿಕೊಂಡ ಪ್ರತಿಪುರಾಣವೂ ಹುಟ್ಟಿಕೊಂಡದ್ದು, ಈ ಶರಭಾವತಾರವನ್ನೇ ಕರಾವಳಿ ಭಾಗದಲ್ಲಿ ಭೂತರಾಯನೆಂದು ಪೂಜಿಸುವುದು, ಕರಾವಳಿಯ ದ್ರಾವಿಡ ಮೂಲದ ಮೊಗವೀರರು ಮತ್ತು ಬಿಲ್ಲವರು ಶಿವನ ಒಕ್ಕಲುಗಳಾಗಿ ಈ ಭೂತರಾಯನನ್ನು ಪೂಜಿಸುವುದರ ಕುರಿತು ಸಂಸ್ಕೃತಿ ಚಿಂತಕ ಲಕ್ಷ್ಮೀಪತಿ ಕೋಲಾರ ಅವರು ತಮ್ಮ ಪ್ರಮುಖ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ.

ತನ್ನನ್ನು ತಾನು ಕಮ್ಯುನಿಸ್ಟ್ ಪಾಳಯದಲ್ಲಿ ಆಗಾಗ ಗುರುತಿಸಿಕೊಳ್ಳುವ, ಸಿಪಿಎಂ ಪಕ್ಷದ ಸಾಂಸ್ಕೃತಿಕ ತಂಡವಾದ ಸಮುದಾಯದಲ್ಲಿ ನಿರಂತರವಾಗಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿರುವ ರಂಗಕರ್ಮಿ ಡಾ.ಶ್ರೀಪಾದ ಭಟ್ ಹಾಗೂ ಉಡುಪಿಯ ಪ್ರಗತಿಪರ ಚಿಂತಕರು ಎನಿಸಿಕೊಂಡಿರುವ ಮುರಳೀಧರ ಉಪಾಧ್ಯ ಇವರುಗಳು ‘ನಾರಸಿಂಹ’ ಪ್ರಯೋಗದಲ್ಲಿ ತೊಡಗಿಕೊಂಡದ್ದು ಬ್ರಾಹ್ಮಣಿಕೆಯ ಒಂದು ಸಾಂಸ್ಕೃತಿಕ ರಾಜಕಾರಣವೇ? ಇದು ಉಡುಪಿಯ ವೈದಿಕಮಣಿಗಳ ನಡುವೆ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಳ್ಳುವ ಪ್ರಯತ್ನವೇ? ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ನರಸಿಂಹಾವತಾರ ಎಲ್ಲರಿಗೂ ತಿಳಿದಮಟ್ಟಿಗೆ ಒಂದು ವೈದಿಕ ಪಠ್ಯ. ಆದರೆ ಇದನ್ನು ನೃತ್ಯರೂಪಕವಾಗಿಸುವಾಗ ‘ಒಳಿತಿನ ವಿಜಯದ ಕಥನ’ ಎಂಬುದಾಗಿ ಸುಧಾ ಆಡುಕಳ ಬರೆದವರು ರೂಪಕವನ್ನು ಶ್ರೀಪಾದ ಭಟ್ ನಿರ್ದೇಶಿಸುತ್ತಾರೆ. ಕೆಲವಾರು ತಿಂಗಳುಗಳ ಕಾಲ ಇದರ ರಿಹರ್ಸಲ್ ನಡೆಯುವುದು ಪುತ್ತಿಗೆ ಮಠದ ಆಶ್ರಯದಲ್ಲಿ! ಈ ನೃತ್ಯರೂಪಕದಲ್ಲಿ ಪಾಲ್ಗೊಂಡಿರುವ ಹೆಣ್ಣುಮಕ್ಕಳೆಲ್ಲರೂ ಬಹುತೇಕ ಒಂದೇ ಜಾತಿಗೆ ಸೇರಿದವರು! ಇದೂ ಸಹ ಆಯ್ಕೆ ‘ನೃತ್ಯ ನಿಕೇತನ’ ತಂಡದ ಮತ್ತು