Homeಕರ್ನಾಟಕಒಕ್ಕಲಿಗರ ನಾಯಕ ಡಿಕೆಶಿ ಹಣಿಯಲು ಸಂಘ ಪರಿವಾರದ ವ್ಯವಸ್ಥಿತ ಹುನ್ನಾರ!

ಒಕ್ಕಲಿಗರ ನಾಯಕ ಡಿಕೆಶಿ ಹಣಿಯಲು ಸಂಘ ಪರಿವಾರದ ವ್ಯವಸ್ಥಿತ ಹುನ್ನಾರ!

- Advertisement -
- Advertisement -

ರಾಮನಗರ ಜಿಲ್ಲೆಯ ಕನಕಪುರದಲ್ಲಿ ಹಿಂದೂ ಜಾಗರಣಾ ವೇದಿಕೆ ಜಾಥಾ ಒಂದನ್ನು ನಡೆಸಿ, ನಂತರ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡುತ್ತ ಹಿರಿಯ ಆರ್‍ಎಸ್‍ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್, ‘ಇನ್ನೊಂದು ಹಿಂದೂ ಸ್ಥಳವನ್ನು ಕ್ರೈಸ್ತರ ಸ್ಥಳವನ್ನಾಗಿಸಲು ಬಿಡುವುದಿಲ್ಲ’ ಎಂದಿದ್ದಾರೆ. ಈಗ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ ಕಪಾಲಬೆಟ್ಟವು ಇದಕ್ಕೂ ಮುಂಚೆ ಮುನೇಶ್ವರ ಬೆಟ್ಟವಾಗಿತ್ತೆಂದೂ, ಅಲ್ಲಿ ನಾಥ ಪರಂಪರೆಯ ಸಾಧುಗಳು ತಪಸ್ಸು ಮಾಡುತ್ತಿದ್ದರೆಂದೂ ಹಾಗೂ ಬೆಟ್ಟದ ಮೇಲೆ ಮುನೇಶ್ವರ ದೇವಸ್ಥಾನ ಕಟ್ಟುವವರೆಗೂ ವಿರಮಿಸುವುದಿಲ್ಲ ಎಂತಲೂ ಹೇಳಿದ್ದಾರೆ. ಪೌರತ್ವ ಕಾಯಿದೆಯನ್ನು ಉಲ್ಲೇಖಿಸಿ, ಹಿಂದೂಗಳಿಗೆ ಭಾರತವೊಂದೇ ದೇಶ, ಆ ಕಾರಣಕ್ಕಾಗಿಯೇ ಪೌರತ್ವ ತಿದ್ದುಪಡಿ ಕಾಯಿದೆಯನ್ನು ತರಲಾಗಿದೆ, ಕ್ರಿಶ್ಚಿಯನ್ನರು ಬೇಕಾದರೆ ಯೇಸು ಪ್ರತಿಮೆಯನ್ನು ಅಮೆರಿಕದಲ್ಲೋ, ಇಂಗ್ಲೆಂಡಿನಲ್ಲೋ ಸ್ಥಾಪಿಸಲಿ. ಇಲ್ಲಿ ಯೇಸು ಪ್ರತಿಮೆ ಸ್ಥಾಪಿಸುವುದು ದೇಶವಿರೋಧಿ ಚಟುವಟಿಕೆ ಎಂದು ಕಲ್ಲಡ್ಕ ಭಟ್ ಹೇಳಿದ್ದಾರೆ. ಅವರ ಕಾರ್ಯಕರ್ತರು ಹಂಚಿದ ಕರಪತ್ರದಲ್ಲಿ ಪ್ರತಿಮೆ ನಿರ್ಮಾಣವನ್ನು ಮತಾಂತರಕ್ಕೆ ಪಿತೂರಿ ಎಂದು ಕರೆಯಲಾಗಿದೆ.

ಏನಿದು ವಿವಾದ?

ಹಾರೋಬೆಲೆ ಎನ್ನುವುದು ರಾಮನಗರ ಜಿಲ್ಲೆಯ ಪುಟ್ಟ ಗ್ರಾಮ. ಸುಮಾರು 3,500 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಬಹುತೇಕರು ಕ್ರಿಶ್ಚಿಯನ್ನರು. ಈ ಹಳ್ಳಿಯಲ್ಲಿ ಕ್ರೈಸ್ತಮತದ ಇತಿಹಾಸ ಹದಿನೇಳನೇ ಶತಮಾನಕ್ಕೆ ಬೊಟ್ಟು ಮಾಡುತ್ತದೆ. ಅಲ್ಲಿಯ ಒಬ್ಬ ಗ್ರಾಮಸ್ಥ ಹೇಳುವಂತೆ ಈ ಹಳ್ಳಿಯಿಂದ 36 ಪಾದ್ರಿಗಳು ಮತ್ತು 112 ನನ್‍ಗಳು (ಕ್ರೈಸ್ತ ಸನ್ಯಾಸಿನಿ) ಆಗಿಹೋಗಿದ್ದಾರೆ. ಇದು ಕ್ರೈಸ್ತಮತದ ದೀರ್ಘ ಪರಂಪರೆಯನ್ನು ತೋರಿಸುತ್ತದೆ ಎಂದು ಅಲ್ಲಿನವರು ಹೇಳುತ್ತಾರೆ.

ಕಪಾಲಬೆಟ್ಟದ ಮೇಲೆ ಕ್ರಿಶ್ಚಿಯನ್ನರ ಆರಾಧನೆ ಪ್ರಾರಂಭವಾಗಿದ್ದು 1906ರಲ್ಲಿ. ಆ ವರ್ಷ ಬೆಟ್ಟದ ಮೇಲೆ ಶಿಲುಬೆ ಮತ್ತು ಶಿಲುಬೆಯ ಮಾರ್ಗವನ್ನು ಸ್ಥಾಪಿಸಲಾಗಿ, ಅದೇ ವರ್ಷ ಗುಡ್‍ಫ್ರೈಡೆಯಂದು ‘ಯೇಸು ಕ್ರಿಸ್ತನ ಪಾದಗಳು ಮತ್ತು ಪುನರುತ್ಥಾನ’ ಎಂಬ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಅಂದಿನಿಂದ ಇಂದಿನವರಗೆ ಪ್ರತಿವರ್ಷ ಗುಡ್‍ಫ್ರೈಡೆ ಅಂದು ಇದೇ ನಾಟಕವನ್ನು ಆಡಲಾಗುತ್ತಿದೆ. ಸುತ್ತಲ ಗ್ರಾಮಸ್ಥರು ಆ ನಾಟಕವನ್ನು ನೋಡಲು ಬರುತ್ತಾರೆ ಹಾಗೂ ಆ ನಾಟಕ ಆಡದೇ ಇದ್ದರೆ ಏನೋ ಆಗಿಬಿಡುವುದು ಹಾಗೂ ಅಲ್ಲಿಯ ಶಿಲುಬೆಗೆ ಮುನಿ ಅರ್ಪಿಸುವುದು ಅದೃಷ್ಟ ತರುವುದು ಎಂದು ಅಲ್ಲಿಯ ಹಿಂದೂ ಜನರು ನಂಬಿದ್ದಾರೆ. ಆ ದಿನ ಹಳ್ಳಿಯಲ್ಲಿ ಜಾತ್ರೆಯ ವಾತಾವರಣ ಏರ್ಪಡುತ್ತದೆ.