ಆಯ್ಕೆ ಮತ್ತು ಆದ್ಯತೆಗೆ ಬಿಟ್ಟ ವಿಷಯ. ಹೀಗೆ ಬ್ರಾಹ್ಮಣರಿಂದ ಬ್ರಾಹ್ಮಣರೇ ಸೇರಿಕೊಂಡು ಬ್ರಾಹ್ಮಣ್ಯದ ಕಥೆಯೊಂದನ್ನು ನೃತ್ಯರೂಪಕ ಮಾಡುವಾಗ ಅದನ್ನು ಒಪ್ಪಿಕೊಂಡು ನಿರ್ದೇಶಿಸುವುದು ಸಹ ಪ್ರಜ್ಞಾಪೂರ್ವಕ ಆಯ್ಕೆಯೇ ತಾನೇ? ಇನ್ನು ಈ ನೃತ್ಯರೂಪಕದ ಮೊದಲ ಪ್ರದರ್ಶನದಂದು ಮಹಾನ್ ಸಾಂಸ್ಕೃತಿಕ ವ್ಯಾಪಾರಿಗಳಾದ ಡಾ.ಮೋಹನ್ ಆಳ್ವ ಅವರು ಬಂದು ಎಲ್ಲರನ್ನೂ ಸನ್ಮಾನಿಸುವುದು ಆಶ್ಚರ್ಯವೇನಲ್ಲ ಬಿಡಿ. ಅವರಿಂದ ಸನ್ಮಾನ ಪಡೆದುಕೊಂಡ ಶ್ರೀಪಾದ ಭಟ್ ಮತ್ತು ಮುರಳೀಧರ ಉಪಾಧ್ಯ ಅವರ ಜನ್ಮಗಳೂ ಪಾವನವಾಗಿರಬಹುದು!

ಉತ್ತರ ಕನ್ನಡದ ಗಟ್ಟಿ ಚಿಂತಕರಾಗಿದ್ದ ಆರ್.ವಿ.ಭಂಡಾರಿಯವರ ಶಿಷ್ಯ ತಾವೆಂದು ಹೇಳಿಕೊಳ್ಳುವ ಡಾ.ಶ್ರೀಪಾದ ಭಟ್ ಅವರಿಗೆ ‘ನಾರಸಿಂಹ’ ನಿರ್ದೇಶನ ಅವರ ಹೆಗ್ಗಳಿಕೆಯ ಕಿರೀಟಕ್ಕೆ ಮತ್ತೊಂದು ಗರಿಯಾಗಿ ಸೇರಬಹುದಷ್ಟೇ. ನಾಳೆಯೇ ಅವರು ಸಾದತ್ ಹಸನ್ ಮಾಂಟೋನ ಆಥವಾ ಗಾಂಧಿಯ ಇಲ್ಲವೇ ಕಾರ್ಲ್ ಮಾರ್ಕ್ಸ್ನ ಜೀವನಗಳನ್ನಾಧರಿ ಮತ್ತೊಂದಿಷ್ಟು ನಾಟಕಗಳನ್ನೂ ಮಾಡಿ ಸೈ ಎನಿಸಿಕೊಳ್ಳಲೂಬಹುದು. ಈಗಾಗಲೇ ನಿರಂಜನ ಮೃತ್ಯುಂಜಯವನ್ನು ಸಹ ರಂಗರೂಪಕ್ಕೆ ತಂದು ಭೇಷ್ ಅನಿಸಿಕೊಂಡಿರುವ ಶ್ರೀಯುತ ಭಟ್ಟರು ಕೊನೆಗೆ ಡಾ.ಅಂಬೇಡ್ಕರ್, ಫುಲೆ ದಂಪತಿಗಳ ಕುರಿತು ಸಹ ‘ಕ್ರಾಂತಿಕಾರಿ’ ಎನಿಸುವ ರಂಗಪ್ರಯೋಗಗಳನ್ನು ಸಹ ಮಾಡಿ ಬಿಸಾಕಬಹುದು. ಎಡಪಂಥೀಯ ಸಮುದಾಯದ ತಂಡವೇ ಇವುಗಳನ್ನು ಪ್ರದರ್ಶಿಸಲೂಬಹುದು. ತತ್ವ, ಚಿಂತನೆ, ಸಿದ್ಧಾಂತಗಳನ್ನು ಬದುಕಾಗಿಸದೇ ಕೇವಲ ಐಡೆಂಟಿಟಿಗೆ, ಸ್ವಾರ್ಥಕ್ಕೆ, ಲಾಭಕ್ಕೆ ಬಳಸಿಕೊಳ್ಳುವವರು ಯಾವುದಕ್ಕೂ ಹೇಸುವುದಿಲ್ಲ ಎಂಬುದಷ್ಟೇ ಇದರ ತಾತ್ಪರ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...