ಇಲ್ಲಿ ಕ್ರೈಸ್ತರು ಮತ್ತು ಹಿಂದೂಗಳು ಸಾಮರಸ್ಯದಿಂದ ಇದ್ದಾರೆ. ಚರ್ಚು ನಡೆಸುವ ಶಾಲೆಯಲ್ಲಿ ಪಕ್ಕದ ಗ್ರಾಮಗಳ ಮಕ್ಕಳು ಓದುತ್ತಾರೆ. ಕಪಾಲಬೆಟ್ಟ ಹಿಂದಿನಿಂದಲೂ ಕ್ರೈಸ್ತರ ಸ್ಥಳವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಟಿವಿ ಮತ್ತು ಪತ್ರಿಕೆಗಳಲ್ಲಿ ಕಪಾಲ ಬೆಟ್ಟವೇ ಮುನೇಶ್ವರ ಬೆಟ್ಟ ಎಂಬ ಬಗ್ಗೆ ವರದಿ ಬಂದದ್ದನ್ನು ನೋಡಿ ಚಕಿತಗೊಂಡ ಗ್ರಾಮಸ್ಥರು ಹೇಳುವುದೇನೆಂದರೆ, ಮುನೇಶ್ವರ ಬೆಟ್ಟವೂ ಇದೆ. ಆದರೆ ಕಪಾಲಬೆಟ್ಟದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಹೊರಬೆಲೆ ಆಣೆಕಟ್ಟಿಗೆ ಹೊಂದಿಕೊಂಡಿದೆ. ಅಲ್ಲಿ ಒಂದು ದೇವಸ್ಥಾನ ಇತ್ತೆಂದೂ, ಆದರೆ 1970ರಲ್ಲಿ ಆಣೆಕಟ್ಟು ನಿರ್ಮಿಸುವಾಗ ಆ ದೇವಸ್ಥಾನ ಮುಳುಗಡೆಯಾಯಿತು ಎನ್ನುತ್ತಾರೆ.

2006 ರಲ್ಲಿ ಅಲ್ಲಿಯ ಕ್ರೈಸ್ತರು, ಶಿಲುಬೆಯನ್ನು ಸ್ಥಾಪಿಸಿ, ನಾಟಕ ಶುರು ಮಾಡಿ ನೂರು ವರ್ಷವಾಗಿದೆ. ಹಾಗಾಗಿ ಇಲ್ಲಿ ದೊಡ್ಡದಾಗಿ ಏನಾದರೂ ಮಾಡಬೇಕು ಎಂದು ನಿರ್ಣಯಿಸಿದರು. ಆಗ ಸ್ಥಳೀಯ ಶಾಸಕರಾಗಿದ್ದ ಡಿಕೆ ಶಿವಕುಮಾರ್ ಸಂಪರ್ಕಿಸಿ ಸಹಾಯ ಕೋರಿದರು. ಅವರು ಏಸುವಿನ ಪ್ರತಿಮೆಯನ್ನು ಸ್ಥಾಪಿಸಬೇಕೆಂದಿದ್ದ ಸ್ಥಳವು ಸರಕಾರಿ ಗೋಮಾಳದ್ದು ಎಂದು ಅರಿತ ಶಿವಕುಮಾರ್, ಅಲ್ಲಿ ಏನಾದರೂ ನಿರ್ಮಿಸಬೇಕಾದರೆ ಆ ಸ್ಥಳವನ್ನು ಕಾನೂನಾತ್ಮಕವಾಗಿ ಪಡೆಯಬೇಕಾಗುತ್ತದೆ. ಹಾಗಾಗಿ ಅದನ್ನು ಪಡೆಯಲು ಅರ್ಜಿ ಹಾಕಿ ಎಂದು ಸಲಹೆ ನೀಡಿದರು. ಅದರನುಗುಣವಾಗಿ, ಅರ್ಜಿ ಹಾಕಲಾಗಿ, ಅದಕ್ಕೆ ಸರಕಾರವು ಒಂದು ಸರ್ವೆ ನಡೆಸಿ, ಅಲ್ಲಿ ಅಗತ್ಯಕ್ಕೆ ತಕ್ಕಷ್ಟು ಗೋಮಾಳ ಇದೆಯೋ ಇಲ್ಲವೋ ಎಂದು ಅಭ್ಯಸಿಸಿ ಹಾಗೂ ಕ್ಯಾಬಿನೆಟ್‍ನಲ್ಲಿ ಪರುಸ್ಕøತಗೊಂಡು ಪ್ರತಿಮೆ ಸ್ಥಾಪಿಸಲು ಆ ಸ್ಥಳವನ್ನು ವರ್ಗಾಂತರ ಮಾಡಬಹುದು ಎಂದು 2018 ರಲ್ಲಿ ಅನುಮತಿ ನೀಡಲಾಯಿತು. ಆದರೆ ಆ ವರ್ಗಾವಣೆಗೆ ಸುಮಾರು ಇಪ್ಪತ್ತೆರಡು ಲಕ್ಷ ಶುಲ್ಕ ವಿಧಿಸಬೇಕಾಗಿತ್ತಾದುದರಿಂದ ಸ್ಥಳೀಯರು ಅಷ್ಟರಲ್ಲಿ ಒಂದು ಟ್ರಸ್ಟ್ (ಹಾರೋಬೆಲೆ ಕಪಾಲ ಬೆಟ್ಟ ಡೆವೆಲಪ್‍ಮೆಂಟ್ ಟ್ರಸ್ಟ್) ರಚಿಸಲಾಗಿತ್ತು. ಈ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ಇನ್ನೊಂದು ಅರ್ಜಿ ಹಾಕಿದರು. ಅದಕ್ಕೆ 10 ಲಕ್ಷ 85 ಸಾವಿರ ಕಟ್ಟಲೇಬೇಕೆಂದು ಜಿಲ್ಲಾಧಿಕಾರಿಯಿಂದ ಆದೇಶ ಬಂತು. ಆಗ ಟ್ರಸ್ಟಿನ ಜನರು ಡಿಕೆ ಶಿವಕುಮಾರ್ ಬಳಿ ಮತ್ತೆ ಸಹಾಯ ಯಾಚಿಸಿದ್ದಾರೆ. ಸಹಾಯ ಮಾಡುವೆ ಎಂದು ಶಿವಕುಮಾರ್ ಒಪ್ಪಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಆದರೆ ಅಷ್ಟರಲ್ಲಿ ಅವರ ಬಂಧನವಾಯಿತು. ಹಾಗಾಗಿ ಟ್ರಸ್ಟಿನವರು ದೇಣಿಗೆ ಎತ್ತಿ ತಾವೇ ದುಡ್ಡನ್ನು ಹೊಂದಿಸಿದ್ದಾರೆ. ಡಿಕೆ ಶಿವಕುಮಾರ ಬಿಡುಗಡೆಯಾದ ನಂತರ ತಮ್ಮ ಕೃತಜ್ಞನೆಯನ್ನು ಸಲ್ಲಿಸಲು ಟ್ರಸ್ಟಿನವರು ಹೋಗಿದ್ದಾರೆ. ಆಗ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ ಹಾಗೂ ಅವರಿಗೆ ಧನಸಹಾಯ ಮಾಡುವೆ ಎಂದು ಶಿವಕುಮಾರ್ ಹೇಳಿದಾಗ, ಪ್ರತಿಮೆಯ ಶಂಕುಸ್ಥಾಪನೆಗೆ ಟ್ರಸ್ಟಿನವರು ಆಹ್ವಾನಿಸಲಾಗಿ, ಶಂಕುಸ್ಥಾಪನೆಯ ದಿನ ಡಿಕೆ ಶಿವಕುಮಾರ್ ಟ್ರಸ್ಟಿಗೆ ಧನಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಇದು ಟ್ರಸ್ಟ್ ಮತ್ತು ಡಿಕೆ ಶಿವಕುಮಾರ ಅವರ ಸಂಬಂಧ ಹಾಗೂ ಜಾಗೆಯ ಹಸ್ತಾಂತರದ ಪ್ರಕ್ರಿಯೆ.

ಗೋಮಾಳ ಜಮೀನಿನ ಮೇಲೆ ನಿರ್ಮಾಣ ಎಂದು ಬಿಜೆಪಿ ಆರೋಪ

ಹಾರೋಬೆಲೆ ಕಪಾಲ ಬೆಟ್ಟ ಟ್ರಸ್ಟ್‍ಗೆ ಕಾನೂನುಬಾಹಿರವಾಗಿ ಗೋಮಾಳ ಜಮೀನನ್ನು ನೀಡಲಾಗಿದೆ ಹಾಗೂ ಯೇಸು ಪ್ರತಿಮೆ ಆ ಕಾರಣಕ್ಕಾಗಿ ನಿರ್ಮಿಸಬಾರದು ಎಂದು ಬಿಜೆಪಿ ಆರೋಪಿಸಿದೆ. ಅಲ್ಲಿಯ 1,828 ಜಾನುವಾರುಗಳಿಗೆ 548 ಎಕರೆ ಜಮೀನು ಗೋಮಾಳಕ್ಕೆ ಮೀಸಲಿಡಬೇಕಾಗಿತ್ತು ಆದರೆ ಅಲ್ಲಿರುವುದು ಕೇವಲ 209 ಎಕರೆ ಎಂದು ಬಿಜೆಪಿ ಹೇಳಿದೆ. ಸರಕಾರದ ಆದೇಶದಲ್ಲಿ ಸರ್ವೇ ಸಂಖ್ಯೆ 283 ಅನುಗುಣವಾಗಿ ಇರುವ 209 ಎಕರೆ ಜಮೀನಿನೊಂದಿಗೆ ಅದರ ಹೊರತಾಗಿ ಹಾರೋಬೆಲೆ ಗ್ರಾಮದ ಸುತ್ತ ಒಟ್ಟು 1,219 ಎಕರೆ ಜಮೀನು ಗೋಮಾಳಕ್ಕೆ ಮೀಸಲಿಡಲಾಗಿದೆ ಎಂದಿದೆ. ಇದರೊಂದಿಗೆ ಕಪಾಲಬೆಟ್ಟದಲ್ಲಿ ಟ್ರಸ್ಟಿನವರು ಅಕ್ರಮವಾಗಿ ರಸ್ತೆ ನಿರ್ಮಿಸಿದ್ದಾರೆ ಎಂತಲೂ ಆರೋಪಿಸಿದ್ದಾರೆ. ಈ ಬೆಟ್ಟ ಕಾವೇರಿ 5ನೇ ಹಂತಕ್ಕೆ ಅತೀ ಎತ್ತರದ ಪ್ರದೇಶವಾಗಿದೆ ಹಾಗಾಗಿ ಅಲ್ಲಿ ಇಲಾಖೆಯವರು 2017-18ರಲ್ಲಿ ಪಂಪ್‍ಹೌಸ್ ನಿರ್ಮಿಸಿದ್ದಾರೆ. ಆ ಪಂಪ್‍ಹೌಸ್ ನಿರ್ಮಾಣಕ್ಕಾಗಿಯೇ ರಸ್ತೆ ಮತ್ತು ವಿದ್ಯುತ್ ಸ್ಥಾಪಿಸಲಾಗಿದೆ.

ಇರಲಿ, ಈಗ ಅಲ್ಲಿ ಇರುವುದೇನು?

ಟ್ರಸ್ಟಿನವರು ಶಂಕುಸ್ಥಾಪನೆ ಮಾಡಿ, ಹತ್ತಡಿಯ ಏಸು ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಿದ್ದಾರೆ. ಈಗ ದೇಣಿಗೆ ಎತ್ತಿ ಹಣ ಸಂಗ್ರಹಿಸಿ ದೊಡ್ಡ ಪ್ರತಿಮೆ ನಿರ್ಮಿಸಬೇಕೆನ್ನುವುದು ಅವರ ಮಹತ್ವಾಕಾಂಕ್ಷೆ. ಅವರ ನೂರಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು, ಅಥವಾ ಎಷ್ಟು ದಿನಗಳಲ್ಲಿ ಅದರ ನಿರ್ಮಾಣ ಶುರುವಾಗುವುದು ಎನ್ನುವುದಕ್ಕೆ ಟ್ರಸ್ಟಿನವರ ಬಳಿಯೇ ಸ್ಪಷ್ಟ ಉತ್ತರಗಳಿಲ್ಲ.

ಹಾಗಿದ್ದರೆ ಏಕೀ ವಿವಾದ? ನಿಜವಾಗಿಯೂ ಏನಾದರೂ ವಿವಾದವಿದೆಯೇ?

ಸುಮಾರು ನೂರು ವರ್ಷಗಳಿಂದ ಆಚರಿಸುತ್ತಿರುವ ಚರ್ಚಿನ ಆಚರಣೆಗಳಲ್ಲಿ ಹಿಂದೂಗಳು ಭಾಗವಹಿಸುತ್ತ ಬಂದಿದ್ದು, ಕ್ರಿಶ್ಚಿಯನ್ನರ ಸಂಖ್ಯೆಯೂ ಅತ್ಯಂತ ಕಡಿಮೆ ಇದ್ದು ಗಲಭೆ, ವಿವಾದ ಆಗುವ ಅವಕಾಶವೇ ಇಲ್ಲಿ ಕಾಣುತ್ತಿಲ್ಲ ಹಾಗೂ ಸಂಘಪರಿವಾರದ ಈ ಹೋರಾಟ ಡಿಕೆ ಶಿವಕುಮಾರ್ ಅವರ ವಿರುದ್ಧವೂ ಅಲ್ಲ ಎನ್ನುವುದೂ ಸ್ಪಷ್ಟ. ಕಲ್ಲಡ್ಕ ಭಟ್ ಅವರ ಆರೋಪಗಳ ಬಗ್ಗೆ ಶಿವಕುಮಾರ್ ಬಳಿ ಕೇಳಿದಾಗ ಅವರಿಗೆ ಕಲ್ಲಡ್ಕ ಭಟ್ ಯಾರೂ ಎಂದು ತಿಳಿದಿಲ್ಲವೆಂದೂ, ಯಾರೂ ಬೇಕಾದರೂ ಆ ಸ್ಥಳವನ್ನು ಭೇಟಿ ಮಾಡಬಹುದು ಹಾಗೂ ಪ್ರತಿಮೆ ನಿರ್ಮಿಸುವ ನಿರ್ಣಯ ತನ್ನದಲ್ಲ, ಸ್ಥಳೀಯರದ್ದು ಎಂದು ಹೇಳಿದ್ದಾರೆ.

ಕರ್ನಾಟಕದ ಬಹುತೇಕ ಭಾಗಗಳಲ್ಲಿ ತಮ್ಮ ಉಪಸ್ಥಿತಿಯನ್ನು ಗಟ್ಟಿಗೊಳಿಸಿ, ತಮ್ಮ ಸಿದ್ಧಾಂತವನ್ನು ಹರಿಬಿಟ್ಟಿರುವ ಸಂಘಪರಿವಾರಕ್ಕೆ ಹಳೇ ಮೈಸೂರು ಪ್ರಾಂತ್ಯದಲ್ಲಿ ನೆಲೆಯೂರಲು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ, ಈ ಕೇಸ್ ಅವರಿಗೇ ಎಷ್ಟೇ ದುರ್ಬಲವೆನಿಸಿದರೂ, ಒಕ್ಕಲಿಗರನ್ನು ಹಿಂದೂಗಳ ಹೆಸರಿನಲ್ಲಿ ಧ್ರುವೀಕರಿಸಲು ಒಳ್ಳೆಯ ಅವಕಾಶ ಎಂದು ಕಂಡುಕೊಂಡಿದ್ದಾರೆ. ಈ ಒಂದು ಪ್ರದೇಶ ಮತ್ತು ಈ ಒಂದು ಸಮುದಾಯ ತಮ್ಮ ತೆಕ್ಕೆಗೆ ಬಂದರೆ ಕರ್ನಾಟಕದಲ್ಲಿ ತಮ್ಮನ್ನು ಯಾರೂ ಮೀರಿಸಲಾರರು ಎನ್ನುವುದು ಅವರ ಎಣಿಕೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಈ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ಕಂಡುಬಂದಿದ್ದರೆ ತನಿಖೆ ಮಾಡಿಸಿ, ನಡೆಯುತ್ತಿರುವ ಕಾಮಗಾರಿಗೆ ಸುಲಭವಾಗಿ ತಡೆಯೊಡ್ಡಬಹುದು. ಅದನ್ನು ಬಿಟ್ಟು ಬಿಜೆಪಿ ಮತ್ತು ಸಂಘಪರಿವಾರ ಜಾಥಾ ಮಾಡುವ, ಆಂದೋಲನ ಕಟ್ಟುವ ಪ್ರಯತ್ನ ನಡೆಸಿದೆ.

ಬಾಬಾಬುಡನ್‍ಗಿರಿಯಲ್ಲೂ ಇದೇ ರೀತಿ ಮಾಡಲಾಗಿತ್ತು. ಬಾಬಾಬುಡನ್‍ರ ಅಸ್ತಿತ್ವ ಅಲ್ಲಗಳೆಯಲಾಗದ್ದರಿಂದ, ನಾಗೇನಹಳ್ಳಿಯ ಹತ್ತಿರವಿರುವ ದರ್ಗಾ ಬಾಬಾಬುಡನ್ ದರ್ಗಾ ಎಂದೂ, ಗಿರಿಯ ಮೇಲಿನ ದರ್ಗಾವನ್ನು ತಮಗೆ ಬಿಟ್ಟುಕೊಡಬೇಕೆಂದೂ ಸಂಘಪರಿವಾರ ಪ್ರತಿಪಾದಿಸಿತ್ತು. ಅದೇ ರೀತಿ ಇಲ್ಲಿಯೂ ಬೇರೊಂದು ಜಾಗವನ್ನು ಮುನೇಶ್ವರ ಬೆಟ್ಟ ಎಂದು ಕರೆದಿರುವುದು, ಸ್ವತಃ ಕಲ್ಲಡ್ಕ ಭಟ್ಟರೇ ದಯಮಾಡಿಸಿರುವುದು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದಕ್ಕೆ ಸೂಚನೆಯಾಗಿದೆ.

ಬಾಬಾಬುಡನ್‍ಗಿರಿ ಪರಿಸರದಂತೆಯೇ ಇಲ್ಲಿಯೂ ಸ್ಥಳೀಯ ಜನರು ಅತ್ಯಂತ ಸೌಹಾರ್ದದಿಂದ ಬದುಕುತ್ತಿದ್ದಾರೆ. ಆದರೆ ದೂರದಿಂದ ಜನರನ್ನು ತಂದು ನಂತರ ಸ್ಥಳೀಯರ ಮನದಲ್ಲೂ ಸಂಶಯ ಹಾಗೂ ವಿಷ ಬಿತ್ತುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ.

ದೇಶಾದ್ಯಂತ ಅಯೋಧ್ಯಾ ವಿವಾದವನ್ನು ಹುಟ್ಟುಹಾಕುವ ಸಂಘಪರಿವಾರದ ಪ್ರಯತ್ನಕ್ಕೆ ಇಂತಹ ನೂರಾರು ಬೆಟ್ಟಗಳು ದೊರೆಯುವುದರಿಂದ ಅವರ ಕೆಲಸವೂ ಸಲೀಸು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...